"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 30 March 2017

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ).. (66 ರಿಂದ 100 ಪ್ರಶ್ನೆಗಳು) (IAS GENERAL STUDIES PAPER I 2016)

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ).. (66 ರಿಂದ 100 ಪ್ರಶ್ನೆಗಳು)
(IAS GENERAL STUDIES PAPER I 2016)
•─━━━━━═══════════━━━━━─••─━━━━━═══════════━━━━━─•

★ ಐಎಎಸ್ ಪ್ರಶ್ನೆಪತ್ರಿಕೆ 2016
(IAS Question Paper I 2016))


2016 ನೇ ಸಾಲಿನ ಯು.ಪಿ.ಎಸ್.ಸಿ. ನಡೆಸಿದ ಸಿವಿಲ್ ಸರ್ವಿಸ್ ಪರೀಕ್ಷೆ (ಐಎಎಸ್) ಯ ಪತ್ರಿಕೆ -1 ನ್ನು ಉತ್ತರಗಳೊಂದಿಗೆ ಕನ್ನಡಕ್ಕೆ ಭಾಷಾಂತರ ಮಾಡಿದ್ದು,  ಸ್ಪರ್ಧಾರ್ಥಿಗಳಿಗೆ ಸಹಾಯವಾಗಬಹುದೆಂಬ ನಂಬಿಕೆ ನನ್ನದು.


...ಮುಂದುವರೆದ ಭಾಗ.


67. ಭಾರತ ರಾಷ್ಟ್ರೀಯ ಕಾಂಗ್ರೆಸ್ 1907ರಲ್ಲಿ ವಿಭಜನೆಯಾಗಲು ಮುಖ್ಯ ಕಾರಣ ಏನು?
ಎ. ಲಾರ್ಡ್ ಮಿಂಟೊ ಭಾರತದ ರಾಜಕೀಯದಲ್ಲಿ ಕೋಮುವಾದ ಆರಂಭಿಸಿದ್ದು
ಬಿ. ಮಂದಗಾಮಿಗಳ ವಿಧಾನಗಳ ಬಗ್ಗೆ ತೀವ್ರವಾದಿಗಳಿಗೆ ಅಸಮಾಧಾನ
ಸಿ. ಮುಸ್ಲಿಂ ಲೀಗ್‍ನ ಹುಟ್ಟು
ಡಿ. ಅರವಿಂದೋ ಘೋಷ್ ಅವರು ಐಎನ್‍ಸಿ ಅಧ್ಯಕ್ಷರಾಗಿ ಆಯ್ಕೆಯಾದದ್ದು

ಉ: ಬಿ


68. ಎರಡನೇ ಮಹಾಯುದ್ಧದ ಬಳಿಕ ಸರ್ ಸ್ಟಫರ್ಡ್ ಕ್ರಿಪ್ಲರ್‍ನ ಯೋಜನೆಗಳು ಹೇಗೆ ರೂಪುಗೊಂಡವು?
ಎ. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.
ಬಿ. ಸ್ವಾತಂತ್ರ್ಯ ನೀಡುವ ಮುನ್ನ ಭಾರತವನ್ನು ವಿಭಜಿಸಬೇಕು
ಸಿ. ಕಾಮನ್ವೆಲ್ತ್ ಸೇರುವ ಷರತ್ತಿನ ಅನ್ವಯ ಸ್ವಾತಂತ್ರ್ಯ ನೀಡಬೇಕು
ಡಿ. ಅರೆ ಸ್ವತಂತ್ರ್ಯ ದೇಶವಾಗಿ ಭಾರತ ರೂಪುಗೊಳ್ಳಬೇಕು.

ಉ: ಡಿ


69. ಈ ಕೆಳಗಿನ ಜೋಡಿಯಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
1. ಬುದ್ಧಗಯಾ: ಭಗೇಲ್‍ಖಂಡ
2. ಖುಜರಾಹೊ: ಬುಂಡೇಲ್‍ಖಂಢ
3. ಶಿರಡಿ: ವಿದರ್ಭ
4. ನಾಶಿಕ್: ಮಾಳವ
5. ತಿರುಪತಿ: ರಾಯಲ್‍ಸೀಮಾ
ಎ. ಕೇವಲ 1, 2 ಮತ್ತು 4
ಬಿ. 2, 3, 4 ಮತ್ತು 5
ಸಿ. 2 ಮತ್ತು 5
ಡಿ. 1,3,4 ಮತ್ತು 5

ಉ: ಸಿ


70. ದೇಶದ ಹಿತಾಸಕ್ತಿಯಿಂದ ಯಾವುದೇ ರಾಜ್ಯ ವಿಷಯಗಳ ಶಾಸನ ರೂಪಿಸಲು ಸಂಸತ್ತಿಗೆ ಅಧಿಕಾರ ನೀಡಲು ಈ ಕೆಳಗಿನ ಯಾವ ನಿರ್ಣಯ ಅಗತ್ಯವಾಗುತ್ತದೆ?
ಎ. ಲೋಕಸಭೆಯಲ್ಲಿ ಸರಳ ಬಹುಮತದಿಂದ ಕೈಗೊಂಡ ನಿರ್ಣಯ
ಬಿ. ಲೋಕಸಭೆಯಲ್ಲಿ ಮೂರನೇ ಎರಡು ಬಹುಮತದಿಂದ ಕೈಗೊಂಡ ನಿರ್ಣಯ
ಸಿ. ರಾಜ್ಯಸಭೆಯಲ್ಲಿ ಸರಳ ಬಹುಮತದಿಂದ ಕೈಗೊಂಡ ನಿರ್ಣಯ
ಡಿ. ರಾಜ್ಯಸಭೆಯಲ್ಲಿ ಮೂರನೇ ಎರಡು ಬಹುಮತದಿಂದ ಕೈಗೊಂಡ ನಿರ್ಣಯ

ಉ: ಡಿ


71. ಇತ್ತೀಚೆಗೆ ಯಾವ ರಾಜ್ಯ ಕೃತಕ ಒಳನಾಡು ಬಂದರನ್ನು ಉದ್ದ ಕಾಲುವೆ ಮೂಲಕ ಸಮುದ್ರಕ್ಕೆ ಸಂಪರ್ಕಿಸಿದೆ?
ಎ. ಆಂಧ್ರಪ್ರದೇಶ
ಬಿ. ಛತ್ತೀಸ್‍ಗಢ
ಸಿ. ಕರ್ನಾಟಕ
ಡಿ. ರಾಜಸ್ಥಾನ

ಉ: ಡಿ


72. ಪ್ಯಾರೀಸ್‍ನಲ್ಲಿ 2015ರಲ್ಲಿ ನಡೆದ ಯುಎನ್‍ಎಫ್‍ಸಿಸಿಸಿ ಸಭೆಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಈ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳು ಸಹಿ ಮಾಡಿದ್ದು 2017ರಲ್ಲಿ ಇದು ಜಾರಿಗೆ ಬರಲಿದೆ.
2. ಇದು ಹಸಿರುಮನೆ ಪರಿಣಾಮ ನಿಯಂತ್ರಿಸಲು ಮಾಡಿಕೊಂಡ ಒಪ್ಪಂದವಾಗಿದೆ.
3. ಜಾಗತಿಕ ತಾಪಮಾನದಲ್ಲಿ ಅಭಿವೃದ್ಧಿಹೊಂದಿದ ದೇಶಗಳು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು 1000 ಶತಕೋಟಿ ಡಾಲರ್ ವಾರ್ಷಿಕ ನೆರವು ನೀಡುತ್ತವೆ.
ಎ. ಕೇವಲ 1 ಮತ್ತು 3
ಬಿ. 2 ಮಾತ್ರ
ಸಿ. 2 ಮತ್ತು 3
ಡಿ. 1,2 ಮತ್ತು 3

ಉ: ಬಿ


73. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಸುಸ್ಥಿರ ಅಭಿವೃದ್ಧಿ ಗುರಿಯನ್ನು 1972ರಲ್ಲಿ ಮೊಟ್ಟಮೊದಲ ಬಾರಿಗೆ ಕ್ಲಬ್ ಆಫ್ ರೋಮ್ ಮುಂದಿಟ್ಟಿತು.
2. ಸುಸ್ಥಿರ ಅಭಿವೃದ್ಧಿ ಗುರಿಯನ್ನು 2030ರೊಳಗೆ ತಲುಪಬೇಕು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಬಿ


74. ಇತ್ತೀಚೆಗೆ ಬಿಡುಗಡೆಯಾದ ದ ಮ್ಯಾನ್ ಹೂ ನೋಸ್ ಇನ್‍ಫಿನಿಟಿ ಯಾರಿಗೆ ಸಂಬಂಧಿಸಿದ ಚಿತ್ರ?
ಎ. ಎಸ್,ರಾಮಾನುಜಂ
ಬಿ. ಎಸ್.ಚಂದ್ರಶೇಖರ್
ಸಿ. ಎಸ್.ಎನ್.ಬೋಸ್
ಡಿ. ಸಿ.ವಿ.ರಾಮನ್

ಉ: ಎ


75. ಕೆಳಗಿನ ಸರಿ ಹೇಳಿಕೆ ಗುರುತಿಸಿ.
1. ಪಂಚಾಯ್ತಿ ಸದಸ್ಯರಾಗಲು ಕನಿಷ್ಠ ವಯಸ್ಸು 25
2. ಅವಧಿಪೂರ್ವ ವಿಜರ್ಸನೆಯಾದ ಪಂಚಾಯ್ತಿಯನ್ನು ಪುನರ್ ರೂಪಿಸಿದಾಗ ಉಳಿದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. 1 ಅಥವಾ 2

ಉ:ಬಿ


76. ಈ ಕೆಳಗಿನ ಯಾವ ಹೇಳಿಕೆ ಸರಿ?
1. ಲೋಕಸಭೆ ಅವಧಿ ಮುಕ್ತಾಯದ ವೇಳೆಗೆ ಅಲ್ಲಿ ಬಾಕಿ ಇದ್ದ ಮಸೂದೆ ಅನೂರ್ಜಿತಗೊಳ್ಳುತ್ತದೆ.
2. ಲೋಕಸಭೆಯಲ್ಲಿ ಆಂಗೀಕಾರವಾದ ಮಸೂದೆ ರಾಜ್ಯಸಭೆಯಲ್ಲಿ ಬಾಕಿ ಇದ್ದರೆ, ಲೋಕಸಭೆ ವಿಸರ್ಜನೆ ಬಳಿಕವೂ ಊರ್ಜಿತದಲ್ಲಿರುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಬಿ


77. ಜಾಗತಿಕ ಹಸಿವು ಸೂಚ್ಯಂಕ ವರದಿ ಸಿದ್ಧಪಡಿಸಲು ಯಾವ ಐಎಫ್‍ಪಿಆರ್‍ಐ ಬಳಸಲಾಗುತ್ತದೆ?
1. ನಿರುದ್ಯೋಗ
2. ಮಕ್ಕಳ ಕುಬ್ಜತೆ
3. ಮಕ್ಕಳ ಸಾವು
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1, 2 ಮತ್ತು 3
ಡಿ. 1 ಮತ್ತು 2

ಉ: ಸಿ


78. ವಿತ್ತೀಯ ಕೊರತೆ ಕಡಿಮೆ ಮಾಡಲು ಸರ್ಕಾರ ಈ ಕೆಳಗಿನ ಯಾವ ಕ್ರಮ ಕೈಗೊಳ್ಳಬಹುದು?
1. ಸರ್ಕಾರಿ ವೆಚ್ಚ ಕಡಿತ
2. ಹೊಸ ಕಲ್ಯಾಣ ಯೋಜನೆ ಆರಂಭ
3. ಸಬ್ಸಿಡಿಗಳನ್ನು ತಾರ್ಕಿಕಗೊಳಿಸುವುದು
4. ಆಮದು ಸುಂಕ ಕಡಿತ ಮಾಡುವುದು
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2 ಮತ್ತು 3

ಉ: ಸಿ


79. ಪೇಮೆಂಟ್ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಯಾವುದು?
1. ಭಾರತೀಯ ಮೂಲದ ಮೊಬೈಲ್ ಕಂಪನಿಗಳು ಪೇಮೆಂಟ್ ಬ್ಯಾಂಕ್ ಪವರ್ತಕರಾಗಬಹುದು.
2. ಪೇಮೆಂಟ್‍ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಿಡುಗಡೆ ಮಾಡಬಹುದು.
3. ಪೇಮೆಂಟ್ ಬ್ಯಾಂಕ್ ಸಾಲ ಚಟುವಟಿಕೆ ಕೈಗೊಳ್ಳುವಂತಿಲ್ಲ
ಎ. ಕೇವಲ 1 ಮತ್ತು 2
ಬಿ. 1 ಮತ್ತು 3 ಮಾತ್ರ
ಸಿ. 2 ಮಾತ್ರ
ಡಿ. 1,2 ಮತ್ತು 3

ಉ: ಬಿ


80. ಲೈ ಫೈಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಯಾವುದು?
1. ಇದು ಹೈಸ್ಪೀಡ್ ಡಾಟಾ ವರ್ಗಾವಣೆಗೆ ಬೆಳಕನ್ನು ಮಾಧ್ಯಮವಾಗಿ ಬಳಸಿಕೊಳ್ಳುತ್ತದೆ.
2. ಇದು ನಿಸ್ತಂತು ತಂತ್ರಜ್ಞಾಣವಾಗಿದ್ದು, ವೈ ಫೈ ಗಿಂತ ಹೆಚ್ಚು ವೇಗ ಹೊಂದಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


81. ಇಂಟೆಂಡೆಡ್ ನ್ಯಾಷನಲಿ ಡಿಟರ್ಮೈನ್ಡ್ ಕಾಂಟ್ರಿಬ್ಯೂಷನ್ಸ್ ಎನ್ನುವುದು ಯಾವುದಕ್ಕೆ ಸಂಬಂಧಿಸಿದ್ದು?
ಎ. ಯುದ್ಧಪೀಡಿತ ಮಧ್ಯಪ್ರಾಚ್ಯ ದೇಶಗಳ ನಿರಾಶ್ರಿತರ ಪುನರ್ವಸತಿಗೆ ಯೂರೋಪಿಯನ್ ದೇಶಗಳು ಕೈಗೊಂಡ ಪ್ರತಿಜ್ಞೆ
ಬಿ. ಹವಾಮಾನ ಬದಲಾವಣೆ ತಡೆಗೆ ವಿಶ್ವದ ದೇಶಗಳ ಕೈಗೊಂಡ ಕ್ರಿಯಾಯೋಜನೆ
ಸಿ. ಏಷ್ಯನ್ ಹೂಡಿಕೆ ಬ್ಯಾಂಕಿನ ಸ್ಥಾಪನೆಗೆ ಸದಸ್ಯದೇಶಗಳ ಬಂಡವಾಳ ದೇಣಿಗೆ
ಡಿ. ಸುಸ್ಥಿರ ಅಭಿವೃದ್ಧಿ ಸಾಧನೆಗೆ ವಿಶ್ವದ ದೇಶಗಳು ರೂಪಿಸಿದ ಕ್ರಿಯಾಯೋಜನೆ

ಉ: ಬಿ


82. ಉದಯ್ ಯೋಜನೆಯ ಉದ್ದೇಶ ಏನು?
ಎ. ಸ್ಟಾರ್ಟ್ ಅಪ್ ಪುನರ್‍ಬಳಕೆ ಮೂಲದ ವಿದ್ಯುತ್ ಕಂಪನಿಗಳುಗೆ ಹಣಕಾಸು ಹಾಗೂ ತಾಂತ್ರಿಕ ನೆರವು ನೀಡುವುದು.
ಬಿ. 2018ರೊಳಗೆ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು.
ಸಿ. ಕಲ್ಲಿದ್ದಲು ಆಧರಿತ ವಿದ್ಯುತ್ ಘಟಕಗಳ ಬದಲು £ನೈಸರ್ಗಿಕ ಅನಿಲ ಆಧರಿತ ವಿದ್ಯುತ್ ಘಟಕ ಸ್ಥಾಪನೆ
ಡಿ. ವಿದ್ಯುತ್ ವಿತರಣಾ ಕಂಪನಿಗಳ ಪುನರುಜ್ಜೀವನಕ್ಕೆ ಆರ್ಥಿಕ ನೆರವು ನೀಡುವುದು.

