"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 8 November 2018

☀ಹೊಸ ರಾಜ್ಯದ ರಚನೆಗಾಗಿ ಅಥವಾ ಪ್ರತ್ಯೇಕ ರಾಜ್ಯ ಘೋಷಣೆಗಾಗಿ ಇರುವ ಸಂವಿಧಾನದ ಪ್ರಕ್ರಿಯೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ. (The Constitutional procedures of formation of new State or to proclaim separate State)

☀ಹೊಸ ರಾಜ್ಯದ ರಚನೆಗಾಗಿ ಅಥವಾ ಪ್ರತ್ಯೇಕ ರಾಜ್ಯ ಘೋಷಣೆಗಾಗಿ ಇರುವ ಸಂವಿಧಾನದ ಪ್ರಕ್ರಿಯೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
(The Constitutional procedures of formation of new State or to proclaim separate State)
━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಪತ್ರಿಕೆ 3 - ಸಾಮಾನ್ಯ ಅಧ್ಯಯನ 2
(General Studies 2- Paper 3)

★ ಭಾರತದ ರಾಜಕೀಯ ಮತ್ತು ಸಂವಿಧಾನ
(Indian Polity and Construction)



☀ ರೂಪಾಯಿ ಮೌಲ್ಯ ಕುಸಿತ ಮತ್ತು ಇಂಧನ ಬೆಲೆ ಏರಿಕೆಯ ನಿಯಂತ್ರಣಕ್ಕೆ ಕೇಂದ್ರ ಸರಕಾರ ಪ್ರಕಟಿಸಿದ ಪಂಚ ಕ್ರಮಗಳು : (Five steps to stem rupee fall and to control oil price hike)

☀ ರೂಪಾಯಿ ಮೌಲ್ಯ ಕುಸಿತ ಮತ್ತು ಇಂಧನ ಬೆಲೆ ಏರಿಕೆಯ ನಿಯಂತ್ರಣಕ್ಕೆ ಕೇಂದ್ರ ಸರಕಾರ ಪ್ರಕಟಿಸಿದ ಪಂಚ ಕ್ರಮಗಳು :
(Five steps to stem rupee fall and to control oil price hike)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪತ್ರಿಕೆ 2 ಸಾಮಾನ್ಯ ಅಧ್ಯಯನ 1
(General Studies 1-Paper 2)

★ ಭಾರತದ ಆರ್ಥಿಕತೆ
(Indian Economy)


Saturday 29 September 2018

☀ 'ಆಯುಷ್ಮಾನ್ ಭಾರತ್' — ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್‌ (AB–NHPM) : ಪತ್ರಿಕೆ 2 ಸಾಮಾನ್ಯ ಅಧ್ಯಯನ 1 (Ayushman Bharat— National Health Protection Mission or Pradhan Mantri Jan Arogya Abhiyan)

☀ 'ಆಯುಷ್ಮಾನ್ ಭಾರತ್' — ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್‌ (AB–NHPM) : ಪತ್ರಿಕೆ 2 ಸಾಮಾನ್ಯ ಅಧ್ಯಯನ 1
(Ayushman Bharat— National Health Protection Mission or Pradhan Mantri Jan Arogya Abhiyan)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಪತ್ರಿಕೆ 2 ಸಾಮಾನ್ಯ ಅಧ್ಯಯನ 1
(General Studies 1- Paper 2)



ಇಲ್ಲಿ ಕೊಟ್ಟಂತಹ ಮಾಹಿತಿ ಹಲವು ನಂಬಲರ್ಹವಾದ ನಿಖರ ಮೂಲಗಳಿಂದ ಆಯ್ದುಕೊಳ್ಳಲಾಗಿರುವಂತಹವು. ಇವೇ ಅಂತಿಮವಲ್ಲ. ಏನಾದರೂ ತಪ್ಪು-ತಿದ್ದುಪಡಿಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ತಮ್ಮಲ್ಲಿ ವಿನಂತಿ.  (gmail- yaseen7ash@gmail.com)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

(Ruff Notes / Hints / Points) 







☀ ಒಂದು ದೇಶ, ಒಂದು ಚುನಾವಣೆ ('ಒನ್‌ ನೇಷನ್‌, ಒನ್‌ ಎಲೆಕ್ಷನ್‌') - ಅನುಕೂಲ ಹಾಗೂ ಅನನುಕೂಲಗಳು (One Nation, One Election - Merits and Demerits)

☀ ಒಂದು ದೇಶ, ಒಂದು ಚುನಾವಣೆ ('ಒನ್‌ ನೇಷನ್‌, ಒನ್‌ ಎಲೆಕ್ಷನ್‌') - ಅನುಕೂಲ ಹಾಗೂ ಅನನುಕೂಲಗಳು
(One Nation, One Election - Merits and Demerits)
━━━━━━━━━━━━━━━━━━━━━━━━━━━━━━━━━━━━━━━━━━━━━


●.ಐಎಎಸ್ / ಕೆಎಎಸ್ ಮೇನ್ಸ್ ಮಾದರಿ ಪರೀಕ್ಷಾ ಪ್ರಶ್ನೆಗಳು -
━━━━━━━━━━━━━━━━━━━━━━━━━━━━━━━━━
★ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾವನೆ ಕುರಿತು ವಿಶ್ಲೇಷಣೆಯೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಮಂಡಿಸಿ.

★ ಭಾರತದಂಥ ಒಕ್ಕೂಟ ವ್ಯವಸ್ಥೆಗೆ ಒಂದು ದೇಶ, ಒಂದು ಚುನಾವಣೆ ಕಲ್ಪನೆಯನ್ನು ಅನ್ವಯಿಸುವುದೇ? ಚರ್ಚಿಸಿ.

★ ದೇಶದಲ್ಲಿ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕೆಂಬ 'ಒನ್‌ ನೇಷನ್‌, ಒನ್‌ ಎಲೆಕ್ಷನ್‌' (ಒಂದು ದೇಶ, ಒಂದು ಚುನಾವಣೆ) ಪ್ರಸ್ತಾವನೆ ಸಮಂಜಸವಾದುದೇ? ವಿಶ್ಲೇಷಿಸಿ.







Wednesday 19 September 2018

☀ ಭಾರತ ಒಂದು ಪೂರ್ಣ ಒಕ್ಕೂಟ ರಾಷ್ಟ್ರವೇ ಅಥವಾ ಅರೆ ಒಕ್ಕೂಟ ರಾಷ್ಟ್ರವೇ? — ಪತ್ರಿಕೆ 3 ಸಾಮಾನ್ಯ ಅಧ್ಯಯನ 2 (Is India a Federal or Quasi-Federal State?

☀ ಭಾರತ ಒಂದು ಪೂರ್ಣ ಒಕ್ಕೂಟ ರಾಷ್ಟ್ರವೇ ಅಥವಾ ಅರೆ ಒಕ್ಕೂಟ ರಾಷ್ಟ್ರವೇ? — ಪತ್ರಿಕೆ 3 ಸಾಮಾನ್ಯ ಅಧ್ಯಯನ 2
(Is India a Federal or Quasi-Federal State?
━━━━━━━━━━━━━━━━━━━━━━━━━━━━━━━━━━━━━━━━━━━━━
★ ಭಾರತದ ಸಂವಿಧಾನ
(Indian Constitution)

★ ಪತ್ರಿಕೆ 3 ಸಾಮಾನ್ಯ ಅಧ್ಯಯನ 2
(General Studies II - Paper 3)






☀ ‘ಅಟಾರ್ನಿ ಜನರಲ್ ಆಫ್‌ ಇಂಡಿಯಾ’ — ಪತ್ರಿಕೆ 3 ಸಾಮಾನ್ಯ ಅಧ್ಯಯನ 2 (Attorney General of India)

☀ ‘ಅಟಾರ್ನಿ ಜನರಲ್ ಆಫ್‌ ಇಂಡಿಯಾ’ — ಪತ್ರಿಕೆ 3 ಸಾಮಾನ್ಯ ಅಧ್ಯಯನ 2
(Attorney General of India)
 ━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ ಸಂವಿಧಾನ
(Indian Constitution)

★ ಪತ್ರಿಕೆ 3 ಸಾಮಾನ್ಯ ಅಧ್ಯಯನ 2
(General Studies II - Paper 3)



Sunday 9 September 2018

☀ 2018ರ IAS ಪ್ರಿಲಿಮ್ಸ್ ಪತ್ರಿಕೆ -1 ರ ವಿಶ್ಲೇಷಣೆ (ಸಮಗ್ರವಾಗಿ) (Analysis of IAS Prelims 2018 Paper 1)

☀ 2018 IAS ಪ್ರಿಲಿಮ್ಸ್ ಪತ್ರಿಕೆ -1 ರ ವಿಶ್ಲೇಷಣೆ - (ಸಮಗ್ರ)
(Analysis of IAS Prelims 2018 Paper 1)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2018 ರ ಐಎಎಸ್ ಸಾಮಾನ್ಯ ಅಧ್ಯಯನ ಪತ್ರಿಕೆ -1
(IAS Prelims 2018 - General Studies Paper 1)






Saturday 8 September 2018

☀ 2018 IAS Prelims : ಸಾಮಾನ್ಯ ಅಧ್ಯಯನ ಪತ್ರಿಕೆ -1 ರಲ್ಲಿ ಕೇಳಲಾದ ಪ್ರಶ್ನೆಗಳ ಸಂಕ್ಷಿಪ್ತ ಅವಲೋಕನ : (A brief Explanation of Prelims 2018 General Studies Paper 1)

☀ 2018 IAS Prelims : ಸಾಮಾನ್ಯ ಅಧ್ಯಯನ ಪತ್ರಿಕೆ -1 ರಲ್ಲಿ ಕೇಳಲಾದ ಪ್ರಶ್ನೆಗಳ ಸಂಕ್ಷಿಪ್ತ ಅವಲೋಕನ :
(A brief Explanation of Prelims 2018 General Studies Paper 1)
━━━━━━━━━━━━━━━━━━━━━━━━━━━━━━━━━━━━━━━━━━━━━

2018 ರ ಐಎಎಸ್ ಸಾಮಾನ್ಯ ಅಧ್ಯಯನ ಪತ್ರಿಕೆ -1
(IAS Prelims 2018 - General Studies Paper 1)




Wednesday 5 September 2018

☀ ಕೌನ್ಸಿಲ್ ಫಾರ್ ಟ್ರೇಡ್ ಡೆವಲಪ್ಮೆಂಟ್ ಅಂಡ್ ಪ್ರೋಮೋಷನ್: (ಪತ್ರಿಕೆ 2 ಸಾಮಾನ್ಯ ಅಧ್ಯಯನ 1) (Council for Trade Development and Promotion)

☀ ಕೌನ್ಸಿಲ್ ಫಾರ್ ಟ್ರೇಡ್ ಡೆವಲಪ್ಮೆಂಟ್ ಅಂಡ್ ಪ್ರೋಮೋಷನ್: (ಪತ್ರಿಕೆ 2 ಸಾಮಾನ್ಯ ಅಧ್ಯಯನ 1)
(Council for Trade Development and Promotion)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಅರ್ಥಶಾಸ್ತ್ರ - ಭಾರತದ ವಿದೇಶಿ ವಾಣಿಜ್ಯ ನೀತಿ
(General Economy - Indian Trade Policy)



☀ ಜಾಗತಿಕ ಶಾಂತಿ ಸೂಚ್ಯಂಕ : 2017 — ಪತ್ರಿಕೆ 2 : ಸಾಮಾನ್ಯ ಅಧ್ಯಯನ 1. (Global Peace Index 2017)


☀ ಜಾಗತಿಕ ಶಾಂತಿ ಸೂಚ್ಯಂಕ : 2017 — ಪತ್ರಿಕೆ 2 : ಸಾಮಾನ್ಯ ಅಧ್ಯಯನ 1.
(Global Peace Index 2017)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಪ್ರಚಲಿತ ಘಟನೆಗಳು - ಜೂನ್ 2018
(Current Affairs)


Sunday 2 September 2018

☀ ಜಾಗತಿಕ ಆವಿಷ್ಕಾರ ಸೂಚ್ಯಂಕ (ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌- ಜಿಐಐ) — ಪತ್ರಿಕೆ 2 : ಸಾಮಾನ್ಯ ಅಧ್ಯಯನ 1. (global Innovation Index, GII Report)

☀ ಜಾಗತಿಕ ಆವಿಷ್ಕಾರ ಸೂಚ್ಯಂಕ (ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌- ಜಿಐಐ) —
ಪತ್ರಿಕೆ 2 : ಸಾಮಾನ್ಯ ಅಧ್ಯಯನ 1.
(global Innovation Index, GII Report)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಪ್ರಚಲಿತ ಘಟನೆಗಳು
(Current Affairs)




☀ ಪತ್ರಿಕೆ 2 ಸಾಮಾನ್ಯ ಅಧ್ಯಯನ 1— ಸಾವರಿನ್‌ ಕ್ರೆಡಿಟ್‌ ರೇಟಿಂಗ್ ಎಂದರೇನು‌? ಇದನ್ನು ಹೇಗೆ ನಿರ್ಣಯಿಸಲಾಗುತ್ತದೆ? ಪ್ರಮುಖ ರೇಟಿಂಗ್‌ ಏಜೆನ್ಸಿಗಳು - ದೇಶವೊಂದರ ಆರ್ಥಿಕ ಸ್ಥಿತಿಗತಿ ನಿರ್ಧರಿಸುವಲ್ಲಿ ಇದರ ಮಹತ್ವ. (Sovereign Credit Rating - How it will be Determined - Famous Credit Rating Agencies - Its Importance)

 ☀ ಪತ್ರಿಕೆ 2 ಸಾಮಾನ್ಯ ಅಧ್ಯಯನ 1— ಸಾವರಿನ್‌ ಕ್ರೆಡಿಟ್‌ ರೇಟಿಂಗ್ ಎಂದರೇನು‌? ಇದನ್ನು ಹೇಗೆ ನಿರ್ಣಯಿಸಲಾಗುತ್ತದೆ? ಪ್ರಮುಖ ರೇಟಿಂಗ್‌ ಏಜೆನ್ಸಿಗಳು - ದೇಶವೊಂದರ ಆರ್ಥಿಕ ಸ್ಥಿತಿಗತಿ ನಿರ್ಧರಿಸುವಲ್ಲಿ ಇದರ ಮಹತ್ವ.
(Sovereign Credit Rating - How it will be Determined - Famous Credit Rating Agencies - Its Importance)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)


★ ಸಾಮಾನ್ಯ ಅರ್ಥಶಾಸ್ತ್ರ
(General Economy)




●.ಕ್ರೆಡಿಟ್‌ ಅಂದರೆ ಸಾಲ. ಸಾವರಿನ್‌ ಅಂದರೆ ಸಾರ್ವಭೌಮ ಅಥವಾ ಅದು ಒಂದು ದೇಶದ ಬಗ್ಗೆ ಬಳಸುವ ಪದ. ಹಾಗಾಗಿ ಸಾವರಿನ್‌ ಕ್ರೆಡಿಟ್‌ ರೇಟಿಂಗ್‌ ಎನ್ನುವುದು ಒಂದು ದೇಶದ ಸಾಲಾರ್ಹತೆಯ ಬಗ್ಗೆ ನೀಡುವ ಅಂಕ ಅಥವಾ ರೇಟಿಂಗ್‌. ಸಾಲ ಪಡೆಯಲು ಉಳ್ಳ ಅರ್ಹತೆ ಅಥವಾ ಸಾಲ ಪಡಕೊಂಡು ಅದನ್ನು ಮರುಪಾವತಿ ಮಾಡುವ ಶಕ್ತಿಯೇ ಸಾಲಾರ್ಹತೆ. ಈ ರೇಟಿಂಗ್‌ ಮೂಲಕ ಪ್ರತಿಯೊಂದು ದೇಶದ ಸಾಲ ಮರುಪಾವತಿ ಮಾಡುವ ಶಕ್ತಿಯ ಬಗ್ಗೆ ವ್ಯಾಖ್ಯಾನ ನಡೆಯುತ್ತದೆ.

- ಈ ರೀತಿ ರೇಟಿಂಗ್‌ ನೀಡುವ ಸಂಸ್ಥೆಗಳನ್ನು ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ಎಂದು ಕರೆಯುತ್ತಾರೆ. ಮುಖ್ಯವಾಗಿ ಮೂಡೀಸ್‌, ಸ್ಟಾಂಡರ್ಡ್‌ ಐನ್ಡ್ ಪುವರ್‌ ಮತ್ತು ಫಿಚ… ಎಂಬ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಈ ಕೆಲಸವನ್ನು ಮಾಡುತ್ತವೆ ಮತ್ತು ಅವುಗಳ ರೇಟಿಂಗ… ಅಂಕಗಳು ಬಹಳಷ್ಟು ಮಹತ್ವವುಳ್ಳದ್ದು ಆಗಿರುತ್ತವೆ. ಬೇರೆ ಇನ್ನಿತರ ಚಿಕ್ಕಪುಟ್ಟ ರೇಟಿಂಗ… ಸಂಸ್ಥೆಗಳು ಇದ್ದರೂ ಈ ಮೂರು ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಬಹುತೇಕ ಶೇ.90% ಕ್ಕೂ ಮೀರಿದ ಸಂದರ್ಭಗಳಲ್ಲಿ ರೇಟಿಂಗ್‌ ನೀಡುತ್ತಿವೆ.



●.ರೇಟಿಂಗ್‌ ನಿರ್ಣಯ :
━━━━━━━━━━━━━

ಒಬ್ಟಾತ ಸಾಲಗಾರನಿಗೆ ಸಾಲ ನೀಡಬೇಕೇ ಬೇಡವೇ ಎನ್ನುವುದನ್ನು ಆತನ ಆರ್ಥಿಕ ಸ್ಥಿತಿಗತಿ ಮತ್ತು ಆತನ ಒಟ್ಟಾರೆ ವಿತ್ತೀಯ ಶಿಸ್ತನ್ನು ನೋಡಿ ನಿರ್ಣಯ ಮಾಡುವ ಹಾಗೆಯೇ ಒಂದು ದೇಶದ ಸಾವರಿನ್‌ ಕ್ರೆಡಿಟ… ರೇಟಿಂಗ್‌ ಮಾಡುವಾಗಲೂ ಆ ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಶಿಸ್ತನ್ನು ನೋಡಿಕೊಂಡು ಮಾಡಲಾಗುತ್ತದೆ.   

- ಒಂದು ದೇಶದ ಒಟ್ಟಾರೆ ಸದ್ಯದ ಒಟ್ಟಾರೆ ಸಾಲ, ಒಟ್ಟು ಜಿಡಿಪಿ ಅಥವಾ ಆದಾಯ, ಅದರ ಬೆಳವಣಿಗೆಯ ಪ್ರಮಾಣ, ಹಣದುಬ್ಬರ, ವಿದೇಶಿ ವಿನಿಮಯ ಇತ್ಯಾದಿ ಹತ್ತು ಹಲವು ಆರ್ಥಿಕ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ರೇಟಿಂಗ್‌ ಅನ್ನು ಕೊಡಲಾಗುತ್ತದೆ. ಅಷ್ಟೇ ಅಲ್ಲ, ದೇಶದ ರಾಜಕೀಯ ಸ್ಥಿರತೆ ಅಥವಾ ಪೊಲಿಟಿಕಲ… ಸ್ಟೆಬಿಲಿಟಿಯನ್ನೂ ಕೂಡಾ ಈ ಸಂಸ್ಥಗಳು ಗಮನಕ್ಕೆ ತೆಗೆದುಕೊಳ್ಳುತ್ತವೆ.

ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಈ ಸಂಸ್ಥೆಗಳು ತಮ್ಮದೇ ಆದ ಪ್ರಶ್ನಾವಳಿಯನ್ನು ತುಂಬಿ ಅವಕ್ಕೆ ಅಂಕಗಳನ್ನು ನೀಡಿ ಅಂತಿಮ ರೇಟಿಂಗ್‌ ಅನ್ನು ಸಿದ್ಧಗೊಳಿಸುತ್ತವೆ. ಇದು ಸಾಮಾನ್ಯ ವಿಧಾನ.



●.ಮುನ್ನೋಟ :
━━━━━━━━━━

- ಸ್ಟಾಂಡರ್ಡ… ಐನ್ಡ್ ಪುವರ್‌ ಸಂಸ್ಥೆಯ ರೇಟಿಂಗ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಪ್ರತಿಯೊಂದು ರೇಟಿಂಗ್‌ ಅಂಕಿಯ ಕೊನೆಗೂ  + , - ಅಥವಾ ಅವೆರಡೂ ಇಲ್ಲದ ಸಂದರ್ಭಗಳು ಇರುತ್ತವೆ. ಉದಾ: ಅ ರೇಟಿಂಗ್‌ ಅನ್ನು ತೆಗೆದುಕೊಂಡರೆ, ಅಲ್ಲಿ ಅ, ಅ+ ಮತ್ತು ಆ- ಅನ್ನು ಕಾಣಬಹುದು. ಈ ಪ್ಲಸ್‌ ಮತ್ತು ಮೈನಸ್‌ ಚಿನ್ಹೆಗಳು ಔಟ್‌ಲುಕ್‌ ಅಥವಾ ಮುನ್ನೋಟವನ್ನು ಸೂಚಿಸುತ್ತದೆ. ಅ ಪ್ಲಸ್‌ ಅಂದರೆ ಇದು ಭವಿಷ್ಯದಲ್ಲಿ ಅಭಿವೃದ್ಧಿ ಹೊಂದುವ ಲಕ್ಷ$ಣವನ್ನು ಸೂಚಿಸುತ್ತದೆ. ಅ  ಅಂದರೆ ಅದು ಭವಿಷ್ಯತ್ತಿನಲ್ಲಿ ಇನ್ನಷ್ಟು ಶಿಥಿಲವಾಗುವ ಲಕ್ಷಣ. ಅವೆರಡೂ ಅಲ್ಲದೆ ಬರೇ ಅ ಎಂಬ ರೇಟಿಂಗ್‌ ಇದ್ದರೆ ನ್ಯೂಟ್ರಲ… ಅಥವಾ ಭವಿಷ್ಯತ್ತಿನಲ್ಲಿ ಅದು ಹಾಗೆಯೇ ಮುಂದುವರಿಯುವ ಲಕ್ಷಣ ಇದೆಯೆಂದರ್ಥ. ಈ ಪ್ಲಸ್‌-ಮೈನಸ್‌ ಚಿನ್ಹೆಗಳನ್ನು ಪ್ರತ್ಯೇಕವಾಗಿಯೂ ಕೂಡಾ ಔಟ್‌ಲುಕ್‌ ಎಂದು ನಮೂದಿಸಬಹುದು. 



●.ಪ್ರಮುಖ ರೇಟಿಂಗ್‌ ಏಜೆನ್ಸಿಗಳು :
━━━━━━━━━━━━━━━━━━━━

ಮೂರೂ ಜನಪ್ರಿಯ ರೇಟಿಂಗ್‌ ಏಜೆನ್ಸಿಗಳಾದ ಮೂಡೀಸ್‌, ಸ್ಟಾಂಡರ್ಡ್‌ ಐನ್ಡ್ ಪುವರ… ಹಾಗೂ ಫಿಚ್‌ ಸಂಸ್ಥೆಗಳು ಸರಿ ಸುಮಾರಾಗಿ ಅ, ಆ ಮತ್ತು ಇ ಅಕ್ಷರಗಳನ್ನೂ ಮೂಲವಾಗಿ ಉಪಯೋಗಿಸಿಕೊಂಡರೂ ಅವುಗಳ ರೇಟಿಂಗ್‌ ನಾಮಾವಳಿಯಲ್ಲಿ ತುಸು ವ್ಯತ್ಯಾಸಗಳಿವೆ.

- ಮೂಡೀಸ್‌ ಪ್ರಕಾರ BAAA3 ಯಾ BAAA2  ಅಂದರೆ ಭಾರತವು ಕೆಳಮಧ್ಯಮ ತರಗತಿಯ ಸಾಲಾರ್ಹತೆಯುಳ್ಳ ಒಂದು ದೇಶ. ಅದುವೇ ಸ್ಟಾಂಡರ್ಡ… ಐನ್ಡ್ ಪುವರ… ಸಂಸ್ಥೆಯ ಪ್ರಕಾರ ಆಆಆ  ಆಗಿದೆ. ರೇಟಿಂಗ್‌ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಅರ್ಥದಲ್ಲಿ ಅವು ಸರಿಸುಮಾರು ಒಂದೇ ತರಗತಿಗೆ ಸೇರಿವೆ. ಇನ್ನೂ ಕೆಳಕ್ಕೆ ಇಳಿದರೆ ಅಪಾಯ ಮತ್ತು ಹೂದಿಕೆಗೆ ಅನರ್ಹವಾದ ತರಗತಿಗಳಿವೆ. ಸದ್ಯಕ್ಕೆ ಭಾರತ ದೇಶವು ಅಂತಹ ಅಪಾಯ ಪಂಕ್ತಿಯಿಂದ ಮೇಲೆಯೇ ಇದೆ. ಜಗತ್ತಿನಾದ್ಯಂತ ಹಲವು ದೇಶಗಳು ಡೇಂಜರ್‌ ಮತ್ತು ಜಂಕ್‌ ತರಗತಿಯಲ್ಲಿ ತೊಳಲಾಡುತ್ತಿವೆ ಎನ್ನುವುದನ್ನೂ ನಾವು ಗಮನದಲ್ಲಿ ಇಟ್ಟುಕೊಳ್ಳಬೆಕು.



●.ಮಹತ್ವ:
━━━━━━━━

ಒಂದು ದೇಶದ ಸಾವರಿನ್‌ ಕ್ರೆಡಿಟ್ ರೇಟಿಂಗ್‌ ಆ ದೇಶದ ಸಾಲಾರ್ಹತೆಯನ್ನು ಸೂಚಿಸುತ್ತದೆ. ರೇಟಿಂಗ್‌ ಉತ್ತಮವಾಗಿದ್ದರೆ ಆ ದೇಶಕ್ಕೆ ನೀಡಿದ ಸಾಲದ ಅಸಲು ಹಾಗೂ ಬಡ್ಡಿ ಕ್ಲಪ್ತ ಸಮಯಕ್ಕೆ ವಾಪಾಸು ಪಡೆಯುವ ಭರವಸೆಯನ್ನು ಇಟ್ಟುಕೊಳ್ಳಬಹುದು. ಒಂದು ವೇಳೆ ರೇಟಿಂಗ್‌ ಕಳಪೆಯಾಗಿದ್ದರೆ ಅಸಲು ಮತ್ತು ಬಡ್ಡಿ ವಾಪಾಸು ಬರುವುದು ಸಂಶಯವೇ ಸರಿ. ಈ ಕಾರಣಕ್ಕಾಗಿ ಜಗತ್ತಿನಾದ್ಯಂತ ವಿತ್ತೀಯ ಸಂಸ್ಥೆಗಳು ಮತ್ತು ಸರಕಾರಗಳು ಸಾಲಗಾರ ಸರಕಾರದ ಸವೆರಿನ್‌ ರೇಟಿಂಗ್‌ ಅನ್ನು ಸೂಕ್ಷ್ಮವಾಗಿ ಗಮನಿಸುತ್ತದೆ.

- ರೇಟಿಂಗ್‌ ಉತ್ತಮವಾಗಿದ್ದರೆ ಯಾರಾದರೂ ಅಂತಹ ದೇಶಕ್ಕೆ ಸಾಲ ನೀಡಲು ಮುಂದೆ ಬಂದಾರು. ವರ್ಲ್ಡ್ ಬ್ಯಾಂಕ್‌, ಇಂಟರ್‌ನ್ಯಾಷನಲ… ಮಾನೆಟರಿ ಫ‌ಂಡ್‌ ಅಥವಾ ಅಮೆರಿಕಾ, ಜಪಾನ್‌ ನಂತಹ ದೇಶಗಳು ಸಾಲ ನೀಡಲು ಉತ್ಸಾಹ ತೋರಿಸಿಯಾವು. ಆರ್ಥಿಕವಾಗಿ ಸದೃಡವಾಗಿ ಉಳ್ಳ ಯಾವ ದೇಶಕ್ಕೆ ತಾನೇ ಸಾಲ ಸಿಕ್ಕದೆ ಇರಬಹುದು? ಅಂತಹ ವಾತಾವರಣದಲ್ಲಿ ಸಾಲ ಪಡೆಯುವ ದೇಶಕ್ಕೆ ಸಾಕಷ್ಟು ಮೊತ್ತದಲ್ಲಿ ಸಾಲ ದೊರಕೀತು ಹಾಗೂ ಅದು ಕಡಿಮೆ ಬಡ್ಡಿ ದರದಲ್ಲಿಯೂ ದೊರಕೀತು. ಮರುಪಾವತಿಯ ಖಾತ್ರಿಯಿದ್ದರೆ ಸಾಲದ ಮೇಲಿನ ಬಡ್ಡಿ ದರವನ್ನು ಚೌಕಾಶಿ ಮಾಡಿ ಇಳಿಸಿಕೊಳ್ಳಬಹುದಲ್ಲವೆ? ಈ ರೀತಿ ಬೇಕಾದಷ್ಟು ದುಡ್ಡು ಸಾಲದ ರೂಪದಲ್ಲಿ ಕಡಿಮೆ ಬಡ್ಡಿ ದರಕ್ಕೆ ದೊರಕಿದರೆ ಆ ದೇಶದ ಅಭಿವೃದ್ಧಿ ಸುಲಭವಾದೀತು.

- ಈ ಕಾರಣಕ್ಕಾಗಿಯೇ ಕ್ರೆಡಿಟ್ ರೇಟಿಂಗ್‌ ಉತ್ತಮವಾದೊಡನೆ ಆ ದೇಶದ ಶೇರು ಮಾರುಕಟ್ಟೆ ಹಾಗೂ ಸಾಲಪತ್ರಗಳ ಬಾಂಡು ಮಾರುಗಟ್ಟೆ ಏರುಗತಿಯನ್ನು ಕಾಣುತ್ತದೆ. ಬದಲಾಗಿ ಕ್ರೆಡಿಟ್ ರೇಟಿಂಗ್ ಕಳಪೆಯಾದರೆ ಆ ದೇಶಕ್ಕೆ ಸಾಲ ಸಿಕ್ಕುವುದು ದುರ್ಲಭವಾಗಬಹುದು ಮತ್ತು ಸಿಕ್ಕರೂ ಜಾಸ್ತಿ ಬಡ್ಡಿದರ ತೆರಬೇಕಾಗಿ ಬರಬಹುದು. ಅಂತಹ ಸಂದರ್ಭಗಳಲ್ಲಿ ಆ ದೇಶದ ಅಭಿವೃದ್ದಿ ಕುಂಠಿತವಾಗಬಹುದು. ಆ ಕಾರಣಕ್ಕಾಗಿ ಅಲ್ಲಿನ ಶೇರು ಮಾರುಗಟ್ಟೆ ಮತ್ತು ಸಾಲಪತ್ರಗಳ ಬಾಂಡು ಮಾರುಗಟ್ಟೆ ಕುಸಿಯುತ್ತದೆ. ಇದು ಕ್ರೆಡಿಟ್ ರೇಟಿಂಗ್ ಹಾಗೂ ಮಾರುಗಟ್ಟೆಯ ಏರಿಳಿತದ ಹಿಂದಿರುವ ಸರಳವಾದ ತರ್ಕ.

(Courtesy : Vijayavani)

Thursday 19 July 2018

☀ ಒಟ್ಟು ದೇಶೀಯ ಉತ್ಪಾದನೆ (GDP) ಎಂದರೇನು? ಭಾರತದಲ್ಲಿ ಜಿಡಿಪಿ ದರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಜಿಡಿಪಿಯ ಪ್ರಾಮುಖ್ಯತೆ ಏನು? (What do you mean by Gross Domestic Product (GDP)? How the India's GDP wil be calculated? and Explain its Importance)

☀ ಒಟ್ಟು ದೇಶೀಯ ಉತ್ಪಾದನೆ (GDP) ಎಂದರೇನು? ಭಾರತದಲ್ಲಿ ಜಿಡಿಪಿ ದರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಜಿಡಿಪಿಯ ಪ್ರಾಮುಖ್ಯತೆ ಏನು?
(What do you mean by Gross Domestic Product (GDP)? How the India's GDP wil be calculated?  and Explain its Importance)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪತ್ರಿಕೆ 2 - ಸಾಮಾನ್ಯ ಅಧ್ಯಯನ 1
(General Studies 1 - Paper 2)

★ ಭಾರತದ ಆರ್ಥಿಕಾಭಿವೃದ್ಧಿ
(Indian Economic Development)



Monday 16 July 2018

☀ ವಿದೇಶಿ ವಿನಿಮಯ ಮೀಸಲು (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಎಂದರೇನು? (What do you mean by Foreign Exchange Reserve)

☀ ವಿದೇಶಿ ವಿನಿಮಯ ಮೀಸಲು (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಎಂದರೇನು?
(What do you mean by Foreign Exchange Reserve)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಪತ್ರಿಕೆ 2 ಸಾಮಾನ್ಯ ಅಧ್ಯಯನ 1
(General Studies 1 - Paper 2)

★ ಭಾರತದ ಆರ್ಥಿಕಾಭಿವೃದ್ಧಿ
(Indian Economic Development)















Tuesday 10 July 2018

☀ ಕರೆನ್ಸಿ ಮೌಲ್ಯ ಎಂದರೇನು? ರುಪಾಯಿ ಮೌಲ್ಯ ಕುಸಿತದಿಂದ ದೇಶದ ಆರ್ಥಿಕತೆ ಮೇಲಾಗುವ ಪರಿಣಾಮವೇನು? (Rupee Depreciation and Impact on the Country or IMPACT OF RUPEE DEPRECIATION ON INDIAN ECONOMY)

☀ ಕರೆನ್ಸಿ ಮೌಲ್ಯ ಎಂದರೇನು?   ರುಪಾಯಿ ಮೌಲ್ಯ ಕುಸಿತದಿಂದ ದೇಶದ ಆರ್ಥಿಕತೆ ಮೇಲಾಗುವ ಪರಿಣಾಮವೇನು?
(Rupee Depreciation and Impact on the Country or IMPACT OF RUPEE DEPRECIATION ON INDIAN ECONOMY)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಪತ್ರಿಕೆ 2 ಸಾಮಾನ್ಯ ಅಧ್ಯಯನ 1
(General Studies 1 - Paper 2)

★ ಭಾರತದ ಆರ್ಥಿಕಾಭಿವೃದ್ಧಿ
(Indian Economic Development)


ಇಲ್ಲಿ ಕೊಟ್ಟಂತಹ ಮಾಹಿತಿ ಹಲವು ನಂಬಲರ್ಹವಾದ ಮೂಲಗಳಿಂದ ಆಯ್ದುಕೊಳ್ಳಲಾಗಿರುವಂತಹವು. ಇವೇ ಅಂತಿಮವಲ್ಲ. ಏನಾದರೂ ತಪ್ಪು-ತಿದ್ದುಪಡಿಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ತಮ್ಮಲ್ಲಿ ವಿನಂತಿ.  (gmail- yaseen7ash@gmail.com)


(Ruff Notes / Hints / Points)



Monday 9 July 2018

☀️ KPSC ಮತ್ತು UPSC ಪರೀಕ್ಷೆಗಳಿಗಾಗಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಕುರಿತ ನೋಟ್ಸ್ - PART II (General Economics Points for KPSC/UPSC Exam preparation)

☀️ KPSC ಮತ್ತು UPSC ಪರೀಕ್ಷೆಗಳಿಗಾಗಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಕುರಿತ ನೋಟ್ಸ್  - PART II
(General Economics Points for KPSC/UPSC Exam preparation)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ
(general economics)


ಮುಂದುವರೆದ ಭಾಗ —

ಸ್ಪರ್ಧಾಳುಗಳ ಗಮನಕ್ಕೆ:

ಇತ್ತೀಚೆಗೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ನಡೆಸುತ್ತಿರುವ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಗೆ ಸಂಬಂಧಪಟ್ಟ ಪ್ರಶ್ನೆಗಳು ಹೆಚ್ಚಾಗಿ ಕೇಳಲಾಗುತ್ತಿದೆ. ಅಂದರೆ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಇವು ನಿರ್ಣಾಯಕ ಪಾತ್ರ ವಹಿಸುವುದರಿಂದ ಇವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕಿದಷ್ಟು ಕಡಿಮೆಯೇ. ಈ ಕೊರತೆಯನ್ನು ಸ್ವಲ್ಪಮಟ್ಟಿಗೆಯಾದರೂ ನೀಗಿಸುವ ಒಂದು ಚಿಕ್ಕ ಪ್ರಯತ್ನ ನನ್ನದು.

— ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.


Gmail : yaseen7ash@gmail.com
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


Sunday 8 July 2018

☀️ ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ಪರೀಕ್ಷೆಗಳಿಗಾಗಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಕುರಿತ ನೋಟ್ಸ್ - PART I (General Economics Points for KPSC/UPSC Exam preparation)

  ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ಪರೀಕ್ಷೆಗಳಿಗಾಗಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಕುರಿತ ನೋಟ್ಸ್  - PART I
(General Economics Points for KPSC/UPSC Exam preparation)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ
(general economics)



ಸ್ಪರ್ಧಾಳುಗಳ ಗಮನಕ್ಕೆ:

ಇತ್ತೀಚೆಗೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ನಡೆಸುತ್ತಿರುವ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಥಶಾಸ್ತ್ರ/ಅರ್ಥವ್ಯವಸ್ಥೆ/ಆರ್ಥಿಕತೆ ಗೆ ಸಂಬಂಧಪಟ್ಟ ಪ್ರಶ್ನೆಗಳು ಹೆಚ್ಚಾಗಿ ಕೇಳಲಾಗುತ್ತಿದೆ. ಅಂದರೆ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಇವು ನಿರ್ಣಾಯಕ ಪಾತ್ರ ವಹಿಸುವುದರಿಂದ ಇವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕಿದಷ್ಟು ಕಡಿಮೆಯೇ.

— ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.

