"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 31 July 2020

•► ️PART XV — ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes in Kannada)

•► ️PART XV — ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes in Kannada)
━━━━━━━━━━━━━━━━━━━━━━━━━━━━━━
…ಮುಂದುವರೆದ ಭಾಗ.



Thursday 30 July 2020

Wednesday 29 July 2020

•► ️ಅಳಿವಿನಂಚಿನತ್ತ ಸಾಗುತ್ತಿರುವ 10 ಪ್ರಮುಖ ಅರಣ್ಯಗಳು : (10 major forests heading towards extinction)

 •► ️ಅಳಿವಿನಂಚಿನತ್ತ ಸಾಗುತ್ತಿರುವ 10 ಪ್ರಮುಖ ಅರಣ್ಯಗಳು :
(10 major forests heading towards extinction) 

 ━━━━━━━━━━━━━━━━━━━━━━━
★ ಪರಿಸರ ಮತ್ತು ಜೀವ ವೈವಿಧ್ಯತೆ
(Environment and Biodiversity)

ಮನುಷ್ಯ ಜಾತಿಯ ಮಹತ್ವಾಕಾಂಕ್ಷೆ ಹೇಗೆ ಪ್ರಕೃತಿಯನ್ನು ನಾಶ ಮಾಡುತ್ತಿದೆ ಎನ್ನುವುದರ ಬಗ್ಗೆ ಕನ್ಸರ್ವೇಷನ್‌ ಇಂಟರ್ನಾಷನಲ್‌ 2014ರಲ್ಲಿ ಜಗತ್ತಿನ ಅಳಿವಿನಂಚಿನಲ್ಲಿರುವ ಅರಣ್ಯಗಳ ಕುರಿತು ವರದಿಯೊಂದನ್ನು ಪ್ರಕಟಿಸಿತ್ತು. ಒಂದು ಸಮಯದಲ್ಲಿ ಜಗತ್ತಿನ ಜೀವ ವೈವಿಧ್ಯ ಆಗರಗಳಾಗಿದ್ದ, ಆದರೆ ಈಗ ಅಳಿವಿನಂಚಿನತ್ತ ಸಾಗುತ್ತಿರುವ 10 ಪ್ರಮುಖ ಅರಣ್ಯಗಳ ಪಟ್ಟಿ ಇಲ್ಲಿದೆ.


10) ಆಫ್ರೋಮೊಂಟಾನ್‌- ಆಫ್ರಿಕಾದ ಪೂರ್ವ ಅಂಚಿನಲ್ಲಿರುವ ಕಾಡು

9)ಮಡಗಾಸ್ಕರ್‌ ಮತ್ತು ಇಂಡಿಯನ್‌ ಓಶಿಯನ್‌ ಐಲ್ಯಾಂಡ್ಸ್‌

8) ಪೂರ್ವ ಆಫ್ರಿಕಾದ ಕರಾವಳಿ ಅರಣ್ಯ

7)ಕ್ಯಾಲಿಫೋರ್ನಿಯಾ ಫ್ಲೋರಿಸ್ಟಿಕ್‌ ಪ್ರಾವಿನ್ಸ್‌

6)ನೈಋುತ್ಯ ಚೀನಾದ ಅರಣ್ಯ ಪ್ರದೇಶಗಳು

5)ಅಟ್ಲಾಂಟಿಕ್‌ ಅರಣ್ಯ, ದಕ್ಷಿಣ ಅಮೆರಿಕ

4)ಫಿಲಿಪ್ಪೀನ್ಸ್‌ನ ಅರಣ್ಯ

3)ಸಂದಲ್ಯಾಂಡ್‌, ಏಷ್ಯಾ-ಪೆಸಿಫಿಕ್‌

2)ನ್ಯೂ ಕೆಲಡೋನಿಯಾ, ಏಷ್ಯಾ-ಪೆಸಿಫಿಕ್‌

1)ಭಾರತ-ಬರ್ಮಾದ, ಉಷ್ಣವಲಯ-ಉಪಉಷ್ಣವಲಯದ ಅರಣ್ಯ ಪ್ರದೇಶಗಳು

•► ️PART XIII — ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes in Kannada)

•► ️PART XIII — ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : 
(IAS/KAS Exam Preparation Short Notes in Kannada)
━━━━━━━━━━━━━━━━━━━━━━━━━

…ಮುಂದುವರೆದ ಭಾಗ.

> ತಿದ್ದುಪಡಿ 01:
♦ ವನ್ಯ ಜೀವಿಗಳ ವಲಸೆ ಪ್ರಭೇದಗಳ ಸಂರಕ್ಷಣೆ ಕುರಿತ 13 ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಸಿಒಪಿ) = (Feb 2020) ಗುಜರಾತ್ ನ ಗಾಂಧಿನಗರದಲ್ಲಿ ನಡೆಯಿತು.


Add caption

Tuesday 28 July 2020

•► ️"ಅಲಿಪ್ತ ರಾಷ್ಟ್ರಗಳ ಚಳವಳಿ (NAM) 2020ರ ಶೃಂಗಸಭೆ" : (Non-Aligned Movement (NAM) Conference

•► ️"ಅಲಿಪ್ತ ರಾಷ್ಟ್ರಗಳ ಚಳವಳಿ (NAM) 2020ರ ಶೃಂಗಸಭೆ" :
(Non-Aligned Movement (NAM) Conference
━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)


ವಿಶ್ವಸಂಸ್ಥೆಯನ್ನು ಬಿಟ್ಟರೆ ಎರಡನೇ ಅತಿದೊಡ್ಡ ಒಕ್ಕೂಟ ಎನಿಸಿಕೊಂಡಿರುವ ಅಲಿಪ್ತ ರಾಷ್ಟ್ರಗಳ ಚಳುವಳಿ ಅಥವಾ ನಾನ್ ಅಲೈನಡ್ ಮೂವ್‌ಮೆಂಟ್‌ನಲ್ಲಿ (ನಾಮ್) 120ರಷ್ಟು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸದಸ್ಯತ್ವ + ಅಜರ್‌‍ಬೈಜಾನ್ ಗಣರಾಜ್ಯದಲ್ಲಿ  ಆಯೋಜನೆ + ‘ಕೋವಿಡ್ -19 ವಿರುದ್ಧ ಒಂದಾಗಿ’ ಎಂಬ ಧ್ಯೆಯವಾಕ್ಯದೊಂದಿಗೆ ನಡೆದ ನಾಮ್ ಸಂಪರ್ಕ ಗುಂಪಿನ ಆನ್ ಲೈನ್ ಶೃಂಗಸಭೆಯನ್ನು ನಾಮ್ ಅಧ್ಯಕ್ಷ, ಅಜರ್ಬೈಜಾನ್ ಗಣರಾಜ್ಯದ ಅಧ್ಯಕ್ಷ ಇಲ್ಹಾಮ್ ಅಲಿಯೇವ್ ಆಯೋಜನೆ. + ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಮತ್ತು ಯುರೋಪಿನ ಸದಸ್ಯ ರಾಷ್ಟ್ರಗಳು ಸೇರಿದಂತೆ ಇತರ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ನಾಯಕರೊಂದಿಗೆ ಇದರಲ್ಲಿ ಭಾಗಿ + ವಿಶ್ವಸಂಸ್ಥೆಯ ಮಹಾಧಿವೇಶನದ ಅಧ್ಯಕ್ಷ ಪ್ರೊ. ತಿಜ್ಜಾನಿ ಮುಹಮದ್ ಬಂಡೆ, ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಆಂಟೋನಿಯೋ ಗುತೇರಸ್, ಆಫ್ರಿಕಾ ಒಕ್ಕೂಟದ ಅಧ್ಯಕ್ಷ ಮೂಸ ಫಕಿ ಮಹಾಮತ್, ಐರೋಪ್ಯ ಒಕ್ಕೂಟದ ಉನ್ನತ ಪ್ರತಿನಿಧಿ ಜೋಸೆಫ್ ಬೋರೆಲ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ. ಟೆಡ್ರೊಸ್ ಗೆಬ್ರೆಯೆಸಸ್ ಭಾಗಿ + ಕೋವಿಡ್-19 ವಿರುದ್ಧದ ಹೋರಾಟದಲ್ಲಿ ತಮ್ಮ ಮೂಲ ವೈದ್ಯಕೀಯ, ಸಾಮಾಜಿಕ ಮತ್ತು ಮಾನವೀಯ ಅಗತ್ಯಗಳನ್ನು ಪ್ರತಿಬಿಂಬಿಸುವ ಸಾಮಾನ್ಯ ಡಾಟಾ ಬೇಸ್ ಸ್ಥಾಪಿಸುವ ಮೂಲಕ ಸದಸ್ಯ ರಾಷ್ಟ್ರಗಳ ಅಗತ್ಯತೆಗಳು ಮತ್ತು ಅವಶ್ಯಕತೆಗಳನ್ನು ಗುರುತಿಸಲು ನಾಯಕರು ‘ಕಾರ್ಯಪಡೆ’ ರಚಿಸುವುದಾಗಿ ಘೋಷಣೆ. + ಭಾರತವು ಇದರ ಸ್ಥಾಪಕ ಸದಸ್ಯ ರಾಷ್ಟ್ರ + ಅಜರ್‌‍ಬೈಜಾನ್ ಗಣರಾಜ್ಯದ ರಾಜಧಾನಿ ಬಾಕು ನಗರ.

•► ️"ವಿಪತ್ತು ಪುನರ್ ಚೇತರಿಕೆ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಒಕ್ಕೂಟ" - ಸಿಡಿಆರ್‌ಐ. (Coalition for Disaster Resilient Infrastructure)

•► ️"ವಿಪತ್ತು ಪುನರ್ ಚೇತರಿಕೆ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಒಕ್ಕೂಟ" - ಸಿಡಿಆರ್‌ಐ.
(Coalition for Disaster Resilient Infrastructure)
━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)

  ಭಾರತೀಯ ಬಹುಪಕ್ಷೀಯ ಉಪಕ್ರಮ + ನ್ಯೂಯಾರ್ಕ್ ನಲ್ಲಿ 2019ರ ಸೆಪ್ಪೆಂಬರ್ 23ರಂದು ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆ ವೇಳೆ ಪ್ರಧಾನಿ ಅವರಿಂದ ಸಿ ಡಿ ಆರ್ ಐ ಉದ್ಘಾಟನೆ +  ನವದೆಹಲಿಯಲ್ಲಿ ಅದಕ್ಕೆ ಅಗತ್ಯ ಸಚಿವಾಲಯ ಕಚೇರಿ ಹೊಂದಲು ಘಟನೋತ್ತರ ಅನುಮೋದನೆ + ಈ ಪ್ರಸ್ತಾವವನ್ನು ಪ್ರಧಾನಮಂತ್ರಿಗಳು 2019ರ ಆಗಸ್ಟ್ 13ರಂದು ಅನುಮೋದಿಸಿದ್ದರು + ಪರಿಷ್ಕೃತ ಆವೃತ್ತಿಯ ಚಾರ್ಟೆಡ್ ಡಾಕ್ಯೂಮೆಂಟ್ (ಒಪ್ಪಂದ ದಾಖಲೆ) ಸಿ ಡಿ ಆರ್ ಐ ನ ಮೂಲ ದಾಖಲೆಯಾಗಲಿದೆ.+ ವಿಪತ್ತು ಮತ್ತು ಹವಾಮಾನ ಸ್ಥಿತಿ ಸ್ಥಾಪಕ ಮೂಲಸೌಕರ್ಯದ ನಾನಾ ಆಯಾಮಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ವೇದಿಕೆಯಾಗಿ ಕಾರ್ಯ ನಿರ್ವಹಣೆ + ಜಾಗತಿಕವಾಗಿ ಸಣ್ಣ ರಾಷ್ಟ್ರಗಳಲ್ಲಿ ವಿಪತ್ತು ಸಂಭವಿಸಿದಾಗ ಅವರಿಗೆ ನೆರವಾಗಲು ಈ ವರ್ಷಾಂತ್ಯದಲ್ಲಿ; ಪ್ರಾರಂಭಿಸಲು ಭಾರತ ಸರ್ಕಾರ  ಆರಂಭಿಸಿರುವ ಉಪಕ್ರಮ. + ವಿಪತ್ತು ಸಂಭವಿಸಿದಾಗ ಆ ದೇಶವನ್ನು ಪೂರ್ವ ಸ್ಥಿತಿಗೆ ತರಲು ವಿಶೇಷ ಒತ್ತು + ಸಣ್ಣ , ದುರ್ಬಲ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಹಾಯವಾಗಲು ಈ ಜಾಗತಿಕ ಉಪಕ್ರಮ.

•► ️ಪರಿಸರ ಸೂಕ್ಷ್ಮ ವಲಯ (ESZ-ಇಕೊ ಸೆನ್ಸಿಟಿವ್‌ ಝೋನ್‌ )

•► ️ಪರಿಸರ ಸೂಕ್ಷ್ಮ ವಲಯ (ESZ-ಇಕೊ ಸೆನ್ಸಿಟಿವ್‌ ಝೋನ್‌   ━━━━━━━━━━━━━━━━━━━━━━━━━
 ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)

 ಅರಣ್ಯ ಸಂರಕ್ಷಣೆಗೆ, ಅರಣ್ಯದ ಸುತ್ತ ನಡೆಯುವ ಅನಪೇಕ್ಷಿತ ಚಟುವಟಿಕೆಗಳ ತಡೆಗಾಗಿ
ಕೇಂದ್ರ ಸರಕಾರದ ಪರಿಸರ, ಅರಣ್ಯ ಇಲಾಖೆಯಿಂದ ಸೂಕ್ಷ್ಮ ವಲಯ ಘೋಷಣೆಯಾಗುತ್ತದೆ, ಅರಣ್ಯ ಪ್ರದೇಶದ 10 ಕಿ.ಮೀ. ಸುತ್ತಳತೆಯ ಪ್ರದೇಶಗಳ ಚಟುವಟಿಕೆಗಳು ಅರಣ್ಯ ಇಲಾಖೆ ನಿಯಂತ್ರಣಕ್ಕೆ ಒಳಪಡುತ್ತವೆ + ಪರಿಸರ ಸಂರಕ್ಷಣಾ ಕಾಯ್ದೆ 1986 ರ ಅಡಿಯಲ್ಲಿ ಭಾರತ ಸರ್ಕಾರದ MoEFCC ಯಿಂದ ಇಎಸ್‌ಝೆಡ್ ಗಳ ಘೋಷಣೆ + ನಿರ್ಬಂಧಗಳು —
ಘೋಷಿತ ಪ್ರದೇಶದ 10 ಕಿ.ಮೀ. ವ್ಯಾಪ್ತಿಯಲ್ಲಿ ರೆಸಾರ್ಟ್‌, ಹೊಟೇಲ್‌ ತೆರೆಯುವಂತಿಲ್ಲ. ಗಣಿಗಾರಿಕೆ, ಕೈಗಾರಿಕೆ, ಬೃಹತ್‌ ಜಲವಿದ್ಯುತ್‌ ಸ್ಥಾವರ, ಅಪಾಯಕಾರಿ ವಸ್ತುಗಳ ಉತ್ಪಾದನ ಘಟಕ, ಘನ, ದ್ರವ ತ್ಯಾಜ್ಯ ಘಟಕ, ಬೃಹತ್‌ ಪ್ರಮಾಣದ ಆಹಾರ ತಯಾರಿ ಘಟಕ, ಕೋಳಿಫಾರಂ ಘಟಕ, ಮರದ ಮಿಲ್ಲು, ಗಾಳಿಯಂತ್ರ ಸ್ಥಾಪನೆ, ಇಟ್ಟಿಗೆ ಶೋಧನೆ, ಕಟ್ಟಡ ನಿರ್ಮಾಣ ನಿಷೇಧವಾಗುತ್ತದೆ. ಕಾಡುತ್ಪತ್ತಿ ಸಂಗ್ರಹ, ವಿದ್ಯುದೀಕರಣ, ರಸ್ತೆ ಅಭಿವೃದ್ಧಿ ಇತ್ಯಾದಿ ಶರತ್ತಿನಲ್ಲಿ ಮಾಡಬಹುದಾಗಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯದ ಚಟುವಟಿಕೆ ನಡೆಸುವಂತಿಲ್ಲ. + ಇತ್ತೀಚೆಗೆ (Nov2019) ಕರ್ನಾಟಕದ ಬಿಳಿಗಿರಿರಂಗನಾಥ ದೇವಸ್ಥಾನ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ 240 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಅಧಿಸೂಚನೆ ಪ್ರಕಟ. + ಇತ್ತೀಚೆಗೆ (Feb 2020) ಕರ್ನಾಟಕದ ಬನ್ನೇರುಘಟ್ಟ ಉದ್ಯಾನದ ಸುತ್ತಲಿನ ಪರಿಸರ ಸೂಕ್ಷ್ಮ ವಲಯವನ್ನು 268.96 ಚ.ಕಿ.ಮೀ.ನಿಂದ 168.84 ಚ. ಕಿ.ಮೀಗೆ ಇಳಿಕೆ.

Friday 24 July 2020

•► ️ಇತ್ತೀಚೆಗೆ ಸುದ್ದಿಯಲ್ಲಿದ್ದ ಪ್ರಶಸ್ತಿ ಪುರಸೃತ ಪ್ರಮುಖ ಸಾಹಿತ್ಯ ಕೃತಿಗಳು : (the recently award winning Books & Literature works)

•► ️ಇತ್ತೀಚೆಗೆ ಸುದ್ದಿಯಲ್ಲಿದ್ದ ಪ್ರಶಸ್ತಿ ಪುರಸೃತ ಪ್ರಮುಖ ಸಾಹಿತ್ಯ ಕೃತಿಗಳು :
 (the recently award winning Books &  Literature works)
━━━━━━━━━━━━━━━━━━━━━━━━━━━




Thursday 23 July 2020

•► ಭಾರತದ ಅರಣ್ಯಗಳ ಸ್ಥಿತಿಗತಿ ವರದಿ’ (ಇಂಡಿಯಾ ಸ್ಟೇಟ್‌ ಆಫ್ ಫಾರೆಸ್ಟ್‌ ರಿಪೋರ್ಟ್‌) - 2019

•► ಭಾರತದ ಅರಣ್ಯಗಳ ಸ್ಥಿತಿಗತಿ ವರದಿ’ (ಇಂಡಿಯಾ ಸ್ಟೇಟ್‌ ಆಫ್ ಫಾರೆಸ್ಟ್‌ ರಿಪೋರ್ಟ್‌) - 2019━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


ದೇಶದ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸುವ ಭಾರತ ಅರಣ್ಯ ಸಮೀಕ್ಷೆಯ ಈ ವರದಿಯಲ್ಲಿ, 3,976 ಚದರ ಕಿ.ಮೀ (ಶೇಕಡಾ 0.56 ) ಅರಣ್ಯ ವ್ಯಾಪ್ತಿ, 1,212 ಚದರ ಕಿ.ಮೀ (ಶೇಕಡಾ1.29 ) ಮರದ ಹೊದಿಕೆ ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶದ ಕೆಲವು ಭಾಗಗಳಲ್ಲಿ ಅರಣ್ಯ ವೃದ್ಧಿಯಾಗಿದೆ..

ವರದಿಯ ಪ್ರಕಾರ, 2017ಕ್ಕೆ ಹೋಲಿಸಿದರೆ ಬಿದಿರು ಬೆಳೆಯುವ ಪ್ರದೇಶದಲ್ಲಿ 3,229 ಚದರ ಕಿ.ಮೀ ಹೆಚ್ಚಳವಾಗಿದೆ. ದೇಶದ ಒಟ್ಟು ಬಿದಿರು ಬೆಳೆಯುವ ಪ್ರದೇಶವು 1,60,037 ಚದರ ಕಿ.ಮೀ ಎಂದು ಅಂದಾಜಿಸಲಾಗಿದೆ.

ದೇಶದ ಒಟ್ಟು ಅರಣ್ಯ ಪ್ರದೇಶವು 7,12,249 ಚದರ ಕಿ.ಮೀ ಆಗಿದ್ದು, ಇದು ದೇಶದ ಭೌಗೋಳಿಕ ಪ್ರದೇಶದ ಶೇಕಡಾ 21.67 ರಷ್ಟಿದ್ದರೆ, ದೇಶದ ಅರಣ್ಯ ವ್ಯಾಪ್ತಿ ಶೇಕಡಾ 2.89 ರಷ್ಟಾಗಿದೆ ಅಂದರೆ, 95,027 ಚದರ ಕಿ.ಮೀ ಎಂದು ಅಂದಾಜಿಸಲಾಗಿದೆ.

ಅರಣ್ಯ ವ್ಯಾಪ್ತಿಯ ವೃದ್ಧಿಗೆ ಸಂಬಂಧಿಸಿದಂತೆ ಮೊದಲ ಐದು ಸ್ಥಾನಗಳನ್ನು ಕ್ರಮವಾಗಿ ಕರ್ನಾಟಕ (1,025 ಚದರ ಕಿ.ಮೀ), ಆಂಧ್ರಪ್ರದೇಶ (990 ಚದರ ಕಿ.ಮೀ), ಕೇರಳ (823 ಚದರ ಕಿ.ಮೀ), ಜಮ್ಮು ಮತ್ತು ಕಾಶ್ಮೀರ (371 ಚದರ ಕಿ.ಮೀ) ಮತ್ತು ಹಿಮಾಚಲ ಪ್ರದೇಶ (334 ಚದರ ಕಿ.ಮೀ) ಪಡೆದುಕೊಂಡಿದೆ ಎಂದು ವರದಿ ಹೇಳಿದೆ.
ದೇಶದ ಬೆಟ್ಟ ಗುಡ್ಡ ಜಿಲ್ಲೆಗಳಲ್ಲಿ 544 ಚದರ ಕಿ.ಮೀ ಅರಣ್ಯ ಪ್ರದೇಶ ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

• ಬುಡಕಟ್ಟು ಜಿಲ್ಲೆಗಳ ರೆಕಾರ್ಡ್ಡ್ ಫಾರೆಸ್ಟ್ ಏರಿಯಾ (ಆರ್‌ಎಫ್‌ಎ) :
━━━━━━━━━━━━━━━━━━━━
ಬುಡಕಟ್ಟು ಜಿಲ್ಲೆಗಳ ರೆಕಾರ್ಡ್ಡ್ ಫಾರೆಸ್ಟ್ ಏರಿಯಾ (ಆರ್‌ಎಫ್‌ಎ) ವ್ಯಾಪ್ತಿಯಲ್ಲಿ 741 ಚದರ ಕಿ.ಮೀ ಅರಣ್ಯ ವ್ಯಾಪ್ತಿಯು ಇಳಿಕೆ ಮತ್ತು ಹೊರಗಡೆ 1,922 ಚದರ ಕಿ.ಮೀ ಹೆಚ್ಚಳ ಕಂಡಿದೆ ಎಂದು ವರದಿ ತಿಳಿಸಿದೆ.

ಬುಡಕಟ್ಟು ಜಿಲ್ಲೆಗಳಲ್ಲಿ ಒಟ್ಟು ಅರಣ್ಯ ಪ್ರದೇಶ 4,22,351 ಚದರ ಕಿ.ಮೀ ಆಗಿದೆ, ಇದು ಈ ಜಿಲ್ಲೆಗಳ ಭೌಗೋಳಿಕ ಪ್ರದೇಶದ ಶೇಕಡಾ 37.54ರಷ್ಟು ಆಗಿದೆ.

ಅದೇ ರೀತಿ, 765 ಚದರ ಕಿ.ಮೀ (ಈಶಾನ್ಯ ಪ್ರದೇಶದಲ್ಲಿ ಶೇಕಡಾ 0.45) ವಿಸ್ತರಣೆಗೆ ಅರಣ್ಯ ವ್ಯಾಪ್ತಿಯು ಕಡಿಮೆಯಾಗಿದ್ದು, ಅದರ ಭೌಗೋಳಿಕ ಪ್ರದೇಶದ 1,70,541 ಚದರ ಕಿ.ಮೀ (ಶೇಕಡಾ 65.05) ಅರಣ್ಯ ಪ್ರದೇಶವನ್ನು ಹೊಂದಿದೆ.
"ಅಸ್ಸಾಂ ಮತ್ತು ತ್ರಿಪುರವನ್ನು ಹೊರತುಪಡಿಸಿ, ಈ ಪ್ರದೇಶದ ಎಲ್ಲಾ ರಾಜ್ಯಗಳು ಅರಣ್ಯ ವ್ಯಾಪ್ತಿಯಲ್ಲಿ ಇಳಿಕೆ ತೋರಿಸುತ್ತವೆ" ಎಂದು ವರದಿ ತಿಳಿಸಿದೆ.

ಹಿಂದಿನ ಮೌಲ್ಯಮಾಪನಕ್ಕೆ ಹೋಲಿಸಿದರೆ ದೇಶದಲ್ಲಿ ಉಷ್ಣ ವಲಯ (ಮ್ಯಾಂಗ್ರೋವ್) ವ್ಯಾಪ್ತಿಯು 54 ಚದರ ಕಿ.ಮೀ (ಶೇಕಡಾ 1.10) ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

•► ️PART XII — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes)

•► ️PART XII — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes)
━━━━━━━━━━━━━━━━━━━━━━━━━━━━━━━━━━━━━━━
…ಮುಂದುವರೆದ ಭಾಗ.





Tuesday 21 July 2020

•► ️PART XI — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes)

  •► ️PART XI — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes)
━━━━━━━━━━━━━━━━━━━━━━━━━━━━━━━━━━━━━━━

…ಮುಂದುವರೆದ ಭಾಗ.



Sunday 19 July 2020

•► ️​ಜಾಗತಿಕ ಶಾಂತಿ ಸೂಚ್ಯಂಕ 2019 : (Global Peace Index 2019)

•► ️​ಜಾಗತಿಕ ಶಾಂತಿ ಸೂಚ್ಯಂಕ 2019 :
(Global Peace Index 2019)

━━━━━━━━━━━━━━━━━━━━━
★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


ಆರ್ಥಿಕ ಮತ್ತು ಶಾಂತಿಗಾಗಿ ಇರುವ ಆಸ್ಟ್ರೇಲಿಯನ್‌ ಚಿಂತಕರ ಚಾವಡಿ ಸಂಸ್ಥೆ (‘ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ಸ್ ಆ್ಯಂಡ್ ಪೀಸ್’) ಜಾಗತಿಕ ಶಾಂತಿ ಸೂಚ್ಯಂಕವನ್ನು ಸಿದ್ಧಪಡಿಸಿದೆ. ಆಸ್ಟ್ರೇಲಿಯಾದ ತಂತ್ರಜ್ಞ ಸ್ಟೀವ್‌ ಕಿಲ್ಲೆಲಿಯಾ ಈ ಸಂಸ್ಥೆಯನ್ನು ಸ್ಥಾಪಿಸಿದರು.


• ಸಮೀಕ್ಷೆಯ ಮಾನದಂಡಗಳು :
━━━━━━━━━━━━━
ಸಾಮಾಜಿಕ ಸುರಕ್ಷೆ ಮತ್ತು ಭದ್ರತೆ, ಮಿಲಿಟರೀಕರಣದ ಮಟ್ಟ ಹಾಗೂ ದೇಶೀಯ ಮತ್ತು ಅಂತರಾಷ್ಟ್ರೀಯ ಸಂಘರ್ಷದ ಸ್ಥಿತಿ- ಈ ಮೂರನ್ನು ಮಾನದಂಡವಾಗಿರಿಸಿಕೊಂಡು ಸಮೀಕ್ಷೆ ನಡೆಸಲಾಗಿದೆ.

ಈ ಬಾರಿಯ ವರದಿಯು ಶಾಂತಿ ಪರಿಸ್ಥಿತಿ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಅಂಶಗಳನ್ನು ಸಹ ಪ್ರಮುಖವಾಗಿ ಪರಿಗಣಿಸಲಾಗಿತ್ತು. 2008ರಿಂದ ಜಾಗತಿಕ ಶಾಂತಿ ಶೇಕಡ 3.8ರಷ್ಟು ಹದಗೆಟ್ಟಿರುವುದರಿಂದ ಈ ಅಂಶವನ್ನು ಸಹ ಗಮನಿಸಲಾಯಿತು ಎಂದು ವರದಿ ತಿಳಿಸಿದೆ.

ಜಗತ್ತಿನ ಶೇಕಡ 99.7ರಷ್ಟು ಜನಸಂಖ್ಯೆಯನ್ನು ಪರಿಗಣಿಸಿ ಈ ವರದಿ ಸಿದ್ಧಪಡಿಸಲಾಗಿದೆ. 86 ರಾಷ್ಟ್ರಗಳಲ್ಲಿ ಶಾಂತಿಯ ವಾತಾವರಣ ಸುಧಾರಿಸಿದ್ದರೆ, 76 ರಾಷ್ಟ್ರಗಳಲ್ಲಿ ಹದಗೆಟ್ಟಿದೆ ಎಂದು ವರದಿ ತಿಳಿಸಿದೆ.


• ಅಂಕಗಳನ್ನು ನೀಡುವಿಕೆ :
━━━━━━━━━━━
ಪಟ್ಟಿಯಲ್ಲಿರುವ ಪ್ರತೀ ರಾಷ್ಟ್ರಗಳ ಆಂತರಿಕ ಮತ್ತು ಬಾಹ್ಯ ಸಂಘರ್ಷ, ಮಿಲಿಟರಿ ಸಾಮರ್ಥ್ಯ, ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಆಯಾ ರಾಷ್ಟ್ರಗಳಿಗೆ 1 ರಿಂದ ಐದು ಅಂಕ ನೀಡಲಾಗುತ್ತದೆ. ಈ ಪೈಕಿ 1 ಅತ್ಯುತ್ತಮ ಎಂದೂ 5 ಅತ್ಯಂತ ಕಳಪೆ ಎಂದು ಪರಿಗಣಿಸಲಾಗುತ್ತದೆ.

ಇನ್ನು ಈ ಬಾರಿ ಐಸ್ ಲೆಂಡ್ ದೇಶ ಅಗ್ರ ಸ್ಥಾನದಲ್ಲಿದ್ದು, 1.72 ಅಂಕಗಳನ್ನು ಹೊಂದಿದೆ. ಅಂತೆಯೇ ನ್ಯೂಜಿಲೆಂಡ್ 2ನೇ ಸ್ಥಾನದಲ್ಲಿದ್ದು, 1.221 ಅಂಕಗಳನ್ನು ಹೊಂದಿದೆ. 1.27 ಅಂಕಗಳೊಂದಿಗೆ ಪೋರ್ಚುಗಲ್ 3ನೇ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ ಭಾರತ 2.605 ಅಂಕಗಳೊಂದಿಗೆ 141ನೇ ಸ್ಥಾನದಲ್ಲಿದೆ. 3.095 ಅಂಕಗಳೊಂದಿಗೆ ರಷ್ಯಾ 154ನೇ ಸ್ಥಾನದಲ್ಲಿದೆ. ಇನ್ನು 3.574 ಅಂಕಗಳೊಂದಿಗೆ ಆಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ.

ಪ್ರಸಕ್ತ ವರ್ಷದ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತದ ಸ್ಥಾನ ಮತ್ತಷ್ಟು ಕುಸಿದಿದೆ. 163 ದೇಶಗಳಲ್ಲಿ ಭಾರತ 141ನೇ ಸ್ಥಾನ ಪಡೆದಿದೆ. ಕಳೆದ ವರ್ಷ 136ನೇ ಸ್ಥಾನವನ್ನು ಭಾರತ ಪಡೆದಿತ್ತು.

ಜಗತ್ತಿನಲ್ಲೇ ಅತ್ಯಂತ ಶಾಂತಿಯುತ ರಾಷ್ಟ್ರ ಎನ್ನುವ ಅಗ್ರಸ್ಥಾನವನ್ನು ಐಸ್‌ಲ್ಯಾಂಡ್‌ ಮತ್ತೊಮ್ಮೆ ಉಳಿಸಿಕೊಂಡಿದೆ. 2008ರಿಂದಲೂ ಐಸ್‌ಲ್ಯಾಂಡ್‌ ಮೊದಲ ಸ್ಥಾನದಲ್ಲಿದೆ. ನ್ಯೂಜಿಲೆಂಡ್‌, ಆಸ್ಟ್ರಿಯಾ, ಪೋರ್ಚುಗಲ್‌ ಮತ್ತು ಡೆನ್ಮಾರ್ಕ್‌ ನಂತರದ ಸ್ಥಾನದಲ್ಲಿವೆ.

ಅಫ್ಗಾನಿಸ್ತಾನ ಶಾಂತಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನ ಪಡೆದಿದೆ. ಈ ಮೊದಲು ಹಿಂಸಾಚಾರದಿಂದ ತತ್ತರಿಸಿದ್ದ ಸಿರಿಯಾ ಕೊನೆಯ ಸ್ಥಾನದಲ್ಲಿತ್ತು. ನೆರೆಯ ರಾಷ್ಟ್ರ ಪಾಕಿಸ್ತಾನ 153ನೇ ಸ್ಥಾನದಲ್ಲಿದೆ.

ಭಾರತ, ಫಿಲಿಪ್ಪಿನ್ಸ್‌, ಜಪಾನ್‌, ಬಾಂಗ್ಲಾದೇಶ, ಮ್ಯಾನ್ಮಾರ್‌, ಚೀನಾ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನ ಅತಿ ಹೆಚ್ಚಿನ ಅಪಾಯಕಾರಿ ವಾತಾವರಣ ಎದುರಿಸುತ್ತಿವೆ ಎಂದು ಶಾಂತಿ ಸೂಚ್ಯಂಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಚೀನಾ, ಬಾಂಗ್ಲಾದೇಶ ಮತ್ತು ಭಾರತದ 39.3 ಕೋಟಿ ಜನ ಅಪಾಯಕಾರಿ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದೆ.

