"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 11 August 2017

☀ ಕೆಎಎಸ್‌ ಪ್ರಿಲಿಮ್ಸ್‌-2015, ಬರೆಯುವ ಮುನ್ನ ತಿಳಿದಿರಬೇಕಾದ ಸಂಗತಿಗಳು: ( Before appearing KAS -2015 Prelims, should know)

☀ ಕೆಎಎಸ್‌ ಪ್ರಿಲಿಮ್ಸ್‌-2015, ಬರೆಯುವ ಮುನ್ನ ತಿಳಿದಿರಬೇಕಾದ ಸಂಗತಿಗಳು:
( Before appearing KAS -2015 Prelims, should know)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ಕೆಎಎಸ್‌ ಪ್ರಿಲಿಮ್ಸ್‌ (ಪೂರ್ವಭಾವಿ ಪರೀಕ್ಷೆ)-2015
(KAS -2015 Prelims)

★ ಕೆಎಎಸ್ ತಯಾರಿ
(Preparation for KAS Exams)


•►  ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಿಗಳ ನೇಮಕಕ್ಕೆ ಆಗಸ್ಟ್‌ 20 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆ ಬರೆಯುವವರಿಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಈಗಾಗಲೇ ನಿಮಗೆಲ್ಲಾ ತಿಳಿದಿರುವಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಯು 2015ನೇ ಸಾಲಿನ ಗ್ರೂಪ್‌ 'ಎ' ಹಾಗೂ ಗ್ರೂಪ್‌ 'ಬಿ'ಗೆ ಸೇರಿದ 426 ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಿಗಳ ನೇಮಕಕ್ಕಾಗಿ ಆಗಸ್ಟ್‌ 20 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.

•► 2011ರಲ್ಲಿ ಪರೀಕ್ಷೆ ನಡೆದಾಗ 1.25 ಲಕ್ಷ ಅಭ್ಯರ್ಥಿಗಳು ಅರ್ಜಿಸಲ್ಲಿಸಿದ್ದರು, 90 ಸಾವಿರ ಮಂದಿ ಪರೀಕ್ಷೆ ಬರೆದಿದ್ದರು. 2015ರಲ್ಲಿ ಒಟ್ಟು 3,07,272 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಸುಮಾರು 2.5 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಈ ಬಾರಿ ಎಷ್ಟು ಮಂದಿ ಅರ್ಜಿಸಲ್ಲಿಸಿದ್ದಾರೆ ಎಂಬುದನ್ನು ಇನ್ನೂ ಕೆಪಿಎಸ್‌ಸಿ ಬಹಿರಂಗ ಪಡಿಸಿಲ್ಲ. ಆದರೆ ಉದ್ಯೋಗ ಕ್ಷೇತ್ರದಲ್ಲಿನ ಬದಲಾವಣೆಗಳನ್ನು ಗಮನಿಸಿದರೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಈ ಪರೀಕ್ಷೆ ತೆಗೆದುಕೊಂಡಿರುವ ಸಾಧ್ಯತೆಗಳಿವೆ. ಹೀಗಾಗಿ ಸಹಜವಾಗಿಯೇ ಪೈಪೋಟಿ ಹೆಚ್ಚಿರಲಿದೆ. ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಲು ಪೂರ್ವಭಾವಿ ಪರೀಕ್ಷೆಯನ್ನು ಕಠಿಣಗೊಳಿಸುವ ಸಾಧ್ಯತೆಗಳಿವೆ.

•► ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಹೆಚ್ಚು ಪರಿಶ್ರಮ ಪಟ್ಟು ಅಭ್ಯಾಸ ನಡೆಸುವುದು ಅವಶ್ಯಕ. ಈ ಹಿಂದಿನ ಪೂರ್ವಭಾವಿ ಪರೀಕ್ಷೆಗಳನ್ನೇ ಗಮನದಲ್ಲಿಟ್ಟುಕೊಂಡು, 'ಹೀಗೇ ಪರೀಕ್ಷೆ ಇದ್ದರೆ, ಇಷ್ಟು ಓದಿದರೆ ಸಾಕು' ಎಂಬ ನಿರ್ಣಯಕ್ಕೆ ಬಾರದೆ, ಮುಖ್ಯ ಪರೀಕ್ಷೆಯನ್ನೂ ಗಮನದಲ್ಲಿಟ್ಟುಕೊಂಡು ಆಳವಾದ ಅಧ್ಯಯನ ಮಾಡುವುದು ಒಳ್ಳೆಯದು.

•► ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ಬಹುತೇಕ ಅಭ್ಯರ್ಥಿಗಳು ಅಭ್ಯಾಸ ನಡೆಸುವಾಗ ಮತ್ತು ಪರೀಕ್ಷೆಯಲ್ಲಿ ಒತ್ತಡಕ್ಕೆ ಒಳಗಾಗಿ, ತಮಗೆ ಗೊತ್ತಿರುವ ವಿಷಯಗಳಲ್ಲಿಯೂ ತಪ್ಪು ಮಾಡಿ ಕೊನೆಗೆ ಪಶ್ಚಾತಾಪ ಪಡುತ್ತಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳು ಹೆಚ್ಚು ಮುತುವರ್ಜಿ ವಹಿಸಬೇಕಾದ ಕೆಲವು ವಿಷಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

•► ಯಾವುದೇ ವಿಷಯವನ್ನು ಓದಿಕೊಳ್ಳುವ ಮೊದಲು ಇದು ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಬಗ್ಗೆ ಹೆಚ್ಚು ಸ್ಪಷ್ಟತೆ ಅವಶ್ಯವಿದ್ದಲ್ಲಿ ಈ ಹಿಂದೆ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗಮನಿಸಿ.

•► ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮವನ್ನು ಅಧಿಸೂಚನೆಯಲ್ಲಿಯೇ ನೀಡಲಾಗಿದೆ. ಇದನ್ನು ನೋಡಿಕೊಂಡು ಸೂಕ್ತ ಪುಸ್ತಕವನ್ನು ಆಯ್ಕೆ ಮಾಡಿಕೊಂಡು  ಪರೀಕ್ಷೆಗೆ ಓದಿ.

