"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 7 May 2022

•► "ಪ್ರಿಲೀಮ್ಸ್ 2022: ದೈನಂದಿನ (07/05/2022) 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Prelims 2022: Daily 10 Multiple Choice Questions)

 
•► "ಪ್ರಿಲೀಮ್ಸ್  2022: ದೈನಂದಿನ (07/05/2022) 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
 (Prelims 2022: Daily 10 Multiple Choice Questions)

━━━━━━━━━━━━━━━━━━━━━━━━━━━━━━━━━━━━━━


21.'ಉತ್ತರ ವೈದಿಕ ಸಂಸ್ಕೃತ ಸಾಹಿತ್ಯ'ದ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಪ್ರತಿಯೊಂದು ವೇದವು ತನ್ನದೇ ಆದ ಬ್ರಾಹ್ಮಣಕವನ್ನು ಹೊಂದಿದೆ.
2. ಕೆನ್, ಮುಕ್ತಿಕಾ ಮತ್ತು ಕಥಾ ಇವು ಪ್ರಮುಖ ಪುರಾಣಗಳು.
3. ಉಪನಿಷತ್ತುಗಳು ಅಮೂರ್ತವಾದ ತಾತ್ವಿಕ ಚರ್ಚೆಗಳೊಂದಿಗೆ ವ್ಯವಹರಿಸುತ್ತವೆ.
4. ಅರಣ್ಯಕವು ಆತ್ಮ, ಜನನ ಮತ್ತು ಮರಣ ಹಾಗೂ  ಅದರಾಚೆಗಿನ ಜೀವನದ ಕುರಿತು ಚರ್ಚಿಸುತ್ತದೆ.
- ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1, 2 ಮತ್ತು 3 ಮಾತ್ರ.
(ಬಿ) 1, 3 ಮತ್ತು 4 ಮಾತ್ರ.
(ಸಿ) 3 ಮತ್ತು 4 ಮಾತ್ರ.
(ಡಿ) 1, 2, 3 ಮತ್ತು 4.


https://t.me/spardhalokaa


22. ‘ಪ್ರೊಟೆಕ್ಟೆಡ್‌ ಪ್ಲ್ಯಾನೆಟ್‌’ ಎಂಬ ವರದಿಯನ್ನು ಬಿಡುಗಡೆ ಮಾಡಿದವರು...
A.ವಿಶ್ವಸಂಸ್ಥೆ.
B.ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN)
C.ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ  (UNFCCC)
D.ವಿಶ್ವ ಆರ್ಥಿಕ ವೇದಿಕೆ (WEF)


23. “ವೂಲ್ಫ್ ವಾರಿಯರ್ ರಾಜತಾಂತ್ರಿಕತೆ” (wolf warrior diplomacy) ಎಂಬುದು ಇತ್ತೀಚೆಗೆ ಸುದ್ದಿಯಲ್ಲಿದ್ದು, ಈ ದೇಶದ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿದೆ.
A.ಉಕ್ರೇನ್
B.ರಷ್ಯಾ
C.ಚೀನಾ
D.ಉತ್ತರ ಕೊರಿಯಾ


24. ‘ಅಜೆಂಡಾ 21’ ಎಂದೇ ಜಗದ್ವಿಖ್ಯಾತವಾಗಿರುವ ಘೋಷಣೆಯು  ಯಾವ ಸಮಾವೇಶದಲ್ಲಿ ಹೊರಡಿಸಲಾಯಿತು?  
(ಎ) ಸ್ಟಾಕ್‌ಹೋಮ್‌ ಸಮಾವೇಶ.
(ಬಿ) ವಿಯೆನ್ನಾ ಸಮಾವೇಶ
(ಸಿ) ರಿಯೊ ಶೃಂಗಸಭೆ.
(ಡಿ) ಬಾಸೆಲ್ ಸಮಾವೇಶ


