"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 23 March 2015

☀ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಸ್ತ್ರೀಯರು: (women fought for the integration of Karnataka)

☀ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಸ್ತ್ರೀಯರು:
(women fought for the integration of Karnataka)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಕರ್ನಾಟಕ ಪ್ರಾಚೀನ ಇತಿಹಾಸ
(Ancient Karnataka History)


●.ಕರ್ನಾಟಕದ ಕಳೆದ 300 ವರ್ಷಗಳ ಚರಿತ್ರೆಯಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಸ್ತ್ರೀಯರ ಪಾತ್ರವು ಮುಖ್ಯವಾಗಿತ್ತು ಎಂಬುದನ್ನು ಕಾಣಬಹುದು. ಯೂರೋಪಿಯನ್ನರ ವಿರುದ್ಧ ಹೋರಾಡಿದವರಲ್ಲಿ ಕಿತ್ತೂರು ಚೆನ್ನಮ್ಮ,ಅಬ್ಬಕ್ಕ ಮುಂತಾದವರು ನೆನಪಿಗೆ ಬರುತ್ತಾರೆ. ಇದೇ ರೀತಿಯಲ್ಲಿ ಕರ್ನಾಟಕದ ಒಗ್ಗೂಡಿಕೆಗೂ ಸ್ತ್ರೀಯರ ಪಾತ್ರ ಹಿರಿದಾಗಿಯೇ ಇದೆ.

●.ಕನ್ನಡ ರಾಜ್ಯೋತ್ಸವದ ಈ ಹೊತ್ತಿನಲ್ಲಿ ಅವರ ಹೆಸರುಗಳನ್ನು ನೆನಪಿಸಿಕೊಳ್ಳೋಣ.


●.ಜಯದೇವಿತಾಯಿ ಲಿಗಾಡೆ:
✧.ಇವರು ಹುಟ್ಟಿದ್ದು 1912 ರಲ್ಲಿ. ನಾಲ್ಕನೇ ತರಗತಿಯವರೆಗೆ ಕಲಿತಿದ್ದರು. ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಇವರು ಬರೆಯುತ್ತಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು.
✧.ಇಂದಿನ ಮುಂಬಯಿ-ಕರ್ನಾಟಕ ಮತ್ತು ಹೈದರಾಬಾದ-ಕರ್ನಾಟಕದಲ್ಲಿ ಕನ್ನಡದ ಕಿಚ್ಚನ್ನು ಹರಡುವಲ್ಲಿ ಇವರ ಪಾತ್ರ ಹಿರಿದಾಗಿತ್ತು. ✧.ಇವರು ಸೊಲ್ಲಾಪುರ, ಬೀದರ್, ಬೆಳಗಾವಿ, ಸಾಂಗ್ಲಿ ಮುಂತಾದ ಕಡೆಗಳಲ್ಲಿ ಕನ್ನಡ ಶಾಲೆಗಳನ್ನು ಆರಂಬಿಸಿದ್ದರು. ಕನ್ನಡ ಭೋಧಿಸುವವರು ದೊರಕುತ್ತಿಲ್ಲ ಎಂದಾದಾಗ ತಮ್ಮ ಸ್ವಂತ ಹಣದಲ್ಲಿಯೇ ಶಿಕ್ಶಕರನ್ನು ನೇಮಿಸಿದ್ದರು.


●.ಬಳ್ಳಾರಿ ಸಿದ್ದಮ್ಮ:
✧.ಉತ್ತರ ಕರ್ನಾಟಕದಲ್ಲಿ ಏಕೀಕರಣದ ಕಾವು ಹೆಚ್ಚಾಗಿದ್ದರೂ ಮೈಸೂರು ಪ್ರಾಂತ್ಯದ ಜನರು ಹೆಚ್ಚಾಗಿ ಒಲವು ತೋರಿರಲಿಲ್ಲ. ಮೈಸೂರು ಪ್ರದೇಶ ಕಾಂಗ್ರೆಸ್ ಉಪಸಮಿತಿಯು ಕಾರ್ಯಕಾರೀ ಸಮಿತಿಗೆ ರಾಜಕೀಯ ಪರಿಸ್ಥಿತಿ ತಿಳಿಯಾದ ಮೇಲೆ ಏಕೀಕರಣದ ಬಗ್ಗೆ ಚಿಂತಿಸೋಣ ಎಂದು ಕೈ ಬಿಟ್ಟಿತ್ತು. ಆದರೆ ಈ ವರದಿಯನ್ನು ಅರಸೀಕೆರೆಯಲ್ಲಿ ನಡೆದ ಎಲ್ಲಾ ಪಕ್ಶಗಳ ಸಭೆ ತಿರಸ್ಕರಿಸಿತ್ತು.
✧.ಇದರ ಅದ್ಯಕ್ಷತೆಯನ್ನು ಹೊತ್ತಿದ್ದವರೇ ಬಳ್ಳಾರಿಯ ಸಿದ್ದಮ್ಮನವರು.
✧.ರಾಜ್ಯ ಪುನರ್ವಿಂಗಡಣಾ ಆಯೋಗದ ಕರಡು ವರದಿಯ ಪ್ರಕಾರ ಬಳ್ಳಾರಿ ಜಿಲ್ಲೆಯು ಆಂದ್ರಕ್ಕೆ ಸೇರುವುದಿತ್ತು. ಇದನ್ನು ವಿರೋದಿಸಿದವರಲ್ಲಿ ಹೆಚ್ಚಾಗಿ ಸ್ತ್ರೀಯರೇ ಇದ್ದದ್ದು ವಿಶೇಶವಾಗಿದೆ.
✧.ಚಿತ್ರದುರ್ಗಕ್ಕೆ ಬಂದಿದ್ದ ರಾಷ್ಟ್ರೀಯ ಸಮಿತಿಯ ಪ್ರಮುಖರನ್ನು ಸುಮಾರು 40ಕ್ಕೂ ಹೆಚ್ಚು ಹೆಂಗಸರು ಬೇಟಿಯಾಗಿ ಬಳ್ಳಾರಿಯು ಕರ್ನಾಟಕಕ್ಕೇ ಸೇರಬೇಕೆಂದು ಒತ್ತಾಯಿಸಿದ್ದರು.