• ವರದಿಯ ವಿಸ್ತೃತ ನೋಟ :
━━━━━━━━━━━━━

ಈ ಮೊದಲು ಹಿಂಸಾಚಾರದಿಂದ ತತ್ತರಿಸಿದ್ದ ಸಿರಿಯಾ ಕೊನೆಯ ಸ್ಥಾನದಲ್ಲಿತ್ತು. ಇದುವರೆಗೆ ಈ ಸ್ಥಾನದಲ್ಲಿದ್ದ ಸಿರಿಯಾ ಒಂದು ಸ್ಥಾನ ಮೇಲೇರಿದೆ. ದಕ್ಷಿಣ ಸುಡಾನ್, ಯೆಮನ್ ಮತ್ತು ಇರಾಕ್ ಕ್ರಮವಾಗಿ 161, 160 ಮತ್ತು 159ನೇ ಸ್ಥಾನದಲ್ಲಿದೆ.  2008ರಿಂದಲೂ ಐಸ್‌ಲ್ಯಾಂಡ್ ಅಗ್ರಸ್ಥಾನದಲ್ಲೇ ಸ್ಥಿರವಾಗಿದೆ.

ದಕ್ಷಿಣ ಏಶ್ಯಾ ರಾಷ್ಟ್ರಗಳಲ್ಲಿ ಭೂತಾನ್ 15ನೇ ಸ್ಥಾನ, ಶ್ರೀಲಂಕಾ 72, ನೇಪಾಳ 76 ಮತ್ತು ಬಾಂಗ್ಲಾದೇಶ 101ನೇ ಸ್ಥಾನದಲ್ಲಿದೆ. ಪಾಕಿಸ್ತಾನ 153ನೇ ಸ್ಥಾನದಲ್ಲಿದೆ. ಬಹು ವಿಧದ ತೀವ್ರ ಹವಾಮಾನ ಅಪಾಯ ಎದುರಿಸುತ್ತಿರುವ 9 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಫಿಲಿಪೀನ್ಸ್, ಜಪಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ, ಇಂಡೋನೇಶಿಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನ ಸ್ಥಾನ ಪಡೆದಿವೆ.

•► ️​ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (R.C.E.P) : (ಪತ್ರಿಕೆ 2 ಸಾಮಾನ್ಯ ಅಧ್ಯಯನ 1) (Regional Comprehensive Economic Partnership)

•► ️​ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (R.C.E.P) : (ಪತ್ರಿಕೆ 2 ಸಾಮಾನ್ಯ ಅಧ್ಯಯನ 1)
(Regional Comprehensive Economic Partnership)

 ━━━━━━━━━━━━━━━━━━━━━

★ ಭಾರತ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು
(India and International Relations)

★ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು
(International Current Affairs)


ಆಸಿಯಾನ್ ಸದಸ್ಯ ರಾಷ್ಟ್ರಗಳ ನಡುವೆ ಮತ್ತು ಅದರ ಆರು ಪಾಲುದಾರ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಚೀನಾ, ಜಪಾನ್, ನ್ಯೂಜಿಲೆಂಡ್ ಮತ್ತು ಕೊರಿಯಾ ಗಣರಾಜ್ಯಗಳ ಮಧ್ಯೆ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾವಿತ ಒಪ್ಪಂದವಾಗಿದೆ.

•  ಈ ಒಪ್ಪಂದಕ್ಕೆ ಸಂಬಂಧಪಟ್ಟ ದೇಶಗಳು - 16. 
- 10 ಆಸಿಯಾನ್ ರಾಷ್ಟ್ರಗಳು, (Association of South East Asian Nations -ASEAN. ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ). ಅವುಗಳೆಂದರೆ, ಬ್ರುನೆ, ಬರ್ವ (ಮ್ಯಾನ್ಮಾರ್), ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪೂರ, ಥಾಯ್ಲ್ಯಾಂಡ್ ಮತ್ತು ವಿಯಟ್ನಾಂ ಹಾಗೂ ಆಸಿಯಾನ್​ನೊಂದಿಗೆ ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ 6 ದೇಶಗಳು. ಅವು- ಭಾರತ, ಚೀನಾ, ಆಸ್ಟ್ರೇಲಿಯಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ನ್ಯೂಜಿಲ್ಯಾಂಡ್.

• ಈ 16 ದೇಶಗಳ ಒಟ್ಟು ಜನಸಂಖ್ಯೆ 300 ಕೋಟಿ. ಅವುಗಳ ಒಟ್ಟು ಜಿಡಿಪಿ ಸುಮಾರು 17 ಲಕ್ಷ ಕೋಟಿ ಡಾಲರ್. ಅವುಗಳು ಜಾಗತಿಕ ವ್ಯಾಪಾರದ ಶೇ. 40 ಪಾಲು ಹೊಂದಿವೆ. ಆರ್​ಸಿಇಪಿ ಒಪ್ಪಂದ ಏರ್ಪಟ್ಟಲ್ಲಿ, ಅದು ಜಗತ್ತಿನ ಅತಿ ದೊಡ್ಡ ಮುಕ್ತ ವ್ಯಾಪಾರ ವಲಯವಾಗುತ್ತದೆ ಎನ್ನಲಾಗುತ್ತಿದೆ.

• ಆರ್​ಸಿಇಪಿ ಒಪ್ಪಂದದ ಮುಖ್ಯ ಚಾಲನಾ ಶಕ್ತಿ ಆಸಿಯಾನ್. ಹಾಗಾಗಿ ಅದು ಆಸಿಯಾನ್ ಕೇಂದ್ರಿತ ಎನ್ನಲಾಗುತ್ತದೆ. ಈ ಸಂಬಂಧದ ಮಾತುಕತೆ 2012ರ ನವೆಂಬರ್​ನಲ್ಲಿ ಕಾಂಬೋಡಿಯಾದಲ್ಲಿ ಪ್ರಾರಂಭವಾಯಿತು. ಈ ಒಪ್ಪಂದವು ಸರಕುಗಳ ವ್ಯಾಪಾರ, ಸೇವೆಗಳ ವ್ಯಾಪಾರ, ಹೂಡಿಕೆಗಳು, ಆರ್ಥಿಕ ಹಾಗೂ ತಾಂತ್ರಿಕ ಸಹಕಾರ, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ವ್ಯಾಜ್ಯ ಪರಿಹಾರ ವ್ಯವಸ್ಥೆ - ಎಲ್ಲವನ್ನೂ ಒಳಗೊಂಡ ಅತ್ಯಂತ ಆಧುನಿಕ ಹಾಗೂ ಸಮಗ್ರ ಮುಕ್ತ ವ್ಯಾಪಾರ ಒಪ್ಪಂದವಾಗಬೇಕು ಎಂಬುದು ಸದಸ್ಯ ರಾಷ್ಟ್ರಗಳ ಆಶಯ. ಸರಕುಗಳ ಮೇಲಿನ ಸುಂಕದ ಮಟ್ಟ ಅತ್ಯಂತ ಕಡಿಮೆ ಇದ್ದು ಸದಸ್ಯ ರಾಷ್ಟ್ರಗಳ ನಡುವೆ ಸರಕುಗಳ ಮುಕ್ತ ಚಲನೆ ಸಾಧ್ಯವಾಗಬೇಕೆಂಬುದೂ ಆಶಯವಾಗಿದೆ. ಈ ದಿಕ್ಕಿನಲ್ಲಿ ಮಾತುಕತೆಗಳು ನಡೆಯಬೇಕೆಂಬುದು ಒಂದು ನಿರ್ದೇಶಕ ತತ್ವವಾಗಿದೆ. ಮಾತುಕತೆಗಳು ಯಶಸ್ವಿಯಾಗಿ ಮುಕ್ತಾಯವಾದ ನಂತರ ಮೂಲ 16 ರಾಷ್ಟ್ರಗಳಲ್ಲದೆ, ಇತರ ರಾಷ್ಟ್ರಗಳೂ ಇಚ್ಛೆಪಟ್ಟಲ್ಲಿ ಸದಸ್ಯತ್ವ ಪಡೆಯಲು ಮುಕ್ತ ಅವಕಾಶವಿರುತ್ತದೆ ಎಂದು ಹೇಳಲಾಗಿದೆ.

— ಇತ್ತೀಚೆಗೆ (Nov 2019) ಬ್ಯಾಂಕಾಕ್ ನಲ್ಲಿ ಆರ್ ಸಿಇಪಿ ಶೃಂಗಸಭೆ ನಡೆಯಿತು.

Saturday 18 July 2020

☀ "ಭಾಗ 2 - ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ-2020 (ಪ್ರಚಲಿತ ಘಟನೆಗಳಾಧಾರಿತ)" ( Multiple choice question paper - 2020 based on daily current events )

☀ "ಭಾಗ 2 - ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ-2020 (ಪ್ರಚಲಿತ ಘಟನೆಗಳಾಧಾರಿತ)"  
( Multiple choice question paper - 2020 based on daily current events )
━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ
(Multiple choice question paper on current affairs)


…ಮುಂದುವರೆದ ಭಾಗ.

•• ಸೂಚನೆಗಳು :-
★ ಇಲ್ಲಿ ತಯಾರಿಸಲಾದ ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 2ಯು 2019-20 ರ  ಪ್ರಚಲಿತ ಹಾಗೂ ಮಹತ್ವದ ಘಟನೆಗಳನ್ನಾಧರಿಸಿ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ. 
★ ಸ್ಪರ್ಧಾಲೋಕ ಟೆಲೆಗ್ರಾಮ್ ಚಾನೆಲ್‌ (@spardhaloka) ನಲ್ಲಿ ದಿನಂಪ್ರತಿ ಕೇಳಲಾಗುವ ಕ್ವಿಝ್ ಎಲ್ಲವನ್ನೂ  ಇಲ್ಲಿ ಒಂದೆಡೆ ಕ್ರೋಢೀಕರಿಸಿರುವುದು.
★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಗಳನ್ನು ಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ ಭಾಗ 2ನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.
Gmail. yaseen7ash@Gmail.com


— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.



•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•



101. ಇತ್ತೀಚೆಗೆ ಸುದ್ದಿಯಲ್ಲಿದ್ದ "ಬಿಗ್ ಮ್ಯಾಕ್ ಇಂಡೆಕ್ಸ್‌" (Big Mac Index) ಇದನ್ನು ಸೂಚಿಸುತ್ತದೆ.
A) : ಉತ್ಪಾದನೆ ವೆಚ್ಚಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಹೊಸ ಸೂಚಿ
B) ಅಸಾಮಾನ್ಯ ರೀತಿಯಲ್ಲಿ, ಜಗತ್ತಿನ ಕರೆನ್ಸಿಗಳ " ಕೊಂಡುಕೊಳ್ಳುವ ಶಕ್ತಿಯ ಮೌಲ್ಯ".√
C) ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡುವ ವಿನೂತನ ಯೋಜನೆ.
D) ದೇಶವೊಂದರ ರಫ್ತುವಿನ ಪೈಪೋಟಿ.


102.ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AePS) ಕುರಿತ ಕೆಳಕಂಡ ಸರಿಯಾದ ಹೇಳಿಕೆಯನ್ನು ಗುರುತಿಸಿ.
1. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ.
2. ಇದು ಬ್ಯಾಂಕ್‌ ಅಕೌಂಟ್ ಸಂಖ್ಯೆ ಒದಗಿಸದೇ  ಹಣಕಾಸಿನ ವಹಿವಾಟಿಗೆ ಅನುಕೂಲ ಮಾಡಿಕೊಡುತ್ತದೆ.
A) 1 ಮಾತ್ರ.
B) 2 ಮಾತ್ರ.
C) 1 & 2 ಮಾತ್ರ. √
D) ಯಾವುದೂ ಸರಿಯಿಲ್ಲ.


103.ಇತ್ತೀಚೆಗೆ ಸುದ್ದಿಯಲ್ಲಿದ್ದ 'ದರ್ಬಾರ್ ಮೂವ್' ಎಂಬುವುದು ಇದಕ್ಕೆ ಸಂಬಂಧಿಸಿದೆ,
A) ರಾಜರ ಸ್ವಂತ ವೆಚ್ಚಕ್ಕೆ ಸರಕಾರದ ಬೊಕ್ಕಸದಿಂದ ಕೊಡುವ ಹಣವನ್ನು ಸ್ಥಗಿತಗೊಳಿಸುವುದು.
B) ಜಮ್ಮು ಮತ್ತು ಶ್ರೀನಗರದ ಮಧ್ಯೆ ರಾಜಧಾನಿ ಸ್ಥಳಾಂತರ ಕಾರ್ಯಕ್ರಮ.√
C) ಪಾರ್ಲಿಮೆಂಟಿನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಪ್ರಧಾನಮಂತ್ರಿ ಕಚೇರಿಗೆ ವರ್ಗಾಯಿಸುವುದು.
D) ಚೆಸ್ ಆಟದಲ್ಲಿ ಚೆಕ್‌ಮೇಟ್‌ನೊಂದಿಗೆ 5 ಚಲನೆಗಳಲ್ಲಿ ಚಲಿಸುವುದು .


104. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವರಿಂದ ಬಿಡುಗಡೆ ಮಾಡಲಾದ “ಟ್ಯಾಕ್ಸಾಲಾಗ್”ಎಂಬುವುದು ಒಂದು…
A. ಮೊಬೈಲ್ ಆ್ಯಪ್.
B. ಸಾಪ್ಟವೇರ್.
C.ಇ-ಜರ್ನಲ್.√‌
D. ಮಾರ್ಕೆಟ್ ಟೂಲ್.


105. ಇತ್ತೀಚೆಗೆ ಸುದ್ದಿಯಲ್ಲಿದ್ದ ಸಿ-ಟ್ಯಾಪ್ (C-TAP) (COVID-19 Technology Access Pool) ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದವರು...
A) ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) .
B) ವಿಶ್ವ ಆರೋಗ್ಯ ಸಂಸ್ಥೆ (WHO).√
C) ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (CDC).
D) ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ.


106. ಈ ಕೆಳಗಿನ ವಿವಧ ಬಗೆಯ ಪಾವತಿಗಳ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
1- ವೇತನಗಳು
2- ಬ್ಯಾಂಕುಗಳ ಬಡ್ಡಿ ಪಾವತಿ
3- ಕಮಿಷನ್ ಪೇಮೆಂಟ್
4- ಬಾಡಿಗೆ ಪಾವತಿ
5- ಸಮಾಲೋಚನೆ ಶುಲ್ಕಗಳು (Consultation fees)
A) 1 & 2 ಮಾತ್ರ.
B) 1, 2 & 5 ಮಾತ್ರ.
C) 1, 2, 3 & 4 ಮಾತ್ರ.
D) 1, 2, 3, 4 & 5 ಮಾತ್ರ.√


107. ಅನಿವಾಸಿ ಭಾರತೀಯ ಎಂದು ಕರೆಸಿಕೊಳ್ಳಬೇಕಾದರೆ ಭಾರತೀಯರು ಒಂದು ವರ್ಷದಲ್ಲಿ...
1. 182 ಮತ್ತು ಅದಕ್ಕಿಂತ ಹೆಚ್ಚು ದಿನ ವಿದೇಶದಲ್ಲಿ ಇರಬೇಕು.
2. 120 ದಿನ ಮತ್ತು ಅದಕ್ಕಿಂತ ಹೆಚ್ಚು ಅವಧಿಗೆ ಭಾರತದಲ್ಲಿ ಇದ್ದಲ್ಲಿ ಅನಿವಾಸಿ ಎಂದು ಗುರುತಿಸಿಕೊಳ್ಳಲು ಸಾಧ್ಯವಿಲ್ಲ.
A) 1 ಮಾತ್ರ.
B) 2 ಮಾತ್ರ.√
C) 1 & 2 ಮಾತ್ರ.
D) ಯಾವುದೂ ಸರಿಯಿಲ್ಲ.

(240 ಮತ್ತು ಅದಕ್ಕಿಂತ ಹೆಚ್ಚು ದಿನ ವಿದೇಶದಲ್ಲಿ ಇರಬೇಕು. ಈ ಹಿಂದೆ 182 ದಿನಗಳು ಇದ್ದಲ್ಲಿ ಅನಿವಾಸಿ ಎನ್ನಲಾಗುತ್ತಿತ್ತು.)


108.ಜೀವಕೋಶದ ಕಣದಂಗಗಳಲ್ಲೊಂದಾದ ಪ್ಲಾಸ್ಟಿಡ್‍ಗಳ ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ಪ್ಲಾಸ್ಟಿಡ್‍ಗಳು (Plastids) ಸಸ್ಯಜೀವಕೋಶದಲ್ಲಿ ಮಾತ್ರ ಕಂಡುಬರುತ್ತವೆ
2.ಮೈಟೋಕಾಂಡ್ರಿಯಾದಂತೇ ಪ್ಲಾಸ್ಟಿಡ್‍ಗಳೂ ಕೂಡಾ ತಮ್ಮದೇ ಆದ DNA ಮತ್ತು ರೈಬೋಸೋಮ್‍ಗಳನ್ನು ಹೊಂದಿವೆ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


109.ಇತ್ತೀಚೆಗೆ ಸುದ್ದಿಯಲ್ಲಿದ್ದ 'ಪೈಕಾ ದಂಗೆ' ಇವರ ವಿರುದ್ಧ ನಡೆಸಿದ ಹೋರಾಟವಾಗಿತ್ತು.
A) ಫ್ರೆಂಚರು.
B) ಪೋರ್ಚುಗೀಸರು.
C) ಬ್ರಿಟಿಷರು √
D) ಮಂಗೋಲರು.


110. 'ಒಂದು ರಾಷ್ಟ್ರ, ಎರಡು ವ್ಯವಸ್ಥೆ' ಎಂಬ ಪಾಲಿಸಿ ಇತ್ತೀಚೆಗೆ ಸುದ್ದಿಯಲ್ಲಿದ್ದು, ಈ ದೇಶಕ್ಕೆ ಸಂಬಂಧಿಸಿದೆ.
A) ಜಪಾನ್.
B) ಇಸ್ರೇಲ್.
C) ಚೀನಾ.√
D) ರಷ್ಯಾ.


111. ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಸ್ಥಾಪಿಸಲು ಉದ್ದೇಶಿಸಲಾದ 'KABIL' ಎಂಬ ಜಂಟಿ ಸಹಭಾಗಿತ್ವದ (joint venture) ಕಂಪನಿಯ ಉದ್ದೇಶವೇನೆಂದರೆ,
A) MSME ಗಳ ಬಲ ಸಂವರ್ಧನೆ.
B) ಯುವಜನತೆಯಲ್ಲಿ ಕೌಶಲ್ಯಾಭಿವೃದ್ಧಿ.
C) ಖನಿಜಗಳ ಸ್ಥಿರ ಪೂರೈಕೆ & ಸುರಕ್ಷತೆ.√
D) ಮಹಿಳಾ ಸಬಲೀಕರಣ.

112.ಹಂಗಾಮಿ ಸ್ಪೀಕರ್ ಕಾರ್ಯ-ಅಧಿಕಾರಗಳ ಕುರಿತ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ಹಂಗಾಮಿ ಸ್ಪೀಕರ್ ಅವರು ಲೋಕಸಭೆ/ವಿಧಾನಸಭೆಯ ಸ್ಪೀಕರ್ ಆಯ್ಕೆ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ವಹಿಸುತ್ತಾರೆ.
2.ಯಾರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಸೂಚಿಸಲು ಸಾಧ್ಯವಿಲ್ಲ. ಅದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.

113.ಏಷ್ಯಾದಲ್ಲಿಯೇ ಅತ್ಯುತ್ತಮ ಬೀಚ್‌ ಎಂದು ಹೆಸರಾಗಿರುವ ಹ್ಯಾವ್ಲಾಕ್‌ ದ್ವೀಪ ಬೀಚ್ ಇರುವುದು
A) ಮಡಗಾಸ್ಕರ್.
B) ಮ್ಯಾನ್ಮಾರ್.
C) ಅಂಡಮಾನ್ ನಿಕೋಬಾರ್.√
D) ಮಾಲ್ಡವೀಸ್.

114. 'ತಿವಾ-ಲಲುಂಗ್ ಬುಡಕಟ್ಟು ಜನಾಂಗ' ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A) ಪ.ಬಂಗಾಳ.
B) ಜಾರ್ಖಂಡ್.
C) ಆಸ್ಸಾಂ.√
D) ಸಿಕ್ಕಿಂ.


115. ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಸಂಬಂಧಿಸಿದಂತೆ, ಪದ 'ಪಂಚಾಯತನ್' (Panchayatan ) ಎಂಬುದು ಏನನ್ನು ಸೂಚಿಸುತ್ತದೆ?
A. ಗ್ರಾಮದ ಹಿರಿಯರ ಸಭೆಯನ್ನು
B. ಒಂದು ಧಾರ್ಮಿಕ ಪಂಥವನ್ನು
C. ದೇವಾಲಯದ ನಿರ್ಮಾಣ ಶೈಲಿಯನ್ನು √
D. ಆಡಳಿತಾತ್ಮಕ ಕಾರ್ಯನಿರ್ವಾಹಕತೆಯನ್ನು


116.ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಗುರುತಿಸಿ.
1. ತಾಬೊ ಆಶ್ರಮ / ದೇವಾಲಯ ಸಂಕೀರ್ಣ —— ಸ್ಪಿತಿ ಕಣಿವೆ
2. ಲೊತ್ಸಾಬಾ ಲಾ-ಖಾಂಗ್ ದೇವಸ್ಥಾನ —— ಜಂಸ್ಕಾರ್ ಕಣಿವೆ
3. ಅಲ್ಚಿ ಗೊಂಪಾ ದೇವಾಲಯ —— ಲಡಾಖ್ ಕಣಿವೆ.
A. 1 ಮಾತ್ರ
B. 2 ಮತ್ತು 3
C. 1 ಮತ್ತು 3√
D. 1, 2 ಮತ್ತು 3

(ದಂಕರ್‌ ಆಶ್ರಮ ದೇವಸ್ಥಾನ ಸಂಕೀರ್ಣ — ಸ್ಪಿತಿ ವ್ಯಾಲಿ)
ಲೊತ್ಸಾಬಾ ಲಾ-ಖಾಂಗ್ ದೇವಸ್ಥಾನ - ಲಡಾಖ್ ವ್ಯಾಲಿ)!


117.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1. ದಂಪಾ (Dampa) ಹುಲಿ ಮೀಸಲು ಧಾಮ--ಮಿಜೋರಾಂ
2. ಗುಮ್ತಿ (Gumti) ವನ್ಯಜೀವಿ ಅಭಯಾರಣ್ಯ:---- ಸಿಕ್ಕಿಂ
3. ಸರಮತಿ (Saramati ) ಶಿಖರ ----ನಾಗಾಲ್ಯಾಂಡ್
ಮೇಲಿನ ಯಾವ ಜೋಡಿ ಸರಿಯಾಗಿವೆ ?
A. 1 ಮಾತ್ರ
B. 2 ಮತ್ತು 3
C. 1 ಮತ್ತು 3√
D. 1 , 2 ಮತ್ತು 3


118.1905 ರಲ್ಲಿ ಲಾರ್ಡ್ ಕರ್ಜನ್ ಮಾಡಿದ ಬಂಗಾಳದ ವಿಭಜನೆ ಕೊನೆಗೊಂಡಿದ್ದು,
A. ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ಬ್ರಿಟೀಷರಿಗೆ ಭಾರತೀಯ ಪಡೆಗಳ ಅವಶ್ಯಕವಿದೆ
ಎಂದಾಗ ಕೊನೆಗೊಂಡಿತು
B. ಕಿಂಗ್ ಜಾರ್ಜ್ V ದೆಹಲಿಯ ರಾಯಲ್ ದರ್ಬಾರ್‌ನಲ್ಲಿ ಕರ್ಜನ್ ನ ಆಕ್ಟ್ ವಜಾ ಮಾಡುವವರೆಗೆ √
C. ಗಾಂಧೀಜಿ ಅವರ ನಾಗರಿಕ ಅಸಹಕಾರ ಚಳುವಳಿಯನ್ನು ಆರಂಭಿಸುವ ವರೆಗೆ
D. ಭಾರತದ ವಿಭಜನೆಯಾಗಿ ಬೆಂಗಾಲ್ ಪೂರ್ವ ಪಾಕಿಸ್ತಾನ ಎಂದು ಕರೆಸಿಕೊಳ್ಳುವವರೆಗೆ


119.ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಗೆ ಅಗತ್ಯವಾದ ಸೂರ್ಯನ ಶಕ್ತಿಯನ್ನು ಸೆರೆಹಿಡಿಯಲು ಕ್ಲೋರೊಫಿಲ್‌ಗೆ  ಈ ಕೆಳಗಿನ ಯಾವ ಅಂಶಗಳು ಅತ್ಯವಶ್ಯಕ?
ಎ. ಕಾರ್ಬನ್
ಬಿ. ಮೆಗ್ನೀಸಿಯಮ್ √
ಸಿ. ಸಾರಜನಕ
ಡಿ. ಜಲಜನಕ


120. 'ಖುದೈ ಖಿದ್ಮತ್‌ಗಾರ್ ಚಳವಳಿ' (Khudai  Khidmatgar  Movement) ಯ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಆರಂಭದಲ್ಲಿ ಸಾಮಾಜಿಕ ಸುಧಾರಣಾ ಸಂಘಟನೆಯಾಗಿದ್ದು, ಅದು 'ಕೆಂಪಂಗಿ ಚಳವಳಿ'ಯಾಗಿ ರೂಪಾಂತರಗೊಳ್ಳುವ ಮೊದಲು ಶಿಕ್ಷಣ ಸುಧಾರಣೆ  ಮತ್ತು ದ್ವೇಷ ರಕ್ತದಾಹವನ್ನು ಕೊನೆಗೊಳಿಸುವಲ್ಲಿ ನಿರತವಾಗಿತ್ತು.
2.ಈ ಚಳುವಳಿಯು ಭಾರತದ ವಿಭಜನೆಯನ್ನು ಬೆಂಬಲಿಸಿತು ಮತ್ತು ಸ್ವತಂತ್ರ ಪಾಕಿಸ್ತಾನ ರಾಷ್ಟ್ರ  ರಚನೆಯ ಪರವಾಗಿತ್ತು.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ. 1 ಮಾತ್ರ √
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಇವೆರಡೂ ಸರಿಯಾಗಿಲ್ಲ.
(ಈ ಚಳುವಳಿಯು ಸ್ವತಂತ್ರ ರಾಷ್ಟ್ರವಾದ ಪಾಕಿಸ್ತಾನದ ರಚನೆಯ ವಿರುದ್ಧವಾಗಿತ್ತು ಕಾರಣ 1947 ರಲ್ಲಿ ಭಾರತದ ವಿಭಜನೆಯನ್ನು ವಿರೋಧಿಸಿದರು.)

•► ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ: 2019 (World democracy Index: 2019)

•► ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ: 2019
(World democracy Index: 2019)

━━━━━━━━━━━━━━━━━━━━
★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Latest useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


ಯುಕೆ ಮೂಲದ ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ 2006ರಿಂದ ಪ್ರತಿ ವರ್ಷ ಈ ಸೂಚ್ಯಂಕ ಬಿಡುಗಡೆ ಮಾಡುತ್ತಿದೆ. ಎಲ್ಲಾ ದೇಶಗಳಲ್ಲಿನ ಪ್ರಜಾಸತ್ತಾತ್ಮಕ ವಾತಾವರಣದ ಬಗ್ಗೆ ಸಮೀಕ್ಷೆ ನಡೆಸಿ, ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ.

2019 ರ ಸೂಚ್ಯಂಕದಲ್ಲಿ ಪ್ರಜಾಪ್ರಭುತ್ವದ ಸರಾಸರಿ ಜಾಗತಿಕ ಅಂಕಗಳು 2018 ರಲ್ಲಿದ್ದ 5.48 ರಿಂದ 5.44 ಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ.

ಪ್ರಜಾಪ್ರಭುತ್ವ ಸೂಚ್ಯಂಕ ಪಟ್ಟಿಯಲ್ಲಿ ನಾರ್ವೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಐಸ್‌ಲ್ಯಾಂಡ್‌ ಹಾಗೂ ಸ್ವೀಡನ್‌ ಈ ಪಟ್ಟಿಯಲ್ಲಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿವೆ. ನ್ಯೂಜಿಲೆಂಡ್‌ 4ನೇ ಸ್ಥಾನದಲ್ಲಿದ್ದು, ಕ್ರಮವಾಗಿ ಫಿನ್‌ಲ್ಯಾಂಡ್‌ (5), ಐರ್ಲೆಂಡ್‌ (6), ಡೆನ್ಮಾರ್ಕ್‌(7) , ಕೆನಡಾ (8) , ಆಸ್ಟ್ರೇಲಿಯಾ (9) ಹಾಗೂ ಸ್ವಿಟ್ಜರ್ಲೆಂಡ್‌ (10) ಟಾಪ್‌ 10 ಪಟ್ಟಿಯಲ್ಲಿವೆ. ಅಲ್ಲದೆ, ಚೀನಾ 153ನೇ ಸ್ಥಾನದಲ್ಲಿದ್ದು, ಉತ್ತರ ಕೊರಿಯಾ ಜಾಗತಿಕ ಸೂಚ್ಯಂಕದಲ್ಲಿ ಕಟ್ಟ ಕಡೆಯ ಅಂದರೆ 167ನೇ ಸ್ಥಾನ ಪಡೆದುಕೊಂಡಿದೆ.

2019ರಲ್ಲಿ ಅವನತಿಗೆ ಮುಖ್ಯವಾಗಿ ಲ್ಯಾಟಿನ್ ಅಮೆರಿಕಾ ಹಾಗೂ ಸಬ್‌ ಸಹಾರನ್‌ ಆಫ್ರಿಕಾದ ತೀಕ್ಷ್ಣವಾದ ಹಿಂಜರಿತ ಮತ್ತು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶದಲ್ಲಿನ ಆರ್ಥಿಕ ಹಿಂಜರಿತ ಕಾರಣ ಎಂದು ತಿಳಿದಿದೆ. ಜತೆಗೆ, ಭಾರತ ಸೇರಿ ಏಷ್ಯಾದ ಪ್ರಜಾಪ್ರಭುತ್ವಗಳು ಸಹ ಪ್ರಕ್ಷುಬ್ಧ ವರ್ಷವನ್ನು ಹೊಂದಿದ್ದವು ಎಂದೂ ವರದಿಯಲ್ಲಿ ತಿಳಿಸಿದೆ.


• ಪ್ರಜಾಪ್ರಭುತ್ವ ಸೂಚ್ಯಂಕ ಪಟ್ಟಿ ಮತ್ತು ಭಾರತ :
━━━━━━━━━━━━━━━━━━━━
ಈ ಪಟ್ಟಿಯಲ್ಲಿ ಭಾರತ ಬರೊಬ್ಬರಿ 10 ಸ್ಥಾನ ಕೆಳಗಿಳಿಯುವ ಮೂಲಕ 51ನೇ ಸ್ಥಾನಕ್ಕೆ ಕುಸಿದಿದ್ದು, ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದ್ದು ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ, ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದೇ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಕುಸಿತಕ್ಕೆ ಕಾರಣ ಎಂದು ವಿವರಿಸಲಾಗಿದೆ.

2006 ರಲ್ಲಿ ಪ್ರಜಾಪ್ರಭುತ್ವ ಸೂಚ್ಯಂಕ ಪ್ರಾರಂಭವಾದಾಗಿನಿಂದ 2019 ರಲ್ಲಿ ಭಾರತದ ಶ್ರೇಯಾಂಕ ಅತ್ಯಂತ ಕಳಪೆಯಾಗಿದೆ. ಭಾರತದ ಒಟ್ಟಾರೆ ಅಂಕಗಳು 2018 ರಲ್ಲಿದ್ದ 7.23 ರಿಂದ 2019 ರಲ್ಲಿ 6.90 ಕ್ಕೆ ಇಳಿದಿದೆ.

• ಪ್ರಜಾಪ್ರಭುತ್ವ ಸೂಚ್ಯಂಕದ ರ‍್ಯಾಂಕ್‌ ನಿಗದಿ :
━━━━━━━━━━━━━━━━━━━━
ಪ್ರಜಾಪ್ರಭುತ್ವದ ವಿವಿಧ ಪ್ರಕ್ರಿಯೆ ಮತ್ತು ಲಕ್ಷಣಗಳನ್ನು 5 ಸೂಚಿಗಳಾಗಿ ವಿಂಗಡಿಸಲಾಗಿದ್ದು, ಐದೂ ಸೂಚಿಗಳ ಅಡಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಆಯಾ ಸೂಚಿಯಲ್ಲಿ ಆಯಾ ದೇಶಗಳು ಪಡೆದ ಅಂಕಗಳನ್ನು ಆಧರಿಸಿ ಅವುಗಳ ರ‍್ಯಾಂಕ್‌ ಅನ್ನು ನಿಗದಿ ಮಾಡಲಾಗಿದೆ.
1. ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವಕ್ಕೆ ಮಾನ್ಯತೆ
2. ಸರ್ಕಾರದ ಕಾರ್ಯವೈಖರಿ
3. ರಾಜಕೀಯ ಭಾಗವಹಿಸುವಿಕೆ
4. ರಾಜಕೀಯ ಸಂಸ್ಕೃತಿ
5. ನಾಗರಿಕ ಸ್ವಾತಂತ್ರ್ಯ

Thursday 16 July 2020

•► ️PART X — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes)

 •► ️PART X — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : 
(IAS/KAS Exam Preparation Short Notes)
━━━━━━━━━━━━━━━━━━━━━━━

…ಮುಂದುವರೆದ ಭಾಗ.






•► ️ಜಾಗತಿಕ ವಲಸೆ ವರದಿ- 2020 (GMR)​ (Global Migration Report 2020)

•► ️ಜಾಗತಿಕ ವಲಸೆ ವರದಿ- 2020 (GMR)​
(Global Migration Report 2020)

━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


ವಿಶ್ವಸಂಸ್ಥೆಯ ವಲಸೆ ವಿಭಾಗ (ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್) ಈ 'ಜಾಗತಿಕ ವಲಸೆ ವರದಿ- 2020’ ವರದಿಯನ್ನು ಬಿಡುಗಡೆ ಮಾಡಿರುವುದು.

ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ, ಅತಿ ಹೆಚ್ಚು ಅಂತಾರಾಷ್ಟ್ರೀಯ ವಲಸಿಗರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿವೆ. ಈ  ವರದಿ ಅನ್ವಯ 1.75 ಕೋಟಿ ಭಾರತೀಯರು ವಲಸಿಗರಾಗಿ ವಿಶ್ವದ ವಿವಿಧ ದೇಶಗಳಲ್ಲಿದ್ದಾರೆ. 2008ರಲ್ಲಿ ಈ ವಲಸಿಗ ಭಾರತೀಯರು ತವರುನಾಡು ಭಾರತಕ್ಕೆ 5.65 ಲಕ್ಷ ಕೋಟಿ ರು. ಹಣ ರವಾನಿಸಿದ್ದಾರೆ.