25. ಇತ್ತೀಚೆಗೆ ಸುದ್ದಿಯಲ್ಲಿರುವ 'ಕರೆನ್‌ ಜನಾಂಗ'ವು ಈ ದೇಶದ ನಿವಾಸಿಗಳು.
A. ಕ್ಯೂಬಾ.
B. ಹಾಂಕಾಂಗ್.
C. ಚೀನಾ.
D. ಮ್ಯಾನ್ಮಾರ್.‌


26. ಇತ್ತೀಚೆಗೆ ಬಿಡುಗಡೆಯಾದ 'ಆಹಾರ ತ್ಯಾಜ್ಯ ಸೂಚ್ಯಂಕ ವರದಿ'(Food Waste Index)ಯನ್ನು ಪ್ರಕಟಿಸುವವರು,
A. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) .
B. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP).
C. ವಿಶ್ವ ಆಹಾರ ಕಾರ್ಯಕ್ರಮ(WFO)
D. ವಿಶ್ವ ಬ್ಯಾಂಕ್(WB)

27. 'ಕೊಡೊ'(KODO), ಕುಟ್ಕಿ (KUTKI), ಚೆನ್ನ (CHENNA) ಮತ್ತು ಸನ್ವಾ (SANWA) ಶಬ್ದಗಳು ಇತ್ತೀಚೆಗೆ ಸುದ್ದಿಯಲ್ಲಿದ್ದು ಇವಕ್ಕೆ ಸಂಬಂಧಿಸಿವೆ.
A. ಈಶಾನ್ಯ ರಾಜ್ಯಗಳಲ್ಲಿನ ಬುಡಕಟ್ಟುಗಳು.
B. ಅಳಿವಿನಂಚಿನಲ್ಲಿರುವ ದಕ್ಷಿಣ ಭಾರತೀಯ ಭಾಷೆಗಳು.
C. ರಾಗಿಯ ಪ್ರಮುಖ ತಳಿಗಳು.
D. ಎಮ್ಮೆಯ ತಳಿಗಳು.


28. ವಿಜ್ಞಾನಿಗಳು 'ವಿಶ್ವದ ಹಳೆಯ ಪಳೆಯುಳಿಕೆ ಕಾಡಿನ ಅವಶೇಷ'ಗಳನ್ನು ಇಲ್ಲಿ ಪತ್ತೆ ಹಚ್ಚಿದ್ದಾರೆ.
A. ಆಪ್ರಿಕಾ.
B. ಯು.ಎಸ್.ಎ.
C. ರಷ್ಯಾ.
D. ಚೀನಾ.


29. ಏಷ್ಯ, ಯೂರೊಪ್ ಮತ್ತು ಆಫ್ರಿಕ ಖಂಡಗಳು ಸಂಧಿಸುವ ಆಯಕಟ್ಟಿನ ಸ್ಥಳವೆಂದರೆ,
A. ಈಜಿಪ್ಟ್.
B. ಸಿರಿಯಾ.
C. ಪ್ಯಾಲಸ್ತೀನ್
D. ಇರಾಕ್.


30. ಇತ್ತೀಚೆಗೆ ಸುದ್ದಿಯಲ್ಲಿರುವ 'ಮಿಷನ್ ಕಲ್ಪತ್ರು'(Mission KALPATRU) ಎಂಬುದು ಇದಕ್ಕೆ ಸಂಬಂಧಿಸಿದುದಾಗಿದೆ.
A. ವನ ಸಂಪತ್ತನ್ನು ಹೆಚ್ಚಿಸಿ ಪರಿಸರ ಸಮತೋಲನ ಕಾಯ್ದುಕೊಳ್ಳುವುದು.
B. ಪತ್ರಿಕೋದ್ಯಮದ ಸ್ಥಿತಿಗತಿಗಳನ್ನು ಸುಧಾರಿಸುವುದು.
C. ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆ ಸೌಲಭ್ಯಗಳನ್ನು ಹೆಚ್ಚಿಸುವುದು.
D. ಅಪೌಷ್ಟಿಕತೆ ವಿರುದ್ಧ ಹೋರಾಡುವುದು.