Gmail : yaseen7ash@gmail.com




Saturday 9 June 2018

•► ಹವಳ ದಿಬ್ಬಗಳು (ಕೋರಲ್ ರೀಫ್) — ಹವಳ ದಿಬ್ಬಗಳ ಮಹತ್ವ — ಹವಳಗಳ ರಾಶಿ ಬಿಳಿಚಿಕೊಳ್ಳುವಿಕೆ (ಕೋರಲ್ ಬ್ಲೀಚಿಂಗ್) — ಕೋರಲ್ ಬ್ಲೀಚಿಂಗ್ ಗೆ ಕಾರಣಗಳು — ಗ್ರೇಟ್ ಬ್ಯಾರಿಯರ್ ರೀಫ್ ಪರಿಸ್ಥಿತಿ — ಜೀವವೈವಿಧ್ಯಗಳು ಕೋರಲ್ ಬ್ಲೀಚಿಂಗ್ ನ ಪರಿಣಾಮಗಳು-ಪರಿಹಾರ — ಲಕ್ಷದ್ವೀಪದ ಮೇಲೆ ಪರಿಣಾಮ (Coral Reefs — Importance of Coral Reefs — Coral Bleaching — Causes for Coral Bleaching — Great Barrier Reefs Condition — Effects of Coral Bleaching on Biodiversity — Relief - Effect on Lakshadweep


•► ಉತ್ಪಾದಕರ ದರ ಸೂಚ್ಯಂಕ (PPI) (Producer Price Index)

Thursday 7 June 2018

•► ಈ ದಿನದ 'ಐಎಎಸ್ / ಕೆಎಎಸ್ ಮುಖ್ಡ ಪರೀಕ್ಷಾ ಮಾದರಿ ಪ್ರಶ್ನೆ' :— 'ಆಹಾರ ಸುರಕ್ಷತೆ' ಎಂದರೇನೆಂದು ಅರ್ಥೈಸುವಿರಿ? ಆಹಾರ ಸುರಕ್ಷತೆ ಸಾಧ್ಯವಾಗಿಸುವ ವಿಷಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಬೇಡಿಕೆ ಒಪ್ಪಿಕೊಳ್ಳಲು 'ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)'ಯು ಏಕೆ ಹಿಂದೇಟು ಹಾಕುತ್ತಿದೆ? 'ಆಹಾರ ಸುರಕ್ಷತೆ'ಗೆ ಸಂಬಂಧಿಸಿದಂತೆ ಭಾರತದ ಹಕ್ಕೊತ್ತಾಯ ಏನು? ಚರ್ಚಿಸಿರಿ. (200 ಶಬ್ದಗಳಲ್ಲಿ)

•► ಈ ದಿನದ 'ಐಎಎಸ್ / ಕೆಎಎಸ್ ಮುಖ್ಡ ಪರೀಕ್ಷಾ ಮಾದರಿ ಪ್ರಶ್ನೆ' :—   'ಆಹಾರ ಸುರಕ್ಷತೆ' ಎಂದರೇನೆಂದು ಅರ್ಥೈಸುವಿರಿ? ಆಹಾರ ಸುರಕ್ಷತೆ ಸಾಧ್ಯವಾಗಿಸುವ ವಿಷಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಬೇಡಿಕೆ ಒಪ್ಪಿಕೊಳ್ಳಲು 'ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)'ಯು ಏಕೆ ಹಿಂದೇಟು ಹಾಕುತ್ತಿದೆ?  'ಆಹಾರ ಸುರಕ್ಷತೆ'ಗೆ ಸಂಬಂಧಿಸಿದಂತೆ ಭಾರತದ ಹಕ್ಕೊತ್ತಾಯ ಏನು? ಚರ್ಚಿಸಿರಿ.  (200 ಶಬ್ದಗಳಲ್ಲಿ)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಮುಖ್ಡ ಪರೀಕ್ಷಾ ತಯಾರಿ
(IAS / KAS Mains exam preparation)

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)



Friday 25 May 2018

☀️ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1 ( 51-70 ಪ್ರಶ್ನೆಗಳು) (IAS / KAS Prelims Model Question Paper -I 51 to 70 questions)

☀️ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1 ( 51-70 ಪ್ರಶ್ನೆಗಳು)
(IAS / KAS Prelims Model Question Paper -I 51-70 questions)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ
(IAS / KAS Prelims Model Question Paper)


...ಮುಂದುವರೆದ ಭಾಗ.
 ಐಎಎಸ್ / ಕೆಎಎಸ್

ಇಲ್ಲಿ ಹಂಚಿಕೊಂಡಿರುವ ಮಾದರಿ ಪ್ರಶ್ನೆಗಳು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.
Gmail : yaseen7ash@gmail.com







ಪ್ರಿಲಿಮ್ಸ್ ಎಕ್ಸಾಂ ಗೆ ಸಂಬಂಧಿಸಿದಂತೆ ನಾನು ಮಾದರಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸುತ್ತಿದ್ದು ಈಗಾಗಲೇ 1 ರಿಂದ 50 ಪ್ರಶ್ನೆಗಳನ್ನು ಇಲ್ಲಿ ಷೇರ್ ಮಾಡಿರುವೆ ಮುಂದುವರೆದು ಈಗ 51 ರಿಂದ 70 ಪ್ರಶ್ನೆಗಳನ್ನು ಇಲ್ಲಿ ಹಾಕಿರುವೆ. ಈಗ ಹಾಕಿರೋ ಮಾದರಿಯೊಂದಿಗೆ ಉಳಿದವುಗಳನ್ನು ತಯಾರಿಸುತ್ತಿರುವೆ. ಸಧ್ಯದಲ್ಲಿ ಪೂರ್ಣಗೊಳಿಸುವೆ.

Saturday 12 May 2018

☀️ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1 ( 31-50 ಪ್ರಶ್ನೆಗಳು) (IAS / KAS Prelims Model Question Paper -I (31 to 50 questions)

☀️ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1 ( 31-50 ಪ್ರಶ್ನೆಗಳು)
(IAS / KAS Prelims Model Question Paper -I (31 to 50 questions)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ
(IAS / KAS Prelims Model Question Paper)


...ಮುಂದುವರೆದ ಭಾಗ.
 ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಎಕ್ಸಾಂ ಗೆ ಸಂಬಂಧಿಸಿದಂತೆ ನಾನು ಮಾದರಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸುತ್ತಿದ್ದು ಈಗಾಗಲೇ 1 ರಿಂದ 33 ಪ್ರಶ್ನೆಗಳನ್ನು ಇಲ್ಲಿ ಷೇರ್ ಮಾಡಿರುವೆ ಮುಂದುವರೆದು ಈಗ 31 ರಿಂದ 50 ಪ್ರಶ್ನೆಗಳನ್ನು ಇಲ್ಲಿ ಹಾಕಿರುವೆ. ಈಗ ಹಾಕಿರೋ ಮಾದರಿಯೊಂದಿಗೆ ಉಳಿದವುಗಳನ್ನು ತಯಾರಿಸುತ್ತಿರುವೆ. ಸಧ್ಯದಲ್ಲಿ ಪೂರ್ಣಗೊಳಿಸುವೆ.

ಇಲ್ಲಿ ಹಂಚಿಕೊಂಡಿರುವ ಮಾದರಿ ಪ್ರಶ್ನೆಗಳು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.
Gmail : yaseen7ash@gmail.com








Saturday 21 April 2018

●.ಸೈಬರ್ ಫಿಸಿಕಲ್ ಸಿಸ್ಟಂ (ಸಿಪಿಎಸ್) : (Cyber Physical System)

●.ಸೈಬರ್ ಫಿಸಿಕಲ್ ಸಿಸ್ಟಂ (ಸಿಪಿಎಸ್) :
(Cyber Physical System)
━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ : 3 (ಪತ್ರಿಕೆ 4)
(General Studies : 3 (Paper 4)

★ ಪ್ರಚಲಿತ ಘಟನೆಗಳು
(Current Affairs)


ಕೇಂದ್ರ ಸರ್ಕಾರವು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆತೃತ್ವದಲ್ಲಿ ಭವಿಷ್ಯದ ತಂತ್ರಜ್ಞಾನ ಎಂದೇ ಕರೆಯಲಾಗಿರುವ ಸೈಬರ್ ಫಿಸಿಕಲ್ ಸಿಸ್ಟಂ(ಸಿಪಿಎಸ್) ಎಂಬ ಹೊಸ ಯೋಜನೆಯನ್ನು ಜಾರಿಯಲ್ಲಿ ತಂದಿದೆ.

ಭೌತಿಕ ಕಾರ್ಯಗಳನ್ನು ಕಂಪ್ಯೂಟರ್ ಆಧಾರಿತ ತಾಂತ್ರಿಕತೆ ಮೂಲಕ ನಿಯಂತ್ರಿಸುವ ತಂತ್ರಜ್ಞಾನಕ್ಕೆ ಸೈಬರ್ ಫಿಸಿಕಲ್ ಸಿಸ್ಟಂ (ಸಿಪಿಎಸ್) ಎಂದು ಕರೆಯುತ್ತಾರೆ.
ಉದಾ: ಗೂಗಲ್ ಮತ್ತು ತೆಸ್ಲಾದಂತಹ ಕೆಲ ಜಾಗತಿಕ ಕಂಪನಿಗಳು ಸ್ವಯಂ ಚಾಲಿತ ಕಾರನ್ನು ಅಭಿವೃದ್ದಿಪಡಿಸಲಾಗಿದೆ.

ಈ ಯೋಜನೆ ಅಡಿಯಲ್ಲಿ ಐಐಟಿಗಳಲ್ಲಿ ಪ್ರತ್ಯೇಕ ಸಂಶೋಧನ / ಅಧ್ಯಯನ ಕೇಂದ್ರಗಳು ಮತ್ತು ತರಗತಿಗಳನ್ನು ಸ್ಥಾಪಿಸಲಾಗುತ್ತದೆ. ಮಾನವರಹಿತ ವಾಹನ/ವಿಮಾನಗಳ ತಂತ್ರಜ್ಞಾನವು ರಕ್ಷಣಾ ಕ್ಷೇತ್ರಕ್ಕೂ ಸಾಕಷ್ಟು ಲಾಭದಾಯವಾಗಲಿದೆ.

ಭವಿಷ್ಯದ ಅವಶ್ಯತೆಯಾದ ಈ ತಂತ್ರಜ್ಞಾನ ಅಭಿವೃದ್ಧಿಗಾಗಿ ಸರ್ಕಾರ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳ ಸಹಕಾರದೊಂದಿಗೆ ಸ್ವಯಂಚಾಲಿತ ಕಾರು ಮತ್ತು ಮಾನವ ರಹಿತ ವಾಹನ/ವಿಮಾನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ.

Tuesday 6 March 2018

☀️ PART VI— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್ (IAS/KAS Exam Preparation Notes Bits)

☀️ PART VI— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್
(IAS/KAS Exam Preparation Notes Bits)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)


...ಮುಂದುವರೆದ ಭಾಗ.


ಸ್ಪರ್ಧಾಳುಗಳ ಗಮನಕ್ಕೆ:
ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ. 
Gmail : yaseen7ash@gmail.com


61. ಜಾಗತಿಕ ಆರ್ಥಿಕ ವೃದ್ಧಿ ದರವು (ಜಿಡಿಪಿ) 2017 ಮತ್ತು 2018ರಲ್ಲಿ ಕ್ರಮವಾಗಿ ಶೇ 3.6 ಮತ್ತು ಶೇ 3.7ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜಿಸಿದೆ. ಇದು ಈ ಹಿಂದಿನ ವರ್ಷಗಳ ಸರಾಸರಿ ಮಟ್ಟಕ್ಕಿಂತ ಹೆಚ್ಚಿಗೆ ಇದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


62. ಪೂರ್ವದ ಹಿಮಾಲಯದಲ್ಲಿ ಆಲ್ಪೈನ್ ಸಸ್ಯವರ್ಗ 4000 ಮೀಟರ್ ವರೆಗೆ ಕಂಡುಬರುತ್ತದೆ ಏಕೆಂದರೆ ಪೂರ್ವ ಹಿಮಾಲಯದಲ್ಲಿ ಮಾನ್ಸೂನ್ ಮಳೆ ಪಶ್ಚಿಮ ಹಿಮಾಲಯಕ್ಕಿಂತ ಹೆಚ್ಚಾಗಿರುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


63. 2017-18ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ
— ಜಿಎಸ್ ಟಿ ಅಂಕಿಅಂಶದ ಪ್ರಾಥಮಿಕ ವಿಶ್ಲೇಷಣೆ ಪ್ರಕಾರ, ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆ ಶೇಕಡಾ 50ರಷ್ಟು ಏರಿಕೆಯಾಗಿದ್ದು ಸಣ್ಣ ಉದ್ಯಮಿಗಳು ಸೇರಿದಂತೆ ಸ್ವಯಂಪ್ರೇರಿತ ತೆರಿಗೆ ದಾಖಲಾತಿಗಳ ಸಂಖ್ಯೆ ಹೆಚ್ಚಾಗಿದೆ.
— ಸರಕು ಮತ್ತು ಸೇವೆಗಳ ಭಾರತದ ಆಂತರಿಕ ವಹಿವಾಟುಗಳಲ್ಲಿ ಏರಿಕೆಯಾಗಿದ್ದು ಒಟ್ಟು ದೇಶೀಯ ಉತ್ಪನ್ನಗಳಲ್ಲಿ ಇದರದ್ದು ಶೇಕಡಾ 60ರಷ್ಟು ಕೊಡುಗೆಯಿದೆ.
— ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳು ನಾಡು ಮತ್ತು ತೆಲಂಗಾಣ ರಾಜ್ಯಗಳು ಭಾರತದ ರಫ್ತಿನಲ್ಲಿ ಶೇಕಡಾ 70ರಷ್ಟು ಕೊಡುಗೆ ನೀಡಿವೆ.
— ಲಿಂಗಾನುಪಾತದ ಸರಾಸರಿಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಕಡಿಮೆಯಿದ್ದು 63 ದಶಲಕ್ಷ ಮಹಿಳೆಯರ ಕೊರತೆಯಿದೆ.
— 2005-2006ರಲ್ಲಿ ಶೇಕಡ 36ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದು ಇದೀಗ 2015-16ರಲ್ಲಿ ಶೇಕಡ 24ರಷ್ಟು ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


64. ಜಾಗತಿಕ ಪರಿಸರ ಸಾಧನಾ ಸೂಚ್ಯಂಕ(ಜಿಇಪಿಐ) ಬಿಡುಗಡೆ ಮಾಡಿದ 2017 ರ ವರದಿಯ ಪ್ರಕಾರ ಗ್ರೀನ್ ರ್ಯಾಂಕಿಂಗ್ ನಲ್ಲಿ ಸ್ವಿಜರ್ಲ್ಯಾಂಡ್ ಮೊದಲ ಸ್ಥಾನ ಪಡೆದಿದ್ದರೆ, ಫ್ರಾನ್ಸ್, ಡೆನ್ಮಾರ್ಕ್, ಮಾಲ್ಟಾ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದಿವೆ. ಭಾರತ 180 ದೇಶಗಳ ಪೈಕಿ 177ನೇ ಸ್ಥಾನ ಪಡೆದಿದೆ.
— 2016ರಲ್ಲಿ ಜಿಇಪಿಐ ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತ 141ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ 36 ಸ್ಥಾನ ಕುಸಿತ ಕಂಡಿದ್ದು 177ನೇ ಸ್ಥಾನ ಪಡೆದಿದೆ.
— ಜಿಇಪಿಐ ಒಟ್ಟು 180 ದೇಶಗಳ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ.
— ಸಮೀಕ್ಷೆಯಲ್ಲಿ ದೇಶದ ಗಾಳಿ, ನೀರಿನ ಗುಣಮಟ್ಟ, ನೈರ್ಮಲ್ಯ, ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಪ್ರಮಾಣ, ಅರಣ್ಯದ ಪ್ರಮಾಣ, ಅರಣ್ಯ ನಾಶದ ತೀವ್ರತೆ ಹೀಗೆ ಒಟ್ಟು 10 ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಿ ಅಂಕಗಳನ್ನು ನೀಡಲಾಗಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


65. ದೇಶದ ಪ್ರಮುಖ ಪರ್ವತ ಶ್ರೇಣಿಗಳು :
- ಅಜಂತಾ ಪರ್ವತ ಶ್ರೇಣಿ ಒಂದು ಸೀಮಿತ ವ್ಯಾಪ್ತಿಯನ್ನು ಹೊಂದಿದ್ದು, ಇದು ಮಹಾರಾಷ್ಟ್ರದಲ್ಲಿದೆ.
- ಅರಾವಳಿ ಪರ್ವತ ಶ್ರೇಣಿಗಳು ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯನ್ನು ಒಳಗೊಳ್ಳುತ್ತವೆ.
- ಸತ್ಪುರ ಶ್ರೇಣಿಗಳು ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಕಂಡುಬರುತ್ತವೆ.
- ಸಹ್ಯಾದ್ರಿ ಶ್ರೇಣಿಗಳು  ಗುಜರಾತ್, ಮಹಾರಾಷ್ಟ್ರ ಗಡಿಯಿಂದ ಪ್ರಾರಂಭವಾಗುತ್ತದೆ ಮತ್ತು ಗೋವಾ, ಕರ್ನಾಟಕವನ್ನು ದಾಟಿ ಕೇರಳದ ಕೇಪ್ ಕೊಮ್ರಿನ್ (Cape Comrin) ತುದಿಯವರೆಗೆ ತಲುಪುತ್ತದೆ.
- ಅಜಂತಾ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಕಂಡುಬರುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


66. 1945ರಲ್ಲಿ ಸ್ಥಾಪಿಸಲ್ಪಟ್ಟ ಮತ್ತು ಒಂದು ಸಾರ್ವತ್ರಿಕ ಅಂತರಸರ್ಕಾರೀಯ ಸರ್ಕಾರಿ ಸಂಘಟನೆಯಾಗಿ ಮುಂದುವರಿಯುತ್ತಿರುವ ವಿಶ್ವಸಂಸ್ಥೆಯು ಆರಂಭಿಕ ಹಂತದಲ್ಲಿ 51 ಸದಸ್ಯರಾಷ್ಟ್ರಗಳನ್ನು ಒಳಗೊಂಡಿದ್ದ ವಿಶ್ವಸಂಸ್ಥೆಯ ಸದಸ್ಯತ್ವವು, ಭಾರತವೂ ಸೇರಿದಂತೆ ಪ್ರಸ್ತುತ ಇಂಥ 193 ಸದಸ್ಯ ರಾಷ್ಟ್ರಗಳನ್ನುನ ಹೊಂದಿದೆ.
— ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳನ್ನು ನೆರವೇರಿಸುವ ಸಲುವಾಗಿ, ಭದ್ರತಾ ಮಂಡಳಿಯಂಥ ಅಂಗದ ಮೂಲಕ ಅದಕ್ಕೊಂದು ‘ಸೈನಿಕ ಬಲ’ವನ್ನು ಒದಗಿಸಲಾಗಿದೆ. ಇದು ಐದು ಕಾಯಂ ಸದಸ್ಯರಾಷ್ಟ್ರಗಳನ್ನು ಒಳಗೊಂಡಿದ್ದು, ಇಂಥ ಪ್ರತಿಯೊಂದು ಕಾಯಂ ಸದಸ್ಯರಾಷ್ಟ್ರಕ್ಕೂ ಯಾವುದೇ ನಿರ್ಣಯದ ಕುರಿತಾಗಿ ‘ನಿರಾಕರಣಾಧಿಕಾರ’ (ವೀಟೋ) ಚಲಾಯಿಸುವ ಸ್ವಾತಂತ್ರ್ಯ ನೀಡಲಾಗಿದೆ. ಜತೆಗೆ, ಸರದಿಯ ಆಧಾರದ ಮೇಲೆ ನೇಮಕಗೊಳ್ಳುವ 10 ತಾತ್ಕಾಲಿಕ ಸದಸ್ಯರಾಷ್ಟ್ರಗಳನ್ನೂ ಭದ್ರತಾ ಮಂಡಳಿ ಹೊಂದಿದೆ.
— ಚೀನಾ, ಫ್ರಾನ್ಸ್, ಇಂಗ್ಲೆಂಡ್ (ಬ್ರಿಟನ್), ರಷ್ಯಾ ಮತ್ತು ಅಮೆರಿಕ 5 ಕಾಯಂ ಸದಸ್ಯರಾಷ್ಟ್ರಗಳೆನಿಸಿಕೊಂಡಿದ್ದರೆ, ಓರ್ವ ತಾತ್ಕಾಲಿಕ ಸದಸ್ಯರಾಷ್ಟ್ರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 7 ಬಾರಿ ಸೇವೆ ಸಲ್ಲಿಸಿರುವ ಭಾರತವು, ಕಾಯಂ ಸದಸ್ಯತ್ವಕ್ಕಾಗಿನ ಯತ್ನವೂ ಸೇರಿದಂತೆ, ಭದ್ರತಾ ಮಂಡಳಿಯ ಸುಧಾರಣೆ/ಮರುರೂಪಣೆಗೆ ಸಂಬಂಧಿಸಿದ ಹೋರಾಟದ ಮುಂಚೂಣಿಯಲ್ಲಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