•► ಪರೀಕ್ಷೆ ವಸ್ತುನಿಷ್ಠ ಮಾದರಿಯಲ್ಲಿ ನಡೆಯುವುದರಿಂದ ವಿಷಯದ ಬಗ್ಗೆ ಸ್ಪಷ್ಟ ಗ್ರಹಿಕೆ ಅಗತ್ಯ. ಆದ್ದರಿಂದ ಓದುವಾಗಲೇ ಯಾವುದೇ ಗೊಂದಲವಿಲ್ಲದಂತೆ ವಿಷಯವನ್ನು ಮನದಟ್ಟು ಮಾಡಿಕೊಳ್ಳಿ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನ ರೀತಿಯಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸುವ ಸಾಮರ್ಥ್ಯ‌ ನಿಮ್ಮದಾಗಿರಲಿ.

•► ನಿಮಗೆ ಈಗಾಗಲೇ ತಿಳಿದಿರುವಂತೆ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿರುತ್ತದೆ. ಇದರಲ್ಲಿ ನೀವು ಸ್ಪಷ್ಟವಾಗಿ ಒಂದು ಸರಿಯುತ್ತರವನ್ನು ಗುರುತಿಸಬೇಕು. ಒಂದು ವೇಳೆ ತಪ್ಪು ಉತ್ತರ ಗುರುತಿಸಿದಲ್ಲಿ ನಾಲ್ಕನೇ ಒಂದಂಶದಷ್ಟು (1/4)ಅಂಕವನ್ನು ಕಳೆಯಲಾಗುತ್ತದೆ. ಇದರ ಉದ್ದೇಶ ಏನೂ ತಯಾರಿ ನಡೆಸದೇ ಪರೀಕ್ಷೆಗೆ ಹಾಜರಾಗುವವರ ಸಂಖ್ಯೆಯನ್ನು ಮೊದಲ ಹಂತದಲ್ಲೇ ಕಡಿತಗೊಳಿಸುವುದು. ಋಣಾತ್ಮಕ ಮೌಲ್ಯಮಾಪನ ಸ್ಫರ್ಧಾತ್ಮಕ ಪರೀಕ್ಷೆಯ ಅವಿಭಾಜ್ಯ ಅಂಗವಾಗಿರುವುದರಿಂದ ಈ ಬಗ್ಗೆ ಆತಂಕ ಬೇಡ. ಆದರೆ ಎಚ್ಚರಿಕೆ ಇರಲಿ. ಉತ್ತರವನ್ನು ಬ್ಲೈಂಡ್‌ ಆಗಿ ಗೆಸ್‌ ಮಾಡುವ ಅನಿವಾರ್ಯತೆಯನ್ನು ನೀವೇ ಸೃಷ್ಟಿಸಿಕೊಳ್ಳಬೇಡಿ.

•► ಒಂದೇ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚಿನ ಉತ್ತರಗಳನ್ನು ಗುರುತಿಸಿದ್ದಲ್ಲಿ , ಅದರಲ್ಲಿ ಒಂದು ಉತ್ತರವು ಸರಿಯಾಗಿದ್ದರೂ ಸಹ ಅದನ್ನು ತಪ್ಪು ಉತ್ತರವೆಂದು ಪರಿಗಣಿಸಿ, ಅಂಕವನ್ನು ಕಳೆಯಲಾಗುತ್ತದೆ ಎಂದು ಕೆಪಿಎಸ್‌ಸಿಯು ಈಗಾಗಲೇ ಪ್ರಕಟಿಸಿದೆ. ಹೀಗಾಗಿ ಉತ್ತರವನ್ನು ಖಚಿತಪಡಿಸಿಕೊಂಡೇ ಗುರುತಿಸಲು ಹೋಗಿ. ನೆನಪಿಡಿ, ಒಂದು ವೇಳೆ ಕೊಡಲಾಗಿರುವ ನಾಲ್ಕು ಉತ್ತರಗಳಲ್ಲಿ ಯಾವ ಉತ್ತರವನ್ನೂ ಗುರುತಿಸದಿದ್ದಲ್ಲಿ, ಅಂತಹ ಪ್ರಶ್ನೆಗೆ ಋಣಾತ್ಮಕ ಅಂಕಗಳನ್ನು ಕಳೆಯಲಾಗುವುದಿಲ್ಲ.

•► ಯಾವುದೇ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಅತ್ಯಂತ ಮುಖ್ಯವಾದ ವಿಷಯ. ಪ್ರತಿ ಪತ್ರಿಕೆಯು 200 ಅಂಕಗಳನ್ನು ಒಳಗೊಂಡಿದ್ದು, 2ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಅಂದರೆ 200 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಲು ಕೇವಲ 120 ನಿಮಿಷ ಕಾಲಾವಕಾಶ ದೊರೆಯಲಿದೆ. ಹೀಗಾಗಿ ತೀರಾ ಕಷ್ಟವೆನಿಸುವ ಪ್ರಶ್ನೆಗಳನ್ನು ಮೊದಲೇ ಗುರುತಿಸಿಕೊಂಡು, ಅವುಗಳಿಗೆ ನೀಡುವ ಸಮಯವನ್ನು ಕಡಿಮೆ ಮಾಡಿ. (ಹೆಚ್ಚೆಂದರೆ 15ರಿಂದ 30 ಸೆಕೆಂಡ್‌ಗಳಲ್ಲಿ ತೀರ್ಮಾನ ತೆಗೆದುಕೊಂಡು, ಮುಂದಿನ ಪ್ರಶ್ನೆಗೆ ಉತ್ತರಿಸಲು ಹೋಗಿ)

•► ಸರಿಯಾದ ಉತ್ತರವನ್ನು ಗುರುತಿಸುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮುಖ್ಯವಾದದು ಸರಿಯಾಗಿ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವುದು! ಪ್ರಶ್ನೆಯನ್ನು ಸರಿಯಾಗಿ ಓದಿ ಮನದಟ್ಟು ಮಾಡಿಕೊಂಡ ನಂತರವಷ್ಟೇ ಉತ್ತರ ಗುರುತಿಸಲು ಮುಂದಾಗಿ. ಕೆಲವೊಮ್ಮೆ, ನಿಮಗೆ ಗೊತ್ತಿರುವ ವಿಷಯವಾಗಿದ್ದರೆ, ಪ್ರಶ್ನೆಯನ್ನು ಯಾವ ರೀತಿಯಲ್ಲಿ ಕೇಳಲಾಗಿದೆ ಎಂದು ನೋಡದೇ ಉತ್ತರ ಗುರುತಿಸಿಬಿಟ್ಟಿರುತ್ತೀರಿ. ಇದರಿಂದ ಉತ್ತರ ತಪ್ಪಾಗಿರುವ ಸಾಧ್ಯತೆಯೂ ಇದೆ.