ಅಂತಾರಾಷ್ಟ್ರೀಯ ವಲಸೆ ಸಂಸ್ಥೆಯ ಈ ವರದಿಯ ಪ್ರಕಾರ , ವಿಶ್ವಾದ್ಯಂತ ಒಟ್ಟು 27 ಕೋಟಿ ವಲಸಿಗರಿದ್ದು, ಇದರಲ್ಲಿ 5.07 ಕೋಟಿ ವಲಸಿಗರು ಅಮೆರಿಕದಲ್ಲಿಯೇ ಇದ್ದಾರೆ. ಕಳೆದ ವರದಿಗೆ ಹೋಲಿಕೆ ಮಾಡಿದರೆ ವಲಸಿಗರ ಸಂಖ್ಯೆಯಲ್ಲಿ ಶೇ. 0.1ರಷ್ಟುಮಾತ್ರ ಏರಿಕೆಯಾಗಿದೆ.

2019ರಲ್ಲಿ ಅಂತರರಾಷ್ಟ್ರೀಯ ವಲಸಿಗರ ಸಂಖ್ಯೆಯನ್ನು ಈಗ 270 ಮಿ.ಎಂದು ಅಂದಾಜಿಸಲಾಗಿದ್ದು, ಅಮೆರಿಕ ವಲಸಿಗರ ಅತ್ಯಂತ ನೆಚ್ಚಿನ ರಾಷ್ಟ್ರವಾಗಿದೆ. ಅಲ್ಲಿ ಸುಮಾರು 51 ಮಿ.ವಲಸಿಗರು ವಾಸವಾಗಿದ್ದಾರೆ ಎಂದು ಐಒಎಂ ತಿಳಿಸಿದೆ.

 ವಿಶ್ವದ ಒಟ್ಟು ಜನಸಂಖ್ಯೆ ಪೈಕಿ ಶೇ.3.5ರಷ್ಟುಮಂದಿ ವಲಸಿಗರಾಗಿದ್ದಾರೆ. ಒಟ್ಟು ವಲಸಿಗರಲ್ಲಿ 14.1 ಕೋಟಿ ಮಂದಿ ಯೂರೋಪ್‌ ಹಾಗೂ ದಕ್ಷಿಣ ಅಮೆರಿಕದಲ್ಲೇ ವಾಸಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ವಲಸಿಗರ ಪೈಕಿ ಅರ್ಧಕ್ಕಿಂತ ಹೆಚ್ಚು ಜನ ಯುರೋಪ್‌ (14.1 ಕೋಟಿ) ಮತ್ತು ಉತ್ತರ ಅಮೆರಿಕ ದೇಶಗಳಲ್ಲಿ ನೆಲೆಸಿದ್ದಾರೆ. ವಲಸಿಗರ ಪೈಕಿ ಮೂರನೇ ಎರಡು ಭಾಗದಷ್ಟುಜನ ಉದ್ಯೋಗ ಅರಸಿ ಹೋದವರು.

• ಟಾಪ್‌ ವಲಸಿಗರು: 
1.75 ಕೋಟಿ ವಲಸಿಗರೊಂದಿಗೆ ಭಾರತ ಮೊದಲ ಸ್ಥಾನದಲ್ಲಿದ್ದರೆ, 1.18 ಕೋಟಿ ವಲಸಿಗರೊಂದಿಗೆ ಮೆಕ್ಸಿಕೋ 2ನೇ ಸ್ಥಾನ, 1.07 ಕೋಟಿ ಜನರೊಂದಿಗೆ ಚೀನಾ 3ನೇ ಸ್ಥಾನದಲ್ಲಿದೆ. ವಿಶ್ವದೆಲ್ಲೆಡೆ ಇರುವ ವಲಸಿಗರು 2018ರಲ್ಲಿ ತಮ್ಮ ದೇಶಗಳಿಗೆ ಒಟ್ಟಾರೆ 49 ಲಕ್ಷ ಕೋಟಿ ರು. ಹಣ ರವಾನಿಸಿದ್ದಾರೆ.


16.4 ಕೋಟಿ ಮಂದಿ ಕೆಲಸಕ್ಕಾಗಿ ವಲಸೆ ಹೋಗಿದ್ದಾರೆ. 1.75 ಭಾರತೀಯರು, 1.18 ಕೋಟಿ ಮೆಕ್ಸಿಕನ್ನರು, 1.07 ಕೋಟಿ ಚೀನಿಯರು ವಲಸಿಗರಾಗಿದ್ದಾರೆ. ಇವರಿಂದ 2018ರಲ್ಲಿ ಒಟ್ಟು ವಲಸಿಗರು ತಮ್ಮ ತಮ್ಮ ದೇಶಗಳಿಗೆ 49 ಲಕ್ಷ ಕೋಟಿ ಹಣ ರವಾನಿಸಿದ್ದು, ಭಾರತ (5.65 ಲಕ್ಷ ಕೋಟಿ), ಚೀನಾ (4.82 ಲಕ್ಷ ಕೋಟಿ) ಮೆಕ್ಸಿಕೋ (2.55 ಲಕ್ಷ ಕೋಟಿ) ಆದಾಯ ಗಳಿಸುವ ಮೊದಲ ಮೂರು ಸ್ಥಾನದಲ್ಲಿದೆ.


• ವರದಿಯ ವಿಸ್ತೃತ ನೋಟ : (ಹೆಚ್ಚಿನ ಮಾಹಿತಿಯೊಂದಿಗೆ)
 
ಅಂತರರಾಷ್ಟ್ರೀಯ ಹಣ ರವಾನೆಯು 2018 ರಲ್ಲಿ 689 ಡಾಲರ್ ಶತಕೋಟಿಗೆ ಏರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೊದಲ ಮೂರು ಹಣ ರವಾನೆದಾರರು ಭಾರತ ($78.6 ಬಿಲಿಯನ್), ಚೀನಾ ($67.4 ಬಿಲಿಯನ್), ಮತ್ತು ಮೆಕ್ಸಿಕೊ ($35.7 ಬಿಲಿಯನ್) ದೇಶಗಳಾಗಿವೆ.
ಹಣ ಕಳುಹಿಸುವ ದೇಶಗಳಲ್ಲಿ ಯುಎಸ್ ಅಗ್ರಸ್ಥಾನದಲ್ಲಿದೆ ($68.0 ಬಿಲಿಯನ್) ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ($44.4 ಬಿಲಿಯನ್) ಮತ್ತು ಸೌದಿ ಅರೇಬಿಯಾ ($36.1 ಬಿಲಿಯನ್) ದೇಶಗಳಿವೆ.

ಹೆಚ್ಚಿನ ವಲಸಿಗರು ಯುಎಸ್ ಗೆ ಪ್ರಯಾಣಿಸಿದ್ದರೂ, ಬಡ ದೇಶಗಳಿಂದ ಫ್ರಾನ್ಸ್, ರಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾದಂತಹ ಶ್ರೀಮಂತ ರಾಷ್ಟ್ರಗಳಿಗೆ ವಲಸೆ ಹೋಗಿರುವುದು ದೃಢಪಟ್ಟಿದೆ.

ಈ ತರಹದ ವಲಸೆಯು ಭವಿಷ್ಯದಲ್ಲಿ ಹಲವು ವರ್ಷಗಳವರೆಗೆ ಮುಂದುವರಿಯುತ್ತದೆ. ವಿಶೇಷವಾಗಿ ಕೆಲವು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಜನಸಂಖ್ಯೆಯು ಮುಂಬರುವ ವರ್ಷಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ, ಇದು ಭವಿಷ್ಯದ ಪೀಳಿಗೆಗೆ ತೊಂದರೆಯನ್ನುಂಟು ಮಾಡುತ್ತದೆ" ಎಂದು ಐಒಎಂ ಹೇಳಿದೆ.

ಆಫ್ರಿಕಾ, ಏಷ್ಯಾ ಮತ್ತು ಯುರೋಪಿನಲ್ಲಿ, ಹೆಚ್ಚಿನ ವಲಸಿಗರು ತಮ್ಮ ಪ್ರದೇಶಗಳಲ್ಲಿಯೇ ಇರುತ್ತಾರೆ, ಆದರೆ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಮತ್ತು ಉತ್ತರ ಅಮೆರಿಕದಿಂದ ವಲಸೆ ಬಂದವರಲ್ಲಿ ಹೆಚ್ಚಿನವರು ತಾವು ಹುಟ್ಟಿದ ಪ್ರದೇಶಗಳಲ್ಲಿ ಇರುವುದಿಲ್ಲ.

ಮಧ್ಯಪ್ರಾಚ್ಯದ ಮೇಲೆ ಕೇಂದ್ರೀಕರಿಸಿದ ಮಾಹಿತಿಯ ಪ್ರಕಾರ ಗಲ್ಫ್‌ ದೇಶಗಳು ವಿಶ್ವದಲ್ಲೇ ಅತಿ ಹೆಚ್ಚು ತಾತ್ಕಾಲಿಕ ಕಾರ್ಮಿಕ ವಲಸಿಗರನ್ನು ಹೊಂದಿದೆ. ಇದರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಜನಸಂಖ್ಯೆಯು ಸುಮಾರು 90 ಪ್ರತಿಶತದಷ್ಟಿದೆ.

ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (ಡಿಆರ್‌ಸಿ), ಮ್ಯಾನ್ಮಾರ್, ದಕ್ಷಿಣ ಸುಡಾನ್, ಸಿರಿಯಾ ಮತ್ತು ಯೆಮನ್‌ನಲ್ಲಿ ನಡೆಯುತ್ತಿರುವ ಅಹಿಂಸೆ ಮತ್ತು ಒಳ ಜಗಳಗಳು ಕಳೆದ ಎರಡು ವರ್ಷಗಳಲ್ಲಿ ಹೇಗೆ ಭಾರಿ ಆಂತರಿಕ ಸ್ಥಳಾಂತರಕ್ಕೆ ಕಾರಣವಾಗಿದೆ ಎಂಬುದನ್ನು ಈ ವರದಿ ಎತ್ತಿ ತೋರಿಸಿದೆ. ಐಒಎಂನ ಇಂಟರ್ನಲ್ ಡಿಸ್ಪ್ಲೇಸ್ಮೆಂಟ್ ಮಾನಿಟರಿಂಗ್ ಸೆಂಟರ್ ಪ್ರಕಾರ. 1998 ರಲ್ಲಿ ಮೇಲ್ವಿಚಾರಣೆ ಪ್ರಾರಂಭವಾದಾಗಿನಿಂದ ಒಟ್ಟು 41.3 ಮಿಲಿಯನ್ ಜನರು 2018 ರ ಕೊನೆಯಲ್ಲಿ ಸ್ಥಳಾಂತರಗೊಂಡಿದ್ದಾರೆ.

ಆಂತರಿಕ ಸ್ಥಳಾಂತರದ ವಿಷಯಕ್ಕೆ ಬಂದಾಗ ಸಿರಿಯಾವು ಮೊದಲನೇ ಸ್ಥಾನದಲ್ಲಿದೆ (6.1 ಮಿಲಿಯನ). ನಂತರದ ಸ್ಥಾನದಲ್ಲಿ ಕೊಲಂಬಿಯಾ (5.8 ಮಿಲಿಯನ್) ಮತ್ತು ಕಾಂಗೋ (3.1 ಮಿಲಿಯನ್) ಇದೆ.
ಸುಮಾರು ಒಂಬತ್ತು ವರ್ಷಗಳ ಸಂಘರ್ಷದ ನಂತರ, ಸಿರಿಯಾವು ಅತಿ ಹೆಚ್ಚು ನಿರಾಶ್ರಿತರ ಮೂಲ ದೇಶವಾಗಿ ಬದಲಾಗಿದೆ, ಇದು ಸುಮಾರು 26 ದಶಲಕ್ಷದಷ್ಟು ನಿರಾಶ್ರಿತರ ಮೂಲವಾಗಿದೆ ಹಾಗೂ ಅಫ್ಘಾನಿಸ್ತಾನವನ್ನು ಮೀರಿಸಿದೆ. ಅಫ್ಘಾನಿಸ್ತಾನ ಸುಮಾರು 2.5 ಮಿಲಿಯನ್ ನಿರಾಶ್ರಿತರ ಮೂಲವಾಗಿದೆ.

ಅಂತಿಮವಾಗಿ, ಹವಾಮಾನ ಬದಲಾವಣೆ ಮತ್ತು ಹವಾಮಾನ ವಿಪತ್ತುಗಳ ಪ್ರಭಾವದಿಂದ, ಫಿಲಿಪೈನ್ಸ್‌ನ ಟೈಫೂನ್ ಮಾಂಗ್‌ಖುಟ್ ನಲ್ಲಿ 2018 ರ ಕೊನೆಯಲ್ಲಿ 3.8 ಮಿಲಿಯನ್ ಜನರನ್ನು ಹೊಸದಾಗಿ ಸ್ಥಳಾಂತರಿಸಲಾಯಿತು, ಇದು ಜಾಗತಿಕವಾಗಿ ಅತಿದೊಡ್ಡ ಸಂಖ್ಯೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

•► ‘ಗಾಂಧಾರ ಕಲಾ ಪರಂಪರೆ’ - ಗಾಂಧಾರ ಕಲಾಶೈಲಿಯ ಪ್ರಮುಖ ಲಕ್ಷಣಗಳು: ಪತ್ರಿಕೆ—2 : ಸಾಮಾನ್ಯ ಅಧ್ಯಯನ— 1 (Gandhara School of Art — Salient features of the Gandhara Architecture)

•►  ‘ಗಾಂಧಾರ ಕಲಾ ಪರಂಪರೆ’ - ಗಾಂಧಾರ ಕಲಾಶೈಲಿಯ ಪ್ರಮುಖ ಲಕ್ಷಣಗಳು: ಪತ್ರಿಕೆ—2 : ಸಾಮಾನ್ಯ ಅಧ್ಯಯನ— 1
(Gandhara School of Art — Salient features  of the Gandhara Architecture)

━━━━━━━━━━━━━━━━━━━━━━━━━━━━━━━━━━━━━━
★ ಭಾರತೀಯ ಕಲೆ ಮತ್ತು ಸಂಸ್ಕೃತಿ
(Indian Art and Culture)

★ ಪ್ರಾಚೀನ ಭಾರತದ ಇತಿಹಾಸ
(Ancient Indian History)


(ಹಿಂದಿನ ಪುಟಗಳಲ್ಲಿ ಈ ಕಲಾ ಶೈಲಿಯ ಬಗ್ಗೆ ಈಗಾಗಲೇ ನಾನು ವಿವರಿಸಿ ಬರೆದಿದ್ದೇನೆ.)

ಭಾರತೀಯ ಮತ್ತು ಗ್ರೀಕ್ ಸಂಸ್ಕ್ರತಿಗಳ ಮಧ್ಯೆ ಮುಕ್ತ ಸಂಪರ್ಕದಿಂದಾಗಿ ‘ಗಾಂಧಾರ ಕಲಾ ಪರಂಪರೆ’ (Gandhara School of Art) ಎಂಬ ಹೊಸ ಕಲಾ ಪರಂಪರೆಯು ಉಗಮಿಸಿತು. ಇದು ಭಾರತ ಮತ್ತು ಗ್ರೀಕ್ ಕಲಾಶೈಲಿಗಳ ಸಮ್ಮಿಶ್ರಣವನ್ನು ಪ್ರತಿನಿಧಿಸುತ್ತದೆ.

ಕುಶಾನರ ಅವಧಿಯು ಗಾಂಧಾರ ಕಲೆಯ ಅಥವಾ ಗ್ರೀಕೋ-ಬೌದ್ಧಶೈಲಿಯ ಬೆಳವಣಿಗೆಗೆ ಪ್ರಾಮುಖ್ಯತೆ ಪಡೆದಿದೆ.

ಕಾನಿಷ್ಕನು ಮಹಾನ್ ಕಲಾಪೋಷಕನಾಗಿದ್ದನು. ಆತನ ಪ್ರಮುಖ ಕಟ್ಟಡಗಳು ಮತ್ತು ನಿರ್ಮಾಣಗಳು ಹೆಚ್ಚಾಗಿ ಗಾಂಧಾರ, ಮಥುರಾ, ಕಾನಿಷ್ಕಪುರ ಮತ್ತು ತಕ್ಷಶಿಲಗಳಲ್ಲಿ ಕಂಡುಬಂದಿವೆ.

ಈ ಕಲಾಶೈಲಿಯು ಗಾಂಧಾರ ಪ್ರದೇಶದಲ್ಲಿ ಉಗಮಿಸಿದ್ದರಿಂದ ಇದನ್ನು 'ಗಾಂಧಾರ ಕಲೆ' ಎಂದು ಕರೆಯಲಾಗಿದೆ. ಈ ಪ್ರದೇಶವು ಪ್ರಸ್ತುತ ಆಫ್ಘಾನಿಸ್ಥಾನದಲ್ಲಿದೆ.

• ಗಾಂಧಾರ ಕಲಾಶೈಲಿಯ ಪ್ರಮುಖ ಲಕ್ಷಣಗಳು:
━━━━━━━━━━━━━━━━━━━
1. ಈ ಕಲಾಶೈಲಿಯಲ್ಲಿ ಆಳೆತ್ತರದ ಗೌತಮ ಬುದ್ಧನ ವಿಗ್ರಹಗಳನ್ನು ಕೆತ್ತಲಾಗಿದೆ. ಅಲ್ಲಿಯವರೆಗೆ ಬುದ್ಧನ ಅಸ್ತಿತ್ವವನ್ನು ಕಮಲ, ಛತ್ರಿ ಮುಂತಾದ ಚಿಹ್ನೆಗಳ ರೂಪದಲ್ಲಿ ತೋರಿಸಲಾಗುತ್ತಿತ್ತು.

2. ವಿಗ್ರಹಗಳನ್ನು ಕೆತ್ತುವಾಗ ದೇಹ ವಿನ್ಯಾಸದ ಅನುಪಾತದೊಂದಿಗೆ ಸ್ನಾಯುಗಳು, ಮೀಸೆ ಮುಂತಾದವುಗಳಿಗೆ ಹೆಚ್ಚಿನ ಗಮನ ಹರಿಸಿ ಸ್ವಾಭಾವಿಕ ಜೋಡಣೆಯೊಂದಿಗೆ ಮೂಡಿಸಲಾಗಿದೆ.

3. ಕಲಾಕೌಶಲ್ಯದಿಂದ ಕೂಡಿದ ಈ ಕಲೆಯ ನಮೂನೆಗಳಲ್ಲಿ ಬಟ್ಟೆಯ ಮಡಿಕೆಗಳು ಮತ್ತು ನೆರಿಗೆಗಳನ್ನು ತುಂಬಾ ಸೂಕ್ಷ್ಮವಾಗಿ ಮತ್ತು ಕಲಾತ್ಮಕವಾಗಿ ಪ್ರದರ್ಶಿಸಲಾಗಿದೆ.

4. ವಿಗ್ರಹಗಳ ಮೇಲಿರುವ ಆಭರಣಗಳ ಮೇಲಿನ ಕೆತ್ತನೆಗೆ ಹೆಚ್ಚಿನ ಆಸಕ್ತಿ ತೋರಿಸಲಾಗಿದ್ದು, ಅವುಗಳ ಭೌತಿಕ ಸೌಂದರ್ಯವನ್ನು ವೃದ್ಧಿಸಿದೆ.

5. ವಿಗ್ರಹಗಳಿಗೆ ಮೆರುಗು ನೀಡುವುದು (Polish) ಈ ಕಲೆಯ ಪ್ರಮುಖ ಲಕ್ಷಣವಾಗಿದೆ.

6. ಬಹುತೇಕ ಈ ನಮೂನೆಗಳನ್ನು ಕಲ್ಲು, ಅರಲುಗಚ್ಚು (Terracotta) ಮತ್ತು ಜೇಡಿಮಣ್ಣಿನಿಂದ ತಯಾರಿಸಲಾಗಿದೆ.
7. ಈ ವಿಗ್ರಹಗಳಲ್ಲಿ ಬಳಸಲಾಗಿರುವ ತಾಂತ್ರಿಕತೆ ಗ್ರೀಕ್ ಶೈಲಿಯದ್ದಾದರೆ, ಅದರ ಆದರ್ಶ, ಸ್ಫೂರ್ತಿ ಮತ್ತು ವ್ಯಕ್ತಿತ್ವ ಎಲ್ಲವೂ ಭಾರತೀಯವಾದುದಾಗಿದೆ.

ಡಾ. ಆರ್.ಸಿ. ಮಜುಮ್‍ದಾರ್ ಹೇಳುವಂತೆ - “ಗಾಂಧಾರ ಕಲಾಕಾರನು ಗ್ರೀಕ್ ಕರಕುಶಲತೆ ಹಾಗೂ ಭಾರತೀಯ ಹೃದಯವನ್ನು ಹೊಂದಿದ್ದನು”. ಈ ಕಾರಣದಿಂದ ಈ ಕಲೆಯಲ್ಲಿ ನಿರ್ಮಿತವಾದ ವಿಗ್ರಹಗಳು ಮತ್ತು ಪ್ರತಿಮೆಗಳಲ್ಲಿ ಬುದ್ಧನನ್ನು ಗ್ರೀಕ್ ದೇವತೆ ಅಪೊಲೊನನ್ನು ಹೋಲುವಂತೆ ಕೆತ್ತುವ ಪ್ರಯತ್ನ ಮಾಡಲಾಗಿದೆ

Wednesday 15 July 2020

•► ಜಾಗತಿಕ ಹಸಿವು ಸೂಚ್ಯಂಕ ವರದಿ 2019 : ಭಾರತದ ರ‍್ಯಾಂಕ್ ಕುಸಿತಕ್ಕೆ ಕಾರಣಗಳು (GHI-Global Hunger Report 2019 - The Reasons Why India's Rank falls back)

•► ಜಾಗತಿಕ ಹಸಿವು ಸೂಚ್ಯಂಕ ವರದಿ 2019 : ಭಾರತದ ರ‍್ಯಾಂಕ್ ಕುಸಿತಕ್ಕೆ ಕಾರಣಗಳು
(GHI-Global Hunger Report 2019 - The Reasons Why India's Rank falls back)
━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


ಐರಿಶ್ ಸಂಸ್ಥೆ ಕನ್ಸರ್ನ್‌ ವರ್ಲ್ಡ್‌ವೈಡ್ ಎಂಬ ಜಾಗತಿಕ ಸ್ವಯಂಸೇವಾ ಸಂಸ್ಥೆ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫೆ ಜಂಟಿಯಾಗಿ 2000ದಿಂದ ಈ ಸೂಚ್ಯಂಕವನ್ನು ಸಿದ್ಧಪಡಿಸುತ್ತಿವೆ.

ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಮತ್ತು ಶಿಶುಮರಣದ ಪ್ರಮಾಣವನ್ನು ಆಧರಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ಈ ಸಾಲಿನಲ್ಲಿ 102ನೇ ಸ್ಥಾನ ಪಡೆದುಕೊಂಡಿದೆ. ಚೀನಾ (25), ಶ್ರೀಲಂಕಾ (66), ನೇಪಾಳ (73),  ಬಾಂಗ್ಲಾದೇಶ (88) ಮತ್ತು ಪಾಕಿಸ್ತಾನ (94) ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ.
ದಕ್ಷಿಣ ಏಷ್ಯಾ ಮತ್ತು ಬ್ರಿಕ್ಸ್‌ ದೇಶಗಳಲ್ಲಿ ಅತ್ಯಂತ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿರುವ ದೇಶ ಭಾರತ ಎಂದು ‘ಜಾಗತಿಕ ಹಸಿವು ವರದಿ–2019’ರಲ್ಲಿ ವಿವರಿಸಲಾಗಿದೆ.

ಬೆಲಾರಸ್, ಉಕ್ರೇನ್, ಟರ್ಕಿ, ಕ್ಯೂಬಾ ಮತ್ತು ಕುವೈತ್ ಸೇರಿದಂತೆ ಹದಿನೇಳು ದೇಶಗಳು ಐದಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದು ಅಗ್ರ ಸ್ಥಾನದಲ್ಲಿದೆ ಎಂದು ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆ ಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ ವೆಬ್‌ಸೈಟ್ ಹೇಳಿದೆ.

ಶಿಶುಮರಣ ಹೊರತುಪಡಿಸಿ ಉಳಿದ ಮೂರೂ ಕ್ಷೇತ್ರಗಳಲ್ಲಿ ಭಾರತದ ಸ್ಥಿತಿ ಆಶಾದಾಯಕವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

2015ರಲ್ಲಿ ಭಾರತವು 93ನೇ ಸ್ಥಾನದಲ್ಲಿತ್ತು ಮತ್ತು 2018ರಲ್ಲಿ 103ನೇ ಸ್ಥಾನಕ್ಕೆ ಕುಸಿದಿತ್ತು. 2019ರಲ್ಲಿ 102ನೇ ಸ್ಥಾನಕ್ಕೆ ಬಂದಿದೆ. ಆದರೆ, ಭಾರತದ ನೆರೆ ರಾಷ್ಟ್ರಗಳು ಉತ್ತಮ ಸ್ಥಾನ ಕಾಯ್ದುಕೊಂಡಿವೆ. ಚೀನಾ 25ನೇ ಸ್ಥಾನದಲ್ಲಿದ್ದು, ಹಸಿವಿನಿಂದ ಬಳಲುವವರ ಪ್ರಮಾಣ ಅತ್ಯಂತ ಕಡಿಮೆ ಇರುವ ದೇಶಗಳ ವರ್ಗದಲ್ಲಿದೆ.

2000ರ ಸೂಚ್ಯಂಕದಲ್ಲಿ ಭಾರತವು 83ನೇ ಸ್ಥಾನದಲ್ಲಿತ್ತು.
2005 ರಲ್ಲಿ 38.9 ಇದ್ದ ಅಂಕ  2010 ರಲ್ಲಿ 32 ಮತ್ತು ನಂತರ 2010 ಮತ್ತು 2019 ರ ನಡುವೆ 32 ರಿಂದ 30.3ಗೆ ತಲುಪಿದೆ.

ಭಾರತದ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ವ್ಯರ್ಥತೆ ಪ್ರಮಾಣ 2008-2012ರ ಅವಧಿಯಲ್ಲಿ ಶೇ 16.5 ರಿಂದ 2014-2018ರಲ್ಲಿ ಶೇ 20.8 ಕ್ಕೆ ಏರಿದೆ. 6 ರಿಂದ 23 ತಿಂಗಳ ವಯಸ್ಸಿನ ಎಲ್ಲ ಮಕ್ಕಳಲ್ಲಿ ಕೇವಲ 9.6 ಪ್ರತಿಶತದಷ್ಟು ಮಕ್ಕಳಿಗೆ ಮಾತ್ರ  ಕನಿಷ್ಠ ಸ್ವೀಕಾರಾರ್ಹ ಆಹಾರ ಸಿಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 102ನೇ ರ‍್ಯಾಂಕ್‌ಗೆ ಕುಸಿದಿದೆ. 2015ರಿಂದ ಈವರೆಗೆ ಭಾರತವು ಒಟ್ಟು 10 ರ‍್ಯಾಂಕ್‌ಗಳ ಕುಸಿತ ಕಂಡಿದೆ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವಿಕೆ ಮತ್ತು ಸ್ವಚ್ಛತೆಯಲ್ಲಿ ಹಿಂದುಳಿದಿರುವುದೇ ಇದಕ್ಕೆ ಕಾರಣ ಎಂದು ‘ಜಾಗತಿಕ ಹಸಿವು ವರದಿ–2019’ರಲ್ಲಿ ವಿವರಿಸಲಾಗಿದೆ.

ಉತ್ಪಾದಕತೆ ಮತ್ತು ಆರ್ಥಿಕ ಬೆಳವಣಿಗೆಯ ಕಾರಣ ಹಸಿವಿನ ನಿರ್ಮೂಲನೆ ಚೀನಾದಲ್ಲಿ ವೇಗ ಪಡೆದಿದೆ. ಹಿಂದಿನ ಐದು ವರ್ಷಗಳಲ್ಲಿ ಕೆಲವೇ ರ‍್ಯಾಂಕ್‌ನಷ್ಟು ಪ್ರಗತಿ ಸಾಧಿಸಿದ್ದರೂ, ಕೋಟ್ಯಂತರ ಜನರು ಹಸಿವಿನಿಂದ ಬಳಲುವುದು ಕಡಿಮೆಯಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಹಸಿವಿನಿಂದ ಬಳಲುವವರ ಪ್ರಮಾಣ ಭಾರತಕ್ಕಿಂತ ಕಡಿಮೆ ಇದೆ. ಈ ಮೂರೂ ದೇಶಗಳು ಅಪೌಷ್ಠಿಕತೆ ಮತ್ತು ಕುಂಠಿತ ಬೆಳವಣಿಗೆಯನ್ನು ಕಡಿಮೆ ಮಾಡುವಲ್ಲಿ ಗಣನೀಯ ಪ್ರಗತಿ ಸಾಧಿಸಿವೆ. ಹೀಗಾಗಿ ರ‍್ಯಾಂಕಿಂಗ್‌ನಲ್ಲಿ ತಮ್ಮ ಸ್ಥಾನಗಳನ್ನು ಕಾಯ್ದುಕೊಂಡಿವೆ.

• ಹಸಿವು ಸೂಚಿಗಳು, ಭಾರತದ ಕುಸಿತಕ್ಕೆ ಕಾರಣಗಳು
━━━━━━━━━━━━━━━━━━━━━

1. ಅಪೌಷ್ಟಿಕತೆ
ಭಾರತದಲ್ಲಿ ಅಪೌಷ್ಟಿಕತೆ ಇದೆ. ಗರ್ಭಾವಸ್ಥೆಯಿಂದಲೇ ಅಪೌಷ್ಟಿಕತೆಯ ಸಮಸ್ಯೆ ಎದುರಾಗುತ್ತದೆ. ದೇಶದಲ್ಲಿ 9 ತಿಂಗಳಿಂದ 23 ತಿಂಗಳವರೆಗಿನ ಮಕ್ಕಳಲ್ಲಿ ಶೇ 9.6ರಷ್ಟು ಮಕ್ಕಳಿಗೆ ಮಾತ್ರ ಪೌಷ್ಟಿಕಾಂಶಯುಕ್ತ ಮತ್ತು ಅಗತ್ಯ ಪ್ರಮಾಣದ ಆಹಾರ ಲಭ್ಯವಿದೆ

14.5 % ದೇಶದಲ್ಲಿ ಅಪೌಷ್ಠಿಕತೆ ಎದುರಿಸುತ್ತಿರುವವರ ಪ್ರಮಾಣ

2. ಕುಂಠಿತ ಬೆಳವಣಿಗೆ
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಈ ಸೂಚಿಗೆ ಪರಿಗಣಿಸಲಾಗುತ್ತದೆ. ಅಪೌಷ್ಠಿಕತೆಯ ಕಾರಣ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಕಂಡುಬರುತ್ತದೆ. ಅಂದರೆ ಮಕ್ಕಳು ಅವರ ವಯಸ್ಸಿಗೆ ಅಗತ್ಯವಿರುವಷ್ಟು ಎತ್ತರ ಬೆಳೆದಿರುವುದಿಲ್ಲ. ದೇಹದ ಬೆಳವಣಿಗೆಯೂ ಸಾಮಾನ್ಯ ಸ್ಥಿತಿಯಲ್ಲಿ ಇರುವುದಿಲ್ಲ‌

37.8 % ದೇಶದಲ್ಲಿ ಕುಂಠಿತ ಬೆಳವಣಿಗೆಗೆ ತುತ್ತಾಗಿರುವ ಮಕ್ಕಳ ಪ್ರಮಾಣ

3. ಕಡಿಮೆ ತೂಕದ ಮಕ್ಕಳು
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಈ ಸೂಚಿಗೆ ಪರಿಗಣಿಸಲಾಗುತ್ತದೆ. ಮಕ್ಕಳು ಅವರ ಎತ್ತರಕ್ಕೆ ತಕ್ಕಷ್ಟು ತೂಕ ಇಲ್ಲದಿರುವುದು. ಅಪೌಷ್ಟಿಕತೆಯ ಕಾರಣ ಮಕ್ಕಳು ಕಡಿಮೆ ತೂಕದಿಂದ ಬಳಲುತ್ತಾರೆ. 2008–2012ರ ಅವಧಿಯಲ್ಲಿ ಈ ಸಮಸ್ಯೆಯಿಂದ ಬಳಲುವ ಮಕ್ಕಳ ಪ್ರಮಾಣ ಶೇ 16.5ರಷ್ಟು ಇತ್ತು. ಆದರೆ ಈಗ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಇರುವ 117 ರಾಷ್ಟ್ರಗಳಲ್ಲೇ ಈ ಸಮಸ್ಯೆ ಅತಿ ಹೆಚ್ಚು ಇರುವುದು ಭಾರತದಲ್ಲಿ

20.8 % ಭಾರತದಲ್ಲಿನ ಕಡಿಮೆ ತೂಕದ ಮಕ್ಕಳ ಪ್ರಮಾಣ

4. ಶಿಶುಮರಣ
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ (ಶಿಶುಮರಣ) ಇಳಿಕೆಯಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದೆ. ಪೌಷ್ಟಿಕತೆ ಹೆಚ್ಚಿಸಲು ಸರ್ಕಾರವು ಕೈಗೊಂಡಿರುವ ಕ್ರಮಗಳು ಮತ್ತು ಆರೋಗ್ಯ ಸೇವೆಯಲ್ಲಿನ ಸುಧಾರಣೆಗಳು ಇದಕ್ಕೆ ಕಾರಣ ಎಂದು ಗುರುತಿಸಲಾಗಿದೆ

3.9 % ಭಾರತದಲ್ಲಿ ಶಿಶುಮರಣ ಪ್ರಮಾಣ

•► ️PART IX — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes)

•► ️PART IX — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : 
(IAS/KAS Exam Preparation Short Notes)━━━━━━━━━━━━━━━━━━━━━

 ★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)

…ಮುಂದುವರೆದ ಭಾಗ.





