"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 25 February 2019

•► (PART : III) "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (KAS INTERVIEW PREPARATION - Model Questions)

•►  (PART : III) "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು
(KAS INTERVIEW PREPARATION - Model Questions)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)


"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.  ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


• ವಿಷಯವಸ್ತು :




41. ಸುಸ್ಥಿರ ಕೃಷಿ ನಿರ್ವಹಣೆಗೆ ತಾವು ಸೂಚಿಸಬಹುದಾದ ವೈಜ್ಞಾನಿಕ ಅಂಶಗಳು.

42. ಪ್ರತ್ಯೇಕ ನಾಡಧ್ವಜ —
— 'ಒಂದು ದೇಶ- ಒಂದು ಧ್ವಜ' ಸೂತ್ರದ ನಡುವೆ ರಾಜ್ಯವೊಂದರಲ್ಲಿ ಪ್ರತ್ಯೇಕ ಧ್ವಜ ಏಕೆ?
— ಸಂವಿಧಾನದಲ್ಲಿ ಪ್ರತ್ಯೇಕ ಧ್ವಜದ ಕುರಿತು ಯಾವುದೇ ಪ್ರಸ್ತಾಪವಿಲ್ಲ. ನಮ್ಮ ಗುರುತನ್ನು ಕಾಪಾಡಿಕೊಳ್ಳಲು ಪ್ರತ್ಯೇಕ ಬಾವುಟ ಇದ್ದರೆ ತಪ್ಪೇನು?

43.ಜಯಂತಿ ವಿವಾದಗಳು :— ಐತಿಹಾಸಿಕ ಘಟನೆ, ವಿದ್ಯಮಾನಗಳನ್ನು ವರ್ತಮಾನದಲ್ಲಿ ನೋಡುವುದು ಹೇಗೆ ಎನ್ನುವ ಆಳವಾದ ಪರಾಮರ್ಶೆಯ ಕೊರತೆ ಇತ್ತೀಚಿನ ಚರ್ಚೆಗಳಲ್ಲಿ ಎದ್ದು ಕಾಣುತ್ತಿದೆಯೇ?

44. ಹೊರನಾಡ ಕನ್ನಡಿಗರ ಸಮಸ್ಯೆಗಳು — ಹೊರನಾಡ ಕನ್ನಡಿಗರಿಗೆ ಶಿಕ್ಷಣ-ಉದ್ಯೋಗ ವಲಯಗಳಲ್ಲಿ ಮೀಸಲು ಮತ್ತಿತರ ಸೌಲಭ್ಯ ಒದಗಿಸಬೇಕೇ?

45. ಮೌಢ್ಯ ನಿಷೇಧ ಕಾಯಿದೆ

46. ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶದ ಮಹಿಳೆಯರ ಭಾಗವಹಿಸುವಿಕೆ.

47. ಸಮಾನ ನಾಗರಿಕ ಸಂಹಿತೆ & ತ್ರಿವಳಿ ತಲಾಕ್‌

48. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ( ಐಪಿಪಿಬಿ)

49. ನ್ಯಾಯಾಂಗ ನಿಂದನೆ .

50.2018ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪುಗಳು

51.ದೇಶದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (ಎಂಎಸ್‌ಎಂಇ) ಪ್ರಸ್ತುತ ಸ್ಥಿತಿಗತಿ - ಇವುಗಳ ಮೇಲೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯ ಪ್ರಭಾವ

52.ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರಗಳ ನೀತಿಯನ್ನು ಕಳೆದೆರಡು ದಶಕಗಳಿಂದ ಅವಲೋಕಿಸಿ.

53.ಪ್ರಸ್ತುತ ದೇಶದ ಆರ್ಥಿಕತೆಗೆ ಅಸಂಘಟಿತ ವಲಯದ ಕೊಡುಗೆ.

54.ದೇಶದ ಅಸಂಘಟಿತ ವಲಯದ ಮೇಲೆ ನೋಟು ಅಮಾನ್ಯೀಕರಣ & ಜಿಎಸ್‌ಟಿಯ ಪರಿಣಾಮಗಳು.

55. ನಿರುದ್ಯೋಗ ಸಮಸ್ಯೆಗೂ ಸಂಪತ್ತಿನ ಅಸಮಾನತೆಗೂ ಇರುವ ಸಂಬಂಧವನ್ನು ತಿಳಿಸಿ.

56. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು ದೇಶಕ್ಕೆ ಒಳಿತೇ?