•► ಪರೀಕ್ಷೆಯ ಹಿಂದಿನ ದಿನ ಕೆಪಿಎಸ್‌ಸಿಯು ಅಭ್ಯರ್ಥಿಗಳಿಗೆ ನೀಡಿರುವ ಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ. ಈ ಸೂಚನೆಯನ್ನು ಪ್ರವೇಶ ಪತ್ರದಲ್ಲಿ ನೀಡಲಾಗಿರುತ್ತದೆ. ಪರೀಕ್ಷೆಗೆ ಹೋಗುವಾಗ ಏನೆಲ್ಲಾ ತೆಗೆದುಕೊಂಡು ಹೋಗಬಹುದು, ಪರೀಕ್ಷಾ ನಿಯಮಗಳೇನು ಎಂಬುದನ್ನು ಗಮನಿಸಲು ಮರೆಯಬೇಡಿ.


•► ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್‌ 20ರಂದೇ ನಡೆಸಲಾಗುತ್ತದೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಪಿಎಸ್‌ಸಿ ಪ್ರಕಟಿಸಿದ್ದು, ಈಗಾಗಲೇ ವೇಳಾಪಟ್ಟಿಯನ್ನು ಒದಗಿಸಿದೆ. ಹೀಗಾಗಿ ಸದ್ಯವೇ ಪ್ರವೇಶ ಪತ್ರ ಪ್ರಕಟಿಸಲಿದೆ. ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಪ್ರತಿದಿನ ಆಯೋಗದ ವೆಬ್‌ ಅನ್ನು ನೋಡುತ್ತಿರುವುದು ಒಳ್ಳೆಯದು.

•► ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ಪರೀಕ್ಷೆಗೆ ಸಂಬಂಧಿಸಿದ ವದಂತಿಗಳು, ಇಲ್ಲ ಸಲ್ಲದ ಸುದ್ದಿಗಳು ಹರಡುವುದು ಸಾಮಾನ್ಯ. ಈ ಬಗ್ಗೆ ಗಮನ ನೀಡಿ, ಅಮೂಲ್ಯ ಸಮಯ ಹಾಳುಮಾಡಿಕೊಳ್ಳಬೇಡಿ. ಪರೀಕ್ಷೆಗೆ ಸಿದ್ಧತೆ ನಡೆಸುವುದರತ್ತವೇ ಹೆಚ್ಚಿನ ಗಮನ ನೀಡಿ.

(ಕೃಪೆ: ವಿಜಯ ಕರ್ನಾಟಕ)

Sunday 6 August 2017

☀ ‘ಜೇಮ್ಸ್‌ ವೆಬ್‌’ ಬಾಹ್ಯಾಕಾಶ ದೂರದರ್ಶಕ (ಟೆಲಿಸ್ಕೋಪ್‌) : (James Webb Space Telescope (JWST))

☀ ‘ಜೇಮ್ಸ್‌ ವೆಬ್‌’ ಬಾಹ್ಯಾಕಾಶ  ದೂರದರ್ಶಕ (ಟೆಲಿಸ್ಕೋಪ್‌) :
(James Webb Space Telescope (JWST))
━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಸಾಮಾನ್ಯ ಅಧ್ಯಯನ
(Current Affairs for General Studies)

★ ಸಾಮಾನ್ಯ ವಿಜ್ಞಾನ
(General Science)


- ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ‘ನಾಸಾ’ ಇತ್ತೀಚೆಗೆ (2016ರಲ್ಲಿ) ನಿರ್ಮಿಸಿದ ಜಗತ್ತಿನ ಅತ್ಯಂತ  ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ  ದೂರದರ್ಶಕ (ಟೆಲಿಸ್ಕೋಪ್‌) ಕ್ಕೆ ಜೇಮ್ಸ್‌ವೆಬ್ ಎಂದು  ಹೆಸರಿಡಲಾಗಿದೆ.
- ಬ್ರಹ್ಮಾಂಡ ಉಗಮದ ನಂತರ ಸೃಷ್ಟಿಯಾದ ತಾರಾಗುಚ್ಛಗಳ (ಗೆಲಾಕ್ಸಿ) ಪತ್ತೆಗಾಗಿ ಈ ದೂರದರ್ಶಕವನ್ನು ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ.  ಜತೆಗೆ ದೂರದಲ್ಲಿರುವ ನಕ್ಷತ್ರಗಳನ್ನು ಸುತ್ತುಹಾಕುತ್ತಿರುವ ಗ್ರಹಗಳ ಅನ್ವೇಷಣೆಗೂ ಇದನ್ನು ಬಳಸಿಕೊಳ್ಳಲಾಗುತ್ತದೆ.

- ಇದು ಅತ್ಯಾಧುನಿಕ ದೂರದರ್ಶಕವು ಅತಿ  ಸೂಕ್ಷ್ಮಗ್ರಾಹಿ ‘ಇನ್ಫ್ರಾರೆಡ್‌’ ಕ್ಯಾಮೆರಾಗಳನ್ನು ಹೊಂದಿದ್ದು,  ಇವುಗಳನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು ಚಿಪ್ಪಿನಂತೆ ವಿಶೇಷ ರಕ್ಷಾ ಕವಚ ನಿರ್ಮಿಸಲಾಗಿದೆ.

- ಟೆನಿಸ್‌ ಕೋರ್ಟ್‌ ಗಾತ್ರದಷ್ಟಿರುವ ಈ ರಕ್ಷಾ ಕವಚವು ಐದು ಅತಿ ತೆಳ್ಳನೆಯ (ತಲೆಕೂದಲಿನಷ್ಟು) ಪದರಗಳನ್ನು ಹೊಂದಿದೆ. ಕ್ಯಾಮೆರಾದಲ್ಲಿರುವ ‘ಇನ್ಫ್ರಾರೆಡ್‌ ಸೆನ್ಸರ್‌’ಗಳನ್ನು ಸೂರ್ಯನ ಅತಿಯಾದ ಶಾಖದಿಂದ ಇದು ರಕ್ಷಿಸುತ್ತದೆ.

- ದೂರದರ್ಶಕದ ಉಷ್ಣತೆಯನ್ನು ಕನಿಷ್ಠ –298 ಡಿಗ್ರಿ ಸೆಲ್ಸಿಯಸ್‌ ಮತ್ತು ಗರಿಷ್ಠ 298 ಡಿಗ್ರಿ ಸೆಲ್ಸಿಯಸ್‌ ನಡುವೆ ನಿಯಂತ್ರಿಸಲು ಈ ಐದು ಪದರಗಳ ಕವಚಗಳು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.