•►‘ಹೊಯ್ಸಳ ಶೈಲಿ' — ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳು : ಪತ್ರಿಕೆ—2 : ಸಾಮಾನ್ಯ ಅಧ್ಯಯನ— 1 (The Main Characteristics / Salient features of the Hoysala Architecture)

•►‘ಹೊಯ್ಸಳ ಶೈಲಿ' — ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳು : ಪತ್ರಿಕೆ—2 : ಸಾಮಾನ್ಯ ಅಧ್ಯಯನ— 1
(The Main Characteristics / Salient features  of the Hoysala Architecture)
━━━━━━━━━━━━━━━━━━━━━━━━━━━━━━━━━━━━
★ ಭಾರತೀಯ ಕಲೆ ಮತ್ತು ಸಂಸ್ಕೃತಿ
(Indian Art and Culture)

★ ಮಧ್ಯಯುಗಿನ ಭಾರತದ ಇತಿಹಾಸ
(Medieval Indian History)


ಹೊಯ್ಸಳರು ವೇಸರ ಮತ್ತು ದ್ರಾವಿಡ ಶೈಲಿಗಳನ್ನು ಸೇರಿಸಿ ‘ಹೊಯ್ಸಳ ಶೈಲಿ' ಎಂಬ ಹೊಸ ವಾಸ್ತುಶಿಲ್ಪ
ಶೈಲಿಯನ್ನು ಬೆಳೆಸಿದರು.

• ಈ ಶೈಲಿಯ ಪ್ರಮುಖ ಲಕ್ಷಣಗಳೆಂದರೆ:
━━━━━━━━━━━━━━━━

1. ನಕ್ಷತ್ರಾಕಾರದ ತಳಪಾಯ.

2. ಸುಮಾರು 4 ಅಡಿ ಎತ್ತರದ ನಕ್ಷತ್ರಾಕಾರದ ಜಗತಿ.

3. ದೇವಾಲಯದ ಸುತ್ತಲಿರುವ ಜಗತಿ ತೆರೆದ ಪ್ರದಕ್ಷಿಣ ಪಥವಾಗಿದೆ.

4. ವೈವಿಧ್ಯಮಯ ರಚನೆ/ವಿನ್ಯಾಸಗಳÀನ್ನೊಳಗೊಂಡ ನುಣುಪಾದ ಕಂಬಗಳು.

5. ವಿಸ್ತೃತ ಕೆತ್ತನೆ ಮತ್ತು ಸುಂದರವಾಗಿ ಕೆತ್ತಿರುವ ಮದನಿಕೆಯರ ವಿಗ್ರಹಗಳು

6. ವಿಶಾಲವಾದ ನವರಂಗ (ಮಧ್ಯ)

7. ಭುವನೇಶ್ವರಿ (ಕೆತ್ತನೆಗಳನ್ನೊಳಗೊಂಡ ಮೇಲ್ಛಾವಣಿ) 8. ಪಿರಾಮಿಡ್ಡಿನಾಕಾರದಲ್ಲಿರುವ
ವಿಮಾನ (ಶಿಖರ)

9. ಒಂದರಿಂದ ಐದು ಗರ್ಭಗೃಹಗಳು (ಏಕಕೂಟ, ದ್ವಿಕೂಟ, ತ್ರಿಕೂಟ, ಚತುಷ್ಕೂಟ
ಮತ್ತು ಪಂಚಕೂಟ)



ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡ ದೇವಾಲಯಗಳಲ್ಲಿ ಮುಖ್ಯವಾದವುಗಳೆಂದರೆ;
ಬೇಲೂರಿನ ಚನ್ನಕೇಶವ (ಏಕಕೂಟ), ಹಳೇಬೀಡಿನ ಹೊಯ್ಸಳೇಶ್ವರ (ದ್ವಿಕೂಟ),
ಸೋಮನಾಥಪುರದ ಕೇಶವ (ತ್ರಿಕೂಟ) ದೊಡ್ಡಗದ್ದವಳ್ಳಿಯ ಲಕ್ಷ್ಮೀ (ಚತುಷ್ಕೂಟ),
ಗೋವಿಂದನ ಹಳ್ಳಿಯ ಪಂಚಲಿಂಗೇಶ್ವರ (ಪಂಚಕೂಟ), ತಲಕಾಡಿನ ಕೀರ್ತಿನಾರಾಯಣ,
ಹರಿಹರದ ಹರಿಹರೇಶ್ವರ, ಬಂಕಾಪುರದ ಶಿವ ದೇವಾಲಯ, ಅಮೃತಪುರದ ಅಮೃತೇಶ್ವರ,
ಅರಸೀಕೆರೆಯ ವೀರಬಲ್ಲಾಳ ದೇವಾಲಯ ಮುಂತಾದವುಗಳು.

Tuesday 14 July 2020

•► ️PART VIII — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes)

•► ️PART VIII — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes)
━━━━━━━━━━━━━━━━━━━━━━━━━━━━━━━━━━━━━━━━━━
 ★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)

...ಮುಂದುವರೆದ ಭಾಗ.


ಸ್ಪರ್ಧಾಳುಗಳ ಗಮನಕ್ಕೆ:
— ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ತಕ್ಷಣ ನನ್ನ ಗಮನಕ್ಕೆ ತನ್ನಿ.
Gmail : yaseen7ash@gmail.com





•► ️PART VII — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes)

•► ️PART VII — ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes)
━━━━━━━━━━━━━━━━━━━━━━━━━━━━━━━━━━━━━━━━━━
...ಮುಂದುವರೆದ ಭಾಗ.

ಸ್ಪರ್ಧಾಳುಗಳ ಗಮನಕ್ಕೆ:
— ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ತಕ್ಷಣ ನನ್ನ ಗಮನಕ್ಕೆ ತನ್ನಿ.
Gmail : yaseen7ash@gmail.com

 




Saturday 11 July 2020

► ️ಜುಲೈ 10 & 11 ರ (10 & 11 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 10 & 11 July 2020)

•► ️ಜುಲೈ 10 & 11 ರ (10 & 11 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  10 & 11 July 2020)

━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)


• ಭಾರತ ಮತ್ತು ಯುರೋಪ್‌ ಒಕ್ಕೂಟದ ನಡುವೆ 15ನೇ ಶೃಂಗಸಭೆಯು ವಿಡಿಯೊ ಕಾನ್ಫರೆನ್ಸ್‌ ಮೂಲಕ ಜುಲೈ 15ರಂದು ಪ್ರಾರಂಭ.
- ಪ್ರಸ್ತುತ ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ : ಚಾರ್ಲ್ಸ್‌ ಮಿಷೆಲ್‌
- ಪ್ರಸ್ತುತ ಯುರೋಪಿಯನ್‌ ಆಯೋಗದ ಅಧ್ಯಕ್: ಷ ಉರ್ಸುಲಾ ವಾನ್‌ ಡೆರ್‌ ಲೇಯೆನ್

• ಪ್ರಸ್ತುತ ಗಡಿ ರಸ್ತೆ ಸಂಘಟನೆಯ (ಬಿಆರ್‌ಒ) ಮಹಾ ನಿರ್ದೇಶಕರು :  ಲೆ. ಜ. ಹರಪಾಲ್‌ ಸಿಂಗ್‌

• ಕೇರಳ ಸರ್ಕಾರವು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ‘ಚಿರಿ’ (ನಗು) ಅನ್ನುವ ಯೋಜನೆಗೆ ಚಾಲನೆ ನೀಡಿದೆ.
- ವಿದ್ಯಾರ್ಥಿ ಪೊಲೀಸ್ ಕೆಡೆಟ್ ಈ ಯೋಜನೆಯ ಭಾಗವಾಗಿದ್ದು, ಶಾಲಾ ಮಕ್ಕಳು, ಇಲ್ಲಿ ಇತರ ಮಕ್ಕಳೊಂದಿಗೆ ಸಂವಹನ ನಡೆಸಲಿದ್ದಾರೆ.
- ಪ್ರಸ್ತುತ ಕೇರಳದ ಮುಖ್ಯಮಂತ್ರಿ : ಪಿಣರಾಯಿ ವಿಜಯನ್

• ಪ್ರಸ್ತುತ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾರ್ಯನಿರ್ವಾಹಕರು : ವೈ.ಸಿ. ಮೋದಿ

• ಇತ್ತೀಚೆಗೆ ಸಲಿಂಗಿಗಳು ಒಟ್ಟಿಗೆ ಬಾಳಲು ಅವಕಾಶ ನೀಡುವಂಥ ಮಸೂದೆಗೆ ಅನುಮೋದನೆ ನೀಡಿದ ದೇಶ :  ಥಾಯ್ಲೆಂಡ್‌

• ಪ್ರಸ್ತುತ ಸಿಂಗಪುರದ ಪ್ರಧಾನಿ : ಲೀ ಸೆನ್ ಲೂಂಗ್‌.

• ಕಜಕಸ್ತಾನ ದೇಶದ ರಾಜಧಾನಿ : ಅಸ್ಥಾನ್.
- ಇದು ಒಂದು ಖಂಡಾಂತರ ದೇಶವಾಗಿದ್ದು, ಹೆಚ್ಚಾಗಿ ಮಧ್ಯ ಏಷ್ಯಾದಲ್ಲಿದೆ, ಅದರ ಹೆಚ್ಚಿನ ಪಶ್ಚಿಮ ಭಾಗಗಳು ಪೂರ್ವ ಯುರೋಪಿನಲ್ಲಿದೆ. ಇದು ವಿಶ್ವದ ಅತಿದೊಡ್ಡ ಭೂ ಬಂದು (landlocked) ದೇಶವಾಗಿದೆ
- ಇದರ ಪ್ರಸ್ತುತ ಅಧ್ಯಕ್ಷ : ಕಸ್ಯಮ್ ಜೋಮಾರ್ಟ್ ಟೊಕಯೇವ್

• ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ : ಟೆಡ್ರೊಸ್ ಅದನೊಮ್ ಗೆಬ್ರೆಯೆಸಸ್

• ಪರಿಣತ ಉದ್ಯೋಗಿಗಳ ಬೇಡಿಕೆ, ಪೂರೈಕೆ ಅಂತರ ತಗ್ಗಿಸಲು ಮತ್ತು ಉದ್ಯೋಗ ಮಾರುಕಟ್ಟೆಯ ಮಾಹಿತಿ ಸುಧಾರಿಸುವ ಉದ್ದೇಶಕ್ಕೆ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ (ಎಂಎಸ್‌ಡಿಇ) ಸಚಿವಾಲಯವು ಆತ್ಮನಿರ್ಭರ ಸ್ಕಿಲ್ಡ್‌ ಎಂಪ್ಲಾಯಿ ಎಂಪ್ಲಾಯರ್‌ ಮ್ಯಾಪಿಂಗ್‌ (ಅಸೀಮ್‌–ASEEM)  ಹೆಸರಿನ ಪ್ರತ್ಯೇಕ ಅಂತರ್ಜಾಲ ತಾಣ ಆರಂಭಿಸಿದೆ.
- ಅಂತರ್ಜಾಲ ತಾಣ : (https://smis.nsdcindia.org/)


• ವಿಶ್ವದ ಆಗ್ರ ಹತ್ತರ ಪಟ್ಟಿಯಲ್ಲಿ ಕಾಣಿಸಿಕೊಂಡ ಏಷ್ಯಾದ ಏಕೈಕ ಸಿರಿವಂತ ಎಂಬ ಖ್ಯಾತಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ನ ಒಡೆಯ ಮುಕೇಶ್‌ ಅಂಬಾನಿ ಪಾತ್ರರಾಗಿದ್ದಾರೆ.
- ವಿಶ್ವ ಸಿರಿವಂತರ ಪಟ್ಟಿಯಲ್ಲಿ ವಾರನ್‌ ಬಫೆಟ್‌ ಅವರನ್ನು ಹಿಂದಿಟ್ಟಿರುವ ಅವರು 8ನೇ ಸ್ಥಾನಕ್ಕೆ ಏರಿ ಹೊಸ ದಾಖಲೆ ಬರೆದಿದ್ದಾರೆ.
- ‘ಬ್ಲೂಮ್ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕ’ದ ಪ್ರಕಾರ, 68.3 ಬಿಲಿಯನ್ ಡಾಲರ್‌ ಆಸ್ತಿ ಹೊಂದಿರುವ ಮುಕೇಶ್‌ ಅಂಬಾನಿ, ಗುರುವಾರದ 67.9 ಬಿಲಿಯನ್ ಡಾಲರ್‌ಗಳ ಸಿರಿವಂತ ವಾರನ್‌ ಬಫೆಟ್‌ ಅವರನ್ನು ಹಿಂದೆ ಸರಿಸಿದ್ದಾರೆ.

• ಬೋಯಿಂಗ್ ಎಲ್ಲಾ ಹೊಸ ಮಾದರಿಯ AH-64E ಅಪಾಚೆ ಮತ್ತು CH-47F(I)ಚಿನೂಕ್ ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ  ಪೂರೈಕೆ ಮಾಡುವ ಕಾರ್ಯ ಪೂರ್ಣಗೊಳಿಸಿದೆ ಎಂದು ಬೋಯಿಂಗ್ ಡಿಫೆನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಅಹುಜಾ ತಿಳಿಸಿದ್ದಾರೆ.

• ಪ್ರಸ್ತುತ ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ : ಕೆ. ವಿಜಯ್ ರಾಘವನ್.

• ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ 750 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಯನ್ನು ಮಧ್ಯ ಪ್ರದೇಶದ ರೇವಾದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆ.
— ಮೂರು ಸೌರ ವಿದ್ಯುತ್ ಉತ್ಪಾದನೆ ಘಟಕಗಳನ್ನು ಈ ಯೋಜನೆ ಹೊಂದಿದ್ದು ಪ್ರತಿ ಘಟಕ 250 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಘಟಕಗಳು ಸೌರ ಪಾರ್ಕ್ ಒಳಗಡೆ 500 ಹೆಕ್ಟೇರ್ ವಿಸ್ತಾರವಾದ ಪ್ರದೇಶದಲ್ಲಿದೆ.

- ರೇವಾವನ್ನು ನರ್ಮದಾ ನದಿ ಮತ್ತು ಬಿಳಿ ಹುಲಿಯ ಕಾರಣದಿಂದ ಗುರುತಿಸಲಾಗುತ್ತದೆ.

- ಸರ್ಕಾರಿ ಸ್ವಾಮ್ಯದ ಭಾರತೀಯ ಸೌರ ವಿದ್ಯುತ್ ನಿಗಮ ಮತ್ತು ಮಧ್ಯಪ್ರದೇಶ ಊರ್ಜಾ ವಿಕಾಸ ನಿಗಮ ನಿಯಮಿತದ ಜಂಟಿ ಸಹಭಾಗಿತ್ವದ ಯೋಜನೆ ಇದಾಗಿದೆ. ಇದು ತಲಾ 250 ಮೆಗಾವ್ಯಾಟ್ ಉತ್ಪಾದಿಸುವ ಮೂರು ಘಟಕಗಳನ್ನು ಹೊಂದಿದೆ.

- ರಾಜ್ಯದ ಹೊರಗಿನ ಸಾಂಸ್ಥಿಕ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುವ ಮೊಟ್ಟಮೊದಲ ಸೌರವಿದ್ಯುತ್ ಘಟಕ ಇದಾಗಿದೆ. ದೆಹಲಿ ಮೆಟ್ರೊ ರೈಲು ನಿಗಮ ಈ ಯೋಜನೆಯಿಂದ ಶೇಕಡ 24ರಷ್ಟು ವಿದ್ಯುತ್ ಪಡೆಯಲಿದೆ. ಉಳಿದ ಶೇಕಡ 25ರಷ್ಟು ವಿದ್ಯುತ್ತನ್ನು ಮಧ್ಯಪ್ರದೇಶ ಡಿಸ್ಕಾಂಗಳಿಗೆ ಪೂರೈಸಲಿದೆ.

• ಪ್ರಸ್ತುತ ರಿಸರ್ವ್ ಬ್ಯಾಂಕ್ ನ ಗವರ್ನರ್ : ಶಕ್ತಿಕಾಂತ್ ದಾಸ್
- ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷೆ : ರಜನೀಶ್ ಕುಮಾರ್

• ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ  ಪಾವಗಡದಲ್ಲಿ 2 ಸಾವಿರ ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಪಾರ್ಕ್ ಮಾಡಿದ್ದು, ಈಗಾಗಲೇ  ವಿದ್ಯುತ್ ಉತ್ಪಾದನೆ ಆರಂಭವಾಗಿದೆ. ಸುಮಾರು 13 ಸಾವಿರ ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಮಾಡಲಾಗಿದ್ದು, ಒದು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್ ಎಂಬ ಖ್ಯಾತಿ ಪಡೆದಿದೆ.

• ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಮುಷ್ತಾಕ್ ಅಹಮದ್ ಅವರು ರಾಜೀನಾಮೆ ನೀಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಹಿರಿಯ ಉಪಾಧ್ಯಕ್ಷ, ಮಣಿಪುರದ ಗ್ಯಾನೆಂದ್ರೊ ನಿಂಗೊಂಬಮ್ ಅವರನ್ನು ನೇಮಕ ಮಾಡಲಾಗಿದೆ.

- ಪ್ರಸ್ತುತ ಮಧ್ಯ ಪ್ರದೇಶದ ಮುಖ್ಯಮಂತ್ರಿ : ಶಿವರಾಜ್ ಸಿಂಗ್ ಚೌಹಾಣ್.
- ರಾಜ್ಯಪಾಲರು : ಆನಂದಿಬೆನ್ ಪಟೇಲ್.

• ಇತ್ತೀಚೆಗೆ ತಾಯಿಗೆ ಕೋವಿಡ್-19 ಸೋಂಕು ಪರೀಕ್ಷೆ ನೆಗೆಟೀವ್ ಬಂದಿದ್ದರೂ ನವಜಾತ ಶಿಶುವಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಘಟನೆ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವರದಿಯಾಗಿದ್ದು, ಭ್ರೂಣದಲ್ಲಿ ಕೋವಿಡ್-19 ಸೋಂಕು ತಗುಲಿರುವ ವಿಶ್ವದ ಮೊದಲ ಪ್ರಕರಣ ಇದು ಎಂದು ಹೇಳಿದ್ದಾರೆ

• ಪ್ರಸ್ತುತ ರಾಜಸ್ತಾನದ ಮುಖ್ಯಮಂತ್ರಿ : ಅಶೋಕ್ ಗೆಹ್ಲೊಟ್.

Friday 10 July 2020

•► ಐಎಎಸ್ (UPSC) ಪರೀಕ್ಷೆ ತಯಾರಿಗಾಗಿ ದಿನನಿತ್ಯ ಓದಲು ಮಾದರಿಯಾಗಿ ಉತ್ತಮ ವೇಳಾಪಟ್ಟಿ. (the best model time table for IAS (upsc) exam preparation / the best schedule to prepare for the upsc exams)

•► ಐಎಎಸ್ (UPSC) ಪರೀಕ್ಷೆ ತಯಾರಿಗಾಗಿ ದಿನನಿತ್ಯ ಓದಲು ಮಾದರಿಯಾಗಿ ಉತ್ತಮ ವೇಳಾಪಟ್ಟಿ.
(the best model time table for IAS (upsc) exam  preparation / the best schedule to prepare for the upsc exams)

━━━━━━━━━━━━━━━━━━━━━/━━━━━━━━━━━━━━━━━━━━━
★ ಐಎಎಸ್ ಪರೀಕ್ಷೆ ತಯಾರಿ
(IAS Exam preparation)


ಕೆಲವು ಯುಪಿಎಸ್‌ಸಿ ಆಕಾಂಕ್ಷಿಗಳು ದಿನನಿತ್ಯ ಓದಲು ಉತ್ತಮ ವೇಳಾಪಟ್ಟಿ ಹಾಕಿಕೊಳ್ಳುವಲ್ಲಿ ಎಡುವುತ್ತಾರೆ. ಅಂತಹ ಅಭ್ಯರ್ಥಿಗಳಿಗೆ ಯಾವ ಸಬ್ಜೆಕ್ಟ್‌ ಯಾವಾಗ ಓದಬೇಕು, ಎಷ್ಟು ದಿನಕ್ಕೆ ಮುಗಿಸಬೇಕು, ಬರವಣಿಗೆ ಅಭ್ಯಾಸ ಮಾಡಲು ಸಮಯ ಹೇಗೆ ರೂಢಿಸಿಕೊಳ್ಳಬೇಕು? ಪರೀಕ್ಷಾ ದಿನಾಂಕದೊಳಗೆ ಪಠ್ಯಕ್ರಮ ಮುಗಿಸುವುದು ಹೇಗೆ? ಎಂಬ ಹಲವು ಗೊಂದಲಗಳು ಇರುತ್ತವೆ. ಈ ಎಲ್ಲಾ ಸಮಸ್ಯೆಗಳಿಗೆ ಇರುವ ಒಂದೇ ಪರಿಹಾರ ಎಂದರೆ ಉತ್ತಮ ವೇಳಾಪಟ್ಟಿ ಹಾಕಿಕೊಂಡು ಓದುವುದು.

ಅಭ್ಯರ್ಥಿಗಳು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ, ಅಗತ್ಯಕ್ಕೆ ತಕ್ಕಂತೆ ವೇಳಾಪಟ್ಟಿ ಹಾಕಿಕೊಂಡು ಓದಬಹುದು. ಆದರೆ ಉತ್ತಮ ವೇಳಾಪಟ್ಟಿಗಾಗಿ ಬಯಸುವವರಿಗೆ ಮಾದರಿಯಾಗಿ ಇಲ್ಲಿ ಒಂದು ವೇಳಾಪಟ್ಟಿಯನ್ನು ನೀಡಲಾಗಿದೆ. ಅಭ್ಯರ್ಥಿಗಳಿಗೆ ಇಚ್ಛಿಸಿದಲ್ಲಿ ಈ ಟೈಮ್‌ ಟೇಬಲ್‌ ಅನ್ನು ಫಾಲೋ ಮಾಡಬಹುದು.

• ಯುಪಿಎಸ್‌ಸಿ ತಯಾರಿಗೆ ವೇಳಾಪಟ್ಟಿ
━━━━━━━━━━━━━━━━━
1. ರೌಂಡ್‌ - 1 : ಬೆಳಿಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ದಿನಪತ್ರಿಕೆಗಳು ಮತ್ತು ಯಾವುದಾದರೂ ಒಂದು ಸಬ್ಜೆಕ್ಟ್ ಓದುವುದು

ನಂತರ 10 ರಿಂದ 20 ನಿಮಿಷ ಬ್ರೇಕ್‌ ತೆಗೆದುಕೊಳ್ಳಿ.

2. ರೌಂಡ್‌ - 2: ಬೆಳಿಗ್ಗೆ 11-20 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಓದುವುದು.

ಸ್ವಲ್ಪ ಸಮಯ ಮಧ್ಯಾಹ್ನದ ಊಟಕ್ಕೆ ಮತ್ತು ಫನ್‌ ಆಕ್ಟಿವಿಟಿಗಳಿಗಾಗಿ ಬ್ರೇಕ್‌ ತೆಗೆದುಕೊಳ್ಳಿ.

3. ರೌಂಡ್‌ - 3 : ಮಧ್ಯಾಹ್ನ 03 ಗಂಟೆಯಿಂದ ಸಂಜೆ 06 ಗಂಟೆವರೆಗೆ ಓದುವುದು.


ಸ್ವಲ್ಪ ಸಮಯ ವಾಕ್‌ ಮತ್ತು ವರ್ಕೌಟ್‌ ಮಾಡಿ.


4. ರೌಂಡ್‌ - 4 : ಸಂಜೆ 07 ರಿಂದ ರಾತ್ರಿ 10 ರವರೆಗೆ ಓದುವುದು.

ನಂತರ ಊಟಕ್ಕೆ ಬ್ರೇಕ್‌ ತೆಗೆದುಕೊಳ್ಳಿ.


ಕೊನೆಯ ರೌಂಡ್‌ ಆಗಿ ರಾತ್ರಿ 10-30 ರಿಂದ 12 ಅಥವಾ 12-30 ರವರೆಗೆ ಪ್ರಚಲಿತ ವಿದ್ಯಮಾನಗಳ ಕಡೆ ಗಮನಹರಿಸಬಹುದು. ಅಥವಾ Rajya Sabha Tv ಯಲ್ಲಿ ಚರ್ಚೆ ನೋಡಬಹುದು ಅಥವಾ ಇತರೆ ಏನಾದರೂ ಓದಬಹುದು.



• ವಿಶೇಷ ಗಮನಕ್ಕಾಗಿ
━━━━━━━━━
ಪ್ರಿಲಿಮ್ಸ್‌ ಮತ್ತು ಮುಖ್ಯ ಪರೀಕ್ಷೆ ದಿನಾಂಕಗಳ ನಡುವೆ ಕಡಿಮೆ ಅವಧಿ ಇದ್ದಾಗ 3 ರಿಂದ 4 ಗಂಟೆಗಳ ಕಾಲ ಮುಖ್ಯ ಪರೀಕ್ಷೆಗೆ ಸಮಯ ನೀಡುವುದು ಉತ್ತಮ. ಇದರಿಂದ ತಯಾರಿಯಲ್ಲಿ ಉತ್ತಮ ಬ್ಯಾಲೆನ್ಸ್‌ ಸಾಧ್ಯ.

ಹೆಚ್ಚು ಕೂತು ಓದುವುದರಿಂದ ಫನ್‌, ವರ್ಕೌಂಟ್‌, ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು, ನಿಯಮಿತ ಆಹಾರ ಮತ್ತು ನೀರು ಎಲ್ಲವುಗಳ ಕಡೆ ಗಮನ ಹರಿಸಬೇಕು.



• 2020 UPSC ಪರೀಕ್ಷೆ ಪಾಸ್‌ಗೆ ಮೊದಲ ಬಾರಿ ಪರೀಕ್ಷೆ ಬರೆಯುವವರ ಅಧ್ಯಯನ ಹೇಗಿರಬೇಕು? ━━━━━━━━━━━━━━━━━━━━━━━━━━━━━━━━━━━━━━━━━━

NCERT ಬೇಸಿಕ್ ಪುಸ್ತಕಗಳನ್ನು ಪದೇ ಪದೇ ಓದಿ ಯಾವುದೇ ಮಾಹಿತಿಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಿ. ಬೇಸಿಕ್ ಕಾನ್‌ಸೆಪ್ಟ್‌ ಮತ್ತು ಸ್ಟ್ಯಾಂಡರ್ಡ್‌ ಬುಕ್‌ಗಳನ್ನು ಮೊದಲು ಓದುವುದನ್ನು ಮರೆಯಬೇಡಿ.

ದಿನನಿತ್ಯ ಮರೆಯದಂತೆ, ಲೇಜಿನೆಸ್‌ ತೋರಿಸದೇ ದಿನಪತ್ರಿಕೆಗಳನ್ನು ಫಾಲೋ ಮಾಡಬೇಕು. ರಾಷ್ಟ್ರೀಯ ಪತ್ರಿಕೆಗಳಾದ ಟೈಮ್ಸ್‌ ಆಫ್ ಇಂಡಿಯಾ, ದಿ ಹಿಂದು ಪತ್ರಿಕೆಗಳನ್ನು ಓದುವುದು ಸೂಕ್ತ. ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಹ ಪ್ರಚಲಿತ ಘಟನೆಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.

ದಿನನಿತ್ಯ ವೆಬ್‌ಸೈಟ್‌ಗಳಾದ Insightonindia, forumias, iasbaba ಕ್ಕೆ ಭೇಟಿ ನೀಡಿ. ಇಲ್ಲಿ ಡೈಲಿ ಬೇಸಿಸ್ ಪ್ರಶ್ನೆಗಳು ಮತ್ತು ಉತ್ತರಗಳು, ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿಯಬಹುದು. ಯುಪಿಎಸ್‌ಸಿ ಗೆ ಅನುಕೂಲವಾಗುವಂತೆ ನಿಮ್ಮ ಅಭಿಪ್ರಾಯಗಳನ್ನು ಅವಲೋಕನ ಮಾಡಿ.

ಮುಖ್ಯ ಪರೀಕ್ಷೆಗಾಗಿ ಐಚ್ಛಿಕ ವಿಷಯವನ್ನು ಡಿಸೈಡ್ ಮಾಡಿ. ಇದು ನಿಮ್ಮ ಪದವಿ ಹಂತದ ವಿಷಯವೇ ಆಗಿದ್ದರೆ ಮತ್ತೊಮ್ಮೆ ಸಂಪೂರ್ಣ ಪಠ್ಯಕ್ರಮವನ್ನು ಓದಿರಿ. ಕಾಲೇಜು ಗ್ರಂಥಾಲಯ ಮತ್ತು ನಿಮ್ಮ ಪದವಿ ಪ್ರೊಫೆಸರ್‌ಗಳ ಸಹಾಯ ಪಡೆದು ಇನ್ನಷ್ಟು ಆ ವಿಷಯದ ಬಗ್ಗೆ ಮಾಹಿತಿ ಕಲೆಹಾಕಿ. ಹಿಂದಿನ ಐದು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಗೆಹರಿಸಿ.

ಮೊದಲಿಗೆ ಪಠ್ಯಕ್ರಮದ ಎಲ್ಲಾ ವಿಭಾಗಗಳನ್ನು ಪೂರ್ಣವಾಗಿ ಓದಿಕೊಳ್ಳಬೇಕು. ಅದಕ್ಕಾಗಿ ನಿರ್ಧಿಷ್ಟ ಸಮಯವನ್ನು ನೀಡಿ, ನಿಗದಿತ ಸಮಯದೊಳಗೆ ಓದಿ ಮುಗಿಸಿ. ಸಿಲ್ಲಾಬಸ್ ಪ್ರಕಾರ ಒಮ್ಮೆ ಓದಿ ಮುಗಿಸಿದ ನಂತರ, ದಿನನಿತ್ಯ ಒಂದು ಅಥವಾ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಮೇಲೆ ತಿಳಿಸಿದ ವೆಬ್‌ಸೈಟ್‌ಗಳಲ್ಲಿ ದಿನನಿತ್ಯ ಕ್ವಿಜ್‌ ಅಟೆಂಡ್‌ ಮಾಡಿರಿ. ಪೂರ್ವ ಪರೀಕ್ಷೆಗೂ ಅತ್ಯುತ್ತಮ ತಯಾರಿ ನಡೆಸಬಹುದು.

ಸಿವಿಲ್ ಸೇವೆ ಪರೀಕ್ಷೆಗೆ ಓದುವವರು ಯುಪಿಎಸ್‌ಸಿ ಪಠ್ಯಕ್ರಮವನ್ನು ಮತ್ತು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಮುಖ್ಯವಾಗಿ ಸದಾ ನಿಮ್ಮ ಓದುವ ಟೇಬಲ್‌ ಮೇಲೆ ಇಟ್ಟು ಕೊಂಡಿರಿ. ಸಿದ್ಧತೆ ಇವುಗಳ ಸುತ್ತವೇ ಹೆಚ್ಚು ಸುತ್ತುತ್ತಿರಬೇಕು.

ದೈನಂದಿನ ವೇಳಾಪಟ್ಟಿಯನ್ನು ತಪ್ಪದೇ ಅಂದೇ ಪೂರ್ಣಗೊಳಿಸಿ.

ಈ ಮೇಲಿನ ತಂತ್ರಗಳು ಉಪಯೋಗವಾಗಬಹುದು.
(Courtesy : ವಿಜಯ ಕರ್ನಾಟಕ)

Thursday 9 July 2020

•► ️ಜುಲೈ 09 ರ (09 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 09 July 2020)

•► ️ಜುಲೈ 09 ರ (09 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  09 July 2020)

━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)


• ಕೇಂದ್ರ ಸಚಿವಾಲಯದಿಂದ ರಾಜ್ಯದ ಅನ್ನಪೂರ್ಣಗೆ ಅತ್ಯುತ್ತಮ ಆಶಾ ಕಾರ್ಯಕರ್ತೆ ಬಿರುದು.
- ಶಿವಮೊಗ್ಗದ ತುಂಗಾನಗರ ಪಿಹೆಚ್ಸಿ ವ್ಯಾಪ್ತಿಯ ಟಿಪ್ಪುನಗರ ಬಲಭಾಗದ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಅನ್ನಪೂರ್ಣ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.

• ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ : ಜಿ.ಸಿ.ಮರ್ಮು.

• ಪ್ರಧಾನಿ ನರೇಂದ್ರ ಮೋದಿ ಅವರಿಂದ ಇಂದು ಭಾರತದ ಅತಿದೊಡ್ಡ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಒಂದಾದ 'ಇಂಡಿಯಾ ಗ್ಲೋಬಲ್ ವೀಕ್ 2020' ಕಾರ್ಯಕ್ರಮದ ಉದ್ಘಾಟನೆ.
- 30ಕ್ಕೂ ಹೆಚ್ಚು ರಾಷ್ಟ್ರಗಳ 5,000 ಪ್ರತಿನಿಧಿಗಳು ಭಾಗಿ.
- ಮೂರು ದಿನಗಳ ಈ ಕಾರ್ಯಕ್ರಮವನ್ನು 'ಇಂಡಿಯಾ ಇನ್‌ಕಾರ್ಪ್'ನಿಂದ ಆಯೋಜನೆ.
- 'ಬಿ ದಿ ರಿವೈವಲ್: ಇಂಡಿಯಾ ಅಂಡ್ ಎ ಬೆಟರ್ ನ್ಯೂ ವರ್ಲ್ಡ್' ಎಂಬ ವಿಷಯದ ಕುರಿತು ಹಲವು ಪ್ರಮುಖರು ಭಾಷಣ.

• ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ : ಟಿ.ಎಸ್. ನಾಗಾಭರಣ

• ತುಂಗಭದ್ರಾ ಜಲಾಶಯ ಇರುವುದು : ಶಿವಮೊಗ್ಗದಲ್ಲಿ.

• ಸದ್ಯಕ್ಕೆ ಭಾರತವು 6,844 ಉತ್ಪನ್ನಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ.

