"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 30 April 2015

☀ ಇತ್ತೀಚೆಗೆ ದೇಶದ ಸಣ್ಣ ವ್ಯಾಪಾರ ವಹಿವಾಟಿಗೆ ಅಂದರೆ ಬಹುತೇಕ ಏಕವ್ಯಕ್ತಿ ಮಾಲೀಕತ್ವದ ವ್ಯಾಪಾರೋದ್ದಿಮೆಗಳಿಗೆ ಹಣಕಾಸಿನ ನೆರವು ಒದಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ "ಮುದ್ರಾ ಬ್ಯಾಂಕ್"ನ ಪ್ರಮುಖ ಕಾರ್ಯ ಹಾಗು ಉದ್ದೇಶಗಳ ಕುರಿತು ವಿಶ್ಲೇಷಿಸಿ.  (analyze the main tasks and intentions of the 'MUDRA' bank)

☀ ಇತ್ತೀಚೆಗೆ ದೇಶದ ಸಣ್ಣ ವ್ಯಾಪಾರ ವಹಿವಾಟಿಗೆ ಅಂದರೆ  ಏಕವ್ಯಕ್ತಿ ಮಾಲೀಕತ್ವದ ವ್ಯಾಪಾರೋದ್ದಿಮೆಗಳಿಗೆ ಹಣಕಾಸಿನ ನೆರವು ಒದಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ "ಮುದ್ರಾ ಬ್ಯಾಂಕ್"ನ ಪ್ರಮುಖ ಕಾರ್ಯ ಹಾಗು ಉದ್ದೇಶಗಳ ಕುರಿತು ವಿಶ್ಲೇಷಿಸಿ.

(analyze the main tasks and intentions of the 'MUDRA' bank)
━━━━━━━━━━━━━━━━━━━━━━━━━━━━━━━━━━━━━━━━━━━━━

★ (ಭಾರತದ ಅರ್ಥವ್ಯವಸ್ಥೆ.)
★(Indian Economy)


●.ದೇಶದ ಸುಮಾರು 5.77 ಕೋಟಿ ಸಣ್ಣ ವ್ಯಾಪಾರದ ಘಟಕಗಳಿಗೆ ಅಂದರೆ ಬಹುತೇಕ ಏಕವ್ಯಕ್ತಿ ಮಾಲೀಕತ್ವದ ವ್ಯಾಪಾರೋದ್ದಿಮೆಗಳಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದ ಮುದ್ರಾ ಬ್ಯಾಂಕ್ (ಏ.8) ಕಾರ್ಯಾರಂಭ ಮಾಡಿದೆ.

✧."ಮುದ್ರಾ" ಎಂದರೆ: ‘ಮೈಕ್ರೊ ಯುನಿಟ್ಸ್ ಡೆವಲಪ್​ವೆುಂಟ್ ಆಂಡ್ ರಿಫೈನಾನ್ಸ್ಏಜನ್ಸಿ ಲಿ. ಎಂದರ್ಥ.

✧.ಸಣ್ಣ ವ್ಯಾಪಾರೋದ್ದಿಮೆಗಳ ಪೈಕಿ ಶೇಕಡ 62ರಷ್ಟು ಘಟಕಗಳು ಎಸ್​ಸಿ/ಎಸ್ಟಿ/ಒಬಿಸಿ ಜನಾಂಗದವರದ್ದಾಗಿದ್ದು, ಅವರಿಗೆ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸಾಲ ಸೌಲಭ್ಯ ಸಿಗುವುದು ದುರ್ಲಭ. ಇದನ್ನು ಗಮನದಲ್ಲಿ ಇರಿಸಿಕೊಂಡೇ ಈ ಮುದ್ರಾ ಬ್ಯಾಂಕ್ ಸ್ಥಾಪನೆಗೊಂಡಿದೆ.

✧.ಮೂಲಬಂಡವಾಳವಾಗಿ 20,000 ಕೋಟಿ ರೂಪಾಯಿ, ಖಚಿತ ಸಾಲದ ಮೂಲಧನವಾಗಿ 3,000 ಕೋಟಿ ರೂಪಾಯಿಯೊಂದಿಗೆ ಆರಂಭವಾಗುತ್ತಿರುವ ಈ ಬ್ಯಾಂಕ್, ಕಿರು ಹಣಕಾಸು ಸಂಸ್ಥೆಗಳಿಗೆ ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿ ಮರುಹಣಕಾಸು ನೆರವು ಒದಗಿಸುತ್ತದೆ. ಸಾಲಸೌಲಭ್ಯ ಒದಗಿಸುವ ಸಂದರ್ಭದಲ್ಲಿ ಎಸ್​ಸಿ/ಎಸ್ಟಿ ಉದ್ದಿಮೆದಾರರಿಗೆ ಬ್ಯಾಂಕ್ ಆದ್ಯತೆ ನೀಡಲಿದೆ.

✧.ಮುದ್ರಾ ಬ್ಯಾಂಕ್ ಸ್ಥಾಪನೆಯಿಂದಾಗಿ ಯುವ ಉದ್ದಿಮೆದಾರರಿಗೆ ಅದರಲ್ಲೂ ಹಿಂದುಳಿದ ಸಮುದಾಯದ ಯುವಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸುಶಿಕ್ಷಿತ, ಕೌಶಲ ಹೊಂದಿದ ಯುವಜನರ ವಿಶ್ವಾಸವನ್ನು ಇದು ಹೆಚ್ಚಿಸಲಿದೆ. ಈಗಾಗಲೇ ಚಾಲ್ತಿಯಲ್ಲಿರುವ ಉದ್ದಿಮೆಗಳಿಗೂ ಇದು ನೆರವಾಗಲಿದೆ.

✧.ರಾಜ್ಯ ಮತ್ತು ಪ್ರಾದೇಶಿಕ ಮಟ್ಟದ ಸಮನ್ವಯಕಾರರ ಜೊತೆಗೂ ಮುದ್ರಾ ಸಹಯೋಗ ಸ್ಥಾಪಿಸಲಿದ್ದು, ಕಟ್ಟಕಡೆಯ ಸಣ್ಣ/ಕಿರು ವಾಣಿಜ್ಯೋದ್ಯಮಗಳನ್ನೂ ಫಲಾನುಭವಿಯನ್ನಾಗಿ ಪರಿಗಣಿಸಲಿದೆ.


●.ಯಾರಿಗೆ ಲಾಭ?:

✧.ಏಕವ್ಯಕ್ತಿ ಮಾಲೀಕತ್ವದ ವಾಣಿಜ್ಯೋದ್ದಿಮೆ, ವ್ಯಾಪಾರ ವಹಿವಾಟುಗಳು- ಸಣ್ಣ ಉತ್ಪಾದನಾ ಘಟಕಗಳು, ವ್ಯಾಪಾರಿಗಳು, ಹಣ್ಣು ಹಂಪಲು/ತರಕಾರಿ ವ್ಯಾಪಾರಿಗಳು, ಟ್ರಕ್ ಮತ್ತು ಟ್ಯಾಕ್ಸಿ ಆಪರೇಟರ್​ಗಳು, ಆಹಾರ ಸೇವಾ ಘಟಕಗಳು, ದುರಸ್ತಿ ಅಂಗಡಿಗಳು, ಮಷಿನ್ ಆಪರೇಟರ್​ಗಳು, ಸಣ್ಣ ಕೈಗಾರಿಕೆ, ಕಲಾವಿದರು, ಆಹಾರ ಸಂಸ್ಕರಣಾ ಘಟಕ, ಬೀದಿ ಬದಿ ವ್ಯಾಪಾರಿಗಳು ಮತ್ತು ಇತರರು- ಈ ಯೋಜನೆಯ ಫಲಾನುಭವಿಗಳು.

✧.ಸರಿಯಾದ ಕಾಲದಲ್ಲಿ ಹಣಕಾಸಿನ ನೆರವು ಸಿಗದೇ ಇರುವುದು ಈ ಉದ್ದಿಮೆ, ವ್ಯಾಪಾರದಾರರ ಪಾಲಿಗೆ ಬಹುದೊಡ್ಡ ಹಿನ್ನಡೆ. ಇವು ಅಸಂಘಟಿತ ವಲಯಕ್ಕೆ ಸೇರಿದ್ದು, ಬಹುತೇಕರು ವಹಿವಾಟನ್ನು ನೋಂದಾಯಿಸಿರುವುದಿಲ್ಲ. ಹೀಗಾಗಿ ಅಧಿಕೃತ ಮೂಲಗಳಿಂದ ಹಣಕಾಸು ನೆರವು ಪಡೆಯುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ವಲಯಕ್ಕೆ ಮುದ್ರಾ ವರದಾನ.


●.ಯಾವೆಲ್ಲ ರೀತಿಯ ನೆರವು?:

✧.ಮುದ್ರಾದ ಪ್ರಾಥಮಿಕ ಆದ್ಯತೆ ಕಿರು ವಾಣಿಜ್ಯೋದ್ದಿಮೆಗೆ ಪ್ರಧಾನಮಂತ್ರಿ ಮುದ್ರಾ ಯೋಜನೆ ಮೂಲಕ ಮರುಹಣಕಾಸು ನೆರವು ಒದಗಿಸುವುದು.

✧.ಉದ್ದಿಮೆಗಳ ಬೆಳವಣಿಗೆಗೆ ಅನುಸಾರವಾಗಿ ‘ಶಿಶು’, ‘ಕಿಶೋರ್’ ಮತ್ತು ‘ತರುಣ್’ ಎಂಬ ಹೆಸರಿನಡಿ ಫಲಾನುಭವಿ ಉದ್ದಿಮೆಗೆ ಹಣಕಾಸು ಸೌಲಭ್ಯ ಒದಗಿಸಲಾಗುತ್ತದೆ.

✧.ಶಿಶು ವಿಭಾಗದಲ್ಲಿ 50,000 ರೂಪಾಯಿ, ಕಿಶೋರ್ ವಿಭಾಗದಲ್ಲಿ 50,000 ರೂಪಾಯಿಯಿಂದ 5 ಲಕ್ಷ ರೂಪಾಯಿ ತನಕ, ತರುಣ್ ವಿಭಾಗದಲ್ಲಿ 5 ಲಕ್ಷ ರೂ. ಮೇಲ್ಪಟ್ಟು 10 ಲಕ್ಷ ರೂ. ಒಳಗೆ ಸಾಲ ಸೌಲಭ್ಯ ಸಿಗಲಿದೆ.


●.ಆರಂಭಿಕ ಹಂತದ ನೆರವು:

✧.ವಾಣಿಜ್ಯ ಚಟುವಟಿಕೆಗಳಾದ ಸಾರಿಗೆ ಸೌಲಭ್ಯ, ಸಾಮಾಜಿಕ, ಸಾಮುದಾಯಿಕ ಮತ್ತು ವೈಯಕ್ತಿಕ ಸೇವೆಗಳು, ಆಹಾರೋತ್ಪನ್ನಗಳು, ಜವಳಿ ಉತ್ಪಾದನಾ ವಲಯಗಳು ಸೇರಿ ನಿಗದಿತ ವಲಯ/ಚಟುವಟಿಕೆ ಆಧಾರಿತ ಯೋಜನೆಗಳು.

✧.ಕಿರು ಸಾಲ ಯೋಜನೆ (ಎಂಸಿಎಸ್), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್(ಆರ್​ಆರ್​ಬಿ)/ ಷೆಡ್ಯೂಲ್ಡ್ ಸಹಕಾರಿಬ್ಯಾಂಕ್​ಗಳಿಗೆ ಮರುಹಣಕಾಸು ಯೋಜನೆ, ಮಹಿಳಾ ಉದ್ಯಮಿ ಯೋಜನೆ, ವ್ಯಾಪಾರಿಗಳು ಮತ್ತು ಅಂಗಡಿಮುಂಗಟ್ಟುದಾರರಿಗೆ ವಾಣಿಜ್ಯ ಸಾಲ ಸೌಲಭ್ಯ, ಮಧ್ಯಮ ಸಾಲ ಯೋಜನೆ, ಕಿರು ಉದ್ದಿಮೆಗಳಿಗೆ ಉಪಕರಣ ಖರೀದಿಗೆ ಸಾಲ ಸೌಲಭ್ಯಗಳು ಇದರ ಅಡಿ ಬರಲಿವೆ.


●.ಕ್ರೆಡಿಟ್ ಪ್ಲಸ್ ಅಪ್ರೋಚ್:

✧.ಉದ್ದಿಮೆಗಳ ಅಭಿವೃದ್ಧಿಗೆ ಪೂರಕವಾಗಿ ಅನೇಕ ಸವಲತ್ತುಗಳನ್ನು ಒದಗಿಸುವ ಮುದ್ರಾ, ಹಲವು ರೀತಿಯಲ್ಲಿ ಫಲಾನುಭವಿಗಳಿಗೆ ನೆರವು ಒದಗಿಸಲಿದೆ. ಅಂಥವುಗಳಲ್ಲಿ, ಹಣಕಾಸು ಸಾಕ್ಷರತೆ ಅರ್ಥಾತ್ ಖರ್ಚು-ವೆಚ್ಚದ ಮೇಲೆ ನಿಗಾವಹಿಸುವುದಕ್ಕೆ ಅಗತ್ಯ ತಿಳಿವಳಿಕೆ ಒದಗಿಸುವುದು, ತಳಮಟ್ಟದ ಸಂಸ್ಥೆಗಳು/ಉದ್ದಿಮೆಗಳಿಗೆ ಉತ್ತೇಜನ ಮತ್ತು ಬೆಂಬಲ ನೀಡುವುದು.

✧.ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ (ಎನ್​ಆರ್​ಎಲ್​ಎಂ), ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ (ಎನ್​ಎಸ್​ಡಿಸಿ) ಜೊತೆ ಸಹಯೋಗ, ಕ್ರೆಡಿಟ್ ಬ್ಯೂರೋ ಮತ್ತು ರೇಟಿಂಗ್ ಏಜನ್ಸಿಗಳ ಜೊತೆ ಕೆಲಸ ಪ್ರಮುಖವಾದವು.

✧.ಇದಲ್ಲದೇ ಫಲಾನುಭವಿಗಳಿಗೆ, ಮುದ್ರಾ ಕಾರ್ಡ್, ಪೋರ್ಟ್​ಪೋಲಿಯೋ ಕ್ರೆಡಿಟ್ ಗ್ಯಾರಂಟಿ, ಸಾಲದ ಉನ್ನತೀಕರಣ ಸೌಲಭ್ಯವನ್ನೂ ಒದಗಿಸುತ್ತದೆ.


●.ಬ್ಯಾಂಕಿನ ಪ್ರಮುಖ ಜವಾಬ್ದಾರಿಗಳು:

✧. ಕಿರು ಹಣಕಾಸು ಸಂಸ್ಥೆಗಳ ನೋಂದಣಿ ಪ್ರಕ್ರಿಯೆ.

✧. ಗ್ರಾಹಕ ರಕ್ಷಣಾ ನಿಯಮಗಳ ಜೊತೆ ಜವಾಬ್ದಾರಿಯುತ ಹಣಕಾಸಿನ ವ್ಯವಹಾರ ನಡೆಸುವುದು ಮತ್ತು ಸಾಲ ವಸೂಲಾತಿಗೆ ಕ್ರಮ ತೆಗೆದುಕೊಳ್ಳುವುದಕ್ಕೆ ಅಗತ್ಯ ಕಾರ್ಯಸೂಚಿ ಸಿದ್ಧಪಡಿಸುವುದು.

✧. ಕಿರುಹಣಕಾಸು ವ್ಯವಹಾರ ನಡೆಸುವ ಸಂಸ್ಥೆಗಳಿಗೆ ನೀತಿ/ಮಾರ್ಗಸೂಚಿ ಸಿದ್ಧಪಡಿಸುವುದು.

✧. ಕಿರು ಹಣಕಾಸು ಸಂಸ್ಥೆಗಳಿಗೆ ಮಾನ್ಯತೆ/ರೇಟಿಂಗ್ ನೀಡುವುದು.

✧. ಕಟ್ಟಕಡೆಯ ಕಿರು ಉದ್ದಿಮೆ ತನಕವೂ ಸಾಲಸೌಲಭ್ಯವನ್ನು ತಲುಪಿಸುವುದಕ್ಕೆ ಅಗತ್ಯವಾದ ನಿಗದಿತ ಮಾರ್ಗಸೂಚಿ ಅಭಿವೃದ್ಧಿಪಡಿಸುವುದು.