- ಪ್ರತಿ ಪದರವನ್ನು ‘ಕಪ್ಟಾನ್‌’  ಎಂಬ ವಸ್ತುವಿನಿಂದ ತಯಾರಿಸಲಾಗಿದೆ. ಅತ್ಯಂತ ಹೆಚ್ಚು ಉಷ್ಣತೆಯನ್ನು ನಿಗ್ರಹಿಸುವ ಸಾಮರ್ಥ್ಯ ಇದಕ್ಕಿದೆ.
ಉಡಾವಣೆ ಸಂದರ್ಭದಲ್ಲಿನ ವಾತಾವರಣವನ್ನು ತಾಳಿಕೊಳ್ಳುವ ರೀತಿಯಲ್ಲಿ ‘ಜೇಮ್ಸ್‌ ವೆಬ್‌’ ವಿನ್ಯಾಸ ಮಾಡಲಾಗಿದೆ.

☀ ಜೇಮ್ಸ್‌ ವೆಬ್‌ ವೈಶಿಷ್ಟ್ಯಗಳು :
━━━━━━━━━━━━━━━━━
* ಹಬಲ್‌ ದೂರದರ್ಶಕಕ್ಕಿಂತ 100 ಪಟ್ಟು ಹೆಚ್ಚು ಸಾಮರ್ಥ್ಯ
* 26 ವರ್ಷಗಳಷ್ಟು ಹಳೆಯ ಹಬಲ್‌ ದೂರದರ್ಶಕದ ಉತ್ತರಾಧಿಕಾರಿ
* ನಿರ್ಮಾಣ ಕಾರ್ಯದಲ್ಲಿ ಯುರೋಪ್‌ ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆಗಳ ನೆರವು
* ಇನ್‌ಫ್ರಾರೆಡ್‌ ಕ್ಯಾಮೆರಾ ರಕ್ಷಣೆಗೆ ಐದು ಪದರಗಳ ಟೆನಿಸ್‌ ಕೋರ್ಟ್‌ ಗಾತ್ರದ ರಕ್ಷಾ ಕವಚ

☀ “ಮಿಷನ್ ಫಿಂಗರ್ಲಿಂಗ್” (Mission Fingerling)

☀ “ಮಿಷನ್ ಫಿಂಗರ್ಲಿಂಗ್”
(Mission Fingerling)
━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಪ್ರಚಲಿತ ಘಟನೆಗಳು.
(Current Affairs)

— ದೇಶದಲ್ಲಿ ಮೀನುಗಾರಿಕೆ ವಲಯದ ಸಮಗ್ರ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ಕೇಂದ್ರ ಕೃಷಿ ಸಚಿವಾಲಯ “ಮಿಷನ್ ಫಿಂಗರ್ಲಿಂಗ್ (Mission Fingerling)” ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇದಕ್ಕಾಗಿ 52000 ಲಕ್ಷ ಹಣವನ್ನು ಮೀಸಲಿಡಲಾಗಿದೆ.
— ಈ ಯೋಜನೆಯ ಮುಖ್ಯ ಉದ್ದೇಶವೆಂದರೆ 2014-15ನೇ ಸಾಲಿನಲ್ಲಿ 10.79 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟಿರುವ ಮೀನು ಉತ್ಪಾದನೆಯನ್ನು 2020-21ನೇ ಅವಧಿಗೆ 15 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಹೆಚ್ಚಿಸುವುದಾಗಿದೆ.

☀ ಪ್ರಮುಖಾಂಶಗಳು:
━━━━━━━━━━━━
- ಮೀನು ಉತ್ಪಾದನೆಗೆ ಹೇರಳ ಅವಕಾಶವಿರುವ 20 ರಾಜ್ಯಗಳನ್ನು ಕೇಂದ್ರ ಸರ್ಕಾರ ಈ ಯೋಜನೆಯಡಿ ಗುರುತಿಸಿದ್ದು, ಮೀನು ಮರಿಗಳ ಉತ್ಪಾದನೆ ಹಾಗೂ ಮೀನು ಉತ್ಪಾದನೆ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುವುದು.
- ಮೀನು ಮರಿಗಳು, ಶ್ರಿಂಪ್ ಮತ್ತು ಕ್ರಾಬ್ ಗಳ ಉತ್ಪಾದನೆಗೆ ಹೊಂಡಗಳ ನಿರ್ಮಾಣಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು.
- ಇದರಿಂದ ಪ್ರತಿ ವರ್ಷ 20 ಲಕ್ಷ ಟನ್ ಮೀನು ಉತ್ಪಾದನೆ ಹಾಗೂ ಸುಮಾರು 4 ಮಿಲಿಯನ್ ಕುಟುಂಬಗಳಿಗೆ ಅನುಕೂಲವಾಗಲಿದೆ.

☀ ಇತ್ತೀಚಿನ ಎಸ್.ಎಸ್.ಸಿ. ಕಂಬೈನ್ಡ್ ಗ್ರಾಜುಯೇಶನ್ ಲೆವೆಲ್ ಎಕ್ಸಾಂ - 2017 ರಲ್ಲಿ ಹೆಚ್ಚೆಚ್ಚು ಕೇಳಲಾದ ಅಂಗ್ಲ ನುಡಿಗಟ್ಟುಗಳು (One word substitution) : (*50 most repeated One word substitution for SSC CGL 2017*)

☀ ಇತ್ತೀಚಿನ ಎಸ್.ಎಸ್.ಸಿ. ಕಂಬೈನ್ಡ್ ಗ್ರಾಜುಯೇಶನ್ ಲೆವೆಲ್ ಎಕ್ಸಾಂ - 2017 ರಲ್ಲಿ ಹೆಚ್ಚೆಚ್ಚು ಕೇಳಲಾದ ಅಂಗ್ಲ ನುಡಿಗಟ್ಟುಗಳು (One word substitution) :
(*50 most repeated One word substitution for SSC CGL 2017*)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಇಂಗ್ಲೀಷ್ ವ್ಯಾಕರಣ
(English Grammar)

★ ಅಂಗ್ಲ ನುಡಿಗಟ್ಟುಗಳು
(One word substitutions)



