"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 14 September 2014

★ ಸಾಮಾನ್ಯ ಜ್ಞಾನ (ಭಾಗ - 5) (General Knowledge PART-5)

★ ಸಾಮಾನ್ಯ ಜ್ಞಾನ (ಭಾಗ - 5)

 88) ವಿದೇಶಿ ಆಕ್ರಮಣ ಮತ್ತು ವಾಯುಗುಣದ ವೈಪರೀತ್ಯದಿಂದಾಗಿ ವಿಫಲಗೊಂಡ ಪಂಚವಾರ್ಷಿಕ ಯೋಜನೆ ಯಾವುದು?
— ಮೂರನೆಯ ಪಂಚವಾರ್ಷಿಕ ಯೋಜನೆ.


89) 'ಶಾರದಾ ಕಾಯಿದೆ' ಜಾರಿಗೆ ತಂದ ಉದ್ದೇಶ?
— ಬಾಲ್ಯ ವಿವಾಹ ವಿರುದ್ಧ.


 90) 'ಹಲ್ಮಿಡಿ' ಶಾಸನದ ಭಾಷೆಯ ಪ್ರಕಾರ ಯಾವುದು ?
— ಪೂರ್ವದ ಹಳೆಗನ್ನಡ.


 91) ಸಾರ್ಕ್ ಎಂದರೆ :
 — ಪ್ರಾದೇಶಿಕ ಸಹಕಾರ ಉದ್ದೇಶದ ದಕ್ಷಿಣ ಏಷ್ಯಾ ಸಂಘಟನೆ
(South Asian Association for Regional Co-operation)


 92) ಪಂಚ ದ್ರಾವಿಡ ಭಾಷೆಗಳು ಯಾವುವು ?
 — ತಮಿಳು, ಕನ್ನಡ, ತೆಲುಗು, ಮಲಯಾಳಂ, ತುಳು.


 93) ಸಾರ್ಕ್ ನ ಸದಸ್ಯ ದೇಶಗಳು ಯಾವವು,?
— ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಭೂತಾನ, ಮಾಲ್ಡೀವ್ಸ್, ಬಾಂಗ್ಲಾ ಮತ್ತು ಆಫ್ಘಾನಿಸ್ತಾನ (ಭಾರತ ಕೂಡಾ ಸದಸ್ಯ ದೇಶ)


 94) ಆಹಾರದ ಗುಣಮಟ್ಟವನ್ನು ಹತೋಟಿಯಲ್ಲಿರುವಂತೆ ನೋಡಿಕೊಳ್ಳುವ ಸಂಸ್ಥೆ ಯಾವುದು?
— Indian Standard Institute.


 95) 'ಹೆಮ್ರಿಟ್ ಕ್ರಾಬ್' ಎಂಬ ಸಮುದ್ರ ಜೀವಿಯ ಮೇಲೆ ಬೆಳೆಯುವ ಜೀವ ಯಾವುದು ?
— ಸಮುದ್ರ ಕಮಲ.


 96) ಚಿನ್ನ ಕರಗುವ ಉಷ್ಣಾಂಶವೆಷ್ಟು ?
 — 1862 ಡಿಗ್ರಿ ಫೆ.


97) ಅಂತರ್ರಾಷ್ಟ್ರೀಯ ವ್ಯಾಪಾರದ ಕಾವಲುಗಾರ ಸಂಸ್ಥೆ ಯಾವುದು ?
— ವಿಶ್ವ ವ್ಯಾಪಾರ ಸಂಸ್ಥೆ.


 98) 'ಸಂಯುಕ್ತ ಪ್ರಾಣಿಗ್ರಹಿ' ಇದು ಯಾವ ಶಾಸ್ತ್ರೀಯ ನೃತ್ಯದ ಒಂದು ಭಾಗವಾಗಿದೆ ?
— ಒಡಿಸ್ಸಿ.


 99) 'ಕರ್ನಾಟಕ' ಎಂಬ ಹೆಸರಿನ ಉಲ್ಲೇಖ ಈ ಕೃತಿಯಲ್ಲಿ ಕಾಣಿಸಿಕೊಳ್ಳುತ್ತದೆ—
— ವ್ಯಾಸರ ಮಹಾಭಾರತ.


 100) ಪಕ್ಷಾಂತರ ವಿರೋಧ (Anti defection) ಕಾನೂನಿನ ಪ್ರಕಾರ, ಸದನದಿಂದ ಸದಸ್ಯರೊಬ್ಬರನ್ನು ಅನರ್ಹಗೊಳಿಸುವುದನ್ನು ನಿರ್ಧರಿಸುವ ಅಂತಿಮ ಅಧಿಕಾರ ಯಾರಿಗೆ ಸೇರಿದೆ ?
— ಸದನದ ಸ್ಪೀಕರ್.