✧. ಕಟ್ಟಕಡೆಯ ವ್ಯವಸ್ಥೆ ತನಕವೂ ಸಮರ್ಪಕ ತಂತ್ರಜ್ಞಾನದ ಸೌಲಭ್ಯ ಒದಗಿಸುವ ಮೂಲಕ ವ್ಯವಸ್ಥೆಯನ್ನು ಸರಳೀಕರಿಸುವುದು.

✧. ಖಚಿತ ಸಾಲದ ಯೋಜನೆ (ಕಿರು ವಾಣಿಜ್ಯೋದ್ಯಮಿಗಳಿಗೆ ಸಾಲ ಸೌಲಭ್ಯ)ಯನ್ನು ರೂಪಿಸಿ, ನಿರ್ವಹಿಸುವ ಹೊಣೆ.

✧. ಕಿರು ಉದ್ದಿಮೆ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಪೂರಕವಾದ ಬೆಂಬಲ ಮತ್ತು ಉತ್ತೇಜಕ ಚಟುವಟಿಕೆ.

(ಮೂಲ: vijayavani)

Wednesday 29 April 2015

☀"ಭೂಮಿಯ ಮೇಲಿರುವ ಪ್ರಮುಖ ಭೂಕಂಪ ವಲಯಗಳಲ್ಲಿ ಒಂದಾದ ಹಿಮಾಲಯ ವಲಯವು ಇತರೇ ಭೂಕಂಪ ವಲಯಗಳಿಗಿಂತ ಹೆಚ್ಚು ಹಾನಿಗೆ ಒಳಗಾಗುವುದು." ಹಾಗಾದರೆ ಹೆಚ್ಚು ಭೂಕಂಪಗಳು ಹಿಮಾಲಯದಲ್ಲಿಯೇ ಏಕೆ ಸಂಭವಿಸುತ್ತವೆ? ("Why more earthquakes occurs in Himalayan region?")

☀"ಭೂಮಿಯ ಮೇಲಿರುವ ಪ್ರಮುಖ ಭೂಕಂಪ ವಲಯಗಳಲ್ಲಿ ಒಂದಾದ ಹಿಮಾಲಯ ವಲಯವು ಇತರೇ ಭೂಕಂಪ ವಲಯಗಳಿಗಿಂತ ಹೆಚ್ಚು ಹಾನಿಗೆ ಒಳಗಾಗುವುದು." ಹಾಗಾದರೆ ಹೆಚ್ಚು ಭೂಕಂಪಗಳು ಹಿಮಾಲಯದಲ್ಲಿಯೇ ಏಕೆ ಸಂಭವಿಸುತ್ತವೆ?
("Why more earthquakes occurs in Himalayan region?")

━━━━━━━━━━━━━━━━━━━━━━━━━━━━━━━━━━━━━━━━━━━━━

★ (Physical Geography)
★ (ಪ್ರಾಕೃತಿಕ ಭೂಗೋಳಶಾಸ್ತ್ರ.)


— ಸುಮಾರು 400 ವರ್ಷಗಳ ಭೂಕಂಪದ ದಾಖಲೆಗಳನ್ನು ಅವಲೋಕಿಸಿದಾಗ, ಈ ಭೂಮಿಯ ಮೇಲೆ ಮುಖ್ಯವಾಗಿ ಎರಡು ಭೂಕಂಪ ವಲಯಗಳು ಕಾಣುತ್ತವೆ.
●.ಒಂದು ಶಾಂತಸಾಗರವನ್ನು ಸುತ್ತುವರಿದ ಪ್ರದೇಶ.

●.ಇನ್ನೊಂದು ವಲಯ ಈಸ್ಟ್ ಇಂಡೀಸ್‌ನಿಂದ ಆರಂಭವಾಗಿ ಹಿಮಾಲಯ, ಕ್ಯಾಸ್‌ಕಸ್, ಆಲ್ಪ್ಸ್ ಪರ್ವತ ಶ್ರೇಣಿಗಳನ್ನು ಹಾದು ಮೆಡಿಟರೇನಿಯನ್‌ವರೆಗೆ ಸಾಗುತ್ತದೆ.


— ಭಾರತದಲ್ಲಿ ಮುಖ್ಯವಾಗಿ ಮೂರು ಭೂಕಂಪ ವಲಯಗಳನ್ನು ಗುರುತಿಸಬಹುದು.
ಅದರಲ್ಲಿ ಹೆಚ್ಚು ಹಾನಿಗೆ ಒಳಗಾಗುವುದು ಹಿಮಾಲಯ ವಲಯ. ಇಷ್ಟಕ್ಕೂ ಹೆಚ್ಚು ಭೂಕಂಪಗಳು ಹಿಮಾಲಯದಲ್ಲಿ ಏಕೆ ಸಂಭವಿಸುತ್ತವೆ? ಎಂಬುವುದಕ್ಕೆ ಪ್ರಮುಖ ವೈಜ್ಞಾನಿಕ ಕಾರಣಗಳಿವೆ.


★.ಹಿಮಾಲಯ ಭೂಕಂಪಗಳ ತವರು.
━━━━━━━━━━━━━━━━━
— ಇಲ್ಲಿ 100 ವರ್ಷಗಳಲ್ಲಿ ಸರಾಸರಿ ನಾಲ್ಕು  ಅಥವಾ ಐದು ಬಾರಿ ದೊಡ್ಡ ಪ್ರಮಾಣದ ಭೂಕಂಪಗಳು ಘಟಿಸುತ್ತವೆ. ವಿಪರ್ಯಾಸವೆಂದರೆ ಇಡೀ ನೇಪಾಳ ದೇಶ ಹಿಮಾಲಯ ಪರ್ವತಗಳ ಮಡಿಲಲ್ಲಿದೆ.

✧.ಪಶ್ಚಿಮದಲ್ಲಿ ಆಪ್ಘಾನಿಸ್ತಾನದಿಂದ ಹಿಡಿದು ಪೂರ್ವದಲ್ಲಿ ಮ್ಯಾನ್ಮಾರ್‌ವರಗೆ ಚಾಚಿಕೊಂಡಿರುವ ಹಿಮಾಲಯ ಶ್ರೇಣಿಯ ಉದ್ದ 2400 ಕಿ.ಮೀ. ಅಗಲ 160 ಕಿ.ಮೀ.ದಿಂದ 400 ಕಿ.ಮೀ.ವರೆಗೂ ಇದೆ.

✧.ಹಿಮಾಲಯವು ಪೃಥ್ವಿಯ ಮೇಲೆ ಅತಿ ಎತ್ತರದ ಪರ್ವತ ಶ್ರೇಣಿಗಳನ್ನು ಹೊಂದಿದ್ದು ವರ್ಷಕ್ಕೆ ಆರರಿಂದ 10 ಸೆಂಟಿಮೀಟರ್‌ವರೆಗೆ ಬೆಳೆಯುತ್ತಿದೆ.


●.ಭೌಗೋಳಿಕ ಇತಿಹಾ ಸ:—
━━━━━━━━━━━━
✧.ಯುರೇಷ್ಯಾ ಮತ್ತು ಇಂಡಿಯಾ ಭೂಖಂಡಗಳು ಎದುರುಬದುರಾಗಿ ಘರ್ಷಣೆಗೆ ನಿಂತಾಗ ಎರಡೂ ಖಂಡಗಳ ಅಂಚಿನಿಂದ ಕೊಚ್ಚಿ ಬರುತ್ತಿದ್ದ ಅಗಾಧ ಮರಳು, ಮೆಕ್ಕಲುಮಣ್ಣು ಪೂರ್ವ ಮತ್ತು  ಪಶ್ಚಿಮದಲ್ಲಿ  ಸಂಚಯನಗೊಳ್ಳುತ್ತಿತ್ತು.ಹೀಗೆ ಸಂಚಯನ ಮೂಡುತ್ತಿದ್ದ ಸಾಗರವನ್ನು ಮುಂದೆ ಟೆಥಿಸ್ ಮಹಾಸಾಗರ ಎಂದು ಕರೆಯಲಾಯಿತು.

✧.ಉತ್ತರದಲ್ಲಿ ಯುರೇಷ್ಯಾ ಮತ್ತು ದಕ್ಷಿಣದಲ್ಲಿ ಇಂಡಿಯಾ ಭೂಫಲಕಗಳು ಮೆಲ್ಲಮೆಲ್ಲನೆ ಟೆಥಿಸ್ ಮಹಾಸಾಗರದ ಕತ್ತನ್ನು ಹಿಸುಕಲು ಪ್ರಾರಂಭಿಸಿದವು. ಇಂಡಿಯಾ ಫಲಕ ದಕ್ಷಿಣದಿಂದ ಉತ್ತರದ ಕಡೆಗೆ ನೂಕಲು ಪ್ರಾರಂಭಿಸಿದರೆ, ಉತ್ತರದಲ್ಲಿದ್ದ ಯುರೇಷ್ಯಾ ಫಲಕ ಒತ್ತಿ ಹಿಡಿದುಕೊಂಡಿತು. ಪರಿಣಾಮ ಟೆಥಿಸ್ ಸಾಗರದ ಸಂಚಯನವೆಲ್ಲ ಹಿಮಾಲಯ ಪರ್ವತಗಳಾಗಿ ಅದರಲ್ಲೂ ಮಧ್ಯ ಹಿಮಾಲಯ ಟಿಬೆಟ್ ಪ್ರಸ್ಥಭೂಮಿ ಅಥವಾ ಪ್ರಪಂಚದ ಮೇಲ್ಛಾವಣಿಯಾಗಿ ನಿಂತುಕೊಂಡಿತು.

✧.ಹಿಮಾಲಯ ಶ್ರೇಣಿ ಐದು ಹಂತಗಳಲ್ಲಿ (3.5 ಕೋಟಿ ವರ್ಷಗಳಿಂದ 2.5 ಕೋಟಿ ವರ್ಷಗಳ ನಡುವೆ) ಇಂದಿನ ರೂಪ ಪಡೆದುಕೊಂಡಿತು.


●.ಭೂಕಂಪ ವಲಯವಾಗಿ ಹಿಮಾಲಯ:
━━━━━━━━━━━━━━━━━━
✧.ಎರಡು ಭೂಖಂಡ ಅಥವಾ ಭೂಫಲಕಗಳ ನಡುವೆ ಅಗಾಧವಾದ ಬಿರುಕುಗಳಿದ್ದು, ಅವು ಚಲಿಸುತ್ತಿರುವ ಕಾರಣ ಘರ್ಷಣೆಗೆ ಒಳಗಾಗುತ್ತವೆ. ಎರಡು ಫಲಕಗಳ ಮಧ್ಯೆ ಸಿಕ್ಕಿಕೊಂಡಿರುವ ಹಿಮಾಲಯದ ಮೆದು ಶಿಲೆಗಳ ನಡುವೆ ರಾಕ್ಷಸ ಬಿರುಕುಗಳು ಅಥವಾ ದೈತ್ಯ ಸ್ತರಭಂಗಗಳಿವೆ.

✧.ಎರಡು ಭೂಫಲಕಗಳ ನಡುವೆ ನೂರಾರು ವರ್ಷಗಳ ಕಾಲ ಒತ್ತಡ ಬೆಳೆದು ಮುಂಚೂಣಿಯಲ್ಲಿರುವ ಶಿಲೆಗಳು ಒಮ್ಮೆಲೆ ಆಳದಲ್ಲಿ ಮುರಿದುಬಿದ್ದಾಗ ಭೂಕಂಪ ಘಟಿಸುತ್ತದೆ.

✧.ಇದೇ ಕಠ್ಮಂಡು ಪ್ರದೇಶದಲ್ಲಿ 1255ರಲ್ಲಿ ಆದ ಭೂಕಂಪದಿಂದ ಇಡೀ ನಗರ ನೆಲಸಮವಾದ ದಾಖಲೆ ಇದೆ.ಆದಾದ 679 ವರ್ಷಗಳ ನಂತರ 1934ರಲ್ಲಿ ದೊಡ್ಡ ಭೂಕಂಪವಾಗಿತ್ತು. ಮತ್ತೆ 81 ವರ್ಷಗಳ ನಂತರ ಈಗ ಸಂಭವಿಸಿದೆ.

✧.ಕಳೆದ 100 ವರ್ಷಗಳಲ್ಲಾದ ಅತ್ಯಂತ ಪ್ರಬಲ ಭೂಕಂಪಗಳೆಂದರೆ, 1847-ಅಸ್ಸಾಂ, 1905-ಕಾಂಗ್ರಾ, 1934-ಬಿಹಾರ್-ನೇಪಾಳ, 1950-ಅಸ್ಸಾಂ.

✧.ದೊಡ್ಡ ಕಲ್ಲೊಂದನ್ನು ನೀರಿಗೆ ಎಸೆದಾಗ ಸುತ್ತಲೂ ಅಲೆಗಳು ಏಳುತ್ತವೆ. ಅದೇ ರೀತಿ ಭೂಕಂಪದ ಮಧ್ಯಕೇಂದ್ರದಲ್ಲಿ ಹೆಚ್ಚು ಹಾನಿ ಕಾಣಿಸಿಕೊಂಡು, ದೂರಹೋದಷ್ಟೂ ಹಾನಿ ಕಡಿಮೆಯಾಗುತ್ತ ಹೋಗುತ್ತದೆ .

✧.ಇದನ್ನು ರಿಕ್ಟರ್ ಮಾಪನದಿಂದ ಅಳೆಯಲಾಗುತ್ತದೆ.

✧.ಈಗಿನ ಭೂಕಂಪದ ವ್ಯಾಪ್ತಿ ಸುಮಾರು 4000 ಚದರ ಕಿ.ಮೀ.ಗಳವರೆಗೂ ಹರಡಿದೆ.

(ಕೃಪೆ: prajawani)

Saturday 25 April 2015

☀'ಸಕಾಲ ಕಾರ್ಯಕ್ರಮ' ಎಂದರೇನು? ನಾಗರಿಕರ ಸೇವೆಗಳ ಖಾತರಿ ಕಾಯಿದೆಯ ತತ್ವಗಳಿಗನುಗುಣವಾಗಿ ಅದರ ಹಿನ್ನೆಲೆ ಮತ್ತು ಉದ್ದೇಶವನ್ನು ಚರ್ಚಿಸಿ  (What do you mean by 'SAKALA'? Discuss the background and purpose of the 'SAKALA' with reference to the 'Citizens' Services Guarantee Act')

☀'ಸಕಾಲ ಕಾರ್ಯಕ್ರಮ' ಎಂದರೇನು? ನಾಗರಿಕರ ಸೇವೆಗಳ ಖಾತರಿ ಕಾಯಿದೆಯ ತತ್ವಗಳಿಗನುಗುಣವಾಗಿ ಅದರ ಹಿನ್ನೆಲೆ ಮತ್ತು ಉದ್ದೇಶವನ್ನು ಚರ್ಚಿಸಿ
(What do you mean by 'SAKALA'? Discuss the background and purpose of the 'SAKALA' with reference to the 'Citizens' Services Guarantee Act')
━━━━━━━━━━━━━━━━━━━━━━━━━━━━━━━━━━━━━━━━━━━━━


●.ಸಕಾಲ ಕಾರ್ಯಕ್ರಮದ ಅರ್ಥ:—
━━━━━━━━━━━━━━━━━
— ನಾಗರಿಕರ ಸೇವೆಗಳ ಖಾತರಿ ಕಾಯಿದೆಯನ್ನು ಹಾಗೂ ಅದರ ಪ್ರಕ್ರಿಯೆಯನ್ನು ಪರಿಗಣಿಸಿದರೆ ಒಂದು ನಿರ್ಧಿಷ್ಟ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲು ಒತ್ತು ಕೊಡಲಾಗಿದೆ.ಅಂದರೆ ನಾಗರಿಕರಿಗೆ ಸಕಾಲದಲ್ಲಿ ಸೇವೆ ಪಡೆದುಕೊಳ್ಳವುದು ನಾಗರಿಕರ ಹಕ್ಕು ಆಗಿರುತ್ತದೆ ಎಂಬುದು ಸರ್ಕಾರದ ಆಶಯ ಮತ್ತು ನೀತಿಯಾಗಿರುತ್ತದೆ.ಆದ್ದರಿಂದ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ವಯ ಸೇವಾ ಯೋಜನೆಯನ್ನು ಸಕಾಲ ಎಂದು ಹೆಸರಿಸಿದೆ.