67. ಜಿಎಸ್‌ಟಿಯು ಹೆಚ್ಚುವರಿ ತೆರಿಗೆಯಂತೂ ಆಗಿರುವುದಿಲ್ಲ. ಸಿಜಿಎಸ್‌ಟಿಯು (ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆಯು) ಕೇಂದ್ರ ಅಬಕಾರಿ ಸುಂಕ, ಸೇವಾ ತೆರಿಗೆ ಹಾಗೂ ಹೆಚ್ಚುವರಿಯಾಗಿ ಕೇಂದ್ರ ಮಟ್ಟದಲ್ಲಿನ ಸುಂಕಗಳನ್ನು ಒಳಗೊಂಡಿರುತ್ತದೆ. ರಾಜ್ಯ ಮಟ್ಟದಲ್ಲಿಯಾದರೆ ಮೌಲ್ಯವರ್ಧಿತ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ, ನಾಕಾ ತೆರಿಗೆ, ಲಾಟರಿ ತೆರಿಗೆ, ವಿದ್ಯುತ್ ಸುಂಕ, ಸರಕುಗಳ ಹಾಗೂ ಸೇವೆಗಳ ಪೂರೈಕೆಗೆ ಹಾಗೂ ಖರೀದಿ ತೆರಿಗೆಗೆ ಸಂಬಂಧಿಸಿದಂತೆ ಸರ್ಚಾರ್ಜ್‌ ಇವೆಲ್ಲವನ್ನೂ ಒಳಗೊಂಡಿರುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


68. ಭಾರತದ ಮೇಲೆ ಪ್ರಪ್ರಥಮ ಬಾರಿಗೆ ಮಂಗೋಲರು ಚೆಂಗೀಸ್ ಖಾನನ ನೇತೃತ್ವದಲ್ಲಿ ದಾಳಿ ಮಾಡಿದರು. ಇಲ್ತಮಶ್ ಅವರನ್ನು ಯಶಸ್ವಿಯಾಗಿ ಹಿಮ್ಮೆಟಿಸಿದನು. ಈ ಸಾಧನೆಗಳಿಂದಾಗಿ ಬಾಗ್ದಾದಿನ ಖಲೀಫನು ಇಲ್ತಮಶ್‍ನಿಗೆ ಅಧಿಕೃತ ಅಧಿಕಾರ ಸಮ್ಮತಿ ಪತ್ರ ನೀಡಿದನು.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


69. ಯಾವುದೇ ಒಂದು ಪ್ರದೇಶದಲ್ಲಿ ವಿವಿಧ ಬಗೆಯ ಸಸ್ಯಗಳು ಪ್ರಾಣಿಗಳ ಹಾಗೂ ಇನ್ನಿತರ ಜೀವಿಗಳ ಜೀವಿಸಂದಣಿಗಳಿರುತ್ತವೆ. ಈ ಎಲ್ಲ ಜೀವಿಸಂದಣಿಗಳನ್ನು ಒಟ್ಟಿಗೆ ಜೀವಿಸಮುದಾಯ(biotic community) ಎಂದು ಕರೆಯುತ್ತಾರೆ. ಜೀವಿಸಮುದಾಯದ ಜೀವಿಗಳು ಪರಸ್ಪರ ಪ್ರತಿವರ್ತಿಸುತ್ತವೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


70. ಈ ಕೆಳಕಂಡ ವಿಷಯಗಳು ಸಂವಿಧಾನದ ಏಳನೇಯ ಅನುಸೂಚಿಯ ಸಮವರ್ತಿ ಪಟ್ಟಿ - III ರಲ್ಲಿ ಒಳಗೊಳ್ಳುತ್ತವೆ.
— ನ್ಯಾಯಾಲಯ ನಿಂದನೆ ಒಳಪಡುತ್ತದೆ ಆದರೆ ಸರ್ವೋಚ್ಚ ನ್ಯಾಯಾಲಯದ ನಿಂದನೆ ಸೇರುವುದಿಲ್ಲ.
— ಮಾನಕಗಳನ್ನು ನಿಗದಿಪಡಿಸುವುದನ್ನು ಹೊರತುಪಡಿಸಿ ತೂಕಗಳು ಮತ್ತು ಅಳತೆಗಳು.


...ಮುಂದುವರೆಯುದು.

Monday 5 March 2018

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2 : ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆ (Literacy in Karnataka State)

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2 : ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆ
(Literacy in Karnataka State)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಕರ್ನಾಟಕದ ಅರ್ಥವ್ಯವಸ್ಥೆ
(Karnataka Economics)

★ ಕರ್ನಾಟಕ ಆರ್ಥಿಕ ಸಮೀಕ್ಷೆ
(Karnataka Economic Survey)


•► 2001 ರಿಂದ 2011ರ ದಶಕದಲ್ಲಿ, ಸಾಕ್ಷರತಾ ಪ್ರಮಾಣಗಳಲ್ಲಿ ಗಣನೀಯ ಮಟ್ಟಿಗೆ ಸಾಧನೆ ಆಗಿದೆ ಎನ್ನುವದು ಅಂಕಿಅಂಶಗಳಿಂದ ದೃಢಪಟ್ಟಿದೆ. 2001 ರಲ್ಲಿ 66.64% ರಷ್ಟಿದ್ದ ರಾಜ್ಯದ ಸಾಕ್ಷರತಾ ಪ್ರಮಾಣವು 2011 ರ ಹೊತ್ತಿಗೆ ಶೇ.75.60 ರಷ್ಟಾಗಿದೆ.

•► ಕರ್ನಾಟಕದ ಪುರುಷ ಮತ್ತು ಮಹಿಳಾ ಸಾಕ್ಷರತಾ ಪ್ರಮಾಣವು ರಾಷ್ಟ್ರದ ಒಟ್ಟಾರೆ ಸರಾಸರಿ ಪ್ರಮಾಣಕ್ಕಿಂತ ಹೆಚ್ಚಿದೆ. ರಾಜ್ಯದ ನಗರ ಪ್ರದೇಶದ ಪುರುಷರ ಸಾಕ್ಷರತೆ ಶೇ.90ರ ಗಡಿ ದಾಟಿದೆ. ಇದರ ತದ್ವಿರುದ್ಧ ಗ್ರಾಮಾಂತರ ಪ್ರದೇಶದ ಮಹಿಳಾ ಸಾಕ್ಷರತೆ ಇನ್ನೂ ಶೇ.60ರ ಗಡಿಯನ್ನು ಸಹ ತಲುಪಿಲ್ಲ.

•► ಸಾಕ್ಷರತೆಯ ಪ್ರತಿಯೊಂದು ಮಾನದಂಡವನ್ನು ಅವಲೋಕಿಸಿದಾಗ ರಾಜ್ಯಮಟ್ಟದ ಸಾಕ್ಷರತೆಯ ಪ್ರಮಾಣ ರಾಷ್ಟ್ರದ ಸರಾಸರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿಗೆಯಿದೆ. 2001 ರಲ್ಲಿ ರಾಷ್ಟ್ರದ 16 ಪ್ರಮುಖ ರಾಜ್ಯಗಳಲ್ಲಿ ರಾಜ್ಯದ ಸಾಕ್ಷರತೆಯ ಸ್ಥಾನ 9 ಆಗಿದೆ (100 ಲಕ್ಷ ಕ್ಕಿಂತ ಹೆಚ್ಚಿರುವ ಜನಸಂಖ್ಯೆ). 2011 ರಲ್ಲಿಯೂ ಮೇಲಿನ ಸ್ಥಾನದಲ್ಲಿ ಮುಂದುವರೆದಿದೆ.

•► ಒಂದು ದಶಕದಲ್ಲಿ ರಾಜ್ಯದ ಒಟ್ಟಾರೆ ಸಾಕ್ಷರತೆಯ ಸಾಧನೆ ಶೇ.9.0. ರಾಜ್ಯದ ಪ್ರಗತಿಯು ಅಖಿಲ ಭಾರತದ ಸಾಧನೆಗಿಂತ ಸ್ವಲ್ಪ ಹೆಚ್ಚಿಗೆ ಇರುವುದನ್ನು ಸಾಕ್ಷರತಾ ಪ್ರಮಾಣವು ತೋರಿಸಿದೆ. 2001 ರಲ್ಲಿ ಸಾಕ್ಷರತಾ ಮಟ್ಟ ಕಡಿಮೆಯಿದ್ದ ಹಲವು ಜಿಲ್ಲೆಗಳು, ಉತ್ತಮ ಸಾಧನೆಗೆಯ್ದು ರಾಜ್ಯ ಮಟ್ಟದ ಸರಾಸರಿ ದಾಟಿದೆ.
- ಅಂತಹ ಜಿಲ್ಲೆಗಳೆಂದರೆ ಕಲಬುರಗಿ(ಯಾದಗಿರಿ ಸೇರಿ), ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ರಾಯಚೂರು, ಕೋಲಾರ, ಚಾಮರಾಜನಗರ, ವಿಜಯಪುರ ಮತ್ತು ಬೀದರ್.

•► ಲೋಕ ಶಿಕ್ಷಣ ಇಲಾಖೆಯು ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳು ಗ್ರಾಮಾಂತರ ಮತ್ತು ಹಿಂದುಳಿದ ಪ್ರದೇಶಗಳಲ್ಲಿ/ರಾಜ್ಯದ ಇತರೆ ಭಾಗದಲ್ಲಿ ಮಹಿಳೆಯರ ಸಾಕ್ಷರತೆಗೆ ಹೆಚ್ಚಿನ ಒತ್ತು ನೀಡಿರುವುದು ಕಂಡುಬರುತ್ತದೆ.

•► ಸಾರ್ವಜನಿಕ ಶಿಕ್ಷಣ ಇಲಾಖೆಯ, ಸರ್ವಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಇಲಾಖೆಗಳು ಕಲಿಕೆಗೆ ಶಾಲೆಗಳಲ್ಲಿ ಉತ್ತಮ ಸೌಲಭ್ಯ, ಆಕರ್ಷಕ ಪ್ರೋತ್ಸಾಹ ಶಿಕ್ಷಣದಲ್ಲಿ ಕಲಿಕೆ ಗುಣಮಟ್ಟದ ಸುಧಾರಣೆ ಮತ್ತು ಸಮುದಾಯದಲ್ಲಿ ಅರಿವುಗಳು ಹೆಚ್ಚಾಯಿತು ಎನ್ನಬಹುದಾಗಿದೆ.

Courtesy : Karnataka Economic Survey - 2017-18)

☀️ PART V— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್ (IAS/KAS Exam Preparation Notes Bits)

☀️ PART V— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್
(IAS/KAS Exam Preparation Notes Bits)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)


...ಮುಂದುವರೆದ ಭಾಗ.


ಸ್ಪರ್ಧಾಳುಗಳ ಗಮನಕ್ಕೆ:
— ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ. 
Gmail : yaseen7ash@gmail.com



51.  ಭಾರತ ಪರ್ಯಾಯ ದ್ವೀಪವು (Gondwanaland) ಗೊಂಡ್ವಾನಾ (ಖಂಡ)ದ ಭಾಗವಾಗಿದ್ದು, ಇದು ಉತ್ತರಕ್ಕೆ ಸಾಗಿತೆಂದು ತದನಂತರ ಭಾರತ, ಆಫ್ರಿಕಾ ಮತ್ತು ಇತರ ಭಾಗಗಳು ಪರಸ್ಪರ ಬೇರ್ಪಟ್ಟವು ಎಂದು ಭೂಗೋಳ ಶಾಸ್ತ್ರಜ್ಞರು ನಂಬುತ್ತಾರೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


52. 2017-18ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 6.75ರಷ್ಟಿದ್ದು, ಮುಂದಿನ ವರ್ಷದಲ್ಲಿ ಶೇಕಡಾ 7ರಿಂದ 7.5 ಕ್ಕೆ ಜಿಡಿಪಿ ಏರಿಕೆಯಾಗುವ ಗುರಿ ಹೊಂದಲಾಗಿದೆ
— ಗ್ರಾಹಕ ದರ ಸೂಚ್ಯಂಕ(ಸಿಪಿಐ) ಹಣದುಬ್ಬರ ಸರಾಸರಿ 2017-18ರಲ್ಲಿ ಶೇಕಡಾ 3.3ರಷ್ಟಿದ್ದು ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ.2017-18ರಲ್ಲಿ ದೇಶದ ಹಣದುಬ್ಬರ ಸರಾಸರಿ ಪ್ರಮಾಣದಲ್ಲಿ ಮುಂದುವರಿದಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


53. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು & ಸದಸ್ಯರನ್ನು ನೇಮಿಸಿಕೊಳ್ಳವರು - ರಾಜ್ಯಪಾಲರು ಅದರಂತೆ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು & ಸದಸ್ಯರಿಗೆ ವೇತನ ನೀಡುವುರು- ರಾಜ್ಯ ಸರ್ಕಾರ (The State Legislature) ಆದರೆ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು & ಸದಸ್ಯರನ್ನು ತೆಗೆದು ಹಾಕುವರು - ಸುಪ್ರೀಂ ಕೋರ್ಟ ವರದಿ/ಆದೇಶ ಮೇರೆಗೆ ರಾಷ್ಟ್ರಪತಿಗಳು.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


54. ಮೂಲಭೂತವಾದ ಹಾಗೂ ಸೈಬರ್‌ ಅಪರಾಧಗಳನ್ನು ಹತ್ತಿಕ್ಕಲು ಕೇಂದ್ರ ಗೃಹ ಸಚಿವಾಲಯದಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ ನಿಗ್ರಹ (ಕೌಂಟರ್‌ ಟೆರರಿಸಂ ಅಂಡ್‌ ಕೌಂಟರ್‌ ರ‍್ಯಾಡಿಕಲೈಸೇಶನ್‌- CTCR) ಮತ್ತು ಸೈಬರ್‌ ಮತ್ತು ಮಾಹಿತಿ ಭದ್ರತೆ (ಸೈಬರ್‌ ಅಂಡ್‌ ಇನ್ಫೋರ್ಮೇಶನ್‌ ಸೆಕ್ಯುರಿಟಿ- CIS) ಎಂಬ ಪ್ರತ್ಯೇಕ ವಿಭಾಗಗಳನ್ನು ಸೃಷ್ಟಿಸಲಾಗಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


55. ಯುನೆಸ್ಕೋದವರು ನಮ್ಮ ಮಲೆನಾಡು, ನೀಲಗಿರಿಯನ್ನು ಬಿಒಎಸ್ ಫೆರಿಕಾಲ್ ರಿಸರ್ವ್ ಅನ್ನಾಗಿ ಗುರುತಿಸಿದೆ. ಇದು ಅವರು ಗುರುತಿಸಿರುವ ದೇಶದ ಪ್ರಪ್ರಥಮ ಬಿಒಎಸ್ ಫೆರಿಕಾಲ್ ರಿಸರ್ವ್. ಇಲ್ಲಿ ವನ್ಯಜೀವಿಗಳ ಸಂರಕ್ಷಣೆ, ಕಾಡು ಜನರ ಬೆಳವಣಿಗೆ, ವೈಜ್ಞಾನಿಕ ಸಂಶೋಧನೆ ಇವೆಲ್ಲವೂ ನಡೆಯಲಿದೆ. .
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


56. ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮದ ಕಲ್ಪನೆ ಏನು ಎಂದರೆ ಪ್ರತಿಯೊಬ್ಬ ವಯಸ್ಕ ನಾಗರಿಕರಿಗೆ ಸರ್ಕಾರವೇ ಮೂಲಭೂತ ಜೀವನ ವೆಚ್ಚವನ್ನು ಪಾವತಿಸುವುದು.
— ಈ ಕಲ್ಪನೆಯನ್ನು ಮೊದಲಿಗೆ ಪ್ರಸ್ತುತ ಪಡಿಸಿದ್ದು ನೊಬೆಲ್ ಪ್ರಶಸ್ತಿ ವಿಜೇತ ಬರ್ಟ್ರೆಂಡ್ ರಸೆಲ್
— ಸಾರ್ವತ್ರಿಕ ಮೂಲ ಆದಾಯ ಯೋಜನೆಯ ಪ್ರಕಾರ ನಾಗರಿಕರು ತಮ್ಮ ಹಣಕಾಸು ಹಿನ್ನೆಲೆ, ಔದ್ಯೋಗಿಕ ಸ್ಥಿತಿಗತಿ ಅಥವಾ ಇತರ ಗುಣಗಳೇನೇ ಇದ್ದರೂ ಸರ್ಕಾರದಿಂದ ನಿರ್ದಿಷ್ಟವಾದ ನಿಯಮಿತ ಆದಾಯವನ್ನು ಪಡೆಯುತ್ತಾರೆ. ಅವರು ಆ ದೇಶದ ಪೌರರಾಗಿರುವುದು ಮತ್ತು ಕಾನೂನುಬದ್ಧವಾಗಿ ವಯಸ್ಕರಾಗಿರುವುದು ಈ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ನಾಗರಿಕರ ಏಕೈಕ ಅರ್ಹತೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

57.  ಪ್ರಮುಖ ಪರ್ಯಾಯ ದ್ವೀಪ (Peninsular) ಪ್ರದೇಶಗಳು          ಭೂವೈಜ್ಞಾನಿಕ ಕಾಲಾವಧಿ ಮತ್ತು ಯುಗಗಳು
ಎ. ಡೆಕ್ಕನ್ ಟ್ರ್ಯಾಪ್ಸ್                       - ಕ್ರೆಟೇಶಿಯಸ್ ಯುಗ
ಬಿ. ಪಶ್ಚಿಮ ಘಟ್ಟಗಳು                     - ಲೇಟ್ ಸೆನೊಜಾಯಿಕ್ ಯುಗ
ಸಿ. ಅರಾವಳಿ -                             - ಪ್ರಿ-ಕ್ಯಾಂಬ್ರಿಯನ್ ಯುಗ
ಡಿ. ನರ್ಮದಾ-ತಪತಿ - ಮೆಕ್ಕಲು ನಿಕ್ಷೇಪಗಳು       - ಪ್ಲೀಸ್ಟೋಸೀನ್ ಅವಧಿ
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