 101) ಭಾರತರತ್ನ ಪ್ರಶಸ್ತಿಯನ್ನು ಗಳಿಸಿದ ಮೊದಲ ಭಾರತೀಯೇತರ ವ್ಯಕ್ತಿ ಯಾರು ?
 — ಖಾನ್ ಅಬ್ದುಲ್ ಗಫಾರ್ ಖಾನ.


 102) ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯಾವ ಹೆಸರಿನಲ್ಲಿ ಆಚರಿಸಲಾಗುತ್ತದೆ ?
— ರಾಷ್ಟ್ರೀಯ ಯುವಕರ ದಿನಾಚರಣೆ.


 103) ಅಖಿಲ ಭಾರತ ಸೇವೆಗಳ ಸದಸ್ಯರನ್ನು ಯಾರು ನೇಮಕ ಮಾಡುತ್ತಾರೆ ?
— ರಾಷ್ಟ್ರಪತಿಗಳು.


 104) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ ಯಾವುದಾಗಿತ್ತು ?
— ಶಿರಾ.


 105) ಸಂಸ್ಕೃತದ ನಂತರ ಅತ್ಯ೦ತ ಪ್ರಾಚೀನವಾದ ಭಾಷೆ ಯಾವುದು ?
— ತಮಿಳು.


 106) 'ಆದಿ ಪುರಾಣ' ಕಾವ್ಯಕ್ಕೆ ಮೂಲ ?
— ಜೀನಸೇನಾಚಾರ್ಯರ ಪೂರ್ವ ಪುರಾಣ.


 107) ಪಾರ್ಲಿಮೆಂಟ್ ನ ಎರಡು ಅಧಿವೇಶನದ ಮಧ್ಯೆ ಇರಬೇಕಾದ ಅತ್ಯಧಿಕ ಅಂತರ ?
— 6 ತಿಂಗಳು.


 108) 'ಕುರಿತೋದದೆಯುಂ ಕಾವ್ಯ ಪ್ರಯೋಗ ಪರಣತ ಮತಿಗಳ್' ಎಂದು ಯಾವ ಕೃತಿಯಲ್ಲಿ ಉಲ್ಲೇಖಿತಗೊಂಡಿದೆ ?
— ಕವಿರಾಜ ಮಾರ್ಗ.


 109) ಭಾರತದ ಕಪ್ಪು ಎರೆ ಭೂಮಿಯನ್ನು ಹೀಗೂ ಕರೆಯುತ್ತಾರೆ...
— ಅಕ್ಷಾಂಶ.


 110) ಸಮುದ್ರದ ಉಪ್ಪನ್ನು (ಅಡುಗೆ ಉಪ್ಪನ್ನು) ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ರಾಜ್ಯ ಯಾವುದು?
— ಆಂಧ್ರಪ್ರದೇಶ.


 111) ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದು ಹೋಗುತ್ತದೆ?
— ಕಾಂಗೋ ನದಿ.


 112) 'ಸಾಧುಗೆ ಸಾಧು ಮಾರ್ಧುಂಗೆ ಮಾಧುರ್ಯಂ' ಎಂಬ ನುಡಿ ಸಾಲುಗಳು ಯಾವ ಶಾಸನದಲ್ಲಿ ಉಲ್ಲೇಖಿತಗೊಂಡಿವೆ ?
— ಬಾದಾಮಿ ಶಾಸನ.


 113) ಸಮುದ್ರದ ಸಮಾನ ಆಳದ ಬಿಂದುಗಳ ಮೂಲಕ ಸಾಗುವ ಕಾಲ್ಪನಿಕ ರೇಖೆಗಳನ್ನು ಸೂಚಿಸುವ ಪಾರಿಭಾಷಿಕ ಪದ ಯಾವುದು?
— ಐಸೊಭಾತ್ಸ್.


 114) ನೀರನ್ನು ಧಾರಣೆ ಮಾಡುವ ವ್ಯಾಪ್ಯಾತಾ ಶಿಲಾ ಪದರದ ಹೆಸರೇನು?
— ಅಕ್ವಕ್ಲೂಡ್.


 115) ಕೃತಕ ಮಳೆಗೆ ಬಳಸಲಾಗುವ ರಸಾಯನಿಕ ಯಾವುದು?
— ಸಿಲ್ವರ್ ಆಯೋಡೈಡ್.


116) ಮೊಘಲ್ ದೊರೆಯಾಗಿ ಅಕ್ಬರನ ಸಿಂಹಾಸನಾರೋಹಣ ನಡೆದ ಸ್ಥಳ ಯಾವುದು?
— ಕಲಾನೂರ್


 117) ವೇದಗಳ ಕಾಲದಲ್ಲಿ ಜನರಿಂದ ವಸೂಲು ಮಾಡುತ್ತಿದ್ದ ತೆರಿಗೆ ಯಾವುದು?
 — ಬಲಿ.