★ಸರ್ಕಾರ ಅಂಗೀಕರಿಸಿರುವ ಯೋಜನೆಯ ಲಾಂಛನ ಮತ್ತು ಘೋಷ ವಾಕ್ಯಗಳು ನಾಗರಿಕರ ಸೇವೆಗಳ ಖಾತರಿ ಯೋಜನೆಯನ್ನು ಹಿಡಿದಿಟ್ಟಿವೆ.
●.ಲಾಂಛನ:  ಗಡಿಯಾರ (ಸಮಯ)ವನ್ನು ಪ್ರತಿನಿಧಿಸುತ್ತದೆ.
●.ಧ್ಯೇಯ(ಘೋಷ) ವಾಕ್ಯ:  ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯಕ್ಕೆ ತಪ್ಪೀಲ್ಲ ಎಂಬುದು ಧ್ಯೇಯ(ಘೋಷ) ವಾಕ್ಯಗಳಾಗಿವೆ.


●.'ಸಕಾಲ'ದ ಹಿನ್ನೆಲೆ ಮತ್ತು ಉದ್ದೇಶ :-
━━━━━━━━━━━━━━━━━━━

✧.ಭಾರತದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದು, ಎಲ್ಲವೂ ಸಂವಿಧಾನ ಸೂಚಿಸಿದಂತೆ ನಡೆಯಬೇಕು. ಎಲ್ಲಾ ಸಂಸ್ಥೆಗಳು ಎಲ್ಲಾ ಪ್ರಜೆಗಳು ಸಂವಿಧಾನಕ್ಕೆ ಬದ್ದರಾಗಿರಬೇಕು. ಈ ನಿಟ್ಟಿನಲ್ಲಿ ದೇಶದ ವ್ಯವಹಾರಗಳನ್ನು ನಿಭಾಯಿಸಲು ಸಂವಿಧಾನ ನಿರ್ದೇಶಿಸಿದಂತೆ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಜಾರಿಯಲ್ಲಿವೆ.

✧.ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಮೂಲಭೂತ ಆಶಯ ಮತ್ತು ತತ್ವಗಳಿಗನುಗುಣವಾಗಿ ಕೆಲಸ ಮಾಡಿದರೆ ಎಲ್ಲವೂ ಸುಲಲಿತ ಮತ್ತು ಸುಮಧುರವಾಗಿರುತ್ತದೆ. ಆದರೆ ಸಮಸ್ಯೆ ಪ್ರಾರಂಭವಾಗುವುದು ಚುನಾವಣೆಗಳ ನಂತರವೇ! ಸರ್ಕಾರ ರಚನೆಯಾಗಿ ಆಡಳಿತ ಕೈಗೆ ಬರುತ್ತಿದ್ದಂತೆ ಜನ ಪ್ರತಿನಿಧಿಗಳ ವರ್ತನೆ ಬದಲಾಗಿ ಬಿಡುತ್ತದೆ ಅವರು ಪ್ರಭುಗಳಾಗಿ ಬಿಡುತ್ತಾರೆ ಅವರು ಆಳಿದ ಹಾಗೆ ಜನ ಆಳಿಸಿ ಕೊಳ್ಳಬೇಕಾಗುತ್ತದೆ ಸರ್ಕಾರವನ್ನು ರಚಿಸುವ (ಪರೋಷವಾಗಿ) ಅಧಿಕಾರ ಜನರಿಗಿದ್ದರೂ, ಸರ್ಕಾರದ ಮಂತ್ರಿ/ನೌಕರರ ಮೇಲೆ ಜನರಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ ಹಾಗಾಗಿ ದಿನನಿತ್ಯದ ವ್ಯವಹಾರಗಳಲ್ಲಿ ಸರ್ಕಾರಿ ಆಡಳಿತದಲ್ಲಿ ಸಾಮಾನ್ಯ ಜನರು ದಿನಗಟ್ಟಲೆ ಕಛೇರಿಗಳಿಗೆ ಅಲೆದಾಡಬೇಕಾದ , ಸರ್ಕಾರಿ ನೌಕರರ ಮರ್ಜಿಗೆ ಕಾಯಬೇಕಾಗಿ ಬಂದಿರುವ ಪರಿಸ್ಥಿತಿ ಉದ್ಭವವಾಗಿದೆ.

✧.ಅದಕ್ಷ ಹಾಗೂ ಭ್ರಷ್ಟ ಆಡಳಿತ ಏರ್ಪಟ್ಟಾಗ ಜನರಿಗೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ ಇದು ಅಸಹನೆ, ಅಸಮಧಾನ ಹಾಗೂ ಅಂತಿಮವಾಗಿ ಜನರ ಪ್ರತಿರೋದಕ್ಕೆ ದಾರಿಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಚ್ಚೆತ್ತು ಕೆಲವು ರಚನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಬಹಳ ಮುಖ್ಯವಾದ್ದು ನಾಗರಿಕ ಸನ್ನದು ಅಥವಾ ನಾಗರಿಕ ಸೇವೆಗಳ ಖಾತರಿ ಎಂಬ ಜನಪರ ಸುಧಾರಣೆ ಅಗತ್ಯವಾದ ನಾಗರಿಕ ಸೇವೆಗಳನ್ನು ಜನರಿಗೆ ಸಕಾಲದಲ್ಲಿ ಒದಗಿಸುವುದು ಈ ಸುಧಾರಣೆಯ ಸರಳ ಉದ್ದೇಶ

✧.ಬಿಹಾರ ಮಧ್ಯಪ್ರದೇಶ ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ಮೊದಲ ಹೆಜ್ಜೆ ತೆಗೆದು ಕಾಯಿದೆ ರೂಪದಲ್ಲಿ ನಾಗರಿಕ ಸೇವೆಗಳ ಸುಧಾರಣೆಯನ್ನು ಜಾರಿಗೆ ತಂದವು ಈಗ ಕರ್ನಾಟಕ ಸರ್ಕಾರ ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆ ಜಾರಿಗೊಳಿಸಿ ರಾಜ್ಯದ ಜನತೆಗೆ ಉತ್ತಮವಾದ ಸೇವೆ ಸಲ್ಲಿಸಲು ಮುಂದಾಗಿದೆ.


●.ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆಯ ಪ್ರಮುಖ ಅಂಶಗಳು:-
━━━━━━━━━━━━━━━━━━━━━━━━━━━━━━

—ಈ ಕಾಯಿದೆ ಅನ್ವಯ ಸರ್ಕಾರ ೩೦ ಇಲಾಖೆಗಳನ್ನು ಗುರುತಿಸಿದ್ದು ಈ ೩೦ ಇಲಾಖೆಗಳೂ ಒದಗಿಸುವ ಸೇವೆಗಳ ಪೈಕಿ ಒಟ್ಟು ೨೬೫ ಸೇವೆಗಳನ್ನು ಖಾತ್ರಿಗೊಳಿಸಿದೆ.
✧.ಈ ಕಾಯಿದೆಯನ್ವಯ ನಾಗರಿಕರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
✧.ಪ್ರತಿ ಇಲಾಖೆಯಲ್ಲಿ ಯಾವ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸ್ವೀಕರಿಸಿದೆ ಎಷ್ಟು ಕಲಾವಧಿಯಲ್ಲಿ (ದಿನಗಳಲ್ಲಿ) ಸೇವೆಯನ್ನು ಒದಗಿಸಬೇಕು ಎಂಬುದನ್ನು ನಿಗದಿಪಡಿಸಲಾಗಿದೆ(ಅರ್ಜಿಯನ್ನು ತಿರಸ್ಕರಿಸುವ ಸಂದರ್ಭಗಳಲ್ಲಿ ನಿಯೋಜಿತ ಅಧಿಕಾರಿಯು ತಿರಸ್ಕಾರಕ್ಕೆ ಕಾರಣಗಳನ್ನು ಬರವಣಿಗೆಯಲ್ಲಿ ಕೊಡಬೇಕಾಗುತ್ತದೆ)
✧.ಅರ್ಜಿದಾರ ನಾಗರಿಕನಿಂದ ಅರ್ಜಿ ಸ್ವೀಕರಿಸಿದ್ದಕ್ಕೆ ಸ್ವೀಕೃತಿಯನ್ನು ಕೊಡಬೇಕಾಗುತ್ತದೆ.
✧.ನಿರ್ದಿಷ್ಟ ಕಲಾವಧಿಯಲ್ಲಿ ಸೇವೆಯನ್ನು ಒದಗಿಸಬೇಕಾದ ಅಧಿಕಾರಿಯು ಸೇವೆಯನ್ನು ಒದಗಿಸದಿದ್ದರೆ ಅರ್ಜಿದಾರರು ಮೊದಲ ಮನವಿ ಸಲ್ಲಿಸಬಹುದು.
✧.ಅರ್ಜಿದಾರರು ಮೊದಲ ಮನವಿ ಸಲ್ಲಿಸಬೇಕಾದ ಅಧಿಕಾರಿಯನ್ನು ನಿಗದಿಪಡಿಸಲಾಗಿದ್ದು ಹೀಗೆ ನಿಗದಿತವಾದ ಅಧಿಕಾರಿಗೆ ಅರ್ಜಿದಾರರು ಮೊದಲ ಮನವಿ ಸಲ್ಲಿಸಬೇಕಾಗುತ್ತದೆ.
✧.ಮೊದಲ ಮನವಿಯಲ್ಲಿ ಅರ್ಜಿದರರಿಗೆ ಸೋಲುಂಟಾದರೆ ಮೇಲ್ಮನವಿ ಸಲ್ಲಿಸಬುದಾಗಿದೆ. ಯಾವ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂಬುದನ್ನು ಸೂಚಿಸಲಾಗಿರುತ್ತದೆ. ಮೊದಲ ಹಾಗೂ ಮೇಲ್ಮನವಿಗಳನ್ನು ಇಂತಿಷ್ಟು ದಿನಗಳಲ್ಲಿ ವಿಲೇವಾರಿ ಮಾಡಬೇಕೆಂದು ಕಾಲಮಿತಿ ನಿಗದಿಪಡಿಸಲಾಗಿದೆ.
✧.ನಿಗದಿತ ಕಾಲಾವಧಿಯಲ್ಲಿ ಅರ್ಜಿದಾರ ನಾಗರಿಕರಿಗೆ ಖಾತ್ರಿಗೊಳಿಸಿದ ಸೇವೆಯನ್ನು ಒದಗಿಸಲಾಗಿದಿದ್ದ ಪಕ್ಷದಲ್ಲಿ ಅರ್ಜಿದಾರರಿಗೆ ಸರ್ಕಾರ ನಿಗದಿಗೊಳಿಸಿರುವ ಪರಿಹಾರ ಮೊತ್ತವನ್ನು ಕೊಡಬೇಕಾಗುತ್ತದೆ.
✧.ಕಾಲಮಿತಿಯೊಳಗೆ ಸೇವೆ ಸಲ್ಲಿಸಲು ವಿಫಲವಾದ ಅಧಿಕಾರಿ ಅಥವಾ ನೌಕರರಿಗೆ ಸರ್ಕಾರ ದಂಡ ವಿಧಿಸಬಹುದು ಮತ್ತು ಪ್ರಕರಣವನ್ನು ಕಪ್ಪು ಚುಕ್ಕೆಯಾಗಿ ಅಧಿಕಾರಿ/ನೌಕರನ ಸೇವಾ ದಾಖಲೆಗಳಲ್ಲಿ ನಮೂದಿಸಬಹುದು.


●.ಯೋಜನೆಯ ಸಂಕ್ಷಿಪ್ತ ಇತಿಹಾಸ:-
━━━━━━━━━━━━━━━━━

✧.ನಾಗರಿಕ ಸನ್ನದು ಅಂದರೆ ನಾಗರಿಕರು ಪಡೆಯಬೇಕಾದ ಸೇವೆ ಮತ್ತು ಹಕ್ಕು ಈ ಪರಿಕಲ್ಪನೆ ಮೊದಲು ಮೂಡಿ ಬಂದಿದ್ದು ಬ್ರಿಟನ್ ದೇಶದಲ್ಲಿ ಇದು ಸಹಜವೂ ಆಗಿತ್ತು. ಏಕೆಂದರೆ ವಿಶ್ವದ ಮೊತ್ತ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆ ರೂಪು ತಾಳಿದ್ದು ಬ್ರಿಟನ್ನಿನಲ್ಲೇ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಆಡಳಿತ ತೆರೆದ ಪುಸ್ತಕವಾಗಿರಬೇಕು. ಅಂದರೆ ಸಂಪೂರ್ಣ ಪಾರದರ್ಶಕತೆ ಹೊಣೆಗಾರಿಕೆ (ಉತ್ತರದಾಯಿತ್ವ) ಹಾಗೂ ಸಹ್ನದಯ ಸ್ವಂದನ ಆಡಳಿತದಲ್ಲಿ ಹಾಸು ಹೊಕ್ಕಾಗಿರಬೇಕು ಎಂಬುದು ಜಗತ್ತು ಒಪ್ಪಿರುವ ಸಿದ್ದಾಂತವಾಗಿದೆ

✧.1991 ರಲ್ಲಿ ಅಂದಿನ ಬ್ರಿಟಿಷ್ ಪ್ರಧಾನಮಂತ್ರಿ ಜಾನ್ ಮೇಜರ್ ರವರು ಪ್ರಪ್ರಥಮವಾಗಿ ಇಂತಹ ಒಂದು ನಾಗರಿಕ ಸನ್ನದನ್ನು ಜಾರಿಗೊಳಿಸಿದರು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಲಕಾಲಕ್ಕೆ ತಕ್ಕಂತೆ ಯೋಜನೆಯನ್ನು ಪರಿಶ್ಕರಿಸಿ ಅನುಶ್ಟಾನಗೊಳಿಸುತ್ತಿವೆ.

✧.ಬ್ರಿಟನ್ ದೇಶದ ನಾಗರಿಕ ಸನ್ನದು ಪರಿಕಲ್ಪನೆ ಕ್ರಮೇಣ ವಿಶ್ವದಲ್ಲಿ ವ್ಯಾಪಿಸಿಕೊಂಡಿತು.ಕಾಮನ್ ವೆಲ್ತ್ ರಾಷ್ಟ್ರಗಳು ತಮ್ಮ ಸನ್ನಿವೇಶಕ್ಕೆನುಗುಣವಾಗಿ ನಾಗರಿಕ ಸನ್ನದು ಯೋಜನೆಗಳನ್ನು ಜಾರಿಗೊಳಿಸಿದವು.ಭಾರತವೂ ಹಿಂದೆ ಬೀಳಲಿಲ್ಲ ! 1997 ರ ಮೇ ತಿಂಗಳನಲ್ಲಿ ಅಂದಿನ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಪರಿಣಾಮಕಾರಿ ಹಾಗೂ ಸಂವೇದನಾಶೀಲ ಸರ್ಕಾರ ಎಂಬ ಕಾರ್ಯ ಯೋಜನೆಯನ್ನು ಸಿದ್ದಪಡಿಸಲು ತೀರ್ಮಾನಿಸಲಾಯಿತು.

✧.ಹೆಸರು ಬದಲಾಗಿದ್ದರೂ ಇದು ಕೊಡ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ನಾಗರಿಕ ಸನ್ನದು ಕಾರ್ಯಕ್ರಮವಾಗಿತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ನಾಗರಿಕ ಸನ್ನದು ಬಿಡುಗಡೆಗೊಳಿಸಿದವು.ಆದರೆ ಇದು ಯಾವುದೂ ಜನಕ ಗಮನ ಸೆಳೆಯಲಿಲ್ಲ ನಾಗರಿಕ ಸನ್ನದು ಕಾರ್ಯಕ್ರಮ ಒಂದು ಕಾಟಚಾರದ ಪ್ರಕ್ರಿಯೆಯಾಗಿ ವ್ಯರ್ಥವಾಯಿತು. ಇದೆಲ್ಲ ನಡೆದದ್ದು ಸುಮಾರು 15 ವರ್ಷಗಳ ಹಿಂದೆ,ಆದರೆ ಈಗ ಹಾಗಿಲ್ಲ ಈ ಅವಧಿಯಲ್ಲಿ ಕಾಲ ಬದಲಾಗಿದೆ.ಜನ ಜಾಗ್ನತಿಯ ಪ್ರಮಾಣ ಮತ್ತು ವೇಗ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಮೌನವಾಗಿ ಸಹಿಸಿಕೊಂಡು ಆಳಿಸಿಕೊಳ್ಳಲು ಈಗ ಜನ ಸಿದ್ದರಿಲ್ಲ ಎಂಬುದು ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಗೆ ಮನವರಿಕೆಯಾಗಿದೆ.