58. ಸಂಗಮ ಸಾಹಿತ್ಯದಲ್ಲಿ ಬರುವ ಚೋಳ ಅರಸರ ಎರ‍ಡು ಹೆಸರುಗಳೆಂದರೆ, ಕರಿಕಾಲ ಚೋಳ ಮತ್ತು ಕೋಸೆಂಗಾನನ್. ಉತ್ತರಾಧಿಕಾರಿಗಳನ್ನು ನೇಮಿಸುವ, ಅವರ ಸಂಬಂಧಗಳನ್ನು ಇತರೊಂದಿಗೆ ಬೆಸೆಯುವ ಮತ್ತು ಇದೇ ಅವಧಿಯಲ್ಲಿ ಹಲವಾರು ಬೇರೆ ರಾಜಕುಮಾರರೊಂದಿಗಿನ ಸಂಬಂಧಗಳಿಗೆ ಸರಿಯಾದ ಮಾನದಂಡಗಳಿರಲಿಲ್ಲ.
- ಉರೈಯೂರ್ (ಈಗಿನ ತಿರುಚನಾಪಳ್ಳಿಯ ಒಂದು ಭಾಗ) ಚೋಳರ ಹಳೇಯ ರಾಜಧಾನಿಯಾಗಿತ್ತು..
- ಕಾವೇರಿಪಟ್ಟಣಂ ಕೂಡಾ ಮೊದಲಿಗೆ ಚೋಳರ ರಾಜಧಾನಿಯಾಗಿತ್ತು.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


59. ಅಂತರರಾಷ್ಟ್ರೀಯ ವಲಸೆಯ ವರದಿ (ಇಂಟರ್ನ್ಯಾಷನಲ್ ಮೈಗ್ರೇಶನ್ ರಿಪೋರ್ಟ್) 2017 ಯನ್ನು '(ಡಿಸೆಂಬರ್ 18 ರಂದು)-ಇಂಟರ್ನ್ಯಾಷನಲ್ ಮೈಗ್ರೇಶನ್ ಡೇ' ಸಂದರ್ಭದಲ್ಲಿ  ಯುಎನ್ ಡಿಪಾರ್ಟ್ ಮೆಂಟ್ ಆಫ್ ಎಕನಾಮಿಕ್ ಅಂಡ್ ಸೋಶಿಯಲ್ ಅಫೇರ್ಸ್ (UNDSA-ಯುಎನ್ ಡಿಎಸ್ಎ) ವು ಬಿಡುಗಡೆ ಮಾಡಿದೆ.
— ಇದರ ಪ್ರಕಾರ,
- ವಿದೇಶದಲ್ಲಿ ವಲಸಿಗರ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ.
- ಅಂತರರಾಷ್ಟ್ರೀಯ ವಲಸೆ ಪ್ರಪಂಚದ ಅನೇಕ ಭಾಗಗಳಲ್ಲಿ ಜನಸಂಖ್ಯಾ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡುತ್ತದೆ ಮತ್ತು ಕೆಲವು ದೇಶಗಳಲ್ಲಿ ಅಥವಾ ಪ್ರದೇಶಗಳಲ್ಲಿ ಜನಸಂಖ್ಯೆಯ ಕುಸಿತವನ್ನು ಹಿಮ್ಮೆಟ್ಟಿಸುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


60. ಜಿಎಸ್‌ಟಿಯ ಪ್ರಮುಖ ವೈಶಿಷ್ಟ್ಯಗಳು :
* ಜಿಎಸ್‌ಟಿಯು ಪರೋಕ್ಷ ತೆರಿಗೆಯಾಗಿದೆ.
* ವರ್ಷಕ್ಕೆ  ₹ 20 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ಅನ್ವಯವಾಗದು.
* ರಾಜ್ಯ ಸರ್ಕಾರಗಳಿಗೆ 5 ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡಲಿರುವ ಕೇಂದ್ರ ಸರ್ಕಾರ.
* ಸರಕು ಮತ್ತು ಸೇವೆಗಳ ತೆರಿಗೆ ದರಗಳನ್ನು  ನಾಲ್ಕು ಹಂತದಲ್ಲಿ (ಶೇ 5, 12, 18 ಮತ್ತು 28) ನಿಗದಿ.
* ವಿಲಾಸಿ ಸರಕು,  ತಂಪು ಪಾನೀಯ ಮತ್ತು  ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಮತ್ತು ಪಾನ್‌ ಮಸಾಲಾ     ಉತ್ಪನ್ನಗಳ ಮೇಲೆ (ಬೀಡಿ ಹೊರತುಪಡಿಸಿ) ವಿಧಿಸಬಹುದಾದ ಸೆಸ್‌ನ ಗರಿಷ್ಠ ದರ ಶೇ 15ರಷ್ಟಕ್ಕೆ ನಿಗದಿ.
* ಜಿಎಸ್‌ಟಿ  ಗರಿಷ್ಠ ದರ ಶೇ 40ರಷ್ಟು

... ಮುಂದುವರೆಯುವುದು. 

Thursday 22 February 2018

●.'ಸಾಮಾನ್ಯ ಅಧ್ಯಯನ 2-ಪತ್ರಿಕೆ 3: ಸುಸ್ಥಿರ ಅಭಿವೃದ್ಧಿ' ವ್ಯಾಖ್ಯಾನಿಸಿ. ಜಾಗತಿಕ ಮಟ್ಟದ ಸುಸ್ಥಿರ ಅಭಿವೃದ್ಧಿ ಒಳಗೊಳ್ಳುವಿಕೆ : (Sustained Development and What does sustainable development)

●.'ಸಾಮಾನ್ಯ ಅಧ್ಯಯನ 2-ಪತ್ರಿಕೆ 3: ಸುಸ್ಥಿರ ಅಭಿವೃದ್ಧಿ' ವ್ಯಾಖ್ಯಾನಿಸಿ. ಜಾಗತಿಕ ಮಟ್ಟದ ಸುಸ್ಥಿರ ಅಭಿವೃದ್ಧಿ ಒಳಗೊಳ್ಳುವಿಕೆ :
(Sustained Development and What does sustainable development)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಪರಿಸರ ವ್ಯವಸ್ಥೆ
(Ecology & Environmental studies)


•► ಪರಿಸರ ಮತ್ತು ಅಭಿವೃದ್ಧಿ ಕುರಿತಾದ ವಿಶ್ವ ಆಯೋಗ (ಬ್ರಂಟ್ ಲ್ಯಾಂಡ ಆಯೋಗ ಎಂದು ಕರೆಯಲಾಗುತ್ತದೆ) ಸುಸ್ಥಿರ ಅಭಿವೃದ್ಧಿಯನ್ನು ಹೀಗೆ ವ್ಯಾಖ್ಯಾನಿಸಿದೆ, `ಭವಿಷ್ಯದ ಪೀಳಿಗೆಯು ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಲ್ಲಿ ಹೊಂದಿರುವ ಸಾಮಥ್ರ್ಯದೊಂದಿಗೆ ರಾಜಿಯಾಗದೇ ಪ್ರಸಕ್ತ ಪೀಳಿಗೆ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವ ಪ್ರಕ್ರಿಯೆ ಸುಸ್ಥಿರ ಅಭಿವೃದ್ಧಿ'.

•► 1992ರಲ್ಲಿ ರಿಯೊದಲ್ಲಿ ಜರುಗಿದ ಭೂ ಶೃಂಗಸಭೆ (ಪರಿಸರ ಮತ್ತು ಅಭಿವೃದ್ಧಿ ಕುರಿತಂತೆ ವಿಶ್ವ ಸಂಸ್ಥೆಯ ಅಧಿವೇಶನ) ಈ ವ್ಯಾಖ್ಯಾನವನ್ನು ಬಹುವಾಗಿ ಮೆಚ್ಚಿತಲ್ಲದೆ ಅದನ್ನು ಸ್ವೀಕರಿಸಿತು. ನಂತರ ಹವಾಮಾನ ಬದಲಾವಣೆ ಹಾಗೂ ಜೀವವೈವಿಧ್ಯದಲ್ಲಿನ ಬದಲಾವಣೆಯಿಂದಾಗಿ ಉಂಟಾಗುವ ಅಸುಸ್ಥಿರತೆಯಿಂದ ಮಾನವ ಸಂಕುಲವನ್ನು ಕಾಪಾಡುವ ಸಲುವಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ಪರಿಸರ ಅಭಿವೃದ್ಧಿಗಾಗಿ ನಿಧಿ ಸಂಗ್ರಹ ಉದ್ದೇಶದೊಂದಿಗೆ ನಡೆದ ಹವಾಮಾನ ಬದಲಾವಣೆಯ ಚೌಕಟ್ಟಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಹಾಅಧಿವೇಶನ (ಯುಎನ್‍ಎಫ್ ಸಿಸಿಸಿ) ಹಾಗೂ ಜೀವವೈವಿಧ್ಯ ಸಮಾವೇಶ (ಸಿ ಬಿ ಡಿ) ದ ಫಲವಾಗಿ ಜಾಗತಿಕ ಪರಿಸರ ಸೌಲಭ್ಯ (ಜಿಇಎಫ್) ಯನ್ನು ಸ್ಥಾಪಿಸಲಾಯಿತು.

•► ಹವಾಮಾನದಲ್ಲಿನ ಬದಲಾವಣೆ ಒಟ್ಟು ಪರಿಸರದ ಇತರ ಅಂಶಗಳ ಮೇಲೆಯೂ ಪರಿಣಾಮ ಬೀರುತ್ತದೆ. ಜೀವ ಭೌತಿಕ ಪರಿಸರ ಅಂದರೆ, ವಾತಾವರಣ ಭೂಮಿಯಬಳಕೆ ಮರುಭೂಮಿ ಸೃಷ್ಟಿ, ಜೈವಿಕ ದಾಳಿಯಂತಹ ಬದಲಾವಣೆ, ಹಾಗೂ ಜಾಗತೀಕರಣ, ಮುಕ್ತ ವ್ಯಾಪಾರ, ನೂತನ ಬೌದ್ಧಿಕ ಹಕ್ಕು ಸ್ವಾಮ್ಯ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಹಕಾರ, ಹೊಂದಾಣಿಕೆ ಒಪ್ಪಂದಗಳು ಸೇರಿದಂತೆ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಪರಿಸರದ ಮೇಲೂ ಆಗುವ ಪರಿಣಾಮದಿಂದಾಗಿ ಸೃಷ್ಟಿಯಾಗುವ ವಿವಿಧ ಸಮಸ್ಯೆಗಳನ್ನು ಎದುರಿಸಲು ಸುಸ್ಥಿರ ಅಭಿವೃದ್ಧಿ ಪ್ರಕ್ರಿಯೆ ವಿವಿಧ ಮಾರ್ಗೋಪಾಯಗಳನ್ನು ಅನುಸರಿಸಬೇಕಾಗುತ್ತದೆ.

•► 2002ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಸುಸ್ಥಿರ ಅಭಿವೃದ್ಧಿ ಕುರಿತ ವಿಶ್ವಸಂಸ್ಥೆ ಅಧಿವೇಶನ ಸಹ ಸುಸ್ಥಿರ ಅಭಿವೃದ್ಧಿ ತತ್ವಗಳನ್ನು ಒಪ್ಪಿಕೊಳ್ಳುವ ಮೂಲಕ ಈ ಪರಿಕಲ್ಪನೆಗೆ ಜಾಗತಿಕ ಮಟ್ಟದ ಆಯಾಮ ನೀಡಿತು.

•► (Sustainable development is development that meets the needs of the present without compromising the ability of future generations to meet their own needs.)

Tuesday 20 February 2018

●.ಸಾಮಾನ್ಯ ಅಧ್ಯಯನ 3-ಪತ್ರಿಕೆ 4: ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು (The five layers of Atmosphere and its main features)

●.ಸಾಮಾನ್ಯ ಅಧ್ಯಯನ 3-ಪತ್ರಿಕೆ 4: ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು
(The five layers of Atmosphere and its main features)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪರಿಸರ ವ್ಯವಸ್ಥೆ,
(Ecology, Environmental Studies)

★ ಭೂಗೋಳಶಾಸ್ತ್ರ
(Geography)



• ವಾಯುಗೋಳವು ವಿವಿಧ ಬಗೆಯ ಅನಿಲಗಳು, ಧೂಳಿನ ಕಣಗಳು ಮತ್ತು ನೀರಾವಿಯ ಮಿಶ್ರಣವಾಗಿದೆ.

• ವಾಯುಗೋಳದ ಮುಖ್ಯ ಅನಿಲಗಳೆಂದರೆ
- ಸಾರಜನಕ ಶೇ.78.08,
- ಆಮ್ಲಜನಕ ಶೇ.20.94,
- ಆರ್ಗಾನ್ ಶೇ.0.93,
- ಇಂಗಾಲದ ಡೈಆಕ್ಸೈಡ್ ಶೇ.03, ಮತ್ತು ಓಜೋನ್ ಶೇ. 0.000005.

• ವಾಯುಗೋಳವು ಧೂಳಿನ ಕಣಗಳನ್ನು ಸಹ ಒಳಗೊಂಡಿದ್ದು, ನೀರಿನ ಕಣಗಳ ನಿರ್ಮಾಣಕ್ಕೆ ಸಹಾಯಕವಾಗಿದೆ.
ವಾಯುಗೋಳದಲ್ಲಿರುವ ನೀರಾವಿಯು ಮೋಡದ ನಿರ್ಮಾಣ ಹಾಗೂ ವೃಷ್ಟಿಗೆ ಕಾರಣವಾಗುವುದಲ್ಲದೆ, ವಾಯುಗೋಳದ ಶಾಖ ಮತ್ತು ಶಕ್ತಿಯನ್ನು ಹಿಡಿದಿರಿಸಿಕೊಂಡು ಅದು ಒಂದು ಸ್ಥಳದ ಹವಾಮಾನದ ಪರಿಸ್ಥಿತಿಯ ಮೇಲೆ ಪ್ರಭಾವವನ್ನು ಬೀರುವುದು.


•► ವಾಯುಗೋಳದ ರಚನೆ :
ವಾಯುಗೋಳವನ್ನು ಅದರ ಹಲವಾರು ಲಕ್ಷಣಗಳನ್ನು ಆಧರಿಸಿ ಐದು ಪದರುಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ ;
- ಪರಿವರ್ತನಾಮಂಡಲ,
- ಸಮೋಷ್ಣಮಂಡಲ,
- ಮಧ್ಯಂತರಮಂಡಲ,
- ಉಷ್ಣತಾಮಂಡಲ ಮತ್ತು ಬಾಹ್ಯಮಂಡಲ.


•► ಪರಿವರ್ತನಾಮಂಡಲ (Troposphere ) : 
- ಇದು ವಾಯುಗೋಳದ ಅತ್ಯಂತ ಕೆಳಪದರ.
- ಇದು ಸಮಭಾಜಕವೃತ್ತದ ಬಳಿ 18 ಕಿ.ಮೀ. ಎತ್ತರದವರೆಗೆ ಹಾಗೂ ಧ್ರುವಪ್ರದೇಶದ ಬಳಿ 8ಕಿ.ಮೀ. ಎತ್ತರದ ವರೆಗೆ ಕಂಡುಬರುವುದು.
- ಈ ವಲಯದಲ್ಲಿಯೇ ಹವಾಮಾನದ ಮೂಲಾಂಶಗಳಾದ ಉಷ್ಣಾಂಶ, ಒತ್ತಡ, ಮಾರುತಗಳು, ಮೋಡ, ಮಳೆ ಮೊದಲಾದ ಎಲ್ಲಾ ಅಂಶಗಳು ಕಂಡುಬರುತ್ತವೆ.
- ಹವಾಮಾನದ ಎಲ್ಲಾ ಬದಲಾವಣೆ ಕಂಡುಬರುವುದು ಈ ವಲಯದಲ್ಲಿ ಮಾತ್ರ.
- ಈ ವಲಯದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶ ಮತ್ತು ಒತ್ತಡದ ಪ್ರಮಾಣ ಕಡಿಮೆಯಾಗುತ್ತವೆ.


•► ಸಮೋಷ್ಣಮಂಡಲ (Stratosphere) : 
- ಇದು ವಾಯುಮಂಡಲದ ಎರಡನೆಯ ಪದರವಾಗಿದ್ದು 50 ಕಿ.ಮೀ.ವರೆಗೆ ಹಬ್ಬಿದೆ.
- ಪರಿವರ್ತನಾ ಮಂಡಲ ಮತ್ತು ಮಧ್ಯಂತರ ಮಂಡಲಗಳ ನಡುವೆ ವಿಸ್ತರಿಸಿದೆ.
- ಈ ಪದರದಲ್ಲಿ ಓಜೋನ್ ಅನಿಲವು ಅತ್ಯಂತ ಮುಖ್ಯವಾದುದು.
- ಇದು ಸೂರ್ಯನಿಂದ ಬರುವ ಅತಿನೇರಳೆ (ಅಲ್ಟ್ರಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸಿದೆ.
- ಈ ಪದರವು ಮೋಡ ಹಾಗೂ ಇತರೆ ಎಲ್ಲಾ ಬಗೆಯ ಹವಾಮಾನದ ಅಂಶಗಳಿಂದ ಮುಕ್ತವಾಗಿರುವುದು.
- ಇದರಿಂದ ಈ ಪದರದಲ್ಲಿ ಜೆಟ್ ವಿಮಾನಗಳು ಹಾರಾಡಲು ಸೂಕ್ತವಾಗಿದೆ.


► ಮಧ್ಯಂತರ ಮಂಡಲ (Mesosphere ) : 
- ಇದು ಸಮೋಷ್ಣಮಂಡಲದ ಮೇಲಿದ್ದು ಸುಮಾರು 80 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ.
- ಈ ವಲಯದಲ್ಲಿಯೂ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದು.
- ಈ ಪದರು ವಾಯುಮಂಡಲದ ಅತಿ ಶೀತವಾದ ವಲಯವಾಗಿದೆ.


•► ಉಷ್ಣತಾಮಂಡಲ (Thermosphere) : 
- ಮಧ್ಯಂತರ ಮಂಡಲದ ನಂತರ ಉಷ್ಣತಾಮಂಡಲ ಕಂಡುಬರುತ್ತದೆ.
- ಈ ಪದರದಲ್ಲಿ ಉಷ್ಣಾಂಶವು ತೀವ್ರವಾಗಿ ಹೆಚ್ಚಾಗುತ್ತದೆ.
- ಈ ಪದರದಲ್ಲಿನ ಅತ್ಯಧಿಕ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಆಯಾನುಗಳಾಗಿ ಪರಿವರ್ತನೆ ಹೊಂದಿರುತ್ತವೆ. ಆದುದರಿಂದ ಇದನ್ನು ‘ಆಯಾನುಮಂಡಲ’ವೆಂತಲೂ ಕರೆಯುವರು.
- ಇಲ್ಲಿನ ಆಯಾನುಗಳು ಭೂಮಿಯಿಂದ ಪ್ರಸಾರಗೊಂಡ ರೇಡಿಯೋ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತವೆ.