1. One who has become dependent on something or drugs — Addict

2. Fear of being enclosed in small closed space —Claustrophobia

3. Call upon God or any other power (like law) for help or protection — Invocation

4. Severely abusive writing in journals —Scurrilous

5. A person who opposes war or use of military force — Pacifist

6. One not concerned with right or wrong —Amoral

7. Something no longer in use — Obsolete
8. Stealthily done (something done in a quiet and secret way in order to avoid being noticed) —Surreptitious

9. Words written on a tomb — Epitaph

10. A person with a long experience of any occupation — Veteran

11. Something capable of being done — Feasible

12. A person coming to a foreign land to settle there — Immigrant

13. Anything which is no longer in use— Obsolete

14. A person who is unable to pay debts —Insolvent

15. Capable of being understood in either of two or more possible senses, and therefore not  definite— Ambiguous

16. A short poem or speech addressed to the spectators after the conclusion of drama —Epilogue

17. Act of deceiving somebody in order to make money — Fraud

18. Flat metal or Porcelain plate fixed on a wall as an ornament or memorial — Plaque

20. Succession of rulers belonging to one family —Dynasty

21. To seize control of a vehicle in order to force it to go to a new destination or demand something –Hijack

22. Lasting only for a moment – Momentary

23. One who is indifferent to pleasure or pain —Stoic

24. The practice or art of choosing, cooking, and eating good food — Gastronomy

25. Killing of a child— lnfanticide

26. One who believes in offering equal opportunities to women in all spheres — Feminist

27. One who studies election trend by means of opinion polls — Psephologist

28. A doctor who treats children — Paediatrician

29. One who can think about the future with imagination and wisdom — Visionary

30. Give and receive mutually – Reciprocate

31. A building where an audience sits —Auditorium

32. The first model of a new device — Prototype

33. Tough tissues in joints — Ligaments

34. The study of maps —  Cartography

35. A person who breaks into houses in order to steal — Burglar

36. The study of the origin and history of words —Etymology

37. One who can walk on ropes (tightrope walker)— Funambulist

38. Belonging to all parts of the world — .Cosmopolitan

39. One who hates mankind — .. Misanthrope

40. One who goes to settle in another country —Emigrant

41. Constant efforts to achieve something —Perseverance

42. A person who believes in total abolition of war— Pacifist

43. A four footed animal — ……. *Quadruped*

44. Ready to believe anything — .. .. *Credulous*

45. That which lasts for a short time — *Transitory*

46. Indifference to pleasure or pain — *Stoicism*

47. A body of persons appointed to hear evidence or judge and give their verdict (decision) – *Jury*

48. The essential or characteristic customs •habits and conventions of a society or comm – *Mores*

49. A system of Government in which only one political party is allowed to function — *Totalitarianism*

50. One who collects coins — *Numismatist* 

Thursday 3 August 2017

☀️ ‘ಕೌಶಲ ಅಭಿಯಾನ’ ಅಥವಾ ‘ಕೌಶಲ ಮಿಷನ್‌’ (Koushal Abhiyana or Koushal Mission)

☀️ ‘ಕೌಶಲ ಅಭಿಯಾನ’ ಅಥವಾ ‘ಕೌಶಲ ಮಿಷನ್‌’
(Koushal Abhiyana or Koushal Mission)
━━━━━━━━━━━━━━━━━━━━━━━━━━━━━━━━━━━

★ ರಾಜ್ಯ ಸರ್ಕಾರದ ಯೋಜನೆಗಳು
(State Government Programs)

★ ಸಾಮಾನ್ಯ ಅಧ್ಯಯನ
(General Studies)


ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತಂದಿರುವ ‘ಕೌಶಲ ಭಾರತ’ ಯೋಜನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರವು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದಡಿ ಗ್ರಾಮೀಣ ಭಾಗದ ಯುವಜನರಿಗೆ ‘ಕೌಶಲ ಮಿಷನ್‌’ ಯೋಜನೆ ರೂಪಿಸಿದೆ.


*ನಿಗಮವನ್ನು ರಚಿಸಿರುವ ಉದ್ದೇಶ :
ಗ್ರಾಮೀಣ ಪ್ರದೇಶದ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಹಾಗೂ ಉದ್ದಿಮೆ ಆರಂಭಿಸುವವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ನಿಗಮವನ್ನು ರಚಿಸಲಾಗಿದೆ. ಇತ್ತೀಚೆಗಷ್ಟೇ ನಿಗಮದ ಅಧ್ಯಕ್ಷರಾಗಿ ಮುರಳೀಧರ ಹಾಲಪ್ಪ ಅಧಿಕಾರ ಸ್ವೀಕರಿಸಿದ್ದಾರೆ.

*ಯಾರ್‍ಯಾರಿಗೆ ಕೌಶಲ ತರಬೇತಿ?
ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಅನೇಕ ಪದವೀಧರರು ಹಿಂದೆ ಬೀಳುತ್ತಿದ್ದಾರೆ. ಇದಕ್ಕೆ ಅವರಲ್ಲಿರುವ ಕೌಶಲ ಕೊರತೆಯೇ ಕಾರಣ. ಎಸ್ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಪದವಿ ಪಡೆದ  ಅಭ್ಯರ್ಥಿಗಳಿಗೆ ಉತ್ಕೃಷ್ಟ ಕೌಶಲ ತರಬೇತಿ ನೀಡಲು ನಿರ್ಧರಿಸಲಾಗಿದೆ. ಹಳ್ಳಿಗಾಡಿನ ಯುವಕ, ಯುವತಿಯರಿಗೆ ಮೊದಲ ಆದ್ಯತೆ. ಈ ತರಬೇತಿಯು 3 ತಿಂಗಳು, 6 ತಿಂಗಳು ಹಾಗೂ ಒಂದು ವರ್ಷದ ಅವಧಿಯದ್ದಾಗಿದೆ. ‘ಕೌಶಲ ಅಭಿಯಾನ’ ಅಥವಾ ‘ಕೌಶಲ ಮಿಷನ್‌’ ಎನ್ನುವ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ.

* ತರಬೇತಿ ಗುರಿ:
ಒಂದು ವರ್ಷದ ಅವಧಿಯಲ್ಲಿ ಸುಮಾರು 1 ಲಕ್ಷ ಮಂದಿಗೆ ಕೌಶಲ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಹೋಟೆಲ್‌ ಮ್ಯಾನೇಜ್‌ಮೆಂಟ್‌, ಪ್ರವಾಸೋದ್ಯಮ, ತಾಂತ್ರಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವಕಾಶ ಪಡೆಯಲು ಅನುಕೂಲವಾಗುವಂತೆ ತರಬೇತಿಯನ್ನು ಆಯೋಜಿಸಲಾಗುವುದು.