• ಜಾರಿ ನಿರ್ದೇಶನಾಲಯ(Enforcement Directorate - ED) ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆಯಾಗಿದ್ದು ಆರ್ಥಿಕ ಕಾನೂನುಗಳನ್ನು ಶಿಸ್ತು ಬದ್ಧವಾಗಿ ಜಾರಿಮಾಡುವ, ಹಾಗು ಅವು ಪಾಲನೆಯಲ್ಲಿರುವಂತೆ ನಿಗಾ ವಹಿಸುವ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತದೆ. ದೇಶದೊಳಗೆ ನಡೆಯುವ ಆರ್ಥಿಕ ಅಪರಾಧಗಳ ಮೇಲೂ ಕಣ್ಗಾವಲು ಇಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದ್ದು ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ವಿಭಾಗದ ಒಂದು ಪ್ರಮುಖ ಭಾಗವಾಗಿದೆ.
— ಜಾರಿ ನಿರ್ದೇಶನಾಲಯದ ಕೇಂದ್ರ ಕಛೇರಿ ನವದೆಹಲಿಯಲ್ಲಿದ್ದು ಜಾರಿ ನಿರ್ದೇಶಕರು ಇದರ ಮುಖ್ಯಸ್ಥರಾಗಿರುತ್ತಾರೆ.
— ಕೇಂದ್ರ ಕಛೇರಿ ಹೊರತು ಪಡಿಸಿ ಇತರ 10 ಪ್ರಾದೇಶಿಕ ಕಛೇರಿಗಳು ದೇಶದ ಪ್ರಮುಖ ನಗರಗಳಾದ Ahmedabad, Bangalore, Chandigarh, Chennai, Cochin, Delhi, Hyderabad, Kolkata, Lucknow ಮತ್ತು Mumbai ಗಳಲ್ಲಿವೆ. ಹಾಗೆಯೇ 11 ಪ್ರಾದೇಶಿಕ ಕಛೇರಿಗಳನ್ನು ಹೊಂದಿದೆ.
— ಇದರ ಪ್ರಸ್ತುತ ನಿರ್ದೇಶಕರು : ಸಂಜಯ್ ಕುಮಾರ್ ಮಿಶ್ರಾ.
— ಪ್ರಧಾನ ವಿಶೇಷ ನಿರ್ದೇಶಕರು :
ಸಿಮಾಂಚಲಾ ದಾಶ್.


• ಪ್ರಸ್ತುತ ಜಾರ್ಖಂಡ್ ದೇಶದ ಮುಖ್ಯಮಂತ್ರಿ  :  ಹೇಮಂತ್ ಸೊರೇನ್

• ಆಂಥ್ರಾಕ್ಸ್‌ ಕಾಯಿಲೆಗೆ ಕಾರಣವಾಗುವ ವೈರಾಣು :  ಬ್ಯಾಕ್ಟೇರಿಯಮ್‌ ಬ್ಯಾಸಿಲ್ಲಸ್‌ ಆಂಥ್ರಾಸಿಸ್‌

• ಯುನೈಟೆಡ್ ನೇಶನ್ಸ್ ನ ನ್ಯಾಯಾಂಗದ ಅಂಗ ಸಂಸ್ಥೆಯಾದ ಅಂತರರಾಷ್ಟ್ರೀಯ ನ್ಯಾಯಾಲಯ (ICJ-International Court of Justice) ದ ಕೇಂದ್ರ ಕಚೇರಿ : ನೆದರ್ ಲ್ಯಾಂಡ್ ನ ಹೇಗ್
- ಪ್ರಸ್ತುತ ಇದರ ಅಧ್ಯಕ್ಷರು : ನ್ಯಾಯಮೂರ್ತಿ ಅಬ್ದುಲ್‌ಕ್ವಾರಿ ಅಹ್ಮದ್ ಯುಸುಫ್

• ಗಾಂಬಿಯಾ, ಇದು ಪಶ್ಚಿಮ ಆಫ್ರಿಕಾದ ಚಿಕ್ಕ ದೇಶ.
ಇದರ ರಾಜಧಾನಿ : ಬಂಜುಲ್.

• ಸೂಪಾ ಮತ್ತು ಕದ್ರಾ ಜಲಾಶಯಗಳು ಕಾಳಿ ನದಿಗೆ ಸಂಬಂಧಿಸಿವೆ.

•  ನೇತ್ರಾವತಿ ನದಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವುದು.

• (ಎಂಸಿಎಲ್‌ಆರ್‌ - ಮಾರ್ಜಿನಲ್‌ ಕಾಸ್ಟ್‌ ಲೆಂಡಿಂಗ್‌ ರೇಟ್‌ ) — ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ  ಬಡ್ಡಿ ದರ.
- ಬಡ್ಡಿ ದರವನ್ನು ಲೆಕ್ಕಾಚಾರ ಮಾಡುವ ಹೊಸ ವಿಧಾನ

• ಇಥಿಯೋಪಿಯಾ ದೇಶ (ಉತ್ತರ ಆಫ್ರಿಕಾದಲ್ಲಿದೆ) ದ ರಾಜಧಾನಿ : ಅಡ್ಡಿಸ್ ಅಬಾಬಾ.
— ಇತ್ತೀಚೆಗೆ ಇಲ್ಲಿನ 'ಓರೊಮೊ ಜನಾಂಗ'ದ ಜನಪ್ರಿಯ ಗಾಯಕ 'ಹಚ್ಚಲು ಹುಂಡೆಸ್ಸಾ'ನ ಹತ್ಯೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ, 239 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದು, ಇಡೀ ಇಥಿಯೋಪಿಯಾ ಜನಾಂಗೀಯ ದಳ್ಳುರಿಯಲ್ಲಿ ಬೇಯುತ್ತಿದೆ.
— ಇದೇ ಇಥಿಯೋಪಿಯಾದ ಪ್ರಧಾನಿ ಅಬಿ ಅಹಮದ್‌(43 ವರ್ಷ) ಅವರಿಗೆ ಎರಿಟ್ರಿಯಾ ಜೊತೆಗೆ ದೇಶ ಸುದೀರ್ಘ ಕಾಲದಿಂದ ಹೊಂದಿದ್ದ ಗಡಿ ಬಿಕ್ಕಟ್ಟನ್ನು ಯಶಸ್ವಿಯಾಗಿ ಬಗೆಹರಿಸಿ ಶಾಂತಿ ನೆಲೆಸಲು ಕೈಗೊಂಡ ಕ್ರಮಗಳಿಗಾಗಿ 2019ನೇ ಸಾಲಿನ ‘ನೊಬೆಲ್ ಶಾಂತಿ ಪ್ರಶಸ್ತಿ’ ನೀಡಲಾಗಿತ್ತು.

• ಹಾರಂಗಿ ಜಲಾಶಯ ಇರುವುದು : ಕೊಡಗು ಜಿಲ್ಲೆಯಲ್ಲಿ .

• ಶರಾವತಿ ಕಣಿವೆಯಲ್ಲಿ ಜೋಗ ಜಲಪಾತ ಇರುವುದು.
- ಜಲಪಾತದ ಪ್ರಮುಖ 4 ಕವಲುಗಳು : ರಾಜಾ, ರೋರರ್, ರಾಕೆಟ್, ರಾಣಿ ಜಲಪಾತಗಳು

• ರಾಜ್ಯ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳನ್ವಯ ರಾಜ್ಯದಲ್ಲಿನ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಸಲುವಾಗಿ ದಿನಾಂಕ: 26-05-1993 ರಂದು ಅಸ್ತಿತ್ವಕ್ಕೆ ಬಂದಿರುತ್ತದೆ. ರಾಜ್ಯ ಚುನಾವಣಾ ಆಯೋಗವನ್ನು ಭಾರತ ಸಂವಿಧಾನದ ಅನುಷ್ಛೇದ 243 (ಕೆ) ಹಾಗೂ 243 (ಜೆಡ್‍ಎ) ರಡಿಯಲ್ಲಿ ರಚಿಸಲಾಗಿದೆ.
— ಪ್ರಸ್ತುತ ಇದರ ಆಯುಕ್ತರು : ಡಾ. ಬಿ. ಬಸವರಾಜು.


• ದಕ್ಷಿಣ ಏಷ್ಯಾದಲ್ಲಿರುವ ಇಂಡೋನೇಷ್ಯಾದ ರಾಜಧಾನಿ : ಜಕಾರ್ತಾ
- ಜಾವಾ ದ್ವೀಪವು ಇಲ್ಲಿರುವುದು.
- ಇದು ರಿಂಗ್‌ ಆಫ್‌ ಫೈರ್‌ನಲ್ಲಿ ಇರುವುದರಿಂದ ಹೆಚ್ಚಾಗಿ ಭೂ ಅಂತರಾಳದಲ್ಲಿ ಟೆಕ್ನೊಟ್ರಿಕ್‌ ಫಲಕಗಳು  ಒಂದಕ್ಕೊಂದು ಡಿಕ್ಕಿ ಹೊಡೆಯುವುದರಿಂದ ಅತಿ ಹೆಚ್ಚು ಭೂಕಂಪಗಳು ಇಲ್ಲಿ ಸಂಭವಿಸುತ್ತಿರುತ್ತವೆ.

• 2011ರ ಜನಗಣತಿ ಪ್ರಕಾರ, ದೇಶದಲ್ಲಿ 60 ವರ್ಷ ಮೇಲ್ಪಟ್ಟ ಜನರು ಶೇ.8ರಷ್ಟಿದ್ದಾರೆ.
- ಇತ್ತೀಚೆಗೆ ಐಆರ್‌ಡಿಎ (ವಿಮಾ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ) ಹೊರಡಿಸಿರುವ ಸುತ್ತೋಲೆಯಲ್ಲಿ ಕೋವಿಡ್‌ ಸಂಬಂಧಿ ವಿಮೆಯಿಂದ ಹಿರಿಯ ನಾಗರಿಕರನ್ನು ಹೊರಗಿಡಲಾಗಿದೆ


• ಭಾರತದಲ್ಲಿ ಫೆಬ್ರವರಿ 2021 ರ ವೇಳೆಗೆ ದಿನವೊಂದಕ್ಕೆ 2.87 ಲಕ್ಷ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗುವ ಸಂಭವವಿದೆ ಎಂದು ಅಮೆರಿಕ ಮೂಲದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಶೋಧಕರು ಎಚ್ಚರಿಸಿದ್ದಾರೆ.

- ಸಾಂಕ್ರಾಮಿಕ ರೋಗ ಪ್ರಸರಣದ ಹರಡುವಿಕೆಯ ಅಂದಾಜು ಮಾಡಲು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಬಳಕೆ ಮಾಡುವ ಪ್ರಮಾಣಿತ ಗಣಿತ ಮಾದರಿ SEIR (Susceptible, Exposed, Infectious, Recovered) ಯನ್ನು ಬಳಕೆ ಮಾಡಿಕೊಂಡು ಸಂಶೋಧಕರು ಈ ವರದಿ ಪ್ರಕಟಿಸಿದ್ದಾರೆ.

- ರೋಗ ಪ್ರಸರಣದ ಏರಿಕೆಗೆ ಸಂಶೋಧಕರು ಮೂರು ಸಂದರ್ಭಗಳನ್ನು ಪರಿಗಣಿಸಿದ್ದಾರೆ.
1. ಈಗಿನ ಸೋಂಕು ಟೆಸ್ಟಿಂಗ್ ರೇಟ್ ಹಾಗೂ ಅದರ ಪ್ರತಿಕ್ರಿಯೆ
2. ಜುಲೈ.1, 2020 ರ ವೇಳೆಗೆ ಟೆಸ್ಟಿಂಗ್ ಪ್ರಮಾಣವನ್ನು ಶೇ.01 ರಷ್ಟು ಏರಿಕೆ ಮಾಡಿದರೆ...
3. ಟೆಸ್ಟಿಂಗ್ ನಲ್ಲಿ ಯಥಾಸ್ಥಿತಿ ಇದ್ದು ಓರ್ವ ಮನುಷ್ಯ 8 ಜನರಿಗೆ ಸೋಂಕು ಹರಡಿದರೆ ಏನಾಗಬಹುದು ಎಂಬುದರ ಲೆಕ್ಕಾಚಾರವನ್ನೂ ಸಂಶೋಧಕರು ಅಂದಾಜಿಸಿದ್ದಾರೆ.


• 24 ಕ್ಯಾರೆಟ್ ಚಿನ್ನ ಬಳಸಿ, ನಿರ್ಮಿಸಿರುವ ವಿಶ್ವದ ಮೊದಲ ಹೋಟೆಲ್ : ಡಾಲ್ಸ್ ಹನೋಯಿ ಗೋಲ್ಡನ್ ಲೇಕ್.
- ವಿಯೆಟ್ನಾಂ ರಾಜಧಾನಿ ಕೇಂದ್ರ ಭಾಗದಲ್ಲಿ, ಜಿಯಾಂಗ್ ವೋ ಲೇಕ್ ಪ್ರದೇಶದಲ್ಲಿ ಈ ಹೋಟೆಲ್ ಇದೆ.
- 24 ಅಂತಸ್ತಿನ, 400 ಕೊಠಡಿಗಳಿವೆ.

•► ️ಕೆಎಎಸ್ (ಪ್ರಿಲಿಮ್ಸ್‌ ಪೇಪರ್) ಪೂರ್ವಭಾವಿ ಪರೀಕ್ಷೆ ಪತ್ರಿಕೆ -2 ಗೆ ಹೇಗೆ ತಯಾರಿ ನಡೆಸಬೇಕು? (How to Prepare for KAS Prelims Paper 2 Exam)

 •► ️ಕೆಎಎಸ್ (ಪ್ರಿಲಿಮ್ಸ್‌ ಪೇಪರ್) ಪೂರ್ವಭಾವಿ ಪರೀಕ್ಷೆ ಪತ್ರಿಕೆ -2 ಗೆ ಹೇಗೆ ತಯಾರಿ ನಡೆಸಬೇಕು?
(How to Prepare for KAS Prelims Paper 2 Exam)

━━━━━━━━━━━━━━━━━━━━━

★ ಕೆಎಎಸ್  ಪೂರ್ವಭಾವಿ ಪರೀಕ್ಷೆ
(KAS Preliminary Exam)


ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಗಳ ನೇಮಕಕ್ಕೆ ಕೆಎಎಸ್  ಪೂರ್ವಭಾವಿ ಪರೀಕ್ಷೆ ನಡೆಸುವುದು.

ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮವನ್ನು ಅಧಿಸೂಚನೆಯಲ್ಲಿಯೇ ನೀಡಲಾಗಿದೆ. ಇದನ್ನು ನೋಡಿಕೊಂಡು ಸೂಕ್ತ ಪುಸ್ತಕವನ್ನು ಆಯ್ಕೆ ಮಾಡಿಕೊಂಡೇ ಪರೀಕ್ಷೆಗೆ ಓದಿ. ಯಾವುದೇ ವಿಷಯವನ್ನು ಓದಿಕೊಳ್ಳುವ ಮೊದಲು ಇದು ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಬಗ್ಗೆ ಹೆಚ್ಚು ಸ್ಪಷ್ಟತೆ ಅವಶ್ಯವಿದ್ದಲ್ಲಿ ಈ ಹಿಂದೆ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗಮನಿಸಿ. ಋುಣಾತ್ಮಕ ಮೌಲ್ಯಮಾಪನ ಸ್ಫರ್ಧಾತ್ಮಕ ಪರೀಕ್ಷೆಯ ಅವಿಭಾಜ್ಯ ಅಂಗವಾಗಿರುವುದರಿಂದ ಈ ಬಗ್ಗೆ ಆತಂಕ ಬೇಡ. ಆದರೆ ಎಚ್ಚರಿಕೆ ಇರಲಿ. ಉತ್ತರವನ್ನು ಬ್ಲೈಂಡ್‌ ಆಗಿ ಗೆಸ್‌ ಮಾಡುವ ಅನಿವಾರ್ಯತೆಯನ್ನು ನೀವೇ ಸೃಷ್ಟಿಸಿಕೊಳ್ಳಬೇಡಿ.


• ಕೆಎಎಸ್‌ ಪ್ರಿಲಿಮ್ಸ್‌ ಪೇಪರ್-2 ಪರೀಕ್ಷೆ ವಿಶ್ಲೇಷಣೆ :
━━━━━━━━━━━━━━━━━━━━━
1) ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು: ಈ ವಿಷಯಕ್ಕೆ ಸಂಬಂಧ ಪಟ್ಟಂತೆ 40 ಪ್ರಶ್ನೆಗಳು ಇರುತ್ತವೆ. ಇದರಲ್ಲಿದೇಶ-ದೇಶಗಳ ಮಧ್ಯದಲ್ಲಿನ ದ್ವಿಪಕ್ಷೀಯ ಒಪ್ಪಂದ, ಗಡಿವಿವಾದಗಳು, ಅಂತರಾಷ್ಟ್ರೀಯ ಸಮ್ಮೇಳನ, ವಿಶ್ವಸಂಸ್ಥೆಯ ಸುದ್ದಿಗಳು, ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳು, ಕ್ರೀಡೆ ಹಾಗೂ ಕ್ರೀಡಾಪಟುಗಳ ಸಾಧನೆ, ದೇಶಗಳ ಆರ್ಥಿಕ ಸುದ್ದಿಗಳು, ಆವಿಷ್ಕಾರಗಳು ಪ್ರಮುಖ ರಾಜಕೀಯ ಸುದ್ದಿಗಳು ಇವೇ ಮುಂತಾದವುಗಳನ್ನು ಒಳಗೊಂಡಿರುತ್ತದೆ.

2) ವಿಜ್ಞಾನ ಮತ್ತು ತಂತ್ರಜ್ಞಾನ :
ಈ ವಿಭಾಗದಲ್ಲಿಜೀವಶಾಸ್ತ್ರ, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರದೊಂದಿಗೆ ತಂತ್ರಜ್ಞಾನದ ಬೆಳವಣಿಗೆ ಮತ್ತು ಪರಿಣಾಮಗಳನ್ನು ನೋಡಬೇಕು.

ಕರ್ನಾಟಕ ಹಾಗೂ ಭಾರತದಲ್ಲಿನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ, ಡಿಜಿಟಲ್‌ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಇವುಗಳ ಕೊಡುಗೆ ಹಾಗೂ ಅವುಗಳಿಗೆ ಸಂಬಂಧಪಟ್ಟ ಸಂಸ್ಥೆಗಳನ್ನು ನೋಡಬೇಕು. ಅಲ್ಲದೆ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಸರಕಾರದ ನೀತಿಗಳು ಹಾಗೂ ಕಾರ್ಯಕ್ರಮಗಳನ್ನು ಓದಬೇಕು.

3) ಪರಿಸರ ಅಧ್ಯಯನ :
ಇತ್ತೀಚಿನ ದಿನಗಳಲ್ಲಿಜಗತ್ತಿಗೆ ಕಾಡುತ್ತಿರುವ ಮುಖ್ಯ ಸಮಸ್ಯೆ. ಪರಿಸರ ಸಮಸ್ಯೆಯಾಗಿದೆ. ನಾಳೆ ಅಧಿಕಾರಿಯಾದವನಿಗೆ ಪರಿಸರ ಪರಿಚಯ ಇರಬೇಕೆಂಬ ಕಾರಣಕ್ಕಾಗಿ ಪರಿಸರ ಅಧ್ಯಯನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಇಲ್ಲಿಪರಿಸರ ವ್ಯವಸ್ಥೆ, ನೈಸರ್ಗಿಕಸಂಪನ್ಮೂಲಗಳು, ಜೀವ ವೈವಿಧ್ಯ ಮತ್ತು ಅದರ ಸಂರಕ್ಷಣೆ, ಪರಿಸರ ಮಾಲಿನ್ಯ ಹವಾಗುಣದ ಬದಲಾವಣೆ, ಪರಿಸರಕ್ಕೆ ಸಂಬಂಧಪಟ್ಟ ಕಾಯ್ದೆಗಳು ಹಾಗೂ ಸಂಸ್ಥೆಗಳನ್ನು ಓದಬೇಕು.

4) ದತ್ತಾಂಶಗಳನ್ನು ವಿಶ್ಲೇಷಣೆ :
ಈ ವಿಭಾಗದಲ್ಲಿವರ್ಗೀಕರಣ ಹಾಗೂ ತಾಲೀಕರಣ, ಚಿತ್ರ ಹಾಗೂ ಆಲೇಖ ನಿರೂಪಣೆ, ಕೇಂದ್ರೀಯ ಪ್ರವೃತ್ತಿಯ ಮಾಪನಗಳು, ಸೂಚ್ಯಾಂಕಗಳು, ಜಾಬ್‌ ಚಾರ್ಟ್‌, ಪೈ ಚಾರ್ಟ್‌, ಟೇಬಲ್‌ ಚಾರ್ಟ್‌, ಲೈನ್‌ ಚಾರ್ಟ್‌ ಇವೇ ಮುಂತಾದವುಗಳ ಮೇಲೆ ಪ್ರಶ್ನೆ ಕೇಳಲಾಗುತ್ತದೆ. ಹೈಸ್ಕೂಲ್‌ ಹಾಗೂ ಪಿಯುಸಿಯಲ್ಲಿಇರುವ ಸಂಖ್ಯಾಶಾಸ್ತ್ರ ಆಧಾರವಾಗಿಟ್ಟುಕೊಂಡು ತಯಾರಿ ಮಾಡಿಕೊಳ್ಳಬೇಕು.

5) ಸಮಾನ್ಯ ಮೆಂಟಲ್‌ ಎಬಿಲಿಟಿ :
ರಕ್ತ ಸಂಬಂಧ, ಕೋಡಿಂಗ್‌-ಡಿ-ಕೋಡಿಂಗ್‌ ಸಂಬಂಧಗಳ ಕೋಡಿಂಗ್‌, ದಿಕ್ಕುಗಳು, ಪಜಲ್‌ ಟೆಸ್ಟ್‌, ಸರಣಿಗಳು, ವೆನ್‌ ರೇಖಾಚಿತ್ರಗಳು, ವರ್ಗೀಕರಣ ಇವುಗಳನ್ನು ಓದಬೇಕು.

6) ಸಾಮಾನ್ಯ ಗಣಿತ :
ಸಂಭವನೀಯತೆ, ಕೆಲಸ ಮತ್ತು ಸಮಯ, ವಯಸ್ಸಿನ ಸಮಸ್ಯೆಗಳು, ಪ್ರತಿಶತ, ಸರಾಸರಿ ಪಾಲುಗಾರಿಕೆ, ಸರಳ ಮತ್ತು ಚಕ್ರಬಡ್ಡಿ, ಕಾಲ ಮತ್ತು ಸಮಯ, ಅನುಪಾತ, ರೈಲ್ವೆ, ಗಡಿಯಾರ ಸಮಸ್ಯೆಗಳು, ಕ್ಷೇತ್ರಫಲ ಇವು ಕೂಡಾ ಹೈಸ್ಕೂಲ್‌ ಮಟ್ಟದ ಪ್ರಶ್ನೆಗಳು ಇರುತ್ತವೆ.


7) ತಾರ್ಕಿಕ ವಿವೇಚನೆ ಕಾರಣೀಕರಿಸುವಿಕೆ :
ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಗಮನ ಹರಿಸುವದಿಲ್ಲ. ಕಾರಣ ಈ ವಿಷಯದಿಂದ ಪ್ರಶ್ನೆಗಳು ಬರುವದಿಲ್ಲಎಂಬ ಭಾವನೆ ಇರುವದು. ಪೂರ್ವಭಾವಿ ಪರೀಕ್ಷೆಗೆ ಈ ವಿಷಯವು ಮೂಖ್ಯವಾಗಿದೆ.

- ಇದರಲ್ಲಿಬರುವ ಅಂಶಗಳೆಂದರೆ;

*ಹೇಳಿಕೆ ಮತ್ತು ಊಹೆಗಳು

*ಹೇಳಿಕೆ ಮತ್ತು ತೀರ್ಮಾನಗಳು

*ವಾದ ಮತ್ತು ಪ್ರತಿವಾದಗಳು

*ಹೇಳಿಕೆಯನ್ನು ವಿಶ್ಲೇಷಣೆ ಮಾಡುವದು

*ತೀರ್ಮಾನ ಕೈಗೊಳ್ಳುವಿಕೆ

*ಅರ್ಥಗ್ರಹಿಸುವುದು (ಓದಿನ ಗ್ರಹಿಕೆ)

*ಪ್ರತಿಪಾದನೆ ಮತ್ತು ಕಾರಣ

*ಕ್ರಿಯೆ ಮತ್ತು ಪ್ರತಿಕ್ರಿಯೆ


• ಪತ್ರಿಕೆ -2ಕ್ಕೆ ಸಂಬಂಧಪಟ್ಟ ಅಧ್ಯಯನದ ತಂತ್ರಗಳು
━━━━━━━━━━━━━━━━━━━━━

1) 2019 ಜನವರಿಯಿಂದ ಪೂರ್ವಭಾವಿ ಪರೀಕ್ಷೆ ದಿನಾಂಕದವರಿಗೆ ಅಂತತರಾಷ್ಟ್ರೀಯ ಮಟ್ಟದಲ್ಲಿ ನಡೆದ ಘಟನೆಗಳನ್ನು ಸಮಗ್ರವಾಗಿ ಓದಬೇಕು.

2) ಭಾರತ ಸರಕಾರ ಪ್ರಕಟಿಸಿದ India 2020 ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು ಈ ಪುಸ್ತಕದಲ್ಲಿವಿಜ್ಞಾನ, ತಂತ್ರಜ್ಞಾನ, ಪರಿಸರಕ್ಕೆ ಸಂಬಂಧಪಟ್ಟ ಸರಕಾರದ ನೀತಿ ಹಾಗೂ ಕಾರ್ಯಕ್ರಮಗಳ ಪರಿಚಯ ಇರುತ್ತದೆ. ಭಾರತ ಸರಕಾರ ಪ್ರಕಟಿಸುವ ಸೈನ್ಸ್‌ ರಿಪೋರ್ಟರ್‌ ಪತ್ರಿಕೆಯಲ್ಲಿಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನ ಸುದ್ದಿಗಳು ಇರುತ್ತವೆ.

3) ಕರ್ನಾಟಕ ಆರ್ಥಿಕ ಸಮೀಕ್ಷೆ ಎಂಬುದು ಹಿಂದಿನ ಆರ್ಥಿಕ ವರ್ಷದಲ್ಲಿ ನಡೆದ ಕರ್ನಾಟಕ ಸರ್ಕಾರದ ಎಲ್ಲ ಇಲಾಖೆಗಳ, ಎಲ್ಲ ಕಾರ್ಯಕ್ರಮಗಳ ವಿಸ್ತೃತ ವಾರ್ಷಿಕ ವರದಿಯಾಗಿದೆ. ಈ ಸಮೀಕ್ಷೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಶ್ನೆಗಳು ಬರುವ ಸಾಧ್ಯತೆಗಳು ಇರುತ್ತದೆ.

4) ಮೆಂಟಲ ಎಬಿಲಿಟಿ, ಗಣಿತ ಹಾಗೂ ದತ್ತಾಂಶಗಳ ವಿಶ್ಲೇಷಣೆ ಸಂಬಂಧಪಟ್ಟಂತೆ ಪ್ರತಿನಿತ್ಯ ಅವುಗಳನ್ನು ಪ್ರ್ಯಾಕ್ಟಿಸ್‌ ಮಾಡಬೇಕು. ಪ್ರ್ಯಾಕ್ಟಿಸ್‌ ಇದ್ದಾಗ ಮಾತ್ರ ವೇಗವಾಗಿ ಬಿಡಿಸಲು ಸಾಧ್ಯ ಹಾಗೂ ಕೆಎಎಸ್‌ ಮತ್ತು ಐಎಎಸ್‌ ಪರೀಕ್ಷೆಯಲ್ಲಿಈ ಹಿಂದೆ ಕೇಳಿದ ಪ್ರಶ್ನೆಗಳನ್ನು ಬಿಡಸಬೇಕು.

5) ಪರಿಸರ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಸಿದ್ದಾಂತಗಳ ಮೇಲಿನ ಪ್ರಶ್ನೆಗಳಿಗಿಂತ ಪ್ರಚಲಿತ ಆಧಾರಿತ ಪ್ರಶ್ನೆಗಳು ಇರುತ್ತವೆ. ಅದಕ್ಕಾಗಿ ಕಳೆದ ಒಂದು ವರ್ಷದಿಂದ ಪರಿಸರಕ್ಕೆ ಸಂಬಂಧಪಟ್ಟಂತೆ ವಿಶ್ವದಲ್ಲಿಯಾವ ಯಾವ ಚರ್ಚೆಗಳು ನಡೆದಿವೆ ಅವುಗಳನ್ನು ನೋಡಬೇಕು.

ಈ ಬಾರಿಯ ಪರೀಕ್ಷೆ ತಯಾರಿ ಮಾಡುವವರಲ್ಲಿಒಂದು ಪ್ರಶ್ನೆ ಕಾಡಲು ಆರಂಭಿಸಿದೆ. 'ಹುದ್ದೆಗಳು ಕಡಿಮೆ ಇವೆ, ನನಗೆ ಸಿಗುತ್ತದೆಯೋ...ಇಲ್ಲವೋ' ಎಂದು. ಅಲ್ಲದೆ, ಕಳೆದ ವರ್ಷ ಮುಖ್ಯ ಪರೀಕ್ಷೆ ಬರೆದವರು ಹಾಗೂ ಸಂದರ್ಶನಕ್ಕೆ ಹೋಗಿ ಬಂದವರು ಕೂಡ ಈ ಬಾರಿ ಮತ್ತೆ ಪರೀಕ್ಷೆ ಬರೆಯುತ್ತಿರುತ್ತಾರೆ. ಅವರ ನಡುವೆ, ನಾನು ಗೆಲ್ಲಬಲ್ಲೆನೇ? ಎಂದು. ಹೀಗೆ ಯೋಚನೆ ಮಾಡಿ, ಈ ಬಾರಿ ಅರ್ಜಿ ಸಲ್ಲಿಸಲು ಹೋಗದೇ ಇರುವವರನ್ನೂ ನಾವು ಕಾಣಬಹುದು.

ಹುದ್ದೆಗಳನ್ನು ನೋಡಿ ಸ್ಪರ್ಧೆ ಮಾಡುವವನು ನಿಜವಾದ ಸ್ಪರ್ಧಿ ಅಲ್ಲ. ಎಷ್ಟೇ ಹುದ್ದೆಗಳು ಇರಲಿ ನಾನು ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ಗಟ್ಟಿ ನಿರ್ಧಾರ ಮಾಡಿ ಹೆಜ್ಜೆ ಹಾಕುವವನು ಮಾತ್ರ ಯಶಸ್ವಿಯಾಗುತ್ತಾನೆ.

ದೃಢ ನಿರ್ಧಾರದ ಮನಷ್ಯನು ಒಮ್ಮೆ ನಿರ್ಧರಿಸಿದ ಮೇಲೆ ಎಂದೂ ಅದನ್ನು ಬದಲಿಸುವದಿಲ್ಲ. ಅಂತವರು ಮಾತ್ರ ಯಶಸ್ವಿಯಾಗುತ್ತಾರೆ. ಬಸ್‌ಸ್ಟ್ಯಾಂಡಿನಲ್ಲಿ ನಿಂತು ಎಲ್ಲಾ ಬಸ್‌ಗಳನ್ನು ನೋಡುತ್ತಾ ಸಮಯ ಕಳೆಯುವ ಬದಲು ನಿಮಗೆ ಯಾವ ಬಸ್‌ಗೆ ಹೋಗಬೇಕೋ ಅದನ್ನು ಮಾತ್ರ ಗಮನಿಸಿ. ಇಲ್ಲದಿದ್ದರೆ ಬಸ್‌ಗಳನ್ನು ಬದಲಾಯಿಸುತ್ತಾ ಬಸ್‌ಸ್ಟ್ಯಾಂಡಿನಲ್ಲಿ ಜೀವನ ಕಳೆಯಬೇಕಾಗುತ್ತದೆ.

Wednesday 8 July 2020

•► ️KAS, IAS ಮುಖ್ಯ ಪರೀಕ್ಷೆಗಳಲ್ಲಿ ಕೈ ಬರವಣಿಗೆಯ ಮಹತ್ವ : (importance of handwriting for KAS, IAS Mains Exams)

•► ️KAS, IAS ಮುಖ್ಯ ಪರೀಕ್ಷೆಗಳಲ್ಲಿ ಕೈ ಬರವಣಿಗೆಯ ಮಹತ್ವ :
(importance of handwriting for KAS, IAS Mains Exams)

━━━━━━━━━━━━━━━━━━━━━

★ ಕೆಎಎಸ್ & ಐಎಎಸ್ ಮುಖ್ಯ ಪರೀಕ್ಷೆ ತಯಾರಿ
(IAS & KAS Main Exam Preparation)

★ ಸಾಮಾನ್ಯ ಅಧ್ಯಯನ
(General Studies)


ಬರವಣಿಗೆಯು ಕಲಿಕೆಯ ಮುಖ್ಯವಾದ ಭಾಗ. ಓದುವುದರ ಜೊತೆಜೊತೆಗೆ ಜ್ಞಾನಾಭಿವೃದ್ಧಿಗೆ ಬರವಣಿಗೆ ಕೂಡ ಬಹಳ ಮಹತ್ವವನ್ನು ಹೊಂದುತ್ತದೆ. ಕೇವಲ ಓದುವುದರಿಂದ ಜ್ಞಾನ ಹೆಚ್ಚಾಗುವುದಿಲ್ಲ. ಬದಲಿಗೆ, ಓದಿದ್ದನ್ನು ನಮ್ಮ ಸ್ವಂತ ಪದಗಳಲ್ಲಿಅಭಿವ್ಯಕ್ತಗೊಳಿಸುವುದರಿಂದ ಮಾತ್ರ ಆಳವಾಗಿ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ನಾಗರಿಕ ಸೇವಾ ಪರೀಕ್ಷೆ, ಗ್ಯಾಜೆಟೆಡ್‌ ಪೊ›ಬೇಷನರಿ ಪರೀಕ್ಷೆ, ಫಾರೆಸ್ಟ್‌ ಸರ್ವಿಸ್‌ ಇತ್ಯಾದಿ ಪರೀಕ್ಷೆಗಳ ಮುಖ್ಯ ಪತ್ರಿಕೆಗಳಲ್ಲಿ ವಿಸ್ತೃತ ರೂಪದ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಮಾರು 1750 ಅಂಕಗಳಿಗೆ ಏಳು ಪತ್ರಿಕೆಗಳನ್ನು ಹಾಗು 600 ಅಂಕಗಳಿಗೆ ಎರಡು ಕಡ್ಡಾಯ ಭಾಷಾ ಪತ್ರಿಕೆಗಳನ್ನು ವಿಸ್ತೃತ ರೂಪದ ಮಾದರಿಯಲ್ಲಿ ಕೇಳಲಾಗಿರುತ್ತದೆ. ಈ ಪತ್ರಿಕೆಗಳಲ್ಲಿ ಪ್ರಶ್ನೆಗಳನ್ನು 50 ಪದಗಳಿಂದ ಹಿಡಿದು 250 ಪದಗಳಿಗೆ ಮೀರದಂತೆ ಬರೆಯಲು ಕೇಳಲಾಗುತ್ತದೆ. ಪ್ರಬಂಧದ ಪತ್ರಿಕೆಯನ್ನು ಸುಮಾರು 2500-3000 ಪದಗಳಿಗೆ ಮೀರದಂತೆ ಬರೆಯಲು ಕೇಳುವುದು ಸಹಜ.