ಉ: ಡಿ


83. ಐಎಫ್‍ಸಿ ಮಸಾಲಾ ಬಾಂಡ್‍ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು ಈ ಬಾಂಡ್ ಬಿಡುಗಡೆ ಮಾಡಿದೆ.
2. ಇದು ರೂಪಾಯಿ ಪ್ರಾಬಲ್ಯದ ಬಾಂಡ್‍ಗಳಾಗಿದ್ದು, ಸಾರ್ವಜನಿಕ ಹಾಗೂ ಖಾಸಗಿ ವಲಯದ ಉದ್ದಿಮೆಗಳಿಗೆ ಸಾಲ ಕ್ರೋಢೀಕರಿಸುವ ಸಾಧನ
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


84. ವಿಜಯನಗರದ ಅರಸ ಕೃಷ್ಣದೇವನ ತೆರಿಗೆ ಪದ್ಧತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಭೂಮಿಯ ಮೇಲಿನ ತೆರಿಗೆ ದರ ಭೂಮಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ.
2. ಖಾಸಗಿ ಕಾರ್ಯಾಗಾರಗಳು ಕೈಗಾರಿಕಾ ತೆರಿಗೆ ನೀಡಬೇಕು.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


85. ಸುಂಗ ರಾಜಮನೆತನದ ಪ್ರೇಮಕಥೆಯನ್ನು ಒಳಗೊಂಡ ಪ್ರಾಚೀನ ಭಾರತದ ಕೃತಿ ಯಾವುದು?
ಎ. ಸ್ವಪ್ನವಾಸವದತ್ತ
ಬಿ. ಮಾಳವಿಕಾಗ್ನಿಮಿತ್ರ
ಸಿ. ಮೇಘದೂತ
ಡಿ. ರತ್ನಾವತಿ

ಉ: ಬಿ


86. ಅಂಬೆರ್ ಬಾಕ್ಸ್, ಬ್ಲೂ ಬಾಕ್ಸ್, ಹಾಗೂ ಗ್ರೀನ್ ಬಾಕ್ಸ್ ಯಾವುದಕ್ಕೆ ಸಂಬಂಧಿಸಿದ್ದು?
ಎ. ವಿಶ್ವ ವ್ಯಾಪಾರ ಸಂಸ್ಥೆ ವಹಿವಾಟು
ಬಿ. ಸಾಕ್ ವಹಿವಾಟು
ಸಿ. ಯುಎನ್‍ಎಫ್‍ಸಿಸಿಸಿ ವಹಿವಾಟು
ಡಿ. ಭಾರತ– ಯೂರೋಪಿಯನ್ ಯೂನಿಯನ್ ಒಪ್ಪಂದ

ಉ: ಎ


87. ಸರ್ಕಾರದ ಹೂಡಿಕೆ ಬಜೆಟ್‍ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ರಸ್ತೆ, ಕಟ್ಟಡ ಹಾಗೂ ಯಂತ್ರೋಪಕರಣ ಸ್ವಾಧೀನದ ಮೇಲಿನ ಖರ್ಚು ಇತ್ಯಾದಿ.
2. ವಿದೇಶಿ ಸರ್ಕಾರಗಳಿಂದ ಪಡೆದ ಸಾಲ
3. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ ಸಾಲ ವಿವರ
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3

ಉ: ಡಿ


88. ವಿಶ್ವಸಂಸ್ಥೆಯ ಡಿಸರ್ಟಿಫಿಕೇಶನ್ ಒಪ್ಪಂದದ ಮಹತ್ವ ಏನು?
1. ಪರಿಣಾಮಕಾರಿ ಕ್ರಿಯಾಯೋಜನೆಯನ್ನು ಉತ್ತೇಜಿಸುವ ರಾಷ್ಟ್ರೀಯ ಯೋಜನೆ ಮತ್ತು ಬೆಂಬಲಾತ್ಮಕ ಅಂತರರಾಷ್ಟ್ರೀಯ ಪಾಲುದಾರಿಕೆ
2. ಇದು ದಕ್ಷಿಣ ಏಷ್ಯಾ ಹಾಗೂ ಉತ್ತರ ಆಫ್ರಿಕಾ ಪ್ರದೇಶಗಳ ಮೇಲೆ ಗುರಿ ಇಟ್ಟುಕೊಂಡಿದ್ದು, ಈ ಭಾಗಕ್ಕೆ ದೊಡ್ಡ ಮೊತ್ತದ ಹಣಕಾಸು ನೆರವು ನೀಡುವುದು.
3. ಡಿಸರ್ಟಿಫಿಕೇಶನ್ ವಿರುದ್ಧ ಸ್ಥಳೀಯರ ಹೋರಾಟಕ್ಕೆ ಬೆಂಬಲ ನೀಡುವುದು.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3

ಉ: ಸಿ


89. ಇತ್ತೀಚೆಗೆ ಐಎಂಎಫ್‍ನ ಎಸ್‍ಡಿಆರ್ ಬಾಸ್ಕೆಟ್‍ಗೆ ಸೇರಿಸಲು ಯಾವ ಕರೆನ್ಸಿಯನ್ನು ಪರಿಗಣಿಸಲಾಗಿದೆ?
ಎ. ರೂಬೆಲ್
ಬಿ. ರೆಂಡ್
ಸಿ. ಭಾರತೀಯ ರೂಪಾಯಿ
ಡಿ. ರೊಮಿಂಬಿ

ಉ: ಡಿ


90. ಅಂತರರಾಷ್ಟ್ರೀಯ ವಿತ್ತೀಯ ಹಾಗೂ ಹಣಕಾಸು ಸಮಿತಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಐಎಂಎಫ್‍ಸಿ ಜಾಗತಿಕ ಆರ್ಥಿಕತೆಯ ವಿಷಯಗಳನ್ನು ಚರ್ಚಿಸುತ್ತದೆ ಮತ್ತು ಈ ಸಂಬಂಧ ಐಎಂಎಫ್‍ಗೆ ಸಲಹೆ ಮಾಡುತ್ತದೆ.
2. ಐಎಂಎಫ್‍ಸಿ ಸಭೆಗಳಲ್ಲಿ ವಿಶ್ವಬ್ಯಾಂಕ್ ವೀಕ್ಷಕನಾಗಿ ಭಾಗವಹಿಸುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


91. ರಾಷ್ಟ್ರೀಯ ಗೃಹ ಅಭಿಯಾನ ಯಾವುದಕ್ಕೆ ಸಂಬಂಧಿಸಿದ್ದು?
ಎ. ನಿರ್ವಸತಿಗರಿಗೆ ಪುನರ್ವಸತಿ ಕಲ್ಪಿಸುವುದು.
ಬಿ. ಲೈಂಗಿಕ ಕಾರ್ಯಕರ್ತರನ್ನು ವಿಮುಕ್ತಿಗೊಳಿಸಿ ಪರ್ಯಾಯ ಜೀವನಾಧಾರ ಕಲ್ಪಿಸುವುದು.
ಸಿ. ಜಾಡಮಾಲಿ ಪದ್ಧತಿ ನಿರ್ಮೂಲನೆ
ಡಿ. ಜೀತ ಕಾರ್ಮಿಕರನ್ನು ಬಂಧಮುಕ್ತಿಗೊಳಿಸುವುದು.

ಉ: ಸಿ


92. ಮಧ್ಯಕಾಲೀನ ಭಾರತದ ಸಾಂಸ್ಕøತಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ತಮಿಳು ಪ್ರದೇಶದ ಸಿದ್ಧರು ಮೂರ್ತಿಪೂಜೆ ಖಂಡಿಸಿದ್ದರು.
2. ಕರ್ನಾಟಕದ ಲಿಂಗಾಯತರು ಪುನರ್ಜನ್ಮ ಸಿದ್ಧಾಂತ ಪ್ರಶ್ನಿಸಿದರು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಡಿ


93. ಸುದ್ದಿಗಳಲ್ಲಿ ಕಾಣಿಸಿಕೊಳ್ಳುವ ಆಮದು ಸುರಕ್ಷೆ ಎಂಬ ಪದ ಯಾವುದಕ್ಕೆ ಸೂಕ್ತವಾಗಿದೆ?
ಎ. ಜಿಡಿಪಿಮತ್ತು ಆಮದು ನಡುವಿನ ಅನುಪಾತ
ಬಿ. ಒಂದು ವರ್ಷದಲ್ಲಿ ದೇಶದ ಒಟ್ಟು ಆಮದು ಮೌಲ್ಯ
ಸಿ. ಎರಡು ದೇಶಗಳ ನಡುವಿನ ರಫ್ತು ಹಾಗೂ ಆಮದು ಮೌಲ್ಯದ ಅನುಪಾತ
ಡಿ. ದೇಶದ ಅಂತರರಾಷ್ಟ್ರೀಯ ದಾಸ್ತಾನಿನಿಂದ ಎಷ್ಟು ತಿಂಗಳು ಆಮದಿಗೆ ಪಾವತಿ ಮಾಡಬಹುದು ಎಂಬ ಅಂದಾಜು.

ಉ: ಡಿ


94. ಈ ಕೆಳಗಿನ ಜೋಡಿಯಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
1. ಕುರ್ದ್: ಬಾಂಗ್ಲಾದೇಶ
2. ಮಧೇಲ್: ನೇಪಾಳ
3. ರೊಹಿಂಗ್ಯಾ: ಮ್ಯಾನ್ಮಾರ್
ಎ. 1 ಮತ್ತು 2 ಮಾತ್ರ
ಬಿ. 2 ಮಾತ್ರ
ಸಿ. 2 ಮತ್ತು 3 ಮಾತ್ರ
ಡಿ. 3 ಮಾತ್ರ

ಉ: ಸಿ


95. ರಾಸಾಯನಿಕ ಅಸ್ತ್ರ ತಡೆ ಸಂಘಟನೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿ?
1. ಇದು ನ್ಯಾಟೊ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜತೆ ಕಾರ್ಯನಿರ್ವಹಿಸುವ ಯೂರೋಪಿಯನ್ ಒಕ್ಕೂಟದ ಒಂದು ಸಂಸ್ಥೆ.
2. ಇದು ಹೊಸ ರಾಸಾಯನಿಕ ಅಸ್ತ್ರಗಳ ತಡೆಯ ಉದ್ದೇಶ ಹೊಂದಿದೆ.
3. ಇದು ದೇಶಗಳಿಗೆ ರಾಸಾಯನಿಕ ಅಸ್ತ್ರಗಳ ಅಪಾಯದಿಂದ ಸುರಕ್ಷೆ ನೀಡುತ್ತದೆ.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3

ಉ: ಬಿ


96. ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಗುರುತಿಸಿ.
1. ಈ ಯೋಜನೆಯಡಿ ರೈತರು ಯಾವುದೇ ಹಂಗಾಮಿನಲ್ಲಿ ಯಾವುದೇ ಬೆಳೆ ಬೆಳೆದರೂ ಸಮಾನ ವಿಮಾಕಂತು ನೀಡಬೇಕಾಗುತ್ತದೆ.
2. ಈ ಯೋಜನೆಯು ಕೊಯ್ಲೋತ್ತರ ಅಪಾಯಗಳಿಗೂ ಸುರಕ್ಷೆ ಒದಗಿಸುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಬಿ


97. ಗ್ರೇಟ್ ಇಂಡಿಯನ್ ಹಾರ್ನ್‍ಬಿಲ್ ಭಾರತದ ಯಾವ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ?
ಎ. ಉತ್ತರ ಭಾರತದ ಸಿಂಧ್ ಪ್ರಾಂತ್ಯ
ಬಿ. ಹಿಮಾಲಯದ ಎತ್ತರ ಪ್ರದೇಶ
ಸಿ. ಪಶ್ಚಿಮ ಗುಜರಾತ್
ಡಿ. ಪಶ್ಚಿಮ ಘಟ್ಟ

ಉ: ಡಿ


98. ರಾಷ್ಟ್ರೀಯ ಗಂಗಾ ನದಿ ಪಾತ್ರ ಪ್ರಾಧಿಕಾರದ ಪ್ರಮುಖ ಲಕ್ಷಣ ಯಾವುದು?
1. ನದಿಪಾತ್ರವು ಯೋಜನೆ ಹಾಗೂ ನಿರ್ವಹಣೆಯ ಮೂಲ ಘಟಕ
2. ಇದು ರಾಷ್ಟ್ರಮಟ್ಟದಲ್ಲಿ ನದಿ ಸಂರಕ್ಷಣೆ ಪ್ರಯತ್ನವನ್ನು ಹೆಚ್ಚಿಸುತ್ತದೆ.
3. ಗಂಗಾನದಿ ಹರಿಯುವ ಒಂದು ರಾಜ್ಯದ ಮುಖ್ಯಮಂತ್ರಿ ಇದರ ಅಧ್ಯಕ್ಷರಾಗುತ್ತಾರೆ.
ಎ. 1 ಮತ್ತು 2 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3

ಉ: ಎ


99. ಕೃಷಿಕ್ಷೇತ್ರದಲ್ಲಿ ಬೇವು ಲೇಪಿತ ಯೂರಿಯಾವನ್ನು ಭಾರತ ಸರ್ಕಾರ ಏಕೆ ಉತ್ತೇಜಿಸುತ್ತದೆ?
ಎ. ಬೇವಿನ ಎಣ್ಣೆ ಮಣ್ಣಿನಲ್ಲಿ ಬಿಡುಗಡೆಯಾಗುವುದರಿಂದ ಸಾರಜನಕ ಸರಿಯಾಗಿ ಮಣ್ಣಿನ ಕಣಗಳಿಗೆ ಸೇರಿಕೊಳ್ಳುತ್ತದೆ.
ಬಿ. ಬೇವಿನೆಣ್ಣೆ ಯೂರಿಯಾ ಮಣ್ಣಿನಲ್ಲಿ ಕರಗುವುದನ್ನು ನಿಧಾನಗೊಳಿಸುತ್ತದೆ.
ಸಿ. ನೈಟ್ರಸ್ ಆಕ್ಸೈಡ್ ಮುಕ್ತ ಹೊಲಗಳಿಂದ ಬಿಡುಗಡೆಯಾಗುವುದಿಲ್ಲ
ಡಿ. ಇದು ಕಳೆನಾಶಕ ಹಾಗೂ ಗೊಬ್ಬರವಾಗುತ್ತದೆ.

ಉ: ಡಿ


100. ಈ ಕೆಳಗಿನ ಸರಿ ಹೇಳಿಕೆಗಳನ್ನು ಗುರುತಿಸಿ.
1. ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಆಯಾ ರಾಜ್ಯದ ರಾಜ್ಯಪಾಲರು ನೇಮಿಸುತ್ತಾರೆ.
2. ರಾಜ್ಯದ ಮುಖ್ಯ ಕಾರ್ಯದರ್ಶಿಯು ಸೀಮಿತ ಅಧಿಕಾರ ಅವಧಿಯ ಹೊಂದಿರುತ್ತಾರೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಡಿ

---- ಸಶೇಷ---

(courtesy :ಕನ್ನಡದಲ್ಲಿ ಐಎಎಸ್ & ಕೆಎಎಸ್ ಮುಖ್ಯ ಪರೀಕ್ಷೆ)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-4: ಸಾಮಾನ್ಯ ಅಧ್ಯಯನ-3 (PART -IX)... ಮುಂದುವರೆದ ಭಾಗ. ( KAS Mains General Studies Paper IV Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-4: ಸಾಮಾನ್ಯ ಅಧ್ಯಯನ-3 (PART -IX)... ಮುಂದುವರೆದ ಭಾಗ.
( KAS Mains General Studies  Paper IV  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

★ ಸಾಮಾನ್ಯ ಅಧ್ಯಯನ ಪತ್ರಿಕೆ 3
(General Studies Paper 3)


... ಮುಂದುವರೆದ ಭಾಗ.


●. ಪತ್ರಿಕೆ-4.    ಸಾಮಾನ್ಯ ಅಧ್ಯಯನ-3


●. ವಿಭಾಗ-1:
ಭಾರತದ ಅಭಿವೃದಿಯಲ್ಲಿ ಸಾರ್ವಜನಿಕ ಕ್ಷೇತ್ರದ ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದ ಪಾತ್ರ ಮತ್ತು ಪ್ರಭಾವ.


1. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಗಳು

ವಿಜ್ಞಾನ ಮತ್ತು ತಂತ್ರಜ್ಞಾನದ (ಎಸ್ ಮತ್ತು ಟಿ) ಉತ್ಕೃಷ್ಟ ಮತ್ತು ಹೊರಹೊಮ್ಮುತ್ತಿರುವ ಕ್ಷೇತ್ರಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಹೆಚ್ಚುವರಿ ಮೌಲ್ಯ, ಭಾರತದಲ್ಲಿ ಪ್ರಸಕ್ತ ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಗಳು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಯಂತ್ರವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವ – ಕೈಗಾರಿಕಾ ಅಭಿವೃದ್ಧಿ ಮತ್ತು ನಗರೀಕರಣ – ವಿಜ್ಞಾನ ಮತ್ತು ತಂತ್ರಜ್ಞಾನದ ರಾಷ್ಟ್ರೀಯ ನೀತಿ; ಕಾಲಕಾಲಕ್ಕೆ ನೀತಿಯಲ್ಲಿ ಬದಲಾವಣೆ, ತಂತ್ರಜ್ಞಾನದ ಮಂಡಳಿ-ಐಸಿಟಿ: ಮೂಲ ಕಂಪ್ಯೂಟರ್ಗಳು, ಸಂವಹನ, ದೂರವಾಣಿ ಮತ್ತು ದೂರದರ್ಶನ - ಬ್ರಾಡ್ಬ್ಯಾಂಡ್, ಅಂತರ್ಜಾಲ ಮತ್ತು ವೆಬ್-ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳು, ವ್ಯಾಪಾರ ಹೊರಗುತ್ತಿಗೆ ಪ್ರಕ್ರಿಯೆ (ಬಿಪಿಒ), ಆರ್ಥಿಕ ಮತ್ತು ಉದ್ಯೋಗದ ಬೆಳವಣಿಗೆ ಇ-ಆಡಳಿತ, ಇ-ವಾಣಿಜ್ಯ ಮತ್ತು ಇ-ಕಲಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಗ್ರಾಮೀಣ ಅನ್ವಯಗಳು, ಅಂಕೀಯ ಬಿರುಕಿನ ಅಂತರ (ಡಿಜಿಟಲ್ ಡಿವೈಡ್) ಮತ್ತು ಅದರ ತಡೆಗಟ್ಟುವಿಕೆ-ಸಮೂಹ ಮಾಧ್ಯಮಗಳಲ್ಲಿ ಗಣಕಯಂತ್ರಗಳು.


2. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ:

ಜಾಗತಿಕ ಬಾಹ್ಯಾಕಾಶದ ಕಾರ್ಯಕ್ರಮಗಳ ಸಂಕ್ಷಿಪ್ತ ಇತಿಹಾಸ, ಮತ್ತು ಪುಸ್ತಕ ಬಾಹ್ಯಾಕಾಶ ಕಾರ್ಯಕ್ರಮಗಳು.
ಭಾರತದಲ್ಲಿ ಬಾಹ್ಯಾಕಾಶದ ಕಾರ್ಯಕ್ರಮಗಳು-ಐಎನ್ಎಸ್ಎಟಿ, (ಇನ್ಸ್ಯಾಟ್) ಐಆರ್ಎಸ್ ವ್ಯವಸ್ಥೆಗಳ, ಇಡಯುಎಸ್ಎಟಿ, (ಎಜುಸ್ಯಾಟ್) ಮತ್ತು ಚಂದ್ರಯಾನ-1 ಇತ್ಯಾದಿ ಮತ್ತು ಭವಿಷ್ಯದ ಕಾರ್ಯಕ್ರಮ.
ಶಿಕ್ಷಣ, ಕೃಷಿ ಮತ್ತು ಇತರ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳ ವಿಶೇಷ ಉಲ್ಲೇಖಗಳೊಂದಿಗೆ ಅನ್ವಯಿಸಿ ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ.