… ಮುಂದುವರೆಯುವುದು.

Wednesday 4 May 2022

•► (ಸರಿ ಉತ್ತರಗಳೊಂದಿಗೆ) "ಪ್ರಿಲೀಮ್ಸ್ 2022: ಭಾಗ 2- ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Prelims 2022: Daily 10 Multiple Choice Questions)

 •►(ಸರಿ ಉತ್ತರಗಳೊಂದಿಗೆ) "ಪ್ರಿಲೀಮ್ಸ್  2022: ಭಾಗ 2- ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
 (Prelims 2022: Daily 10 Multiple Choice Questions)

━━━━━━━━━━━━━━━━━━━━━━━━━━━━━━━━━━━━━━

11. ಪಲ್ಲವರ ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. 'ಅರ್ಜುನನ ತಪಸ್ಸು ಏಕಶಿಲಾ ಬಂಡೆಯ ಕೆತ್ತನೆ' ನರಸಿಂಹವರ್ಮನ್-I ನಿಂದ ನೀರ್ಮಿಸಲಾಯಿತು.
2. ಹಲ್ಮಿಡಿ ಶಾಸನಗಳು' ಪಲ್ಲವರ ಸಂಗೀತದ ಆಸಕ್ತಿಯನ್ನು ಚಿತ್ರಿಸುತ್ತವೆ.
3. ‘ತಚ್ಚಿನ ಚಿತ್ರಂ’ ಎಂಬ ಕೃತಿಯನ್ನು ರಾಜಸಿಂಹನು ರಚಿಸಿರುವನು.
— ಮೇಲಿನವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ.
D) ಮೇಲಿನ ಎಲ್ಲವೂ.


12.'ಕುರಿಲ್ ದ್ವೀಪಗಳ ವಿವಾದ'ವು ಇತ್ತೀಚೆಗೆ ಸುದ್ದಿಯಲ್ಲಿದ್ದು ಈ ದೇಶಗಳ ಮಧ್ಯೆ ಜ್ವಲಂತವಾಗಿದೆ.
A) ಫಿಲಿಪೈನ್ಸ್  ಮತ್ತು ಚೀನಾ.
B) ಜಪಾನ್ ಮತ್ತು ಚೀನಾ.
C) ಜಪಾನ್ ಮತ್ತು  ರಷ್ಯಾ
D) ದ.ಕೋರಿಯಾ ಮತ್ತು ಚೀನಾ.


13.'ಕಾಂಗ್ರೆಸ್‌ನ ಫೈಜ್‌ಪುರ ಅಧಿವೇಶನ'ದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್‌ ನಡೆಸಿದ ಮೊದಲ ಅಧಿವೇಶನವಾಗಿತ್ತು.
2. ಇದರ ಅಧ್ಯಕ್ಷತೆಯನ್ನು ವಲ್ಲಭಭಾಯಿ ಪಟೇಲ್ ವಹಿಸಿದ್ದರು.
3. ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಅಧಿವೇಶನವು ಕೂಡ  ಫೈಜ್‌ಪುರದಲ್ಲಿ ಕಾಂಗ್ರೆಸ್ ಅಧಿವೇಶನದೊಂದಿಗೆ ನಡೆಯಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1 ಮತ್ತು 2 ಮಾತ್ರ.
(ಬಿ) 1 ಮತ್ತು 3 ಮಾತ್ರ.
(ಸಿ) 2 ಮತ್ತು 3 ಮಾತ್ರ.
(ಡಿ) 1, 2 ಮತ್ತು 3


14.'ಬಿಲ್ಡ್ ಬ್ಯಾಕ್ ಬೆಟರ್ ವರ್ಲ್ಡ್' (Build Back Better World Initiative) ಉಪಕ್ರಮವು ಇದಕ್ಕೆ ಸಂಬಂಧಿಸಿದುದಾಗಿದೆ. 