ಈ ಎಲ್ಲಅಂಶಗಳನ್ನು ಗಮನಿಸಿದಾಗ ನಮಗೆ ತಿಳಿಯುವುದೇನೆಂದರೆ, ಬರವಣಿಗೆ ಕೌಶಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಫಲತೆಯಲ್ಲಿನಿರ್ಣಾಯಕ ಪಾತ್ರವನ್ನು ಹೊಂದುತ್ತದೆ ಎಂಬುದು. ಹಾಗಾಗಿ ಅಭ್ಯರ್ಥಿಗಳು ಇದರ ಬಗ್ಗೆ ವಿಶೇಷವಾದ ಗಮನವನ್ನು ನೀಡುವುದು ಒಳಿತು.

ಎಷ್ಟೋ ಬಾರಿ ಪರೀಕ್ಷೆ ಬರೆದ ಅಭ್ಯರ್ಥಿಗಳು, ನಾನು ಎಲ್ಲಪ್ರಶ್ನೆಗಳಿಗೆ ಉತ್ತರಿಸಿದ್ದೆ. ಆದರೆ ಅಂಕಗಳೇ ಸಿಕ್ಕಿಲ್ಲಅಥವಾ ನಾನು ಬಹಳ ಕಷ್ಟಪಟ್ಟು ಬರೆದಿದ್ದೆ. ಕೇಳಿದ್ದಕ್ಕಿಂತ ಹೆಚ್ಚಾಗಿಯೇ ಉತ್ತರಗಳನ್ನು ಬರೆದಿದ್ದೆ. ಆದರೂ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ. ಪರೀಕ್ಷಾ ವ್ಯವಸ್ಥೆಯೇ ಸರಿಯಿಲ್ಲವೆಂದು ಕೊರಗುವುದನ್ನು ನಾವು ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ, ಅಭ್ಯರ್ಥಿಗಳು ಬೇರೆಯವರನ್ನು ಅಥವಾ ಪರೀಕ್ಷಾ ವ್ಯವಸ್ಥೆಯನ್ನು ದೂಷಿಸುವುದಕ್ಕೂ ಮುಂಚಿತವಾಗಿ, ತಮಗೆ ತಾವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಜವಾಗಿಯೂ ತಾನು ಪ್ರಶ್ನೆಯ ನಿರೀಕ್ಷೆಯಂತೆ ಉತ್ತರಗಳನ್ನು ಬರೆದಿದ್ದೇನೆಯೇ ಇಲ್ಲವೆ ಎಂಬುದನ್ನು ಕಂಡುಕೊಂಡು, ಮುಂದಿನ ಪರೀಕ್ಷೆಯಲ್ಲಿತಪ್ಪುಗಳು ಮರುಕಳಿಸದಂತೆ, ಯೋಚನೆ ಮಾಡಿ ಉತ್ತರಗಳನ್ನು ಬರೆಯಬೇಕು.

• ಉತ್ತರಿಸುವುದಕ್ಕೂ ಮುಂಚೆ ಗಮನಿಸಬೇಕಾದ ಮುಖ್ಯ ಅಂಶಗಳು.
━━━━━━━━━━━━━━━━━━━━━
 ಪರೀಕ್ಷೆಯಲ್ಲಿಉತ್ತಮ ಬರವಣಿಗೆಯನ್ನು ಅಭ್ಯಾಸ ಮಾಡಿಕೊಳ್ಳಲು ಮುಖ್ಯವಾಗಿ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲನೆಯದು, ಪ್ರಶ್ನೆಯನ್ನು ಸರಿಯಾಗಿ ಓದಿಕೊಂಡು ಅರ್ಥಮಾಡಿಕೊಳ್ಳುವುದು ಹಾಗೂ ಎರಡನೆಯದು, ಕೇಳಿರುವ ಪದಗಳ ಮಿತಿಯನ್ನು ಮೀರದಂತೆ ಉತ್ತರಗಳನ್ನು ಬರೆಯುವುದು.

ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಉತ್ತರಗಳನ್ನು ಬರೆದರೆ ಪ್ರಯೋಜನವಿಲ್ಲ. ಪ್ರತಿಯೊಂದು ಪ್ರಶ್ನೆಯು ಒಂದು ನಿರ್ದಿಷ್ಟವಾದ ಕೀ-ಪದವನ್ನು ಹೊಂದಿರುತ್ತದೆ. ಉದಾಹರಣೆಗೆ: ವಿಮರ್ಶಿಸಿ, ಟಿಪ್ಪಣಿ ಬರೆಯಿರಿ, ವಿಶ್ಲೇಷಿಸಿ, ಚರ್ಚಿಸಿ, ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಇತ್ಯಾದಿ. ಈ ಕೀ-ಪದಗಳು ಬಹಳ ಮುಖ್ಯವಾದವುಗಳು. ಇವುಗಳ ಅರ್ಥವನ್ನು ಅಭ್ಯರ್ಥಿಗಳು ಚೆನ್ನಾಗಿ ತಿಳಿದುಕೊಂಡಿರಬೇಕು. ಏಕೆಂದರೆ, ಪ್ರತಿಯೊಂದು ಕೀ-ಪದವು ಕೂಡ ಒಂದು ನಿರ್ದಿಷ್ಟವಾದ ಉತ್ತರವನ್ನು ಅಪೇಕ್ಷಿಸುತ್ತದೆ.

• ಕೆಳಗಿನ ಪ್ರಶ್ನೆಯನ್ನು ಗಮನಿಸಿ;
━━━━━━━━━━━━━
ಜಾಗತೀಕರಣದಿಂದ ಭಾರತದ ಕೃಷಿ ಚಟುವಟಿಕೆಯಲ್ಲಿನ ಆದಾಯವು ಕಳೆದ ದಶಕದಲ್ಲಿಗಣನೀಯವಾಗಿ ಕುಂಠಿತವಾಗಿದೆ. ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. ಈ ಮೇಲಿನ ಪ್ರಶ್ನೆಯನ್ನು ಉತ್ತರಿಸುವಾಗ, ಅಭ್ಯರ್ಥಿಗಳು, ಕಳೆದ ದಶಕದಲ್ಲಿಜಾಗತೀಕರಣದ ಪ್ರಭಾವದಿಂದ ಕೃಷಿ ಆದಾಯ ಕುಂಠಿತವಾಗಿದೆಯೇ ಎಂಬುದನ್ನು ಅಂಕಿ-ಅಂಶಗಳೊಂದಿಗೆ ವಿಶ್ಲೇಷಿಸಬೇಕು. ಅದರ ಬದಲಾಗಿ ಕೇವಲ ಜಾಗತೀಕರಣದ ಬಗೆಗೆ ಅಥವಾ ಭಾರತದ ಕೃಷಿ ಚಟುವಟಿಕೆಯಲ್ಲಿನ ಏರಿಳಿತಗಳ ಬಗೆಗೆ ವಿವರಿಸಿದರೆ ಸಾಲದು.

ಈ ರೀತಿಯ ಪ್ರಶ್ನೆಗಳನ್ನು ಉತ್ತರಿಸಬೇಕಾದರೆ ಅಭ್ಯರ್ಥಿಗಳು ಸಾಕಷ್ಟು ತಯಾರಿಯನ್ನು ನಡೆಸಿರಬೇಕು. ಪರೀಕ್ಷೆಗೂ ಮುಂಚಿತವಾಗಿ ಬೇರೆ ಬೇರೆ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ತಜ್ಞರಿಂದ ಸಲಹೆಯನ್ನು ಪಡೆಯಬೇಕು. ತಮ್ಮದೇ ಒಂದು ಸ್ಟಡಿ ಗ್ರೂಪ್‌ಗಳನ್ನು ನಿರ್ಮಿಸಿಕೊಂಡು ಅಲ್ಲಿಬೇರೆ ಆಕಾಂಕ್ಷಿಗಳ ಜೊತೆಗೆ ಚರ್ಚಿಸಬೇಕು. ಹೀಗೆ ಮಾಡುವುದರಿಂದ ಮಾತ್ರ ತಮ್ಮ ಬರವಣಿಗೆಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಸತತ ಪರಿಶ್ರಮ ಹಾಗು ಪ್ರಯತ್ನದಿಂದ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ.


• ಬರೆಯುವಾಗ ಗಮನಿಸಿ
━━━━━━━━━━━━━
*ಕೈಬರಹ ನಿಮ್ಮ ವ್ಯಕ್ತಿವನ್ನು ಬಿಂಬಿಸುತ್ತಿರುತ್ತದೆ. ಹೀಗಾಗಿ ಅಂದವಾದ ಬರವಣಿಗೆಗೆ ಆದ್ಯತೆ ನೀಡಿ.

* ಡಿಜಿಟಲ್‌ನ ಈ ಯುಗದಲ್ಲಿಕೈ ಬರಹಕ್ಕೆ ಮಹತ್ವವಿಲ್ಲಎಂದು ನೀವು ಅತ್ತ ಗಮನ ನೀಡದಿದ್ದರೆ ಇದು ನಿಮ್ಮ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿರುತ್ತದೆ.

* ಬರೆದು ಕಲಿತಿದ್ದು ಹೆಚ್ಚು ದಿನ ನಿಮ್ಮ ನೆನಪಿನಲ್ಲಿರುತ್ತದೆ. ಬರವಣಿಗೆಯು ಶಬ್ದ ಸಂಪತ್ತನ್ನು ಹೆಚ್ಚಿಸುತ್ತದೆ. ದೋಷಗಳಿಲ್ಲದೆ ಬರೆಯುವುದು ಬರೆದು ಕಲಿಯುವುದರಿಂದ ಸಾಧ್ಯವಾಗುತ್ತದೆ.

* ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ಆ ವಿಷಯದ ಬಗ್ಗೆ ಆಸಕ್ತಿ ಹೊಂದಲು ಬರವಣಿಗೆ ನೆರವಾಗುತ್ತದೆ.

* ಬರೆಯುವುದರಿಂದ ಮೆದುಳಿನ ಗ್ರಹಣ ಶಕ್ತಿ ಹೆಚ್ಚುತ್ತದೆ. ಏಕಾಗ್ರತೆ ಮೂಡುತ್ತದೆ.

* ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಬರೆದು ಕಲಿತಿದ್ದು,ಮುಂದೆ ಉದ್ಯೋಗ ಜೀವನದ ಒಂದಲ್ಲಾಒಂದು ಸಂದರ್ಭದಲ್ಲಿಉಪಯೋಗಕ್ಕೆ ಬಂದೇ ಬರುತ್ತದೆ.

* ಬರೆಯುವುದು ಎಂದರೆ ಗೀಚುವುದಲ್ಲ, ಮುತ್ತಿನ ಸಾಲುಗಳಂತೆ ಅಕ್ಷರವನ್ನು ಪೋಣಿಸುವುದು. ನಿಮ್ಮ ಬರವಣಿಗೆ ಅಂದವಾಗಿದ್ದರೆ, ಓದುವವರ ಖುಷಿ ಹೆಚ್ಚುತ್ತದೆ.

* ಸರಳ ಶಬ್ದಗಳಲ್ಲಿನಿಮ್ಮ ಅಭಿಪ್ರಾಯವನ್ನು ಹೇಳುವುದನ್ನು ಕಲಿಯಿರಿ. ಇದರಿಂದ ಪರೀಕ್ಷೆಯಲ್ಲಿಯಶಸ್ಸು ಗ್ಯಾರಂಟಿ.

(Courtesy : ವಿಜಯ ಕರ್ನಾಟಕ)

•► ️ಜುಲೈ 07 & 08 ರ (07 & 08 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 07 & 08 July 2020)

•► ️ಜುಲೈ 07 & 08 ರ (07 & 08 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  07 & 08 July 2020)

━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)



• ಇತ್ತೀಚೆಗೆ ಚಳಿಗಾಲದಲ್ಲಿ ಭಾರತದ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಅನುಕೂಲವಾಗಲೆಂದು 'ವಿಂಟರ್‌–ಗ್ರೇಡ್‌ ಡೀಸೆಲ್‌' ಎಂಬ ವಿಶೇಷ ತೈಲವನ್ನು  ಬಿಡುಗಡೆ ಮಾಡಿದವರು : ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ)
— ಮೈನಸ್‌ (–) 33 ಡಿಗ್ರಿ ಸೆಲ್ಸಿಯಸ್‌ನಷ್ಟು ಶೀತಮಯ ವಾತಾವರಣದಲ್ಲೂ ಬಳಕೆಗೆ ಅನುವಾಗುತ್ತದೆ.
— ಪ್ರಸ್ತುತ IOC ಯ ಅಧ್ಯಕ್ಷರು: ಸಂಜೀವ್ ಸಿಂಗ್
— ಪ್ರಧಾನ ಕಚೇರಿ: ನವದೆಹಲಿ

• ಪ್ರಸ್ತುತ ಕೇಂದ್ರ ವಿಜ್ಞಾನ ಕೈಗಾರಿಕೆಗಳ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶಕರು : ಡಾ.ಶೇಖರ್ ಮಂಡೆ

• ''ನೆಟ್‌ ಜೀರೊ' ಯೋಜನೆ' —ಸಾರ್ವಜನಿಕ ಸಾರಿಗೆ ನೆಟ್‌ವರ್ಕ್ ಅನ್ನು ಇಂಗಾಲ ಮುಕ್ತಗೊಳಿಸಲು ನಿರ್ಧರಿಸಿ ರೂಪಿಸಿರುವ ಕೇಂದ್ರ ಸರ್ಕಾರದ ಯೋಜನೆ.

• ಪ್ರಸ್ತುತ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ(ಎಎಫ್ಐ) ಅಧ್ಯಕ್ಷ : ಅದಿಲ್ಲೆ ಸುಮಾರಿವಲ್ಲಾ.

• 25 ವರ್ಷಗಳ ಸುಧೀರ್ಘ ಸೇವೆಯ ನಂತರ ರಾಷ್ಟ್ರೀಯ ಅಥ್ಲೆಟಿಕ್ಸ್ ಮುಖ್ಯ ಕೋಚ್ ಹುದ್ದೆಗೆ  ರಾಜೀನಾಮೆ ಸಲ್ಲಿಸಿದ ಬಹದ್ದೂರ್ ಸಿಂಗ್.

• ಕೊಬ್ಬರಿ ಎಣ್ಣೆಯನ್ನು ಸುಮಾರು 4,000 ವರ್ಷಗಳ ಹಿಂದಿನಿಂದಲೂ ಆಯುರ್ವೇದ ಔಷಧವಾಗಿ ಗುರುತಿಸಲಾಗಿದೆ. ಕೊಬ್ಬರಿ ಎಣ್ಣೆಯನ್ನು ಸೇವಿಸಿದಾಗ ಅಥವಾ ಮೈಗೆ ಹಚ್ಚಿದಾದ ಅದು 'ಲಾರಿಕ್‌ ಆಸಿಡ್‌' ಅನ್ನು ಬಿಡುಗಡೆ ಮಾಡುತ್ತದೆ. ವೈರಸ್‌, ಬ್ಯಾಕ್ಟೀರಿಯಾ, ಅಥವಾ ಫಂಗಸ್‌ನತಂಹ ಕ್ರಿಮಿಗಳನ್ನು ಲಾರಿಕ್‌ ಆಸಿಡ್‌ ಕೊಲ್ಲಬಲ್ಲದು.
- ಲಾರಿಕ್‌ ಆಸಿಡ್‌ — ಸ್ಯಾಚುರೇಟೆಡ್‌ ಕೊಬ್ಬಿನಾಂಶದ ರೂಪ.

• ರೈಲ್ವೆ ಓವರ್‌ಹೆಡ್‌ ಲೈನ್‌ಗಳಿಗೆ ನೇರವಾಗಿ ವಿದ್ಯುತ್ ಸರಬರಾಜು ಮಾಡಲು ಭಾರತೀಯ ರೈಲ್ವೆಯು ಮಧ್ಯಪ್ರದೇಶದ ಬೈನಾದಲ್ಲಿ ಸೌರಶಕ್ತಿ ಸ್ಥಾವರವನ್ನು ಸ್ಥಾಪಿಸಿದ್ದು, ವಿಶ್ವದಲ್ಲಿ ಈ ರೀತಿಯ ಯೋಜನೆ ಕೈಗೊಂಡಿರುವ ದೇಶಗಳಲ್ಲಿ ಭಾರತ ಪ್ರಥಮವಾಗಿದೆ.
- ವಿದ್ಯುತ್ ಲೋಕೊಮೋಟಿವ್ ವ್ಯವಸ್ಥೆಯ ಮೂಲಕ ಸಂಚರಿಸುವ ರೈಲುಗಳಿಗೆ ಸೌರಶಕ್ತಿಯ ಮೂಲಕ ನೇರವಾಗಿ ಓವರ್‌ಹೆಡ್ ಲೈನ್‌ಗಳಿಗೆ ವಿದ್ಯುತ್ ಸರಬರಾಜು ಮಾಡುವ ಯೋಜನೆ.
- ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿಎಚ್‌ಇಎಲ್‌) ಸಹಯೋಗದಲ್ಲಿ ಭಾರತೀಯ ರೈಲ್ವೆಯು ಮಧ್ಯಪ್ರದೇಶದ ಬೈನಾ ಟ್ರ್ಯಾಕ್ಷನ್ ಉಪ ಕೇಂದ್ರದಲ್ಲಿ 1.7 ಮೆಗಾ ವಾಟ್ ಸೌರಶಕ್ತಿ ಸ್ಥಾವರವನ್ನು ಸ್ಥಾಪಿಸಿದೆ. ಈ ಸ್ಥಾವರವು ವಾರ್ಷಿಕವಾಗಿ 25 ಲಕ್ಷ ಯೂನಿಟ್ ವಿದ್ಯುತ್‌ ಉತ್ಪಾದಿಸುತ್ತದೆ.

• ಪ್ರಸ್ತುತ ಕೇರಳ ರಾಜ್ಯದ ಮುಖ್ಯಮಂತ್ರಿ : ಪಿಣರಾಯಿ ವಿಜಯನ್

• ಬ್ರಿಟನ್ ನ ಪ್ರಮುಖ ವಿಜ್ಞಾನಿ ಮತ್ತು ಪ್ರಸ್ತುತ ಬ್ರಿಟನ್ ನ  ರಾಯಲ್ ಸೊಸೈಟಿಯ ಅಧ್ಯಕ್ಷರೂ ಕೂಡ ಆಗಿರುವವರು, ಭಾರತ ಮೂಲದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ :  ವೆಂಕಟರಮಣನ್ ರಾಮಕೃಷ್ಣನ್

• ಇತ್ತೀಚೆಗೆ ಭೂತಾನ್ ಗಡಿಯಲ್ಲಿರುವ 'ಸಕ್ತೆಂಗ್ (Sakteng)‌ ಅಭಯಾರಣ್ಯ'ಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭೂತಾನ್ ದೇಶಗಳ ನಡುವೆ ಭೂಗಡಿ ವಿವಾದ ಹುಟ್ಟಿಕೊಂಡಿದೆ.
- ಈ ಅಭಯಾರಣ್ಯವು ಅರುಣಾಚಲ ಪ್ರದೇಶದೊಂದಿಗೆ ಗಡಿ ಹಂಚಿಕೊಳ್ಳುತ್ತದೆ.‌

• ಇತ್ತೀಚೆಗೆ ಅಮೆಚೂರ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ—The International Boxing Association) ನೂತನವಾಗಿ ಬಿಡುಗಡೆ ಮಾಡಿದ ವಿಶ್ವ Ranking ನ 52 ಕೆ. ಜಿ ವಿಭಾಗದಲ್ಲಿ ಭಾರತದ  ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು ವಿಶ್ವ ಚಾಂಪಿಯನ್ ಷಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಾಲ್ ಅಗ್ರಸ್ಥಾನ ಅಲಂಕರಿಸಿದ್ದಾರೆ.
• ಎಐಬಿಎ ಯ ಕೇಂದ್ರ ಕಚೇರಿ — ಲೌಸನ್ನೆ, ಸ್ವಿಟ್ಜರ್ಲೆಂಡ್
• ಪ್ರಸ್ತುತ ಎಐಬಿಎ ಯ ಅಧ್ಯಕ್ಷರು : ಗಫರ್ ರಾಖಿಮೋವ್

• ಇಂದು ಕನ್ನಡ ನಾಡು-ನುಡಿಗಳಿಗಾಗಿ ಹೋರಾಡಿದ ಅಗ್ರಗಣ್ಯ ಸಾಹಿತಿ, ಪತ್ರಕರ್ತ, ಕನ್ನಡ ಸಾಹಿತ್ಯಲೋಕದ ಕಾದಂಬರಿ ಸಾರ್ವಭೌಮ, ಕಥೆಗಾರ, ನಾಟಕಕಾರ ಮತ್ತು ಸಂಪಾದಕರಾಗಿಯೂ ಪ್ರಸಿದ್ಧರಾಗಿದ್ದ ಅರಕಲಗೂಡು ನರಸಿಂಹರಾಯ ಕೃಷ್ಣರಾಯ (ಅ.ನ.ಕೃ) ರವರ ಪುಣ್ಯಸ್ಮರಣೆ


• ಅಂಡಮಾನ್ ನಿಕೋಬಾರ್ ಬಂಗಾಳ ಕೊಲ್ಲಿಯಲ್ಲಿದೆ.
-ಇದು ಭಾರತದ ದಕ್ಷಿಣದ ತುತ್ತತುದಿಯಾಗಿದ್ದು ಸುಮಾರು 8000 ಚದರ ಕಿಲೋಮೀಟರ್ ಹರಡಿದೆ.
- ದ್ವೀಪಸಮೂಹದ ರಾಜಧಾನಿ : ಪೋರ್ಟ್ ಬ್ಲೇರ್‌.
- ಅಂಡಮಾನ ಮತ್ತು ನಿಕೋಬಾರ್ ಗಳು ಎರಡು ಪ್ರತ್ಯೇಕ ದ್ವೀಪ ಸಮೂಹಗಳಾಗಿದ್ದು 10 ಡಿಗ್ರಿ ಉತ್ತರ ಅಕ್ಷಾಂಶದಿಂದ ಬೇರ್ಪಟ್ಟಿವೆ.
- ಪ್ರಪಂಚದ ಅತ್ಯಂತ ಪುರಾತನ ಜನಾಂಗಗಳಿಗೆ ಸೇರಿದ ಜಾರಾವಾಸ್, ಒಂಗೇಸ್ ಮತ್ತು ಸೆಂಟಿನಲೀಸ್ ಪಂಗಡದವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಕಂಡುಬರುತ್ತಾರೆ.
- ಏಷ್ಯಾದಲ್ಲಿ ಅತ್ಯುತ್ತಮ ಬೀಚ್‌ ಎಂದು ಹೆಸರಾಗಿರುವ ಹ್ಯಾವ್ಲಾಕ್‌ ದ್ವೀಪ ಇಲ್ಲಿದೆ.

• ಅಂಡಮಾನ್‌ ಮತ್ತು ನಿಕೋಬಾರ್‌ನ ಮೂರು ದ್ವೀಪಗಳಿಗೆ 2018ರಲ್ಲಿ ಮರು ನಾಮಕರಣ ಮಾಡಿದ್ದಾರೆ. - ರೋಸ್‌ ಐಲ್ಯಾಂಡ್‌ ದ್ವೀಪವನ್ನು ನೇತಾಜಿ ಸುಭಾಶ್ಚಂದ್ರ ಬೋಸ್‌ ದ್ವೀಪ,
- ನೀಲ್‌ ಐಲ್ಯಾಂಡ್‌ ಅನ್ನು ಶಹೀದ್‌ ದ್ವೀಪ, ಮತ್ತು ಹ್ಯಾವ್ಲಾಕ್‌ ದ್ವೀಪವನ್ನು ಸ್ವರಾಜ್‌ ದ್ವೀಪ ಎಂದು ಹೊಸ ಹೆಸರಿನಿಂದ ಕರೆದಿದ್ದಾರೆ.


• ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಆರೋಗ್ಯ ಸೇವೆಗಳ ಮುಖ್ಯಸ್ಥ : ಮೈಕ್‌ ರೇಯಾನ್‌

• ಪ್ರಸ್ತುತ ಬ್ರೆಜಿಲ್ ದೇಶದ ಅಧ್ಯಕ್ಷ : ಜೈರ್ ಬೋಲ್ಸನಾರೊ

• ಇತ್ತೀಚೆಗೆ ಕುವೈತ್‌ನಲ್ಲಿ ಕೆಲಸ ಮಾಡುವ ವಿದೇಶಿಯರ ಪ್ರಮಾಣಕ್ಕೆ ಕೋಟ ನಿಗದಿಮಾಡುವ ಕರಡು ಮಸೂದೆಗೆ ಅಲ್ಲಿನ ಸಂಸತ್‌ ಸಮಿತಿಯು ಒಪ್ಪಿಗೆ ಸೂಚಿಸಿದೆ.
- ಮಸೂದೆಯ ಪ್ರಕಾರ ಕುವೈತ್‌ನಲ್ಲಿ ಭಾರತೀಯರ ಸಂಖ್ಯೆಯು ಅಲ್ಲಿನ ಒಟ್ಟು ಜನಸಂಖ್ಯೆಯ ಶೇ 15ನ್ನು ಮೀರುವಂತಿಲ್ಲ. ಪ್ರಸಕ್ತ ಅಲ್ಲಿ ಭಾರತೀಯ ಮೂಲದವರ ಸಂಖ್ಯೆ 14.5 ಲಕ್ಷ ಇದೆ. ಈ ಕಾನೂನು ಜಾರಿಯಾದರೆ ಸುಮಾರು 8 ಲಕ್ಷ ಭಾರತೀಯರು ಅಲ್ಲಿಂದ ಹೊರಹೋಗಬೇಕಾಗುತ್ತದೆ.
- ಕುವೈತ್‌ನ ಪ್ರಸಕ್ತ ಜನಸಂಖ್ಯೆಯು 43 ಲಕ್ಷ. ಅದರಲ್ಲಿ 13 ಲಕ್ಷ ಸ್ಥಳೀಯರಾಗಿದ್ದು, 30 ಲಕ್ಷ ಮಂದಿ  ವಲಸಿಗರಾಗಿದ್ದಾರೆ.

- ಕುವೈತ್ ಏಷ್ಯಾ ಖಂಡದ ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿರುವ ಒಂದು ಸ್ವತಂತ್ರ ಅರಬ್ ದೇಶ.
- ಕುವೈತ್ ಎಂದರೆ ಅರಬಿಕ್ ಭಾಷೆಯಲ್ಲಿ ನೀರಿನ ಹತ್ತಿರ ಕಟ್ಟಿರುವ ಕೋಟೆ ಎಂದು ಅರ್ಥ.
- ತೈಲ ಉತ್ಪಾದನೆಯಲ್ಲಿ ಕುವೈತಿನದು ವಿಶ್ವದಲ್ಲಿ ನಾಲ್ಕನೆಯ ಸ್ಥಾನ. ರಫ್ತಿನಲ್ಲಿ ಎರಡನೆಯ ಸ್ಥಾನ.
- ಕುವೈತ್‍ನಲ್ಲಿ ವಿಶ್ವದಲ್ಲಿಯೇ ದೊಡ್ಡದಾದ ಸಮದ್ರಜಲಬಟ್ಟಿ ಇದೆ.

• ಕ್ರಿಕೆಟ್ ಜನಕರ ನಾಡು : ಇಂಗ್ಲೆಂಡ್

• ಪ್ರಸ್ತುತ ನೀತಿ ಆಯೋಗದ ಸಿಇಒ : ಅಮಿತಾಬ್ ಕಾಂತ್

• ಕೊರೋನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಬೆಂಬಲಕ್ಕೆ ನಿಂತಿದೆ ಎಂದು ಆರೋಪಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಅಧಿಕೃತವಾಗಿ ಡಬ್ಲ್ಯೂಹೆಚ್ಒ ಸಂಸ್ಥೆಯಿಂದ ಔಪಚಾರಿಕವಾಗಿ ಹೊರಗೆ ಬಂದಿದೆ.
- ಈ ಕುರಿತು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರಿಗೆ ಅಮೆರಿಕಾ ಮಾಹಿತಿ ರವಾನಿಸಿದ್ದು, ಜು.8 2021ರಿಂದ ಅಮೆರಿಕಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರಗುಳಿಯಲಿದೆ ಎಂದು ತಿಳಿಸಿದೆ

• ಪ್ರಸ್ತುತ ಭಾರ್ತಿ ಏರ್ಟೆಲ್ ನ ಸಿಎಂಒ : ಶಾಶ್ವತ್ ಶರ್ಮಾ

• ಮಂಗಳ ಗ್ರಹವನ್ನು ಸುತ್ತುವ ಎರಡು ಚಂದ್ರರು :  ಫೋಬೊಸ್ ಮತ್ತು ಡೀಮೋಸ್

Tuesday 7 July 2020

•► ️ ವಿಂಟರ್–ಗ್ರೇಡ್‌ ಡೀಸೆಲ್‌ : (Winter Diesel)

-•► ️ ವಿಂಟರ್–ಗ್ರೇಡ್‌ ಡೀಸೆಲ್‌ :
(Winter Diesel)
━━━━━━━━━━━━━━━━


★ ವಿಜ್ಞಾನ ಮತ್ತು ತಂತ್ರಜ್ಞಾನ
(Science & Technology)

★ ಪ್ರಚಲಿತ ಘಟನೆಗಳು.
(Current Affairs)


- ಲಡಾಖ್ ರೀತಿಯ ಎತ್ತರ ಪ್ರದೇಶಗಳು ಹಾಗೂ ಕಡಿಮೆ ಉಷ್ಣಾಂಶದ ಹೆಪ್ಪುಗಟ್ಟುವ ವಾತಾವರಣವಿರುವ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಸಾಮಾನ್ಯ ಡೀಸೆಲ್‌ ಬಳಕೆ ಅಸಾಧ್ಯವಾಗುತ್ತದೆ. ಅಂಥ ಸ್ಥಳಗಳಲ್ಲಿ ವಾಹನಗಳ ಸಂಚಾರಕ್ಕೆ ಅನುವಾಗುವ ನಿಟ್ಟಿನಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ‌) 2019ರಲ್ಲಿ ವಿಂಟರ್‌ ಡೀಸೆಲ್‌ ಪರಿಚಯಿಸಿತು.

- ಉಷ್ಣಾಂಶ ಕಡಿಮೆಯಾಗುತ್ತಿದ್ದಂತೆ ಡೀಸೆಲ್‌ ಸಹ ಹೆಪ್ಪುಗಟ್ಟುತ್ತದೆ. ವಿಂಟರ್‌ ಡೀಸೆಲ್‌ನಿಂದಾಗಿ ಲಡಾಖ್, ಕಾರ್ಗಿಲ್‌, ಕಾಜಾ ಹಾಗೂ ಕಿಲಾಂಗ್‌ ಪ್ರದೇಶಗಳಲ್ಲಿ ಚಳಿಗಾಲದಲ್ಲಿಯೂ ವಾಹನಗಳು ನಿಲ್ಲದೆ ಸಂಚರಿಸುತ್ತಿವೆ.

- ಚಳಿಗಾಲದಲ್ಲಿನ ಬಳಕೆಗಾಗಿಯೇ ತಯಾರಿಸಲಾಗಿರುವ ವಿಶೇಷ ತೈಲ ಮೈನಸ್‌ (–) 33 ಡಿಗ್ರಿ ಸೆಲ್ಸಿಯಸ್‌ನಷ್ಟು ಶೀತಮಯ ವಾತಾವರಣದಲ್ಲೂ ಬಳಕೆಗೆ ಅನುವಾಗುತ್ತದೆ.

- ವಿಂಟರ್‌ ಡೀಸೆಲ್‌ನಲ್ಲಿ ಅಡಿಟಿವ್ಸ್‌ (ಸಂಯೋಜಕಗಳು) ಕಡಿಮೆ ಜಿಗುಟುತನ ಮಟ್ಟವನ್ನು ಉಳಿಸಿಕೊಳ್ಳುತ್ತವೆ. ಇಂಧನ ದಹನ ಕ್ರಿಯೆಯ ವೇಗ ಅಧಿಕವಾಗಿರುತ್ತದೆ (ಸೀಟೇನ್‌ ರೇಟಿಂಗ್‌)  ಹಾಗೂ ಸಲ್ಫರ್‌ (ಗಂಧಕ) ಅಂಶ ಕಡಿಮೆ ಇರುವುದರಿಂದ ಇಂಧನ ಕ್ಷಮತೆ ಹೆಚ್ಚುತ್ತದೆ.

- ವಿಂಟರ್‌ ಡೀಸೆಲ್‌ ಬಳಕೆಗೂ ಮುನ್ನ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಡೀಸೆಲ್‌ ಜೊತೆಗೆ ಸೀಮೆಎಣ್ಣೆ (ಕೆರೊಸಿನ್‌) ಬೆರೆಸುವ ತಂತ್ರದ ಮೂಲಕ ಡೀಸೆಲ್‌ ಗಡ್ಡೆ ಕಟ್ಟದಂತೆ ಎಚ್ಚರ ವಹಿಸಲಾಗುತ್ತಿತ್ತು. ಇದರಿಂದಾಗಿ ವಾಯುಮಾಲಿನ್ಯ ಅತಿಯಾಗುತ್ತದೆ.