3. ಇಂಧನ ಸಂಪನ್ಮೂಲಗಳು:

ಭಾರತೀಯ ಇಂಧನ ಸನ್ನಿವೇಶಗಳು-ಜಲವಿದ್ಯುತ್, ಉಷ್ಣ ಅಣು ಮತ್ತು ನವೀಕರಿಸಬಹುದಾದ; ಅದರ ಸಾಮಥ್ರ್ಯದ ರಕ್ಷಾಕವಚ ಮತ್ತು ಆಯ್ಕೆಗಳು.
ನವೀಕರಿಸಬಹುದಾದ ಮುಖ್ಯವಾದ ಇಂಧನ ಸಂಪನ್ಮೂಲಗಳ - ಸೌರ, ಗಾಳಿ, ಸಣ್ಣ/ಅತಿಸಣ್ಣ/ಸೂಕ್ಷ್ಮ ಜಲವಿದ್ಯುತ್, ಜೀವರಾಶಿ (Biomass) ತ್ಯಾಜ್ಯ ಆಧಾರಿತ, ಭೂಶಾಖ (Geitgermal), ಉಬ್ಬರದ (tridal), ಹೈಡ್ರೋಜನ್ ಮತ್ತು ಇಂಧನ ಕೋಶಗಳು.
ಶಾಸನಗಳನ್ನು ಸಮರ್ಥಗೊಳಿಸುವುದು; ಆರ್ಥಿಕ ಮತ್ತು ಪ್ರಕ್ರಿಯಾ ಪ್ರೋತ್ಸಾಹ ಧನಗಳು ಮತ್ತು ಹೂಡಿಕೆದಾರರಿಗೆ ವ್ಯಾಪಾರ ಅವಕಾಶಗಳು.


4. ವಿಕೋಪಗಳು, ಉಪದ್ರವಕಾರಿಗಳು ಮತ್ತು ಮಾಲಿನ್ಯ:

ಹವಾಮಾನ ಬದಲಾವಣೆ - ಪ್ರವಾಹ, ಚಂಡಮಾರುತ, ಸುನಾಮಿ, ನೈಸರ್ಗಿಕ ಹಾಗೂ ಮಾನವನಿಂದಾಗುವ ವಿಕೋಪಗಳು ಮತ್ತು ವಿಪತ್ತು ನಿರ್ವಹಣೆ.
ಭಾರತದಲ್ಲಿ ಬೆಳೆ ವಿಜ್ಞಾನ, ಗೊಬ್ಬರಗಳು, ಉಪದ್ರವಕಾರಿಗಳು ಮತ್ತು ಬೆಳೆರೋಗಗಳ ನಿಯಂತ್ರಣ ಶುದ್ಧ ಕುಡಿಯುವ ನೀರು ಮತ್ತು ಸರಬರಾಜು
ನೈರ್ಮಲ್ಯ ಮತ್ತು ತ್ಯಾಜ್ಯ ವಿಲೇವಾರಿ
ನಗರೀಕರಣ, ಕೈಗಾರಿಕೀಕರಣ ಮತ್ತು ಮಾಲಿನ್ಯ ನಿಯಂತ್ರಣ


5. ಸಂಬಂಧಿಸಿದ ಸಂವೇದನೆಗಳು:

ಸರ್ವವ್ಯಾಪ್ತಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕ್ಷರತೆ
ಮಾನವೀಯ ಮೌಲ್ಯದೊಂದಿಗೆ ತಂತ್ರಜ್ಞಾನ
ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್ಡಿಐ)
ಜೆಡಿಪಿ ಯ ಬೆಳವಣಿಗೆ ಮತ್ತು ಕೊಡುಗೆ
ಸಂಸ್ಕೃತಿ ಮತ್ತು ದೇಶಿಯ ಜ್ಞಾನವನ್ನು ಸಂರಕ್ಷಣೆ ಮತ್ತು ಉನ್ನತಿಕರಿಸುವ ಸಂಬಂಧ.


6. ಜ್ಞಾನ ಸಮಾಜದ:

ಮಾನವ ಬಂಡವಾಳ, ಅದರ ಶಕ್ತಿ, ಶಿಕ್ಷಣ ನೀಡುವುದು, ಕೌಶಲ್ಯ ಮತ್ತು ಮೌಲ್ಯಗಳು
ಆರ್ಥಿಕ ಬೆಳವಣಿಗೆ, ಸಾಮಾಜಿಕ ಅಭಿವೃದ್ಧಿ, ಸಾಂಸ್ಕೃತಿಕ ಏಳಿಗೆ ಮತ್ತು ರಾಜಕೀಯ ಸಬಲೀಕರಣದಲ್ಲಿ ಜ್ಞಾನದ ಪಾತ್ರ.
ಜ್ಞಾನದ ಮೂಲಕ ಗುರಿಗಳ ಸಾಧನೆ; ಬಡತನದ ನಿರ್ಮೂಲನೆ; ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ; ಲಿಂಗ ಸಮಾನತೆ.


7. ಗ್ರಾಮೀಣ ಉನ್ನತೀಕರಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ:

ಗ್ರಾಮೀಣ ಪ್ರದೇಶಗಳಲ್ಲಿ ಆಧುನಿಕ ಮೂಲಸೌಕರ್ಯಗಳು, ಭೌತಿಕ ವಿಭಾಗ, ವಿದ್ಯುನ್ಮಾನ, ಜ್ಞಾನ ಮತ್ತು ಆರ್ಥಿಕ ಸಂಪರ್ಕವನ್ನು ಸ್ಥಾಪಿಸುವುದು.
ಪ್ರಾದೇಶಿಕ ಭಾಷೆ: ಐಸಿಟಿ ಯಲ್ಲಿ ಬಳಕೆ.
ತೋಟಗಾರಿಕೆ: ಸಂಶೋಧನೆ ಮತ್ತು ಅಭಿವೃದ್ಧಿಯೊಂದಿಗೆ ಹೈಬ್ರೀಡ್ ಬೀಜ ಉತ್ಪಾದನೆ; ಹಣ್ಣು ಮತ್ತು ತರಕಾರಿ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸುವುದು, ಪ್ಯಾಕೇಜಿಂಗ್ ಮತ್ತು ಮಾರಾಟ ಮಾಡುವಿಕೆ.
ಕೃಷಿ ಆಹಾರ ಸಂಸ್ಕರಣೆ: ಗ್ರಾಮದ ಸಮೂಹಗಳನ್ನು ರೂಪಿಸುವಿಕೆ ಮತ್ತು ಆಹಾರ ಸಂಗ್ರಹ ಸ್ಥಾಪಿಸುವುದು; ಮತ್ತು ಆಹಾರ ಪ್ಯಾಕ್ ಮಾಡುವುದು ಮತ್ತು ಮಾರಾಟ.
ಜೈವಿಕ ಇಂಧನ ಸಾಗುವಳಿ ಮತ್ತು ತೆಗೆಯುವಿಕೆ.
ವೈಜ್ಞಾನಿಕ ನೀರು ಸಂಗ್ರಹಣೆ.

━━━━━━━━━━━━━━━━━━━━━━━━━━━━━━━━━━━━━━━━━━━━━


●. ವಿಭಾಗ-2:
ಸ್ವಾಭಾವಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ ವಿಜ್ಞಾನದ ಆರೋಗ್ಯ ಮತ್ತು ಶುಚಿತ್ವದಲ್ಲಿ ಮುಂದುವರೆದ ಮತ್ತು ಆಧುನಿಕ ದೋರಣೆಗಳು – (ಏಳು ಘಟಕಗಳು)


1. ಸ್ವಾಭಾವಿಕ ವಿಜ್ಞಾನ:

ಸಸ್ಯಗಳು - ಬೆಳೆಗಳ ಸಸ್ಸಗಳು, ಅರಣ್ಯ ರೂಪಗಳು, ವೈದ್ಯಕೀಯ ಮತ್ತು ಸುಗಂಧದ ಸಸ್ಯಗಳು, ಸಸ್ಯಗಳ ಉಪಯುಕ್ತತೆ ಮತ್ತು ಮಾನವ ವ್ಯವಹಾರಗಳು (ಉಪಯುಕ್ತತೆ), ದ್ಯುತಿ ಸಂಶ್ಲೇಷಣೆ, ಉತ್ಸರ್ಜನ (Transpiration), ಹಾನಿಕಾರಕ ಸಸ್ಯಗಳು.
ಪ್ರಾಣಿಗಳ ಸಾಮಾನ್ಯ ವರ್ಗೀಕರಣ - ಸಾಕು ಪ್ರಾಣಿಗಳು ಮತ್ತು ವನ್ಯ ಮೃಗಗಳು. ಪ್ರಾಣಿಗಳು ಮತ್ತು ಮಾನವ ವ್ಯವಹಾರಗಳ ಉಪಯುಕ್ತತೆಗಳು (ಉಪಯುಕ್ತತೆ).
ಸೂಕ್ಷ್ಮ ಜೀವಿಗಳು: ಸಾಮಾನ್ಯ ಬ್ಯಾಕ್ಟೀರಿಯಾ, ವೈರಸ್, ಶೀಲೀಂಧ್ರಗಳು (Fungi), ಮನುಷ್ಟವರ್ಗದ ಮೇಲೆ ಅದರ ಪ್ರಯೋಜನಕಾರಿ ಮತ್ತು ಹಾನಿಕಾರಕ ಪರಿಣಾಮ.


2. ಕೃಷಿ ವಿಜ್ಞಾನ:

ರಾಷ್ಟ್ರೀಯ ಮತ್ತು ರಾಜ್ಯದ ಅರ್ಥವ್ಯವಸ್ಥೆಯಲ್ಲಿ ಕೃಷಿ ಸನ್ನಿವೇಶ ಮತ್ತು ಕೃಷಿಯ ಪ್ರಾಮುಖ್ಯತೆ, ಬೆಳೆ ಉತ್ಪಾದನೆ ಮತ್ತು ಸಂರಕ್ಷಣೆ ರಾಸಾಯನಿಕ ಗೊಬ್ಬರ ಮತ್ತು ಸಾವಯವ ಗೊಬ್ಬರ (ವರ್ಮಿ ಕಾಂಪೋಸ್ಟ್), ಕೃಷಿ ಉದ್ಯಮಗಳ ವೆಚ್ಚ ಲಾಭ ಮತ್ತು ಹೂಡಿಕೆ ವಿಶ್ಲೇಷಣೆ, ಉತ್ಪಾದನೆ ಮತ್ತು ಉತ್ಪಾದಕತೆ ವರ್ಧನೆ ಕಾರ್ಯಕ್ರಮಗಳು - ಹಸಿರು, ಬಿಳಿ, ಹಳದಿ, ನೀಲಿ ಕ್ರಾಂತಿಗಳು, ಸಾವಯವ ಕೃಷಿ ಮತ್ತು ಕೃಷಿ ಯಂತ್ರಗಳ ಇತ್ತೀಚಿನ ಪ್ರವೃತ್ತಿಗಳು. ಕೃಷಿ ವ್ಯವಸ್ಥೆ ಮತ್ತು ಅದಕ್ಕೆ ಆಧಾರವಾಗಿರುವುದು, ಕೃಷಿ ಸಂಸ್ಕರಣೆ ಮತ್ತು ಕೃಷಿಯಾಧಾರಿತ ಕೈಗಾರಿಕೆಗಳು, ಸುಗ್ಗಿಯ ನಂತರದ ತಂತ್ರಜ್ಞಾನ ಮತ್ತು ಮೌಲ್ಯ ವರ್ಧನೆ, ಭೂಮಿ ಮತ್ತು ಜಲ ಸಂಪನ್ಮೂಲಗಳ ನಿರ್ವಹಣೆ.


3. ತೋಟಗಾರಿಕೆ ಮತ್ತು ರೇಷ್ಮೆ ಕೃಷಿ:

ತೋಟಗಾರಿಕೆ ಪ್ರಾಮುಖ್ಯತೆ – ತೋಟಗಾರಿಕೆ - ಹೂವಿನ ಕೃಷಿ, ತರಕಾರಿಗಳು, ಹಣ್ಣುಗಳು, ತೋಟದ ಬೆಳೆಗಳು, ಮಸಾಲೆಗಳು, ಸುಗಂಧದ ಮತ್ತು ಔಷಧೀಯ ಸಸ್ಯಗಳ ಪ್ರಾಮುಖ್ಯತೆ, ಹೈಟೆಕ್ ತೋಟಗಾರಿಕೆ (ಹಸಿರು/ಪಾಲಿಮನೆ ಸಾಗುವಳಿ). ಸುಗ್ಗಿಯ ನಂತರ ನಿರ್ವಹಣೆ ಮತ್ತು ಮೌಲ್ಯವರ್ಧನೆ, ತೋಟಗಾರಿಕೆ ಅಭಿವೃದ್ಧಿಗೆ ವಿಶೇಷ ಸಂವರ್ಧನೆ ಕಾರ್ಯಕ್ರಮಗಳು.
ರೇಷ್ಮೆ ಕೃಷಿ: ಭಾರತ ಮತ್ತು ಕರ್ನಾಟಕದಲ್ಲಿ ರೇಷ್ಮೆ ಕೃಷಿಯ ಪ್ರಾಮುಖ್ಯತೆ, ಉಪ್ಪು ನೇರಳೆ (ಹಿಪ್ಪು ನೇರಳೆ) ಮತ್ತು ಉಪ್ಪು ನೇರಳೆಯಲ್ಲದ ರೇಷ್ಮೆ ಕೃಷಿ ಹಂಚಿಕೆ, (ಪ್ರದೇಶ, ಉತ್ಪಾದನೆ ಮತ್ತು ರಾಜ್ಯಾದ್ಯಂತ ಉತ್ಪಾದಕತೆ) ರೇಷ್ಮೆಗೂಡು ಉತ್ಪಾದನೆ.


4. ಜೈವಿಕ ತಂತ್ರಜ್ಞಾನದಲ್ಲಿ ಪ್ರಾರಂಭಗಳು:

ಜೈವಿಕ ತಂತ್ರಜ್ಞಾನದ ಪರಿಕಲ್ಪನೆ, ತಳೀಯ ಎಂಜಿನಿಯರಿಂಗ್ ಮತ್ತು ಕಾಂಡಕೋಶಗಳ ಸಂಶೋಧನ ಪರಿಚಯ ಮತ್ತು ವಿನಿಯೋಗ, ದ್ರವ್ಯ ತಳಿ ಮತ್ತು ಆಯ್ಕೆಗೆ ನೆರವಾದ ಮಾರ್ಕರ್, ಟ್ರಾನ್ಸ್ಜಿನಿಕ ಸಸ್ಯಗಳು (ಕುಲಾಂತರಿ ತಳಿ) ಮತ್ತು ಅದರ ಪ್ರಯೋಜನ, ಪರಿಸರ ಮತ್ತು ಸಮಾಜದ ಮೇಲೆ ಇದರ ಹಾನಿಕಾರಕ ಪರಿಣಾಮಗಳು, ಕೃಷಿಯಲ್ಲಿ ಜೈವಿಕ ತಂತ್ರಜ್ಞಾನ (ಜೈವಿಕ-ಗೊಬ್ಬರ, ಜೈವಿಕ-ಕ್ರಮಿನಾಶಕಗಳು, ಜೈವಿಕ-ಇಂಧನಗಳು, ಅಂಗಾಂಶ ಕೃಷಿ, ಕ್ಲೋನಿಂಗ್) ಆಹಾರ ಜೈವಿಕ-ತಂತ್ರಜ್ಞಾನ, ಆಹಾರ ಸುರಕ್ಷತೆ ಮತ್ತು ಸೂಕ್ಷ್ಮಜೀವಿಯ ಮಾನದಂಡಗಳು, ಆಹಾರ ಗುಣಮಟ್ಟದ ಮಾನದಂಡಗಳು, ಆಹಾರದ ಬಗ್ಗೆ ಕಾನೂನುಗಳು ಮತ್ತು ನಿಯಂತ್ರಣಗಳು.


5. ಪಶುಸಂಗೋಪನೆ (ಪಶು, ವೈದ್ಯಕೀಯ ಹೈನುಗಾರಿಕೆ ಮತ್ತು ಮೀನುಗಾರಿಕೆ ವಿಜ್ಞಾನ), ರಾಷ್ಟ್ರೀಯ ಮತ್ತು ರಾಜ್ಯದ ಆರ್ಥಿಕತೆಯಲ್ಲಿ ಜಾನುವಾರುಗಳ ಪ್ರಾಮುಖ್ಯತೆ, ದನ, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿಗಳು ಪ್ರಮುಖ ವಿದೇಶಿ ಮತ್ತು ಭಾರತೀಯ ತಳಿಗಳು.
ಹಾಲು ಉತ್ಪಾದನೆ ನಿರ್ವಹಣೆ ಮತ್ತು ಕ್ಷೀರಾಭಿವೃದ್ಧಿ, ಹಾಲು ಸಹಕಾರ ಸಂಘಗಳು ಮತ್ತು ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಅವುಗಳ ಪಾತ್ರ-ಅಮೂಲ್, ಕೆಎಂಎಫ್.

ಭಾರತದಲ್ಲಿ ಮೀನುಗಾರಿಕೆ ಸಂಪನ್ಮೂಲಗಳು ಮತ್ತು ಸಂಭವನೀಯ ಸಾಗರ ಮೀನುಗಾರಿಕೆ ಸಂಪನ್ಮೂಲಗಳು, ಭಾರತದ ಪ್ರತ್ಯೇಕ ಆರ್ಥಿಕ ವಲಯ, ಕರಾವಳಿ ಜಲಚರ ಸಂಸ್ಕೃತಿ ಮತ್ತು ಕಡಲ ಸಂಸ್ಕೃತಿ, ಒಳನಾಡ ಜಲಸಂಪನ್ಮೂಲಗಳು, ವಾಣಿಜ್ಯ ಸ್ವರೂಪದಲ್ಲಿ ಮುಖ್ಯವಾಗಿರುವ ಮೀನುಗಳು, ಜವಾಬ್ದಾರಿಯುತ ಮೀನುಗಾರಿಕೆ, ಅಲಂಕಾರಿಕ ಮೀನು ಉತ್ಪಾದನೆ, ಪಶು ಸಂಪತ್ತು ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಗಣಮಟ್ಟ ನಿಯಂತ್ರಣ.