✧.ಆದ್ದರಿಂದ ಸರ್ಕಾರಗಳು ನಾಗರಿಕ ಸೇವೆಗಳ ಪಟ್ಟಿ ಮಾಡಿ ಪ್ರಚಾರಕ್ಕಾಗಿ ಬಿಡುಗಡೆ ಮಾಡುತ್ತಿಲ್ಲ ಬದಲಾಗಿ ಸಂವಿಧಾನಕ್ಕೆನುಗುಣವಾಗಿ ಕಾನೂನು ರಚಿಸಿ ಅನುಪ್ಠಾನಗೊಳಿಸುತ್ತಿವೆ. ಈನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ನಾಗರಿಕರ ಸೇವೆಗಳ ಖಾತರಿ ಯೋಜನೆ ಸದುದ್ದೇಶದಿಂದ ಕೊಡಿದೆ ಮತ್ತು ಪರಿಣಾಮಕಾರಿಯಾಗಿದೆ.ನಾಗರಿಕರು (ಜನತೆ) ಮಾಡಬೇಕಾದ್ದು ಇಷ್ಠೆ.ಕಾನೂನಿನ ಅಂಶಗಳನ್ನು ಸರಿಯಾಗಿ ತಿಳಿದುಕೊಂಡು ಅದರಂತೆ ಸೇವೆ ಪಡೆದುಕೊಳ್ಳಲು ಕಾರ್ಯೋನ್ಮುಖರಾಗುವುದು.

✧.2011 ರಲ್ಲಿ ಜನಲೋಕಪಾಲ ಪರ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಬೇಡಿಕೆಗಳಲ್ಲಿ ನಾಗರಿಕ ಸನ್ನದು ಕೊಡ ಒಂದಾಗಿತ್ತು. ಬಿಹಾರ ಮಧ್ಯಪ್ರದೇಶ ಮುಂತಾದ ರಾಜ್ಯಗಳು ಕೇಂದ್ರಕ್ಕಿಂತಲೂ ಮೊದಲೇ ನಾಗರಿಕ ಸನ್ನದು ಅಳವಡಿಸಿಕೊಂಡಿದ್ದವು.

✧.ವಿವಿಧ ರಾಜ್ಯಗಳ ಮಾದರಿ ಬಗ್ಗೆ ಅಧ್ಯಯನ ನಡೆಸಿದ್ದ ಡಿ.ವಿ.ಸದಾನಂದಗೌಡರ ನೇತ್ನತ್ವದ ಸರ್ಕಾರ 2012 ಏಪ್ರಿಲ್ 02 ರಂದು ಸಕಾಲ ಯೋಜನೆ ಜಾರಿಗೆ ತಂದರು ಇದು ಯಶಸ್ವಿಯಾಗಿ ಮುಂದುವರಿಯುತ್ತಿದೆ.


●. ಮಸೂದೆ ವಿಶೇಷ:-
━━━━━━━━━━━
✧.ಎಲ್ಲ ರಾಜ್ಯಗಳೂ ಇಂಥ ಸೌಲಭ್ಯ ಜಾರಿಗೊಳಿಸುವುದು ಕಡ್ಡಾಯ.
✧.ಈ ಮಸೂದೆಯಿಂದ ರಾಜ್ಯಗಳ ಅಧಿಕಾರಕ್ಕೆ ದಕ್ಕೆ ಬಿಜೆ.ಪಿ. ವಿರೋಧ.
✧.ಕಾಲಮಿತಿಯೊಳಗೆ ಸರ್ಕಾರಿ ಸೇವೆ ಒದಗಿಸುವ ಕಲ್ಪನೆ ಬ್ರಿಟನ್ ದು 1919 ರಲ್ಲಿ ಮೊದಲಬಾರಿಗೆ ಅಲ್ಲಿ ಇದು ಜಾರಿಗೆ ಬಂದಿತ್ತು.
✧.ವಿಧೇಯಕ ಕಾಯ್ದೆಯಾದ ಬಳಿಕ ಕೇಂದ್ರ ಸರ್ಕಾರದ ನಾಗರಿಕ ಸನ್ನದಿನಲ್ಲಿರುವಂತೆ ಎಲ್ಲ ರಾಜ್ಯಗಳೂ ವಿವಿಧ ಸರ್ಕಾರಿ ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸಬೇಕಾಗುತ್ತದೆ.
✧.ಪಾಸ್ ಪೋರ್ಟ್,ಪಿಂಚಣಿ,ಜನನ-ಮರಣ ಪ್ರಮಾಣ ಪತ್ರ, ತೆರಿಗೆ ರೀಫಂಡ್, ಜಾತಿ ಪ್ರಮಾಣಪತ್ರ ಮುಂತಾದ ಸರ್ಕಾರಿ ಸೇವೆಗಳು ಇದರಡಿ ಬರುತ್ತವೆ.
✧.ಸೇವೆ ನೀಡಲು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುವ ಅಧಿಕಾರಿಗೆ ದಿನಕ್ಕೆ 250 ರೂ ಅಥವಾ ಗರಿಷ್ಠ 50 ಸಾವಿರರೂವರೆಗೂ ದಂಡ ವಿಧಿಸುವ ಅವಕಾಶವುಂಟು ಅಲ್ಲದೇ, ಭ್ರಷ್ಟಾಚಾರ ಕುರಿತು ತನಿಖೆ ಹಾಗೂ ಶಿಸ್ತು ಕ್ರಮ ಜರುಗಿಸುವ ಅವಕಾಶವಿದೆ.
✧.ವಿಧೇಯಕ ಕಾಯ್ದುಯಾದ ಬಳಿಕ ಕೇಂದ್ರ ಮಟ್ಟದಿಂದ ಪಂಚಾಯಿತಿವರೆಗೂ ದೂರು ಇತ್ಯರ್ಥ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ.
✧.ಕಾಲಮಿತಿಯೊಳಗೆ ಸೇವೆ ಒದಗಿಸಬೇಕಾದಾದ ಸಾರ್ವಜನಿಕ ಸಂಸ್ಥೆಗಳ ಪಟ್ಟಿಯಲ್ಲಿ ಸಚಿವಾಲಯಗಳು, ಖಾಸಗಿ, ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳು ಸರ್ಕಾರದ ಅನುದಾನ ಪಡೆದಿರುವ (ಎನ್.ಜಿ.ಓ) ಸರ್ಕಾರಕ್ಕೆ ಹೊರಗುತ್ತಿಗೆ ಸೇವೆ ಒದಗಿಸುತ್ತಿರುವ ಖಾಸಗಿ ಕಂಪನಿಗಳು ಸೇರಿವೆ.
✧.ಅಣ್ಣಾ ಹಜಾರೆ ಅವರ ಪ್ರಮುಖ ಬೇಡಿಕೆಗಳಲ್ಲಿ ಕಾಲಮಿತಿಯ ಸೇವೆಯೂ ಒಂದಾಗಿತ್ತು.
✧.ಲೋಕ ಸಭೆಯಲ್ಲಿ 2011 ರ ಡಿಸೆಂಬರ್ ನಲ್ಲಿ ಈ ಮಸೂದೆ ಮಂಡನೆಯಾಗಿತ್ತು. ಇದೀಗ ೧೫ ತಿಂಗಳ ಬಳಿಕ ಸಂಪುಟದ ಮುಂದಿಟ್ಟು ಅನುಮತಿ ಪಡೆಯಲಾಗಿದೆ.

(ಕೃಪೆ:  ಸಮಾಜಕ್ಕಾಗಿ) 

☀ಕರ್ನಾಟಕದ ಪ್ರಮುಖ ನೀರಾವರಿ ಯೋಜನಗೆಳು : (The Major Irrigation Projects in Karnataka)

☀ಕರ್ನಾಟಕದ ಪ್ರಮುಖ ನೀರಾವರಿ ಯೋಜನಗೆಳು :
(The Major Irrigation Projects in Karnataka)

━━━━━━━━━━━━━━━━━━━━━━━━━━━━━━━━━━━━━━━━━━━━━
★Karnataka Economics
★ ಕರ್ನಾಟಕದ ಆರ್ಥಿಕತೆ.


—ಭಾರತದಲ್ಲಿ ನೀರಾವರಿ ಯೋಜನೆಗಳು ಇರುವಂತೆ ಕರ್ನಾಟಕದಲ್ಲಿಯು ಕೆಲವು ನೀರಾವರಿ ಯೋಜನೆಗಳನ್ನು ಕಾಣಬಹುದು. ಈ ಕೆಳಕಂಡಂತೆ ಅವುಗಳನ್ನು ಕಾಣಬಹುದು.

●.ಕೃಷ್ಣರಾಜ ಸಾಗರ :••———•• ಈ ಜಲಾಶಯವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸುಮಾರು ೧.೯೫ ಲಕ್ಷ ಹೆಕ್ಟೆರ್ ಭೂಮಿಗೆ ನೀರು ಒದಗಿಸಿದೆ.


●.ಕೃಷ್ಣಾ ಮೇಲ್ದಂಡೆ ಯೋಜನೆ :••———•• ಈ ಜಲಾಶಯವನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಮತ್ತು ನಾರಾಯಣಪುರಗಳಲ್ಲಿ ನಿರ್ಮಿಸಿದೆ. ಬರಗಾಲ ಪೀಡಿತ ಬಿಜಾಪುರ ಮತ್ತು ಗುಲ್ಬರ್ಗಾ ರಾಯಚೂರು ಜಿಲ್ಲೆಗಳ ೬.೧೭ ಲಕ್ಷ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಹೊಂದಿದೆ.


●.ಮಲಪ್ರಭಾ ಯೋಜನೆ :••———•• ಮಲಪ್ರಭಾ ಯೋಜನೆಯಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಯೋಜನೆಯಿಂದ ೨,೨೦,೦೨೮ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಇದೆ.


●.ಭದ್ರಾ ಜಲಾಶಯ :••———•• ಈ ಜಲಾಶಯಗಳನ್ನು ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದ್ದು, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಂಗಳೂರು ಮತ್ತು ಬಳ್ಳಾರಿ ಜಿಲ್ಲೆಗಳ ೧,೦೫,೫೭೦ ಹೆಕ್ಟರ್ ಭೂಮಿಗೆ ನೀರಾವರಿ ಒದಗಿಸಲಾಗುತ್ತಿದೆ.


●.ತುಂಗಾಭದ್ರ ಜಲಾಶಯ :••———•• ಈ ಜಲಾಶಯವನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟಿ ತಾಲ್ಲೂಕಿನ ಮಲ್ಲಾಪುರದ ಬಳಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ರಾಜ್ಯಗಳ ಜಂಟಿ ಯೋಜನೆಯಾಗಿ ತುಂಗಾಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಯೋಜನೆಯು ೧೯೪೫ ರಲ್ಲಿ ಪ್ರಾರಂಭವಾಯಿತು. ಈ ಜಲಾಶಯದಿಂದ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು ೩,೬೨,೭೧೫ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸಲಾಗುತ್ತಿದೆ.


●.ತುಂಗಾಭದ್ರ ಮೇಲ್ದಂಡೆ ಯೋಜನೆ :••———•• ಈ ಯೋಜನೆಯಡಿ ಈಗ ಶಿವಮೊಗ್ಗ ಬಳಿಯ ತುಂಗಾ ಅಣೆಕಟ್ಟಿಗೆ ಹೊಸರೂಪ ನೀಡಿ ಶಿವಮೊಗ್ಗ ಚಿತ್ರದುರ್ಗ, ದಾರವಾಡ ಜಿಲ್ಲೆಗಳ ಸುಮಾರು ೯೪,೬೬೮ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಹೊಂದಲಾಗಿದೆ.


●.ಹಾರಂಗಿ ಯೋಜನೆ :••———•• ಈ ಯೋಜನೆಯಂತೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹುಡ್ಗೂರು ಗ್ರಾಮದ ಬಳಿ ಹಾರಂಗಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಿ ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳ ಸುಮಾರು ೪೩,೦೩೬ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸಿದೆ.

(ಕೃಪೆ: ಸಮಾಜಕ್ಕಾಗಿ) 

☀ಭಾರತದಲ್ಲಿನ ಪ್ರಮುಖ ನೀರಾವರಿ ಯೋಜನೆಗಳು ಅಥವಾ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳು:  (The Major Irrigation Projects in India or The Major Multipurpose River Valley Projects)

☀ಭಾರತದಲ್ಲಿನ ಪ್ರಮುಖ ನೀರಾವರಿ ಯೋಜನೆಗಳು ಅಥವಾ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳು:
(The Major Irrigation Projects in India or The Major Multipurpose River Valley Projects)

━━━━━━━━━━━━━━━━━━━━━━━━━━━━━━━━━━━━━━━━━━━━━

★ Indian Economics
★ ಭಾರತದ ಆರ್ಥಿಕತೆ


●.ಬಾಕ್ರಾನಂಗಲ್ ••—————•• ಸಟ್ಲೇಜ್ ನದಿಗೆ ಬಾಕ್ರಾನಂಗಲ್ ಅಣೆಕಟ್ಟು ಕಟ್ಟಲಾಗಿದೆ.

●.ದಾಮೋದರ ••—————•• ದಾಮೋದರ ಎಂಬ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.

●.ಕೋಸಿ ಯೋಜನೆ ••—————•• ಕೋಸಿ ಎಂಬ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.

●.ಹಿರಾಕುಡ್ ಯೋಜನೆ ••—————•• ಇದನ್ನು ಮಹಾನದಿಗೆ ಅಡ್ಡವಾಗಿ ಕಟ್ಟಲಾಗಿದೆ.

●.ಚಂಬಲ್ ಯೋಜನೆ ••—————•• ಚಂಬಲ್ ನದಿಗೆ ಅಡ್ಡವಾಗಿ ಕಟ್ಟಲಾಗಿದೆ.

●.ತುಂಗಾಭದ್ರ ಯೋಜನೆ ••—————•• ತುಂಗಾಭದ್ರ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.

●.ನಾಗಾರ್ಜುನ ಯೋಜನೆ ••—————•• ಇದನ್ನು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

●.ಬಾರ್ಗಿ ಯೋಜನೆ ••—————•• ಇದನ್ನು ಬೀಸ್ ನದಿಗೆ ಕಟ್ಟಲಾಗಿದೆ.

●.ಬೀಚ್ ಯೋಜನೆ ••—————•• ಇದನ್ನು ಬೀಸ್ ನದಿಗೆ ಕಟ್ಟಲಾಗಿದೆ.

●.ಇಡಕ್ಕಿ ಯೋಜನೆ ••—————•• ಪೆರಿಯಾಕ್ ಎಂಬ ನದಿಗೆ ಕಟ್ಟಲಾಗಿದೆ.

●.ಆಲಮಟ್ಟಿ ಯೊಜನೆ ••—————•• ಕೃಷ್ಣಾನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ.

●.ಮೆಟ್ಟೂರು ಯೋಜನೆ ••—————•• ಕಾವೇರಿ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.

●.ಕೋಯ್ನ ಯೋಜನೆ ••—————•• ಕೋಯ್ನ ನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ.

●.ಘಂಡಕಿ ಯೋಜನೆ ••—————•• ಘಂಡಕಿ ನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ.

●.ರಿಹಾಂದ ಯೋಜನೆ ••—————•• ರಿಹಾಂದ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಲಾಗಿದೆ.