- ಭಾರತದ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಇದು ಪ್ರಮುಖ ಚಾಲನಾಶಕ್ತಿಯಾಗಿ ಬಳಕೆಯಾಗುತ್ತಿದೆ.
 ಗುಣಮಟ್ಟ ಆಶ್ವಾಸನೆ ನೀಡುವ ಭದ್ರತಾ ಪಡೆಗಳ ಮಹಾನಿರ್ದೇಶಾಲಯ (ಡಿಜಿಕ್ಯೂಎ) ಅನುಮತಿಯ ಮೇರೆಗೆ ಸೇನಾ ವಾಹನಗಳಿಗೆ ವಿಂಟರ್‌ ಬಳಕೆ ಮಾಡಲಾಗುತ್ತದೆ.


• ಪ್ರಸ್ತುತ ಸಶಸ್ತ್ರ ಪಡೆಗಳು ಬಳಸುತ್ತಿರುವ ತೈಲ :
━━━━━━━━━━━━━━━━━━━

ಐಒಸಿಎಲ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌, ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಕಂಪನಿಗಳು ದೇಶದ ಸಶಸ್ತ್ರ ಪಡೆಗಳಿಗೆ ಡೀಸೆಲ್‌ ಹೈ ಸಲ್ಫರ್‌ ಪೌರ್‌ ಪಾಯಿಂಟ್‌ (DHPP-W) ತೈಲ ಪೂರೈಸುತ್ತಿವೆ. ಈ ಗುಣಮಟ್ಟದ ಡೀಸೆಲ್‌ ಸಹ ಮೈನಸ್‌ (–) 30 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಉಷ್ಣಾಂಶದಲ್ಲಿಯೂ ವಾಹನ ಚಾಲನೆಗೆ ಸಹಕಾರಿಯಾಗಿರುತ್ತದೆ.

•► ️​ಖಲಿಸ್ತಾನ್‌ ಚಳವಳಿ (Khalistan Movement)

•► ️​ಖಲಿಸ್ತಾನ್‌ ಚಳವಳಿ
(Khalistan Movement)

━━━━━━━━━━━━━━━━━━━━━

★ ಆಧುನಿಕ ಭಾರತದ ಇತಿಹಾಸ
(Modern Indian History)


1940ರಲ್ಲೇ ಖಲಿಸ್ತಾನದ ಚಿಂತನೆಯ ಬೀಜಗಳು ಹುಟ್ಟಿಕೊಂಡಿದ್ದವು. ಸಿಖ್‌ರಿಗೊಂದು ಪ್ರತ್ಯೇಕ ದೇಶ ಬೇಕು ಎಂದು ಹಲವು ಸಿಕ್ಖರು ವಾದಿಸಿದರು.

ಈ ದೇಶದಲ್ಲಿಪಂಜಾಬ್‌ನ್ನು ಮುಖ್ಯವಾಗಿಟ್ಟುಕೊಂಡು, ಪಾಕಿಸ್ತಾನ, ಬಲೂಚಿಸ್ತಾನ, ಹಿಮಾಚಲ, ಹರ್ಯಾಣ, ಜಮ್ಮು- ಕಾಶ್ಮೀರದ ಕೆಲ ಭಾಗಗಳನ್ನು ಸೇರಿಸಿಕೊಂಡು ಪ್ರತ್ಯೇಕ ಖಲಿಸ್ತಾನ್‌ ರಚಿಸುವ ಚಿಂತನೆಯಿತ್ತು. ಕೆಲವು ಶ್ರೀಮಂತ ಹಾಗೂ ಪ್ರತ್ಯೇಕತಾವಾದಿ ಸಿಕ್ಖರ ಹಣಕಾಸು ಹಾಗೂ ಪಾಕಿಸ್ತಾನದ ಬೆಂಬಲದಿಂದ 1970-80ರದ ದಶಕದಲ್ಲಿಇದು ಉಗ್ರವಾಗಿ ಬೆಳೆಯಿತು.

1980ರಲ್ಲಿ ಜಗಜಿತ್‌ ಸಿಂಗ್‌ ಚೌಹಾಣ್‌ ಎಂಬಾತ ನ್ಯಾಷನಲ್‌ ಕೌನ್ಸಿಲ್‌ ಆಫ್‌ ಖಲಿಸ್ತಾನ್‌ ಎಂಬ ಸಂಘಟನೆ ಕಟ್ಟಿದ. ಬ್ರಿಟನ್‌ಗೆ ಹೋಗಿ ಅಲ್ಲಿಂದಲೇ ಖಲಿಸ್ತಾನ್‌ ರಚನೆಯನ್ನೂ ಘೋಷಿಸಿದ. ನಂತರ ಜರ್ನೈಲ್‌ ಸಿಂಗ್‌ ಭಿಂದ್ರಾನ್‌ವಾಲೆ ಎಂಬ ಮತಾಂಧ ಧಾರ್ಮಿಕ ಗುರು ಹುಟ್ಟಿಕೊಂಡು, ಉಗ್ರ 'ಖಾಲ್ಸಾ' ಪ್ರವೃತ್ತಿಯನ್ನು ಪ್ರೋತ್ಸಾಹಿಸಿದ. ಪ್ರತಿಯೊಬ್ಬ ಸಿಕ್ಖನೂ 32 ಹಿಂದೂಗಳನ್ನು ಕೊಲ್ಲಬೇಕೆಂದು ಕರೆನೀಡಿದ. ಈತನ ಕಾಲದಲ್ಲಿ ಪಂಜಾಬ್‌ನಲ್ಲಿ ಹಿಂಸೆ ತಾಡವವಾಡಿತು.

 1984ರ ಜೂನ್‌ನಲ್ಲಿಈತ ತನ್ನ ಸಂಗಡಿಗರ ಜೊತೆ ಅಮೃತಸರದ ಸ್ವರ್ಣಮಂದಿರದಲ್ಲಿ ನೆಲೆ ಹೂಡಿದ. ಈತನನ್ನು ಮಣಿಸಲು ಪ್ರಧಾನಿ ಇಂದಿರಾ ಗಾಂಧಿ 'ಆಪರೇಶನ್‌ ಬ್ಲೂಸ್ಟಾರ್‌' ನಡೆಸಿದರು. ಭಿಂದ್ರಾನ್‌ವಾಲೆ ಸೇರಿ ನೂರಾರು ಉಗ್ರರು, ಪೊಲೀಸರು ಸತ್ತರು. ಪರಿಣಾಮವಾಗಿ ಕೆರಳಿದ ಸಿಖ್‌ ಅಂಗರಕ್ಷಕರಿಂದ 1984ರಲ್ಲಿ ಪ್ರಧಾನಿ ಇಂದಿರಾ ಕಗ್ಗೊಲೆ, ಇದಕ್ಕೆ ಸೇಡು ಎಂಬಂತೆ ಸಿಖ್‌ ಹತ್ಯಾಕಾಂಡ ಎಲ್ಲವೂ ನಡೆದದ್ದು ಇತಿಹಾಸ. ನಂತರ ಈ ಚಳವಳಿ ತಣ್ಣಗಾಗುತ್ತ ಬಂತು. ಆದರೂ ಅದನ್ನು ಗಾಳಿ ಹಾಕಿ ಪ್ರಜ್ವಲಿಸುವಂತೆ ಮಾಡಲು ಪಾಕಿಸ್ತಾನ ಪ್ರಯತ್ನಿಸುತ್ತಲೇ ಇದೆ.

Monday 6 July 2020

•► ️ಜುಲೈ 06 ರ (06 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 06 July 2020)

•► ️ಜುಲೈ 06 ರ (06 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  06 July 2020)

━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)


• ಜುಲೈ 06 - ಇಂದು ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜಯಂತಿಯ ದಿನ.
— ಶ್ಯಾಮ ಪ್ರಸಾದ್‌ ಮುಖರ್ಜಿ ಅವರು ಜುಲೈ 6, 1901 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಬ್ರಿಟಿಷ್‌ ಆಡಳಿತದಲ್ಲಿ  ಬ್ಯಾರಿಸ್ಟರ್ ಆಗಿದ್ದರು. ರಾಜಕಾರಣಿ ಮತ್ತು ಶಿಕ್ಷಣ ತಜ್ಞರಾಗಿದ್ದ ಅವರು ಜವಾಹರಲಾಲ್ ನೆಹರೂ ಸಂಪುಟದಲ್ಲಿ ಕೈಗಾರಿಕೆ ಸಚಿವರಾಗಿದ್ದರು.

• ಪ್ರಸ್ತುತ ರಾಜ್ಯ ಮಾಹಿತಿ ಆಯುಕ್ತ : ಕೆ.ಇ. ಕುಮಾರಸ್ವಾಮಿ

• ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಬ್ಯಾಂಕ್‌ಗಳು ಹೆಚ್ಚಳಗೊಳ್ಳುವ ‘ಎನ್‌ಪಿಎ-(ವಸೂಲಾಗದ ಸಾಲದ ಪ್ರಮಾಣ)’ಗಾಗಿ ಭವಿಷ್ಯದಲ್ಲಿ ತೆಗೆದು ಇರಿಸಬೇಕಾದ ಮೊತ್ತವನ್ನೂ ಹೆಚ್ಚಿಸಬೇಕಾಗುತ್ತದೆ.


• ಪ್ರಸ್ತುತ ಭಾರತ-ಟಿಬೆಟಿಯನ್ ಗಡಿ ಭಾಗದ ಪೊಲೀಸ್ ಪಡೆ ಮುಖ್ಯಸ್ಥ : ಎಸ್ ಎಸ್ ದೆಸ್ವಾಲ್


• ಪ್ರತಿ ನೇಕಾರರಿಗೆ ರೂ. 2,000 ಗಳನ್ನು ವಾರ್ಷಿಕ ಆರ್ಥಿಕ ನೆರವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಗೆ ಮಾಡಲಾಗುವ 'ನೇಕಾರ ಸಮ್ಮಾನ್ ಯೋಜನೆ'(Nekar Samman Scheme) ಚಾಲನೆ.
— ರಾಜ್ಯದಲ್ಲಿನ ರೇಷ್ಮೆ, ಹತ್ತಿ ಹಾಗೂ ಉಣ್ಣೆ ವಲಯದ ಕೈಮಗ್ಗ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ಕೈಮಗ್ಗ ನೇಕಾರರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

• ರಾಷ್ಟ್ರೀಯ ಭೂಕಂಪನ ಸಂಸ್ಥೆ ('National Centre for Seismology')ಯ ಕೇಂದ್ರ ಕಚೇರಿ ಇರುವುದು : ನೊಯಿಡಾದಲ್ಲಿ.
— ಪ್ರಸ್ತುತ ಇದರ ಡೈರೆಕ್ಟರ್ : ಡಾ.ಬಿ.ಕೆ. ಬನ್ಸಾಲ್.
— 115 ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ.


• ‘ಒಫೆಕ್‌ 16’ ಎಂಬ ಈ ಕಣ್ಗಾವಲು, ಬೇಹುಗಾರಿಕೆಯ ಹೊಸ ಉಪಗ್ರಹವೊಂದನ್ನು ಇಸ್ರೇಲ್ ದೇಶವು ಯಶಸ್ವಿಯಾಗಿ ಉಡಾವಣೆ ಮಾಡಿದೆ.‌


• ಕೋವಿಡ್‌ ಬಿಕ್ಕಟ್ಟಿನಿಂದ ಆರ್ಥಿಕ ನಷ್ಟಕ್ಕೆ ಒಳಗಾಗಿರುವ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ (ಎಂಎಸ್‌ಎಂಇ) ವಲಯಕ್ಕೆ ನೆರವಾಗಲು ಇನ್‌ಸ್ಟಾಮೊಜೊ ಕಂಪನಿಯು ‘ಇನ್‌ಸ್ಟಾಕ್ಯಾಷ್‌’ ಯೋಜನೆಗೆ ಚಾಲನೆ ನೀಡಿದೆ.
— ವಹಿವಾಟನ್ನು ಮುಂದುವರಿಸಿಕೊಂಡು ಹೋಗಲು ಅಗತ್ಯವಿರುವ ದುಡಿಯುವ ಬಂಡವಾಳವನ್ನು ತಕ್ಷಣವೇ ಒದಗಿಸುವ ಯೋಜನೆ ಇದಾಗಿದೆ.
— ಏಳರಿಂದ 14 ದಿನಗಳ ಅವಧಿಗೆ ₹ 1 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ.
— ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಆಗಲಿದೆ.
— ಸದ್ಯದ ಮಟ್ಟಿಗೆ ಸಾಲ ಸೌಲಭ್ಯ ಒದಗಿಸುವ ಪ್ರಕ್ರಿಯೆಗೆ ಕನಿಷ್ಠ ಶುಲ್ಕವನ್ನಷ್ಟೇ ಪಡೆಯಲಾಗುತ್ತಿದೆ


• ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ಚತವಲ್ಲದ ಸದಸ್ಯ ಸ್ಥಾನಕ್ಕೆ ಭಾರತವು ಕಳೆದ ತಿಂಗಳು ಆಯ್ಕೆಯಾಗಿತ್ತು. ಈ ಸದಸ್ಯತ್ವವು ಎರಡು ವರ್ಷ ಅವಧಿಯದ್ದಾಗಿದ್ದು, 2021ರ ಜನವರಿಯಿಂದ ಆರಂಭವಾಗಲಿದೆ. ಸಾಮಾನ್ಯ ಸಭೆಯ 192 ಸದಸ್ಯ ರಾಷ್ಟ್ರಗಳ 184 ಮತಗಳನ್ನು ಪಡೆಯುವ ಮೂಲಕ ಭಾರತವು ಆಯ್ಕೆಯಾಗಿತ್ತು.

• ಪ್ರಸ್ತುತ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ :  ಮಹಮ್ಮದ್‌ ಬಂದೆ.

• ಪ್ರಸ್ತುತ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್‌ಇಆರ್‌ಟಿ) ನಿರ್ದೇಶಕ : ಎಂ.ಆರ್.ಮಾರುತಿ

• ಭಾರತೀಯ ಗುಣಮಟ್ಟ ಮಾಪನ ಸಂಸ್ಥೆ (ಬಿಐಎಸ್ - Bureau of Indian Standards‌) ಯ ಕೇಂದ್ರ ಕಚೇರಿ ಇರುವುದು : ದೆಹಲಿಯಲ್ಲಿ.
— ಪ್ರಸ್ತುತ ಇದರ ಡೈರೆಕ್ಟರ್ ಜನರಲ್ : ಪ್ರಮೋದ್ ಕುಮಾರ್ ತಿವಾರಿ.

• ಪ್ರಸ್ತುತ ದೇಶದ ಬಾಹ್ಯಾಕಾಶ ಸಚಿವಾಲಯದ ಕಾರ್ಯದರ್ಶಿಯೂ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಅಧ್ಯಕ್ಷ ಆಗಿರುವವರು :  ಕೆ.ಶಿವನ್‌

• ಅಪರಾಧ ತಡೆ ಕಾಯ್ದೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ನೇಮಿಸಿರುವ ಸಮಿತಿ : ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ರಣ್‌ಬೀರ್‌ ಸಿಂಗ್‌ ನೇತೃತ್ವದ ಸಮಿತಿ.


• ಕಾವಾಸಾಕಿ’ ಎಂಬ ರೋಗದ ಲಕ್ಷಣಗಳು :
- ಕಾವಾಸಾಕಿ’ ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಜ್ವರ ಮತ್ತು ಚರ್ಮದ ಮೇಲೆ ಕೆಂಪು ಮತ್ತು ಗುಲಾಬಿ ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ರಕ್ತನಾಳಗಳಲ್ಲಿ ತೀವ್ರ ಬಾವು ಬಂದು ಹೃದಯದ ರಕ್ತನಾಳಗಳು ತೀವ್ರ ಹಾನಿಗೊಳಗಾಗುತ್ತವೆ.


• ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಲ್ಲಿ (ಎಂಎಸ್‌ಎಂಇ) ಹೆಚ್ಚಿನ ಹೂಡಿಕೆ ಮಾಡಲು ಪ್ರೊತ್ಸಾಹ. ಅದೇರೀತಿ ಎಂಎಸ್‌ಎಂಇಗಳ ವ್ಯಾಖ್ಯಾನವನ್ನೂ ಬದಲಿಸಲು ಪ್ರಯತ್ನ -  ಸಚಿವ ನಿತಿನ್ ಗಡ್ಕರಿ ಹೇಳಿಕೆ.
— ಅತಿಸಣ್ಣ ಉದ್ಯಮಗಳಲ್ಲಿನ ಹೂಡಿಕೆಗೆ ಈ ಹಿಂದೆ ₹ 25 ಲಕ್ಷ ನಿಗದಿಪಡಿಸಲಾಗಿತ್ತು. ಅದನ್ನು ಈಗ ₹ 1ಕೋಟಿಗೆ ಏರಿಸಲಾಗಿದೆ. ಅದರ ವಹಿವಾಟು ಈ ಹಿಂದೆ ₹ 10 ಲಕ್ಷವಾಗಿತ್ತು. ಇದೀಗ ₹ 5 ಕೋಟಿಗೆ ತಲುಪಿದೆ.
— ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಇದ್ದ ₹ 5 ಕೋಟಿ ಹೂಡಿಕೆ ಮಿತಿಯನ್ನು ಈಗ ₹ 10 ಕೋಟಿಗೆ ಹೆಚ್ಚಿಸಲಾಗಿದೆ. ವಹಿವಾಟು ಮಿತಿ ₹ 2 ಕೋಟಿಯಿಂದ ₹ 50 ಕೋಟಿಗೆ ಏರಿಕೆಯಾಗಿದೆ.
— ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ₹ 10 ಕೋಟಿ ಹೂಡಿಕೆ ಮಿತಿ ಇತ್ತು. ಅದು ಈಗ ₹ 50 ಕೋಟಿಗೆ ಹೆಚ್ಚಳವಾಗಿದೆ. ವಹಿವಾಟು ₹ 5 ಕೋಟಿಯಿಂದ ₹ 250 ಕೋಟಿ ರೂ.ಗೆ ಏರಿದೆ.


• ಖಲಿಸ್ತಾನ್ ಚಳವಳಿ :
— ಸಿಖ್ಖರಿಗಾಗಿಯೇ ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಉದ್ದೇಶದೊಂದಿಗೆ ಆರಂಭವಾಗಿದ್ದೇ ಈ ಖಲಿಸ್ತಾನ ರಾಜಕೀಯ ಚಳವಳಿ. ಇಂಥದೊಂದು ವಿಚಾರ ಮೊಳಕೆ ಯೊಡೆದಿದ್ದೇ 1940 ಮತ್ತು 50ರ ದಶಕದಲ್ಲಿ. ಆದರೆ, ಈ ಚಳವಳಿಗೆ ಪ್ರಾಮುಖ್ಯತೆ ಬಂದಿದ್ದು 1970-80ರ ದಶಕದಲ್ಲಿ. 1980ರ ಕಾಲದಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಖಲಿಸ್ತಾನ್ ಎಂಬ ಪ್ರತ್ಯೇಕ ಸಿಖ್ ದೇಶವನ್ನು ನಿರ್ವಿುಸಬೇಕು ಎಂದ ದಮದಮಿ ತಕ್ಸಲ್‌ನ ನಾಯಕನಾಗಿದ್ದ ಜರ್ನೈಲ್‌ ಸಿಂಗ್‌ & ಭಿಂದ್ರನ್​ವಾಲೆಯ ಎಂಬುವನ ಮುಂದಾಳತ್ವದ ಉಗ್ರ ಹೋರಾಟದ ರೂಪದಲ್ಲಿ ಖಲಿಸ್ತಾನ್ ಚಳವಳಿ ಹುಟ್ಟಿಕೊಂಡಿತು.
ಭಿಂದ್ರನ್‌ವಾಲೆಯಿಂದಾಗಿ ಈ ಚಳವಳಿ ವಿಧ್ವಂಸಕ ಸ್ವರೂಪವನ್ನೂ ಪಡೆಯಿತು. ಈ ಅಂಶವೇ ಪ್ರಮುಖವಾಗಿ ಆಪರೇಷನ್‌ ಬ್ಲೂ ಸ್ಟಾರ್‌ಗೆ ಕಾರಣ


• 1986-88 ವರ್ಷಗಳಲ್ಲಿ ಹಿಂದೊಮ್ಮೆ ಡಾರ್ಜಿಲಿಂಗ್‌ ಪರ್ವತ ಪ್ರದೇಶ ಪ್ರತ್ಯೇಕತೆ ಬಯಸಿ ಹೊತ್ತಿ ಉರಿದದ್ದನ್ನು ಅಪರೂಪವಾಗಿ ದಾಖಲಿಸಿರುವ ಕೃತಿ, ‘ದಿ ಇನ್‌ಹೆರಿಟೆನ್ಸ್ ಆಫ್ ಲಾಸ್ (2004)’. ಕಿರಣ್ ದೇಸಾಯಿ ಬರೆದ ಈ ಕಾದಂಬರಿ 2006ರ ಸಾಲಿನ ಪ್ರತಿಷ್ಠಿತ ಮ್ಯಾನ್‌ಬೂಕರ್ ಪ್ರಶಸ್ತಿ ಗೆದ್ದುಕೊಂಡಿತು.


• ವಿಶ್ವದ ಎದುರು ನಿಲ್ಲಲು ಬೇಕಾದ ಗಟ್ಟಿಗತನ ಪ್ರೇರೇಪಿಸುವ, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕವಾಗಿ ಒಗ್ಗೂಡಬೇಕಾದ ಅಗತ್ಯ ಸಾರುವ ಸಲ್ಮಾನ್ ರಶ್ದಿಯ ‘ಮಿಡ್‌ನೈಟ್ಸ್ ಚಿಲ್ಡ್ರನ್’ ಒಂದು ಮುಖ್ಯ ಉದಾಹರಣೆ.

•► ವಿಶ್ವಸಂಸ್ಥೆಯ 'ಸ್ಟೇಟ್‌ ಆಫ್‌ ವರ್ಲ್ಡ್ ಪಾಪ್ಯುಲೇಷನ್‌-2020' ವರದಿ : ಭಾರತದಲ್ಲಿ 4.58 ಕೋಟಿ ಹೆಣ್ಣು ಮಕ್ಕಳು ನಾಪತ್ತೆ. (UN NFPA Report on missing females in india 2020)

•► ವಿಶ್ವಸಂಸ್ಥೆಯ 'ಸ್ಟೇಟ್‌ ಆಫ್‌ ವರ್ಲ್ಡ್ ಪಾಪ್ಯುಲೇಷನ್‌-2020' ವರದಿ : ಭಾರತದಲ್ಲಿ 4.58 ಕೋಟಿ ಹೆಣ್ಣು ಮಕ್ಕಳು ನಾಪತ್ತೆ. 
(UN NFPA's Report on missing females in india 2020)━━━━━━━━━━━━━━━━━━━━━━━━━━━━━━━━━



★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


- ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಎನ್‌ಎಫ್‌ಪಿಎ) ಬಿಡುಗಡೆ ಮಾಡಿದ 'ಸ್ಟೇಟ್‌ ಆಫ್‌ ವರ್ಲ್ಡ್ ಪಾಪ್ಯುಲೇಷನ್‌-2020' ವರದಿಯ ಪ್ರಕಾರ
ಕಳೆದ ಐವತ್ತು ವರ್ಷಗಳಲ್ಲಿ ವಿಶ್ವಾದ್ಯಂತ 14.26 ಕೋಟಿ ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ. ಇದರಲ್ಲಿ ಭಾರತದ ಪಾಲು 4.58 ಕೋಟಿ ಎಂದು ವರದಿಯಲ್ಲಿ ತಿಳಿಸಲಾಗಿದೆ.

- 1970ರಲ್ಲಿ ವಿಶ್ವದ ಜನಸಂಖ್ಯೆಯಿಂದ ಕಣ್ಮರೆಯಾದ ಹೆಣ್ಣು ಮಕ್ಕಳ ಸಂಖ್ಯೆ 6.1 ಕೋಟಿ ಇದ್ದರೆ 2020ರಲ್ಲಿಈ ಪ್ರಮಾಣ 14.26 ಕೋಟಿ ಅಂದರೆ ಇದು ದುಪ್ಪಟ್ಟು ಏರಿಕೆ ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

- ಇನ್ನು ಹೆಣ್ಣು ಮಕ್ಕಳ ಕಣ್ಮರೆ ಪ್ರಕರಣದಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು, 7.23 ಕೋಟಿಯಷ್ಟು ಹೆಣ್ಣು ಮಕ್ಕಳು ಚೀನಾದಲ್ಲಿ ಕಣ್ಮರೆಯಾಗಿದ್ದಾರೆ ಎಂದು ವರದಿ ಹೇಳಿದೆ.

- 2013 ಮತ್ತು 2017ರ ಅವಧಿಯಲ್ಲಿ ಭಾರತದಲ್ಲಿ ಪ್ರತಿ ವರ್ಷ ಸುಮಾರು 4,60,000 ಹೆಣ್ಣುಭ್ರೂಣ ಹತ್ಯೆ ನಡೆದಿದೆ. ಜನನದ ನಂತರ ಐದು ವರ್ಷದೊಳಗಿನ ಹೆಣ್ಣು ಮಕ್ಕಳ ಕಣ್ಮರೆ ಪ್ರಮಾಣವೂ ಭಾರತದಲ್ಲಿ ಅಧಿಕ.
- ದತ್ತಾಂಶಗಳ ಪ್ರಕಾರ, ಪ್ರತಿ ವರ್ಷ ಪ್ರಸವ ಪೂರ್ವ ಲಿಂಗ ಪತ್ತೆ ಆಯ್ಕೆಯಿಂದ ನಡೆಯುತ್ತಿರುವ ಭ್ರೂಣಹತ್ಯೆಯಲ್ಲಿ ಭಾರತ ಹಾಗೂ ಚೀನಾದ ಪಾಲು ಶೇ.90ರಷ್ಟಿದೆ ಎಂದು ಅಂದಾಜಿಸಲಾಗಿದೆ.

- ಹೆಣ್ಣು ಮಕ್ಕಳನ್ನ ಬಾಲ್ಯವಿವಾಹ, ಲೈಂಗಿಕತೆ ಬಳಸಿಕೊಳ್ಳಲಾಗುತ್ತಿರುವದರಿಂದ ನಾಪತ್ತೆ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.

Sunday 5 July 2020

•► ಮಾದರಿ ನೋಂದಣಿ ವ್ಯವಸ್ಥೆ-2018ರ ವರದಿ — ಭಾರತದ ಅರ್ಧಕ್ಕಿಂತಲೂ ಹೆಚ್ಚು ಮಂದಿ 25ಕ್ಕಿಂತ ಹೆಚ್ಚು ವಯಸ್ಸಿನವರು! (More than half the population in india is over 25 years of age)

•►  ಮಾದರಿ ನೋಂದಣಿ ವ್ಯವಸ್ಥೆ-2018ರ ವರದಿ — ಭಾರತದ ಅರ್ಧಕ್ಕಿಂತಲೂ ಹೆಚ್ಚು ಮಂದಿ 25ಕ್ಕಿಂತ ಹೆಚ್ಚು ವಯಸ್ಸಿನವರು!
( More than half the population in india is over 25 years of age)
━━━━━━━━━━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ, ಭಾರತದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ಈಗ 25 ವರ್ಷದವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು. ಪುರುಷ- ಸ್ತ್ರೀ ಎಂಬ ವ್ಯತ್ಯಾಸವಿಲ್ಲದೆ, ನಗರ- ಹಳ್ಳಿ ಎಂಬ ವ್ಯತ್ಯಾಸವಿಲ್ಲದ ಸರಾಸರಿ ಚಿತ್ರಣ ಹೀಗಿದೆ. ಭಾರತೀಯ ರಿಜಿಸ್ಟ್ರಾರ್‌ ಜನರಲ್‌ ಮತ್ತು ಜನಗಣತಿ ಕಮಿಷನರ್‌ ನಡೆಸಿದ ಮಾದರಿ ನೋಂದಣಿ ವ್ಯವಸ್ಥೆ-2018ರ ವರದಿಯಲ್ಲಿ ಈ ವಿಚಾರ ಕಂಡುಬಂದಿದೆ.

• ಇದರಿಂದ ಏನು ತಿಳಿಯಬಹುದು?
━━━━━━━━━━━━━━━
ಏನೆಂದರೆ, ಭಾರತದ ಜನಸಂಖ್ಯೆ ಹೆಚ್ಚು ಹೆಚ್ಚು ಮಧ್ಯವಯಸ್ಕವಾಗುತ್ತಿದೆ. ಭಾರತದ ಫಲವತ್ತತೆ ಸೂಚ್ಯಂಕ ಕಡಿಮೆಯಾಗುತ್ತಿದೆ; ಆಯುರ್ಮಾನ ಹೆಚ್ಚುತ್ತಿದೆ. ಹೀಗಾಗಿ ಯುವಜನತೆಯ ಪ್ರಮಾಣ ಕಡಿಮೆಯಾಗಿ ಮಧ್ಯವಯಸ್ಸಿನವರ ಸಂಖ್ಯೆ ಏರುತ್ತಿದೆ. ಗ್ರಾಮೀಣ ಪ್ರದೇಶದ ಗಂಡಸರಲ್ಲೂ 25 ವರ್ಷಕ್ಕಿಂತ ಕೆಳಗಿನವರ ಪ್ರಮಾಣ 2017ರಲ್ಲಿ 50.2% ಇದ್ದುದು 2018ರಲ್ಲಿ 49.9%ಕ್ಕೆ ಇಳಿದಿತ್ತು.

ಇತರರಲ್ಲೂ- ಗ್ರಾಮೀಣ ಸ್ತ್ರೀ, ನಗರದ ಪುರುಷ ಹಾಗೂ ನಗರದ ಸ್ತ್ರೀಯರಲ್ಲೂ- 25 ವರ್ಷಕ್ಕಿಂತ ಕೆಳಗಿನವರ ಜನಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇ 50ಕ್ಕಿಂತ ಕಡಿಮೆ ಇದೆ. 2018ನೇ ಇಸವಿಯಲ್ಲಿ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ 25 ವರ್ಷಕ್ಕಿಂತ ಕಡಿಮೆ ಪ್ರಾಯದವರು ಶೇ. 46.9 ಮಾತ್ರ.

ಆದರೆ ಇದರಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕಡಿಮೆ ವಯೋಮಾನದವರು ಹೆಚ್ಚಿದ್ದರೆ, ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಹೆಚ್ಚಿನ ವಯಸ್ಸಿನವರು ಹೆಚ್ಚಿದ್ದಾರೆ. ಇದಕ್ಕೆ ಕಾರಣ ಉತ್ತರದ ರಾಜ್ಯಗಳ ಫಲವತ್ತತೆ ದರ ಹೆಚ್ಚು ಇರುವುದು.

• ಬಿಹಾರದ ಫಲವತ್ತತೆ ದರ ಹೆಚ್ಚು :
━━━━━━━━━━━━━━

ಬಿಹಾರದ ಫಲವತ್ತತೆ ದರ ದೇಶದಲ್ಲೇ ಹೆಚ್ಚು, 3.2ರಷ್ಟಿದೆ. ಇಲ್ಲಿ25 ವರ್ಷ ಹಾಗೂ ಅದಕ್ಕಿಂತ ಕಡಿಮೆ ಪ್ರಾಯದವರ ಸಂಖ್ಯೆ ಅಧಿಕ- 57.2 ಶೇಕಡ. ನಂತರದ ಸ್ಥಾನ ಉತ್ತರಪ್ರದೇಶದ್ದು. ಇಲ್ಲಿನ ಫಲವತ್ತತೆ ದರ 2.9 ಹಾಗೂ 25 ವರ್ಷಕ್ಕಿಂತ ಕಡಿಮೆ ಪ್ರಾಯದವರ ಪ್ರಮಾಣ 52.7 ಶೇಕಡ. ರಾಜ್ಯಗಳು ಹೆಚ್ಚು ಹೆಚ್ಚು ಕಾಲ ಫಲವತ್ತತೆ ದರವನ್ನು ಕಡಿಮೆ ಮಾಡಿಕೊಂಡಷ್ಟೂ ಹಾಗೂ ಆಯುರ್ಮಾನವನ್ನು ಜಾಸ್ತಿ ಮಾಡಿಕೊಂಡಷ್ಟೂ, 25 ವರ್ಷಕ್ಕಿಂತ ಕಡಿಮೆ ಪ್ರಾಯದವರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ.

• ಕೇರಳದ ಕತೆಯೇನು?
━━━━━━━━━━━

ಇದನ್ನು ಕೇರಳ ರಾಜ್ಯದ ನಿದರ್ಶನದಲ್ಲಿ ನೋಡಬಹುದು. ಕೇರಳ ರಾಜ್ಯದಲ್ಲಿ ಫಲವತ್ತತೆ ದರ 1.7ರಷ್ಟು ಕೆಳಕ್ಕೆ ಇಳಿದಿದೆ. ಇಲ್ಲಿನ 25 ವರ್ಷಕ್ಕಿಂತ ಕೆಳಗಿನವರ ಪ್ರಮಾಣ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕಿಂತ ಕೊಂಚ ಹೆಚ್ಚು, ಅಂದರೆ 37.4 ಶೇಕಡದಷ್ಟಿದೆ. ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ಜಮ್ಮು ಕಾಶ್ಮೀರ, ಹಿಮಾಚಲ ಹಾಗೂ ಪಂಜಾಬ್‌ಗಳ ಫಲವತ್ತತೆ ದರ ಈಗ ಕೇರಳಕ್ಕಿಂತಲೂ ಕೆಳಕ್ಕಿಳಿದಿದ್ದು, 1.6ರಷ್ಟಿದೆ. ಆದರೆ ಇವುಗಳ ಯುವಜನ ಪ್ರಮಾಣ ಕೇರಳಕ್ಕಿಂತ ಹೆಚ್ಚು ಇದೆ. ಯಾಕೆಂದರೆ ಕೇರಳದ ಫಲವತ್ತತೆ ದರ 1991ರಿಂದಲೇ 1.8ಕ್ಕೆ ಇಳಿದಿದ್ದು, ಆ ದರವನ್ನು ಕಾಪಾಡಿಕೊಂಡು ಬಂದಿದೆ. ಈ ರಾಜ್ಯಗಳ ಫಲವತ್ತತೆ ದರ 1991ರ ಅವಧಿಯಲ್ಲಿ 3ರಷ್ಟಿದ್ದು, ಇತ್ತೀಚೆಗೆ 1.6ಕ್ಕೆ ಇಳಿದಿದೆ.