6. ಕೃಷಿ ಅಭಿವೃದ್ಧಿ ನೀತಿಗಳು, ಕಾರ್ಯಕ್ರಮಗಳು ಮತ್ತು ವ್ಯಾಪಾರ:

ರಾಷ್ಟ್ರದ ಮತ್ತು ಕರ್ನಾಟಕ ರಾಜ್ಯದ ಕೃಷಿನೀತಿಗಳ ಮುಖ್ಯ ಲಕ್ಷಣಗಳು, ಕೃಷಿ ಬೆಲೆ ನೀತಿ, ರಾಷ್ಟ್ರೀಯ ಬೀಜ ನೀತಿ, ಕೃಷಿ ಸಾಲನೀತಿ, ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆ (ಎನ್ಎಆರ್ಎಸ್) ಭಾರತದಲ್ಲಿ ರೈತರ ಅಭಿವೃದ್ಧಿ ಕಾರ್ಯಕ್ರಮಗಳು, ಕೃಷಿ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳು, ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಕೃಷಿ ವ್ಯಾಪಾರೋದ್ಯಮದ ಅಭಿವೃದ್ಧಿ/ಬಲಪಡಿಸುವುದು ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಗುಣಮಟ್ಟ, ಬೆಳೆ ವಿಮೆ ಯೋಜನೆ – ರಾಷ್ಟ್ರೀಯ ಕೃಷಿ ವಿಮಾಯೋಜನೆ (ಎನ್ಎಐಎಸ್), ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ಡಬ್ಲೂಬಿಸಿಐಎಸ್), ಆಹಾರ ಭದ್ರತೆ, ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ, ಕೃಷಿ ರಫ್ತು ಸಾಮಥ್ರ್ಯ-ತೋಟಗಾರಿಕೆ-ಜಾನುವಾರು ಉತ್ಪನ್ನಗಳು, ಕೃಷಿಯ ವಾಣಿಜ್ಯೀಕರಣ ಮತ್ತು ಜಾಗತೀಕರಣ-ಡಬ್ಲೂಟಿಓ, ಎಒಎ (ಕೃಷಿ ಒಪ್ಪಂದ).


7. ಆರೋಗ್ಯ ಮತ್ತು ನೈರ್ಮಲ್ಯ:

ಮಾನವ-ಜೀರ್ಣಕಾರಿ, ರಕ್ತಪರಿಚಲನೆ, ಉಸಿರಾಟ, ವಿಸರ್ಜಕಾಂಗಗಳು ಮತ್ತು ಸಂತಾನೋತ್ಪತ್ತಿಯ ವ್ಯವಸ್ಥೆಗಳು, ಅಲೋಪತಿ, ಭಾರತದ ವೈದ್ಯ ಪದ್ಧತಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ (ಆಯುಶ್), ಎನ್ಆರ್ಎಚ್ಎಂ, ರಾಷ್ಟ್ರೀಯ ಎಚ್ಐವಿ ಕಾರ್ಯಕ್ರಮ, ಕ್ಷಯ ರೋಗ ಕಾರ್ಯಕ್ರಮ, ಪಿ ಮತ್ತು ಎಸ್ಎಂ (ನಿವಾರಣೆ ಮತ್ತು ಸಾಮಾಜಿಕ ಔಷಧ), ರೋಗಗಳು-ಸೋಂಕು ರೋಗಗಳು, ಸಾಂಕ್ರಾಮಿಕ ರೋಗಗಳು, ಸ್ಥಳೀಯ ರೋಗಗಳು, ಅಂಟು ರೋಗಿಯಿಂದ ಉಂಟಗುವ ರೋಗಗಳು, ಸುಕ್ಷ್ಮ ಜೀವಿಗಳ ವಿವಿಧ ಗುಂಪುಗಳಿಂದ ಉಂಟಾದ ಸೋಂಕುಗಳ ಬಗ್ಗೆ ಸಾಮಾನ್ಯ ಜ್ಞಾನ-ಜಠರ, ಕಾಲರ, ಕ್ಷಯ, ಮಲೇರಿಯಾ, ವೈರಸ್ ಸೋಂಕುಗಳು, ಎಚ್ಐವಿ, ಮಿದುಳಿನ ಉರಿಯೂತ (ಮೆದಳು ಜ್ವರ), ಚಿಕನ್ಗುನ್ಯಾ, ಹಕ್ಕಿಜ್ವರ, ಡೆಂಗ್ಯೂ, ಗಲಭೆ ಸಮಯದಲ್ಲಿ ಪ್ರತಿಬಂಧಕ ಕ್ರಮಗಳು. ಲಸಿಕೆಗಳು, ರಕ್ಷಣೆಯ ಪ್ರಸ್ತಾವನೆ, ಡಿಪಿಟಿ ಉತ್ಪಾದನೆ ಮತ್ತು ರೇಬೀಸ್ ಲಸಿಕೆಗಳು ಮತ್ತು ಹೆಪಟೈಟಿಸ್ ಲಸಿಕೆ, ರೋಗ ಲಕ್ಷಣ ನಿರ್ಣಯದಲ್ಲಿ ಪ್ರತಿರಕ್ಷೆ ವಿಧಾನ ಅನ್ವಯತೆ, ಆರೋಗ್ಯ ಜಾಗೃತಾ ಕಾರ್ಯಕ್ರಮ, ಇತ್ಯಾದಿ.

━━━━━━━━━━━━━━━━━━━━━━━━━━━━━━━━━━━━━━━━━━━━━


●. ವಿಭಾಗ-3:
ಪರಿಸರ ಮತ್ತು ಪರಿಸರ ವಿಜ್ಞಾನದಲ್ಲಿ ಅಭಿವೃದ್ಧಿಯ ಸವಾಲುಗಳು ಮತ್ತು ವಿಷಯಗಳು (ಆರು ಘಟಕಗಳು)


1. ಪರಿಸರದ ಭಾಗಗಳು:

ಅಭಿವೃದ್ಧಿ ಮತ್ತು ರಕ್ಷಣೆ, ಅರಣ್ಯ ಸಂರಕ್ಷಣೆ ಮತ್ತು ಪರಿಸರವಾದ ವನ್ಯಜೀವಿ ಸಂರಕ್ಷಣೆ, ಪ್ರಜೆಕ್ಟ್ ಟೈಗರ್ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು, ಅರಣ್ಯ ಮತ್ತು ಪರಿಸರದಲ್ಲಿ ಗಣಿಗಾರಿಕೆ ಪರಿಣಾಮ, ಕೆಂಪು ಅಂಕಿಅಂಶ ಪುಸ್ತಕ; ವಿನಾಶದಂಚಿನಲ್ಲಿರುವ ಸಸ್ಯ ತಳಿಗಳು, ಪರಿಸರ ಪ್ರವಾಸೋದ್ಯಮ ಮತ್ತು ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳು.


2. ಸ್ವಾಭಾವಿಕ ಸಂಪನ್ಮೂಲಗಳು:

ಅರಣ್ಯ-ಅರಣ್ಯದ ಬಗೆಗಲು ಮತ್ತು ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಸಂಪನ್ಮೂಲಗಳು ಜಲಸಂಪನ್ಮೂಲಗಳು-ಪ್ರವಾಹ ಮತ್ತು ಬರ ಸಂಭವಗಳು, ಜಲಸಂಪನ್ಮೂಲ ನಿರ್ವಹಣೆ, ಭೂ ಸಂಪನ್ಮೂಲಗಳು ಮಳೆ ನೀರು ಸಂಗ್ರಹ, ಮೂಲಸೌಕರ್ಯ ಅಭಿವೃದ್ಧಿ-ಅಣೆಕಟ್ಟುಗಳು, ರಸ್ತೆಗಳು, ರೈಲು ಕಂಬಿಗಳು, ಸೇತುವೆಗಳು, ಕೈಗಾರಿಕೆ, ನಗರೀಕರಣ ಮತ್ತು ತ್ಯಾಜ್ಯ ನೀರಿನ ನಿರ್ವಹಣೆ, ಸ್ವಾಧೀನತೆ ಮತ್ತು ಪುನರ್ವಸತಿ ಮತ್ತು ಮಾನವ ಹಸ್ತಕ್ಷೇಪಗಳ ಕಾರಣವಾದ ಇತರ ವಿಷಯಗಳು ಮತ್ತು ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳು.


3. ಪರಿಸರ ಪದ್ಧತಿ ಮತ್ತು ಜೀವ ವೈವಿಧ್ಯತೆ -

ಪರಿಸರ ವಿಜ್ಞಾನ - ಪರಿಸರ ವಿಜ್ಞಾನದ ಮೂಲ ಪರಿಕಲ್ಪನೆಗಳು, ಪರಿಸರ ಪದ್ಧತಿ, ಆಹಾರ ಸರಪಳಿ, ಜೀವ ವೈವಿಧ್ಯತೆ ಮತ್ತು ಅದರ ಸಂರಕ್ಷಣೆ, ಜೀವ ವೈವಿಧ್ಯತೆಯ ಅಪಾಯದ ಸ್ಥಳಗಳು, ವೈವಿಧ್ಯತೆಯ ಅಪಾಯಗಳು, ಅರಣ್ಯ ಸಮರ್ಥನೀಯ ಅಭಿವೃದ್ಧಿ ಮತ್ತು ನಿರ್ವಹಣೆ, ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳು, ಐಪಿಆರ್.


4. ಪರಿಸರ ಮಾಲಿನ್ಯ ಮತ್ತು ಘನ ತ್ಯಾಜ್ಯ ವಿರ್ವಹಣೆ –

ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ, ಶಬ್ದಮಾಲಿನ್ಯ ಮತ್ತು ಪರಿಹಾರಗಳು, ಘನತ್ಯಾಜ್ಯ ವಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆಯ ವಿಧಗಳು, ಘನತ್ಯಾಜ್ಯ ಉತ್ಪಾದನೆ ಮೇಲೆ ಪರಿಣಾಮ ಬೀರುವ ಅಂಶಗಳು, ಘನತ್ಯಾಜ್ಯ ಪರಿಣಾಮ, ಪುನಃಬಳಕೆ ಮತ್ತು ಮರುಉಪಯೋಗಿಸುವಿಕೆ. ಸಂಬಂಧಪಟ್ಟ ಯಾವುದೇ ಪ್ರಸ್ತುತ ವಿಷಯಗಳು ಪರಿಸರ ಸಂರಕ್ಷಣೆ ಅಧಿನಿಯಮ, ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ), ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಜಲಮಾಲಿನ್ಯ ತೆರಿಗೆ ಅಧಿನಿಯಮ.


5. ಪರಿಸರ ಮತ್ತು ಮಾನವ ಆರೋಗ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ -

ಹವಾಗುಣ, ಬದಲಾವಣೆ, ತೀಕ್ಷ್ಣ ಮಳೆಗಳು, ಜಾಗತಿಕ ತಾಪಮಾನ, ಬರಡು ಭೂಮಿ ಸುಧಾರಣೆ, ಜಲಾನಯನ ಪ್ರದೇಶ ನಿರ್ವಹಣೆ, ಸುಸ್ಥಿರ ಸಮರ್ಥನೀಯ ಅಭಿವೃದ್ಧಿಗಾಗಿ ಜಲಾನಯನ ಪ್ರದೇಶದ ಪ್ರಸ್ತಾವನೆ, ನದಿಗಳಿಗೆ ಸಂಪರ್ಕ ಕಲ್ಪಿಸುವುದು, ನೀರಿನ ಬಿಕ್ಕಟ್ಟು, ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳಂಥ ಜಾಗತಿಕ ಪರಿಸರಾತ್ಮಕ ವಿಷಯಗಳು.


6. ರಾಜ್ಯ ಸಮುದಾಯ -

ನಾಗರಿಕ ಸಮಾಜದ ಪ್ರಕ್ರಿಯೆಗಳು, ಜಂಟಿ ಅರಣ್ಯ ನಿರ್ವಹಣಾ ವ್ಯವಸ್ಥೆ - ಸಮುದಾಯ ಭಾಗವಹಿಸುವಿಕೆ, ಅಭಿವೃದ್ಧಿ, ಸ್ಥಳಾಂತರ ಮತ್ತು ಪುನರ್ವಸತಿ, ವಿಪತ್ತು ನಿರ್ವಹಣೆ, ಸಮರ್ಥನೀಯ ಅರಣ್ಯ ಅಭಿವೃದ್ಧಿ, ಪ್ರವಾಹ, ಭೂಕಂಪ, ಬರ, ಸುನಾಮಿ, ಜಾಗತಿಕ ತಾಪಮಾನ, ಓಜೋನ್ ಪದರ, ಸಿಎಫ್ಸಿ, ಕಾರ್ಬನ್ಕ್ರೆಡಿಟ್.

... ಮುಂದುವರೆಯುವುದು.

(ಕೃಪೆ: ಯುಸಿಸಿ ಬೆಂಗಳೂರು) 

Saturday 4 March 2017

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-3: ಸಾಮಾನ್ಯ ಅಧ್ಯಯನಗಳು-2 (PART -VIII) ( KAS Mains General Studies Paper III Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-3: ಸಾಮಾನ್ಯ ಅಧ್ಯಯನಗಳು-2 (PART -VIII)
( KAS Mains General Studies  Paper III  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

★ ಕೆಎಎಸ್ ಸಾಮಾನ್ಯ ಅಧ್ಯಯನ ಪತ್ರಿಕೆ 3
(KAS General Studies Paper III)

... ಮುಂದುವರೆದ ಭಾಗ.



●. ಪತ್ರಿಕೆ-3.    ಸಾಮಾನ್ಯ ಅಧ್ಯಯನಗಳು-2


●. ವಿಭಾಗ-1

ಭೌತಿಕ ಲಕ್ಷಣಗಳು ಮತ್ತು ಸ್ವಾಭಾವಿಕ ಸಂಪನ್ಮೂಲಗಳು

ವಿಶ್ವ ಭೂಗೋಳಶಾಸ್ತ್ರ

1. ಭೂ ಮಂಡಲ -
ಸೌರಮಂಡಲದಲ್ಲಿ ಭೂಮಿಯ ಸ್ಥಾನ, ಬಂಡೆಗಳು, ಭೂಕಂಪಗಳು, ಜ್ವಾಲಮುಖಿಗಳು, ಶಿಲಾ ಘಲಕಗಳ ಸಂಚಲನ, ಸವೆತ, ಕಾರಕಗಳು. ವಾಯುಮಂಡಲ - ರಚನೆ ಮತ್ತು ಸಂಯೋಜನೆ - ಹವಾಮಾನ ಮತ್ತು ವಾಯುಗುಣದ ಅಂಶಗಳು – ವ್ಯಾಪಕವಾದ ಹವಾಮಾನದ ವಿಧಗಳು. ಜಲಮಂಡಲ - ವಿಶ್ವ ಸಾಗರಗಳ ಲವಣಾಂಶ - ಸಾಗರ ಪ್ರವಾಹಗಳು ಮತ್ತು ಅಲೆಗಳು - ಸಾಗರ ನಿಕ್ಷೇಪಗಳು.

2. ಭೂ ಖಂಡಗಳ ಪ್ರಕೃತಿ ಗೋಚರ ವಿಷಯಗಳು ಮತ್ತು ಜನಸಾಂದ್ರತೆ ವಿವರಣೆ:
— ಪರ್ವತಗಳು, ನದಿಗಳು, ಅರಣ್ಯಗಳು, ಹುಲ್ಲುಗಾವಲು ಭೂಮಿಗಳು, ಮರುಭೂಮಿಗಳು, ಮಾನವ ಜನಾಂಗಗಳು, ಜನಸಂಖ್ಯೆಯ ಬದಲಾವಣೆ, ವಿತರಣೆ ಮತ್ತು ಜನಸಂಖ್ಯಾ ಪರಿವರ್ತನೆ, ಸಾಂದ್ರತೆ, ಲಿಂಗಾನುಪಾತ, ಜೀವನದ ಗುಣಮಟ್ಟ, ಜೀವಮಾನ ನಿರೀಕ್ಷೆ, ಸಾಕ್ಷರತೆ, ಜೀವನದ ಗುಣಮಟ್ಟ ಮತ್ತು ವಲಸೆ.

ಭಾರತ ಭೂಗೋಳಶಾಸ್ತ್ರ

3. ಭಾರತದ ಭೌಗೋಳಿಕತೆ:
ಹವಾಗುಣ, ನದಿಗಳು, ಮಣ್ಣು, ನೈಸರ್ಗಿಕ ಸಸ್ಯಗಳು,ಖನಿಜ ಸಂಪನ್ಮೂಲಗಳು: ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ – ತಾಮ್ರ ಮತ್ತು ಬಾಕ್ಸೈಟ್, ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ. ಪರಮಾಣು ನಿಕ್ಷೇಪಗಳು, ಮುಖ್ಯ ಬೆಳೆಗಳು: ಧನ್ಯಗಳು, ಸಣ್ಣ ಕಾಳುಗಳು, ಎಣ್ಣೆ ಬೀಜಗಳು, ತೋಟದ ಬೆಳೆಗಳು, ವಾಣಿಜ್ಯ ಬೆಳೆಗಳ ಹಂಚಿಕೆ ಮತ್ತು ಉತ್ಪಾದನೆ, ಭಾರತೀಯ ಜನಸಂಖ್ಯಾಶಾಸ್ತ್ರ - ಬೆಳವಣಿಗೆ, ರಚನೆ, ಹಂಚಿಕೆ, ಸಾಂದ್ರತೆ, ಮಾನವ ಅಭಿವೃದ್ಧಿ ಸೂಚ್ಯಂಕ ಜನಸಂಖ್ಯಾ ಶಾಸ್ತ್ರದ ದತ್ತಾಂಶ.


4. ಕೈಗಾರಿಕಾ ಯೋಜನೆ ಮತ್ತು ಅಭಿವೃದ್ಧಿ:
ಭಾರೀ, ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಬೆಲವಣಿಗೆ ಮತ್ತು ಹಂಚಿಕೆ - ಭಾರತದ ಕೈಗಾರಿಕಾ ಪ್ರದೇಶಗಳು, ಕೈಗಾರಿಕಾ ಮೂಲ ಸೌಕರ್ಯ – ರೈಲ್ವೆಗಳು, ರಸ್ತೆಗಳು ಮತ್ತು ಬಂದರುಗಳು, ಹಿಂದುಳಿದ ಪ್ರದೇಶಗಳು ಮತ್ತು ಗ್ರಾಮೀಣ ಕೈಗಾರೀಕೀಕರಣ ಪ್ರಾದೇಶಿಕ ಯೋಜನೆ ಮತ್ತು ಅಭಿವೃದ್ಧಿ ಬುಡಕಟ್ಟು ಮತ್ತು ಗುಡ್ಡಗಾಡು ಪ್ರದೇಶಗಳ, ಬರಪೀಡಿತ ಪ್ರದೇಶಗಳು, ಅಚ್ಚುಕಟ್ಟು ಪ್ರದೇಶಗಳು ಮತ್ತು ಜಲಾಯನ ಪ್ರದೇಶಗಳು, ಪಟ್ಟಣಗಳು ಮತ್ತು ನಗರಗಳ ವರ್ಗೀಕರಣ, ನಗರ ವಿನ್ಯಾಸ.