57. ಹೆಣ್ಣುಮಕ್ಕಳ ಪ್ರವೇಶ ನಿಷೇಧ ಮಹಿಳೆಯರ ಧಾರ್ಮಿಕ ಹಕ್ಕಿನ ಉಲ್ಲಂಘನೆ ಮತ್ತು ಸಂವಿಧಾನದ ಅವಗಣನೆಯೇ?

58. ದೇಶದ ಗಣ್ಯ ತನಿಖಾ ಸಂಸ್ಥೆಯಾದ ಸಿಬಿಐನ ಸ್ವತಂತ್ರ ಕಾರ್ಯವೈಖರಿ & ಪ್ರಸ್ತುತತೆ.

59. ಆಯುಷ್ಮಾನ್ ಭಾರತ್ ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ

60. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸ್ವಾಯತ್ತತೆ & ಕೇಂದ್ರ ಸರ್ಕಾರ
…ಮುಂದುವರೆಯುವುದು

Sunday 24 February 2019

•► (PART : II) "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (KAS INTERVIEW PREPARATION - Model Questions)

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : II)
(KAS INTERVIEW PREPARATION)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)


"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.  ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


• ವಿಷಯವಸ್ತು :

21.ಸಾಲ ಮನ್ನಾ- ಇದು ಕಾಯಂ ಪರಿಹಾರವೇ ? ದೇಶದ/ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ಇದರ ಪರಿಣಾಮಗಳು.

22.ಯಾಕೆ ಪಶ್ಚಿಮ ಕರಾವಳಿಯ ರಾಜ್ಯಗಳು ಪೂರ್ವ ಕರಾವಳಿಯ ರಾಜ್ಯಗಳಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿವೆ?

23.ಮಾನವ ಹಕ್ಕುಗಳ ರಕ್ಷಣೆ (ತಿದ್ದುಪಡಿ)-2018 ಮಸೂದೆ - ಲಕ್ಷಣಗಳು - ಆದ ಬದಲಾವಣೆಗಳು

24.ಐಎಂಎಫ್ ಎಸ್​ಡಿಆರ್​ಗೆ ಯುವಾನ್ ಸೇರ್ಪಡೆ ಆಗಿರುವುದರಿಂದ ಚೀನಾ ದೇಶಕ್ಕೆ ಏನು ಲಾಭ?

25.ಪ್ರಯಾಣಿಕರ ಸಂಖ್ಯೆಯ ದೃಷ್ಟಿಯಿಂದ ವಿಶ್ವದ ಮೂರನೇ ಅತಿ ದೊಡ್ಡ ಉದ್ಯಮ ಎನ್ನುವ ಹೆಗ್ಗಳಿಕೆ ಹೊಂದಿದ್ದರೂ ನಾಗರಿಕ ವಿಮಾನಯಾನ ಕ್ಷೇತ್ರವು ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಏಕೆ?

26.ಪ್ರಸ್ತುತ ಭಾರತದ ಮಾನವ ಅಭಿವೃದ್ಧಿ ಸ್ಥಿತಿಗತಿ  - UNDPಯ ಮಾನವ ಅಭಿವೃದ್ಧಿ ಸೂಚ್ಯಂಕದ ಮೇಲೆ ಇದರ ಪರಿಣಾಮ.

27. ಭಾರತದ HDI ಮೇಲೆ ಪ್ರಭಾವ ಬೀರುವ ಅಂಶಗಳು.

28. ಜಾಗತಿಕ ಹಸಿವು ಸೂಚ್ಯಂಕ (GHI-Global Hunger Index)) ವರದಿ & ಭಾರತ.

29. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ ಈಗಲೂ ಪುರುಷರ ಸಾಕ್ಷರತೆಯ ಪ್ರಮಾಣವು ಮಹಿಳಾ ಸಾಕ್ಷರತೆಯ ಪ್ರಮಾಣಕ್ಕಿಂತ ಅಧಿಕವಾಗಿದೆ ಏಕೆ? ಸಾಕ್ಷರತೆಯ ಪ್ರಮಾಣದಲ್ಲಿರುವ ತಾರತಮ್ಯ ಇನ್ನೂ ಯಾಕೆ ಕಡಿಮೆಯಾಗುತ್ತಿಲ್ಲ?