(Courtesy: ಸಮಾಜಕ್ಕಾಗಿ)

Tuesday 21 April 2015

☀ಕೆಎಎಸ್ ಪೂರ್ವಭಾವಿ ಪರೀಕ್ಷೆ -2014 ರ ಸಾಮಾನ್ಯ ಅಧ್ಯಯನ ಪತ್ರಿಕೆ -Ⅰಯ ಸರಿಯುತ್ತರಗಳು . (KAS Preliminary Exam - 2014 General Studies Paper -Ⅰ Key Answers.) ━━━━━━━━━━━━━━━━━━━━━━━━━━━━━━━━━━━━━━━━━━━━━

☀ಕೆಎಎಸ್ ಪೂರ್ವಭಾವಿ ಪರೀಕ್ಷೆ -2014 ರ ಸಾಮಾನ್ಯ ಅಧ್ಯಯನ ಪತ್ರಿಕೆ -Ⅰಯ ಸರಿಯುತ್ತರಗಳು .
(KAS Preliminary Exam - 2014 General Studies Paper -Ⅰ
Key Answers.)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಪೂರ್ವಭಾವಿ ಪರೀಕ್ಷೆ -2014
(KAS Preliminary Exam - 2014)

★ ಕೆಎಎಸ್ ಸಾಮಾನ್ಯ ಅಧ್ಯಯನ ಪತ್ರಿಕೆ -Ⅰ
(General Studies Paper -Ⅰ 2014)


●.ಕರ್ನಾಟಕ ಲೋಕಸೇವಾ ಆಯೋಗದಿಂದ 19 ಏಪ್ರೀಲ್ 2015 (ಭಾನುವಾರ) ರಂದು ನಡೆದ ಕರ್ನಾಟಕ ಆಡಳಿತಾತ್ಮಕ ಸೇವೆಯ (ಕೆಎಎಸ್) ಪೂರ್ವಭಾವಿ ಪರೀಕ್ಷೆಯು ಐಎಎಸ್ ಮಾದರಿಯಲ್ಲಿಯೇ ಕೆಎಎಸ್ ಪರೀಕ್ಷೆ ನಡೆದಿದ್ದು ನಂತರ ಫಲಿತಾಂಶ ಪ್ರಕಟಿಸಲು ಕನಿಷ್ಠ ಒಂದು ತಿಂಗಳು, ಇದಾದ ನಂತರ ಮತ್ತೆ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಒಂದು ತಿಂಗಳು ಸಮಯಬೇಕಾಗುತ್ತದೆ. ನಂತರ ವ್ಯಾಸಂಗಕ್ಕೆ ಕನಿಷ್ಠ 3 ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ಹೀಗಾಗಿ ಮುಖ್ಯ ಪರೀಕ್ಷೆ ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ.


●.ಅತಿ ಶೀಘ್ರದಲ್ಲಿ .....

★ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಇತ್ತೀಚೆಗೆ ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆ -2014 ಯ ಸಾಮಾನ್ಯ ಅಧ್ಯಯನ ಪತ್ರಿಕೆ -Ⅰಯ ಸರಿಯುತ್ತರಗಳನ್ನು ಪ್ರಕಟಿಸಲಾಗುತ್ತದೆ.

●.'ಸ್ಪರ್ಧಾಲೋಕ'ದಲ್ಲಿ ಪ್ರಕಟಿಸಲಾಗುವ ಉತ್ತರಗಳು ವೈಯುಕ್ತಿಕ ಆಕರಗಳಿಂದ, ಸಂಗ್ರಹಿಸಲಾಗಿದ್ದು. ಸಾಧ್ಯವಾದಷ್ಟು ನಿಖರ, ಸರಿಯಾದ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸಲಾಗಿದೆ. ಹಾಗೂ ಇಲ್ಲಿ ಪ್ರಕಟಿಸಲಾದ ಮಾಹಿತಿಗಳ ಸಂಪೂರ್ಣ ಜವಾಬ್ಧಾರಿ 'ಸ್ಪರ್ಧಾಲೋಕ'ದ್ದಾಗಿರುವುದು.

●.ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸುವ ಉತ್ತರಗಳು ಹಾಗು ಸ್ಪರ್ಧಾಲೋಕ'ದಲ್ಲಿ ಪ್ರಕಟಿಸಲಾಗುವ ಉತ್ತರಗಳಿಗೆ ಯಾವುದೇ ಸಂಬಂಧವಿರುವುದಿಲ್ಲ . ಸ್ಪರ್ಧಾರ್ಥಿಗಳು ಸಹಕರಿಸಬೇಕಾಗಿ ವಿನಂತಿ.

●.ಪ್ರಕಟಿತ ಸರಿ ಉತ್ತರಗಳಲ್ಲಿ ತಮಗೇನಾದರೂ ತಪ್ಪು ಕಂಡುಬಂದಲ್ಲಿ ದಯವಿಟ್ಟು ತಾವು ಕಾಮೆಂಟ್ ಮೂಲಕ ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುತ್ತೇನೆ.


★★★ Generating Key Answers..... Please Have Patience..



Saturday 18 April 2015

☀ ರಾಜ್ಯದ ಜಿಲ್ಲಾವಾರು ಜನಸಂಖ್ಯಾ ವೃದ್ಧಿ: 2001-2011ರ ದಶಕವಾರು ಬೆಳವಣಿಗೆ:  (Karnataka State's districtwise population growth:  (2001-2011 decadal population growth)

☀ ರಾಜ್ಯದ ಜಿಲ್ಲಾವಾರು ಜನಸಂಖ್ಯಾ ವೃದ್ಧಿ: 2001-2011ರ ದಶಕವಾರು ಬೆಳವಣಿಗೆ:
(Karnataka State's districtwise population growth:
(2001-2011 decadal population growth)
━━━━━━━━━━━━━━━━━━━━━━━━━━━━━━━━━━━━━━━━━━━━━
♦.ಕೆಎಎಸ್ ವಿಶೇಷಾಂಕ
(KAS Special)


●.ಜಿಲ್ಲೆ: ಬೆಳಗಾಂ
✧.ಒಟ್ಟು ಜನಸಂಖ್ಯೆ:•—————• 27,78,439
✧.ದಶಕವಾರು ಶೇಕಡಾ ಬೆಳವಣಿಗೆ :•—————• 13.38


●.ಬಾಗಲಕೋಟೆ
✧.ಒಟ್ಟು ಜನಸಂಖ್ಯೆ:•—————• 18,90,826
✧.ದಶಕವಾರು ಶೇಕಡಾ ಬೆಳವಣಿಗೆ :•—————• 14.46


●.ಬಿಜಾಪುರ
✧.ಒಟ್ಟು ಜನಸಂಖ್ಯೆ:•—————• 21,75,102
✧.ದಶಕವಾರು ಶೇಕಡಾ ಬೆಳವಣಿಗೆ :•—————• 20.38


●.ಬೀದರ್
✧.ಒಟ್ಟು ಜನಸಂಖ್ಯೆ:•—————• 17,00,018
✧.ದಶಕವಾರು ಶೇಕಡಾ ಬೆಳವಣಿಗೆ :•—————• 13.16


●.ರಾಯಚೂರು
✧.ಒಟ್ಟು ಜನಸಂಖ್ಯೆ:•—————• 19,24,773
✧.ದಶಕವಾರು ಶೇಕಡಾ ಬೆಳವಣಿಗೆ :•—————• 15.27


●.ಕೊಪ್ಪಳ
✧.ಒಟ್ಟು ಜನಸಂಖ್ಯೆ:•—————• 13,91,292
✧.ದಶಕವಾರು ಶೇಕಡಾ ಬೆಳವಣಿಗೆ :•—————• 16.32


●.ಗದಗ
✧.ಒಟ್ಟು ಜನಸಂಖ್ಯೆ:•—————• 10,65,235
✧.ದಶಕವಾರು ಶೇಕಡಾ ಬೆಳವಣಿಗೆ :•—————• 9.61


●.ಧಾರವಾಡ
✧.ಒಟ್ಟು ಜನಸಂಖ್ಯೆ:•—————• 18,46,993
✧.ದಶಕವಾರು ಶೇಕಡಾ ಬೆಳವಣಿಗೆ :•—————• 15.13


●.ಉತ್ತರ ಕನ್ನಡ
✧.ಒಟ್ಟು ಜನಸಂಖ್ಯೆ:•—————• 14,36,847
✧.ದಶಕವಾರು ಶೇಕಡಾ ಬೆಳವಣಿಗೆ :•—————• 6.15


●.ಹಾವೇರಿ
✧.ಒಟ್ಟು ಜನಸಂಖ್ಯೆ:•—————• 15,98,506
✧.ದಶಕವಾರು ಶೇಕಡಾ ಬೆಳವಣಿಗೆ :•—————• 11.08


●.ಬಳ್ಳಾರಿ
✧.ಒಟ್ಟು ಜನಸಂಖ್ಯೆ:•—————• 25,32,383
✧.ದಶಕವಾರು ಶೇಕಡಾ ಬೆಳವಣಿಗೆ :•—————• 24.92


●.ಚಿತ್ರದುರ್ಗ
✧.ಒಟ್ಟು ಜನಸಂಖ್ಯೆ:•—————• 16,60,378
✧.ದಶಕವಾರು ಶೇಕಡಾ ಬೆಳವಣಿಗೆ :•—————• 9.39


●.ದಾವಣಗೆರೆ
✧.ಒಟ್ಟು ಜನಸಂಖ್ಯೆ:•—————• 19,46,905
✧.ದಶಕವಾರು ಶೇಕಡಾ ಬೆಳವಣಿಗೆ :•—————• 8.71


●.ಶಿವಮೊಗ್ಗ
✧.ಒಟ್ಟು ಜನಸಂಖ್ಯೆ:•—————• 17,55,512
✧.ದಶಕವಾರು ಶೇಕಡಾ ಬೆಳವಣಿಗೆ :•—————• 6.88


●.ಉಡುಪಿ
✧.ಒಟ್ಟು ಜನಸಂಖ್ಯೆ:•—————• 11,77,908
✧.ದಶಕವಾರು ಶೇಕಡಾ ಬೆಳವಣಿಗೆ :•—————• 5.90


●.ಜಿಲ್ಲೆ :ಚಿಕ್ಕಮಗಳೂರು
✧.ಒಟ್ಟು ಜನಸಂಖ್ಯೆ:•—————• 11,37,753
✧.ದಶಕವಾರು ಶೇಕಡಾ ಬೆಳವಣಿಗೆ :•—————• -0.28


●.ತುಮಕೂರು
✧.ಒಟ್ಟು ಜನಸಂಖ್ಯೆ:•—————• 26,81,449
✧.ದಶಕವಾರು ಶೇಕಡಾ ಬೆಳವಣಿಗೆ :•—————• 3.74


●.ಬೆಂಗಳೂರು
✧.ಒಟ್ಟು ಜನಸಂಖ್ಯೆ:•—————• 95,88,910
✧.ದಶಕವಾರು ಶೇಕಡಾ ಬೆಳವಣಿಗೆ :•—————• 46.68


●.ಮಂಡ್ಯ
✧.ಒಟ್ಟು ಜನಸಂಖ್ಯೆ:•—————• 18,08,680
✧.ದಶಕವಾರು ಶೇಕಡಾ ಬೆಳವಣಿಗೆ :•—————• 2.55


●.ಹಾಸನ
✧.ಒಟ್ಟು ಜನಸಂಖ್ಯೆ:•—————• 17,76,221
✧.ದಶಕವಾರು ಶೇಕಡಾ ಬೆಳವಣಿಗೆ :•—————• 3.17


●.ದಕ್ಷಿಣ ಕನ್ನಡ
✧.ಒಟ್ಟು ಜನಸಂಖ್ಯೆ:•—————• 20,83,625
 ✧.ದಶಕವಾರು ಶೇಕಡಾ ಬೆಳವಣಿಗೆ :•—————• 9.80


●.ಕೊಡಗು
✧.ಒಟ್ಟು ಜನಸಂಖ್ಯೆ:•—————• 5,54,762
✧.ದಶಕವಾರು ಶೇಕಡಾ ಬೆಳವಣಿಗೆ :•—————• 1.13


●.ಮೈಸೂರು
✧.ಒಟ್ಟು ಜನಸಂಖ್ಯೆ:•—————• 29,94,744
✧.ದಶಕವಾರು ಶೇಕಡಾ ಬೆಳವಣಿಗೆ :•—————• 13.39


●.ಚಾಮರಾಜನಗರ
✧.ಒಟ್ಟು ಜನಸಂಖ್ಯೆ:•—————• 10,20,962
✧.ದಶಕವಾರು ಶೇಕಡಾ ಬೆಳವಣಿಗೆ :•—————• 5.75


●.ಗುಲಬರ್ಗಾ
✧.ಒಟ್ಟು ಜನಸಂಖ್ಯೆ:•—————• 25,64,892
✧.ದಶಕವಾರು ಶೇಕಡಾ ಬೆಳವಣಿಗೆ :•—————• 17.94


●.ಯಾದಗಿರಿ
✧.ಒಟ್ಟು ಜನಸಂಖ್ಯೆ:•—————• 11,72,985
✧.ದಶಕವಾರು ಶೇಕಡಾ ಬೆಳವಣಿಗೆ :•—————• 22.67


●.ಕೋಲಾರ
✧.ಒಟ್ಟು ಜನಸಂಖ್ಯೆ:•—————• 15,40,231
✧.ದಶಕವಾರು ಶೇಕಡಾ ಬೆಳವಣಿಗೆ :•—————• 11.04


●.ಚಿಕ್ಕಬಳ್ಳಾಪುರ
✧.ಒಟ್ಟು ಜನಸಂಖ್ಯೆ:•—————• 12,54,377
✧.ದಶಕವಾರು ಶೇಕಡಾ ಬೆಳವಣಿಗೆ :•—————• 9.17


●.ಬೆಂಗಳೂರು(ಗ್ರಾ)
✧.ಒಟ್ಟು ಜನಸಂಖ್ಯೆ:•—————• 9.87,257
✧.ದಶಕವಾರು ಶೇಕಡಾ ಬೆಳವಣಿಗೆ :•—————• 16.02


●.ರಾಮನಗರ
✧.ಒಟ್ಟು ಜನಸಂಖ್ಯೆ:•—————• 10,82,739
✧.ದಶಕವಾರು ಶೇಕಡಾ ಬೆಳವಣಿಗೆ :•—————• 5.06.

(Courtesy: A Handbook of Karnataka)

Saturday 11 April 2015

☀ಭಾರತದ 2011ರ ಜನಗಣತಿಯ ಲಕ್ಷಣಗಳು: (Main Features of Census of India 2011)

☀ಭಾರತದ 2011ರ ಜನಗಣತಿಯ ಲಕ್ಷಣಗಳು:
(Main Features of Census of India 2011)

━━━━━━━━━━━━━━━━━━━━━━━━━━━━━━━━━━━━━━━━━━━━━


1) ಭಾರತದ ಒಟ್ಟು ಜನಸಂಖ್ಯೆ:—— 1210 ದಶಲಕ್ಷ (121 ಕೋಟಿ)

2) ಸರಾಸರಿ ಸಾಂದ್ರತೆ:—— ಪ್ರತಿ ಚದರ ಕಿ.ಮೀ.ಗೆ 382

3) ಅಧಿಕ ಸಾಂದ್ರತೆಯುಳ್ಳ ರಾಜ್ಯ:—— ಬಿಹಾರ ಪ್ರತಿ ಚ.ಕಿ.ಮೀಗೆ 1102 ಜನ

4) ಅತಿ ಕಡಿಮೆ ಜನಸಾಂದ್ರತೆ ರಾಜ್ಯ:—— ಅರುಣಾಚಲ ಪ್ರದೇಶ ಪ್ರತಿ ಚ.ಕಿ.ಮೀಗೆ 17 ಜನ

5) ಅತ್ಯಧಿಕ ಜನಸಂಖ್ಯಾ ಬೆಳವಣಿಗೆಹೊಂದಿರುವ ರಾಜ್ಯ:——  ಮೇಘಾಲಯ ಶೇ 27.82

6) ಸರಾಸರಿ ಸಾಕ್ಷರತೆಯ ಪ್ರಮಾಣ:—— ಶೇ 74.04

7) ಗರಿಷ್ಠ ಸಾಕ್ಷರತೆಯ ರಾಜ್ಯ:—— ಕೇರಳ ಶೇಕಡಾ (93.91)

8) ಕನಿಷ್ಠ ಸಾಕ್ಷರತೆಯ ರಾಜ್ಯ:—— ಬಿಹಾರ ಶೇಕಡಾ (63.82)

9) ಅಧಿಕ ಜನಸಂಖ್ಯೆಯುಳ್ಳ ರಾಜ್ಯ:—— ಉತ್ತರ ಪ್ರದೇಶ (199.5ದಶಲಕ್ಷ)

10) ಅತಿ ಕಡಿಮೆ ಜನಸಂಖ್ಯೆಯುಳ್ಳ ರಾಜ್ಯ:—— ಸಿಕ್ಕಿಂ (6.07ಲಕ್ಷ)

11) ಅಧಿಕ ಜನಸಂಖ್ಯೆಯುಳ್ಳ ಕೇಂದ್ರಾಡಳಿತ ಪ್ರದೇಶ:—— ದೆಹಲಿ (16.7 ದಶಲಕ್ಷ)

12) ಅತಿ ಕಡಿಮೆ ಜನಸಂಖ್ಯೆಯುಳ್ಳ ಕೇಂದ್ರಾಡಳಿತ:—— ಲಕ್ಷದ್ವೀಪ 60 ಸಾವಿರ

13) ಸರಾಸರಿ ಮರಣ ದರ ಪ್ರತಿ 1000ಕ್ಕೆ:—— 6.58

14) ಸರಾಸರಿ ಜನನ ದರ ಪ್ರತಿ 1000ಕ್ಕೆ:—— 22.65

15) ಸರಾಸರಿ ಲಿಂಗವಾರು ಅನುಪಾತ ಪ್ರತಿ 1000 ಪುರುಷರಿಗೆ:—— 940 ಮಹಿಳೆಯರು

16) ಅತಿ ಹೆಚ್ಚು ಲಿಂಗಾನುಪಾತವನ್ನುಹೊಂದಿದ ಕೇರಳ ರಾಜ್ಯ ಪ್ರತಿ 1000 ಪುರುಷರಿಗೆ:—— 1084 ಮಹಿಳೆಯರು.

