"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 29 December 2017

☀️ ಕೆಎಎಸ್ ಮುಖ್ಯ ಪರೀಕ್ಷೆ 2017 ರ ಐಚ್ಛಿಕ ಪತ್ರಿಕೆ -ಭೌಗೋಳ ಶಾಸ್ತ್ರ ಪತ್ರಿಕೆ -1 ಮತ್ತು 2 ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) 2017 OPTIONAL PAPER GEOGRAPHY)

☀️ ಕೆಎಎಸ್ ಮುಖ್ಯ ಪರೀಕ್ಷೆ 2017 ರ ಐಚ್ಛಿಕ ಪತ್ರಿಕೆ -ಭೌಗೋಳ ಶಾಸ್ತ್ರ ಪತ್ರಿಕೆ -1 ಮತ್ತು 2 ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) 2017 OPTIONAL PAPER GEOGRAPHY)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com



●. ಐಚ್ಛಿಕ ಪತ್ರಿಕೆ : ಭೌಗೋಳ ಶಾಸ್ತ್ರ ಪತ್ರಿಕೆ - 1
(OPTIONAL PAPER : GEOGRAPHY - 1)

1ಭೂ ಫಲಕಗಳ ಹರಿವಿನಲಿ ಭೂಕಂಪ, ಮಡಿಕೆಗಳು, ಜಾಲಾಮುಖಿಗಳ ವಿಂಗಡನೆ.

2.ಜೈವಿಕ ಮಣ್ಣು ಮತ್ತು ಮಣ್ಣಿನ ವಿಧಗಳು.

3.ಒತ್ತಡ ಪಟ್ಟಿಗಳು ಮತ್ತು ಮಾರುತಗಳು ಗೋಳದ ನಡುವೆ ಇರುವ ವ್ಯತ್ಯಾಸ ಬರೆಯಿರಿ.

4.ಭೌಗೋಳ ಶಾಸ್ತ್ರಕ್ಕೆ ಅರಬ್ಬಿ ಯರ ಕೊಡುಗೆ ಬರೆಯಿರಿ.

 5.ಮಾನ್ ಸೂನ್ ಮಾರುತಗಳಲಿ ಎಲ್ ನೀನೋ ಪಾತ್ರ.

6.ಸಾಗರದ ಲವಣತೆಗೆ ಕಂಡು ಬರುವ ಅಂಶಗಳು.

7. ವಿಶ್ವದ ಕೃಷಿ ಕ್ಷೇತ್ರಗಳು ಯಾವುವು ವಿವರಿಸಿ.

8.ವಸತಿಗೆ ಸಂಬಂಧಿಸಿದ ಸಿದ್ದಾಂತ ವಿವರಿಸಿ.

8.ಮಣ್ಣಿನ ವಿಧಗಳ ಬಗ್ಗೆ ಬರೆಯಿರಿ.



●. ಐಚ್ಛಿಕ ಪತ್ರಿಕೆ : ಭೌಗೋಳ ಶಾಸ್ತ್ರ ಪತ್ರಿಕೆ - 2
(OPTIONAL PAPER : GEOGRAPHY - 2)

1. ರೈಲು ಸಾರಿಗೆ ಮಹತ್ವ ಮತ್ತು ಹಂಚಿಕೆ ತಿಳಿಸಿರಿ.

2.ಭಾರತದ ಅಂತರ ರಾಷ್ಟ್ರೀಯ ಗಡಿ ಸಮಸ್ಯೆಗಳ ಬಗ್ಗೆ ಬರೆಯಿರಿ.

 3.ಭಾರತದ ಮಾನವ ಜನಾಂಗದ ಲಕ್ಷಣಗಳು ಮತ್ತು ಹಂಚಿಕೆ ವಿವರಿಸಿ.

4.ಕರ್ನಾಟಕದ ಸ್ವಾಭಾವಿಕವಾದ ಅರಣ್ಯ ದ ಬಗ್ಗೆ ಬರೆಯಿರಿ.

5.ಕರ್ನಾಟಕ ನಗರೀಕರಣದ ಬಗ್ಗೆ ಬರೆಯಿರಿ.

6.ಭಾರತದ ಹಿಮಾಲಯ ದ ಸಂಕೀರ್ಣ ನದಿ ಹರಿಯುವಿನ ಬಗ್ಗೆ ಬರೆಯಿರಿ.

7.ಕಲಿದಲು ಮತ್ತು ಪೆಟ್ರೋಲಿಯಂ ಶಕ್ತಿ ಸಂಪನ್ಮೂಲಗಳ ಬಗ್ಗೆ ಬರೆಯಿರಿ.

8.ಭಾರತದ ಪೆನ್ಸ್ ಸುಲಾರ ಭೂ  ಲಕ್ಷಣಗಳನ್ನು ಬರೆಯಿರಿ.

☀️ ಕೆಎಎಸ್ ಮುಖ್ಯ ಪರೀಕ್ಷೆ 2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 4 ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) 2017 GENERAL STUDIES PAPER - 4)

☀️ ಕೆಎಎಸ್ ಮುಖ್ಯ ಪರೀಕ್ಷೆ 2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 4 ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) 2017 GENERAL STUDIES PAPER -  4)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com


●. ಸಾಮಾನ್ಯ ಅಧ್ಯಯನ ಪತ್ರಿಕೆ - 4
(GENERAL STUDIES PAPER - 4)

1. ನೈತಿಕಯಲಿ ಜೆ ಎಸ್ ಮಿಲ್ ಮತ್ತು ಚಾವಾಕ ರವರ ಕುರಿತು ಬರೆಯಿರಿ.

2. ಆಡಳಿತದ ಅಧಿಕಾರಿಗಳಿಗೆ ಇರಬೇಕಾದ ನೈತಿಕವಾದ ಅಂಶಗಳು ಯಾವುವು.

3.ಮಾಹಿತಿ ಹಕ್ಕು ಕಾಯ್ದೆ ಧೇಯ ಮತ್ತು ನೈತಿಕತೆ ಅಂಶಗಳನ್ನು ವಿವರಿಸಿ.

4. ಸರ್ಕಾರದ ನೈತಿಕತೆ ಅಂಶಗಳು ವಿವರಿಸಿ.

5.ಸಮಾಜದ ಸಂವಹನದ ಮಾಧ್ಯಮದ ಬಗ್ಗೆ ಬರೆಯಿರಿ.

6.ಅಂತರ ರಾಷ್ಟ್ರೀಯ ಸಂಬಂಧದಲಿ ನೈತಿಕತೆ ವಿಫಲತೆ ವಿವರಿಸಿ. 

Thursday 28 December 2017

☀️ ಕೆಎಎಸ್ ಮುಖ್ಯ ಪರೀಕ್ಷೆ-2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 3 ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) - 2017 GENERAL STUDIES PAPER - 3)

☀️ ಕೆಎಎಸ್ ಮುಖ್ಯ ಪರೀಕ್ಷೆ-2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 3 ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) - 2017 GENERAL STUDIES PAPER - 3)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com


●. ಸಾಮಾನ್ಯ ಅಧ್ಯಯನ ಪತ್ರಿಕೆ- 3
(GENERAL STUDIES PAPER-3)

1.ಪರಿಸರಕ್ಕೆ ಸಂಬಂಧಿಸಿದ ಕೆಂಪು ಪುಸ್ತಕದ ಬಗ್ಗೆ ಬರೆಯಿರಿ.

2.ವನ್ಯಜೀವಿಗಳ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಕೆ ಸಂಬಂಧಿಸಿದಂತೆ 5 , ನು ಕುರಿತು ವಿವರಿಸಿ.

3.CFC ಮತ್ತು HFC ನಡುವಿನ ವ್ಯತ್ಯಾಸ ಬರೆಯಿರಿ.

4.ಘನ ಮಾಲಿನ್ಯ ಮತ್ತು ಬೆಂಗಳೂರು ಮಹಾನಗರದ ಮಾಲಿನ್ಯದ ಬಗ್ಗೆ ಬರೆಯಿರಿ.

5. INSAT ಉಪಗ್ರಹದಿಂದ ಸರ್ಕಾರವು ಅಳವಡಿಸಿ ಕೊಂಡಿರುವ ಬಗೆಗಳು.

6.ಎರೆಹುಳು ಮತ್ತು ಸಾವಯವ ಎರೆ ಗೊಬ್ಬರ ಬಗ್ಗೆ ಬರೆಯಿರಿ.

7.ರೇಷ್ಮೆ ಕೃಷಿ ಮತ್ತು ಅದರ ವಿಧಗಳು.

8.ಕುರಿ ಮತ್ತು ಮೇಕೆ ಸಾಗಾಣಿಕೆ ವಾಣಿಜ್ಯ ಉಪಯುಕ್ತ, ವಿವರಿಸಿ.

9.ಮಳೆ ನೀರಿನ ಕೊಯ್ಲು ಪದ್ಧತಿ ಹಾಗೂ ಅದರ ವಿಧಗಳು  ವಿವರಿಸಿ.

10. ರಾಜ್ಯದಲ್ಲಿ ಶಕ್ತಿ ಸಂಪನ್ಮೂಲಗಳು ಕೊರತೆಯಿಂದ, ಅಸಂಸಂಪನ್ಮೂಲಗಳ ಉಪಯೋಗದಲಿ ಪರಿಸರ ಮಾಲಿನ್ಯ ತಡೆಯಲು ಪಾತ್ರ ಕುರಿತು ವಿವರಿಸಿ.