30. ಪ್ರಧಾನಮಂತ್ರಿ ಕಿಸಾನ್‌ ಸನ್ಮಾನ್‌ ಯೋಜನೆ - ಇದು ವಾಡಿಕೆಯ ಸಾಮಾಜಿಕ ಯೋಜನೆಗಳಿಗಿಂತ ಹೇಗೆ ಭಿನ್ನ?

31. ಮಾನವ ಸಾಗಣೆ (ತಡೆ, ಸಂರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2018 ( Trafficking of Persons (Prevention, Protection & Rehabilitation Bill, 2018) - ಈ ಮಸೂದೆಯ ಪ್ರಮುಖ ಅಂಶಗಳು.

32.ಮಾನವ ಕಳ್ಳಸಾಗಣೆಯು ಜಾಗತಿಕ ಸಮಸ್ಯೆಯಾದರೂ ದಕ್ಷಿಣ ಏಷ್ಯಾದಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಯಾಕೆ?

33.ಭಾರತದಲ್ಲಿ ಸಾರ್ವಜನಿಕ ವಿತರಣೆ ಕಾರ್ಯಕ್ರಮದಲ್ಲಿ ನೀವು ಸೂಚಿಸಬಹುದಾದ ಬದಲಾವಣಾ ಕ್ರಮಗಳು.

34.ಪ್ರಸ್ತುತ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ "ದೇಶದಲ್ಲಿ ಬಡತನ ಕಡಿಮೆಯಾಗಿದೆ ಆದರೆ ಹಸಿದವರ ಸಂಖ್ಯೆ ಕಡಿಮೆಯಾಗಿಲ್ಲ" ಎಂದರೆ ಏನರ್ಥ? ಜಾಗತಿಕ ಹಸಿವು ಸೂಚ್ಯಂಕ ಎದುರಿಡುತ್ತಿರುವ ಪ್ರಶ್ನೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತರವೇನು?

35. ನೋಟು ಅಮಾನ್ಯೀಕರಣ (ಅಪನಗದೀಕರಣ) ಮತ್ತು ಜಿಎಸ್‍ಟಿ ಜಾರಿಯಾದ ನಂತರದ ದೇಶದ ಅರ್ಥ ವ್ಯವಸ್ಥೆ

36. ಕೇಂದ್ರ ಸರ್ಕಾರವು ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡಕ್ಕೆ ಅನುಗುಣವಾಗಿ ಶೇಕಡ ಹತ್ತರಷ್ಟು 'ಆರ್ಥಿಕ ದುರ್ಬಲರಿಗೆ ಮೀಸಲಾತಿ’ಗೆ ಕೈಗೊಂಡ ಕ್ರಮ ಸರಿಯೇ?

37. ದೇಶದಲ್ಲಿ ಉದ್ಯೋಗಾವಕಾಶದ ಸೃಷ್ಟಿ & ಪ್ರತಿಭಾ ಪಲಾಯನ

38. ಪೌರತ್ವ ತಿದ್ದುಪಡಿ ವಿಧೇಯಕ (The Citizenship (Amendment) Bill, 2016)

39. ಜಗತ್ತಿನ ಬೇರಾವುದೇ ದೇಶಕ್ಕೆ ಸಮೀಕರಿಸಲಾಗದಷ್ಟು ಮಹಿಳಾ ಕಾನೂನುಗಳು, ಭಾರತೀಯ ಸ್ತ್ರೀಯರ ಪಾಲಿಗಿವೆ. ಆದಾಗ್ಯೂ ಮಹಿಳೆಯರ ಮೇಲೆ ದಿನಾಲೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ ಏಕೆ?

40.ತಾಪಮಾನ ಏರಿಕೆ ನಿಯಂತ್ರಣಕ್ಕೆ ತಾವು ಹೊಸದಾಗಿ ಸೂಚಿಸಬಹುದಾದ ಕ್ರಮಗಳು.
…ಮುಂದುವರೆಯುವುದು.

Tuesday 19 February 2019

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : I) (KAS INTERVIEW PREPARATION)

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : I)
(KAS INTERVIEW PREPARATION)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)

"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.  ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


• ವಿಷಯವಸ್ತು :

1.ನೀವು ಈ ಹುದ್ದಗೆ ಅರ್ಹರು ಎಂದು ಹೇಗೆ ಸಾಬೀತುಪಡಿಸಬಲ್ಲಿರಿ?

2.ಭಾರತದ ರೂಪಾಯಿಯು ಡಾಲರ್ ಎದುರು ಕುಸಿತಗೊಳ್ಳುತ್ತಿದ್ದು ಏಕೆ?