5. ಭೌಗೋಳಿಕ ವಿಭಾಗಗಳು:
ಹವಾಮಾನ, ನದಿಗಳು ಮಳೆ ಹಂಚಿಕೆ, ನೈಸರ್ಗಿಕ ಸಸ್ಯವರ್ಗ ಮತ್ತು ಮಣ್ಣು, ಕೃಷಿ ಮತ್ತು ಕೃಷಿ ಹವಾಮಾನ ಪ್ರದೇಶಗಳು, ಮುಖ್ಯ ಬೆಳೆಗಳು, ಕರ್ನಾಟಕದ ತೋಟ ಮತ್ತು ವಾಣಿಜ್ಯ ಬೆಳೆಗಳು, ಕರ್ನಾಟಕದ ಖನಿಜ ಸಂಪನ್ಮೂಲಗಳು, ವಿದ್ಯುತ್ ಮೂಲಗಳು (ಜಲ, ಸೌರ, ಪರಮಾಣು ಮತ್ತು ಗಾಳಿ) ಭಾರಿ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು, ಆಗ್ರೋ ಆಧಾರಿತ ಕೈಗಾರಿಕೆಗಳು, ಕರ್ನಾಟಕದ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಗಳು, ಭೌಗೋಳಿಕ ಮಾಹಿತಿ ವ್ಯವಸ್ಥೆ.


6. ನಗರ ಭೂಬಳಕೆ ನೀತಿ ಮತ್ತು ನಗರೀಕರಣ:
ಜನಸಂಖ್ಯಾ ವೈಶಿಷ್ಟ್ಯಗಳು, ಸಾಕ್ಷರತೆ ಮತ್ತು ನಗರೀಕರಣ, ಜನಸಂಖ್ಯಾ ಸಮಸ್ಯೆಗಳು ಮತ್ತು ನೀತಿಗಳು, ಸಾಕ್ಷರತೆ, ನಗರ ವರ್ಗೀಕರಣ ಮತ್ತು ನಗರ ಕ್ಷೇತ್ರಗಳ ಪ್ರಭಾವ, ಗ್ರಾಮೀಣ ನಗರ ಅಂಚಿನಲ್ಲಿರುವ ನಗರ ಬೆಳವಣಿಗೆಯ ಸಮಸ್ಯೆಗಳು, ಭೂಬಳಕೆ, ನಗರ ಯೋಜನೆ, ಕೊಳಚೆ ಮತ್ತು ನಗರ ವಸತಿ, ಆಂತರಿಕ ಮತ್ತು ಪ್ರದೇಶಿಕ ವ್ಯಾಪಾರ ಮತ್ತು ಗ್ರಾಮೀಣ ಮಾರುಕಟ್ಟೆಗಳ ಕೇಂದ್ರಗಳ ಪಾತ್ರ.

━━━━━━━━━━━━━━━━━━━━━━━━━━━━━━━━━━━━━━━━━━━━━


●. ವಿಭಾಗ-2

ಭಾರತದ ಸಂವಿಧಾನ ಅವಲೋಕನ (7 ಘಟಕಗಳು)

1. ಸಂವಿಧನದ ಸ್ವರೂಪ:
ಸಾಂವಿಧಾನಿಕ ಬೆಳವಣಿಗೆಗಳು, ಸಂವಿಧಾನದ ಪ್ರಮುಖ ಲಕ್ಷಣಗಳು: ಪೀಠಿಕೆ, ರಾಜ್ಯ ನೀತಿಯ ನಿರ್ದೇಶಕ ತತ್ವಗಳು, ಭಾರತೀಯ ಒಕ್ಕೂಟ, ಇತ್ಯಾದಿ.


2. ಮೂಲಭೂತ ಹಕ್ಕುಗಳು:
ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು, ಸಂವಿಧಾನಾತ್ಮಕ ಪರಿಹಾರದ ಹಕ್ಕುಸೂಕ್ತ ನಿರ್ಬಂಧಗಳು - ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯಗಳ ನಿಷೇಧ ಅಧಿನಿಯಮ, ರಾಷ್ಟ್ರೀಯ ಮತ್ತು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ.


3. ಕಾನೂನಾತ್ಮಕ ಅಧಿಕಾರಗಳ ಹಂಚಿಕೆ:
ಕೇಂದ್ರ ಮತ್ತು ರಾಜ್ಯ ನಡುವೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಆಡಳಿತಾತ್ಮಕ ಮತ್ತು ಆರ್ಥಿಕ ಸಂಬಂಧಗಳು, ಸಂವಿಧಾನಿಕ ಸಂಸ್ಥೆಗಳ ಅಧಿಕಾರಗಳು ಮತ್ತು ಪ್ರಕಾರ್ಯಗಳು, ರಾಜ್ಯಪಾಲರ ಅಧಿಕಾರಗಳು ಮತ್ತು ಪ್ರಕಾರ್ಯಗಳು – ಮಂತ್ರಿ ಪರಿಷತ್ತು ಮತ್ತು ಸಚಿವ ಸಂಪುಟ, ನ್ಯಾಯಿಕ ಪರಿಹಾರೋಪಾಯಗಳು.


4. ಏಕಸದನ ಮತ್ತು ದ್ವಸದನ:
ವಿಧಾನ ಮಂಡಲ ಪ್ರಕಾರ್ಯಗಳು ಮತ್ತು ಹೊಣೆಗಾರಿಕೆಯ ಬಿಕ್ಕಟ್ಟು, ಪ್ರತ್ಯಾಯೋಜಿತ ಶಾಸನ, ಕಾನೂನಾತ್ಮಕ ಕಾರ್ಯವಿಧಾನ ಮತ್ತು ವಿಧಾನ ಮಂಡಲದ ಸಮಿತಿಗಳು, ಪ್ರತ್ಯಾಯೋಜಿತ ಶಾಸನದ ಮೇಲೆ ಕಾನೂನಾತ್ಮಕ ಮತ್ತು ನ್ಯಾಯಾಂಗದ ನಿಯಂತ್ರಣ, ಆಡಳಿತಾತ್ಮಕ ಕ್ರಮದ ನ್ಯಾಯಿಕ ವಿಮರ್ಶೆ, ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (comptroller and Auditor General of India), ಭಾರತದ ಅಟ್ಟಾರ್ನಿ ಜನರಲ್.


5. ಸಂವಿಧಾನದ ಪ್ರಮುಖ ತಿದ್ದುಪಡಿಗಳು:
ಮೂಲ ರಚನೆಯ ಸಿದ್ಧಂತ, ತುರ್ತು ಪರಿಸ್ಥಿತಿಯ ಅವಕಾಶಗಳು ಮತ್ತು ವಿಕೇಂದ್ರಿಕರಣ, ಪಂಚಾಯತ್ ರಾಜ್, ಎಪ್ಪತ್ತಮೂರನೆ ಮತ್ತು ಎಪ್ಪತ್ತನಾಲ್ಕನೇ ತಿದ್ದುಪಡಿಗಳು ಇತ್ಯಾದಿ.


6. ಭಾರತದಲ್ಲಿ ಕಲ್ಯಾಣ ಪರಿಕಲ್ಪನೆ ವ್ಯವಸ್ಥೆ:
ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಮತ್ತು ಅವುಗಳ ಸಂಬಂಧಗಳು, ಆಸ್ತಿ ಹಕ್ಕು ಚುನಾವಣಾ ಆಯೋಗ, ಲೋಕಾ ಸೇವಾ ಆಯೋಗಗಳು, ಮಹಿಳಾ ಅಯೋಗ, ರಾಷ್ಟ್ರೀಯ ಮತ್ತು ಅಲ್ಪಸಂಖ್ಯಾತರ ಆಯೋಗ, ಹೊಂದುಳಿದ ವರ್ಗಗಳ ಆಯೋಗ, ಮಾನವ ಹಕ್ಕುಗಳ ಆಯೋಗ, ಹಣಕಾಸು ಆಯೋಗ, ಯೋಜನಾ ಆಯೋಗ, ರಾಷ್ಟ್ರೀಯ ಅಭಿವೃದ್ಧಿ ಮಂಡಳಿ.


7. ಕೇಂದ್ರ ರಾಜ್ಯದಡಿಯಲ್ಲಿನ ಸೇವೆಗಳು:
ಸರ್ಕಾರ ಮತ್ತು ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಸಂವಿಧನಾತ್ಮಕ ಅವಕಾಶಗಳು.

━━━━━━━━━━━━━━━━━━━━━━━━━━━━━━━━━━━━━━━━━━━━━


●. ವಿಭಾಗ-3

ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ – ಅಂತರಾಷ್ಟ್ರೀಯ ಸಂಬಂಧಗಳು (7 ಘಟಕಗಳು)


1. ಖಾಸಗಿ ಮತ್ತು ಸಾರ್ವಜನಿಕ ಆಡಳಿತ:
ಸಮಾಜದಲ್ಲಿ ಅದರ ಪಾತ್ರ, ಕಲೆ ಮತ್ತು ವಿಜ್ಞಾನದಲ್ಲಿ ಸಾರ್ವಜನಿಕ ಆಡಳಿತ, ಹೊಸ ಸಾರ್ವಜನಿಕ ಆಡಳಿತ ಮತ್ತು ಹೊಸ ಸಾರ್ವಜನಿಕ ನಿರ್ವಹಣೆ, ಪ್ರತಿಕ್ರಿಯಾಶೀಲ ಆಡಳಿತ, ಆಡಳಿತ ಮತ್ತು ನಿರ್ವಹಣೆ ನಡುವಿನ ವ್ಯತ್ಯಾಸ, ಸಾರ್ವಜನಿಕ ಮತ್ತು ಖಾಸಗಿ ಆಡಳಿತದ ನಡುವಿನ ವ್ಯತ್ಯಾಸ.


2. ಸಂಘಟನೆ ರಚನೆ:
ಸಿಬ್ಬಂದಿ, ಹಣಕಾಸು, ಆಡಳಿತಾತ್ಮಕ ಕಾನೂನು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ, ಜನಕಲ್ಯಾಣ ಆಡಳಿತ, ಭಾರತೀಯ ಆಡಳಿತದಲ್ಲಿ ಪ್ರದೇಶಗಳ ವಿವಾದಗಳು, ಅಭಿವೃದ್ಧಿ ಆಡಳಿತ.


3. ಸಾಂಸ್ಥಿತಿಕ ವರ್ತನೆ ಮತ್ತು ನಿರ್ವಹಣೆ ಪರಿಕಲ್ಪನೆಗಳು:
ಸಾಂಸ್ಥಿಕ ರಚನೆ, ವ್ಯವಸ್ಥೆಗಳು, ಪ್ರಕ್ರಿಯೆಗಳು, ತಂತ್ರ ಕುಶಲತೆ, ಕಾರ್ಯನೀತಿಗಳು ಮತ್ತು ಉದ್ದೇಶಗಳು, ನಿರ್ಧಾರ ತೆಗೆದುಕೊಳ್ಳುವುದು, ಸಂವಹನ, ಕೇಂದ್ರೀಕರಣ, ಅಧಿಕಾರದ ಪ್ರತ್ಯಾಯೋಜನೆ, ಹೊಣೆಗಾರಿಕೆ, ನಿಯಂತ್ರಣ.


4. ಔಪಚಾರಿಕ ಮತ್ತು ಅನೌಪಚಾರಿಕ ಸಂಘಟನೆ:
ಪ್ರಕಾರ್ಯಗಳ ನಿರ್ವಹಣೆ, ಹಣಕಾಸು, ಎಚ್ಆರ್ ವ್ಯಾಪಾರೋಧ್ಯಮ, ಉತ್ಪಾದನೆ, ನಾಯಕತ್ವ ಮತ್ತು ಪ್ರೇರಣೆ.


5. ನಿರ್ವಹಣೆ ಸಾಧನಗಳು ಮತ್ತು ತಂತ್ರಗಳು:
ಅನಿಶ್ಚಿತತೆ ಉಂಟಾದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಪಿಇಆರ್ಟಿ ಮತ್ತು ಸಿಪಿಎಂ, ಪಿಐಎಂಇ, ಪಿಓಎಸ್ಡಿ - ಸಿಓಆರ್ಬಿ, ಎಸ್ಡಬ್ಲ್ಯೂಒಟಿ ವಿಶ್ಲೇಷಣೆಗಳು, ಗುಣಮಟ್ಟ ಮತ್ತು ಮೌಲ್ಯನಿರ್ಣಯ ಕಾರ್ಯನಿರ್ವಹಣೆ, ಪಿಡಿಸಿಎ ಆವರ್ತ, ಸಿಬ್ಬಂದಿ ಕಾರ್ಯ ನೀತಿಗಳು, ಮಾನವ ಶಕ್ತಿ ಕಾರ್ಯನೀತಿ ಮತ್ತು ಯೋಜನೆ, ತರಬೇತಿ ಮತ್ತು ಅಭಿವೃದ್ಧಿ, ಸಂಘರ್ಷ ನಿರ್ವಹಣೆ, ಬದಲಾವಣೆ ಮತ್ತು ಅಭಿವೃದ್ಧಿಯ ನಿರ್ವಹಣೆ, ತಂಡ ರಚನೆ ಗುಣಮಟ್ಟದ ಉಪಕರಣಗಳು, (ಹೊಸ ಕಲ್ಪನೆಗಳನ್ನು ಚರ್ಚಿಸುವ ವಿಧನ, ನಾಮಿನಲ್ ಗ್ರೂಪ್ ಟೆಕನಿಕ್ (Group Techniques), ಪರೆಟೋ ಚಾರ್ಟ್, ಫಿಷ ಬೊನ್ ಚಿತ್ರ (Fishbone Diagram) ಮತ್ತು ಪ್ರೊಸಸ್ ಚಾರ್ಟ್.


6. ಆಡಳಿತಾತ್ಮಕ ಸುಧಾರಣೆಗಳು:
ಸಾರ್ವಜನಿಕ ಸೇವೆಯಲ್ಲಿ ನೀತಿ ಮತ್ತು ಮೌಲ್ಯಗಳು, ಸಾರ್ವಜನಿಕ ಸಂಬಂಧಗಳು, ಉತ್ತಮ ಆಡಳಿತ, ಹೊಣೆಗಾರಿಕೆ ಮತ್ತು ನಿಯಂತ್ರಣ, ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ಲೋಕಪಾಲ ಮತ್ತು ಲೋಕಾಯುಕ್ತ, ನಾಗರಿಕ ಕುಂದು ಕೊರತೆಗಳ ನಿವಾರಣೆಗಳು, ಜಿಲ್ಲಾಡಳಿತ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳು, ಅಭಿವೃದ್ಧಿ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಮಹಿಳೆಯ ಕಲ್ಯಾಣ ಕಾರ್ಯಕ್ರಮಗಳು, ಜನರ ಪಾಲ್ಗೋಳ್ಳುವಿಕೆ, ಆಡಳಿತಾತ್ಮಕ ಸುಧಾರಣೆಗಳ ಆಯೋಗಗಳು- ಕೇಂದ್ರ ಮತ್ತು ರಾಜ್ಯ.


7. ವಿಶ್ವಸಂಸ್ಥೆ ರಾಷ್ಟ್ರಗಳು ಮತ್ತು ವಿಶಿಷ್ಟ ಏಜೆನ್ಸಿಗಳು:
ಇತರ ಅಂತರಾಷ್ಟ್ರೀಯ ಸಂಘಟನೆಗಳು ಮತ್ತು ಏಜೆನ್ಸಿಗಳು, ಯುಎನ್ಓದ ಮೂಲ ಮತ್ತು ಅಭಿವೃದ್ಧಿ-ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪಾತ್ರ, ಸಾಮಾನ್ಯ ಸಭೆ, ಭದ್ರತಾ ಮಂಡಳಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿ, ಟ್ರಸ್ಟಿ ಶಿಫ್ ಕೌನ್ಸಿಲ್ (Trusteeship) ಅಂತರಾಷ್ಟ್ರೀಯ ನ್ಯಾಯಾಲಯ, ಯುಎನ್ ಮತ್ತು ಶಾಂತಿ ಪಾಲನಾ ನಿರ್ವಹಣೆಗಳು, ಯುಎನ್ ಮತ್ತು ನಿಶ್ಯಸ್ತ್ರೀಕರಣ, ಯುಎನ್ ಲಕ್ಷಣಗಳು, ಡಬ್ಲೂಎಚ್ಓ, ಐಎಲ್ಓ, ಎಫ್ಎಒ ಇತ್ಯಾದಿಗಳಂಥ ವಿಶೇಷ ಏಜೆನ್ಸಿಗಳು, ಐಎಮ್ಎಫ್ ನಂತ ಅಂತರಾಷ್ಟ್ರೀಯ ಸಂಸ್ಥೆಗಳು, ವಿಶ್ವಬ್ಯಾಂಕ್, ಎಡಿಬಿ, ಡಬ್ಲೂಟಿಒ, ಇಯು, ಎಎಸ್ಇಎಎನ್, ಸಾರ್ಕ್, ಎಯು, ಎನ್ಎಟಿಒ, ಎನ್ಎಎಮ್, ಓಪಿಇಸಿ, ಜಿ-8, ಐಎಇಎ ಇತ್ಯಾದಿಗಳು, ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಅಭಿವೃದ್ಧಿ ರಾಷ್ಟ್ರಗಳ ಪಾತ್ರ, ಭಾರತ ಮತ್ತು ಅದರ ನೆರೆಹೊರೆ ರಾಷ್ಟ್ರಗಳು ಇತ್ಯಾದಿ.

...ಮುಂದುವರೆಯುವುದು.

(ಕೃಪೆ : ಯುಸಿಸಿ ಬೆಂಗಳೂರು) 

Friday 3 March 2017

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ).. (33 ರಿಂದ 66 ಪ್ರಶ್ನೆಗಳು) (IAS GENERAL STUDIES PAPER I 2016)

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ).. (33 ರಿಂದ 66 ಪ್ರಶ್ನೆಗಳು)
(IAS GENERAL STUDIES PAPER I 2016)
•─━━━━━═══════════━━━━━─••─━━━━━═══════════━━━━━─•

★ ಐಎಎಸ್ ಪ್ರಶ್ನೆಪತ್ರಿಕೆ 2016
(IAS Question Paper I 2016))


2016 ನೇ ಸಾಲಿನ ಯು.ಪಿ.ಎಸ್.ಸಿ. ನಡೆಸಿದ ಸಿವಿಲ್ ಸರ್ವಿಸ್ ಪರೀಕ್ಷೆ (ಐಎಎಸ್) ಯ ಪತ್ರಿಕೆ -1 ನ್ನು ಉತ್ತರಗಳೊಂದಿಗೆ ಕನ್ನಡಕ್ಕೆ ಭಾಷಾಂತರ ಮಾಡಿದ್ದು,  ಸ್ಪರ್ಧಾರ್ಥಿಗಳಿಗೆ ಸಹಾಯವಾಗಬಹುದೆಂಬ ನಂಬಿಕೆ ನನ್ನದು.