• ಫಲವತ್ತತೆ ದರ ನಗರ ಕಡಿಮೆ, ಹಳ್ಳಿಯಲ್ಲಿ ಹೆಚ್ಚು
━━━━━━━━━━━━━━━━━━━
ಇಲ್ಲಿ ಗಮನಿಸಲಾಗಿರುವ ಇನ್ನೊಂದು ವಿಚಿತ್ರ ಸಂಗತಿ ಎಂದರೆ, ನಗರ ಪ್ರದೇಶದಲ್ಲಿ ಫಲವತ್ತತೆ ದರ ಕಡಿಮೆ ಹಾಗೂ ಹಳ್ಳಿ ಪ್ರದೇಶದಲ್ಲಿ ಹೆಚ್ಚು ಇದೆ; ಹೀಗಾಗಿ ಯುವಜನ ಸಂಖ್ಯೆ ಪ್ರಮಾಣ ಹಳ್ಳಿಗಳಲ್ಲಿ ಹೆಚ್ಚಿದೆ ಹಾಗೂ ನಗರಗಳಲ್ಲಿ ಕಡಿಮೆ ಇದೆ.

ಈ ಅಂಕಿ ಸಂಖ್ಯೆಗಳನ್ನು ಪ್ರಭಾವಿಸುವಲ್ಲಿ ಇನ್ನೊಂದು ಅಂಶವೂ ಇರಬಹುದು. ಗ್ರಾಮಾಂತರ ಪ್ರದೇಶಗಳಿಂದ ನಗರಗಳಿಗೆ ಯಾವಾಗಲೂ ವಲಸೆ ನಡೆಯುತ್ತಲೇ ಇರುತ್ತದೆ. ಮಹಿಳೆಯರಲ್ಲಿ ಸರಾಸರಿ ಆಯುರ್ಮಾನ ಪ್ರಮಾಣ ಹೆಚ್ಚು ಇದೆ, ಕೆಲವು ರಾಜ್ಯಗಳಲ್ಲಿ ವರ್ಷಾಂತರಗಳಿಂದ ಲಿಂಗಾನುಪಾತದಲ್ಲಿ ಮಹಿಳೆಯರ ಪ್ರಮಾಣ ಕಡಿಮೆ; ಹೀಗಾಗಿ 25 ವರ್ಷದೊಳಗಿನ ಯುವಜನ ಪ್ರಮಾಣದಲ್ಲಿ ಸ್ತ್ರೀಯರ ಸಂಖ್ಯೆ ಕಡಿಮೆಯದಾಗಿ ಕಾಣುತ್ತಿದೆ. ರಾಷ್ಟ್ರೀಯ ಸರಾಸರಿ ತೆಗೆದರೆ 25 ವರ್ಷದೊಳಗಿನ ಸ್ತ್ರೀಯರ ಪ್ರಮಾಣ ಶೇ.46.3 ಇದೆ; ಪುರುಷರ ಪ್ರಮಾಣ ಶೇ.47.4 ಇದೆ.

(ಕೃಪೆ : ವಿಜಯ ಕರ್ನಾಟಕ)

•► ️ಜುಲೈ 05 ರ (05 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 05 July 2020)


•► ️ಜುಲೈ 05 ರ (05 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of 05 July 2020)

━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)


• ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ನ ಮಹಾನಿರ್ದೇಶಕ : ಎನ್‌.ಎಸ್. ಪ್ರಧಾನ್‌

• ಪ್ರಸಿದ್ಧ ಟೆನಿಸ್‌ ಆಟಗಾರ 'ಆ್ಯಂಡಿ ಮರ‍್ರೆ'ಯು ಬ್ರಿಟನ್‌ ದೇಶದವನು.
— ಗ್ರ್ಯಾನ್‌ಸ್ಲಾಮ್‌ನಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿರುವನು.

• ಲಾನ್‌ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ಕೋರ್ಟ್‌ ಇರುವುದು : ಕರ್ನಾಟಕ ರಾಜ್ಯದಲ್ಲಿ.

• ಜುಲೈ 04 : ಅಮೆರಿಕದ ಸ್ವತಂತ್ರ ದಿನ.
— ಅಮೆರಿಕವು 244ನೇ ಸ್ವತಂತ್ರ ದಿನವನ್ನು ಆಚರಿಸಿಕೊಂಡಿತು.

• ಭೌತಿಕ ರೂಪದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ಬಳಕೆಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಲ್ಲಿ ಚಿನ್ನದ ಬಾಂಡ್‌ ಯೋಜನೆ ಜಾರಿಗೊಳಿಸಿತು.
— ಬ್ಯಾಂಕ್‌ಗಳು, ಆಯ್ದ ಅಂಚೆ ಕಚೇರಿಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಸ್‌ಎಚ್‌ಸಿಐಎಲ್), ರಾಷ್ಟ್ರೀಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಈ ಬಾಂಡ್‌ಗಳನ್ನು ಮಾರಾಟ ಮಾಡಲಾಗುವುದು.


• ಧಮ್ಮ ಚಕ್ರ ಚಿನ್ಹೆಯು ಗೌತಮ ಬುದ್ಧನು  ಸಾರನಾಥದಲ್ಲಿ ನೀಡಿದ ತನ್ನ ಮೊದಲ ಧರ್ಮೋಪದೇಶದ ಪ್ರತೀಕವಾಗಿದೆ.
— 'ಧಮ್ಮ ಅಥವಾ ಧರ್ಮ ಚಕ್ರ ದಿನ'ವನ್ನು ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ.

• ತೈವಾನ್‌ ಮತ್ತು ಲುಝೊನ್ ದ್ವೀಪಗಳ ನಡುವೆ  ಲುಝೊನ್ ಕೊಲ್ಲಿಯಿದೆ.
— ಲುಝೊನ್ ಕೊಲ್ಲಿಯು ಫಿಲಿಪೈನ್ಸ್ ರಾಷ್ಟ್ರಕ್ಕೆ ಸಂಬಂಧಿಸಿದೆ.
— ಲುಝೊನ್ ಕೊಲ್ಲಿಯು ಪಿಲಿಪೈನ್ಸ್‌ ಸಮುದ್ರವನ್ನು ಮತ್ತು ದಕ್ಷಿಣ ಚೀನಾ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ.

• ದಕ್ಷಿಣ ಚೀನಾ ಸಮುದ್ರವನ್ನು ನಿಯಂತ್ರಿಸುವ ವಿಚಾರದಲ್ಲಿ ಚೀನಾ ದೇಶವು ಬ್ರುನೈ, ಮಲೇಷಿಯಾ, ಪಿಲಿಪ್ಪಿನ್ಸ್, ತೈವಾನ್ ಮತ್ತು ವಿಯೆಟ್ನಾಂಗಳೊಂದಿಗೆ ವಿವಾದ ಹೊಂದಿದೆ.

• ಪ್ರಸ್ತುತ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನ ಅಧ್ಯಕ್ಷ ಮತ್ತು ಎಂಡಿ : ಆರ್. ಮಾಧವನ್

• ಪ್ರಸ್ತುತ ಶ್ರೀಲಂಕಾ ದೇಶದ ಅಧ್ಯಕ್ಷ : ಗೋಟಬಯ ರಾಜಪಕ್ಷೆ .

• ಚಂದ್ರನ ಮೇಲೆ ಅಸ್ಪಷ್ಟವಾಗಿರುವ ಭೂಮಿಯ ನೆರಳು ಬೀಳುವುದಕ್ಕೆ ಮಸುಕಂಚಿನ ಚಂದ್ರಗ್ರಹಣ ಎನ್ನುತ್ತಾರೆ.

• ಪ್ರಸ್ತುತ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ : ಅಲೆಕ್ಸ್‌ ಮಾರ್ಷಲ್‌

• ಖಾಜಾ ಬಂದಾ ನವಾಜ್‌ ಸೂಫಿ ಸಂತನ ಕ್ಷೇತ್ರ ಇರುವುದು : ಕಲಬುರ್ಗಿಯಲ್ಲಿ.

• ಅಖಿಲ ಭಾರತ ಫುಟ್ಬಾಲ್ ಫೆಡರೇಷನ್‌ಗೆ (ಎಐಎಫ್‌ಎಫ್‌) ಏಷ್ಯನ್ ಫುಟ್ಬಾಲ್ ಕಾನ್ಫಡರೇಷನ್ (ಎಎಫ್‌ಸಿ),‌ ಎಲೀಟ್‌ ಯುವ ಯೋಜನೆಯ ಪೂರ್ಣ ಸದಸ್ಯತ್ವ ಸ್ಥಾನಮಾನವನ್ನು ನೀಡಿದೆ.
— ಮೂರು ವರ್ಷಗಳ ಬಳಿಕ ಈ ಸ್ಥಾನಮಾನದ ಮರು ಮೌಲ್ಯಮಾಪನ ನಡೆಯಲಿದೆ.
— 20 ವಿವಿಧ ಮಾನದಂಡಗಳನ್ನು ಗಮನಿಸಿ ಎಎಫ್‌ಸಿ ಯುವ ಸಮಿತಿಯು ಸದಸ್ಯ ಸಂಸ್ಥೆಗಳ ಅರ್ಜಿಯನ್ನು ಸ್ಥಾನಮಾನಕ್ಕೆ ಪರಿಶೀಲಿಸುತ್ತದೆ. ನಾಯಕತ್ವ, ಯೋಜನೆ, ಸಂಘಟನೆ, ಸಿಬ್ಬಂದಿ, ನೇಮಕಾತಿ, ಹಣಕಾಸು, ಸೌಕರ್ಯಗಳು, ತಂಡಗಳು, ತರಬೇತಿ, ಆಟದ ರೀತಿ, ಆಟಗಾರನ ಸಾಮರ್ಥ್ಯ, ಆರೋಗ್ಯ ಮತ್ತು ಫಿಟ್‌ನೆಸ್‌ ಇದರಲ್ಲಿ ಸೇರಿವೆ.
— ಇದರಲ್ಲಿ 11 ಮಾನದಂಡಗಳನ್ನು ಪೂರೈಸಿದ ಸಂಸ್ಥೆಗಳಿಗೆ ಯೋಜನೆಯ ಪೂರ್ಣ ಸದಸ್ಯತ್ವ ನೀಡಲಾಗುತ್ತದೆ. 10 ಮಾನದಂಡಗಳನ್ನು ಪೂರೈಸಿದ ಸಂಸ್ಥೆಯು ತಾತ್ಕಾಲಿಕ ಸದಸ್ಯತ್ವಕ್ಕೆ ಅರ್ಹತೆ ಪಡೆಯುತ್ತದೆ.

— ಪ್ರಸ್ತುತ ಏಷ್ಯನ್ ಫುಟ್ಬಾಲ್ ಕಾನ್ಫಡರೇಷನ್ (ಎಎಫ್‌ಸಿ)ನ ಪ್ರಧಾನ ಕಾರ್ಯದರ್ಶಿ : ಡ್ಯಾಟೊ ವಿಂಡ್ಸರ್‌ ಜಾನ್‌

— ಪ್ರಸ್ತುತ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್‌ (ಎಐಎಫ್‌ಎಫ್‌)ನ ಪ್ರಧಾನ ಕಾರ್ಯದರ್ಶಿ : ಕುಶಾಲ್‌ ದಾಸ್‌

• ಸಾಂದ್ರತೆ ವ್ಯತ್ಯಾಸ ಹೊಂದಿರುವ ಪದಾರ್ಥಗಳನ್ನು ಪ್ರತ್ಯೇಕಿಸುವ ಸಾಧನಕ್ಕೆ ಸೆಂಟ್ರಿಫ್ಯೂಜ್‌ ಎಂದು ಕರೆಯಲಾಗುತ್ತದೆ.

• ಇತ್ತೀಚಿನ ಭಾರತೀಯ ರಿಜಿಸ್ಟ್ರಾರ್‌ ಜನರಲ್‌ ಮತ್ತು ಜನಗಣತಿ ಕಮಿಷನರ್‌ ನಡೆಸಿದ ಮಾದರಿ ನೋಂದಣಿ ವ್ಯವಸ್ಥೆ-2018ರ ವರದಿಯಂತೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ, ಭಾರತದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ಈಗ 25 ವರ್ಷದವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು.
— ಭಾರತದ ಜನಸಂಖ್ಯೆ ಹೆಚ್ಚು ಹೆಚ್ಚು ಮಧ್ಯವಯಸ್ಕವಾಗುತ್ತಿದೆ. ಭಾರತದ ಫಲವತ್ತತೆ ಸೂಚ್ಯಂಕ ಕಡಿಮೆಯಾಗುತ್ತಿದೆ; ಆಯುರ್ಮಾನ ಹೆಚ್ಚುತ್ತಿದೆ. ಹೀಗಾಗಿ ಯುವಜನತೆಯ ಪ್ರಮಾಣ ಕಡಿಮೆಯಾಗಿ ಮಧ್ಯವಯಸ್ಸಿನವರ ಸಂಖ್ಯೆ ಏರುತ್ತಿದೆ. ಗ್ರಾಮೀಣ ಪ್ರದೇಶದ ಗಂಡಸರಲ್ಲೂ 25 ವರ್ಷಕ್ಕಿಂತ ಕೆಳಗಿನವರ ಪ್ರಮಾಣ 2017ರಲ್ಲಿ 50.2% ಇದ್ದುದು 2018ರಲ್ಲಿ 49.9%ಕ್ಕೆ ಇಳಿದಿತ್ತು.


• ಇತ್ತೀಚೆಗೆ 10 ಸಾವಿರ ಹಾಸಿಗೆಯ ವಿಶ್ವದ ಅತಿ ದೊಡ್ಡ ಕೋವಿಡ್-19‌ ಆರೈಕೆ ಕೇಂದ್ರ '‘ಸರ್ದಾರ್‌ ಪಟೇಲ್‌ ಕೋವಿಡ್‌ ಆರೈಕೆ ಕೇಂದ್ರ" ಇರುವುದು : ಛತರ್‌ಪುರದ ರಾಧಾ ಸ್ವಾಮಿ ಸತ್ಸಂಗ್ ಬಿಯಾಸ್‌ನಲ್ಲಿ .


• ರಾಜಾಜಿ ಹುಲಿ ಅಭಯಾರಣ್ಯ ಇರುವುದು : ಉತ್ತರ ಖಂಡ್ ರಾಜ್ಯದಲ್ಲಿ.

• ಪ್ರಸ್ತುತ ಸಿಎಸ್ಐಆರ್-ಸಿಸಿಎಂಬಿ (CSIR - Centre for Cellular and Molecular Biology) ಯ ನಿರ್ದೇಶಕ : ರಾಕೇಶ್ ಕೆ ಮಿಶ್ರಾ
— ಕೇಂದ್ರ ಕಚೇರಿ : ಹೈದ್ರಾಬಾದ್, ತೆಲಂಗಾಣ.

• ಪ್ರಸ್ತುತ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ ಐಆರ್‌-Council of Scientific and Industrial Research) ಯ ಡೈರೆಕ್ಟರ್ ಜನರಲ್ : ಶೇಖರ್.ಸಿ.ಮಂಡ್ರೆ.
— ಕೇಂದ್ರ ಕಚೇರಿ : ನವ ದೆಹಲಿ.

• ಇತ್ತೀಚೆಗೆ ಮಾರಕ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತಿದ್ದ HCQ, lopinavir/ritonavir ಔಷಧಿಗಳ ಮೇಲಿನ ಪ್ರಯೋಗವನ್ನು ವಿಶ್ವ ಆರೋಗ್ಯ ಸಂಸ್ಥೆ ಕೈ ಬಿಟ್ಟಿದೆ.

•► ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) (Air Quality Index - AQI)

•► ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)
(Air Quality Index - AQI)

━━━━━━━━━━━━━━━━━━━━
★ ಪರಿಸರ & ಪರಿಸರ ವಿಜ್ಞಾನ
(Environment & Ecology)

★  ಹವಾಮಾನ ಬದಲಾವಣೆ
(Climate Change)


ಭಾರತದಲ್ಲೂ ವಾಯು ಮಾಲಿನ್ಯ ಅಪಾಯಕಾರಿ ಮಟ್ಟ ತಲುಪುತ್ತಿದ್ದು, ಗ್ರಾಮೀಣ ಮತ್ತು ಸಮುದ್ರ ಪ್ರದೇಶಗಳಲ್ಲಿ ಮಾಲಿನ್ಯದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಸಲುವಾಗಿ ಕೇಂದ್ರ ಸರಕಾರ 2016ರಿಂದೀಚೆಗೆ ವಾಯು ಗುಣಮಟ್ಟ ಸೂಚ್ಯಂಕಕ್ಕೆ (ಎಕ್ಯೂಐ) ಚಾಲನೆ ನೀಡಿದೆ. ದಿಲ್ಲಿ ಸೇರಿದಂತೆ 11 ಮಹಾನಗರಗಳ ದೈನಂದಿನ ವಾಯು ಗುಣಮಟ್ಟದ ಬುಲೆಟಿನ್ ಬಿಡುಗಡೆ ಮಾಡುತ್ತಿದೆ.


• ಎಕ್ಯೂಐ ಎಂದರೇನು ?
━━━━━━━━━━━
- ಎಕ್ಯೂಐ ಎಂದರೆ ವಾಯು ಗುಣಮಟ್ಟವನ್ನು ಅಳೆಯುವ ಸೂಚಕ. ಇದು ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವಾಯು ಮಾಲಿನ್ಯಗಳ ಬಗ್ಗೆ ಮಾನಿಟರ್ ಮಾಡುತ್ತದೆ.

- ಗಾಳಿಯಲ್ಲಿರುವ ಓಝೋನ್, ಸಣ್ಣ ಕಣಗಳಿಂದಾದ ವಸ್ತುಗಳು, ಸಾರಜನಕ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಲ್ಫರ್ ಸಂಯುಕ್ತಗಳಂತ ಮಾಲಿನ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.


• ಹೇಗೆ ಕಾರ‌್ಯನಿರ್ವಹಿಸುತ್ತದೆ ?
━━━━━━━━━━━━━━
ಎಕ್ಯೂ ಅನ್ನು ಆರು ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಅವುಗಳೆಂದರೆ ಉತ್ತಮ, ತೃಪ್ತಿದಾಯಕ, ಮಧ್ಯಮ, ಕಲುಷಿತ, ಕಳಪೆ, ತೀವ್ರ ಕಳಪೆ ಮತ್ತು ತೀವ್ರಕ್ಕಿಂತ ಹೆಚ್ಚಿನ ಕಳಪೆ ಎಂದು ವಿಂಗಡಿಸಲಾಗಿದೆ. ಈ ವಿಭಾಗಗಳಿಗೆ ವಿವಿಧ ಬಣ್ಣಗಳ ಕೋಡ್‌ಗಳನ್ನು ಜೋಡಿಸಲಾಗಿದೆ. ಹಸಿರು ಬಣ್ಣ ಉತ್ತಮ ಗಾಳಿಯ ಗುಣಮಟ್ಟವನ್ನು , ಕಂದು ಬಣ್ಣ ತೀವ್ರ ಮಾಲಿನ್ಯವನ್ನು ಸೂಚಿಸುತ್ತದೆ. ಹಳದಿ, ಕೇಸರಿ, ಕೆಂಪು ಮತ್ತು ನೇರಳೆ ಬಣ್ಣವು ಮಧ್ಯಮದಿಂದ ಹಿಡಿದು ಅನಾರೋಗ್ಯಕರ ಮಾಲಿನ್ಯವನ್ನು ಸೂಚಿಸುತ್ತದೆ.

• ಭಾರತ ಮತ್ತು ಎಕ್ಯೂಐ :
━━━━━━━━━━━
ಭಾರತದ ಎಕ್ಯೂಐ ಅನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಭಿವೃದ್ಧಿಪಡಿಸಿದೆ. ಐಐಟಿ-ಕಾನ್ಪುರ ಹಾಗೂ ವೈದ್ಯಕೀಯ, ವಾಯು ಗುಣಮಟ್ಟ ಕ್ಷೇತ್ರದಲ್ಲಿನ ವೃತ್ತಿಪರರು ಮತ್ತು ಇತರ ಗಣ್ಯರನ್ನು ಒಳಗೊಂಡ ತಜ್ಞರ ಗುಂಪಿನ ಸಲಹೆ ಸೂಚನೆ ಪಡೆದು ಎಕ್ಯೂಐ ಅನ್ನು ಅಭಿವೃದ್ಧಿಪಡಿಸಲಾಗಿದೆ.

— ನಗರ, ಗ್ರಾಮೀಣ ಮತ್ತು ಸಮುದ್ರ ಪ್ರದೇಶಗಳಲ್ಲಿ ಮಾಲಿನ್ಯದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಸಲುವಾಗಿ ಎಕ್ಯೂಐ ಅಭಿವೃದ್ಧಿಪಡಿಸಲಾಗಿದೆ. ಆರಂಭದಲ್ಲಿ ಇದು ದಿಲ್ಲಿ, ಆಗ್ರಾ, ಕಾನ್ಪುರ, ಲಖನೌ, ವಾರಾಣಸಿ, ಫರೀದಾಬಾದ್, ಅಹಮದಾಬಾದ್, ಚೆನ್ನೈ , ಬೆಂಗಳೂರು ಮತ್ತು ಹೈದರಾಬಾದ್‌ನಂತಹ 10 ನಗರಗಳಲ್ಲಿ ವಾಯು ಗುಣಮಟ್ಟವನ್ನು ಮಾನಿಟರ್ ಮಾಡಲಿದೆ. ಕ್ರಮೇಣ ದೇಶಾದ್ಯಂತ 66 ನಗರಗಳಲ್ಲಿ ತನ್ನ ಕೆಲಸವನ್ನು ವಿಸ್ತರಿಸಲಿದೆ.

— ವಾಯು ಗುಣಮಟ್ಟಕ್ಕೆ ಸಂಬಂಧಿಸಿದ ಪರಿಸರ ಆದ್ಯತೆ ಸೂಚ್ಯಂಕ ಪಟ್ಟಿಯಲ್ಲಿ ಭಾರತವು ಕಳೆದ ವರ್ಷ 178 ದೇಶಗಳ ಪೈಕಿ 174ನೇ ಸ್ಥಾನ ಪಡೆದಿತ್ತು.

— ಭಾರತದ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನ ಅದರಲ್ಲೂ ಡೀಸೆಲ್ ಕಾರುಗಳಿಂದ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಇದು ಅನಾರೋಗ್ಯಕ್ಕೆ ಕಾರಣವಾಗಿದೆ.

— ಮಾಲಿನ್ಯಕಾರಿ ಕೈಗಾರಿಕೆಗಳು, ತ್ಯಾಜ್ಯ ವಸ್ತುಗಳು ಮತ್ತು ಎಲೆಗಳನ್ನು ಮುಕ್ತ ಪ್ರದೇಶದಲ್ಲಿ ಸುಡುತ್ತಿರುವುದು, ಹೆಚ್ಚುತ್ತಿರುವ ಕಟ್ಟಡಗಳ ನಿರ್ಮಾಣ ತ್ಯಾಜ್ಯ, ಅರಣ್ಯಗಳ ನಾಶ-ಇವೆಲ್ಲವೂ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

— ‘ಜಗತ್ತಿನ ಅತಿ ಮಲಿನ 20 ನಗರಗಳ ಪಟ್ಟಿಯಲ್ಲಿ ಭಾರತದ 15 ನಗರಗಳು ಸ್ಥಾನ ಪಡೆದಿವೆ’ ಎಂದು ವರದಿಯೊಂದು ಹೇಳಿದೆ. ‘ಗ್ರೀನ್‌ಪೀಸ್‌ ಆಗ್ನೇಯ ಏಷ್ಯಾ’ ಸಂಸ್ಥೆ ಸಹಯೋಗದಲ್ಲಿ ಸಿದ್ಧಪಡಿಸಲಾಗಿರುವ ‘ಐಕ್ಯುಏರ್‌ ಏರ್‌ ವಿಷುವಲ್‌ ಕ್ವಾಲಿಟಿ ರಿಪೋರ್ಟ್‌-2018’ ಹೆಸರಿನ ವಾಯು ಗುಣಮಟ್ಟವರದಿಯಲ್ಲಿ, ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡ ರಾಷ್ಟ್ರ ರಾಜಧಾನಿ ವಲಯವು ಕಳೆದ ಸಾಲಿನಲ್ಲಿ ವಿಶ್ವದಲ್ಲೇ ಅತಿ ಮಲಿನ ಪ್ರದೇಶ ಎಂಬ ಅಪಖ್ಯಾತಿಗೆ ಪಾತ್ರವಾಗಿದ್ದರೆ, ‘ಮಲಿನ ರಾಜಧಾನಿಗಳು’ ಪಟ್ಟಿಯಲ್ಲಿ ದಿಲ್ಲಿ ಮೊದಲ ಸ್ಥಾನ ಗಳಿಸಿ ಇರುಸು-ಮುರುಸಿಗೆ ಕಾರಣವಾಗಿದೆ.

— ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಯ ಸಮೀಕ್ಷೆ ಪ್ರಕಾರ ವಿಶ್ವದ ಅತ್ಯಂತ ಸ್ವಚ್ಛ  ಮಾಲಿನ್ಯಮುಕ್ತ ಗಾಳಿಯನ್ನು ಫಿನ್‌ಲ್ಯಾಂಡ್‌ ದೇಶ ಹೊಂದಿದೆ.

•► 'ಕೌಶಲ್ಯ ಸಂಪರ್ಕ ವೇದಿಕೆ': (Skill connect Portal)

•► 'ಕೌಶಲ್ಯ ಸಂಪರ್ಕ ವೇದಿಕೆ':
(Skill connect Portal)
━━━━━━━━━━━━━━

★ ಕರ್ನಾಟಕ ಆರ್ಥಿಕ ವ್ಯವಸ್ಥೆ
(Karnataka Economic System)

★ ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳು
(Karnataka Govt Programs)


ಕರ್ನಾಟಕ ಸರಕಾರವು ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ ಖಾಸಗಿ ಉದ್ಯೋಗದಾತರು ಮತ್ತು ಉದ್ಯೋಗಾಂಕ್ಷಿಗಳನ್ನು ಒಂದೇ ವೇದಿಕೆಗೆ ತಂದು ನಿರುದ್ಯೋಗ ನಿವಾರಿಸುವ ಗುರಿಯೊಂದಿಗೆ ‘ಕೌಶಲ್ಯ ಸಂಪರ್ಕ ವೇದಿಕೆ’ ಪೋರ್ಟಲ್‌ ರೂಪಿಸಿದೆ.

ಕೋವಿಡ್ 19 ನಂತರದ ಕಾಲದಲ್ಲಿ ರಾಜ್ಯದಲ್ಲಿ ಕುಂಠಿತಗೊಂಡಿರುವ ಆರ್ಥಿಕ, ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಹಾಗೂ ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದರೊಂದಿಗೆ ಅವರಿಗೆ ಸೂಕ್ತ ತರಬೇತಿ ನೀಡುವ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ.

ಎಲ್ಲೆಲ್ಲಿ ಉದ್ಯೋಗಾವಕಾಶಗಳು ಲಭ್ಯವಿವೆ, ಯಾರಿಗೆ ಕೆಲಸದ ಅಗತ್ಯವಿದೆ ಎಂಬ ಮಾಹಿತಿ ಈ ಪೋರ್ಟಲ್ ನಲ್ಲಿ ಲಭ್ಯವಿರುತ್ತದೆ. ಆ ಮೂಲಕ ಲಭ್ಯವಿರುವ ಉದ್ಯೋಗಗಳಿಗೆ ಅಗತ್ಯವಾದ ತರಬೇತಿಯನ್ನು ನೀಡಿ ಆ ಅಭ್ಯರ್ಥಿಗಳನ್ನು ಕೌಶಲಗೊಳಿಸಿ ಸಂಬಂಧಿತ ಕಂಪನಿಗೆ ಕಳಿಸಲಾಗುವುದು.

ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳಿಗೆ ಖಚಿತವಾಗಿ ಕೆಲಸ ನೀಡುವುದರೊಂದಿಗೆ ಕಂಪನಿಗಳಿಗೂ ಈ ಸಂಪರ್ಕ ವೇದಿಕೆ ಮೂಲಕ ಉತ್ತಮ ಗುಣಮಟ್ಟದ ಕೌಶಲಪೂರ್ಣ ಮಾನವ ಸಂಪನ್ಮೂಲ ದೊರೆಯುತ್ತದೆ.

• ಮಾಹಿತಿ, ಸಂಪರ್ಕದ ಸೇತುವೆ
━━━━━━━━━━━━━
ಈ ಹಿಂದೆ ಎಲ್ಲಿ ಉದ್ಯೋಗ ಲಭ್ಯವಿದೆ ಎಂಬ ಮಾಹಿತಿ ಸಿಗುತ್ತಿರಲಿಲ್ಲ. ಹಾಗೆಯೇ, ಉದ್ಯೋಗದಾತರಿಗೂ ಎಲ್ಲಿ ಕೌಶಲಪೂರ್ಣ ಉದ್ಯೋಗಿಗಳು ಸಿಗುತ್ತಾರೆಂಬುದು ಗೊತ್ತಾಗುತ್ತಿರಲಿಲ್ಲ. ಜಾಬ್ ಮಾರುಕಟ್ಟೆಯ ಬೇಡಿಕೆಯನ್ನು ಗಮನಿಸದೇ ತರಬೇತಿ ನೀಡುವ ಅವೈಜ್ಞಾನಿಕ ಪದ್ಧತಿ ಇತ್ತು. ಈಗ ಅಂಥ ವ್ಯವಸ್ಥೆಗೆ ಸಂಪೂರ್ಣವಾಗಿ ಹೋಗಲಾಡಿಸುವುದೇ ಈ ‘ಕೌಶಲ್ಯ ಸಂಪರ್ಕ ವೇದಿಕೆ’ ಪೋರ್ಟಲ್ ನ ಉದ್ದೇಶ.

ಸರಕಾರವು ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಿದೆ. ಅವರ ಬೇಡಿಕೆಗೆ ತಕ್ಕಂತೆ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಕಳಿಸಲಾಗುವುದು.

• ಪೋರ್ಟಲ್ ಹೇಗೆ ಕೆಲಸ ಮಾಡುತ್ತದೆ?
━━━━━━━━━━━━━━━━
ಇದು ಉದ್ಯೋಗದಾತರು ಮತ್ತು ಉದ್ಯೋಗಾಂಕ್ಷಿಗಳ ಸಂಪರ್ಕ ಕೊಂಡಿ. ಇದರ ಮೂಲಕ ಕಂಪನಿಗಳು ತಮಗೆ ಅಗತ್ಯವಿರುವ ಮಾನವ ಸಂಪನ್ಮೂಲದ ಬಗ್ಗೆ ಬೇಡಿಕೆ ಇಡಬಹುದು. ಅದರನ್ವಯ ಉದ್ಯೋಗಾಂಕ್ಷಿಗಳು ತಮ್ಮ ವಿದ್ಯಾರ್ಹತೆ, ಕೌಶಲಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು. ಉದ್ಯೋಗದ ಬೇಡಿಕೆಗೆ ಅನುಗುಣವಾಗಿ ತಂತ್ರಾಂಶವನ್ನು ಬಳಸಿ ಉದ್ಯೋಗಿಗಳನ್ನು ಪೋರ್ಟಲ್ ಹೊಂದಾಣಿಕೆ ಮಾಡಲಿದೆ.

ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ದಿ ನಿಗಮ ಸೂಕ್ತ ತರಬೇತಿ ನೀಡುತ್ತದೆ. ಇದು ಉದ್ಯೋಗಿಗಳಿಗೆ ಅನುಕೂಲವಾಗಿರುತ್ತದೆ. ಜಾಬ್ ಮಾರುಕಟ್ಟೆಗೆ ಬೇಡಿಕೆ ಅನುಗುಣವಾಗಿ ಯುವಕರು ಕೆಲಸ ಹುಡುಕುವುದು ಸುಲಭ. ಅಂಗೈಯಲ್ಲಿ ಎಲ್ಲ ಮಾಹಿತಯೂ ಅವರಿಗೆ ಸಿಗಲಿದೆ.

ಅದೇ ರೀತಿ ಈ ಪೋರ್ಟಲ್ ಮೂಲಕ ಕಂಪನಿಗಳು ಕೂಡ ಆಕಾಂಕ್ಷಿಗಳ ಮಾಹಿತಿಯನ್ನು ನೋಡಬಹುದು. ತಮಗೆ ಸೂಕ್ತವೆನಿದರೆ ನೇರ ಸಂದರ್ಶನಕ್ಕೆ ಕರೆಯಬಹುದು. ಇಲ್ಲವೇ ತಮಗೆ ಅಗತ್ಯವಾದ ಮಾನವ ಸಂಪನ್ಮೂಲದ ಬಗ್ಗೆ ಕೌಶಲ್ಯಾಭಿವೃದ್ಧಿ ನಿಗಮಕ್ಕೆ ಕೋರಿಕೆ ಸಲ್ಲಿಸಬಹುದು. ಅದೇ ರೀತಿ ಅಭ್ಯರ್ಥಿಗಳು ಕೂಡ ತಮಗೆ ಸೂಕ್ತವಾದ ಉದ್ಯೋಗಗಳನ್ನು ಹುಡುಕಿಕೊಳ್ಳಬಹುದು. ಜತೆಗೆ ತಮ್ಮ ಸಾಮರ್ಥ್ಯದ ಮೌಲ್ಯಮಾಪನವನ್ನೂ ಮಾಡಿಕೊಳ್ಳಬಹುದು.

• ಪೋರ್ಟಲ್ ವಿಳಾಸ:
━━━━━━━━━
 https://skillconnect.kaushalkar.com