3.ಫಸಲ್ ವಿಮಾ ಯೋಜನೆ :

4.ಪ್ರಸ್ತುತ ದೇಶದ/ರಾಜ್ಯದ ಜಿಡಿಪಿ(GDP)ಯಲ್ಲಿ ಕೃಷಿ ವಲಯ & ಸೇವಾ ವಲಯದ ಪಾಲು.

5.ಜನ್-ಧನ್ ಯೋಜನೆಯ 4 ವರ್ಷಗಳ ಅವಲೋಕನ.

6.ದೇಶದ ವಿದೇಶಾಂಗ ನೀತಿ : ಇತ್ತೀಚಿನ ಬೆಳೆವಣಿಗೆಗಳು

7.ಇತರೇ ದೇಶಗಳಿಗೆ ಹೋಲಿಸಿದ್ದಲ್ಲಿ ಭಾರತದಲ್ಲಿ ತಲಾ ಆದಾಯವೇಕೆ ಅಲ್ಪ ಪ್ರಮಾಣದಲ್ಲಿದೆ?

8.ನೀತಿ ಆಯೋಗ : ಯೋಜನಾ ಆಯೋಗಕ್ಕಿಂತ ಹೇಗೆ ಭಿನ್ನ?

9.Eco Terrorism ಎಂದರೇನು?

10.ಮಹಿಳೆಯರ ಭದ್ರತೆಯ ವಿಷಯದಲ್ಲಿ ಭಾರತ ಸೋತಿರುವುದೇ?

11.climate change : ದೇಶದ ಮೇಲೆ ಇದರ ಪರಿಣಾಮಗಳು & ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿದ್ದ ಕ್ರಮಗಳು - ಅವಲೋಕನ.

12.ಸಾರ್ವತ್ರಿಕ ಮೂಲ ಆದಾಯ (Free Basic Income) - ಯಾಕೆ ಸರ್ಕಾರ ಇದನ್ನು ಜಾರಿಗೊಳಿಸುತ್ತಿಲ್ಲ?

13.ಅಂತರರಾಜ್ಯ ನದಿ ನೀರಿನ ವಿವಾದಗಳು. - ಕಾವೇರಿ ನದಿ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯ?

14.ದೇಶದಲ್ಲಿ ಕ್ರೀಡೆಗಳ ಉತ್ತೇಜನಕ್ಕಾಗಿ ತಾವು ಯಾವ್ಯಾವ ಉತ್ತೇಜನಾ ಕ್ರಮಗಳನ್ನು ಕೈಗೊಳ್ಳುವಿರಿ?

15 ಅಂತರರಾಜ್ಯ ನದಿ ಜೋಡಣೆಯ ಬಗ್ಗೆ ನಿಮ್ಮ ಅಭಿಪ್ರಾಯ

16.Brexit ಎಂದರೇನು? ಇದು ಸರಿಯೋ ತಪ್ಪೋ? ದೇಶದ ಮೇಲೆ ಇದರ ಪ್ರಭಾವ.

17.ಅಪೌಷ್ಟಿಕತೆ(malnutrition) ಸಮಸ್ಯೆ : ಯಾಕೆ ಉಲ್ಬಣಿಸುತ್ತಿದೆ?  ನೀವು ಇದರ ನಿರ್ಮೂಲನೆಯನ್ನು ಹೇಗೆ ನಿಭಾಯಿಸುವಿರಿ?

18.ಗ್ರಾಮೀಣಾಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ತಂದರೂ ಯಾಕೆ ಜನ ಗೂಳೆ ಹೋಗುವುದು ತಪ್ಪುತ್ತಿಲ್ಲ?

19.ಇತ್ತೀಚೆಗೆ ಪುನಃ ಉತ್ತರ ಕರ್ನಾಟಕ ಹೊಸ ರಾಜ್ಯ ರಚನೆ ಬಗ್ಗೆ ಕೂಗೆದ್ದಿತ್ತು, ಯಾಕೆ? ಉತ್ತರ & ದಕ್ಷಿಣ ಎಂಬ ತಾರತಮ್ಯ ನಿಮಗೆ ಕಾಣಿಸುತ್ತಿದೆಯೇ?

20.ಆಧಾರ್ ಕಾರ್ಡ್ ಮತ್ತು ಖಾಸಗಿತನದ ಹಕ್ಕು.
…ಮುಂದುವರೆಯುವುದು.