...ಮುಂದುವರೆದ ಭಾಗ.


34. ವೈರಸ್ ಯಾವುದಕ್ಕೆ ಸೋಂಕು ಉಂಟುಮಾಡುತ್ತದೆ?
1. ಬ್ಯಾಕ್ಟೀರಿಯಾ
2. ಶಿಲೀಂದ್ರ
3. ಸಸ್ಯಗಳು
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 1 ಮತ್ತು 3
ಡಿ. 1, 2, 3

ಉ: ಡಿ


35. ಮೂಲ ಸವಕಳಿ ಮತ್ತು ಲಾಭ ವರ್ಗಾವಣೆ ಈಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ಸಂಪನ್ಮೂಲ ಭರಿತ ಆದರೆ ಹಿಂದುಳಿದ ಪ್ರದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಗಣಿಗಾರಿಕೆ
ಬಿ. ಬಹುರಾಷ್ಟ್ರೀಯ ಕಂಪನಿಗಳ ತೆರಿಗೆಕಳ್ಳತನವನ್ನು ಕಡಿಮೆ ಮಾಡುವುದು.
ಸಿ. ಬಹುರಾಷ್ಟ್ರೀಯ ಕಂಪನಿಗಳು ವಂಶವಾಹಿ ಸಂಪನ್ಮೂಲಗಳನ್ನು ಶೋಷಿಸುವುದು.
ಡಿ. ಯೋಜನೆ ರೂಪಿಸುವ ಹಾಗೂ ಅನುಷ್ಠಾನದಲ್ಲಿ ಪರಿಸರ ವೆಚ್ಚವನ್ನು ಪರಿಗಣಿಸದಿರುವುದು.

ಉ: ಬಿ


36. ಭಾರತದ ಮೊಟ್ಟಮೊದಲ ಹೂಡಿಕೆ ಹಾಗೂ ಉತ್ಫಾಧನಾ ವಲಯ ಎಲ್ಲಿ ಸ್ಥಾಪನೆಯಾಗಲಿದೆ?
ಎ. ಆಂಧ್ರಪ್ರದೇಶ
ಬಿ. ಗುಜರಾತ್
ಸಿ. ಮಹಾರಾಷ್ಟ್ರ
ಡಿ. ಉತ್ತರಪ್ರದೇಶ

ಉ: ಡಿ


37. ಭಾರತದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನಗಳ ಉದ್ದೇಶವೇನು?
1. ಖನಿಜಭರಿತ ಜಿಲ್ಲೆಗಳಲ್ಲಿ ಖನಿಜ ಹೊರತೆಗೆಯುವುದನ್ನು ಉತ್ತೇಜಿಸುವುದು.
2. ಗಣಿ ಕಾರ್ಯಾಚರಣೆಯಿಂದ ತೊಂದರೆಗೀಡಾದ ಜನರ ಹಿತಾಸಕ್ತಿಯನ್ನು ಕಾಪಾಡುವುದು.
3. ಖನಿಜ ಹೊರತೆಗೆಯಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡುವ ಅಧಿಕಾರ ನೀಡುವುದು.
ಎ. ಕೇವಲ 1 ಮತ್ತು 2
ಬಿ. 2 ಮಾತ್ರ
ಸಿ. 1 ಮತ್ತು 3
ಡಿ. 1, 2, 3

ಉ: ಬಿ


38. ಕೇಂದ್ರ ಸರ್ಕಾರದ ಸ್ವಯಂ ಯೋಜನೆಯ ಉದ್ದೇಶವೇನು?
ಎ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳಿಗೆ ಉತ್ತೇಜನ ನೀಡುವುದು.
ಬಿ. ಹೊಸ ಸ್ಟಾರ್ಟ್‍ಅಪ್ ಉದ್ಯಮಿಗಳಿಗೆ ಹಣಕಾಸು ನೆರವು ನೀಡುವುದು
ಸಿ. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ನೆರವಾಗುವುದು.
ಡಿ. ನಾಗರಿಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವುದು.

ಉ: ಡಿ


39. ಮಾಂಟೆಗ್ ಚೆಮ್ಸ್‍ಫೋರ್ಡ್ ಪ್ರಸ್ತಾವನೆಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿವೆ?
ಎ. ಸಾಮಾಜಿಕ ಸುಧಾರಣೆ
ಬಿ. ಶೈಕ್ಷಣಿಕ ಸುಧಾರಣೆ
ಸಿ. ಪೊಲೀಸ್ ಆಡಳಿತದಲ್ಲಿ ಸುಧಾರಣೆ
ಡಿ. ಸಂವಿಧಾನ ಸುಧಾರಣೆ

ಉ: ಡಿ


40. ಎರಡು ಐತಿಹಾಸಿಕ ಸ್ಥಳಗಳಾದ ಅಜಂತ ಮತ್ತು ಮಹಾಬಲಿಪುರಕ್ಕೆ ಇರುವ ಸಾಮ್ಯತೆಗಳು ಏನು?
1. ಎರಡೂ ಒಂದೇ ಅವಧಿಯಲ್ಲಿ ನಿರ್ಮಾಣವಾದವು.
2. ಎರಡೂ ಸಮಾನ ಧಾರ್ಮಿಕ ಪಂಥಗಳಿಗೆ ಸೇರಿದವು
3. ಎರಡೂ ಶಿಲಾಕೆತ್ತನೆಯ ಸ್ಮಾರಕಗಳು
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 1 ಮತ್ತು 3
ಡಿ. ಯಾವುದೂ ಅಲ್ಲ

ಉ: ಬಿ


41. ಬಿಟ್‍ಕಾಯಿನ್‍ಗೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿ?
1. ಬಿಟ್‍ಕಾಯಿನ್‍ಗಳನ್ನು ದೇಶಗಳ ಕೇಂದ್ರೀಯ ಬ್ಯಾಂಕ್‍ಗಳು ನಿಗಾ ವಹಿಸುತ್ತವೆ.
2. ಬಿಟ್‍ಕಾಯಿನ್ ವಿಳಾಸ ಹೊಂದಿರುವ ಯಾರು ಬೇಕಾದರೂ ಬಿಟ್‍ಕಾಯಿನ್‍ಗಳು ಕಳುಹಿಸಲು ಹಾಗೂ ಪಡೆಯಲು ಅವಕಾಶವಿದೆ.
3. ಮತ್ತೊಬ್ಬರ ಗುರುತು ಇಲ್ಲದೇ ಆನ್‍ಲೈನ್ ಪಾವತಿ ಮಾಡಲು ಅವಕಾಶವಿದೆ.
ಎ. ಕೇವಲ 1 ಮತ್ತು 2
ಬಿ. 2 ಮತ್ತು 3 ಮಾತ್ರ
ಸಿ. 3 ಮಾತ್ರ
ಡಿ. 1, 2, 3

ಉ: ಬಿ


42. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಹೊಸ ಅಭಿವೃದ್ಧಿ ಬ್ಯಾಂಕನ್ನು ಎಪಿಇಸಿ ಆರಂಭಿಸಿದೆ.
2. ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍ನ ಕೇಂದ್ರ ಕಚೇರಿ ಶಾಂಘೈಯಲ್ಲಿದೆ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಬಿ


43. ಗಾಡ್ಗೀಳ್ ಸಮಿತಿ ವರದಿ ಹಾಗೂ ಕಸ್ತೂರಿರಂಗನ್ ಸಮಿತಿ ವರದಿ ಯಾವುದಕ್ಕೆ ಸಂಬಂಧಿಸಿದ್ದು?
ಎ. ಸಂವಿಧಾನ ಸುಧಾರಣೆ
ಬಿ. ಗಂಗಾಕ್ರಿಯಾಯೋಜನೆ
ಸಿ. ನದಿಗಳ ಜೋಡಣೆ
ಡಿ. ಪಶ್ಚಿಮಘಟ್ಟಗಳ ಸಂರಕ್ಷಣೆ

ಉ: ಡಿ


44. ಕೇಶವ್ ಚಂದ್ರಸೇನ್ ಈ ಕೆಳಗಿನ ಯಾವುದರ ಜತೆ ಸಂಬಂಧ ಹೊಂದಿದ್ದಾರೆ?
1. ಕಲ್ಕತ್ತ ಏಕೀಕರಣ ಸಮಿತಿ
2. ಗುಡಿಸಲು ಹಂಚಿಕೆ
3. ಭಾರತ ಸುಧಾರಣಾ ಸಂಘ
ಎ. ಕೇವಲ 1 ಮತ್ತು 3
ಬಿ. 2 ಮತ್ತು 3 ಮಾತ್ರ
ಸಿ. 3 ಮಾತ್ರ
ಡಿ. 1, 2, 3

ಉ: ಬಿ


45. ಗಲ್ಫ್ ಸಹಕಾರ ಮಂಡಳಿಯ ಸದಸ್ಯತ್ವ ಹೊಂದದ ದೇಶ ಯಾವುದು?
ಎ. ಇರಾನ್
ಬಿ. ಸೌದಿ ಅರೇಬಿಯಾ
ಸಿ. ಓಮಾನ್
ಡಿ. ಕುವೈತ್

ಉ: ಬಿ


46. ಸೊವರಿನ್ ಚಿನ್ನ ಬಾಂಡ್ ಯೋಜನೆ ಹಾಗೂ ಚಿನ್ನ ನಗದೀಕರಣ ಯೋಜನೆಯ ಉದ್ದೇಶವೇನು?
1. ಭಾರತದ ಕುಟುಂಬಗಳಲ್ಲಿ ಜಡವಾಗಿರುವ ಚಿನ್ನವನ್ನು ಆರ್ಥಿಕತೆಗೆ ತರುವುದು.
2. ಚಿನ್ನ ಹಾಗೂ ಆಭರಣ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಉತ್ತೇಜಿಸುವುದು
3. ಚಿನ್ನ ಆಮದಿನ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡುವುದು.
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1, 2, 3

ಉ: ಸಿ


47. ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ಆಫ್ರಿಕನ್ ಯೂನಿಯನ್
ಬಿ. ಬ್ರೆಜಿಲ್
ಸಿ. ಯೂರೋಪಿನ್ ಯೂನಿಯನ್
ಡಿ. ಚೀನಾ

ಉ: ಡಿ


48. ಪ್ರಧಾನಮಂತ್ರಿ ಮುದ್ರಾ ಯೋಜನೆಯು
ಎ. ಸಣ್ಣ ಉದ್ಯಮಶೀಲರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯಡಿ ತರುವುದು
ಬಿ. ಬಡರೈತರಿಗೆ ನಿರ್ದಿಷ್ಟ ಬೆಳೆ ಬೆಳೆಯಲು ಸಾಲ ನೀಡುವುದು
ಸಿ. ವೃದ್ಧ ಮತ್ತು ನಿರ್ಗತಿಕರಿಗೆ ಪಿಂಚಣಿ ನೀಡುವುದು
ಡಿ. ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಸ್ವಯಂಸೇವಾ ಸಂಸ್ಥೆಗಳಿಗೆ ನೆರವಾಗುವುದು.

ಉ: ಎ


49. ಈ ಕೆಳಗಿನ ಯಾವ ಪ್ರದೇಶದಲ್ಲಿ ಶೇಲ್ ಗ್ಯಾಸ್ ಕಂಡುಬರುತ್ತದೆ?
ಎ. ಕ್ಯಾಂಬೆ ನದಿಪಾತ್ರ
ಬಿ. ಕಾವೇರಿ ನದಿಪಾತ್ರ
ಸಿ. ಕೃಷ್ಣಾ ಮತ್ತು ಗೋದಾವರಿ ನದಿಪಾತ್ರ
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3

ಉ: ಡಿ


50. ಜಾಗತಿಕ ಹಣಕಾಸು ಸ್ಥಿರತೆ ವರದಿಯನ್ನು ಯಾವುದು ಸಿದ್ಧಪಡಿಸುತ್ತದೆ?
ಎ. ಯೂರೋಪಿಯನ್ ಕೇಂದ್ರೀಯ ಬ್ಯಾಂಕ್
ಬಿ. ಅಂತರರಾಷ್ಟ್ರೀಯ ಹಣಕಾಸು ನಿಧಿ
ಸಿ. ಅಂತರರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್
ಡಿ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ

ಉ: ಬಿ


51. ಅಟಲ್ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಇದು ಕನಿಷ್ಠ ಖಾತ್ರಿಯ ಪಿಂಚಣಿ ಯೋಜನೆಯಾಗಿದ್ದು, ಅಸಂಘಟಿತ ಕಾರ್ಮಿಕರಿಗೆ ಇರುವ ಯೋಜನೆ.
2. ಕುಟುಂಬದ ಒಬ್ಬ ಸದಸ್ಯ ಮಾತ್ರ ಇದರ ಸದಸ್ಯತ್ವ ಪಡೆಯಬಹುದು.
3. ವಿಮಾಸೌಲಭ್ಯ ಪಡೆದ ವ್ಯಕ್ತಿ ಮೃತಪಟ್ಟ ಬಳಿಕವೂ ಗಂಡ/ ಹೆಂಡತಿಗೆ ಅದೇ ಮೊತ್ತದ ಪಿಂಚಣಿ ಬರುತ್ತದೆ.
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3

ಉ: ಸಿ


52. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಯಾವ ದೇಶಗಳ ಗುಂಪಿಗೆ ಸಂಬಂಧಿಸಿದ್ದು?
ಎ. ಜಿ-20
ಬಿ. ಏಷಿಯನ್
ಸಿ. ಎಸ್‍ಸಿಓ
ಡಿ. ಸಾರ್ಕ್

ಉ: ಬಿ


53. ಬ್ಯೂರೊ ಆಫ್ ಎನರ್ಜಿ ಎಫೀಶಿಯೆನ್ಸಿ ಸ್ಟಾರ್ ಲೇಬಲ್ ಯಾವುದರ ಮೇಲೆ ಕಂಡುಬರುತ್ತದೆ?
1. ಸೀಲಿಂಗ್ ಫ್ಯಾನ್
2. ಇಲೆಕ್ಟ್ರಿಕ್ ಗೀಸರ್
3. ಟ್ಯೂಬ್ ಆಕಾರದ ಫ್ಲೋರೊಸೆಂಟ್ ದೀಪ
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3

ಉ: ಡಿ


54. ಭಾರತವು ಸಾಂಪ್ರದಾಯಿಕ ಥರ್ಮೋನ್ಯೂಕ್ಲಿಯರ್ ಎಕ್ಸ್‍ಪರಿಮೆಂಟಲ್ ರಿಯಾಕ್ಟರ್‍ನ ಪ್ರಮುಖ ಸದಸ್ಯದೇಶವಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಆಗುವ ಲಾಭ ಏನು?
ಎ. ನಾವು ಯುರೇನಿಯಂ ಅನ್ನು ಸಾಂಪ್ರದಾಯಕ ಉಷ್ಣವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಬಳಸಬಹುದು.
ಬಿ. ಇದು ಉಪಗ್ರಹ ಪಥದರ್ಶಕದಲ್ಲಿ ಜಾಗತಿಕ ಪಾತ್ರವನ್ನು ನಿರ್ವಹಿಸಬಹುದು.
ಸಿ. ವಿದ್ಯುತ್ ಉತ್ಫಾದನೆಗೆ ರಿಯಾಕ್ಟರ್‍ಗಳ ಕ್ಷಮತೆಯನ್ನು ಗಣನೀಯವಾಗಿ ಹೆಚ್ಚಿಸಬಹುದು.
ಡಿ. ಇದು ಫ್ಯೂಷನ್ ರಿಯಾಕ್ಟರ್‍ಗಳನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದು.

ಉ: ಡಿ


55. ಭಾರತದ ಇತಿಹಾಸದ ಹಿನ್ನೆಲೆಯಲ್ಲಿ ಈ ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆಯಾಗುತ್ತದೆ?
1. ಎರಿಪರ್ತಿ: ಗ್ರಾಮೀಣ ಬ್ಯಾಂಕ್ ಮುಖ್ಯ ಕಂದಾಯದ ಹೊರತಾಗಿ ಪಡೆಯುವ ಭೂಕಂದಾಯ.
2. ತನಿಯೂರ: ಬ್ರಾಹ್ಮಣ ಅಥವಾ ಬ್ರಾಹ್ಮಣ ಸಮುದಾಯಕ್ಕೆ ದಾನ ಮಾಡಲ್ಪಟ್ಟ ಗ್ರಾಮ
3. ಘತಿಕಾ: ದೇವಾಲಯಕ್ಕೆ ಸಂಬಂಧಿಸಿದ ಕಾಲೇಜುಗಳು
ಎ. 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1 ಮತ್ತು 3

ಉ: ಡಿ


56. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಅಂತರರಾಷ್ಟ್ರೀಯ ಸೌರ ಮೈತ್ರಿಕೂಟವನ್ನು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ 2015ರಲ್ಲಿ ಆರಂಭಿಸಲಾಯಿತು.
2. ಈ ಮೈತ್ರಿಕೂಟವನ್ನು ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳು ಆರಂಭಿಸಿವೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಎ


57. ಯುರೋಪಿಯನ್ ಸ್ಟೆಬಿಲಿಟಿ ಮೆಕ್ಯಾನಿಸಂ ಎಂದರೇನು?
ಎ. ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆಯಾಗಿದ್ದು, ಲಕ್ಷಾಂತರ ಮಂದಿಯ ವಲಸೆಯನ್ನು ನಿರ್ವಹಿಸುವುದು ಇದರ ಹೊಣೆ.
ಬಿ. ಯೂರೋಪಿಯನ್ ದೇಶಗಳ ಹಣಕಾಸು ಸುಸ್ಥಿರತೆ ಕಾಪಾಡಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.
ಸಿ. ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವ್ಯಾಪಾರ ಒಪ್ಪಂದ ನಿರ್ವಹಿಸಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.
ಡಿ. ಸದಸ್ಯದೇಶಗಳ ಸಂಘರ್ಷ ನಿರ್ವಹಿಸಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.