☀️ ಕೆಎಎಸ್ ಮುಖ್ಯ ಪರೀಕ್ಷೆ -2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 2 ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS)-2017 GENERAL STUDIES PAPER - 2)

☀️ ಕೆಎಎಸ್ ಮುಖ್ಯ ಪರೀಕ್ಷೆ -2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 2 ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS)-2017 GENERAL STUDIES PAPER -  2)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)


ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com



●. ಸಾಮಾನ್ಯ ಅಧ್ಯಯನ ಪತ್ರಿಕೆ -2.
(General Studies Paper -2)

1.ನದಿಯ ಹರಿವಿನ ಬಗ್ಗೆ ಬರೆಯಿರಿ.

2.ಮಾನವನ ಜನಾಂಗದ ಕುರಿತು ಬರೆಯಿರಿ.

3. ರಾಜ್ಯ ನೀತಿ ನಿರ್ದೇಶಕ ತತ್ವ ದ Wellfersate ಕುರಿತು ಬರೆಯಿರಿ.

4. ಕಂಟ್ರೋಲ್ರ್ ಮತ್ತು ಆಡಿಟರ್ ಜನರಲ್ ಅಧಿಕಾರಗಳ ಬಗ್ಗೆ ಬರೆಯಿರಿ.

5.ರಾಷ್ಟ್ರಪತಿ ಮತ್ತು ರಾಜ್ಯಪಾಲರ ನಡುವಿನ ಅಧಿಕಾರದ ಹೋಲಿಕೆ ಬಗ್ಗೆ ಬರೆಯಿರಿ.

6.ಮೂಲಭೂತ ಹಕ್ಕುಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಕ್ಕನ್ನು ವಿವರಿಸಿ.

7.ಗೃಹ ಇಲಾಖೆಯ ಜವಾಬ್ದಾರಿ ಕುರಿತು ಬರೆಯಿರಿ.

8.ಬಲವಂತರಾಯ್ ಮೆಹ್ತಾ ಸಮಿತಿ ವಿವರಿಸಿ.

9.ಕರ್ನಾಟಕದ ಬೆಳೆಗಳ ಹಂಚಿಕೆಯು ಭೌಗೋಳಿಕ ಮಾದರಿಯಲ್ಲಿ ತಿಳಿಸಿರಿ.

Wednesday 27 December 2017

☀️ ಕೆಎಎಸ್ ಮುಖ್ಯ ಪರೀಕ್ಷೆ - 2017 ರ ಸಾಮಾನ್ಯ ಅಧ್ಯಯನ ಪತ್ರಿಕೆ : I ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) GENERAL STUDIES PAPER - I 2017)

☀️ ಕೆಎಎಸ್ ಮುಖ್ಯ ಪರೀಕ್ಷೆ-2017 ರ ಸಾಮಾನ್ಯ ಅಧ್ಯಯನ ಪತ್ರಿಕೆ : I  ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) GENERAL STUDIES PAPER - I 2017)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com


●. ಸಾಮಾನ್ಯ ಅಧ್ಯಯನ ಪೇಪರ್ -1.
(General Studies Paper : I)

1ಸಿಂಧೂ ಮತ್ತು ಹರಪ ನಾಗರಿಕತೆ ನಡುವಿನ ವ್ಯತ್ಯಾಸ.
2. ರಾಷ್ಟ್ರಕೂಟರ, ಕಲೆ ಮತ್ತು ವಾಸ್ತು ಶಿಲ್ಪಿ.
3.ಅಳಿಯ ರಾಮಯನ, ರಾಜ ನೀತಿ.
4.ಬೆಳಗಾವಿ 1924 ಕಾಂಗ್ರೆಸ್ ಅಧಿವೇಶನ.
5.ಸರ್ ಸೈಯದ್ ಅಹಮದ್ ಖಾನ್ ಆಲೀಗಢ್ ಚಳುವಳಿ.
5. 1946ರ ಕನ್ನಡ ಏಕೀಕರಣ ಚಳುವಳಿ.
6. ಸಾಮಾಜಿಕ ಚಳುವಳಿ ಎಂದರೇನು?. ಅದರ ಲಕ್ಷಣಗಳು.
7. ಪಾತ್ರ ಎಂದರೇನು?. ಅದರಲ್ಲಿ ಮಹಿಳೆಯರ ದುಡಿಮೆ ಕೆಲಸದ ಕ್ಷೇತ್ರದ ಕುರಿತು ಬರೆಯಿರಿ.
8.ರಾಜ್ಯ ಶಾಸಕಾಂಗ ಮಿತಿಗಳ ಬಗ್ಗೆ ಬರೆಯಿರಿ.
9.ಕರ್ನಾಟಕದ EXPORT ನೀತಿಯ ಕುರಿತು ಬರೆಯಿರಿ.
10.ಜೀತಗಾರಿಕೆ  ಎಂದರೇನು?.ಸರ್ಕಾರ ಇದನ್ನು ಹೋಗಲಾಡಿಸಲು ತಗೆದು ಸಂವಿಧಾನದ ಬದ್ಧ ಕಾಯ್ದೆಗಳು ಯಾವುವು.
11. ವಿಕೇಂದೀಕರಣ ಬಗ್ಗೆ ಬರೆಯಿರಿ.
12.ನಂಜುಂಡಪ ವರದಿ ಕುರಿತು  ಬರೆಯಿರಿ.
13.ದಿವಾನ್ ಇಸ್ಮಾಯಿಲ್ ರವರು, ಮೈಸೂರಿಗೆ ನೀಡಿದ ಕೊಡುಗೆ ಬಗ್ಗೆ ಬರೆಯಿರಿ.
14.ಗ್ರಾಮೀಣ ಪ್ರದೇಶಗಳಲ್ಲಿ ನೈಮಲೀಕರಣದ ಬಗ್ಗೆ ಬರೆಯಿರಿ.

☀️ ಕೆಎಎಸ್ ಮುಖ್ಯ ಪರೀಕ್ಷೆ ಪ್ರಬಂಧ ಪತ್ರಿಕೆ - 2017 ಯಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) ESSAY PAPER - 2017

☀️ ಕೆಎಎಸ್ ಮುಖ್ಯ ಪರೀಕ್ಷೆ ಪ್ರಬಂಧ ಪತ್ರಿಕೆ - 2017 ಯಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) ESSAY PAPER -  2017
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com


●. ಪ್ರಬಂಧ ಪತ್ರಿಕೆ - 2017

— ಪ್ರಬಂಧಗಳು ಈ ರೀತಿ ಇದೆ.
1.ಭಾರತದ ಗಡಿ ಸಮಸ್ಯೆಗಳು.
2.ಲಿಂಗಾಯತ ಧರ್ಮದ ಹೋರಾಟಗಳು.
3.ಅಂತರ್ ನದಿ ಜಲಾನಯನದ ಸಮಸ್ಯೆಗಳು.
4.I M F . BANK ಜಾಗತಿಕ ಸಾಧನೆಗಳನ್ನು ವಿವರಿಸಿ.
5. ಭಾರತದ ಬಡತನಕ್ಕೆ ಕಾರಣ, ಮತ್ತು ಸಮಸ್ಯೆಗಳು.
6. ಬೆಂಗಳೂರು ನಗರದ ಭೌಗೋಳಿಕ ನೆಲೆ,  ಐಟಿ ಉದ್ಯಮದಲ್ಲಿ ಸಾಧನೆ ಬರೆಯಿರಿ.
ಇಷ್ಟು 250 ಅಂಕಗಳು.

Monday 25 December 2017

☀️ ಅಂತಾರಾಷ್ಟ್ರೀಯ ನ್ಯಾಯಾಲಯ : ಅದರ ಕಾರ್ಯಗಳು & ಕೋರ್ಟ್‌ನ ಅಧಿಕಾರ ವ್ಯಾಪ್ತಿ. (International Court of Justice: its functions & jurisdiction of the Court)

☀️ ಅಂತಾರಾಷ್ಟ್ರೀಯ ನ್ಯಾಯಾಲಯ : ಅದರ ಕಾರ್ಯಗಳು & ಕೋರ್ಟ್‌ನ ಅಧಿಕಾರ ವ್ಯಾಪ್ತಿ.
(International Court of Justice: its functions & jurisdiction of the Court)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)


ವಿಶ್ವಸಂಸ್ಥೆಯ ನಿರ್ಣಯವೊಂದರ ಅನ್ವಯ ಈ ಅಂತಾರಾಷ್ಟ್ರೀಯ ನ್ಯಾಯಾಲಯ 1945ರಲ್ಲಿ ರಚಿತವಾಗಿದೆ. ನೆದರ್ಲೆಂಡ್‌ನಲ್ಲಿರುವ ಈ ಕೋರ್ಟ್‌ನಲ್ಲಿ 15 ಮಂದಿ ನ್ಯಾಯಾಧೀಶರು ಇರುತ್ತಾರೆ. ವಿಶ್ವಸಂಸ್ಥೆಯ ಸದಸ್ಯ ದೇಶಗಳು ಸೂಚಿಸಿದ ನ್ಯಾಯತಜ್ಞರನ್ನು ಈ ಕೋರ್ಟ್‌ಗೆ ಆಯ್ಕೆ ಮಾಡಲಾಗುತ್ತದೆ. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಸದಸ್ಯ ದೇಶಗಳು ಚುನಾವಣೆ ಮೂಲಕ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತವೆ. ನ್ಯಾಯಾಧೀಶರ ಅವಧಿ ಒಂಬತ್ತು ವರ್ಷ. ಮೂರು ವರ್ಷಕ್ಕೊಮ್ಮೆ ಐವರು ನ್ಯಾಯಾಧೀಶರ ನೇಮಕಗಳು ನಡೆಯುತ್ತವೆ.