•► ಬಾಹ್ಯಮಂಡಲ (Exosphere) : 
- ಬಾಹ್ಯಮಂಡಲವು ವಾಯುಗೋಳದ ಅತ್ಯಂತ ಎತ್ತರದಲ್ಲಿದ್ದು ಪದರವಾಗಿದೆ.
- ಈ ಪದರಲ್ಲಿ ವಾಯುಗೋಳದ ಘಟಕಾಂಶಗಳು ವಿರಳವಾಗಿರುತ್ತದೆ ಮತ್ತು ಒತ್ತಡ ಅತ್ಯಂತ ಕಡಿಮೆ ಇರುತ್ತದೆ.

☀️ PART IV— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್ (IAS/KAS Exam Preparation Notes Bits)

☀️ PART IV— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್
(IAS/KAS Exam Preparation Notes Bits)
━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)

...ಮುಂದುವರೆದ ಭಾಗ.

ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.
Gmail : yaseen7ash@gmail.com



41. 'ಕಿಶೆನ್ ಗಂಗಾ ನದಿ'ಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ 'ನೀಲಂ ನದಿ' ಎಂದು ಕರೆಯಲಾಗುತ್ತದೆ.
- ಗಂಗಾ ನದಿಯು ಉತ್ತರಾಖಂಡದ 'ಗಂಗೋತ್ರಿ ಹಿಮನದಿ'ಯಿಂದ ಹುಟ್ಟಿಕೊಂಡಿದೆ.
- ಮಧ್ಯಪ್ರದೇಶದ ಸಾತ್ಪುರಾದ ದಕ್ಷಿಣದ ಇಳಿಜಾರಿನ ಸಿಯೋನಿ ಜಿಲ್ಲೆಯ ಮುಂಡಾರಾ ಹಳ್ಳಿಯಿಂದ 12 ಕಿಮೀ ದೂರದಲ್ಲಿ 'ವೆನಗಂಗಾ ನದಿ'ಯು ಉಗಮಿಸುತ್ತದೆ.
- 'ಪೆನಗಂಗಾ ನದಿ'ಯು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಕಂಡುಬರುತ್ತದೆ.



42. ಪ್ರಧಾನ ಮಂತ್ರಿ ಜೀವನ ವಿಮಾ ಯೋಜನೆಯು ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವ ಉದ್ದೇಶವನ್ನು ಈ ವಿಮೆ ಹೊಂದಿದೆ. ಟರ್ಮ್ ವಿಮಾ ಯೋಜನೆಯ ಪ್ರಕಾರ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು 18-50 ವರ್ಷ ವಯಸ್ಸಿನ ಜನರಿಗೆ ಲಭ್ಯವಿರುತ್ತದೆ.
— ವಿಮಾದಾರ ಸ್ವಇಚ್ಛೆಯ ಪ್ರಕಾರ ಈ ಯೋಜನೆಯಿಂದ ಹೊರ ಹೋಗುವ ಅವಕಾಶವೂ ಇದೆ. ಭವಿಷ್ಯದಲ್ಲಿ ಯಾವಾಗಲಾದರೂ ಮತ್ತೆ ಈ ಪಾಲಿಸಿಯಲ್ಲಿ ಸೇರಿಕೊಳ್ಳಬಹುದು.
— ಈ ಸ್ಕೀಂನ ಪ್ರಕಾರ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಒಂದು ನವೀಕರಣ (renewal) ಮಾಡಬಹುದಾದ ಪಾಲಿಸಿಯಾಗಿದ್ದು, ಇದರಲ್ಲಿ ವಾರ್ಷಿಕ ಜೀವ ವಿಮಾ ರಕ್ಷಣೆ ರೂ. 2,00,000 ವನ್ನು ವಿಮಾದಾರನ ಮರಣದ ಸಂದರ್ಭದಲ್ಲಿ ಕೊಡಲಾಗುತ್ತದೆ. ಅತೀ ಕಡಿಮೆ ಅಂದರೆ ವಾರ್ಷಿಕ ರೂ. 330 ಪ್ರೀಮಿಯಂ ದರದಲ್ಲಿ ಇದನ್ನು ನೀಡಲಾಗುತ್ತದೆ.



43. ಬಿಟ್ ಕಾಯಿನ್ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.
— ಬಿಟ್ ಕಾಯಿನ್ ವಿಶ್ವದ ಯಾವುದೇ ಮೂಲದಿಂದ ಕೆಲವೇ ನಿಮಿಷಗಳಲ್ಲಿ ಕಳಿಸಲು ಅಥವಾ ಪಡೆಯಲು ಬಳಸಬಹುದು. ಉತ್ಪನ್ನ-ಸೇವೆಗಳನ್ನು ಪಡೆಯಲು ಇಲ್ಲವೇ ಷೇರು ಮತ್ತು ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಆದರೆ ಈ ಪ್ರಕ್ರಿಯೆಗಳೇಲ್ಲ ಅಂತರ್ಜಾಲದ ಮೂಲಕ ಮಾತ್ರ ನಡೆಯುತ್ತದೆ.
— ಬಿಟ್ ಕಾಯಿನ್ ಭಾರತದಲ್ಲಿ ಕಾನೂನು ಬದ್ದವಾಗಿ ಚಲಾವಣೆಗೆ ತಂದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಇದರ ಒಳಿತು ಕೆಡುಕುಗಳ ಬಗ್ಗೆ ಗಮನ ಹರಿಸಿದೆ. ಬಿಟ್ ಕಾಯಿನ್ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ನಿಯಂತ್ರಿಸಲ್ಪಡುವುದಿಲ್ಲ.



44. ಕಾಲಗಣನೆಗೆ ಸಂಬಂಧಿಸಿದ ಭಾರತದ ಪಂಚಾಂಗಗಳು ಸೂರ್ಯ–ಚಂದ್ರರ ತೋರಿಕೆಯ ಚಲನೆಯನ್ನು ಆಧರಿಸಿವೆ. ಈ ನಿಟ್ಟಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆಯೂ ಸೂರ್ಯನನ್ನು ಕುರಿತದ್ದೆ ಆಗಿದ್ದು ಮಕರ ‘ರಾಶಿ’ಗೆ ಅಥವಾ ನಕ್ಷತ್ರಪುಂಜಕ್ಕೆ (ಕೇಪ್ರಿಕಾರ್ನ್‍ಸ್ ಕಾನ್ಸ್ಟಲೇಷನ್) ಸೂರ್ಯನ ‘ಪ್ರವೇಶ’ವನ್ನು ಸೂಚಿಸಿ ಒಂದು ದೃಷ್ಟಿಯಿಂದ ಹೆಚ್ಚು ಬೆಳಕಿರುವ ದಿನಗಳ ಪ್ರಾರಂಭವನ್ನು (ಉತ್ತರಾಯಣ) ಸಾರುತ್ತದೆ.



45. ಸರ್ಕಾರವು ವನ್ಯಜೀವಿಗಳ ಸಂರಕ್ಷಣೆಗೆಂದು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳನ್ನು ಮಾಡಿದೆ. ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಿಗೆ ಇರುವ ವತ್ಯಾಸ ಏನೆಂದರೆ, ಅಭಯಾರಣ್ಯದಲ್ಲಿ ಮನುಷ್ಯರ ಯಾವುದೇ ಚಟುವಟಿಕೆಗೆ ಅನುಮತಿ ಇಲ್ಲ. ಸ್ಥಳೀಯರಿಗೂ ಕೂಡ ಇಲ್ಲಿ ನಿರ್ಬಂಧವಿರುತ್ತದೆ. ರಾಷ್ಟ್ರೀಯ ಉದ್ಯಾನಗಳಲ್ಲಿ ಸ್ಥಳೀಯರು ತಮ್ಮ ಚಟುವಟಿಕೆ ನಡೆಸಲು ಅನುಮತಿ ಇರುತ್ತದೆ.



46. ಗೋಲ್ಡ್ ಮಾನಿಟೈಸೇಶನ್ ಯೋಜನೆ ಎಂದರೆ ಚಿನ್ನವನ್ನು ಬಂಡವಾಳ ಅಥವಾ ಹೂಡಿಕೆ ರೂಪದಲ್ಲಿ ಬಳಕೆ ಮಾಡಿಕೊಳ್ಳಬಹುದು (ಚಿನ್ನದ ಪತ್ರಗಳನ್ನು ಹೊರತುಪಡಿಸಿ).
— ಸದ್ಯ ಭಾರತದಲ್ಲಿ (ಬಿಎಸ್ ಐ) 350 ಹಾಲ್ ಮಾರ್ಕಿಂಗ್ ಕೇಂದ್ರಗಳಿವೆ. ಚಿನ್ನದ ಆಭರಣದ ಪರಿಶುದ್ಧತೆಯನ್ನು ಇವೇ ನಿರ್ಧರಿಸುತ್ತಿವೆ.
— ಈ ಯೋಜನೆಯಲ್ಲಿ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಲು ಕನಿಷ್ಠ 30 ಗ್ರಾಂ ಚಿನ್ನವನ್ನಾದರೂ ಹೊಂದಿರಬೇಕಾಗುತ್ತದೆ.
— ಎಕ್ಸ್ಆರ್ಎಫ್ ಯಂತ್ರದ ಮೂಲಕ ಚಿನ್ನದ ಪರಿಶುದ್ಧತೆಯ ಲೆಕ್ಕ ಮಾಡಲಾಗುತ್ತದೆ. ಚಿನ್ನ ಪರಿಶೀಲನೆ ಮಾಡಬೇಕಾದವರು ಕೆವೈಸಿ ಸೇರಿದಂತೆ ವಿವಿಧ ಮಾಹಿತಿಯನ್ನು ನೀಡಬೇಕಾಗುತ್ತದೆ.



47. ವುಡ್ಸ್ ವರದಿಯು (ವುಡ್ಸ್ ಡೆಸ್ಪ್ಯಾಚ್) ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನುದಾನ-ನೆರವು ವ್ಯವಸ್ಥೆಯ ಮಂಜೂರಾತಿಯ ಕುರಿತು ಶಿಫಾರಸು ಮಾಡಿತು ಮತ್ತು ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸಬೇಕು ಎಂದು ವಾದಿಸಲಾಯಿತು.
— 1854 ರ ಡೆಸ್ಪ್ಯಾಚ್ನ ನಂತರ, ಬ್ರಿಟಿಷರು ಹಲವಾರು ಕ್ರಮಗಳನ್ನು ಪರಿಚಯಿಸಿದರು. ಶಿಕ್ಷಣದ ಎಲ್ಲ ವಿಷಯಗಳ ಮೇಲೆ ನಿಯಂತ್ರಣವನ್ನು ವಿಸ್ತರಿಸಲು ಸರಕಾರದ ಶಿಕ್ಷಣ ಇಲಾಖೆಗಳನ್ನು ಸ್ಥಾಪಿಸಲಾಯಿತು. ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು.


48. ಪ್ರಮುಖ ಮಾರುತಗಳು :
– 'ಫೋಹ್ನ್'(Fohn) ಎಂಬುದು ಆಲ್ಪ್ಸ್ ಪ್ರದೇಶದಲ್ಲಿ ಬೀಸುವ ಬೆಚ್ಚಗಿನ ಮತ್ತು ಒಣ ಗಾಳಿಯಾಗಿದೆ.
– 'ಸುರ್ಮನ್'(Sarmun) ಎಂಬುದು ಕುರಿಸ್ತಾನ್ ಪ್ರದೇಶದ ಸ್ಥಳೀಯ ಮಾರುತವಾಗಿದೆ.
– 'ಸಾಂಟಾ ಅನಾ' (Santa Ana) ಎಂಬುದು ಕ್ಯಾಲಿಫೋರ್ನಿಯಾದ ಸ್ಥಳೀಯ ಗಾಳಿಯಾಗಿದೆ.  
– 'ಝೋಂಡಾ' (Zonda) ಎಂಬುದು ಅರ್ಜೆಂಟೈನಾದ ಸ್ಥಳೀಯ ಮಾರುತವಾಗಿದೆ.

.
49. ಭಾರತದ ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು, ಮುಖ್ಯ ಚುನಾವಣಾ ಅಧಿಕಾರಿ ಮತ್ತು ಇತರೇ ಚುನಾವಣಾ ಅಧಿಕಾರಿ, ಮಹಾಲೆಕ್ಕಪತ್ರ ಪರಿಶೋಧಕ,  ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು,  ಅಂತರ್ ರಾಜ್ಯಗಳ ಸಮಿತಿ, ರಾಷ್ಟ್ರೀಯ ಪರಿಶಿಷ್ಟ ಜಾತಿ / ಪಂಗಡ ಮತ್ತು ಮಹಿಳಾ ಆಯೋಗಗಳ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ನೇಮಿಸುವುದು ಮತ್ತು ವಜಾ ಮಾಡುವ ಅಧಿಕಾರ ರಾಷ್ಟಪತಿಯವರಿಗಿದೆ.
— ಭಾರತದ ಅಟಾರ್ನಿ ಜನರಲ್‍ರನ್ನು ರಾಷ್ಟ್ರಪತಿ ನೇಮಕ ಮಾಡುವರು.
— ರಾಜ್ಯ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ವಜಾ ಮಾಡುವ ಅಧಿಕಾರ.
— ಸುಪ್ರಿಂ ಕೋರ್ಟಿನ ಮತ್ತು ಹೈ ಕೋರ್ಟಿನ ಮುಖ್ಯ ನಾಯಾಧೀಶರನ್ನು ಮತ್ತು ಇತರೇ ನ್ಯಾಯಾಧಿಶರನ್ನು ನೇಮಕ ಮಾಡುವುದು.
— ಭಾರತೀಯ ಸೇನಾ ಪಡೆಯ ಮುಖ್ಯ ಸೇನಾಪತಿ. ವಾಯಪಡೆಯ ಏರ್ ಮಾರ್ಷಲ್ ಮತ್ತು ನೌಕಾಪಡೆಯ ಅಡ್ಮಿರಲ್‍ರವರನ್ನು ರಾಷ್ಟ್ರಪತಿ ನೇಮಕ ಮಾಡುವರು.


50. ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯ ಪ್ರಕಾರ ಒಂದು ಹಣಕಾಸು ವರ್ಷದ ಅವಧಿಯಲ್ಲಿ ಖಾತೆಯ ಒಟ್ಟು ಠೇವಣಿ ಮೊತ್ತ 1.5 ಲಕ್ಷ ದಾಟಬಾರದು. ಇದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಯಾವುದೆ ಬಡ್ಡಿ ಇರುವುದಿಲ್ಲ. 1.5 ಲಕ್ಷಕ್ಕಿಂತ ಹೆಚ್ಚು ಇಟ್ಟಿರುವ ಮೊತ್ತವನ್ನು ಖಾತೆದಾರರು ಯಾವಾಗ ಬೇಕಾದರೂ ಹಿಂಪಡೆಯಬಹುದು.
— ಸರ್ಕಾರ ಈ ಖಾತೆಯ ಬಡ್ಡಿದರವನ್ನು ಕಾಲ ಕಾಲಕ್ಕೆ ನಿರ್ಧರಿಸಲಿದೆ ಹಾಗೂ ವಾರ್ಷಿಕವಾಗಿ ಇದನ್ನು ಪರಿಷ್ಕರಿಸಲಿದೆ. ಜತೆಗೆ ಖಾತೆಗೆ ಪಾವತಿಸಲಿದೆ. ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿಯನ್ನು ಘೋಷಿಸಲಿದೆ. ವಾರ್ಷಿಕವಾಗಿ ಪ್ರಸ್ತುತ ತ್ರೈಮಾಸಿಕದ ಬಡ್ಡಿದರ ಶೇ. 8.4ರಷ್ಟು ಇದೆ.
— ಈ ಹಿಂದೆ ಠೇವಣಿಯನ್ನು 14ನೇ ವಯಸ್ಸಿನವರೆಗೆ ಮಾಡಿಸಬಹುದಾಗಿತ್ತು. ಆದರೆ ಈಗ ಇದನ್ನು 15ನೇ ವರ್ಷಕ್ಕೆ ಹೆಚ್ಚಿಸಲಾಗಿದೆ. ಮೊದಲಿಗೆ ವಾರ್ಷಿಕವಾಗಿ ಕನಿಷ್ಟ ಠೇವಣಿ 1000 ರೂಪಾಯಿಗಳಿದ್ದವು. ಜತೆಗೆ ಶೇ. 8.4ರಷ್ಟು ಬಡ್ಡಿದರ ಇದೆ. ಪ್ರಸ್ತುತ ಯಾವುದೇ ಕನಿಷ್ಟ ಠೇವಣಿ ಇಟ್ಟಿಲ್ಲ.

... ಮುಂದುವರೆಯುವುದು. 

Monday 19 February 2018

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2: ರಾಷ್ಟ್ರೀಯ ಆದಾಯ (National Income)

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2: ರಾಷ್ಟ್ರೀಯ ಆದಾಯ
(National Income)
━━━━━━━━━━━━━━━━━━━━━━━━━━━━━━━━━━━━
★ಭಾರತದ ಆರ್ಥಿಕತೆ
(Indian Economics)

ರಾಷ್ಟ್ರೀಯ ಆದಾಯವು ಒಂದು ರಾಷ್ಟ್ರದಲ್ಲಿ ಉತ್ಪಾದಿಸಿದ ಸರಕುಗಳ ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಸೂಚಿಸುತ್ತದೆ.

•► ಸೈಮನ ಕುಜನೆಟ್ಸ ವ್ಯಾಖ್ಯಾನಿಸುವಂತೆ, ರಾಷ್ಟ್ರೀಯ ಆದಾಯವು, “ಒಂದು ವರ್ಷದ ಅವಧಿಯಲ್ಲಿ ರಾಷ್ಟ್ರದ ಉತ್ಪಾದನಾ ವ್ಯವಸ್ಥೆಯಿಂದ ಅನುಭೋಗಿಗಳ ಕೈಗಳಿಗೆ ಪ್ರವಹಿಸುವ ಅಂತಿಮ ಸರಕುಗಳ ಮತ್ತು ಸೇವೆಗಳ ನಿವ್ವಳ ಉತ್ಪನ್ನವಾಗಿದೆ”.

•► ಅಂತಿಮವಾಗಿ ಅನುಭೋಗಿಗಳು ಆದಾಯವನ್ನು ಪಡೆಯುವವರಾಗಿರುವುದರಿಂದ, ಒಂದು ವರ್ಷದಲ್ಲಿ ಆರ್ಥಿಕ ಚಟುವಟಿಕೆಗಳಿಂದ ಪಡೆದ ಒಟ್ಟು ಆದಾಯವನ್ನು ರಾಷ್ಟ್ರೀಯ ಆದಾಯ ಎನ್ನುತ್ತಾರೆ.