☀ ಈ ದಿನದ ಐಎಎಸ್ / ಕೆಎಎಸ್ ಮೇನ್ಸ್ ಮಾದರಿ ಪರೀಕ್ಷಾ ಪ್ರಶ್ನೆ : — ಕ್ರೈಸ್ತರ ಒಂದು ಸಂಪ್ರದಾಯದ ಪ್ರಕಾರ ಸಂತ ಪದವಿಗೆ ಏರುವುದು ಎಂದರೇನು ? ಮದರ್ ತೆರೇಸಾ ಸಂತ ಪದವಿಗೇರಲು ಕಾರಣವಾದ ಅಂಶಗಳೇನು? (According to Christian Tradition what do you mean by Saint declaration? what are the main facts led Pope to declare, honor Mother Teresa as a Saint?)

☀ ಈ ದಿನದ ಐಎಎಸ್ / ಕೆಎಎಸ್ ಮೇನ್ಸ್ ಮಾದರಿ ಪರೀಕ್ಷಾ ಪ್ರಶ್ನೆ :

— ಕ್ರೈಸ್ತರ ಒಂದು ಸಂಪ್ರದಾಯದ ಪ್ರಕಾರ ಸಂತ ಪದವಿಗೆ ಏರುವುದು ಎಂದರೇನು ? ಮದರ್  ತೆರೇಸಾ ಸಂತ ಪದವಿಗೇರಲು ಕಾರಣವಾದ ಅಂಶಗಳೇನು?
(According to Christian Tradition what do you mean by Saint declaration? what are the main facts led Pope to declare, honor Mother Teresa as a Saint?)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(general Studies)

★ ಐಎಎಸ್ / ಕೆಎಎಸ್ ಮೇನ್ಸ್ ಪರೀಕ್ಷಾ ತಯಾರಿ
(IAS / KAS Mains Exam Preparation)


ಸಂತ ಪದವಿ ಎನ್ನುವುದು ಕ್ರೈಸ್ತರ ಒಂದು ಸಂಪ್ರದಾಯ. ಒಬ್ಬ ವ್ಯಕ್ತಿ ನಿಧನರಾದ ಐದು ವರ್ಷಗಳ ನಂತರ ಅವರ ಯಾವುದಾದರೂಒಂದು ಮಹತ್ತರ ಪವಾಡ ಸಾಬೀತಾದರೆ, ಅಂತಹ ವ್ಯಕ್ತಿ ಸ್ವರ್ಗ ಪ್ರಾಪ್ತರಾಗಿದ್ದಾರೆ (ಬೀಟಿಫಿಕೇಷನ್‌) ಎಂದು ಘೋಷಿಸಲಾಗುತ್ತದೆ.

ಈ ಪಟ್ಟ ದೊರೆತ ನಂತರ ಮತ್ತೂಂದು ಪವಾಡ ರುಜುವಾದರೆ ಸಿಗುವುದೇ ಸಂತ ಪದವಿ. ಸ್ವರ್ಗ ಪ್ರಾಪ್ತರಾದ ವ್ಯಕ್ತಿಗಳನ್ನು ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ಮಾತ್ರವೇ ಆರಾಧಿಸುತ್ತಾರೆ. ಆದರೆ ಸಂತ ಪದವಿಗೇರಿದವರನ್ನು ವಿಶ್ವಾದ್ಯಂತ ಇರುವ ಕ್ಯಾಥೋಲಿಕ್‌ ಕ್ರೈಸ್ತರು ಪೂಜಿಸುತ್ತಾರೆ.

ಸಂತ ಪದವಿಗೆ ಏರುವುದು ಕೆಲ ವರ್ಷಗಳ ಪ್ರಕ್ರಿಯೆ. ವ್ಯಕ್ತಿಯೊಬ್ಬರು ಮೃತರಾದ ಬಳಿಕ ಅವರ ಪವಾಡ ಸಾಬೀತಾದಾಗ ಅವರನ್ನು ಸಂತ ಪದವಿಗೇರಿಸುವ ಪ್ರಕ್ರಿಯೆಯನ್ನು ಒಂದು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಆರಂಭಿಸುತ್ತಾರೆ. ಚರ್ಚ್‌ಗೆ ಸಂಬಂಧಪಟ್ಟವರು, ವ್ಯಕ್ತಿಯನ್ನು ಸಂಪರ್ಕಿಸಿ ಅವರಿಗಾದ ಪವಾಡದ ಅನುಭವ, ಅದರಿಂದೇನಾಯ್ತು? ಇತ್ಯಾದಿ ಮಾಹಿತಿಗಳನ್ನು, ಸಾಕ್ಷ್ಯಗಳನ್ನು ಸಂಪೂರ್ಣವಾಗಿ ಕಲೆ ಹಾಕುತ್ತಾರೆ. ಈ ಮಾಹಿತಿಗಳು ಸಮಾಧನ ತಂದಿದ್ದಲ್ಲಿ, ಅವುಗಳನ್ನು ಬಳಿಕ ವ್ಯಾಟಿಕನ್‌ಗೆ ಕಳಿಸಲಾಗುತ್ತದೆ. ಬಳಿಕ ಧರ್ಮಶಾಸ್ತ್ರಜ್ಞರು, ಮೃತರ ಪವಾಡ ಸದೃಶ, ದೈವಿಕವಾದ ಶಕ್ತಿಯನ್ನು ನಿಜವೆಂದು ಪುರಸ್ಕರಿಸುತ್ತಾರೆ. ಇದನ್ನು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಅವರಿಗೆ ತಿಳಿಸಿ ವ್ಯಕ್ತಿಯು ಪೂಜ್ಯರಾದವರು ಎಂದು ಗುರುತಿಸಿ ಸಂತ ಪದವಿ ಅನುದಾನಿಸುವಂತೆ ಕೇಳಲಾಗುತ್ತದೆ.


★ತೆರೇಸಾ ಸಂತ ಪದವಿಗೇರಲು ಕಾರಣವಾದ (ಅಂಶಗಳು) ಪವಾಡಗಳು :

ಭಾರತೀಯರಾಗಿದ್ದು ಸಂತ ಪದವಿಗೇರುವವರಲ್ಲಿ ಮದರ್‌ ತೆರೇಸಾ ಅವರು ಮೂರನೆಯವರು.