ಉ: ಬಿ


58. ತುಂತುರು ನೀರಾವರಿಯ ಪ್ರಯೋಜನಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿ?
1. ಕಳೆಗಳು ಕಡಿಮೆಯಾಗುತ್ತವೆ.
2. ಮಣ್ಣು ಜವಳಾಗುವುದು ಕಡಿಮೆಯಾಗುತ್ತದೆ.
3. ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.
ಎ. 1 ಮತ್ತು 2 ಮಾತ್ರ
ಬಿ. 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. ಯಾವುದೂ ಅಲ್ಲ

ಉ: ಸಿ


59. ರೆಜಿಸ್ಟರಿಂಗ್ ಡಿಜಿಟಲ್ ಲಾಕರ್ಸ್ ಎನ್ನುವುದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1 ಡಿಜಿಟಲ್ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಡಿಜಿಟಲ್ ಲಾಕರ್ ವ್ಯವಸ್ಥೆ
2. ಯಾವುದೇ ಪ್ರದೇಶದಿಂದಲಾದರೂ ಇದರ ಮೂಲಕ ನೀವು ಇ– ದಾಖಲೆಗಳನ್ನು ನಿರ್ವಹಿಸಬಹುದು.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ.

ಉ: ಸಿ


60. ಇತ್ತೀಚೆಗೆ ಈ ಕೆಳಗಿನ ಯಾವ ನದಿಗಳನ್ನು ಜೋಡಿಸಲಾಗಿದೆ?
ಎ. ಕಾವೇರಿ ಹಾಗೂ ತುಂಗಭದ್ರಾ
ಬಿ. ಗೋದಾವರಿ ಹಾಗೂ ಕೃಷ್ಣಾ
ಸಿ. ಮಹಾನದಿ ಹಾಗೂ ಸೋನೆ
ಡಿ. ನರ್ಮದಾ ಮತ್ತು ತಪತಿ

ಉ: ಬಿ


61. ದೇಶದ ನಗರಗಳಲ್ಲಿ ವಾಯು ಗುಣಮಟ್ಟವನ್ನು ಅಳೆಯಲು ಯಾವ ಅನಿಲವನ್ನು ಪರಿಗಣಿಸಲಾಗುತ್ತದೆ?1. ಇಂಗಾಲದ ಡೈ ಆಕ್ಸೈಡ್
2. ಇಂಗಾಲದ ಮೋನೋಕ್ಸೈಡ್
3. ಸಾರಜನಕದ ಡೈ ಆಕ್ಸೈಡ್
4. ಗಂಧಕದ ಡೈ ಆಕ್ಸೈಡ್
5. ಮಿಥೇನ್
ಎ. 1, 2 ಮತ್ತು 3
ಬಿ. 2, 3 ಮತ್ತು 4
ಸಿ. 1, 4 ಮತ್ತು 5
ಡಿ. ಮೇಲ್ಕಂಡ ಎಲ್ಲವೂ

ಉ: ಬಿ


62. ಆಸ್ಟ್ರೋ ನಟ್‍ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಅಮೆರಿಕ ಹಾಗೂ ರಷ್ಯಾ ಹೊರತುಪಡಿಸಿದರೆ ಭಾರತ ಮಾತ್ರ ಅಂಥ ವೀಕ್ಷಣಾ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ.
2. ಇದು 2000 ಕೆ.ಜಿ. ತೂಕದ ಉಪಗ್ರಹವಾಗಿದದ್ದು, ಭೂಮಿಯ ಮೇಲ್ಮೈನಿಂದ 1050 ಕಿಲೋಮೀಟರ್ ಎತ್ತರದಲ್ಲಿ ಕಕ್ಷೆಯಲ್ಲಿ ಅಳವಡಿಸಲಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2′
ಡಿ. ಯಾವುದೂ ಅಲ್ಲ

ಉ: ಎ


63. ಮಧ್ಯಕಾಲೀನ ಭಾರತದ ಆರ್ಥಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಅರಘಟ್ಟ ಎಂದರೇನು?
ಎ. ಜೀತ ಕಾರ್ಮಿಕ
ಬಿ. ಸೇನಾ ಅಧಿಕಾರಿಗಳಿಗೆ ಮಂಜೂರಾದ ಭೂಮಿ
ಸಿ. ನೀರಾವರಿಗೆ ಬಳಸುತ್ತಿದ್ದ ಚಕ್ರ
ಡಿ. ಕೃಷಿಗೆ ಪರಿವರ್ತನೆಯಾದ ಬಂಬರು ಭೂಮಿ

ಉ: ಸಿ


64. ಭಾರತದ ಸಾಂಸ್ಕøತಿಕ ಇತಿಹಾಸಕ್ಕೆ ಸಂಬಂಧಿಸಿದ, ರಾಜಮನೆತನದ ಇತಿಹಾಸಕಾರರು, ಪುರಾಣಕಥೆ ವೃತ್ತಿಯವರು ಯಾರು?
ಎ. ಶ್ರಾಮಣ
ಬಿ. ಪರಿವ್ರಾಜಕ
ಸಿ. ಅಗ್ರಹಾರಿಕ
ಡಿ. ಮಾಗಧ

ಉ: ಡಿ


65, ಇತ್ತೀಚೆಗೆ ಯಾವ ರಾಜ್ಯ ನಿರ್ದಿಷ್ಟ ಚಿಟ್ಟೆಯನ್ನು ರಾಜ್ಯದ ಚಿಟ್ಟೆ ಎಂದು ಘೋಷಿಸಿದೆ?
ಎ. ಅರುಣಾಚಲಪ್ರದೇಶ
ಬಿ. ಹಿಮಾಚಲ ಪ್ರದೇಶ
ಸಿ. ಕರ್ನಾಟಕ
ಡಿ. ಮಹಾರಾಷ್ಟ್ರ

ಉ: ಡಿ


66. ಇಸ್ರೋ ಉಡಾಯಿಸಿದ ಮಂಗಳಯಾನಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಇದನ್ನು ಮಾರ್ಸ್ ಆರ್ಬಿಟರ್ ಮಿಷಿನ್ ಎಂದೂ ಕರೆಯಲಾಗುತ್ತದೆ.
2. ಈ ಮೂಲಕ ಅಮೆರಿಕ ನಂತರ ಭಾರತ ಮಂಗಳಯಾನ ಕೈಗೊಂಡ ಎರಡನೇ ದೇಶ.
3. ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಯಾದ ಮೊದಲ ದೇಶ ಭಾರತ
ಎ. ಕೇವಲ 1
ಬಿ. 2 ಮತ್ತು 3
ಸಿ. 1 ಮತ್ತು 3
ಡಿ. 1,2 ಮತ್ತು 3

ಉ: ಸಿ

...ಮುಂದುವರೆಯುವುದು.
(courtesy :ಕನ್ನಡದಲ್ಲಿ ಐಎಎಸ್ & ಕೆಎಎಸ್ ಮುಖ್ಯ ಪರೀಕ್ಷೆ)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-2: ಸಾಮಾನ್ಯ ಅಧ್ಯಯನಗಳು-1, ವಿಭಾಗ-2. & ವಿಭಾಗ-3 (PART -VII) ( KAS Mains Compulsory Paper II Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-2: ಸಾಮಾನ್ಯ ಅಧ್ಯಯನಗಳು-1, ವಿಭಾಗ-2. & ವಿಭಾಗ-3 (PART -VII)
( KAS Mains Compulsory  Paper II  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.


●. ವಿಭಾಗ-2

ಸಾಮಾಜಿಕ ಮತ್ತು ರಾಜಕೀಯ ದೃಷ್ಟೀಕೋನ (7 ಘಟಕಗಳು)

(1) ಸ್ವಾತಂತ್ರ ನಂತರದ ಕರ್ನಾಟಕ – ರಾಜಕೀಯ ಬಲವರ್ಧನೆಗಾಗಿ - ಸರ್ಕಾರಗಳ ಸತತ ಪ್ರಯತ್ನಗಳು - ಹಿಂದುಳಿದ ವರ್ಗಗಳು ಮತ್ತು ಸಾಮಾಜಿಕ ನ್ಯಾಯ - ಹಾವನೂರ ಸಮಿತಿ – ವೆಂಕಟಸ್ವಾಮಿ ಸಮಿತಿ – ಚಿನ್ನಪ್ಪರೆಡ್ಡಿ ಸಮಿತಿಯ ವರದಿಗಳು – ಇತ್ತೀಚಿನ ಧೋರಣೆಗಳು – ದಲಿತ ಚಳುವಳಿ - ದೇವರಾಜ ಅರಸ್ ಮತ್ತು ಭೂಸುಧಾರಣೆಗಳು ಭಾಷಾ ವಿವಾಧ: ಗೋಕಾಕ್ ಚಳುವಳಿ - ವಿವಾದಾಂಶಗಳು ಮತ್ತು ದೃಷ್ಟಿಕೋನಗಳು. ಅಂತರರಾಜ್ಯ ವಿವಾದಗಳು – ಗಡಿವಿವಾದಗಳು – ಮಹಾಜನ್ ಸಮಿತಿಯ ವರದಿ ಮತ್ತು ಅದರ ಪ್ರಭಾವ – ಜಲ ವಿವಾದಗಳು – ರೈತರ ಚಳುವಳಿಗಳು, ಪ್ರಾದೇಶಿಕ ಅಸಮತೋಲನ ಮತ್ತು ನಂಜುಂಡಪ್ಪ ಸಮಿತಿಯ ವರದಿ.

(2) ಸಮಾಜಿಕ ಬದಲಾವಣೆ ಮತ್ತು ಚಳುವಳಿಗಳು - ಸಾಮಾಜಿಕ ರಚನೆ ಮತ್ತು ಸಾಮಾಜಿಕ ಬದಲಾವಣೆ, ಸಮಾಜಿಕ ಬದಲಾವಣೆಯ ಸಿದ್ಧಾಂತಗಳು, ಅಸಂಘಟಿತ ಸಮಾಜ ಮತ್ತು ಸಾಮಾಜಿಕ ಚಳುವಳಿಗಳು. ಉದ್ದೇಶಿತ ಸಾಮಾಜಿಕ ಬದಲಾವಣೆ, ಸಾಮಾಜಿಕ ನೀತಿ ಮತ್ತು ಸಾಮಾಜಿಕ ಅಭಿವೃದ್ಧಿ.

(3) ಸಾಮಾಜಿಕ ಬದಲಾವಣೆ ಮತ್ತು ಆಧುನೀಕರಣ - ಸಂಘರ್ಷ ಪಾತ್ರದ ಸಮಸ್ಯೆಗಳು - ಪೀಳಿಗೆ ನಡುವಿನ ಅಂತರ, ಯುವಜನರ ಅಶಾಂತಿ ಮತ್ತಿ ಶಿಕ್ಷಣದ ವಾಣಿಜ್ಯೀಕರಣ, ಶೈಕ್ಷಣೀಕ ಶಕ್ತಿಯಾಗಿ ಭಾರತ ಹೊರಹೊಮ್ಮುವಿಕೆ – ಮಹಿಳೆಯ ಸ್ಥಾನಮಾನದ ಬದಲಾವಣೆ ಮತ್ತು ಸಾಮಾಜಿಕ ಚಳುವಳಿಗಳು, ಕೈಗಾರಿಕರಣ ಮತ್ತು ನಗರೀಕರಣ ನಿರ್ಬಂಧ ಗುಂಪುಗಳ ಪಾತ್ರ, ಸಂಸ್ಕೃತೀಕರಣ, ಪಾಶ್ಚೀಮಾತ್ಯೀಕರಣ ಮತ್ತು ಆಧುನೀಕರಣ – ಆಧುನೀಕರಣ ವಿರುದ್ಧ ಪಾರಂಪರಿಕತೆ, ಪ್ರಸ್ತುತ ಸಾಮಾಜಿಕ ಪಿಡುಗುಗಳು – ಮೂಲ ಭೂತವಾದಿತನ ಮತ್ತು ಭಯೋತ್ಪಾದನೆ, ನಕ್ಸಲ್ವಾದ, ಸ್ವಜನ ಪಕ್ಷಪಾತ, ಭ್ರಷ್ಠಾಚಾರ ಮತ್ತು ಕಪ್ಪುಹಣ.

(4) ಸರ್ಕಾರ ಮತ್ತು ರಾಜಕೀಯ ವ್ಯವಸ್ಥೆ: ವಿಧಾನ ಮಂಡಲ; ಕಾರ್ಯಾಂಗ ಮತ್ತು ನ್ಯಾಯಾಂಗ, ಪಾರಂಪರಿಕ ಸಮಾಜದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯ ಪ್ರಕಾರ್ಯ, ರಾಜಕೀಯ ಪಕ್ಷ ಮತ್ತು ಅದರ ಸಾಮಾಜಿಕ ಸಂಯೋಜನೆ.

(5) ಅಧಿಕಾರದ ವಿಕೇಂದ್ರೀಕರಣ: ಅಧಿಕಾರದ ವಿದೇಂದ್ರೀಕರಣ ಮತ್ತು ರಾಜಕೀಯ ಭಾಗವಹಿಸುವಿಕೆ. ಕೇಂದ್ರ ಸರ್ಕಾರ, ಸಂಸತ್ತು, ಸಚಿವ ಸಂಪುಟ, ಸರ್ವೋಚ್ಚ ನ್ಯಾಯಾಲಯ, ನ್ಯಾಯಿಕ ವಿಮರ್ಶೆ, ಕೇಂದ್ರ-ರಾಜ್ಯದ ಸಂಬಂಧಗಳು, ರಾಜ್ಯ ಸರ್ಕಾರ, ರಾಜ್ಯಪಾಲರ ಪಾತ್ರ, ಪಂಚಾಯತ್ ರಾಜ್, ಭಾರತದ ರಾಜಕಾರಣದಲ್ಲಿ ವರ್ಗ ಮತ್ತು ಜಾತಿ, ಪ್ರಾಂತೀಯ ರಾಜಕೀಯ, ಭಾಷೀಕರಣ ಮತ್ತು ಕೋಮುವಾದ, ಜಾತ್ಯಾತೀಕರಣ ಕಾರ್ಯನೀತಿಯ ಸಮಸ್ಯೆಗಳು ಮತ್ತು ರಾಷ್ಟ್ರೀಯ ಏಕೀಕರಣ, ರಾಜಕೀಯ ಭಾಗವಹಿಸುವಿಕೆ ಮತ್ತು ಮತದಾನ, ಮತ ಬ್ಯಾಂಕ್ ರಾಜಕೀಯ.

(6) ಸಾಮಾಜಿಕ ಆರ್ಥಿಕ ವ್ಯವಸ್ಥೆ: ಜಾಜಮಾನಿ ಪದ್ಧತಿ ಮತ್ತು ಸಾಂಪ್ರದಾಯಿಕ ಸಮಾಜದ ಮೇಲೆ ಅದರ ಪ್ರಭಾವ, ಮಾರುಕಟ್ಟೆ ಅರ್ಥವ್ಯವಸ್ಥೆ (Market Economy) ಮತ್ತು ಅದರ ಸಾಮಾಜಿಕ ಪರಿಣಾಮಗಳು, ವೃತ್ತೀಯ ವೈವಿಧ್ಯೀಕರಣ ಮತ್ತು ಸಾಮಾಜಿಕ ರಚನೆ, ವೃತ್ತಿ ಮತ್ತು ವೃತ್ತಿಪರ (Professionalisation), ಕಾರ್ಮಿಕ ಸಂಘಗಳ ಪಾತ್ರ, ಸಾಮಾಜಿಕ ನಿರ್ಣಾಯಕಗಳು ಮತ್ತು ಆರ್ಥಿಕ ಅಭಿವೃದ್ಧಿಯ ಪರಿಣಾಮ, ಆರ್ಥಿಕ ಅಸಮಾನತೆಗಳು, ಶೋಷಣೆ ಮತ್ತು ಭ್ರಷ್ಟಚಾರ, ಜಾಗತೀಕರಣ ಮತ್ತು ಅದರ ಸಮಾಜಿಕ ಪರಿಣಾಮ.

(7) ಗ್ರಾಮೀಣ-ಸಾಮಾಜಿಕ ವ್ಯವಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ – ಗ್ರಾಮ ಸಮುದಾಯದ ಸಾಮಾಜಿಕ ಸಾಂಸ್ಕøತಿಕ ಆಯಾಮಗಳು, ಸಾಂಪ್ರದಾಯಿಕ ಅಧಿಕಾರ ರಚನೆ, ಪ್ರಜಾಸತ್ತಾತ್ಮೇಕರಣ ಮತ್ತು ನಾಯಕತ್ವ, ಬಡತನ, ಖುಣತ್ವ, ಜೀತ ಕಾರ್ಮಿಕ, ಭೂಸುಧಾರಣೆಗಳ ಸಾಮಾಜಿಕ ಪರಿಣಾಮಗಳು, ಗ್ರಾಮೀಣಾಭಿವೃದ್ಧಿ ಯೋಜನೆಗಳು, ಹಸಿರುಕ್ರಾಂತಿ, ಗ್ರಾಮೀಣಾಭಿವೃದ್ಧಿಯ ಹೊಸ ಕಾರ್ಯತಂತ್ರಗಳು, ಬದಲಾಗುತ್ತಿರುವ ಗ್ರಾಮೀಣ ಚಿತ್ರಣ.

━━━━━━━━━━━━━━━━━━━━━━━━━━━━━━━━━━━━━━━━━━━━━


●. ವಿಭಾಗ-3

ಭಾರತೀಯ ಅರ್ಥವ್ಯವಸ್ಥೆ – ಯೋಜನೆ – ಗ್ರಾಮೀಣಾಭಿವೃದ್ಧಿ (8 ಘಟಕಗಳು)

(1) ಭಾರತದ ಆರ್ಥವ್ಯವಸ್ಥೆ: ಸ್ವಾತಂತ್ರಯ ನಂತರದ ಬೆಳವಣಿಗೆ – ಕೃಷಿಯ ಅನುಭವ, ಕೈಗಾರಿಕೆ ಮತ್ತು ತೃತೀಯ ವಲಯಗಳು, ಬೆಳವಣಿಗೆ ಮತ್ತು ಹಂಚಿಕೆ ನ್ಯಾಯ, ಬಡತನ ಮತ್ತು ಅಸಮಾನತೆ, ಯೋಜನಾ ಅವಧಿಯಲ್ಲಿ ಕರ್ನಾಟಕ ಅರ್ಥವ್ಯವಸ್ಥೆಯ ಬೆಳವಣಿಗೆ ಯುಗ, ರಾಜ್ಯ ಅರ್ಥ ವ್ಯವಸ್ಥೆಯಲ್ಲಿ ವೃದ್ಧಿ ಮತ್ತಿ ಕ್ಷೇತ್ರೀಯ ಬದಲಾವಣೆಗಳು ಮತ್ತು ಪರಸ್ಪರ ಸಂಪರ್ಕ.