●.ಕಾರ್ಯಗಳು :

ಸುಮಾರು ಎಪ್ಪತ್ತು ವರ್ಷಗಳಿಂದಲೂ ಈ ಕೋರ್ಟ್ ಕಾರ್ಯನಿರ್ವಹಿಸುತ್ತಿದೆಯಾದರೂ ಜಗತ್ತಿನ ವಿದ್ಯಮಾನಗಳ ಮೇಲೆ ಅದು ಪರಿಣಾಮ ಬೀರಿದ್ದು ಕಡಿಮೆಯೇ.
ದೇಶ-ದೇಶಗಳ ನಡುವಣ ವಿವಾದಗಳನ್ನು ಬಗೆಹರಿಸುವ ದಿಸೆಯಲ್ಲಿ ಅಗತ್ಯ ಸಲಹೆ ನೀಡುವುದು, ಅಷ್ಟೇ ಏಕೆ ನ್ಯಾಯದಾನ ಮಾಡುವುದು ಈ ಕೋರ್ಟ್‌ನ ಕೆಲಸ. ಈ ಕೋರ್ಟ್‌ನ ಮುಂದೆ ನೂರಾರು ಪ್ರಕರಣಗಳು ವಿಚಾರಣೆಗೆ ಬಂದಿವೆ. ಮುಖ್ಯವಾಗಿ ಗಡಿ ವಿವಾದಗಳು, ಒಂದು ದೇಶ ಮತ್ತೊಂದು ದೇಶದಲ್ಲಿ ಹಸ್ತಕ್ಷೇಪ ಮುಂತಾದ ಹತ್ತಾರು ರೀತಿಯ ಪ್ರಕರಣಗಳು ದಾಖಲಾಗಿವೆ.






●.ಕೋರ್ಟ್‌ನ ಅಧಿಕಾರ ವ್ಯಾಪ್ತಿ :

ಬಹಳ ಪ್ರಕರಣಗಳಲ್ಲಿ ಈ ಕೋರ್ಟ್‌ನ ಅಧಿಕಾರ ವ್ಯಾಪ್ತಿ ಕುರಿತಂತೆಯೇ ವಿವಾದ ಆರಂಭವಾಗಿ, ವಿಚಾರಣೆ ಏಕಪಕ್ಷೀಯವಾಗಿ ನಡೆದದ್ದು ಮತ್ತು ಅಂತಿಮ ತೀರ್ಪನ್ನು ಒಪ್ಪಲು ನಿರಾಕರಿಸಿರುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ತೀರ್ಪನ್ನು ಜಾರಿಗೊಳಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುವ ಪ್ರಸ್ತಾಪವನ್ನು ಕೋರ್ಟ್ ಭದ್ರತಾ ಮಂಡಳಿಗೆ ಒಪ್ಪಿಸಿತ್ತು. ಭದ್ರತಾ ಮಂಡಳಿಯ ಮುಂದೆ ಬಂದಾಗ ಅದನ್ನು ಮತಕ್ಕೆ ಹಾಕಲಾಯಿತು. ಸಹಜವಾಗಿ ಒಂದು ದೇಶ ವಿಟೋ ಚಲಾಯಿಸಿ ತೀರ್ಪು ಜಾರಿಯಾಗದಂತೆ ಮಾಡಿತು.

ನಿಕಾರಗುವಾದಲ್ಲಿನ ಬಂಡುಕೊರರಿಗೆ ಅಮೆರಿಕ ರಹಸ್ಯವಾಗಿ ಶಸ್ತ್ರಾಸ್ತ್ರ ಸರಬರಾಜು ಮಾಡಿ ಸರ್ಕಾರವನ್ನು ಪದಚ್ಯುತಗೊಳಿಸಲು ಯತ್ನಿಸಿದ್ದು ಶೀತಲ ಸಮರದ ಕಾಲದ ಒಂದು ಘಟನೆ. ಆಗ ನಿಕಾರಗುವಾ ಈ ಕುರಿತಂತೆ ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ದೂರು ಸಲ್ಲಿಸಿತ್ತು (1986). ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಅಧಿಕಾರ ಕೋರ್ಟ್‌ಗೆ ಇಲ್ಲ ಎಂದು ಅಮೆರಿಕ ವಾದ ಮಾಡಿತು. ಅಂತಿಮವಾಗಿ ಏಕಪಕ್ಷೀಯವಾಗಿಯೇ ವಿಚಾರಣೆ ನಡೆದು, ಅಮೆರಿಕದ ಹಸ್ತಕ್ಷೇಪ ಕಾನೂನುಬಾಹಿರವಾದುದು ಎಂದು ತೀರ್ಪು ನೀಡಿತು. ಅಮೆರಿಕ ತೀರ್ಪಿಗೆ ಮಾನ್ಯತೆಯನ್ನೇ ನೀಡಲಿಲ್ಲ. ಅಮೆರಿಕ ಅಷ್ಟೇ ಏಕೆ, ಬಹುಪಾಲು ದೇಶಗಳು ಅನೇಕ ಪ್ರಕರಣಗಳಲ್ಲಿ ಇಂಥದ್ದೇ ಧೋರಣೆ ತಳೆದದ್ದುಂಟು.

ಭಾರತಕ್ಕೆ ಸಂಬಂಧಿಸಿದ ಆರು ಪ್ರಕರಣಗಳು ಈ ಕೋರ್ಟ್ ಮುಂದಿವೆ. ಕುಲಭೂಷಣ್ ಜಾದವ್ ಪ್ರಕರಣ ಇತ್ತೀಚಿನದ್ದು.

Saturday 23 December 2017

☀️ ರೋಲ್-ಆನ್-ರೋಲ್ ಆಫ್ (ಆರ್‍ಒಆರ್‍ಒ) :ರೋರೋ ಸಮುದ್ರಯಾನ ಸೇವೆ : (Roll On Roll Off) : RORO Naval (Marine) Shipping Service

☀️ ರೋಲ್-ಆನ್-ರೋಲ್ ಆಫ್ (ಆರ್‍ಒಆರ್‍ಒ) :ರೋರೋ ಸಮುದ್ರಯಾನ ಸೇವೆ :
(Roll On Roll Off) : RORO Naval (Marine) Shipping Service
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)


●.ರೋಲ್ ಆಫ್ ರೋಲ್ ಆಫ್ ಸಾಗರ ಸೇವೆಯಾಗಿದ್ದು ಈ ಯೋಜನೆಯನ್ನು ಗುಜರಾತ್ ಸಮುದ್ರ ನಿಗಮ ಅನುಷ್ಟಾನಗೊಳಿಸಲಾಗಿದೆ. ಇದು 615 ಕೋಟಿ ಮೊತ್ತದ ಯೋಜನೆಯಾಗಿದೆ. ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರದ ಎಲ್ಲ ಬಂದರುಗಳನ್ನು ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಇಂಗಿತದೊಂದಿಗೆ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಇಂತಹ
ಯೋಜನೆಯನ್ನು ಆರಂಭಿಸಲಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಹಡಗನ್ನು ನಿರ್ಮಾಣ ಮಾಡಲಾಗಿದೆ.

●.ಒಳನಾಡು ಜಲಸಾರಿಗೆ ಒತ್ತು ನೀಡುವ ಕೇಂದ್ರಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯ ಮೊದಲ ಭಾಗ ಎಂದೇ ವಿಶ್ಲೇಷಿಸಲಾಗಿರುವ ಸೌರಾಷ್ಟ್ರದ ಘೋಘಾ ಹಾಗೂ ದಕ್ಷಿಣ ಗುಜರಾತ್ ದಹೇಜ್ ನಡುವಿನ ದೇಶದ ಪ್ರಪ್ರಥಮ ರೋರೋ ಒಳನಾಡು ಸಮುದ್ರಯಾನಕ್ಕೆ (October 2017 ರಲ್ಲಿ ) ಚಾಲನೆ ನೀಡಿದ್ದಾರೆ. ಸಾಗರ ಮಾಲಾ ಯೋಜನೆಯಡಿ ಹಳೆಯ ಬಂದರುಗಳನ್ನು ಪರಿಪೂರ್ಣವಾಗಿ ಅಭಿವೃದ್ಧಪಡಿಸಲಾಗುತ್ತಿದೆ.

●.ರೋಲ್-ಆನ್-ರೋಲ್ ಆಫ್ (ಆರ್‍ಒಆರ್‍ಒ) ನೌಕಾ ಸೇವೆಯಲ್ಲಿ ಜನರ ಜತೆಗೆ ಸರಕು ಹೊತ್ತ ಲಾರಿಗಳು ಮತ್ತಿತ್ತರ ಸರಕು ಹೊತ್ತ ಲಾರಿಗಳು ಮತ್ತಿತ್ತರ ವಾಹನಗಳನ್ನು ಬಾರ್ಜ್ ಮಾದರಿಯಲ್ಲಿ ಫೆರಿಯಲ್ಲಿ(ನೌಕೆ) ಸಾಗಿಸಲಾಗುತ್ತದೆ. ಸದ್ಯ ಚಾಲನೆ ಪಡೆದಿರುವ ಮೊದಲ ಹಂತದ ಯೋಜನೆಯಲ್ಲಿ 250 ಜನರನ್ನಷ್ಟೇ
ಸಾಗಿಸಲು ಅವಕಾಶವಿದೆ. ಇದಕ್ಕಾಗಿ ಘೋಘಾ ಮತ್ತು ದಹೇಜ್ ಬಳಿ ವಿಶ್ವ ಗುಣಮಟ್ಟದ ಟರ್ಮಿನಲ್‍ಗಳನ್ನು ನಿರ್ಮಿಸಲಾಗಿದೆ.