ಮದರ್‌ ತೆರೇಸಾ. ನಿರ್ಗತಿಕರು ರೋಗಿಗಳ ಪಾಲಿಗೆ ದೇವರಾಗಿದ್ದವರು. ಶುಶ್ರೂಷೆ, ಸಾಂತ್ವನ ಪದಕ್ಕೆ ಅನ್ವರ್ಥ ನಾಮ. ಇದಕ್ಕಾಗಿಯೇ "ಮದರ್‌', ತಾಯಿ ಎಂಬ ಅಭಿದಾನ. ಸೇವೆಯಲ್ಲೇ ಜೀವನ ಸಾರ್ಥಕ್ಯ ಕಂಡ ಮದರ್‌ ತೆರೇಸಾಗೆ ಇದೀಗ ಸಂತ ಪದವಿಗೇರಲಿದ್ದಾರೆ. ಸೆ.5ರ ಅವರ ಜನ್ಮದಿನಕ್ಕೆ ಪೂರ್ವಭಾವಿಯಾಗಿ 2016ರ ಸೆ.4ರಂದು ಅವರಿಗೆ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಸಂತ ಪದವಿ ಪ್ರದಾನ ಮಾಡಿದ್ದಾರೆ.

ತೆರೇಸಾ ಅವರನ್ನು ಸಂತ ಪದವಿಗೇರಿಸಲು ಕಾರಣವಾದ ಪವಾಡಗಳು ಪ್ರಮುಖವಾಗಿ ಎರಡು. ಇವುಗಳನ್ನು ಮಾನ್ಯ
ಮಾಡಿಯೇ ವ್ಯಾಟಿಕನ್‌ ತೆರೇಸಾ ಅವರನ್ನು ಪೂಜ್ಯರು ಎಂದು ಗುರುತಿಸುತ್ತಿದೆ. ಮೊದಲನೆಯದ್ದು, ಕೋಲ್ಕತಾದ
ಮಹಿಳೆಯೊಬ್ಬರು ತೆರೇಸಾರನ್ನು ಪ್ರಾರ್ಥಿಸಿದಾಗ ಅವರ ದೇಹದಲ್ಲಿದ್ದ ಗೆಡ್ಡೆ ಅಳಿದದ್ದು. ಈ ಘಟನೆ 2003ರಲ್ಲಿ
ನಡೆದಿದ್ದು ಇದನ್ನು ವ್ಯಾಟಿಕನ್‌ ಮಾನ್ಯ ಮಾಡಿತ್ತು. ಬಳಿಕ ತೆರೇಸಾ ಅವರನ್ನು ಪ್ರಾರ್ಥಿಸಿದ್ದರಿಂದ ತನ್ನ ಮೆದುಳಿನ ಸೋಂಕು, ಮೂತ್ರಪಿಂಡ ಕಾಯಿಲೆ ವಾಸಿಯಾಗಿದೆ ಎಂದು ಬ್ರೆಜಿಲ್‌ನ ವ್ಯಕ್ತಿ 2008ರಲ್ಲಿ ಹೇಳಿದ್ದು, ಇದೂ ಅಧಿಕೃತ
ಎಂದು ವ್ಯಾಟಿಕನ್‌ ಮಾನ್ಯ ಮಾಡಿತ್ತು. ಬಳಿಕ 2015ರಲ್ಲಿ ತೆರೇಸಾ ಅವರಿಗೆ ಸಂತ ಪದವಿ ನೀಡುವುದಾಗಿ
ಪೋಪ್‌ ಘೋಷಿಸಿದ್ದರು.

Wednesday 2 August 2017

☀"ಪ್ರೊಜೆಕ್ಟ್ 75" ಯೋಜನೆ : (Project 75)


☀"ಪ್ರೊಜೆಕ್ಟ್ 75" ಯೋಜನೆ :
(Project 75)
━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)


— ಸ್ಕಾರ್ಪೀನ್  ಜಲಾಂತರ್ಗಾಮಿ ನಿರ್ಮಾಣ ಯೋಜನೆಗೆ ಭಾರತದಲ್ಲಿ "ಪ್ರೊಜೆಕ್ಟ್ 75' ಹೆಸರಿಡಲಾಗಿದೆ.

ಫ್ರಾನ್ಸ್ನಿಂದ ತಂತ್ರಜ್ಞಾನ ವರ್ಗಾವಣೆ ಒಪ್ಪಂದ ಅಡಿಯಲ್ಲಿ, ಫ್ರಾನ್ಸ್‌ ರಕ್ಷಣಾ ಇಲಾಖೆ, ಸ್ಪೇನ್‌ನ ಕಂಪನಿ ನವಾಂಟಿಯಾ ಮತ್ತು ಮಜಗಾಂವ್‌ ಡಾಕ್‌ ಲಿ. ಜಂಟಿಯಾಗಿ ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದೆ.

ಸುಮಾರು 53 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಇದಕ್ಕಾಗಿ ಫ್ರಾನ್ಸ್‌ ಜೊತೆ ಭಾರತ 2005ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಭಾರತಕ್ಕಾಗಿ ಒಟ್ಟು 6 ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಯೋಜಿಸಲಾಗಿದೆ.ಅದ ರಲ್ಲಿ ಮೊದಲನೆಯದ್ದು 2015 ಏ.6ರಂದು ನೌಕಾಪಡೆಗೆ ಸೇರ್ಪಡೆಯಾಗಿದ್ದು, ಸದ್ಯ ಪರೀಕ್ಷಾರ್ಥ ಸಂಚಾರದಲ್ಲಿದೆ.

ಉಳಿದವು ನಿರ್ಮಾಣ ಹಂತದಲ್ಲಿದ್ದು 2020ರ ವೇಳೆಗೆ ದೇಶಕ್ಕೆ ಸಮರ್ಪಣೆಯಾಗಲಿದೆ.

ಇತ್ತೀಚೆಗೆ 2016 August ನಲ್ಲಿ ಫ್ರಾನ್ಸ್‌ ಸಹಯೋಗದಲ್ಲಿ ನಿರ್ಮಿಸಲಾಗುತ್ತಿರುವ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ಕುರಿತ ಮಹತ್ವದ ಮಾಹಿತಿ ಸೋರಿಕೆಯಾಗಿತ್ತು.

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (PART -X)... ಮುಂದುವರೆದ ಭಾಗ. ( KAS Mains General Studies Paper V Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (PART -X)... ಮುಂದುವರೆದ ಭಾಗ.
( KAS Mains General Studies  Paper V  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.