17) ಅತೀ ಕಡಿಮೆ ಲಿಂಗಾನುಪಾತ ಹರಿಯಾಣ ಪ್ರತಿ 1000 ಪುರುಷರಿಗೆ:—— 877 ಮಹಿಳೆಯರು.

(Courtesy: SPARDHALOKA ಗೆಳೆಯರ ಬಳಗ) 

☀ಕೆಎಎಸ್ ಅಧ್ಯಯನ ವಿಶೇಷಾಂಕ: "ಕರ್ನಾಟಕ ಆರ್ಥಿಕ ಸಮೀಕ್ಷೆ 2014-15’— ಸಂಕ್ಷಿಪ್ತ ವಿಶ್ಲೇಷಣೆ". ("Brief Analysis of the Karnataka Economic Survey 2014-15"

☀ಕೆಎಎಸ್ ಅಧ್ಯಯನ ವಿಶೇಷಾಂಕ:
"ಕರ್ನಾಟಕ ಆರ್ಥಿಕ ಸಮೀಕ್ಷೆ 2014-15’— ಸಂಕ್ಷಿಪ್ತ ವಿಶ್ಲೇಷಣೆ".
("Brief Analysis of the Karnataka Economic Survey 2014-15"

━━━━━━━━━━━━━━━━━━━━━━━━━━━━━━━━━━━━━━━━━━━━━


●.‘ಕರ್ನಾಟಕ ಆರ್ಥಿಕ ಸಮೀಕ್ಷೆ 2014-15’

— ಪ್ರತಿವರ್ಷ ಬಜೆಟ್ ಸಮಯದಲ್ಲಿ ಹಾಗೂ ಅದಕ್ಕಿಂತ ಸ್ವಲ್ಪ ಮುಂದು ಬಿಡುಗಡೆಯಾಗುವ ಭಾರತದ ಆರ್ಥಿಕ ಸಮೀಕ್ಷೆ ರೈಲ್ವೆ ಬಜೆಟ್, ಕೇಂದ್ರ ಸರಕಾರದ ಬಜೆಟ್‌ಗಳು. ಹಾಗೆಯೇ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ‘ಕರ್ನಾಟಕ ಆರ್ಥಿಕ ಸಮೀಕ್ಷೆ, ‘ಕರ್ನಾಟಕ ಬಜೆಟ್’ಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹುಮುಖ್ಯ ಮಾಹಿತಿಯ ಆಗರಗಳಾಗಿರುತ್ತವೆ. ಈ ಲೇಖನದಲ್ಲಿ ‘ಕರ್ನಾಟಕ ಆರ್ಥಿಕ ಸಮೀಕ್ಷೆ 2014-15’ಅನ್ನು ತೆಗೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾದ ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿದೆ.


●.2011ರ ಜನಗಣತಿಯಂತೆ ಕರ್ನಾಟಕದ ಜನಸಂಖ್ಯೆಯು 6.11 ಕೋಟಿಯಷ್ಟಿದ್ದು ಇದು ಭಾರತದ ಜನಸಂಖ್ಯೆಯ ಶೇಕಡ 5.05ರಷ್ಟು ಆಗಿರುತ್ತದೆ.

●.ಕರ್ನಾಟಕ ರಾಜ್ಯವು ಜನಸಂಖ್ಯೆಯಲ್ಲಿ ಭಾರತ ದೇಶದಲ್ಲಿ 9ನೇ ಸ್ಥಾನದಲ್ಲಿರುತ್ತದೆ.

●.ಕರ್ನಾಟಕ ರಾಜ್ಯವು ವಿಸ್ತಿರ್ಣದಲ್ಲಿ ಭಾರತದಲ್ಲಿ 8ನೇ ಅತಿ ದೊಡ್ಡ ರಾಜ್ಯವಾಗಿದ್ದು ಭಾರತದ ಭೌಗೋಳಿಕ ಪ್ರದೇಶ ಶೇ. 5.83ರಷ್ಟು ಹೊಂದಿದೆ.

●.2011ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಜನಸಾಂದ್ರತೆಯು 319 ಇದ್ದು, ಕಳೆದ ದಶಕದಲ್ಲಿ ರಾಜ್ಯದ ಜನಸಂಖ್ಯೆಯು ಶೇಕಡ 15.7ರಷ್ಟು ಬೆಳೆದಿದೆ.

●.ರಾಜ್ಯದಲ್ಲಿನ ಜನನ ಪ್ರಮಾಣವು (ಪ್ರತಿ 1000ಜನರಿಗೆ) 2001ರಲ್ಲಿ ಶೇಕಡ 19.2ರಷ್ಟು ಇರುತ್ತದೆ. ಅದೇ ರೀತಿ ಮರಣ ಪ್ರಮಾಣವು ಶೇಕಡ 7.1ರಷ್ಟು ಇರುತ್ತದೆ.

●.2011ರ ಜನಗಣತಿಯಂತೆ ರಾಜ್ಯದಲ್ಲಿ ಲಿಂಗಾನುಪಾತ 943ಇರುತ್ತದೆ ಹಾಗೂ ಜನಸಂಖ್ಯೆಯ ಶೇ. 50.80ರಷ್ಟು ಪುರುಷರು ಇರುತ್ತಾರೆ.

●.ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ತಲಾ ಆದಾಯವು ಸ್ಥಿರ ಜಿಲ್ಲೆಗಳಲ್ಲಿ (2004-05) ರಲ್ಲಿ ಶೇಕಡ 7.0ರಷ್ಟು ನಿರೀಕ್ಷಿಸಲಾಗಿದೆ.

 ●.ರಾಜ್ಯದ ಆದಾಯವು 2014-15ನೇ ಸಾಲಿನಲ್ಲಿ 3,44,106 ಕೋಟಿಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ.

●.ರಾಜ್ಯದ ಆದಾಯಕ್ಕೆ ಪ್ರಮುಖ ವಲಯಗಳಾದ ಸೇವಾ ವಲಯದಲ್ಲಿ ಶೇ. 8.9ರಷ್ಟು ಕೃಷಿ ವಲಯದಲ್ಲಿ ಶೇ.4.5ರಷ್ಟು ಹಾಗೂ ಕೈಗಾರಿಕಾ ವಲಯದಲ್ಲಿ ಶೇ.4.4 ರಷ್ಟು ಪ್ರಗತಿಯಾಗುವ ನಿರೀಕ್ಷೆ ಇದೆ.

●.ರಾಜ್ಯದ ತಲಾ ಆದಾಯವು ಸ್ಥಿರ ಬೆಲೆಗಳಲ್ಲಿ (2004-05) 2014-15ನೇ ಸಾಲಿನಲ್ಲಿ 48907ಕ್ಕೆ ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ.

●.ಡಿಸೆಂಬರ್ 2013ರ ಅಂತ್ಯಕ್ಕೆ ಅಖಿಲ ಭಾರತ ಮಟ್ಟದ ಸಗಟು ಮಾರಾಟ ಸೂಚ್ಯಂಕ 179.6 ಇದ್ದು, ಇದು ಡಿಸೆಂಬರ್ 2014ರ ಅಂತ್ಯಕ್ಕೆ 179.8 ರಷ್ಟು ಹೆಚಾಗಿದ್ದು ಇದರಿಂದಾಗಿ ವಾರ್ಷಿಕ ಹಣದುಬ್ಬರ ಶೇ. 0.11 ರಷ್ಟು ಏರಿಕೆಯಾಗಿರುತ್ತದೆ.

●.ಏಪ್ರಿಲ್ 2000 ದಿಂದ 2014ರ ನವೆಂಬರ್‌ವರೆಗೂ ಕರ್ನಾಟಕವು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಯು.ಎಸ್. ಡಾಲರ್ 14.174 ಮಿಲಿಯನ್ ಆಕರ್ಷಿಸಿದ್ದು, ಇದು ರಾಷ್ಟ್ರಮಟ್ಟದ ವಿದೇಶಿ ಬಂಡವಾಳ ಹೂಡಿಕೆಯ ಶೇ. 5.99 ರಷ್ಟಾಗಿದೆ.

●.ಕರ್ನಾಟಕವು ವಾಣಿಜ್ಯ ರಫ್ತಿನಲ್ಲಿ 4ನೇ ಸ್ಥಾನವನ್ನು ಪಡೆದಿದ್ದು ರಾಷ್ಟ್ರದ ರಫ್ತಿನ ಶೇ. 12.37 ರಷ್ಟು ಪಾಲನ್ನು ಒಂದಿರುತ್ತದೆ.

●.ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಕರ್ನಾಟಕದ ರಫ್ತು ಸಾಕಷ್ಟು ಹೆಚ್ಚಿನ ಭಾಗವಾಗಿದ್ದು ಶೇ. 47.3ರಷ್ಟು ಪಾಲನ್ನು ಹೊಂದಿದೆ.

●.ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಾಂಶವು ರಾಜ್ಯದ ರಫ್ತಿನ ಶೇ.61ರಷ್ಟು ಪಾಲನ್ನು ಹೊಂದಿದೆ.

●.ಮಳೆ ನೀರನ್ನು ಸಂರಕ್ಷಿಸಲು ಮತ್ತು ನ್ಯಾಯಯುತವಾಗಿ ಬಳಕೆ ಮಾಡಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ.

●.ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ನೀತಿಯ ಮೇಲೆ ರಾಜ್ಯ ಸರಕಾರಕ್ಕೆ ಸಲಹೆ ನೀಡುವುದಕ್ಕಾಗಿ ರಾಜ್ಯವು 2014-15 ರಲ್ಲಿ ‘ಕೃಷಿ ಬೆಲೆ ಆಯೋಗ’ವನ್ನು ಸ್ಥಾಪಿಸಿರುತ್ತದೆ.

●.ಪ್ರಮುಖ ಕೃಷಿ ಯಂತ್ರೋಪಕರಣಗಳ ಸೇವೆಗಳನ್ನು ಪಡೆಯುವುದಕ್ಕಾಗಿ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ‘ಕಸ್ಟಮ್ ಹೈರ್’ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

●.ಹೊಸದಾದ ಕೇಂದ್ರಿಯ ಪುರಸ್ಕೃತ ಯೋಜನೆಯಾದ ‘ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ’ (ಎನ್‌ಎಮ್‌ಎಸ್‌ಎ) ರೂಪಿಸಲಾಗಿರುತ್ತದೆ.

●.ರಾಜ್ಯದಲ್ಲಿನ ಜಾನುವಾರು ಸಾಂದ್ರತೆಯು ಪ್ರತಿ ಚದರ ಕಿ.ಮೀ. ಪ್ರದೇಶಕ್ಕೆ 151.21ರಷ್ಟು ಇರುತ್ತದೆ.

●.ಹಾಲು ಉತ್ಪಾದನೆಯಲ್ಲಿ ಭಾರತವು ಪ್ರಪಂಚದಲ್ಲಿ ಎರಡನೇ ಸ್ಥಾನವನ್ನು ಗಳಿಸಿರುತ್ತದೆ ಮತ್ತು ಭಾರತದ ರಾಜ್ಯಗಳ ಪೈಕಿ ಕರ್ನಾಟಕವು 11ನೇ ಸ್ಥಾನದಲ್ಲಿರುತ್ತದೆ.

●.ರಾಷ್ಟ್ರದ ಮೀನು ಉತ್ಪಾದನೆಗೆ ಹೋಲಿಸಿದರೆ ಕರ್ನಟಕವು ಸಮುದ್ರದ ಮೀನು ಉತ್ಪಾದನೆಯಲ್ಲಿ 6ನೇ ಸ್ಥಾನವನ್ನೂ, ಒಳನಾಡಿನ ಮೀನು ಉತ್ಪಾದನೆಯಲ್ಲಿ 9ನೇ ಸ್ಥಾನವನ್ನು ಪಡೆದಿರುತ್ತದೆ.

●.ರಾಜ್ಯದ 2013–14ರ ಅರಣ್ಯ ಇಲಾಖೆಯ ವಾರ್ಷಿಕ ವರದಿಯಂತೆ ಕರ್ನಾಟಕವು 43,3356.47 ಚದರ ಕಿ.ಮೀಗಳಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು, ಇದು ರಾಜ್ಯದ ಭೌಗೋಳಿಕ ಪ್ರದೇಶದ ಶೇ. 22.61 ರಷ್ಟು ಇರುತ್ತದೆ.

●.ರಾಜ್ಯವು ಸಾಕ್ಷರತಾ ಸಾಧನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2001ರಲ್ಲಿ ಶೇಕಡಾ 66.64 ರಷ್ಟಿದ್ದ ರಾಜ್ಯದ ಸಾಕ್ಷರತಾ ಪ್ರಮಾಣವು 2011ರಲ್ಲಿ ಶೇ. 75.60ಕ್ಕೆ ಏರಿಕೆಯಾಗಿದೆ. ಅರದಲ್ಲಿ ಪುರುಷರ ಸಾಕ್ಷರತಾ ಪ್ರಮಾಣ 82.85% ರಷ್ಟು ಹಾಗೂ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇಕಡಾ 65.46ರಷ್ಟು ಇರುತ್ತದೆ.

●.ಕಳೆದ ಕೆಲವು ವರ್ಷಗಳಲ್ಲಿ ಶಿಶುಮರಣ ದರವು ತೀವ್ರಗತಿಯಲ್ಲಿ ಕಡಿಮೆಯಾಗಿದ್ದು ಪ್ರಸ್ತುತವಾಗಿ ಇದನ್ನು ಒಂದು ಸಾವಿರ ಜನನಕ್ಕೆ ಸುಮಾರು 10ರ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಲಾಗಿದೆ.

●.ಒಂದು ಲಕ್ಷ ಸಜೀವ ಜನನಕ್ಕೆ ತಾಯಂದಿರ ಮರಣ ಪ್ರಮಾಣ (ಎಂಎಂಆರ್) 2010-13ರಲ್ಲಿ 144ರಷ್ಟಿದೆ.