A) ಜಿ-20
B) ಜಿ 7
C) ಬ್ರಿಕ್ಸ್
D) ಸಾರ್ಕ್


15.ಮೊಘಲ್ ಅವಧಿಯಲ್ಲಿನ 'ಸತ್ನಾಮಿ'(Satnamis)ಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಸತ್ನಾಮಿಗಳು ಹೆಚ್ಚಾಗಿ ರೈತರು, ಕುಶಲಕರ್ಮಿಗಳು ಮತ್ತು ಕೆಳ ಜಾತಿಯ ಜನರಾಗಿದ್ದರು.
2. ಅವರು ಜಾತಿ, ಶ್ರೇಣಿಯ ಅಥವಾ ಹಿಂದೂ ಮುಸ್ಲಿಮರ ನಡುವಿನ ಭೇದಗಳನ್ನು ಗಮನಿಸಲಿಲ್ಲ ಮತ್ತು ಕಟ್ಟುನಿಟ್ಟಾದ ನೀತಿ ಸಂಹಿತೆಯನ್ನು ಅನುಸರಿಸಿದರು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1 ಮಾತ್ರ
(ಬಿ) 2 ಮಾತ್ರ
(ಸಿ) 1 ಮತ್ತು 2 ಎರಡೂ
(ಡಿ) 1 ಅಥವಾ 2 ಅಲ್ಲ.


16.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ನೆರೆಯ ಮೊಘಲ್ ಪ್ರಾಂತ್ಯಗಳ ಮೇಲೆ ತೆರಿಗೆಯನ್ನು ವಿಧಿಸುವ ಮೂಲಕ ಶಿವಾಜಿ ತನ್ನ ಆದಾಯವನ್ನು ಪೂರಕಗೊಳಿಸಿದನು.
2. ಶಿವಾಜಿ ಜಮೀನ್ದಾರಿ (ದೇಶಮುಖಿ) ವ್ಯವಸ್ಥೆಯನ್ನು ಉತ್ತೇಜಿಸಿದನು.
3. ಶಿವಾಜಿ ಮಿರಾಸ್ದಾರರನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಿದನು.
- ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1 ಮತ್ತು 3 ಮಾತ್ರ
(ಬಿ) 1 ಮತ್ತು 2 ಮಾತ್ರ
(ಸಿ) 2 ಮತ್ತು 3 ಮಾತ್ರ
(ಡಿ) 1, 2 ಮತ್ತು 3


17.'ಸೇಂಟ್ ಪೀಟರ್ಸ್‌ಬರ್ಗ್ ಘೋಷಣೆʼಯು ಇದಕ್ಕೆ ಸಂಬಂಧಿಸಿದುದಾಗಿದೆ.
A.ಅಂತರರಾಷ್ಟ್ರೀಯ ಸೈಬರ್ ಭದ್ರತೆ.
B.ಕಡಲತೀರದ ಯೋಗಕ್ಷೇಮ ಮತ್ತು ಸಿಬ್ಬಂದಿ ಬದಲಾವಣೆ.
C.ಹವಾಮಾನ ಬದಲಾವಣೆ.
D.ಹುಲಿ ಸಂರಕ್ಷಣೆ.


18.ಕೆಳಗೆ ನೀಡಲಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಉಷ್ಣಾಂಶ ಹೆಚ್ಚಾಗಿರುವ ಪ್ರದೇಶಗಳಲ್ಲಿ ಒತ್ತಡವು ಕಡಿಮೆ.
2. ವಾಯುಮಂಡಲದ ಒತ್ತಡವು ಭೂಮೇಲ್ಮೈನಿಂದ ಎತ್ತರಕ್ಕೆ  ಹೋದಂತೆ ಕಡಿಮೆಯಾಗುವುದು.  
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ.) 1 ಮಾತ್ರ
(ಬಿ.) 2 ಮಾತ್ರ
(ಸಿ.) 1 ಮತ್ತು 2 ಎರಡೂ
(ಡಿ.) 1 ಅಥವಾ 2 ಆಗಿಲ್ಲ


19. ವೇದಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಋಗ್ವೇದ ಕಾಲದಲ್ಲಿ, ಸ್ತ್ರೀ ದೇವತೆಗಳ ಉಲ್ಲೇಖವಿಲ್ಲ.
2. ಯಜುರ್ವೇದವು ರೋಗಗಳ ಚಿಕಿತ್ಸೆಗೆ ಸಂಬಂಧಿಸಿದೆ.
3. ಸಾಮವೇದದ ಎಲ್ಲಾ ಶ್ಲೋಕಗಳನ್ನು ಋಗ್ವೇದದಿಂದ ಎರವಲು ಪಡೆಯಲಾಗಿದೆ.
4. ಅಥರ್ವವೇದವು ಧಾರ್ಮಿಕ ಆಚರಣೆಗಳ ನಿರ್ವಹಣೆಗೆ ಸಂಬಂಧಿಸಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(ಎ) 1 ಮತ್ತು 3 ಮಾತ್ರ
(ಬಿ) 1, 2 ಮತ್ತು 4 ಮಾತ್ರ
(ಸಿ) 2, 3 ಮತ್ತು 4 ಮಾತ್ರ
(ಡಿ) 1, 2, 3 ಮತ್ತು 4


20.'ರಾಟೆಲ್ ಜಲ ವಿದ್ಯುತ್ ಯೋಜನೆ'ಯು ಈ ಕೆಳಗಿನ ನದಿಗೆ ಸಂಬಂಧಿಸಿದೆ.
A) ಬ್ರಹ್ಮಪುತ್ರ ನದಿ.
B) ಚೆನಬ್ ನದಿ.
C) ಸಟ್ಲೆಜ್ ನದಿ.
D) ಕೋಸಿ ನದಿ.

Sunday 1 May 2022

•► "ಪ್ರಿಲೀಮ್ಸ್ 2022: ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Daily 10 Multiple Choice Questions)

 •► "ಪ್ರಿಲೀಮ್ಸ್  2022: ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
 (Daily 10 Multiple Choice Questions)

━━━━━━━━━━━━━━━━━━━━━━

01.ಭೂಮಿಯ ಕಕ್ಷೆಯಾಚೆಗಿನ ‘ಲ್ಯಾಂಗ್ರೇಜ್‌ ಪಾಯಿಂಟ್‌’ ಕುರಿತ ಈ  ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಗಳು ಸರಿಯಾಗಿದೆ?
1) ಈ ಸಂಯೋಜನೆಯಲ್ಲಿ ಸೂರ್ಯ ಮತ್ತು ದೂರದರ್ಶಕದ ನಡುವೆ ಭೂಮಿ ಇರುತ್ತದೆ.
2) ಸೂರ್ಯ, ಭೂಮಿ ಮತ್ತು ದೂರದರ್ಶಕವು ಒಂದೇ ಸರಳ ರೇಖೆಯಲ್ಲಿ ಇರುತ್ತವೆ.
3) ಈ ಸಂಯೋಜನೆಯಲ್ಲಿ ಭೂಮಿಯ ನೆರಳಿನ ಪ್ರದೇಶದಲ್ಲಿ ಸೂರ್ಯನ ಗುರುತ್ವ ಬಲ ಸ್ವಲ್ಪ ಕಡಿಮೆ ಇರುತ್ತದೆ.
A. 1 ಮಾತ್ರ.
B. 1 ಮತ್ತು 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನೆಲ್ಲವೂ. 