●.ಪೋರಾಬಂದರ್, ಘೋಘಾ, ದಹೇಜ್, ಹಾಜಿರಾ-ಪಿಪಾವಾವ್, ಪಿಪಾವಾವ್-ಪೋರಾಬಂದರ್, ಪೋರಾಬಂದ್ರರ-ಓಕಾ ಮತ್ತು ಓಕಾ-ಮುಂದ್ರಾ ಅಲ್ಲದೆ, ದಕ್ಷಿಣ
ಭಾರತದ ನಾನಾ ಸ್ಥಳಿಗಳಿಗೆ ಆರ್‍ಒಆರ್‍ಒ ನೌಕಾ ಸೇವೆ ವಿಸ್ತರಿಸುವ ಚಿಂತನೆ ಇದೆ.

●.ಸಿಂಧು ನದಿ ನಾಗರಿಕತೆಯ ಸಂದರ್ಭದಲ್ಲಿ ಗುಜರಾತ್‍ನ ಅಹಮದಾಬಾದ್ ಜಿಲ್ಲೆಯ ಢೋಲ್ಕಾ ತಾಲೂಕಿನ ಸಾರಾಗ್‍ವಾಲಾ ಗ್ರಾಮದ ಬಳಿ ಇರುವ ಲೋತಲ್ ಎಂಬ ಗ್ರಾಮದಲ್ಲಿ ಸಮುದ್ರ ಮಾರ್ಗದಲ್ಲಿನ ವಾಣಿಜ್ಯ ವಹಿವಾಟು ನಡೆಯುತ್ತಿತ್ತು. ಇದಕ್ಕಾಗಿ ಅಲ್ಲಿ ಹಡಗುಗಟ್ಟೆ ನಿರ್ಮಿಸಿ ಸರಕು ಇಳಿಸಲು ಮತ್ತು ತುಂಬುವ ವ್ಯವಸ್ಥೆ ರೂಪಿಸಲಾಗುತ್ತಿತ್ತು. 1950ರ ದಶಕದಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ ಉತ್ಖನನದಲ್ಲಿ ಹಡಗುಗಟ್ಟೆ ಮತ್ತಿತ್ತರ ನಿರ್ವಣಗಳ ಪಳೆಯುಳಿಕೆಗಳು ಲಭಿಸಿದ್ದವು. ಲೋತಲ್‍ನ ಗತವೈಭವವನ್ನು ನೆನಪಿಸುವಂತೆ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನಡುವೆ ಆರ್‍ಒಆರ್‍ಒ ನೌಕಾ ಸೇವೆಯನ್ನು ಆರಂಭಿಸಲಾಗಿದೆ.

Thursday 14 December 2017

☀️ Part-8.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-8.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


56. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದ್ದು ದೇಶದ ನ್ಯಾಯಾಂಗ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿರುವುದಕ್ಕೆ ಕಾರಣೀಭೂತವಾದ ಅಂಶಗಳನ್ನು ಚರ್ಚಿಸಿ. ಪ್ರಕರಣಗಳ ವಿಲೇವಾರಿಯನ್ನು ತ್ವರಿತಗೊಳಿಸಲು ಯಾವ ಸಲಹೆಗಳನ್ನು ಸೂಚಿಸುವಿರಿ?
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)


57. ಭಾರತೀಯ ಸಂಸ್ಕೃತಿಯಲ್ಲಿ ಪರಿಸರ ಸಂಬಂಧಿ ಮೌಲ್ಯಗಳಿಗೆ ನೀಡಲಾಗಿರುವ ಒತ್ತನ್ನು ಬಹುಶಃ ಬೇರಾವ ಸಂಸ್ಕೃತಿಯಲ್ಲಿ ನೀಡಲಾಗಿಲ್ಲ. ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


58. ಭೂಮಿ ಪ್ರತಿಯೊಬ್ಬರ ಅವಶ್ಯಕತೆಯನ್ನು ಪೂರೈಸಬಲ್ಲದು. ಆದರೆ ಮಾನವನ ದುರಾಸೆಯನ್ನಲ್ಲ. — ಗಾಂಧೀಜಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


59. 'ಬ್ಯಾಂಕುಗಳ ಕ್ರೋಡೀಕರಣ' ನಮ್ಮ ದೇಶದ ಆರ್ಥಿಕ ಸುಧಾರಣೆಗೆ ನಿಜವಾಗಿಯೂ ಸಹಾಯ ಮಾಡುವುದೇ? ಇಂತಹ ಪ್ರಕ್ರಿಯೆಯನ್ನು ನಡೆಸಿದ ಇತರ ದೇಶಗಳ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಅದರಿಂದ ಆಗುವ ತೊಂದರೆ ಮತ್ತು ಉಪಯೋಗಗಳನ್ನು ಪ್ರಸ್ತುತಪಡಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


60. ತ್ಯಾಜ್ಯದ ವಿಲೇವಾರಿಯಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಸಿರುವುದು ಪ್ಲಾಸ್ಟಿಕ್‌. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ  ಪರ್ಯಾಯ ಮಾರ್ಗಗಳನ್ನು ಸೂಚಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)
 

61. 1909 ರ ಭಾರತದ (ಮಿಂಟೋ ಮತ್ತು ಮಾರ್ಲೆ) ಶಾಸನವು "ಭಾರತದಲ್ಲಿ ಪ್ರತಿನಿಧಿಗಳ ಸರ್ಕಾರವನ್ನು ಆರಂಭಿಸುವಲ್ಲಿ ಇಟ್ಟ ದಿಟ್ಟ ಹೆಜ್ಜೆ" - ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


62. ಒಳನಾಡು ಜಲಸಾರಿಗೆ ಒತ್ತು ನೀಡುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯ ಮಹತ್ವವನ್ನು ಚರ್ಚಿಸಿ.
(ಪತ್ರಿಕೆ  — ಸಾಮಾನ್ಯ ಅಧ್ಯಯನ 1)

...ಮುಂದುವರೆಸುವುದು. 

Wednesday 13 December 2017

☀ ಈ ದಿನದ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ ಪ್ರಶ್ನೆ : •► ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿಂದ ತಿರಸ್ಕೃತಗೊಂಡ 'ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ'ದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಪ್ರಸ್ತುತ ಕೊಲಿ­ಜಿಯಂ ಪದ್ಧತಿ ಸೂಕ್ತವೇ? (What is your opinion about the 'National Judicial Appointment Commission' which was recently repealed by the Supreme Court? The Current Collegium System is appropriate? ) (200 ಶಬ್ದಗಳಲ್ಲಿ)

☀ ಈ ದಿನದ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ ಪ್ರಶ್ನೆ :
•►  ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿಂದ ತಿರಸ್ಕೃತಗೊಂಡ 'ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ'ದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಪ್ರಸ್ತುತ ಕೊಲಿ­ಜಿಯಂ ಪದ್ಧತಿ ಸೂಕ್ತವೇ?
(What is your opinion about the 'National Judicial Appointment Commission' which was recently repealed by the Supreme Court? The Current Collegium System is appropriate? )
(200 ಶಬ್ದಗಳಲ್ಲಿ)

━━━━━━━━━━━━━━━━━━━━━━━━━━━━━━━━━━━━━━━━━━
★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


(ಗೆಳೆಯರೇ... ನನ್ನ ಜ್ಞಾನ ಪರಿಮಿತಿಯಲ್ಲಿ ಹಲವು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿ ಈ ಮೇಲಿನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದು, ಇದೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)



ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ  ನ್ಯಾಯಾಂ­ಗದ ಅಸಮಾಧಾನದ ನಡುವೆಯೂ ಉನ್ನತ ನ್ಯಾಯಮೂರ್ತಿಗಳ ನೇಮ­ಕಕ್ಕೆ ಈವರೆಗೆ ಚಾಲ್ತಿಯಲ್ಲಿರುವ ಕೊಲಿ­ಜಿಯಂ ಪದ್ಧತಿ ರದ್ದತಿ ಮಾಡಿ, ಸಂವಿಧಾನಕ್ಕೆ 124ನೇ ತಿದ್ದುಪಡಿಯನ್ನು ತಂದು ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ 2014ರಲ್ಲಿ ಜಾರಿಯಲ್ಲಿ ತಂದಿತ್ತು. ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ವ್ಯಾಪಕ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು.

ದೇಶದ ಪ್ರಧಾನಮಂತ್ರಿಯನ್ನು ಆತನ ಪಕ್ಷದ ಸಂಸತ್‌ ಸದಸ್ಯರು ಆಯ್ಕೆ ಮಾಡುತ್ತಾರೆ. ಅಂದರೆ ಕಾರ್ಯಾಂಗವೇ ಪ್ರಧಾನಿಯನ್ನು ನೇಮಿಸುತ್ತದೆ. ಹಾಗಿರುವಾಗ ನ್ಯಾಯಾಂಗವು ನ್ಯಾಯಾಧೀಶರನ್ನು ನೇಮಿಸುವುದು ಹೇಗೆ ತಪ್ಪಾಗುತ್ತದೆ? ಸಂವಿಧಾನ ನ್ಯಾಯಾಂಗಕ್ಕೆ ವಹಿಸಿಕೊಟ್ಟಿರುವ ಜವಾಬ್ದಾರಿಯನ್ನು ಸುಪ್ರೀಂಕೋರ್ಟು ಪ್ರಾಮಾಣಿಕವಾಗಿ ಪೂರೈಸಿದೆ.