(Courtesy: Newspapers) 

Friday 10 April 2015

☀ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು:—ಭಾಗ Ⅲ (States and Union Territories of India: PART Ⅲ) 

☀ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು:—ಭಾಗ Ⅲ
(States and Union Territories of India: PART Ⅲ)

━━━━━━━━━━━━━━━━━━━━━━━━━━━━━━━━━━━━━━━━━━━━━

☀ ಭಾರತ (THE REPUBLIC OF INDIA):


25) ರಾಜ್ಯ : ನಾಗಾಲ್ಯಾಂಡ್
 (Nagaland):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•1,980,602

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.16%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 25

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———• -0.5%

●.ಗ್ರಾಮೀಣ ಜನಸಂಖ್ಯೆ •—————• 1,406,861 (71.03%)

●.ನಗರ ಜನಸಂಖ್ಯೆ •—————• 573,741 (28.97%)

●.ವಿಸ್ತೀರ್ಣ •—————• 16,579 km2 (6,401 sq mi)

●.ಸಾಂದ್ರತೆ •—————• 119/km2 (310/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 931

●.ಆಡಳಿತಾತ್ಮಕ ರಾಜಧಾನಿ: •—————• ಕೊಹಿಮಾ (Kohima)

●.ಶಾಸಕಾಂಗ ರಾಜಧಾನಿ: •—————• ಕೊಹಿಮಾ

●.ನ್ಯಾಯಾಂಗ ರಾಜಧಾನಿ: •—————• ಗೌಹಾತಿ (Guwahati)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1963

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಟಿ.ಆರ್.ಝಿಲಿಯಾಂಗ್ (ಕ್ಸಿಲಿಯಾಂಗ್) (24/05/2014)

●.ಅಧಿಕಾರದಲ್ಲಿರುವ ಪಕ್ಷ :•—————• ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಪದ್ಮನಾಭ ಬಾಲಕೃಷ್ಣ ಆಚಾರ್ಯ

━━━━━━━━━━━━━━━━━━━━━━━━━━━━━━━━━━━━━━━━━━━━━


26) ರಾಜ್ಯ: ಒರಿಸ್ಸಾ
(Orissa):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•41,947,358

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(3.47%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 11

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 14.0%

●.ಗ್ರಾಮೀಣ ಜನಸಂಖ್ಯೆ •—————• 34,951,234 (83.32%)

●.ನಗರ ಜನಸಂಖ್ಯೆ •—————•6,996,124 (16.68%)

●.ವಿಸ್ತೀರ್ಣ •—————• 155,707 km2 (60,119 sq mi)

●.ಸಾಂದ್ರತೆ •—————•269/km2 (700/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 978

●.ಆಡಳಿತಾತ್ಮಕ ರಾಜಧಾನಿ:•—————• ಭುವನೇಶ್ವರ (Bhubaneshwar)

●.ಶಾಸಕಾಂಗ ರಾಜಧಾನಿ: •—————• ಭುವನೇಶ್ವರ

●.ನ್ಯಾಯಾಂಗ ರಾಜಧಾನಿ: •—————• ಕಟಕ್ (Cuttack)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 1948

●.ಹಳೆಯ ರಾಜಧಾನಿ: •—————• ಕಟಕ್ (1936-1948)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ನವೀನ್ ಪಟ್ನಾಯಕ್ (03/05/2000(14 ವರ್ಷಗಳಿಂದ))

●.ಅಧಿಕಾರದಲ್ಲಿರುವ ಪಕ್ಷ :•—————• ಬಿಜು ಜನತಾದಳ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಎಸ್ಸಿ ಜಮೀರ್

━━━━━━━━━━━━━━━━━━━━━━━━━━━━━━━━━━━━━━━━━━━━━  


27) ಕೇಂದ್ರಾಡಳಿತ ಪ್ರದೇಶ : ಪುದುಚೇರಿ
(Puducherry):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•1,244,464

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.10%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•01

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•27.7%

●.ಗ್ರಾಮೀಣ ಜನಸಂಖ್ಯೆ •—————• 394,341 (31.69%)

●.ನಗರ ಜನಸಂಖ್ಯೆ •—————•850,123 (68.31%)

●.ವಿಸ್ತೀರ್ಣ •—————• 479 km2 (185 sq mi)

●.ಸಾಂದ್ರತೆ •—————• 2,598/km2 (6,730/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 1,038

●.ಆಡಳಿತಾತ್ಮಕ ರಾಜಧಾನಿ: •—————•ಪುದುಚೇರಿ (Puducherry)

●.ಶಾಸಕಾಂಗ ರಾಜಧಾನಿ: •—————• ಪುದುಚೇರಿ

●.ನ್ಯಾಯಾಂಗ ರಾಜಧಾನಿ: •—————• ಚೆನೈ (Chennai)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1954

●.ಹಳೆಯ ರಾಜಧಾನಿ: •—————• ಮದ್ರಾಸ್ (Madras) (1948-1954)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಎನ್.ರಂಗಸ್ವಾಮಿ (05/16/2011)

●.ಅಧಿಕಾರದಲ್ಲಿರುವ ಪಕ್ಷ :•—————•ಅಖಿಲ ಭಾರತ ಎನ್ ಆರ್ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಅಜಯ್ ಕುಮಾರ್ ಸಿಂಗ್ (ನಿವೃತ್ತ. ಲೆಫ್ಟಿನೆಂಟ್ ಜನರಲ್)

━━━━━━━━━━━━━━━━━━━━━━━━━━━━━━━━━━━━━━━━━━━━━


28) ರಾಜ್ಯ: ಪಂಜಾಬ್
(Punjab):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•27,704,236

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.30%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 16

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 13.7%

●.ಗ್ರಾಮೀಣ ಜನಸಂಖ್ಯೆ •—————• 17,316,800 (62.51%)

●.ನಗರ ಜನಸಂಖ್ಯೆ •—————• 10,387,436 (37.49%)

●.ವಿಸ್ತೀರ್ಣ •—————• 50,362 km2 (19,445 sq mi)

●.ಸಾಂದ್ರತೆ •—————• 550/km2 (1,400/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 893

●.ಆಡಳಿತಾತ್ಮಕ ರಾಜಧಾನಿ: •—————• ಚಂಡೀಘಢ (Chandigarh)

●.ಶಾಸಕಾಂಗ ರಾಜಧಾನಿ: •—————• ಚಂಡೀಘಢ

●.ನ್ಯಾಯಾಂಗ ರಾಜಧಾನಿ: •—————• ಚಂಡೀಘಢ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1960

●.ಹಳೆಯ ರಾಜಧಾನಿ: •—————• ಲಾಹೋರ್ (Lahore) (1849 -1947), ಶಿಮ್ಲಾ (Shimla) (1947-1960)  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಪ್ರಕಾಶ್ ಸಿಂಗ್ ಬಾದಲ್ (7 ವರ್ಷಗಳಿಂದ)(03/01/2007)

●.ಅಧಿಕಾರದಲ್ಲಿರುವ ಪಕ್ಷ :•—————• ಶಿರೋಮಣಿ ಅಕಾಲಿ ದಳ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಶಿವರಾಜ್ ಪಾಟೀಲ್

━━━━━━━━━━━━━━━━━━━━━━━━━━━━━━━━━━━━━━━━━━━━━


29) ರಾಜ್ಯ: ರಾಜಸ್ಥಾನ
(Rajasthan):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 68,621,012

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (5.67%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 07

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 21.4%

●.ಗ್ರಾಮೀಣ ಜನಸಂಖ್ಯೆ •—————• 51,540,236 (75.11%)

●.ನಗರ ಜನಸಂಖ್ಯೆ •—————• 17,080,776 (24.89%)

●.ವಿಸ್ತೀರ್ಣ •—————• 342,239 km2 (132,139 sq mi)

●.ಸಾಂದ್ರತೆ •—————• 201/km2 (520/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 926

●.ಆಡಳಿತಾತ್ಮಕ ರಾಜಧಾನಿ: •—————• ಜೈಪುರ (Jaipur)

●.ಶಾಸಕಾಂಗ ರಾಜಧಾನಿ: •—————• ಜೈಪುರ

●.ನ್ಯಾಯಾಂಗ ರಾಜಧಾನಿ: •—————• ಜೋದಪುರ (Jodhpur)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1948

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ವಸುಂಧರಾ ರಾಜೇ(12/13/2013)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ಜನತಾ ಪಕ್ಷ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕಲ್ಯಾಣ್ ಸಿಂಗ್

━━━━━━━━━━━━━━━━━━━━━━━━━━━━━━━━━━━━━━━━━━━━━


30) ರಾಜ್ಯ: ಸಿಕ್ಕಿಂ
(Sikkim):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 607,688

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.05%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 29

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•12.4%

●.ಗ್ರಾಮೀಣ ಜನಸಂಖ್ಯೆ •—————•455,962 (75.03%)

●.ನಗರ ಜನಸಂಖ್ಯೆ •—————•151,726 (24.97%)

●.ವಿಸ್ತೀರ್ಣ •—————•7,096 km2 (2,740 sq mi)

●.ಸಾಂದ್ರತೆ •—————• 86/km2 (220/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————•889

●.ಆಡಳಿತಾತ್ಮಕ ರಾಜಧಾನಿ: •—————• ಗ್ಯಾಂಗ್ ಟಕ್ (Gangtok)

●.ಶಾಸಕಾಂಗ ರಾಜಧಾನಿ: •—————• ಗ್ಯಾಂಗ್ ಟಕ್

●.ನ್ಯಾಯಾಂಗ ರಾಜಧಾನಿ: •—————• ಗ್ಯಾಂಗ್ ಟಕ್

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1975

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಪವನ್ ಕುಮಾರ್ ಚಾಮ್ಲಿಂಗ್ (12/12/1994 (19ವರ್ಷಗಳಿಂದ))

●.ಅಧಿಕಾರದಲ್ಲಿರುವ ಪಕ್ಷ :•—————• ಸಿಕ್ಕಿಂ ಡೆಮಾಕ್ರಾಟಿಕ್ ಫ್ರಂಟ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀನಿವಾಸ್ ದಾದಾಸಾಹೇಬ್ ಪಾಟೀಲ್

━━━━━━━━━━━━━━━━━━━━━━━━━━━━━━━━━━━━━━━━━━━━━


31) ರಾಜ್ಯ : ತಮಿಳುನಾಡು
(Tamil Nadu):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 72,138,958

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (5.96%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 06

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 15.6%

●.ಗ್ರಾಮೀಣ ಜನಸಂಖ್ಯೆ •—————• 37,189,229 (51.55%)

●.ನಗರ ಜನಸಂಖ್ಯೆ •—————• 34,949,729 (48.45%)

●.ವಿಸ್ತೀರ್ಣ •—————• 130,058 km2 (50,216 sq mi)

●.ಸಾಂದ್ರತೆ •—————• 555/km2 (1,440/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 995

●.ಆಡಳಿತಾತ್ಮಕ ರಾಜಧಾನಿ: •—————• ಚೆನೈ (Chennai)

●.ಶಾಸಕಾಂಗ ರಾಜಧಾನಿ: •—————• ಚೆನೈ

●.ನ್ಯಾಯಾಂಗ ರಾಜಧಾನಿ: •—————• ಚೆನೈ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1956

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಓ.ಪನ್ನೀರ್ ಸೆಲಸೆಲ್ವಂ(29/09/2014)

●.ಅಧಿಕಾರದಲ್ಲಿರುವ ಪಕ್ಷ :•—————• ಎಐಎಡಿಎಂಕೆ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೆ.ರೋಸಯ್ಯ

━━━━━━━━━━━━━━━━━━━━━━━━━━━━━━━━━━━━━━━━━━━━━


32) ರಾಜ್ಯ : ತೆಲಂಗಾಣ
(Telangana):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•35,286,757

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.97%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 12

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 17.87%

●.ಗ್ರಾಮೀಣ ಜನಸಂಖ್ಯೆ •—————• 21,585,313 (61.33%)

●.ನಗರ ಜನಸಂಖ್ಯೆ •—————•13,608,665 (38.66%)

●.ವಿಸ್ತೀರ್ಣ •—————• 114,840 km2 (44,340 sq mi)

●.ಸಾಂದ್ರತೆ •—————•307/km2 (800/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————•988

●.ಆಡಳಿತಾತ್ಮಕ ರಾಜಧಾನಿ: •—————• ಹೈದರಾಬಾದ್ (Hyderabad)

●.ಶಾಸಕಾಂಗ ರಾಜಧಾನಿ: •—————• ಹೈದರಾಬಾದ್

●.ನ್ಯಾಯಾಂಗ ರಾಜಧಾನಿ: •—————• ಹೈದರಾಬಾದ್

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 2014

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಕೆ.ಚಂದ್ರಶೇಖರ ರಾವ್(06/02/2014)

●.ಅಧಿಕಾರದಲ್ಲಿರುವ ಪಕ್ಷ :•—————• ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಇ.ಎಸ್.ಎಲ್. ನರಸಿಂಹನ್

━━━━━━━━━━━━━━━━━━━━━━━━━━━━━━━━━━━━━━━━━━━━━


33) ರಾಜ್ಯ : ತ್ರಿಪುರ
(Tripura):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 3,671,032

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.30%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 22

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 14.7%

●.ಗ್ರಾಮೀಣ ಜನಸಂಖ್ಯೆ •—————• 2,710,051 (73.82%)

●.ನಗರ ಜನಸಂಖ್ಯೆ •—————• 960,981 (26.18%)

●.ವಿಸ್ತೀರ್ಣ •—————• 10,486 km2 (4,049 sq mi)

●.ಸಾಂದ್ರತೆ •—————• 350/km2 (910/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 961

●. ಆಡಳಿತಾತ್ಮಕ ರಾಜಧಾನಿ: •—————• ಅಗರ್ ತಲಾ (Agartala)

●.ಶಾಸಕಾಂಗ ರಾಜಧಾನಿ: •—————• ಅಗರ್ ತಲಾ

●.ನ್ಯಾಯಾಂಗ ರಾಜಧಾನಿ: •—————• ಅಗರ್ ತಲಾ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1956

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಮಾಣಿಕ್ ಸರ್ಕಾರ್ (16ವರ್ಷಗಳಿಂದ) (03/11/1998)

●.ಅಧಿಕಾರದಲ್ಲಿರುವ ಪಕ್ಷ :•—————• ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಪದ್ಮನಾಭ ಬಾಲಕೃಷ್ಣ ಆಚಾರ್ಯ

━━━━━━━━━━━━━━━━━━━━━━━━━━━━━━━━━━━━━━━━━━━━━


34) ರಾಜ್ಯ : ಉತ್ತರ ಪ್ರದೇಶ
 (Uttar Pradesh):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 199,281,477 (ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನ)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ(%)•———•(16.49%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 01

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ —20.1%

●.ಗ್ರಾಮೀಣ ಜನಸಂಖ್ಯೆ •—————• 155,111,022 (77.72%)

●.ನಗರ ಜನಸಂಖ್ಯೆ •—————• 44,470,455 (22.28%)

●.ವಿಸ್ತೀರ್ಣ •—————• 240,928 km2 (93,023 ಚದರ ಮೈಲಿ)

●.ಸಾಂದ್ರತೆ •—————•828/km2 (2,140/ಚದರ ಮೈಲಿ)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————•908.

●. ಆಡಳಿತಾತ್ಮಕ ರಾಜಧಾನಿ: •—————• ಲಕ್ನೋ (Lucknow)

●. ಶಾಸಕಾಂಗ ರಾಜಧಾನಿ: •—————• ಲಕ್ನೋ

●. ನ್ಯಾಯಾಂಗ ರಾಜಧಾನಿ: •—————• ಅಲಹಾಬಾದ್ (Allahabad)

●. ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1938

●. ಹಳೆಯ ರಾಜಧಾನಿ: — ಇಲ್ಲಾ—  

●. ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಅಖಿಲೇಶ್ ಯಾದವ್ (03/15/2012)

●. ಅಧಿಕಾರದಲ್ಲಿರುವ ಪಕ್ಷ :•—————• ಸಮಾಜವಾದಿ ಪಕ್ಷ

●. ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ರಾಮ್ ನಾಯಕ್

━━━━━━━━━━━━━━━━━━━━━━━━━━━━━━━━━━━━━━━━━━━━━


35) ರಾಜ್ಯ : ಉತ್ತರಾಖಂಡ್
(Uttarakhand):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•10,116,752

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.84%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 20

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———•19.2%

●.ಗ್ರಾಮೀಣ ಜನಸಂಖ್ಯೆ •—————• 7,025,583 (69.45%)

●.ನಗರ ಜನಸಂಖ್ಯೆ •—————• 3,091,169 (30.55%)

●.ವಿಸ್ತೀರ್ಣ •—————• 53,483 km2 (20,650 sq mi)

●.ಸಾಂದ್ರತೆ •—————• 189/km2 (490/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 963

●.ಆಡಳಿತಾತ್ಮಕ ರಾಜಧಾನಿ: •—————• ದೆಹ್ರಾದೂನ್ (Dehradun)

●.ಶಾಸಕಾಂಗ ರಾಜಧಾನಿ: •—————• ದೆಹ್ರಾದೂನ್

●.ನ್ಯಾಯಾಂಗ ರಾಜಧಾನಿ: •—————• ನೈನಿತಾಲ್ (Nainital)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 2000

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಹರೀಶ್ ರಾವತ್ (02/01/2014)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೃಷ್ಣನ್ ಕಾಂತ್ ಪಾಲ್

━━━━━━━━━━━━━━━━━━━━━━━━━━━━━━━━━━━━━━━━━━━━━


36) ರಾಜ್ಯ : ಪಶ್ಚಿಮ ಬಂಗಾಳ
(West Bengal):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 91,347,736

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (7.55%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 05

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 13.9%

●.ಗ್ರಾಮೀಣ ಜನಸಂಖ್ಯೆ •—————• 62,213,676 (68.11%)

●.ನಗರ ಜನಸಂಖ್ಯೆ •—————• 29,134,060 (31.89%)

●.ವಿಸ್ತೀರ್ಣ •—————• 88,752 km2 (34,267 sq mi)

●.ಸಾಂದ್ರತೆ •—————•1,029/km2 (2,670/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 947

●.ಆಡಳಿತಾತ್ಮಕ ರಾಜಧಾನಿ: •—————•ಕೋಲ್ಕತಾ (Kolkata)

●.ಶಾಸಕಾಂಗ ರಾಜಧಾನಿ: •—————• ಕೋಲ್ಕತಾ

●.ನ್ಯಾಯಾಂಗ ರಾಜಧಾನಿ: •—————• ಕೋಲ್ಕತಾ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1947

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಮಮತಾ ಬ್ಯಾನರ್ಜಿ (05/20/2011)

●.ಅಧಿಕಾರದಲ್ಲಿರುವ ಪಕ್ಷ :•—————• ಅಖಿಲ ಭಾರತ ತೃಣಮೂಲ ಕಾಂಗ್ರೆಸ್.