 118) 'ಚಾವುಂಡರಾಯ ಪುರಾಣ' ಕೃತಿಯ ರಚನೆಗೆ ಸಂಸ್ಕೃತದ ಗುಣಭದ್ರರ ಯಾವ ಕೃತಿ ಆಧಾರವಾದ ಕೃತಿ ?
— ತ್ರಿಷಷ್ಟಿಪುರುಷ ಪ್ರತಿಬದ್ಧ ಪುರಾಣ.


 119) ಯಪ್ಪಿನ ಮತವು ಯಾವುದಕ್ಕೆ ಸಂಬಂಧಿಸಿದೆ?
— ಜೈನ ಧರ್ಮದ ಶ್ವೇತಾಂಬರರಿಗೆ.


 120) 'ಉಭಯ ಭಾಷಾ ಚಕ್ರವರ್ತಿ' ಎಂಬ ಬಿರುದು ಯಾರಿಗಿತ್ತು ?
— ಹಸ್ತಿಮಲ್ಲ ಚಕ್ರವರ್ತಿ.


 121) ಕೆಲಸ ಮಾಡದ ಯಾವುದರ ದೋಷ ಪರಿಹರಿಸಲು ಡಯಾಲಿಸಿಸ್ ಉಪಯೋಗಿಸುತ್ತಾರೆ?
—ಕಿಡ್ನಿ (ಮೂತ್ರಪಿಂಡ)


 122) ಭಾರತದ ಸಂವಿಧಾನದಲ್ಲಿ ಎಷ್ಟು ವಿಧಿಗಳಿವೆ? — ೩೯೫ ವಿಧಿಗಳು.


 123) ಆರ್ಯರು ಮತ್ತು ಪ್ರಾಚೀನ ಇರಾನಿನವರೆಲ್ಲಾ ಪೂಜಿಸುತ್ತಿದ್ದ ಏಕೈಕ ದೇವರು?
— ಅಗ್ನಿ.


 124) ಯಾವ ಕೋಟೆಯನ್ನು ಅಮೀರ್ ಖುಸ್ರೊ 'ಏಳನೆಯ ಸ್ವರ್ಗಕ್ಕಿಂತಲೂ ಎತ್ತರವಾಗಿರುವ ಹಿಂದೂಗಳ ಸ್ವರ್ಗ' ಎಂದು ವರ್ಣಿಸಿದ?
— ಚಿತ್ತೂರ್


 125) 'ಮುದ್ರಾ ಮಂಜೂಷ' ಕೃತಿಯ ಕನ್ನಡ ಸಾಹಿತ್ಯದ ಯಾವ ಪ್ರಕಾರದ ಲಕ್ಷಣಗಳನ್ನು ಒಳಗೊಂಡಿದೆ ?
— ಕಾದಂಬರಿ.


 126) 3500 ಕ್ಕೂ ಹೆಚ್ಚು ವಚನಗಳನ್ನು ಬರೆದು 'ಆಧುನಿಕ ವಚನಕಾರ' ರಾಗಿ ಖ್ಯಾತರಾದವರು ಯಾರು?
— ಡಾ.ಜಚನಿ.


 127) ರೂಢಿಯಲ್ಲಿರುವ ಕನ್ನಡದ ಅಕ್ಷರಗಳು ಏಷ್ಟು?
— 49


 128) ಭಾರತದಲ್ಲಿ 'ಕರ್ಕಾಟಕ ಸಂಕ್ರಾತಿ ವೃತ್ತ' ವನ್ನು ಎರಡು ಬಾರಿ ಹಾದು ಹೋಗುವ ನದಿ ಯಾವುದು?
— ಮಾಹಿ ನದಿ.


 129) ಕ್ರಿ.ಶ. 1 ನೇ ದಶಕದಲ್ಲಿ ಮಹಾಯಾನ ಬೌದ್ಧರು ಪ್ರಪ್ರಥಮವಾಗಿ ವಿಗ್ರಹಾರಾಧನೆಯನ್ನು ಪ್ರಾರಂಭಿಸಿದರು.


 130) ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥ ಯಾವುದು?
— ದೋಹಾಕೋಶ.


 131) ವೇದಕಾಲದಲ್ಲಿ ಮೊಟ್ಟಮೊದಲ ಬಾರಿಗೆ ಕಬ್ಬಿಣವನ್ನು ಉಪಯೋಗಿಸಿದ ಪ್ರಾಂತ್ಯ ಯಾವುದು?
— ಗಾಂಧಾರ.


 132) ಮನುಷ್ಯನೊಬ್ಬ ತನ್ನ ಜೀವಿತದ ಅವಧಿಯಲ್ಲಿ ಸರಾಸರಿ '24 ವರ್ಷ' ನಿದ್ದೆಯಲ್ಲೇ ಕಾಲ ಕಳೆಯುತ್ತಾನೆ.


 133) 'ಕನ್ನಡದ ಷೇಕ್ಸ್ ಪಿಯರ್' ಎಂದು ಯಾರನ್ನು ಕರೆಯಲಾಗುತ್ತದೆ?
— ಕಂದಗಲ್ ಹನುಮಂತರಾವ್.