ಸಂವಿಧಾನದ ಅನುಚ್ಛೇದ 124ರ ಅಡಿಯಲ್ಲಿ ರಾಷ್ಟ್ರಾಧ್ಯಕ್ಷರು, ಸುಪ್ರೀಂಕೋರ್ಟು ಹಾಗೂ ರಾಜ್ಯಗಳ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು ನೇಮಿಸತಕ್ಕದ್ದು. ಸುಪ್ರೀಂಕೋರ್ಟು ಹಾಗೂ ರಾಜ್ಯಗಳ ಉಚ್ಚ ನ್ಯಾಯಾಧೀಶರುಗಳೊಂದಿಗೆ ಸಮಾಲೋಚಿಸಿದ ಅನಂತರವೇ ಈ ನೇಮಕ ಮಾಡಬೇಕು. ಇಂತಹ ಸಮಾಲೋಚನೆ ನಡೆಸದೆ ನ್ಯಾಯಾಧೀಶರ ನೇಮಕಾತಿ ಸರಿಯಲ್ಲ. ನ್ಯಾಯಾಧೀಶರ ನೇಮಕಾತಿಯಲ್ಲಿ ಕಾರ್ಯಾಂಗದ ಹಸ್ತಕ್ಷೇಪ ಸಲ್ಲದು.

ನ್ಯಾ.ನೇ.ಆ. ಕಾಯಿದೆ, ನ್ಯಾಯಾಧೀಶರ ನೇಮಕಾತಿ ಸಮುಚ್ಚಯದೊಳಗೆ ಕೇಂದ್ರದ ಕಾನೂನು ಸಚಿವರು ಮತ್ತು ದೇಶದ ಇಬ್ಬರು ಗಣ್ಯ ಪ್ರಭಾವಿ ವ್ಯಕ್ತಿಗಳನ್ನು ತೂರುವ ಪ್ರಯತ್ನ ಮಾಡುತ್ತದೆ. ಗಣ್ಯ ಪ್ರಭಾವಿಗಳ ಆಯ್ಕೆಯನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು, ದೇಶದ ಪ್ರಧಾನಿ ಮತ್ತು ಕೇಂದ್ರ ಸರಕಾರದ ಕಾಯಿದೆ ಸಚಿವರು ಮಾಡತಕ್ಕದ್ದು. ಗಣ್ಯ ಪ್ರಭಾವಿಗಳ ಆಯ್ಕೆಯಲ್ಲಿಯೇ ನ್ಯಾಯಾಂಗದ ಆದ್ಯತೆ ನಷ್ಟವಾಗುತ್ತದೆ.  ಅಷ್ಟು ಮಾತ್ರವಲ್ಲದೆ 3 ನ್ಯಾಯಾಧೀಶರು ಮಾಡುವ ಆಯ್ಕೆಯನ್ನು ಕಾಯಿದೆ ಮಂತ್ರಿ ಮತ್ತು 2 ಗಣ್ಯ ಪ್ರಭಾವಿಗಳು ವಿಟೋ ನೀಡಿ ತಡೆಯಬಹುದು. ಇದು ಸಂವಿಧಾನದ ಆಶಯಕ್ಕೆ ಮತ್ತು ಮೂಲ ಸಂರಚನೆಗೆ ಹಾಗೂ ತಳಹದಿ ತತ್ವಗಳಿಗೆ ವ್ಯತಿರಿಕ್ತ. ಈ ಕಾರಣಕ್ಕಾಗಿ ಸುಪ್ರೀಂಕೋರ್ಟು ನ್ಯಾ.ನೇ.ಆ. ಕಾಯಿದೆಯನ್ನು ಅಸಿಂಧುಗೊಳಿಸಿದೆ.

ರಾಷ್ಟ್ರೀಯ ನ್ಯಾಯಾಧೀಶರ ನೇಮಕಾತಿ ಆಯೋಗದ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಬಹಳ ಸಕಾಲಿಕವಾದದ್ದು, ದೂರದರ್ಶಿತ್ವವುಳ್ಳದ್ದು. ಹಾಗೂ ಇದು ಸಂವಿಧಾನದ ಹೃದಯ ಭಾಗವಾಗಿರುವ ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರ, ಹಕ್ಕು ಮತ್ತು ಕರ್ತವ್ಯಗಳನ್ನು ರಕ್ಷಿಸುವಂತಿದೆ. ನ್ಯಾ.ನೇ.ಆ. ಕಾಯಿದೆ ಮತ್ತು ಸಂವಿಧಾನದ ತಿದ್ದುಪಡಿ ಕಾಯಿದೆಗಳನ್ನು ಅಸಿಂಧುಗೊಳಿಸಿ, ಹಾಲಿ ಇದ್ದ ಕೊಲೀಜಿಯಮ್‌ ವ್ಯವಸ್ಥೆಯನ್ನು ಈ ತೀರ್ಪು ಪುನರುತ್ಥಾನಗೊಳಿಸಿದೆ. ಅಲ್ಲದೆ  ಲೋಪ ಹೋಗಲಾಡಿಸಿ ಸುಧಾರಿಸುವ ಬಗ್ಗೆ ಸಲಹೆ ಸೂಚನೆಗಳನ್ನೂ ಆಹ್ವಾನಿಸಿದೆ. ಈ ತೀರ್ಪು ನಮ್ಮ ಸಂವಿಧಾನದ ಬೆಳವಣಿಗೆಯ ಚರಿತ್ರಾರ್ಹ ಮುನ್ನಡೆಯ ಹೆಜ್ಜೆ.
➖➖End➖➖
━━━━━━━━━━━━━━━━━━━━━━━━━━━━━━━━━━━━━━━━━━

•••Extra Tips :
ನ್ಯಾ.ನೇ.ಆ. ಕಾಯಿದೆ ಪ್ರಕಾರ ರಚಿಸುವ ಸಮುಚ್ಚಯದಲ್ಲಿ ಒಟ್ಟು 6 ಮಂದಿ ಸದಸ್ಯರಿರುತ್ತಾರೆ. ಅವರ ಪೈಕಿ ಸುಪ್ರೀಂಕೋರ್ಟಿನ ಉಚ್ಚ ನ್ಯಾಯಾಧೀಶರು, 2 ಮಂದಿ ಹಿರಿಯ ನ್ಯಾಯಾಧೀಶರ, ಕಾಯಿದೆ ಮಂತ್ರಿ ಮತ್ತು 2 ಗಣ್ಯ ಪ್ರಭಾವಿಗಳು ಇರತಕ್ಕದ್ದು. ಅಂದರೆ ನ್ಯಾಯಾಂಗದ ಪರ 3 ಸದಸ್ಯರು ಮತ್ತು ಕಾರ್ಯಾಂಗದ ಪರ 3 ಸದಸ್ಯರು. ಇಲ್ಲಿಯೂ ನ್ಯಾಯಾಂಗದ ಆದ್ಯತೆ ನಷ್ಟವಾಗುತ್ತದೆ.

ಸಂವಿಧಾನ ಮತ್ತು ಸುಪ್ರೀಂಕೋರ್ಟಿನ ತೀರ್ಪುಗಳಲ್ಲಿ ವ್ಯಾಖ್ಯಾನಿಸಿರುವಂತೆ, ನ್ಯಾಯಾಂಗಕ್ಕೆ ಆದ್ಯತೆ ಇರತಕ್ಕದ್ದು. ಆದರೆ ನ್ಯಾ.ನೇ.ಆ. ಕಾಯಿದೆಯಂತೆ ನ್ಯಾಯಾಂಗದ ಆದ್ಯತೆ ಸಂಪೂರ್ಣ ನಷ್ಟವಾಗುತ್ತದೆ.

☀️ Part-7.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-7.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


49. "ಭಾರತದಲ್ಲಿ ಅಂಗ್ಲರ ಅಧಿಪತ್ಯದ ಆಸ್ತಿಭಾರವನ್ನು ಹಾಕಿದ ಶ್ರೇಯಸ್ಸು ರಾಬರ್ಟ್ ಕ್ಲೈವ್ ನದ್ದಾದರೆ, ಆಂಗ್ಲರ ಅಧಿಕಾರವನ್ನು ಸಂಘಟಿಸಿ ಸುಭದ್ರಗೊಳಿಸಿದ ಶ್ರೇಯಸ್ಸು ವಾರನ್ ಹೇಸ್ಟಿಂಗ್ಸನದಾಗಿದೆ"—ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


50. 'ಡಿಜಿಟಲ್ ಕ್ರಾಂತಿ' ಎಂದರೇನು? 'ಡಿಜಿಟಲ್ ಕ್ರಾಂತಿ'ಯ ಬಗ್ಗೆ ಸಾರ್ವಜನಿಕರಲ್ಲಿ, ಇರುವ ಹಿಂಜರಿಕೆ, ಸಂಶಯಗಳನ್ನು ನಿವಾರಿಸುವಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು ಉಲ್ಲೇಖಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


51. 'ಭಾರತೀಯ ಉತ್ಪಾದನಾ ವ್ಯವಸ್ಥೆ'ಯು ನಮ್ಮ ನೆರೆಯ ದೇಶ ಚೀನದ ಗಾತ್ರ ಮತ್ತು ಮೊತ್ತವನ್ನು ಮುಟ್ಟಿಲ್ಲವಾದರೂ ಉನ್ನತ ಮಟ್ಟವನ್ನು ತಲುಪಲು ತಾಂತ್ರಿಕವಾಗಿ ಸಿದ್ಧವಾಗಿದೆ ಎಂದೆನ್ನಬಹುದೆ?  ಇತ್ತೀಚಿನ ದೇಶದ ಸರಿಯಾದ ಉತ್ಪಾದನೆ (ಜಸ್ಟ್ ಇನ್ ಟೈಮ್) ಮತ್ತು ವಿಕೇಂದ್ರೀಕೃತ ಉತ್ಪಾದನೆಗಳನ್ನು ಗಮನದಲ್ಲಿಟ್ಟುಕೊಂಡು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