02. `ಪಿರ್ ಪಂಜಾಲ್ ಶ್ರೇಣಿ`ಯ ಕುರಿತ ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಗಳು ಸರಿಯಾಗಿದೆ?
1) ಪಿರ್ ಪಂಜಾಲ್ಪರ್ವತ ಶ್ರೇಣಿಯು ಪಶ್ಚಿಮ (ಪಂಜಾಬ್) ಹಿಮಾಲಯದ ಭಾಗವಾಗಿದೆ
2) ಇದು ಒಂದು ಬದಿಯಲ್ಲಿ ಬಿಯಾಸ್ ಮತ್ತು ಸಟ್ಲೆಜ್ ನದಿಗಳ ನಡುವೆ ಮತ್ತು ಇನ್ನೊಂದು ಬದಿಯಲ್ಲಿ ಸಿಂಧೂ  ನಡುವೆ ವಿಭಜನೆಯನ್ನು ರೂಪಿಸುತ್ತದೆ.
3) ಹಿಮಾಲಯದ ಪೂರ್ವ ಪಿರ್ ಪಂಜಾಲ್ ಶ್ರೇಣಿಯಲ್ಲಿರುವ  ರೋಹ್ಟಂಗ್ ಕಣಿವೆಮಾರ್ಗದಲ್ಲಿ ಅಟಲ್ ಸುರಂಗವನ್ನು ನಿರ್ಮಿಸಲಾಗಿದೆ.
A. 1 ಮಾತ್ರ.
B. 1 ಮತ್ತು 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನೆಲ್ಲವೂ.  


03. ಈ ಕೆಳಗಿನ ಯಾವ ಉಪಕ್ರಮಗಳು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಹೋರಾಟದೊಂದಿಗೆ ಸಂಬಂಧಿಸಿಲ್ಲ.
1. ಚುನಾವಣಾ ತೆರಿಗೆ (Poll Tax) ವಿರುದ್ಧ ಪ್ರಚಾರ.
2. ಬಲವಂತದ ದುಡಿಮೆ ವಿರುದ್ಧ ಅಭಿಯಾನ.
3. 'ಇಂಡಿಯನ್ ಒಪಿನಿಯನ್' ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.
4.ಭಾರತೀಯರ ವಲಸೆಯ ಮೇಲಿನ ನಿರ್ಬಂಧದ ವಿರುದ್ಧದ ಅಭಿಯಾನ.
5.ವಿವಾಹಗಳ ನೋಂದಣಿ ಮೇಲಿನ ನಿರ್ಬಂಧದ ವಿರುದ್ಧದ ಅಭಿಯಾನ
(ಎ) 1 ಮಾತ್ರ.
(ಬಿ) 2 ಮಾತ್ರ.
(ಸಿ) 1, 2 ಮತ್ತು 5 ಮಾತ್ರ.
(ಡಿ) 2, 4 ಮತ್ತು 5  ಮಾತ್ರ.


04. ವುಡ್ಸ್ ಡಿಸ್‍ಪ್ಯಾಚ್ (Wood’s Despatch) ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1. ಇದು ಎಲ್ಲಾ ಹಂತಗಳಲ್ಲಿ ಇಂಗ್ಲಿಷ್ ಅನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸಿತು.
2. ಇದು ಸ್ತ್ರೀ ಮತ್ತು ವೃತ್ತಿಪರ ಶಿಕ್ಷಣದ ಮೇಲೆ ಒತ್ತಡ ಹಾಕಿತು.
3. ಸರ್ಕಾರಿ ಸಂಸ್ಥೆಗಳಲ್ಲಿ ನೀಡುವ ಶಿಕ್ಷಣವು ಜಾತ್ಯತೀತವಾಗಿರಬೇಕು ಎಂದು ಇದು ಒತ್ತಿ ಹೇಳಿತು.

— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ.
D) ಮೇಲಿನ ಎಲ್ಲವೂ.