●.ಬೇರೆ ಬೇರೆ ಸ್ಥಳಗಳಲ್ಲಿ ಹೋರಾಡಿದ ಹೆಂಗಸರು:

●.ಗುಲಬರ್ಗ:
ವಿಮಾಲಾಬಾಯಿ ಮೇಲ್ಕೋಟೆ, ಮಲ್ಲವ್ವ

●.ಬಳ್ಳಾರಿ:
ಲಿಂಗಮ್ಮವ್ವ, ಸುಮಂಗಳಮ್ಮ, ತೊಗರಿ ಸರ್ವಮಂಗಳಮ್ಮ, ಗೊರ್ಲೆ ರುದ್ರಮ್ಮ

●.ಕಾಸರಗೋಡು:
ಸರಸ್ವತಿ ಬಾಯಿ, ಸುಹಾಸಿನಿ ಬಂಡಾರಿ, ಕಮಲಾ ಶೆಟ್ಟಿ, ರಾದಾ ಕಾಮತ.

●.ಬೆಳಗಾವಿ:
 ಆಶಾತಾಯಿ, ಡಾ. ಮಂದಾಕಿನೀ ಪಟ್ಟಣ.

●.ಇನ್ನೂ ಹಲವರು:
ಸಾವಿತ್ರಿದೇವಿ ಹಳ್ಳಿಕೇರಿ, ವೀರಮ್ಮ ಪಾಟೀಲ, ಬಾಗೀರತಿ ಪಾಟೀಲ, ಶಾಂತಾದೇವಿ ಜತ್ತಿ, ಬಸಮ್ಮ ಉಪ್ಪಿನ, ಚಂಪಾತಾಯಿ ಬೋಗಲೆ, ಡಾ. ಶಾಂತಾದೇವಿ ಮಾಳವಾಡ, ನಾಗಮ್ಮ ವೀರನಗವ್ಡ ಪಾಟೀಲ, ಲೀಲಾವತಿ ಮಾಗಡಿ, ಗಂಗಮ್ಮ ಗುದ್ಲೆಪ್ಪ ಹಳ್ಳಿಕೇರಿ, ಶಕುಂತಲಾ ಕುರ್ತುಕೋಟಿ, ಪ್ರಮೀಳಾತಾಯಿ ಕಾಮತ್, ಸರೋಜಿನಿ ಶಿಂತ್ರಿ,ಸರಸ್ವತೀ ಗವ್ಡರ, ದೇವಕ್ಕ ರಮಾನಂದ ಮನ್ನಂಗಿ, ಸಂಗಮ್ಮ, ಪದ್ಮಾವತಿ ದೇಸಾಯಿ, ಚಂದ್ರಾಬಾಯಿ ಚೆನ್ನಪ್ಪ ವಾಲಿ, ಚೆನ್ನಮ್ಮ ವೇದಮೂರ್ತಿ ಇಟಗಿ, ಗವ್ರವ್ವ ಸಾವಳಗಿ,ಶಾಂತಬಾಯಿ ವೆಂಕಟೇಶ ಮಟದ, ಪಾರ್ವತಿಬಾಯಿ ದೇಶಪಾಂಡೆ, ಅಂಬಕ್ಕ ಬಳಿಗಾರ, ಲಕ್ಶ್ಮಿದೇವಿ ಪಾಟೀಲ, ಉಮಾದೇವಿ ಟೋಪಣ್ಣವರ, ಉಮಾದೇವಿ ಕುಂದಾಪುರ, ಕಾಡಮ್ಮ, ಗದಿಗೆವ್ವ ಕುರುಹಟ್ಟಿ, ಕ್ರಿಶ್ಣಾಬಾಯಿ ಪಣಜೀಕರ, ಗವ್ರವ್ವ ವಾರದ, ಪಂಚವ್ವಬಾಯಿ ವಾರದ, ಬಸವ್ವಬಾಯಿ ವಾರದ, ಬಸಲಿಂಗಮ್ಮ ಬಾಳೆಕುಂದ್ರಿ ಮತ್ತು ಬಳ್ಳಾರಿ ಯಶೋದರಮ್ಮ.

(ಕೃಪೆ: ಹೊನಲು)

No comments:

Post a Comment