52. 'ಮಿತವ್ಯಯೀ ಎಂಜಿನಿಯರಿಂಗ್' ಎಂದರೇನೆಂದು ಅರ್ಥೈಸುವಿರಿ? ಸರಕು ಮತ್ತು ಸೇವೆಗಳ ಉತ್ಪಾದನೆಯ ಮೇಲೆ ಇದರ ಪ್ರಭಾವವನ್ನು ಚರ್ಚಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


53. ವ್ಯಾಪಾರಿ ಸಂಸ್ಥೆಯಾಗಿದ್ದ ಕಂಪನಿಯನ್ನು ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ರಾಬರ್ಟ್ ಕ್ಲೈವ್ ನ ಪಾತ್ರವನ್ನು ವಿಮರ್ಶಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


54.ಉತ್ತರ ಭಾರತದ ಬುಡಕಟ್ಟು ಸಮುದಾಯಗಳ ಸಮಸ್ಯೆಗಳು ದಕ್ಷಿಣ ಭಾರತದ ಬುಡಕಟ್ಟು ಸಮುದಾಯಗಳ  ಸಮಸ್ಯೆಗಳಿಗಿಂತ ಸಂಪೂರ್ಣವಾಗಿ ಭಿನ್ನ. ಅಂಥದರಲ್ಲಿ ಒಂದು ನಿರ್ದಿಷ್ಟ ಅಭಿವೃದ್ಧಿ ಯೋಜನೆ ದೇಶದ ಎಲ್ಲಾ ಬುಡಕಟ್ಟು ಸಮುುದಾಯಗಳಿಗೂ ಸಮಗ್ರವಾಗಿ ಏಕಕಾಲಕ್ಕೆ ಉಪಯುಕ್ತವಾಗುತ್ತದೆ ಎಂಬ ಕಲ್ಪನೆಯೇ ಅರ್ಥಹೀನ ಎನ್ನುವುದು ಮಾನವಶಾಸ್ತ್ರಜ್ಞರ ಅಭಿಪ್ರಾಯ. ಇದಕ್ಕೆ ವಿಮರ್ಶಾತ್ಮಕವಾಗಿ ನಿಮ್ಮ ವಿಚಾರಗಳನ್ನು ನೀಡಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


55. (ದೇಶ / ರಾಜ್ಯ)ದಲ್ಲಿರುವ ಚಾರಿತ್ರಿಕ, ಸಾಂಸ್ಕೃತಿಕ ಅಥವಾ ಪ್ರಾಕೃತಿಕ ವಿಶ್ವೋತ್ಕೃಷ್ಟ ಸ್ಥಳಗಳನ್ನು ಸಂರಕ್ಷಿಸಿ, ಅವುಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸರ್ಕಾರವು ಯಾವ್ಯಾವ ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿದೆ? ಇವು ಪರಿಣಾಮಕಾರಿಯಾಗಿವೆಯೇ?
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)

... ಮುಂದುವರೆಯುವುದು. 

Monday 11 December 2017

☀️ Part-6.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-6.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


42. ವಿಶ್ವ ವ್ಯಾಪಾರದಲ್ಲಿರುವ ಅಸಮತೋಲವನ್ನು ಸರಿಪಡಿಸುವಲ್ಲಿ ಉರುಗ್ವೇ ಸುತ್ತಿನ ಮಾತುಕತೆಯ ಅನುಕೂಲಗಳನ್ನು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

43. ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಷರತ್ತುಗಳಿಂದಾಗಿ ಪಡೆದುಕೊಂಡಿರುವ ನಕಾರಾತ್ಮಕ ಆಯಾಮಗಳನ್ನು ಪರಿಶೀಲಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

44. ಅಂತರರಾಷ್ಟ್ರೀಯ ಮಟ್ಟದ ವಾಣಿಜ್ಯ– ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಹೆಚ್ಚು ಪೂರಕವಾದ ತೆರಿಗೆ ಸರಳೀಕರಣಗೊಳಿಸುವುದರೊಂದಿಗೆ ದೇಶಿ  ವಾಣಿಜ್ಯೋದ್ಯಮ ರಂಗಕ್ಕೆ ಉತ್ತೇಜನ ಹಾಗೂ ಮಾರುಕಟ್ಟೆಗೆ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯು ವಹಿಸಬಹುದಾದ ಗಮನಾರ್ಹ ಪಾತ್ರವನ್ನು ಕುರಿತು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

45. ಮೌಢ್ಯಗಳನ್ನು ನಿವಾರಿಸುವ ಬದಲಿಗೆ ಮೌಢ್ಯಗಳನ್ನು ಬಿತ್ತುವುದೇ ಇಂದು ಒಂದು ದೊಡ್ಡ ಉದ್ಯಮವಾಗಿದೆ. ಈ ಹಿನ್ನೆಲೆಯಲ್ಲಿ ಮೂಢನಂಬುಗೆಗಳ ಹುಟ್ಟಿಗೆ ಕಾರಣಗಳು ಹಾಗು ಅವುಗಳ  ಪ್ರಸ್ತುತ ಆಚರಣೆಗಳ ಹಾಗು ಇತ್ತೀಚಿನ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಚರ್ಚಿಸಿರಿ..
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

46. 1991ರಲ್ಲಿ ಹೊಸ ಆರ್ಥಿಕ ನೀತಿಯನ್ನು ನಾವು ಅಳವಡಿಸಿಕೊಂಡ ಬಳಿಕ ಬೆಳವಣಿಗೆ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದ್ದರೂ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಬುಡಕಟ್ಟು ಜನರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ವ್ಯಾಪಕವಾದ ಅಂತರ ಏರ್ಪಟ್ಟಿದೆ. ಇದರ ಹಿಂದಿರುವ ಬಲವಾದ ಕಾರಣಗಳನ್ನು ಚರ್ಚಿಸಿ.

47. ನಗದುರಹಿತ ಗ್ರಾಮೀಣ ಅರ್ಥವ್ಯವಸ್ಥೆಯ ಸವಾಲುಗಳು.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

48. ರಾಜ್ಯದಲ್ಲಿ ಸ್ಥಳೀಯರ ಸಹಭಾಗಿತ್ವದಲ್ಲಿ (Community Based Tourism)  ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ಸರ್ಕಾರವು ಇತ್ತೀಚೆಗೆ ಕೈಗೊಂಡ ಕ್ರಮಗಳನ್ನು ಅವಲೋಕಿಸಿ.
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)

...ಮುಂದುವರೆಯುವುದು. 

Thursday 7 December 2017

☀️ Part-5.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-5.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.



35. ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ವಿಭಿನ್ನವಾಗಿರುವ ದೇಶದ ವಿವಿಧ ಬುಡಕಟ್ಟು ಸಮುದಾಯಗಳಿಗೆ ಒಂದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ನಾವು ಮಾಡುತ್ತಿರುವ ದೊಡ್ಡ ತಪ್ಪು ಎಂಬುದು ತಜ್ಞರ ಅಭಿಪ್ರಾಯ. ಈ ವಾದ ಎಷ್ಟರಮಟ್ಟಿಗೆ ಔಚಿತ್ಯ? ವಿವರಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


36. ನಗದುರಹಿತ ವ್ಯವಹಾರಗಳ ಅನುಕೂಲ ಮತ್ತು ಅನಾನುಕೂಲಗಳು.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)


37. ಇತ್ತೀಚೆಗೆ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳ ಸಹಯೋಗದಲ್ಲಿ ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ಕೈಗೊಂಡಿರುವ ಕ್ರಮ ಯೋಜನೆಗಳನ್ನು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


38. " ಹಳ್ಳಿಗರಿಗೆ ಕೆಲಸ ಕೊಡಬೇಕಾಗಿರುವುದು ಯಂತ್ರಗಳ ಮೂಲಕವಲ್ಲ, ಅವರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಗುಡಿ ಕೈಗಾರಿಕೆಗಳ ಮೂಲಕ. - ಆಧುನಿಕ ಗ್ರಾಮೀಣ ಗುಡಿಕೈಗಾರಿಕೆಗಳ ಅಭಿವೃದ್ದಿ ಪ್ರಸ್ತುತತೆಯೊಂದಿಗೆ ಗಾಂಧೀಜಿಯವರ ಈ ಮಾತು ಇವತ್ತಿನ ಸನ್ನಿವೇಶಕ್ಕೆ ಎಷ್ಟರಮಟ್ಟಿಗೆ ಔಚಿತ್ಯ. ಚರ್ಚಿಸಿ.?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


39.  ಬುಡಕಟ್ಟು ಆರ್ಥಿಕತೆಯನ್ನು ಸಮಗ್ರ ಆರ್ಥಿಕತೆಗೆ ಒಳಪಡಿಸುವ ಬದಲು ತಾಂತ್ರಿಕ - ಪರಿಸರ ಆಧಾರಿತ ಕೌಶಲಗಳನ್ನು ಜನರಲ್ಲಿ ಬೆಳೆಸುವುದು ಉತ್ತಮ ಎನ್ನುವುದು ಇತ್ತೀಚೆಗೆ ಕೇಳಿಬರುತ್ತಿರುವ ಕೆಲವರ ವಾದ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

40. ಗರಿಷ್ಠ ಮುಖಬೆಲೆಯ ನೋಟು ರದ್ದತಿ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ದೇಶದ ಅರ್ಥವ್ಯವಸ್ಥೆಯಲ್ಲಿ ಆದ ಬದಲಾವಣೆಗಳನ್ನು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

41. ಸಾಂಪ್ರದಾಯಿಕ ವ್ಯವಸ್ಥೆಯಿಂದ ಡಿಜಿಟಲ್‌ ಯುಗಕ್ಕೆ ಬದಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ  ಮಾಹಿತಿ ಕಳ್ಳತನ, ಸೈಬರ್‌ ದಾಳಿಯಂತಹ ಅನೇಕ ಡಿಜಿಟಲ್‌ ಯುಗದ ಸವಾಲುಗಳು ಎದುರಾಗಿವೆ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)

... ಮುಂದುವರೆಯುವುದು. 