●. ಪತ್ರಿಕೆ-5:       ಸಾಮಾನ್ಯ ಅಧ್ಯಯನಗಳು-4


●. ವಿಭಾಗ-1:

ನೀತಿಶಾಸ್ತ್ರ:

ಮಾನವ ಕ್ರಿಯೆಗಳಲ್ಲಿ ನೀತಿಶಾಸ್ತ್ರದ ಸಾರ, ನಿರ್ಣಾಯಕಗಳು ಮತ್ತು ಪರಿಣಾಮಗಳು, ನೀತಿಶಾಸ್ತ್ರದ ಆಯಾಮಗಳು, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೀತಿಶಾಸ್ತ್ರ.
ಸಾರ್ವಜನಿಕ ಆಡಳಿತದಲ್ಲಿ ನೀತಿಶಾಸ್ತ್ರ, ಸ್ಥಾನಮಾನ ಮತ್ತು ಸಮಸ್ಯೆಗಳು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೀತಿಯ ಬಿಕ್ಕಟ್ಟುಗಳು, ನೀತಿ ಮಾರ್ಗದರ್ಶನದ ಮೂಲವಾಗಿ ಕಾನೂನುಗಳು, ನಿಯಮಗಳು, ವಿಧಿನಿಯಮಗಳು ಮತ್ತು ಧರ್ಮಪ್ರಜ್ಞೆ.
ಹೊಣೆಗಾರಿಕೆ ಮತ್ತು ನೈತಿಕ ಆಡಳಿತ, ಆಡಳಿತದಲ್ಲಿನ ನೀತಿ ಮತ್ತು ನೈತಿಕ ಮೌಲ್ಯಗಳ ಬಲಪಡಿಸುವಿಕೆ. ಅಂತರಾಷ್ಟೀಯ ಸಂಬಂಧಗಳಲ್ಲಿ ಮತ್ತು ಹಣ ನೀಡಿಕೆಯಲ್ಲಿ ನೀತಿ ವಿಷಯಗಳು, ನಿಗಮಿತ ಆಡಳಿತ.
ಸಾರ್ವಜನಿಕ ಸೇವೆಯ ಪರಿಕಲ್ಪನೆ, ಆಡಳಿತದ ತಾತ್ವಿಕ ಮೂಲ, ಸರ್ಕಾರದಲ್ಲಿ ಮಾಹಿತಿ ಹಂಚಿಕೆ ಮತ್ತು ಸರ್ಕಾರದ ಪಾರದರ್ಶಕತೆ, ಮಾಹಿತಿ ಹಕ್ಕು, ನೀತಿಶಾಸ್ತ್ರದ ಸಂಹಿತೆಗಳು, ನೀತಿ ಸಂಹಿತೆಗಳು, ನಾಗರಿಕ ಸನ್ನದುಗಳು, ಕೆಲಸದ ಸಂಸ್ಕೃತಿ, ಸೇವೆ ಸಲ್ಲಿಕೆಯ ಗುಣಮಟ್ಟ, ಸಾರ್ವಜನಿಕ ನಿಧಿ ಬಳಕೆ, ಭ್ರಷ್ಟ್ರಾಚಾರದ ಸವಾಲುಗಳು.
ಮಾನವ ಮೌಲ್ಯಗಳು – ಮಹಾನ್ ನಾಯಕರು ಸುಧಾರಕರು, ಆಡಳಿತಗಾರರ ಜೀವನಗಳು ಮತ್ತು ಬೋಧನೆಗಳಿಂದ ಪಾಠಗಳು, ಕುಟುಂಬದ ಪಾತ್ರ, ಸಮಾಜ ಮತ್ತು ಮೌಲ್ಯಗಳನ್ನು ಬೋಧಿಸುವ ಶೈಕ್ಷಣಿಕ ಸಂಸ್ಥೆಗಳು.



●. ವಿಭಾಗ-2:

ನೀತಿನಿಷ್ಠೆ:

ನೀತಿನಿಷ್ಠೆ, ನಿಷ್ಪಕ್ಷಪಾತ ಮತ್ತು ಪಕ್ಷಪಾತ ಮಾಡದಿರುವುದು, ಉದ್ದೇಶ, ಸಾರ್ವಜನಿಕ ಸೇವೆಗೆ ಸಮರ್ಪಣೆ, ದುರ್ಬಲ ವರ್ಗಗಳಿಗಾಗಿ ಅನುಭೂತಿ, ತಾಳ್ಮೆ ಮತ್ತು ಅನುಕಂಪ.


●. ವಿಭಾಗ-3:

ಅಭಿರುಚಿ:

ನಾಗರಿಕ ಸೇವೆಗಾಗಿ ಅಭಿರುಚಿ ಮತ್ತು ಬುನಾದೀಯ ಮೌಲ್ಯಗಳು, ಒಳಾಂಶ ರಚನೆ, ಪ್ರಕಾರ್ಯ, ಚಿಂತನೆಗಳು ಮತ್ತು ಕಾರ್ಯರೀತಿಯೊಂದಿಗೆ ಅದರ ಸಂಬಂಧ, ನೈತಿಕ ಮತ್ತು ರಾಜಕೀಯ ಮನೋಭವಗಳು, ಸಾಮಾಜಿಕ ಪ್ರಭಾವ ಮತ್ತು ಪ್ರೇರಣೆ. ನಾಗರೀಕ ಸೇವೆಗಾಗಿ ಅಭಿರುಚಿ ಮತ್ತು ಬುನಾದೀಯ ಮೌಲ್ಯಗಳು, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಅದರ ಉಪಯುಕ್ತತೆಗಳು ಹಾಗೂ ಆಡಳಿತ ಮತ್ತು ನಿರ್ವಹಣೆಯ ಅನ್ವಯತೆ, ಭಾರತ ಮತ್ತು ವಿಶ್ವದಿಂದ ನೈತಿಕ ಚಿಂತಕರ ಕೊಡುಗೆಗಳು. ಮೇಲಿನ ಅಂಶಗಳಿಗೆ ಸಂಬಂಧಿಸಿದಂತೆ ವಿಷಯಗಳ ವಾಸ್ತವಾಂಶ ಅಧ್ಯಯನಗಳು.

...ಮುಂದುವರೆಯುವುದು. 

(ಕೃಪೆ: ಯುಸಿಸಿ ಬೆಂಗಳೂರು)