•► ಇದು ಎಲ್ಲ ವ್ಯಕ್ತಿಗಳಿಗೆ ನೀಡಿದ ಕೂಲಿ, ಬಡ್ಡಿ, ಗೇಣಿ ಮತ್ತು ಲಾಭ ಪಾವತಿಯಾಗಿದೆ. ಸ್ವಾಭಾವಿಕವಾಗಿ, ರಾಷ್ಟ್ರೀಯ ಆದಾಯವು ರಾಷ್ಟ್ರದ ಉತ್ಪಾದನಾ ವ್ಯವಸ್ಥೆಯ ಗಾತ್ರ, ಅನುಭೋಗದ ಗಾತ್ರ, ಉಳಿತಾಯ, ಮತ್ತು ವಿವಿಧ ವಲಯಗಳಲ್ಲಿ ಮಾಡಿದ ಹೂಡಿಕೆಯಲ್ಲದೇ ಇತರ ರಾಷ್ಟ್ರಗಳೊಂದಿಗಿನ ವ್ಯಾಪಾರ-ವ್ಯವಹಾರಗಳನ್ನು ಸೂಚಿಸುತ್ತದೆ. ಆದಾಗ್ಯೂ, ರಾಷ್ಟ್ರೀಯ ಆದಾಯದ ಮಾಪನವು ವ್ಯಕ್ತಿಯ ಆದಾಯದ ಮಾಪನದಂತಿರದೇ ಬಹು ಕಷ್ಟಕರವಾಗಿರುತ್ತದೆ ಮತ್ತು ಸಂಕೀರ್ಣ ವಿಧಾನವನ್ನು ಒಳಗೊಂಡಿರುತ್ತದೆ.

•► ರಾಷ್ಟ್ರೀಯ ಆದಾಯದ ಪ್ರಮಾಣ ಮತ್ತು ದರ ಬೆಳವಣಿಗೆಯ ದರವನ್ನು ಮಾಪನ ಮಾಡುವುದರಿಂದ ಈ ಕೆಳಗಿನವುಗಳನ್ನು ಅವಲೋಕಿಸಬಹುದು:
i. ಆರ್ಥಿಕ ಬೆಳವಣಿಗೆಯ ದರ
ii. ಜೀವನ ಮಟ್ಟದಲ್ಲಿನ ಬದಲಾವಣೆ
iii. ಆದಾಯ ಹಂಚಿಕೆಯಲ್ಲಿನ ಬದಲಾವಣೆ

Sunday 18 February 2018

●. ಸಾಮಾನ್ಯ ಅಧ್ಯಯನ 3- ಪತ್ರಿಕೆ 4 : ಸಿ-14 (ವಿಕೀರಣಶೀಲ ಇಂಗಾಲ) (C-14 - Radio active carbon)

●. ಸಾಮಾನ್ಯ ಅಧ್ಯಯನ 3- ಪತ್ರಿಕೆ 4 : ಸಿ-14 (ವಿಕೀರಣಶೀಲ ಇಂಗಾಲ)
(C-14 - Radio active carbon)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(general science)

- ಇದು ಕಾಲ ನಿಷ್ಕರ್ಷೆಯ ಒಂದು ವೈಜ್ಞಾನಿಕ ವಿಧಾನವಾಗಿದೆ. ಈ ವಿಧಾನಕ್ಕೆ ಒಳಪಡಿಸುವ ಅವಶೇಷಗಳು ಜೈವಿಕ (ಮರ, ಗಿಡ, ಪ್ರಾಣಿ, ಪಕ್ಷಿ ಇತ್ಯಾದಿಗಳ) ಪಳೆಯುಳಿಕೆಗಳಾಗಿರಬೇಕು. ಪ್ರತಿಯೊಂದು ಜೀವಿಯಲ್ಲಿಯೂ ಇಂಗಾಲ-12 ಮತ್ತು ಇಂಗಾಲ-14 ಸಮ ಪ್ರಮಾಣದಲ್ಲಿ ಇರುತ್ತವೆ. ಜೀವಿಯು ಸತ್ತನಂತರವೂ ಇಂಗಾಲ-12 ಅದೇ ಪ್ರಮಾಣದಲ್ಲಿ ಇದ್ದರೆ, ಇಂಗಾಲ-14 ಕ್ರಮೇಣ ಕ್ಷೀಣಿಸುತ್ತಿರುತ್ತದೆ.

ಇದು 5700 ವರ್ಷಗಳಿಗೆ ತನ್ನ ಅರ್ಧ ಪ್ರಮಾಣದಷ್ಟು ಕ್ಷೀಣವಾಗುತ್ತದೆ. ಇಂಗಾಲ-12 ಮತ್ತು 14ರ ನಡುವಿನ ವ್ಯತ್ಯಾಸದ ಪ್ರಮಾಣವನ್ನು ಪ್ರಯೋಗಗಳ ಮೂಲಕ ಗುರುತಿಸಿದರೆ ಪಳೆಯುಳಿಕೆಯು ಎಷ್ಟು ವರ್ಷಗಳ ಹಳೆಯದೆಂದು ಲೆಕ್ಕಾಚಾರಮಾಡಬಹುದು.

ಈ ವಿಧಾನದ ಮೂಲಕ 10,000 ವರ್ಷಗಳ ಹಿಂದಿನವರೆಗಿನ ಪಳೆಯುಳಿಕೆಗಳ ಕಾಲವನ್ನು ಗುರುತಿಸಬಹುದು.

Saturday 17 February 2018

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2 : ವುಡ್ಸ್ ವರದಿಯ (ವುಡ್ಸ್ ಡೆಸ್ಪ್ಯಾಚ್) ಉದ್ದೇಶಗಳು : (Recommendations of Wood’s Despatch)

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2.: ವುಡ್ಸ್ ವರದಿಯ (ವುಡ್ಸ್ ಡೆಸ್ಪ್ಯಾಚ್) ಉದ್ದೇಶಗಳು :
(Recommendations of  Wood’s Despatch)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಆಧುನಿಕ ಭಾರತದ ಇತಿಹಾಸ
(Modern Indian History)




ಡಾಲ್ ಹೌಸಿಯ ಕಾಲದಲ್ಲಿ ಭಾರತೀಯರ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವಿಧಿವಿಧಾನಗಳನ್ನು ಕಂಡುಹಿಡಿಯುವಲ್ಲಿ ಸಂಸತ್ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಸಲ್ಲಿಸಿದ ವರದಿಯನ್ನು ಆಧರಿಸಿ ಕಂಪನಿಯ ನಿಯಂತ್ರಕ ಮಡಳಿಯ ಅಧ್ಯಕ್ಷನಾದ ಚಾರ್ಲ್ಸ್ ವುಡ್ ನು 1854ರಲ್ಲಿ ಭಾರತೀಯ ಶೈಕ್ಷಣಿಕ ಅಭಿವೃದ್ಧಿಗಾಗಿ ಈ ಕೆಳಗಿನ ಶಿಫಾರಸ್ಸುಗಳನ್ನಿ ಮಾಡಿದನು.           

ಈ ವರದಿಯ ಆಧಾರದ ಮೇಲೆ ಡಾಲ್ ಹೌಸಿಯು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದನು.


•► ವುಡ್ಸ್ ವರದಿಯು (ವುಡ್ಸ್ ಡೆಸ್ಪ್ಯಾಚ್) ಈ ಕೆಳಗಿನ ಉದ್ದೇಶಗಳನ್ನು ಹೊಂದಿತ್ತು:
  • • ಭಾರತೀಯರಿಗೆ ಪಾಶ್ಚಾತ್ಯ ಜ್ಞಾನವನ್ನು ನೀಡುವುದರೊಂದಿಗೆ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮೂಡಿಸುವುದು.
  • • ಭಾರತದ ಸ್ಥಳೀಯರನ್ನು ಶಿಕ್ಷಣ ನೀಡುವುದರೊಂದಿಗೆ ಸಾರ್ವಜನಿಕ ಸೇವಕರ ವರ್ಗ ರಚಿಸಬಹುದು. 
  • • ಯುವ ಪೀಳಿಗೆಯಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ನೈತಿಕತೆಯ ಪಾತ್ರವನ್ನು ಹೆಚ್ಚಿಸುವುದು 
  • • ಭಾರತೀಯರ ಪ್ರಾಯೋಗಿಕ ಮತ್ತು ಔದ್ಯೋಗಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ  ಹೆಚ್ಚೆಚ್ಚು ಸರಕು-ಸೇವೆಗಳನ್ನು  ಉತ್ಪಾದಿಸುವುದು ಮತ್ತು ಆ ಸರಕುಗಳ ಬಳಕೆಗಾಗಿ ಇಲ್ಲಿ ಉತ್ತಮ ಮಾರುಕಟ್ಟೆ ರಚಿಸುವುದು.

ವುಡ್ಸ್ ವರದಿಯು (ವುಡ್ಸ್ ಡೆಸ್ಪ್ಯಾಚ್) ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನುದಾನ-ನೆರವು ವ್ಯವಸ್ಥೆಯ ಮಂಜೂರಾತಿಯ ಕುರಿತು ಶಿಫಾರಸು ಮಾಡಿತು ಮತ್ತು ಶಾಲೆಗಳು ತಮ್ಮ ವಿದ್ಯಾರ್ಥಿಗಳಿಂದ ಶುಲ್ಕ ವಿಧಿಸಬೇಕು ಎಂದು ವಾದಿಸಲಾಯಿತು.

ಭಾರತದಲ್ಲಿ ಅನುಸರಿಸಬೇಕಾದ ಶೈಕ್ಷಣಿಕ ನೀತಿಯ ಬಗ್ಗೆ ವಿವರಿಸುತ್ತಾ, ಯುರೋಪಿಯನ್ ಕಲಿಕೆಯ ಒಂದು ಪ್ರಾಯೋಗಿಕ ಪ್ರಯೋಜನಗಳನ್ನು ಮತ್ತೊಮ್ಮೆ ಒತ್ತಿಹೇಳಿತು.

1854 ರ ಡೆಸ್ಪ್ಯಾಚ್ನ ನಂತರ, ಬ್ರಿಟಿಷರು ಹಲವಾರು ಕ್ರಮಗಳನ್ನು ಪರಿಚಯಿಸಿದರು. ಶಿಕ್ಷಣದ ಎಲ್ಲ ವಿಷಯಗಳ ಮೇಲೆ ನಿಯಂತ್ರಣವನ್ನು ವಿಸ್ತರಿಸಲು ಸರಕಾರದ ಶಿಕ್ಷಣ ಇಲಾಖೆಗಳನ್ನು ಸ್ಥಾಪಿಸಲಾಯಿತು. ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು.

●. ಸಾಮಾನ್ಯ ಅಧ್ಯಯನ - ಪತ್ರಿಕೆ 4 : ಜೈವಿಕ ಸಂವರ್ಧನೆ (biomagnification)

●. ಸಾಮಾನ್ಯ ಅಧ್ಯಯನ - ಪತ್ರಿಕೆ 4  : ಜೈವಿಕ ಸಂವರ್ಧನೆ
 (biomagnification)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)


ಆಹಾರ ಸರಪಳಿಗಳಲ್ಲಿ ಕೇವಲ ಪೋಷಕಾಂಶಗಳು ಮಾತ್ರ ವಿನಿಮಯವಾಗುವುದಿಲ್ಲ. ಕೆಲವೊಮ್ಮೆ ವಿಷಕಾರಿ ವಸ್ತುಗಳೂ ಸಹ ಒಂದು ಪೋಷಣಾ ಸ್ತರದಿಂದ ಇನ್ನೊಂದು ಪೋಷಣಾ ಸ್ತರಕ್ಕೆ ವರ್ಗಾವಣೆಗೊಳ್ಳುತ್ತವೆ. ಇಂಥ ಬಹುತೇಕ ಸಂದರ್ಭಗಳಲ್ಲಿ ಹಾನಿಕಾರಕ ವಸ್ತುಗಳ ಸಾರತೆ ಮೇಲಿನ ಸ್ತರಗಳಿಗೆ ಸಾಗುತ್ತಿದ್ದಂತೆ ಹೆಚ್ಚುತ್ತಾ ಹೋಗುತ್ತದೆ.

ಡಿಡಿಟಿ , ಪಾದರಸ, ಕ್ಯಾಡ್ಮಿಯಂ ಮೊದಲಾದ ಹಾನಿಕಾರಕ ಅಥವಾ ಮಾಲಿನ್ಯಕಾರಕ ವಸ್ತುಗಳ ಸಾರತೆಯು ಆಹಾರ ಸರಪಳಿಯ ಒಂದೊಂದು ಕೊಂಡಿಯಲ್ಲಿ ಮೇಲೆ ಸಾಗುತ್ತಿದ್ದಂತೆ, ಕ್ರಮೇಣ ಹೆಚ್ಚುತ್ತಾ ಹೋಗುವ ಈ ಪ್ರಕ್ರಿಯೆಗೆ ಜೈವಿಕ ಸಂವರ್ಧನೆ (biomagnification) ಎಂದು ಹೆಸರು.

ಜೈವಿಕ ಸಂವರ್ಧನೆಗೆ ಅತ್ಯಂತ ಪರಿಚಿತ ಉದಾಹರಣೆ ಎಂದರೆ ಬಹುತೇಕ ಆಹಾರ ಸರಪಳಿಗಳಲ್ಲಿ ಇಂದು ನಾವು ಕಾಣುತ್ತಿರುವ ಡಿಡಿಟಿ ಸಾರತೆಯ ಏರಿಕೆ. ವಿಶೇಷವಾಗಿ ಸೊಳ್ಳೆಗಳನ್ನು ನಿರ್ನಾಮಮಾಡಲು ಕೀಟನಾಶಕ ಡಿಡಿಟಿ  ಯನ್ನು ವಿವೇಚನಾರಹಿತವಾಗಿ ಬಳಸಿರುವ ಪರಿಣಾಮವಾಗಿ ಇಂದು ಸಣ್ಣ ಮೀನುಗಳ ಹಾಗೂ ಹಕ್ಕಿಗಳ ದೇಹದಲ್ಲಿನ ಅಂಗಾಂಶಗಳಲ್ಲಿ ಡಿಡಿಟಿ  ಸಂಗ್ರಹವಾಗಿರುವುದು ಗೋಚರಿಸಿದೆ. ಡಿಡಿಟಿ  ತಾಯಂದಿರ ಎದೆಹಾಲಿನಲ್ಲೂ ಪತ್ತೆಯಾಗಿದೆ.

ಜೈವಿಕ ಸಂವರ್ಧನೆಯು ಆಹಾರ ಸರಪಳಿಗಳಲ್ಲಿರುವ ಸಮತೋಲನವನ್ನು ಹಾಳುಗೆಡವುತ್ತದೆ. ವಿಶೇಷವಾಗಿ ಅದು ಆಹಾರ ಸರಪಳಿಯ ಮೇಲಿನ ಸ್ತರಗಳಲ್ಲಿರುವ ಜೀವಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

●. ಸಮಭಾಜಕವೃತ್ತದ ಕಡಿಮೆ ಒತ್ತಡ ಪ್ರದೇಶ: (Equatorial Low Pressure Area or Inter Tropical Convergence Zone –ITCZ)

●. ಸಮಭಾಜಕವೃತ್ತದ ಕಡಿಮೆ ಒತ್ತಡ ಪ್ರದೇಶ:
(Equatorial Low Pressure Area or
Inter Tropical Convergence Zone –ITCZ)
━━━━━━━━━━━━━━━━━━━━━━━━━━━━━━━━━━━━━━━━━━━━━



★ ಪ್ರಾಕೃತಿಕ ಭೂಗೋಳಶಾಸ್ತ್ರ
(Physical Geography)



ಇದು ಹೆಚ್ಚು ಉಷ್ಣಾಂಶದ ವಲಯವಾಗಿದ್ದು ಕಡಿಮೆ ಒತ್ತಡವನ್ನು ಹೊಂದಿದೆ. ಇದು ಸಮಭಾಜಕವೃತ್ತದಿಂದ 50 ಉತ್ತರ ಮತ್ತು 50 ದಕ್ಷಿಣ ಅಕ್ಷಾಂಶದವರೆಗೆ ಕಂಡುಬರುವುದು. ಈ ಭಾಗವು ವರ್ಷವೆಲ್ಲಾ ಸೂರ್ಯನ ಲಂಬವಾದ ಕಿರಣಗಳನ್ನು ಪಡೆಯುವುದು. ಇದರಿಂದ ವಾಯು ಹೆಚ್ಚು ಉಷ್ಣಾಂಶದಿಂದ ಕೂಡಿರುತ್ತದೆ ಹಾಗೂ ಇಲ್ಲಿ ವಾಯು ಚಲನೆ ಕಡಿಮೆ.

 ಈ ವಲಯವು ಪ್ರಶಾಂತವಾಗಿದ್ದು (calm) ಲಘುಮಾರುತಗಳಿರುವುದರಿಂದ ಇದನ್ನು ‘ಶಾಂತವಲಯ’ (Dol- drum) ಎಂದೂ ಕರೆಯುವರು. ಈ ಪ್ರದೇಶವನ್ನು ಅಂತರ ಉಷ್ಣ ಸಂಧಿವಲಯ (Inter Tropical Convergence Zone –ITCZ) ಎಂಬ ಹೆಸರಿನಲ್ಲೂ ಕರೆಯುವರು. ವಾಣಿಜ್ಯ ಮಾರುತಗಳು ಈ ವಲಯದಲ್ಲಿ ಸಂಧಿಸುತ್ತವೆ.

●.ಹವಾಗುಣ ಮತ್ತು ವಾಯುಗುಣ : (Weather and Climate)

●.ಹವಾಗುಣ ಮತ್ತು ವಾಯುಗುಣ :
(Weather and Climate)
 ━━━━━━━━━━━━━━━━━━━━━━━

★ ಸಾಮಾನ್ಯ ಭೂಗೋಳಶಾಸ್ತ್ರ
(Physical geography)



•► ಒಂದು ಸ್ಥಳದ ಅಲ್ಪಾವಧಿಯ ವಾಯುಗೋಳದ ಪರಿಸ್ಥಿತಿಯನ್ನು ಹವಾಗುಣ ಎನ್ನುವರು. ಉದಾ: ಮೋಡಯುಕ್ತ ಪ್ರಖರ ಬಿಸಿಲು, ಹಿತಕರ ಹವಾಗುಣ. ಹವಾಗುಣ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದಕ್ಕೆ ‘ಹವಾಗುಣ ಶಾಸ್ತ್ರ’ (Meteorology) ಎನ್ನುವರು.

•► ಒಂದು ಪ್ರದೇಶದ ದೀರ್ಘಾವಧಿಯ ಹವಾಗುಣದ ಸರಾಸರಿಯನ್ನು ವಾಯುಗುಣವೆನ್ನುವರು.

ಉದಾ: ಸಮಭಾಜಕ ವೃತ್ತದ ವಾಯುಗುಣ, ತಂಡ್ರಾ ವಾಯುಗುಣ, ಮರುಭೂಮಿ ವಾಯುಗುಣ, ಮೆಡಿಟರೇನಿಯನ್, ಮಾನ್ಸೂನ್ ವಾಯುಗುಣ ಮೊದಲಾದವು.

•► ವಾಯುಗುಣದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರವನ್ನು ‘ವಾಯುಗುಣಶಾಸ್ತ್ರ’ (Climatology) ಎನ್ನುವರು.

•► ಒಂದು ಪ್ರದೇಶದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ ಅಕ್ಷ್ಮಾಂಶ, ಸಮುದ್ರ ಮಟ್ಟದಿಂದ ಇರುವ ಎತ್ತರ, ಮಾರುತಗಳು, ಸಮುದ್ರದಿಂದ ಇರುವ ದೂರ, ಭೂಮಿ ಮತ್ತು ಜಲರಾಶಿಗಳ ಹಂಚಿಕೆ, ಸಾಗರ ಪ್ರವಾಹಗಳು ಇತ್ಯಾದಿ.