Tuesday 5 December 2017

☀️ Part-4.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-4.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers


 ಗೆಳೆಯರೇ... ಮುಂಬರುವ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜ್ಞಾನದ ಪರಿಮಿತಿಯಲ್ಲಿ ಮುಖ್ಯ ಪರೀಕ್ಷೆಗಾಗಿ (ಸಾಮಾನ್ಯ ಅಧ್ಯಯನ ಎಲ್ಲಾ ಪತ್ರಿಕೆಗಳನ್ನೊಳಗೊಂಡಂತೆ) ಕೆಲವು ಮಾದರಿ ಪ್ರಶ್ನೆಗಳನ್ನು ತಯಾರಿಸಿ ನಿಮ್ಮ °ಸ್ಪರ್ಧಾಲೋಕ°ದಲ್ಲಿ ಮುಂದಿಟ್ಟಿರುವೆನು. ಇವು ಸಾಧ್ಯವಾದಷ್ಟು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿರುವಂಥವು. ಇವೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.



28. 'ಸೆಂಡೈ ಕಟ್ಟುಪಾಡು' ಅಥವಾ 'ಸೆಂಡೈ ಚೌಕಟ್ಟು'  ಎಂದರೇನು? ಅದರ ಧ್ಯೇಯೋದ್ದೇಶಗಳು ಮತ್ತು ಗುರಿಗಳನ್ನು ನಿರೂಪಿಸಿ. ಜೊತೆಗೆ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸರ್ಕಾರವು ಕೈಗೊಂಡಿರುವ ಮಹತ್ವದ ಕ್ರಮಗಳನ್ನು ಚರ್ಚಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


29. ವಿಕೋಪ ನಿರ್ವಹಣೆ ಕ್ಷೇತ್ರದಲ್ಲಿ ಸಾಮರ್ಥ್ಯ ನಿರ್ಮಾಣ ಪ್ರಯತ್ನವನ್ನು ಹೆಚ್ಚಿಸುವಲ್ಲಿ ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆಯು ಅಳವಡಿಸಿಕೊಂಡಿರುವ ರಚನಾತ್ಮಕ ಕ್ರಮಗಳಾವುವು? ವಿವರಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


30. ಒಂದೇ ಅಕ್ಷಾಂಶದ ಮೇಲಿರುವ ದೇಶದ ಪೂರ್ವ - ಪಶ್ಚಿಮ ಭಾಗಗಳು ಪರಸ್ಪರ ವೈಪರೀತ್ಯದ ಮಳೆಯ ಹಂಚಿಕೆಯನ್ನು ಹೊಂದಿವೆ ಏಕೆ? ಕಾರಣಗಳೊಂದಿಗೆ ವಿವರಿಸಿ.
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)


31. 'ನವಭಾರತ ಪರಿಕಲ್ಪನೆ'ಗೆ ನೀವೇನೆಂದು ಅರ್ಥೈಸುವಿರಿ?  '2022ರ ವೇಳೆಗೆ ನವಭಾರತ ನಿರ್ಮಾಣ' ಕಾರ್ಯವನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು ಇತ್ತೀಚೆಗೆ ಕೈಗೊಂಡ ಹಾಗೂ ಕೈಗೊಳ್ಳಬಹುದಾದ ಕ್ರಮಗಳನ್ನು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


32. ಆಧುನಿಕ ಕೃಷಿ ಮತ್ತು ರೈತ ಸಮುದಾಯದ ಸಮೃದ್ಧಿ, ಏಳ್ಗೆಗಾಗಿ ಇತ್ತೀಚೆಗೆ ಸರ್ಕಾರ (ಕೇಂದ್ರ / ರಾಜ್ಯ) ವು ಕೈಗೊಂಡ ಕ್ರಮಗಳನ್ನು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


33. ನೈಸರ್ಗಿಕ ವಿಕೋಪ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಮುಂದಿರುವ ಸವಾಲುಗಳು.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


34. 'ಜೈವಿಕ ಭಯೋತ್ಪಾದನೆ' ಎಂದರೇನು? 'ಜೈವಿಕ ಭಯೋತ್ಪಾದನೆ'ಯಿಂದ ಉಂಟಾಗುವ ಜೈವಿಕ ಅಪಾಯಗಳನ್ನು ತಡೆಯುವಲ್ಲಿ  ಮತ್ತು ನಿಯಂತ್ರಿಸುವಲ್ಲಿ ಸರ್ಕಾರವು ಕೈಗೊಂಡ ಸುರಕ್ಷತಾ ಕ್ರಮಗಳನ್ನು ವಿವರಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)

...ಮುಂದುವರೆಯುವುದು. 

☀️ Part-3.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-3.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers


 ಗೆಳೆಯರೇ... ಮುಂಬರುವ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜ್ಞಾನದ ಪರಿಮಿತಿಯಲ್ಲಿ ಮುಖ್ಯ ಪರೀಕ್ಷೆಗಾಗಿ (ಸಾಮಾನ್ಯ ಅಧ್ಯಯನ ಎಲ್ಲಾ ಪತ್ರಿಕೆಗಳನ್ನೊಳಗೊಂಡಂತೆ) ಕೆಲವು ಮಾದರಿ ಪ್ರಶ್ನೆಗಳನ್ನು ತಯಾರಿಸಿ ನಿಮ್ಮ °ಸ್ಪರ್ಧಾಲೋಕ°ದಲ್ಲಿ ಮುಂದಿಟ್ಟಿರುವೆನು. ಇವು ಸಾಧ್ಯವಾದಷ್ಟು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿರುವಂಥವು. ಇವೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)

Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


21.  ಜನರಿಗೆ ತಮ್ಮ ಪ್ರತಿನಿಧಿಯನ್ನು ಆಯ್ಕೆಮಾಡುವ ಹಕ್ಕು ಇರುವುದಾದರೆ, ಇಂಥ ಪ್ರತಿನಿಧಿಗಳು ದುಷ್ಕೃತ್ಯಗಳಲ್ಲಿ ತೊಡಗಿದಾಗ ಅಥವಾ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದಾಗ, ಅವರನ್ನು ಕಿತ್ತುಹಾಕುವ ಅಧಿಕಾರವೂ ಜನರಿಗಿರಬೇಕು ಎಂಬ ಅಭಿಪ್ರಾಯ ತರ್ಕಸಮ್ಮತ ಮತ್ತು ನ್ಯಾಯಸಮ್ಮತವೇ? ವಿವರಿಸಿ.
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)


22. ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸುವ ಕ್ರಮಗಳನ್ನು ಉಲ್ಲೇಖಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

     
23. ದೇಶಿ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದರೊಂದಿಗೆ, ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಲು ಇತ್ತೀಚೆಗೆ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳನ್ನು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


24. ದೇಶದ ಆಂತರಿಕ ಭದ್ರತೆಗೆ ಬೆದರಿಕೆಯಾಗಿರುವ ಭಯೋತ್ಪಾದನೆ ಮತ್ತು ಮೂಲಭೂತವಾದೀಕರಣವನ್ನು ಹತ್ತಿಕ್ಕಲು ಮತ್ತು ಕನಿಷ್ಠ ಮಟ್ಟಕ್ಕಿಳಿಸಲು ಇತ್ತೀಚೆಗೆ ಸರ್ಕಾರ ಕೈಗೊಂಡ ಅಗತ್ಯ ಕ್ರಮಗಳನ್ನು ಅವಲೋಕಿಸಿ.
(ಪತ್ರಿಕೆ 1 — ಪ್ರಬಂಧ)


25. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆ
(ಪತ್ರಿಕೆ 1 — ಪ್ರಬಂಧ)


26. ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ದೇಶಿ ರಫ್ತು ವಲಯವು ಎದುರಿಸುತ್ತಿರುವ ಪ್ರತಿಕೂಲ ಸಮಸ್ಯೆಗಳಿಗೆ ಕಾರಣೀಭೂತವಾದ ಅಂಶಗಳು ಯಾವವು? ರಫ್ತು ವಲಯದ ಉತ್ತೇಜನಕ್ಕಾಗಿ ತಾವು ಯಾವ್ಯಾವ ಕ್ರಮಗಳನ್ನು ಸೂಚಿಸುವಿರಿ?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


27. ದೇಶಿ ಉದ್ದಿಮೆ ಸಂಸ್ಥೆಗಳು ಜಾಗತಿಕ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ತ್ವರಿತಗೊಳಿಸಲು ಇತ್ತೀಚೆಗೆ ಸರ್ಕಾರವು ಕೈಗೊಂಡ ಕ್ರಮಗಳನ್ನು ವಿವರಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

... ಮುಂದುವರೆಯುವುದು. 

Friday 1 December 2017

☀ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆ : (THE BUREAU OF INDIAN STANDARDS ACT, 2016 ACT )

☀ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆ :
(THE BUREAU OF INDIAN STANDARDS ACT, 2016 ACT )
━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

• ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆಯನ್ನು ಜಾರಿಗೊಳಿಸಿದೆ.

• ಈ ಸಂಬಂಧ 2016ರ ಮಾರ್ಚ್ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.
• ಈ ಕಾಯ್ದೆಯು ಹಿಂದೆ ಜಾರಿಯಲ್ಲಿದ್ದ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-1986 ಕಾಯ್ದೆಯ ಸ್ಥಾನದಲ್ಲಿ ಜಾರಿಗೆ ಬಂದಿದೆ.