(2) ಭಾರತ ಮತ್ತು ಅಂತರಾಷ್ಟ್ರೀಯ ಅರ್ಥಿಕ ಸಂಬಂಧಗಳು - ಬೆಳವಣಿಗೆ ಮತ್ತು ವ್ಯಾಪಾರ, ರಫ್ತುಗಳು ಮತ್ತು ಅಮದುಗಳ ಪರಿಮಾಣ, ಸಂಯೋಜನೆ ಮತ್ತು ಮಾರ್ಗ, ಆರ್ಥಿಕ ಅಭಿವೃದ್ಧಿಯಲ್ಲಿ ದೇಶೀಯ ಮತ್ತು ವಿದೇಶಿ ಬಂಡವಾಳ, ಭಾರತದ ವಿದೇಶಿ ವ್ಯಾಪಾರ ನೀತಿಯಲ್ಲಿ ಬದಲಾವಣೆಗಳು, ಸಂದಾಯಗಳ ಬಾಕಿ ಮತ್ತು ವಿದೇಸಿ ವಿನಿಮಯ, ಕರ್ನಾಟಕದ ರಫ್ತುಗಳು-ಪರಿಮಾಣ, ಸಂಯೋಜನೆ ಮತ್ತು ಮಾರ್ಗ

(3) ಅಭಿವೃದ್ಧಿಯ ಮಾರ್ಗಗಳು: ಪ್ರಾಂತ್ಯಗಳ ಮಧ್ಯೆ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ತಾರತಮ್ಯ, ತಾರತಮ್ಯಗಳನ್ನು ತಗ್ಗಿಸಲು ಸಾರ್ವಜನಿಕ ಕಾರ್ಯನೀತಿಗಳು, ವಿಶೇಷ ಆರ್ಥಿಕ ವಲಯಗಳ ನಿರೀಕ್ಷೆಗಳು ಮತ್ತು ಸಮಸ್ಯೆಗಳು, ಕರ್ನಾಟಕದ ಪ್ರಗತಿಯಲ್ಲಿ ತಾರತಮ್ಯ ಮತ್ತು ಸಾರ್ವಜನಿಕ ಕಾರ್ಯನೀತಿಗಳು, ಅಭಿವೃದ್ಧಿ ತಾರತಮ್ಯದ ಪರಿಹಾರ, ಪ್ರಾದೇಶಿಕ ಅಭಿವೃದ್ಧಿ ಮಂಡಳಿಗಳು.

(4) ಯೋಜನೆ – ಯೋಜನೆಯ ಗುರಿಗಳು: ಉದ್ದೇಶಗಳು ಮತ್ತು ಪ್ರಸ್ತಾಪಗಳು, ಪಂಚವಾರ್ಷಿಕ ಯೋಜನೆಗಳ ಸಾಧನೆಗಳು ಮತ್ತು ವಿಫಲತೆಗಳು (1 ರಿಂದ 7ರ ವರೆಗಿನ ಪಂಚವಾರ್ಷಿಕ ಯೋಜನೆಗಳು) ಹೊಸ ಆರ್ಥಿಕ ನೀತಿಗಳ ಆಡಳಿತ ಕ್ರಮದಲ್ಲಿ ಅಭಿವೃದ್ಧಿ ಯೋಜನೆಗಳು (7ನೇ ಪಂಚವಾರ್ಷಿಕ ಯೋಜನೆಯ ನಂತರ) ಕರ್ನಾಟಕದಲ್ಲಿ ಯೋಜನೆಗಳು.

(5) ವಿಕೇಂದ್ರೀಕರಣ: ಉನ್ನತ ಯೋಜನೆ ಮತ್ತು ಮೂಲಭೂತ ಯೋಜನೆಯ ಸಾಧಕ ಮತ್ತು ಭಾದಕಗಳು ಪಂಚಾಯತ್ರಾಜ್ ಸಂಸ್ಥೆಗಳಲ್ಲಿ ಯಾಂತ್ರಿಕ ಯೋಜನೆ ಮತ್ತು ಅನುಭವ, ಯೋಜನೆ ರೂಪಿಸುವುದು ಮತ್ತು ಸಾಮಥ್ರ್ಯ ವೃದ್ಧಿಗೊಳಿಸುವುದು. ಯೋಜನೆ ಮತ್ತು ಹಣಕಾಸು, ಕರ್ನಾಟಕದಲ್ಲಿ ವಿಕೇಂದ್ರಿಕೃತ ಯೋಜನೆ, ಸಂಪನ್ಮೂಲ ಕ್ರೋಢೀಕರಣ ಮತ್ತು ವಹಿಸುವಿಕೆ, ಜಿಲ್ಲಾ ಯೋಜನಾ ಸಮಿತಿ, ರಾಜ್ಯ ಹಣಕಾಸು ಮತ್ತು ಸ್ಥಳೀಯ ಹಣಕಾಸುಗಳು, ರಾಜ್ಯ ಹಣಕಾಸು ಆಯೋಗ.

(6) ಗ್ರಾಮೀಣಾಭಿವೃದ್ಧಿ: ರಾಷ್ಟ್ರೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯ ಪ್ರಾಮುಖ್ಯತೆ, ಗಾಂಧಿಮಾರ್ಗದ ಗ್ರಾಮೀಣ ಅಭಿವೃದ್ಧಿ ಭೂಸುಧಾರಣೆಗಳು, ಬೇಸಾಯ ಮತ್ತು ಉತ್ಪಾದಕತೆಯ ಗಾತ್ರ, ನೀರಾವರಿ ಮತ್ತು ಒಣಬೇಸಾಯದ ಸಮಸ್ಯೆಗಳು, ಆಹಾರ ಭದ್ರತೆ, ಗ್ರಾಮೀಣ ಸಾಲ, ಕೃಷಿ ಮಾರುಕಟ್ಟೆ, ಕೃಷಿ ಕಾರ್ಮಿಕ, ಗ್ರಾಮೀಣ ಕೈಗಾರಿಕೆಗಳು ಮತ್ತು ಉದ್ಯೋಗ, ಕರ್ನಾಟಕ ಕೃಷಿಯ ಸಮಸ್ಯೆಗಳು, ಗ್ರಾಮೀಣ ಅರ್ಥಿಕತೆಯ ಮೂಲಸೌಕರ್ಯಗಳು (ಇಂಧನ, ನೀರಾವರಿ, ಸಾರಿಗೆ, ಸಂಪರ್ಕ (communication), ಮಾರುಕಟ್ಟೆಗಳು) ಗ್ರಾಮೀಣ ಸಾಮಾಜಿಕ ಮೂಲಸೌಕರ್ಯಗಳು-ವಸತಿ, ಕುಡಿಯುವ ನೀರು, ನೈರ್ಮಲ್ಯ ಮತ್ತು ಚರಂಡಿ ವ್ಯವಸ್ಥೆ, ಗ್ರಾಮೀಣ ಆರೋಗ್ಯ ವ್ಯವಸ್ಥೆಗಳು ಮತ್ತು ಅವುಗಳ ಹಂಚಿಕೆ, ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸಾಮಜಿಕ ಮೂಲಸೌಕರ್ಯಗಳು, ಕರ್ನಾಟಕದಲ್ಲಿ ಗ್ರಾಮೀಣ ಮಾರುಕಟ್ಟೆಗಳು, ಕರ್ನಾಟಕದಲ್ಲಿ ಗ್ರಾಮೀಣ ವಸತಿ ಮತ್ತು ಆರೋಗ್ಯ ಪಾಲನ ವ್ಯವಸ್ಥೆಗಳು.

(7) ಗ್ರಾಮೀಣಾಭಿವೃದ್ಧಿಯ ಪ್ರಾರಂಭದ ಹಂತಗಳು: ಬಡತನ ನಿರ್ಮೂಲನೆ ಹಾಗೂ ಉದ್ಯೋಗ, ಸೃಜನೆ ಕಾರ್ಯಕ್ರಮಗಳು, ಪಂಚವಾರ್ಷಿಕ ಯೋಜನೆ ಮತ್ತು ಒಟ್ಟಾರೆ ಅಭಿವೃದ್ಧಿ, ಗ್ರಾಮೀಣ ಹಣಕಾಸಿನ ಸಂಸ್ಥೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸ್ವತ್ತು ಸಂಪನ್ಮೂಲಗಳ ಅಭಿವೃದ್ಧಿ ಮತ್ತು ಸಂರಕ್ಷಣೆ – ಗ್ರಾಮ ಹುಲ್ಲುಗಾವಲುಗಳು ಮತ್ತು ಮರಮುಟ್ಟುಗಳು, ಜಲಭಾಗಗಳು, ಗ್ರಾಮೀಣ ಪ್ರದೇಶಗಳಲ್ಲಿ ನಗರ ಸೌಕರ್ಯಗಳನ್ನು ಒದಗಿಸುವಿಕೆ (ಪಿಯುಆರ್ಎ) ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳು, ಕರ್ನಾಟಕದಲ್ಲಿ ಸ್ವ-ಸಹಯಾ ಗುಂಪುಗಳು ಮತ್ತು ಕೀರು ಬಂಡವಾಳ ಸಂಸ್ಥೆಗಳು, ಕರ್ನಾಟಕದ ಗ್ರಾಮೀಣ ಕೆರೆ ಪುನರುಜೀವನ, ಕುಡಿಯುವ ನೀರು, ನೈರ್ಮಲ್ಯ ಮತ್ತು ಆರೋಗ್ಯ ಸಂರಕ್ಷಣೆಗೆ ಬಾಹ್ಯ ನೆರವು.

(8) ದತ್ತಾಂಶ ಸಂಗ್ರಹಣೆ ವಿಶ್ಲೇಷಣೆ-ಅರ್ಥ ವಿವರಣೆ: ಅಂಕಿಅಂಶಗಳ ದತ್ತಾಂಶ ಸಂಗ್ರಹಣೆ, ಅರ್ಥ ವಿವರಣೆ ಮತ್ತು ಗುಣಾವಗುಣ ವಿವೇಚನೆ, ಗ್ರಾಫ್ಗಳು ಮತ್ತು ಚಾರ್ಟ್ಗಳ ಅಧ್ಯಯನ, ಬಾರ್ ಗ್ರಾಫ್ಗಳು, ಲೈನ್ ಗ್ರಾಫ್ಗಳು ಮತ್ತು ಪೈಚಾರ್ಟ್ಗಳು, ಕೋಷ್ಠಕ ಮತ್ತು ರೇಖಾಕೃತಿ ದತ್ತಾಂಶದ ಮೇಲೆ ಆಧರಿತವಾದ ಸಮಸ್ಯೆಗಳು – ಅಂಕಿಅಂಶಗಳ ದತ್ತಾಂಶ ಪರ್ಯಾಪತೆ - ಸಂಭಾವ್ಯತೆಯನ್ನಾಧರಿಸಿದ ಸಮಸ್ಯೆಗಳು ಪರಿವರ್ತನೆಗಳು ಮತ್ತು ಸಂಯೋಜನೆಗಳು - ಪರಿಮಾಣಾತ್ಮಕ ಸಾಮಥ್ರ್ಯ - ಸಂಖ್ಯಾ ಅನುಕ್ರಮಗಳು, ಶ್ರೇಣಿಗಳು, ಸರಾಸರಿಗಳು, ಸಂಖ್ಯಾ ಪದ್ಧತಿಗಳು ಅನುಪಾತ ಮತ್ತು ಪ್ರಮಾಣ, ಲಾಭ ಮತ್ತು ನಷ್ಟ ಶೇಕಾಡಾವಾರು, ಸಮಯ ಮತ್ತು ಕೆಲಸ, ವೇಗ-ಸಮಯ-ಅಂತರ, ಸರಳಬಡ್ಡಿ, ವಿಶ್ಲೇಷಣಾತ್ಮಕ ಮತ್ತು ನಿರ್ಣಯಾತ್ಮಕ ಕಾರಣ, ಓದುವ ಗ್ರಹಿಕ.

...ಮುಂದುವರೆಯುವುದು.

(ಕೃಪೆ: ಯುಸಿಸಿ ಬೆಂಗಳೂರು) 

Thursday 2 March 2017

☀️ ಅಬಕಾರಿ ಇಲಾಖೆಯಲ್ಲಿ 1180 ಅಬಕಾರಿ ಉಪನಿರೀಕ್ಷಕ ಮತ್ತು ಅಬಕಾರಿ ರಕ್ಷಕ(ಪುರುಷ ಮತ್ತು ಮಹಿಳೆ) ಹುದ್ದೆಗಳು - 2017 (Excise Sub Inspector and Excise Guard Posts in Karnataka Excise Department)

☀️ ಅಬಕಾರಿ ಇಲಾಖೆಯಲ್ಲಿ 1180 ಅಬಕಾರಿ ಉಪನಿರೀಕ್ಷಕ ಮತ್ತು ಅಬಕಾರಿ ರಕ್ಷಕ(ಪುರುಷ ಮತ್ತು ಮಹಿಳೆ) ಹುದ್ದೆಗಳು  - 2017
(Excise Sub Inspector and Excise Guard Posts in Karnataka Excise Department)
━━━━━━━━━━━━━━━━━━━━━━━━━━━━━━━━━━━━━━━━━━━━━

★ ರಾಜ್ಯದ ಅಬಕಾರಿ ಇಲಾಖೆ    
(State Excise Department)


ರಾಜ್ಯದ ಅಬಕಾರಿ ಇಲಾಖೆಯಲ್ಲಿ ಅಗತ್ಯವಿರುವ ಅಬಕಾರಿ ಉಪನಿರೀಕ್ಷಕ ಮತ್ತು ಅಬಕಾರಿ ರಕ್ಷಕ(ಪುರುಷ ಮತ್ತು ಮಹಿಳೆ) ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಅರ್ಜಿ ಆಹ್ವಾನಿಸಿದೆ.

ಒಟ್ಟು 1180 ಹುದ್ದೆಗಳು ಖಾಲಿಯಿದ್ದು, ಆನ್‌ಲೈನ್‌ ಅರ್ಜಿ ಸಲ್ಲಿಕೆಗೂ ಮುನ್ನ ಆಧಾರ್‌ ಕಾರ್ಡ್‌ ಹೊಂದಿರುವುದು ಕಡ್ಡಾಯ.

* ಅರ್ಜಿ ಸಲ್ಲಿಕೆಗೆ ಕೊನೇದಿನ: ಮಾರ್ಚ್‌ 30

* ಹುದ್ದೆಗಳ ವರ್ಗೀಕರಣ:
ಅಬಕಾರಿ ಉಪನಿರೀಕ್ಷಕರು– 177
ಅಬಕಾರಿ ರಕ್ಷಕರು(ಪುರುಷ)– 952
ಅಬಕಾರಿ ರಕ್ಷಕರು(ಮಹಿಳೆ)– 51

* ವೇತನ:
ಅಬಕಾರಿ ಉಪನಿರೀಕ್ಷಕರು: ₹16,000–29,600
ಅಬಕಾರಿ ರಕ್ಷಕರು: ₹11,600–21,000

* ವೆಬ್‌ಸೈಟ್‌: kpsc.kar.nic.in

* ಅರ್ಜಿ ಸಲ್ಲಿಕೆ:
ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಅರ್ಜಿ ಭರ್ತಿ ನಂತರ ಚಲನ್‌ ಡೌನ್‌ಲೋಡ್‌ ಮಾಡಿ ಯಾವುದೇ ಇ–ಪಾವತಿ ಅಂಚೆ ಕಚೇರಿಯಲ್ಲಿ ಪರೀಕ್ಷಾ ಶುಲ್ಕ ಪಾವತಿಸಬೇಕು.

* ಪರೀಕ್ಷಾ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು ₹300, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ₹150 ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿಯಿದೆ.

* ವಿದ್ಯಾರ್ಹತೆ
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಅಬಕಾರಿ ರಕ್ಷಕರ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪೂರೈಸಿರಬೇಕು.

*ವಯೋಮಿತಿ: ಕನಿಷ್ಠ 18 ಹಾಗೂ ಗರಿಷ್ಠ 26 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯಿದೆ. ಅಬಕಾರಿ ಉಪನಿರೀಕ್ಷಕರ ಹುದ್ದೆಗಳಿಗೆ ಕನಿಷ್ಠ 21 ವರ್ಷ.

* ದೇಹದಾರ್ಢ್ಯತೆ:
ಎತ್ತರ: ಕನಿಷ್ಠ 163 ಸೆಂ.ಮೀ.(ಮಹಿಳೆ: ಕನಿಷ್ಠ 157 ಸೆಂ.ಮೀ. ಹಾಗೂ 49.9 ಕೆ.ಜಿ. ತೂಕ)
– ಎದೆಯ ಸುತ್ತಳತೆ ಕನಿಷ್ಠ 81 ಸೆಂ.ಮೀ.
–ಓಟ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡೆಸೆತಗಳ ಮೂಲಕ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ.

* ನೇಮಕಾತಿ ಪ್ರಕ್ರಿಯೆ:
ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹತೆ, ಲಿಖಿತ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಹಾಗೂ ಮೀಸಲಾತಿ ನಿಯಮಗಳ ಅನ್ವಯ ಅರ್ಹರ ಆಯ್ಕೆ ಮಾಡಲಾಗುತ್ತದೆ.

* ಪರೀಕ್ಷೆ:
ಅಬಕಾರಿ ಉಪನಿರೀಕ್ಷಕರು: ಏಪ್ರಿಲ್‌ 30
ಅಬಕಾರಿ ರಕ್ಷಕರು: ಮೇ 7
ಸಾಮಾನ್ಯ ಅಧ್ಯಯನ, ಸಾಮಾನ್ಯ ಕನ್ನಡ ಅಥವಾ ಇಂಗ್ಲಿಷ್‌ ವಿಷಯಗಳ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಸಹಾಯವಾಣಿ:  7815930294, 7815930293 , 7815930296,  7815930292

(Courtesy :2 Mar, 2017 ಪ್ರಜಾವಾಣಿ ವಾರ್ತೆ)

------------------
Direct Link. to KPSC Excise Notification. :—
http://kpsc.kar.nic.in/NOTFN%20OF%20EXCISE%20S%20I%20%20AND%20GUARDS.pdf