Monday 12 February 2018

☀️ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1ರ 33 ಪ್ರಶ್ನೆಗ ಉತ್ತರಗಳು (Key answers of IAS / KAS Prelims Model Question Paper -I)

☀️ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1ರ 33 ಪ್ರಶ್ನೆಗ ಉತ್ತರಗಳು
(Key answers of IAS / KAS Prelims Model Question Paper -I)
━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ
(IAS / KAS Prelims Model Question Paper)


...ಮುಂದುವರೆದ ಭಾಗ.
 ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಎಕ್ಸಾಂ ಗೆ ಸಂಬಂಧಿಸಿದಂತೆ ನಾನು ಮಾದರಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸುತ್ತಿದ್ದು ಈಗ 1 ರಿಂದ 33 ಪ್ರಶ್ನೆಗಳನ್ನು ಅವುಗಳ ಸರಿಯುತ್ತರಗಳೋಂದಿಗೆ ಇಲ್ಲಿ ಷೇರ್ ಮಾಡಿರುವೆ. ಈಗ ಹಾಕಿರೋ ಮಾದರಿಯೊಂದಿಗೆ ಉಳಿದವುಗಳನ್ನು ತಯಾರಿಸುತ್ತಿರುವೆ. ಸಧ್ಯದಲ್ಲಿ ಪೂರ್ಣಗೊಳಿಸುವೆ.

ಇಲ್ಲಿ ಹಂಚಿಕೊಂಡಿರುವ ಮಾದರಿ ಪ್ರಶ್ನೆಗಳು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.
Gmail : yaseen7ash@gmail.com


Sunday 11 February 2018

☀️ PART III— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್ (IAS/KAS Exam Preparation Notes Bits)

☀️ PART III— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್
(IAS/KAS Exam Preparation Notes Bits)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)


...ಮುಂದುವರೆದ ಭಾಗ.

ಗಮನಕ್ಕೆ — ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ. 
Gmail : yaseen7ash@gmail.com


30. ನಮ್ಮಲ್ಲಿರುವ 250 ರಾಜ್ಯಸಭಾ ಸ್ಥಾನಗಳ ಪೈಕಿ 12 ಜನರನ್ನು ಸಚಿವರ ಸಮಿತಿಯ ಸಲಹೆಯ ಮೇರೆಗೆ ರಾಷ್ಟ್ರಪತಿ ನೇರವಾಗಿ ಆಯ್ಕೆ ಮಾಡುತ್ತಾರೆ. ವಿವಿಧ ರಂಗಗಳಲ್ಲಿನ ಸಾಧಕರನ್ನು ಇದಕ್ಕೆ ಪರಿಗಣಿಸಲಾಗುತ್ತದೆ.
— ಇನ್ನು ಉಳಿದ 238 ಸ್ಥಾನಗಳಿಗೆ ರಾಜ್ಯಗಳ ವಿಧಾನಸಭೆಗಳಿಂದ ಅಭ್ಯರ್ಥಿಗಳನ್ನು ಚುನಾಯಿಸಲಾಗುತ್ತದೆ. ಪ್ರತಿ ರಾಜ್ಯದಿಂದ ಎಷ್ಟು ಅಭ್ಯರ್ಥಿಗಳನ್ನು ರಾಜ್ಯಸಭೆಗೆ ನಿಗದಿ ಮಾಡಬೇಕು ಎಂಬುದನ್ನು ಆಯಾ ರಾಜ್ಯದ ಜನಸಂಖ್ಯೆ ಆಧರಿಸಿ ನಿರ್ಧರಿಸಲಾಗಿದೆ.
— ಸಣ್ಣ ರಾಜ್ಯಗಳಿಂದ ಕನಿಷ್ಠ ಒಬ್ಬ ಪ್ರತಿನಿಧಿಯಾದರೂ ಇರಬೇಕು ಎಂಬ ನಿಯಮ ಅಡಕವಾಗಿದೆ.


31. ಅಣುಶಕ್ತಿ ಚಾಲಿತ, ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳನ್ನು ಉಡಾಯಿಸಬಲ್ಲ ಸಾಮರ್ಥ್ಯದ ಸಂಪೂರ್ಣ ದೇಶೀಯ ನಿರ್ಮಾಣದ ಮೊದಲ ಜಲಾಂತರ್ಗಾಮಿ 'ಐಎನ್‌ಎಸ್‌ ಅರಿಹಂತ್‌' ವಿನ್ಯಾಸದ ಮೂಲ ರಷ್ಯಾದ್ದು.


32. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ನೀಡಲಾಗುವ ಅತ್ಯನ್ನುತ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ. ಇದು ಭಾರತೀಯ ಸಂವಿಧಾನದ 8ನೇ ಷೆಡ್ಯೂಲ್‌ನಲ್ಲಿ ಸೂಚಿತವಾಗಿರುವ ಭಾರತೀಯ ಭಾಷೆಗಳ ಲೇಖಕರಿಗೆ ಮಾತ್ರ ಈ ಪ್ರಶಸ್ತಿ ಮೀಸಲು.
— ಈವರೆಗೆ ಹಿಂದಿ ಭಾಷೆಯ 11 ಸಾಹಿತಿಗಳು ಜ್ಞಾನಪೀಠ ಪುರಸ್ಕೃತರಾಗಿದ್ದರೆ, ಕನ್ನಡ 8 ಸಾಹಿತಿಗಳು ಈ ಗೌರವಕ್ಕೆ ಪಾತ್ರರಾಗಿದ್ದು ಎರಡನೇ ಸ್ಥಾನದಲ್ಲಿದ್ದಾರೆ.
— ಈ ಪ್ರಶಸ್ತಿಯು ನಗದು ಜತೆಗೆ ಕಂಚಿನ ಸರಸ್ವತಿಯ ಕಂಚಿನ ಪ್ರತಿಕೃತಿ ಮತ್ತು ಫಲಕವನ್ನು ಒಳಗೊಂಡಿದೆ.


33. ಐಯುಸಿಎನ್ (IUCN) ಎಂಬ ವಿಶ್ವ ಸಂಸ್ಥೆಯು ಭಾಗವಾಗಿರುವ ಇಲಾಖೆಯಿಂದ ಮಾಹಿತಿ ಪಡೆದು, ವನ್ಯ ಜೀವಿಗಳ ಸಂತತಿ ಯಾವ ಪ್ರಮಾಣದಲ್ಲಿದೆ ಎಂಬುದನ್ನು ರೆಡ್ ಡೇಟಾ ಬುಕ್ ಎಂಬ ಪುಸ್ತಕದಲ್ಲಿ ಕೊಡುತ್ತಾರೆ.
— ನಮ್ಮ ದೇಶದಲ್ಲಿ ಇಂಡಿಯನ್ ಚೀತಾ ಪೂರ್ತಿಯಾಗಿ ಗತಿಸಿಹೋಗಿದೆ.
— ಅರುಣಾಚಲ ಪ್ರದೇಶದಲ್ಲಿನ ನಂದಪ ಹಾರುವ ಅಳಿಲುಗಳು, ಹಿಮಾಲಯದ ಭಾಗಗಳಲ್ಲಿ ಮಾತ್ರ ಕಂಡುಬರುವ ಪ್ರಪಂಚದ ಅತಿ ಚಿಕ್ಕ ಘೇಂಡಾಮೃಗಗಳಾದ ಸುಮಾತ್ರಾನ್ ಘೇಂಡಾಮೃಗಗಳು, ರಣಹದ್ದುಗಳು ಕೂಡ ಈಗ ಗತಿಸಿ ಹೋಗುವ ಸಾಧ್ಯತೆ (ಕ್ರಿಟಿಕಲಿ ಎಂಡೇಜರ್ಡ್) ಹೊಂದಿರುವ ಜೀವಿಗಳಾಗಿವೆ.


34. ಗ್ರೀನ್ ವಿಚ್ ಮೀನ್ ಟೈಮ್(GMT-Greenwich Mean Time) ಎನ್ನುವುದು ವಿವಿಧ ದೇಶಗಳಲ್ಲಿ ಸಮಯ ನಿರ್ಧಾರಣೆಗಾಗಿ ಅಂಗೀಕೃತ ಪ್ರಮಾಣಿತ ಸಮಯವಾಗಿದೆ. ಗ್ರೀನ್ ವಿಚ್ ಪ್ರಧಾನ ರೇಖಾಂಶದ ಪೂರ್ವಕ್ಕೆ ಇರುವ ದೇಶಗಳ ಸಮಯವು GMTಕ್ಕಿಂತ ಮುಂದಿರುತ್ತದೆ, ಹಾಗೆಯೇ ಗ್ರೀನ್ ವಿಚ್ ಪ್ರಧಾನ ರೇಖಾಂಶದ ಪಶ್ಚಿಮಕ್ಕೆ ಇರುವ ದೇಶಗಳು GMTಯ ಹಿಂದೆ ತಮ್ಮ ಪ್ರಮಾಣಿತ ಸಮಯವನ್ನು ಹೊಂದಿವೆ.
— 180° ರೇಖಾಂಶಕ್ಕೆ 'ಅಂತರಾಷ್ಟ್ರೀಯ ದಿನ ರೇಖೆ' ಎಂದು ಕರೆಯುತ್ತಾರೆ.
— ಬೇರಿಂಗ್ ಜಲಸಂಧಿಯು ಅಂತರಾಷ್ಟ್ರೀಯ ದಿನ ರೇಖೆಗೆ ಸಮೀಪವಿರುತ್ತದೆ.


35.  'ಜಿಪ್ಸಿಗಳು' (Gypsies) ಮಧ್ಯ ಏಷಿಯಾದಲ್ಲಿ ಕಂಡುಬರುವ ಒಂದು ಜನರ ಗುಂಪು. ಆದರೆ ಜಿಪ್ಸಿಗಳ ಮೂಲ ಮನೆ ಭಾರತದ (ಪಶ್ಚಿಮ ರಾಜಸ್ಥಾನ ಮತ್ತು ಪಂಜಾಬ್) ಪ್ರದೇಶದಲ್ಲಿದೆ.
– 'ಜಿಪ್ಸಿಗಳು' ಒಂದು ಜನಾಂಗೀಯ ಗುಂಪು (ethnic group) ಆಗಿದ್ದು, ಕೆಲವು ಅಜ್ಞಾತ ಕಾರಣಾಂತರಗಳಿಂದಾಗಿ ಮಧ್ಯಯುಗದ ಅಂತ್ಯದಲ್ಲಿ ಇವರು ಅಲೆದಾಡುವ ಜೀವನ ಶೈಲಿಗೆ ಒಗ್ಗಿಕೊಳ್ಳಬೇಕಾಯಿತು.


36. ಅಮೃತಸರದಿಂದ ದೆಹಲಿಯ ಮೂಲಕ ಕಲ್ಕತ್ತಾಕ್ಕೆ ಸಾಗುವ  ರಾಷ್ಟ್ರೀಯ ಹೆದ್ದಾರಿಯನ್ನು 'ರಾಷ್ಟ್ರೀಯ ಹೆದ್ದಾರಿ - 2' ಎಂದು ಕರೆಯಲಾಗುತ್ತದೆ. ಇದನ್ನು 'ಗ್ರ್ಯಾಂಡ್ ಟ್ರಂಕ್ ರಸ್ತೆ' (Grand Trunk Road) ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು ಶೇರ್ ಷಾ ಸೂರಿಯು ನಿರ್ಮಿಸಿದನು.


37. ಉತ್ತರ-ಪಶ್ಚಿಮ ಬಯಲು ಪ್ರದೇಶ(north-western plains)ಗಳಲ್ಲಿ ತೀವ್ರವಾದ ಕಡಿಮೆ ಒತ್ತಡದ ಪಟ್ಟಿಗಳ ಕಾರಣದಿಂದಾಗಿ, ನೈಋತ್ಯ ಮಾನ್ಸೂನ್ ಮಾರುತವು ಭಾರತ ಉಪಖಂಡಕ್ಕೆ ಪ್ರವೇಶಿಸುತ್ತದೆ.
— ಇದು ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಿಂದ ಬೀಸುವುದು.


38. 52ನೇ ವಿಧಿಯು ಭಾರತಕ್ಕೆ ರಾಷ್ಟ್ರಪತಿ ಸ್ಥಾನವನ್ನು ಹೇಳಿದೆ. ಭಾರತದ ರಾಷ್ಟ್ರಪತಿಗಳು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ,


39. ವನ್ಯಜೀವಿಗಳ ಸಂರಕ್ಷಣೆಗೆಂದು ಕೇಂದ್ರ ಸರಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ನು 1972ರಲ್ಲಿ ಜಾರಿ ಮಾಡಿತು. ಅದರಲ್ಲಿ 6 ಶೆಡ್ಯೂಲ್ ಗಳಿವೆ. ಯಾವ ಪ್ರಾಣಿಗಳು ಅಳಿವಿನ ಅಂಚಿನಲ್ಲಿವೆಯೋ ಅವೆಲ್ಲವನ್ನು ಶೆಡ್ಯೂಲ್ 1ರಲ್ಲಿ ತರಲಾಯಿತು. ಹುಲಿ, ಸಿಂಹ, ಘೇಂಡಾಮೃಗ, ಹುಲ್ಲೇಕರ ಇವೆಲ್ಲ ಶೆಡ್ಯೂಲ್ 1ರ ಅಡಿ ಬರುತ್ತದೆ.


40.  ಜಸ್ಟಿಸ್‌ ಎಂ.ಎನ್‌.ವೆಂಕಟಾಚಲಯ್ಯ ಕಮಿಷನ್‌: ಈ ಹಿಂದಿನ ಎನ್‌ಡಿಎ ಸರಕಾರ ಈ ಆಯೋಗವನ್ನು ನೇಮಕ ಮಾಡಿತ್ತು. ಕೊಲಿಜಿಯಮ್‌ ವ್ಯವಸ್ಥೆಗೆ ಬದಲಿಯಾಗಿ 'ನ್ಯಾಷನಲ್‌ ಜುಡಿಷಿಯಲ್‌ ಅಪಾಯಿಂಟ್‌ಮೆಂಟ್ಸ್‌ ಕಮಿಷನ್‌(ಎನ್‌ಜೆಎಸಿ)' ರಚನೆ ಬಗ್ಗೆ ಆಯೋಗ ಒಲವು ತೋರಿತ್ತು.
— ಈ ಆಯೋಗಕ್ಕೆ ಸಿಜೆಐ, ಇಬ್ಬರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು, ಕಾನೂನು ಸಚಿವರು ಹಾಗೂ ಸಿಜೆಐ ಜತೆ ಸಮಾಲೋಚಿಸಿ ರಾಷ್ಟ್ರಪತಿಯಿಂದ ನೇಮಕಗೊಳ್ಳುವ ಸಾರ್ವಜನಿಕ ವಲಯದ ಗಣ್ಯ ವ್ಯಕ್ತಿ ಸದಸ್ಯರಾಗಬೇಕು ಎಂದು ಅದು ಶಿಫಾರಸು ಮಾಡಿತ್ತು.

... ಮುಂದುವರೆಯುವುದು.

Saturday 10 February 2018

☀️ ಸಿವಿಲ್ ಸರ್ವೀಸ್ (ಪ್ರಿಲಿಮ್ಸ್) ನೇಮಕಾತಿಗೆ ಅಧಿಸೂಚನೆ - 2018 (Civil Service (Prelims) Examination 2018)

☀️ ಸಿವಿಲ್ ಸರ್ವೀಸ್ (ಪ್ರಿಲಿಮ್ಸ್) ನೇಮಕಾತಿಗೆ ಅಧಿಸೂಚನೆ - 2018
(Civil Service (Prelims) Examination 2018)
━━━━━━━━━━━━━━━━━━━━━━━━━━━━━━━━━━━━━━━━━━━
★ 2018 ನೇ ಸಾಲಿನ  ಸಿವಿಲ್ ಸರ್ವೀಸ್ (ಪ್ರಿಲಿಮ್ಸ್) ನೇಮಕಾತಿಗೆ ಅಧಿಸೂಚನೆ
(Civil service notification 2018)



ಕೇಂದ್ರ ಲೋಕಸೇವಾ ಆಯೋಗವು 2018 ನೇ ಸಾಲಿನ  ಸಿವಿಲ್ ಸರ್ವೀಸ್ (ಪ್ರಿಲಿಮ್ಸ್) ನೇಮಕಾತಿಗೆ ಅಧಿಸೂಚನೆ ಆದೇಶ ಹೊರಡಿಸಿದೆ.  ಪೂರ್ವಭಾವಿ ಪರೀಕ್ಷೆ ಗೆ ಸೂಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರಣೆಗಳು

ಹುದ್ದೆಗಳ ಪದನಾಮ : ನಾಗರಿಕ ಸೇವಾ  ಸಿವಿಲ್ ಸರ್ವೀಸ್ (ಪ್ರಿಲಿಮ್ಸ್)
ಒಟ್ಟು ಹುದ್ದೆಗಳು : 782
ವಿದ್ಯಾರ್ಹತೆ :
ಯಾವುದೇ ಪದವಿ ಹೊಂದಿರಬೇಕು
ಪದವಿ ಅಂತಿಮ ವರ್ಷದಲ್ಲಿ ಒದುತ್ತಿರುವವರು ಕೂಡ ಅರ್ಜಿ ಸಲ್ಲಿಸಲು ಅರ್ಹರು
ವಯೋಮಿತಿ

ಕನಿಷ್ಠ ವಯಸ್ಸು : 21
ಗರಿಷ್ಠ ವಯಸ್ಸು : 32
ಅರ್ಜಿ ಶುಲ್ಕ :

ಇತರೆ ಅಭ್ಯರ್ಥಿಗಳಿಗೆ : 100/-
ST,SC,PWD, Womens: ಶುಲ್ಕ ವಿನಾಯ್ತಿ

ಆಯ್ಕೆ ವಿಧಾನ :

ಮೂರು ಹಂತಗಳ ಪರೀಕ್ಷೆ ನಡೆಸಲಾಗುತ್ತೆ  ಇದರಲ್ಲಿ ಅಭ್ಯರ್ಥಿಗಳು ಮೊದಲನೆಯದಾಗಿ ಪೂರ್ವಭಾವಿ ಪರೀಕ್ಷೆಗೆ ಅರ್ಹತೆ ಪಡೆದ ನಂತರ ಮುಂದಿನ ಪರೀಕ್ಷಗಳು ಮುಖ್ಯ ಪರೀಕ್ಷೆ (Main Exam) ಮತ್ತು ಸಂದರ್ಶನ ಇರುತ್ತೆ .
ಸಿವಿಲ್ ಸರ್ವೀಸಸ್ ಪ್ರಾಥಮಿಕ ಪರೀಕ್ಷೆಯ ದಿನಾಂಕ  : 03-06-2018
ಮುಖ್ಯ ಪರೀಕ್ಷೆಯ ದಿನಾಂಕ:  ಸೆಪ್ಟೆಂಬರ್ 2018
ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು  ಪ್ರಾರಂಭ ದಿನಾಂಕ  : 07-02-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ   : 06-03-2018 ರಿಂದ 06:00 ಕ್ಕೆ

ಶುಲ್ಕ ಪಾವತಿಸಲು ಕೊನೆಯ ದಿನಾಂಕ : 05-03-2018

ಆನ್ ಲೈನ್ ಮೂಲಕ ಶುಲ್ಕ ಪಾವತಿ ಕೊನೆಯ ದಿನಾಂಕ  : 06-03-2018

ಹೆಚ್ಚಿನ ಮಾಹಿತಿಗಾಗಿ

https://upsconline.nic.in/

(Courtesy :http://www.digitalcareer.co.in)