• ಇದು ದೇಶದಲ್ಲಿ ವಹಿವಾಟು ನಡೆಸಲು ಸುಗಮವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ವಿಸ್ತøತಗೊಳಿಸುವಲ್ಲಿ ಇದು ಕೊಡುಗೆ ನೀಡಲಿದೆ. ಜತೆಗೆ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ಹಾಗೂ ಸೇವೆಗಳು ಲಭ್ಯವಾಗುವಂತೆ ಮಾಡುವಲ್ಲಿ ಇದು ಮಹತ್ವದ್ದಾಗಲಿದೆ.


☀ ಪ್ರಮುಖ ಅಂಶಗಳು :

• ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಕಾಯ್ದೆ- 2016, ಯಾವುದೇ ವರ್ಗದ ಕೈಗಾರಿಕೆ, ಪ್ರಕ್ರಿಯೆ, ವ್ಯವಸ್ಥೆ ಅಥವಾ ಸೇವೆಗಳನ್ನು ಬಳಸುವ ಯಾವುದೇ ಸರಕು ಅಥವಾ ವಸ್ತುಗಳಿಗೆ ಕಡ್ಡಾಯ ಪ್ರಮಾಣಪಪತ್ರ ಪಡೆಯುವಂತೆ ಆದೇಶಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ.

• ಸಾರ್ವಜನಿಕ ಹಿತಾಸಕ್ತಿಯಿಂದ ಇಂಥ ಯಾವುದೇ ನಿರ್ಣಯವನ್ನು ಕೈಗೊಳ್ಳಬಹುದಾಗಿದೆ. ಮಾನವನ ಸುರಕ್ಷತೆ, ಪ್ರಾಣಿ ಹಾಗೂ ಗಿಡಮರಗಳ ಆರೋಗ್ಯ ದೃಷ್ಟಿ ಇಲ್ಲವೇ ದೇಶದ ಭದ್ರತೆ ದೃಷ್ಟಿಯಿಂದ ಇಂಥ ನಿರ್ಧಾರ ಕೈಗೊಳ್ಳಬಹುದಾಗಿದೆ.

• ಇದು ಹಾಲ್ಮಾರ್ಕ್ಗಳನ್ನು ಅಮೂಲ್ಯ ಲೋಹಗಳ ವಸ್ತುಗಳಿಗೆ ಕಡ್ಡಾಯಪಡಿಸಲಿದೆ.


• ಖಾತ್ರಿಪಡಿಸುವ ಮೌಲ್ಯಮಾಪನ ಯೋಜನೆ:

# ಹೊಸ ಕಾಯ್ದೆಯು, ಬಹುವಿಧದ ಸರಳೀಕೃತ ದೃಢೀಕರಣ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಇದರಲ್ಲಿ ಗುಣಮಟ್ಟದ ಸ್ವಯಂಘೋಷಣೆ ಸೇರಿದೆ. ಇದರ ಅನ್ವಯ ಉತ್ಪಾದಕರು ಸರಳವಾಗಿ ಗುಣಮಟ್ಟಕ್ಕೆ ಬದ್ಧರಾಗಿರುವಂತೆ ನೋಡಿಕೊಳ್ಳಲು ಅವಕಾಶವಾಗಲಿದೆ.

# ಕಾಯ್ದೆಗೆ ಅನುಗುಣವಾಗಿ ಕೇಂದ್ರ ಸರ್ಕಾರ, ಉತ್ಪನ್ನ ಅಥವಾ ಸೇವೆಗಳ ಗುಣಮಟ್ಟ ದೃಢೀಕರಣಕ್ಕೆ ಯಾವುದೇ ಪ್ರಾಧಿಕಾರ, ಏಜೆನ್ಸಿಯನ್ನು ಹೊಸದಾಗಿ, ಬಿಐಎಸ್ಗೆ ಹೆಚ್ಚುವರಿಯಾಗಿ ಆರಂಭಿಸಬಹುದಾಗಿದೆ.


• ️ವಸ್ತು ಹಿಂದಕ್ಕೆ ಪಡೆಯುವುದು

# ನೂತನ ಕಾಯ್ದೆಯ ಅನ್ವಯ, ಬಿಐಎಸ್ ಯಾವುದೇ ಸರಕು ಅಥವಾ ವಸ್ತುಗಳನ್ನು ಮಾರಾಟಕ್ಕೆ ಸರಬರಾಜು ಆಗಿದ್ದರೂ, ಅಗತ್ಯ ಗುಣಮಟ್ಟವನ್ನು ಹೊಂದಿಲ್ಲದಿದ್ದರೆ ವಾಪಾಸು ಪಡೆಯುವಂತೆ ನಿರ್ದೆಶಿಸುವ ಅಧಿಕಾರ ಹೊಂದಿರುತ್ತದೆ.

# ಇದಲ್ಲದೇ ಉತ್ಪನ್ನದ ಹೊಣೆಗಾರಿಕೆಯ ಹಿನ್ನೆಲೆಯಲ್ಲಿ ಗುಣಮಟ್ಟದ ಮಾರ್ಕ್ ಹೊಂದಿರುವ ಯಾವುದೇ ಉತ್ಪನ್ನಗಳನ್ನು, ನಿರ್ದಿಷ್ಟ ಗುಣಮಟ್ಟ ಹೊಂದಿರದಿದ್ದರೆ ದುರಸ್ತಿ ಮಾಡಲು ಅಥವಾ ವಾಪಾಸು ಕರೆಸಿಕೊಳ್ಳಲು ಅಧಿಕಾರ ಇರುತ್ತದೆ.


• ಅಮೂಲ್ಯ ಲೋಹಗಳ ಪ್ರಮಾಣಪತ್ರ:

# ಎಲ್ಲ ದೃಢೀಕೃತ ಅಮೂಲ್ಯ ಲೋಹಗಳಿಗೆ ಹಾಲ್ಮಾರ್ಕ್ ಕಡ್ಡಾಯಪಡಿಸುವುದೂ ಇದರಲ್ಲಿ ಸೇರಿದೆ. ಬೆಳ್ಳಿ, ಚಿನ್ನ, ಪ್ಲಾಟಿನಂ ಹಾಗೂ ಪಲ್ಲಾಡಿಯಂ ಅಥವಾ ಮಿಶ್ರಲೋಹಗಳ ಆಭರಣಗಳು ಅಥವಾ ವಸ್ತುಗಳಿಗೆ ಹಾಲ್ಮಾರ್ಕ್ ಮಾಡುವುದು ಕಡ್ಡಾಯವಾಗಲಿದೆ.


• ️ಕಡ್ಡಾಯ ಪ್ರಮಾಣಪತ್ರ

# ಇದರ ಅನ್ವಯ ಕೇಂದ್ರ ಸರ್ಕಾರ ಕೆಲ ಸರಕು, ವಸ್ತುಗಳು ಅಥವಾ ಸೇವೆಗಳನ್ನು ಅಧಿಸೂಚಿತ ಸರಕುಗಳು ಎಂದು ಘೋಷಿಸಲು ಅಧಿಕಾರ ಹೊಂದಿರುತ್ತದೆ. ಇಂಥ ವಸ್ತುಗಳು ಕಡ್ಡಾಯವಾಗಿ ಗುಣಮಟ್ಟದ ಮುದ್ರೆ ಹೊಂದಿರಬೇಕಾಗುತ್ತದೆ.

# ಸಾರ್ವಜನಿಕ ಹಿತಾಸಕ್ತಿಯಿಂದ ಇಂಥ ಯಾವುದೇ ನಿರ್ಣಯವನ್ನು ಕೈಗೊಳ್ಳಬಹುದಾಗಿದೆ. ಮಾನವನ ಸುರಕ್ಷತೆ, ಪ್ರಾಣಿ ಹಾಗೂ ಗಿಡಮರಗಳ ಆರೋಗ್ಯ ದೃಷ್ಟಿ ಇಲ್ಲವೇ ದೇಶದ ಭದ್ರತೆ ದೃಷ್ಟಿಯಿಂದ ಇಂಥ ನಿರ್ಧಾರ ಕೈಗೊಳ್ಳಬಹುದಾಗಿದೆ.


• ಕಂಪನಿಗಳಿಂದ ಅಪರಾಧ:

# ಈ ಕಾಯ್ದೆಯ ಅನ್ವಯ ಅಪರಾಧ ಎಸಗುವ ಕಂಪನಿಗಳ, ಜವಾಬ್ದಾರಿಯುತ ವ್ಯಕ್ತಿಗಳನ್ನು ಹೊಣೆಗಾರರಾಗಿ ಮಾಡಲಾಗುವುದು. ಇಂಥ ಅಧಿಕಾರಿಗಳ ಗಮನಕ್ಕೆ ಬಂದು ಅಥವಾ ಬಾರದೇ, ಒಪ್ಪಿಗೆ ಪಡೆದು ಅಥವಾ ಪಡೆಯದೇ ಇಂಥ ಅಪರಾಧ ನಡೆದಿದ್ದರೂ ಅವರು ಹೊಣೆಗಾರರಾಗುತ್ತಾರೆ.


• ಮೇಲ್ಮನವಿ:

# ದೃಢೀಕೃಣದ ಪ್ರಮಾಣಪತ್ರವನ್ನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ, ಎಲ್ಲ ಅಪರಾಧಗಳನ್ನು ಬಿಐಎಸ್ ಮಹಾನಿರ್ದೇಶಕರಿಗೆ ವರದಿ ಮಾಡಬೇಕಾಗುತ್ತದೆ. ಬಿಐಎಸ್ ಡಿಜಿಯ ತೀರ್ಪಿನ ವಿರುದ್ಧದ ಮೇಲ್ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.