05."ನಿರ್ದಿಷ್ಟ ಕುಶಲ ಕಾರ್ಮಿಕ"(Specified Skilled Worker)ರಿಗೆ ಸಂಬಂಧಿದಂತೆ ಸೂಕ್ತ ಕಾರ್ಯಾಚರಣೆ ವ್ಯವಸ್ಥೆಗಾಗಿ ಮೂಲಭೂತ ಚೌಕಟ್ಟು(Basic Framework)ನ ಕುರಿತಂತೆ ಭಾರತ ಸರ್ಕಾರವು ಈ ಕೆಳಕಂಡ ಯಾವ ದೇಶದೊಂದಿಗಿನ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಿದೆ?
A) ಸೌದಿ ಅರೇಬಿಯಾ
B) ಸ್ವಿಟ್ಜರ್‌ಲೆಂಡ್
C) ಜಪಾನ್
D) ಜರ್ಮನಿ.

06.ಈ ಕೆಳಗಿನವುಗಳಲ್ಲಿ ಯಾವ ದೇಶವು ‘ಕ್ವಾಡ್‌’(Quad)ನ ಸದಸ್ಯ ರಾಷ್ಟ್ರವಾಗಿಲ್ಲ.
A) ಭಾರತ.
B) ಅಮೆರಿಕ.
C) ಜಪಾನ್
D) ಚೀನಾ


07.ಇತ್ತೀಚೆಗೆ ಸುದ್ದಿಯಲ್ಲಿದ್ದ 'ಜಾಗತಿಕ ಸುಸ್ಥಿರ ಅಭಿವೃದ್ಧಿ ಶೃಂಗಸಭೆ'(World Sustainable Development Summit)ಯು ಈ ಸಂಸ್ಥೆಯ ವಾರ್ಷಿಕ ಕಾರ್ಯಕ್ರಮವಾಗಿದೆ.
A. ವಿಶ್ವ ಆರ್ಥಿಕ ವೇದಿಕೆ (WEF)
B.ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN)
C.ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ  (UNFCCC)
D.ಇಂಧನ ಮತ್ತು ಸಂಶೋಧನಾ ಸಂಸ್ಥೆ (TERI)


08."ಜಾಗತಿಕ ಅಪಾಯಗಳ ವರದಿ"(Global Risk Report) ಯನ್ನು ಬಿಡುಗಡೆ ಮಾಡಿದವರು...
A) ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್‍ಇಪಿ)
B) ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ' (ಎಫ್‌ಎಟಿಎಫ್‌)  
C) ವಿಶ್ವ ಆರ್ಥಿಕ ವೇದಿಕೆ
D) ವಿಶ್ವ ಬ್ಯಾಂಕು


09.'ಪ್ರಧಾನಮಂತ್ರಿ ಮಾತೃವಂದನಾ ಯೋಜನೆ' ಕುರಿತ ಈ ಕೆಳಗಿನ ಸರಿಯಾದ ಹೇಳಿಕೆ/ಗಳನ್ನು ಪರಿಗಣಿಸಿ.
1.ಈ ಯೋಜನೆಯ ಮೊದಲಿನ ಹೆಸರು ಇಂದಿರಾ ಮಾತೃ ಯೋಜನೆ ಎಂದು.
2. ಮೊದಲ ಜೀವಂತ ಹೆರಿಗೆಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ.
3. ಇದನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನುಸಾರ ಅನುಷ್ಠಾನಗೊಳ್ಳಿಸಲಾಗಿದೆ. 

— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ.
D) ಮೇಲಿನ ಎಲ್ಲವೂ.


10. 'ಬಿಂಜರಪುರಿ', 'ಮೋಟು', 'ಘುಮುಸರಿ', ಖರಿಯಾರ್,
ಇತ್ತೀಚೆಗೆ ಸುದ್ದಿಯಲ್ಲಿ ಕಂಡಿದ್ದು?

A) ಬುಡಕಟ್ಟು ನೃತ್ಯಗಳು.
B) ಧೀರ್ಘಾವಧಿ ಬದುಕಬಲ್ಲ ಮರಭೂಮಿ ಸಸ್ಯಗಳು.
C) ಜಾನುವಾರುಗಳ ತಳಿ
D) GI ಟ್ಯಾಗ್ ಮಾಡಲಾದ ವಸ್ತುಗಳು. 

...ಮುಂದುವರೆಯುವುದು.