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೇಸರಿ ನಾಥ್ ತ್ರಿಪಾಠಿ.

━━━━━━━━━━━━━━━━━━━━━━━━━━━━━━━━━━━━━━━━━━━━━

☀ ಟಿಪ್ಪಣಿ:•—————• ಇದರೊಳಗೆ ಪಾಕಿಸ್ತಾನ ನಿಯಂತ್ರಣಕ್ಕೊಳಪಟ್ಟ ಆದರೆ ಭಾರತ ತನ್ನದೆಂದು ಹಕ್ಕು(ಅಜಾದ್ ಕಾಶ್ಮೀರ) ಹೊಂದಿರುವ 120.849 ಚದರ ಕಿಲೋಮೀಟರ್ (46,660 ಚದರ ಮೈಲಿ) ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಆಡಳಿತಕ್ಕೊಳಪಟ್ಟ ಆದರೆ ಭಾರತ ತನ್ನದೆಂದು ಹಕ್ಕುಹೊಂದಿರುವ ಪ್ರದೇಶಗಳಾದ ಅಕ್ಸಾಯ್ ಚಿನ್ ಮತ್ತು ಷಾಕ್ಸ್ಗ್ಯಾಮ್ ಕಣಿವೆ, ಜೊತೆಗೆ ಚೀನಾ ತಮ್ಮದೆಂದು ಹೇಳುವ ಆದರೆ ಭಾರತ ಆಡಳಿತಕ್ಕೊಳಪಟ್ಟ ಅರುಣಾಚಲ ಪ್ರದೇಶ ಭೂ ಪ್ರದೇಶಗಳನ್ನೊಳಗೊಂಡಿದೆ. ಆದರೆ ಭಾರತದ ಮಣಿಪುರ ರಾಜ್ಯದ ಸೇನಾಪತಿ ಜಿಲ್ಲೆಯ ಉಪವಿಭಾಗಗಳಾದ 'ಮಾವೋ-ಮರಮ್, ಪಾವೋಮತಾ ಹಾಗೂ ಪುರುಲ್' ಗಳನ್ನೊಳಗೊಂಡಿಲ್ಲ.


***(ಮಾರ್ಚ್ 28, 2015 ರ ಮಾಹಿತಿಯಂತೆ ಅಪ್ ಡೇಟ್ ಗೊಳಿಸಲಾಗಿದೆ)

                                                                  ★★★ ಮುಕ್ತಾಯ ★★★

☀ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು:—ಭಾಗ Ⅱ (States and Union Territories of India: PART Ⅱ) 

☀ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು:—ಭಾಗ Ⅱ
(States and Union Territories of India: PART Ⅱ)

━━━━━━━━━━━━━━━━━━━━━━━━━━━━━━━━━━━━━━━━━━━━━


☀ ಭಾರತ (THE REPUBLIC OF INDIA):


13 ) ರಾಜ್ಯ : ಹರಿಯಾಣ
 (Haryana):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•25,353,081

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.09%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•18

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 19.9%

●.ಗ್ರಾಮೀಣ ಜನಸಂಖ್ಯೆ •—————• 16,531,493 (75.75%)

●.ನಗರ ಜನಸಂಖ್ಯೆ •—————• 8,821,588 (24.25%)

●.ವಿಸ್ತೀರ್ಣ •—————• 44,212 km2 (17,070 sq mi)

●.ಸಾಂದ್ರತೆ •—————• 573/km2 (1,480/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 877

●.ಆಡಳಿತಾತ್ಮಕ ರಾಜಧಾನಿ: •—————• ಚಂಡೀಘಢ (Chandigarh)

●.ಶಾಸಕಾಂಗ ರಾಜಧಾನಿ: •—————• ಚಂಡೀಘಢ

●.ನ್ಯಾಯಾಂಗ ರಾಜಧಾನಿ: •—————• ಚಂಡೀಘಢ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1966

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಮನೋಹರ್ ಲಾಲ್ ಖಟ್ಟರ್.

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ಜನತಾ ಪಕ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕ್ಯಾಪ್ಟನ್ ಸಿಂಗ್ ಸೋಲಂಕಿ

━━━━━━━━━━━━━━━━━━━━━━━━━━━━━━━━━━━━━━━━━━━━━


14) ರಾಜ್ಯ: ಹಿಮಾಚಲ ಪ್ರದೇಶ
(Himachal Pradesh):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 6,856,509

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.57%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•21

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 12.8%

●.ಗ್ರಾಮೀಣ ಜನಸಂಖ್ಯೆ •—————• 6,167,805 (89.96%)

●.ನಗರ ಜನಸಂಖ್ಯೆ •—————• 688,704 (10.04%)

●.ವಿಸ್ತೀರ್ಣ •—————• 55,673 km2 (21,495 sq mi)

●.ಸಾಂದ್ರತೆ •—————• 123/km2 (320/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 974

●.ಆಡಳಿತಾತ್ಮಕ ರಾಜಧಾನಿ: •—————•ಶಿಮ್ಲಾ (Shimla)

●.ಶಾಸಕಾಂಗ ರಾಜಧಾನಿ: •—————• ಶಿಮ್ಲಾ

●.ನ್ಯಾಯಾಂಗ ರಾಜಧಾನಿ: •—————• ಶಿಮ್ಲಾ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1971

●.ಹಳೆಯ ರಾಜಧಾನಿ: •—————• ಬಿಲಾಸ್ಪುರ್ (Bilaspur) (1950-1956)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ವೀರಭದ್ರ ಸಿಂಗ್ (12/25/2012)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಊರ್ಮಿಳಾ ಸಿಂಗ್

━━━━━━━━━━━━━━━━━━━━━━━━━━━━━━━━━━━━━━━━━━━━━


 15) ರಾಜ್ಯ: ಜಮ್ಮು ಮತ್ತು ಕಾಶ್ಮೀರ
(Jammu and Kashmir):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•12,548,926

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(1.04%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•20

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———•23.7%

●.ಗ್ರಾಮೀಣ ಜನಸಂಖ್ಯೆ •—————• 9,134,820 (72.79%)

●.ನಗರ ಜನಸಂಖ್ಯೆ •—————• 3,414,106 (27.21%)

●.ವಿಸ್ತೀರ್ಣ •—————• 222,236 km2 (85,806 sq mi)

●.ಸಾಂದ್ರತೆ •—————• 56/km2 (150/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 883

●.ಆಡಳಿತಾತ್ಮಕ ರಾಜಧಾನಿ:•—————• ಶ್ರೀನಗರ (ಎಸ್) (Srinagar)

●.ಶಾಸಕಾಂಗ ರಾಜಧಾನಿ: •—————• ಜಮ್ಮು (Jammu )(W), ಶ್ರೀನಗರ (Srinagar)(S)

●.ನ್ಯಾಯಾಂಗ ರಾಜಧಾನಿ: •—————• ಜಮ್ಮು (W) ಶ್ರೀನಗರ (ಎಸ್)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : —

●.ಹಳೆಯ ರಾಜಧಾನಿ: •—————• ಜಮ್ಮು (W) 1948  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಮುಫ್ತಿ ಮಹಮ್ಮದ್ ಸಯೀದ್

●.ಅಧಿಕಾರದಲ್ಲಿರುವ ಪಕ್ಷ :•—————• ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫೆರನ್ಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ನರೀಂದರ್ ನಾಥ್ ವೋಹ್ರಾ

━━━━━━━━━━━━━━━━━━━━━━━━━━━━━━━━━━━━━━━━━━━━━


16) ರಾಜ್ಯ : ಜಾರ್ಖಂಡ್
(Jharkhand)  :

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 32,966,238

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.72%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•14

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 22.3%

●.ಗ್ರಾಮೀಣ ಜನಸಂಖ್ಯೆ •—————• 25,036,946 (75.95%)

●.ನಗರ ಜನಸಂಖ್ಯೆ •—————•7,929,292 (24.05%)

●.ವಿಸ್ತೀರ್ಣ •—————• 79,714 km2 (30,778 sq mi)

●.ಸಾಂದ್ರತೆ •—————• 414/km2 (1,070/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 947

●.ಆಡಳಿತಾತ್ಮಕ ರಾಜಧಾನಿ:•—————• ರಾಂಚಿ (Ranchi)

●.ಶಾಸಕಾಂಗ ರಾಜಧಾನಿ: •—————• ರಾಂಚಿ (Ranchi)

●.ನ್ಯಾಯಾಂಗ ರಾಜಧಾನಿ: •—————• ರಾಂಚಿ (Ranchi)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 2000

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ರಘುಬರ್ ದಾಸ್.

●.ಅಧಿಕಾರದಲ್ಲಿರುವ ಪಕ್ಷ :•—————• ಜಾರ್ಖಂಡ್ ಮುಕ್ತಿ ಮೋರ್ಚಾ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಡಾ ಸಯ್ಯದ್ ಅಹ್ಮದ್

━━━━━━━━━━━━━━━━━━━━━━━━━━━━━━━━━━━━━━━━━━━━━


17) ರಾಜ್ಯ : ಕರ್ನಾಟಕ
(Karnataka):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 61,130,704

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (5.05%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•08

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 15.7%

●.ಗ್ರಾಮೀಣ ಜನಸಂಖ್ಯೆ •—————• 37,552,529 (61.43%)

●.ನಗರ ಜನಸಂಖ್ಯೆ •—————•23,578,175 (38.57%)

●.ವಿಸ್ತೀರ್ಣ •—————• 191,791 km2 (74,051 sq mi)

●.ಸಾಂದ್ರತೆ •—————• 319/km2 (830/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 968

●.ಆಡಳಿತಾತ್ಮಕ ರಾಜಧಾನಿ: •—————•ಬೆಂಗಳೂರು (Bengaluru)

●.ಶಾಸಕಾಂಗ ರಾಜಧಾನಿ: •—————• ಬೆಂಗಳೂರು

●.ನ್ಯಾಯಾಂಗ ರಾಜಧಾನಿ: •—————• ಬೆಂಗಳೂರು

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1956

●.ಹಳೆಯ ರಾಜಧಾನಿ: •—————• (ಮೈಸೂರು) (Mysore)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————•ಶ್ರೀ ಕೆ ಸಿದ್ಧರಾಮಯ್ಯ (05/13/2013)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ವಜುಭಾಯಿ ರುಢಭಾಯಿ ವಾಲಾ

 ━━━━━━━━━━━━━━━━━━━━━━━━━━━━━━━━━━━━━━━━━━━━━  


18) ರಾಜ್ಯ : ಕೇರಳ
(Kerala):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•33,387,677

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.76%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•13

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 4.9%

●.ಗ್ರಾಮೀಣ ಜನಸಂಖ್ಯೆ •—————• 17,445,506 (52.28%)

●.ನಗರ ಜನಸಂಖ್ಯೆ •—————•15,932,171 (47.72%)

●.ವಿಸ್ತೀರ್ಣ •—————• 38,863 km2 (15,005 sq mi)

●.ಸಾಂದ್ರತೆ •—————• 859/km2 (2,220/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————•1,084

●.ಆಡಳಿತಾತ್ಮಕ ರಾಜಧಾನಿ: •—————• ತಿರುವನಂತಪುರಂ (Thiruvananthapuram)

●.ಶಾಸಕಾಂಗ ರಾಜಧಾನಿ: •—————• ತಿರುವನಂತಪುರಂ

●.ನ್ಯಾಯಾಂಗ ರಾಜಧಾನಿ: •—————• ಕೊಚ್ಚಿ (Kochi)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1956

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಉಮ್ಮನ್ ಚಾಂಡಿ 05/18/2011

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಪಿ ಸದಾಶಿವಂ.

━━━━━━━━━━━━━━━━━━━━━━━━━━━━━━━━━━━━━━━━━━━━━


19) ಕೇಂದ್ರಾಡಳಿತ ಪ್ರದೇಶ : ಲಕ್ಷದ್ವೀಪ
(Lakshadweep):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 64,429

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.01%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•06

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •————•6.2%

●.ಗ್ರಾಮೀಣ ಜನಸಂಖ್ಯೆ •—————• 14,121 (21.92%)

●.ನಗರ ಜನಸಂಖ್ಯೆ •—————• 50,308(78.08%)

●.ವಿಸ್ತೀರ್ಣ •—————•32 km2 (12 ಚದರ ಮೈಲಿ)

●.ಸಾಂದ್ರತೆ •—————•2,013/km2 (5,210/ ಚದರ ಮೈಲಿ)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 946

●.ಆಡಳಿತಾತ್ಮಕ ರಾಜಧಾನಿ: •—————•ಕವರಟ್ಟಿ (Kavaratti)

●.ಶಾಸಕಾಂಗ ರಾಜಧಾನಿ: •—————• ಕವರಟ್ಟಿ

●.ನ್ಯಾಯಾಂಗ ರಾಜಧಾನಿ: •—————• ಕೊಚ್ಚಿ (Kochi)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1956

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಎಚ್ ರಾಜೇಶ್ ಪ್ರಸಾದ್.

━━━━━━━━━━━━━━━━━━━━━━━━━━━━━━━━━━━━━━━━━━━━━


20) ರಾಜ್ಯ: ಮಧ್ಯಪ್ರದೇಶ
(Madhya Pradesh):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 72,597,565

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (6.00%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•05

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 20.3%

●.ಗ್ರಾಮೀಣ ಜನಸಂಖ್ಯೆ •—————• 52,537,899 (72.37%)

●.ನಗರ ಜನಸಂಖ್ಯೆ •—————• 20,059,666 (27.63%)

●.ವಿಸ್ತೀರ್ಣ •—————• 308,245 km2 (119,014 sq mi)

●.ಸಾಂದ್ರತೆ •—————• 236/km2 (610/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 930

●.ಆಡಳಿತಾತ್ಮಕ ರಾಜಧಾನಿ: •—————•ಭೋಪಾಲ್ (Bhopal)

●.ಶಾಸಕಾಂಗ ರಾಜಧಾನಿ: •—————• ಭೋಪಾಲ್

●.ನ್ಯಾಯಾಂಗ ರಾಜಧಾನಿ: •—————• ಗ್ವಾಲಿಯರ್ (Gwalior)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1956

●.ಹಳೆಯ ರಾಜಧಾನಿ: •—————• ನಾಗ್ಪುರ (Nagpur) (1861-1956)  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಶಿವರಾಜ್ ಸಿಂಗ್ ಚೌಹಾಣ್(11/29/2005 (8 ವರ್ಷಗಳಿಂದ))

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ಜನತಾ ಪಕ್ಷ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ರಾಮ್ ನರೇಶ್ ಯಾದವ್

━━━━━━━━━━━━━━━━━━━━━━━━━━━━━━━━━━━━━━━━━━━━━


21 ) ರಾಜ್ಯ : ಮಹಾರಾಷ್ಟ್ರ
(Maharashtra):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 112,372,972

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(9.28%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •—————•02

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———•16.0%

●.ಗ್ರಾಮೀಣ ಜನಸಂಖ್ಯೆ•—————• 61,545,441 (54.77%)

●.ನಗರ ಜನಸಂಖ್ಯೆ•—————• 50,827,531 (45.23%)

●.ವಿಸ್ತೀರ್ಣ•—————• 94,163 km2 (36,357 ಚದರ ಮೈಲಿ)

●.ಸಾಂದ್ರತೆ•—————•1,102/km2 (2,850/ಚದರ ಮೈಲಿ)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 916.

●.ಆಡಳಿತಾತ್ಮಕ ರಾಜಧಾನಿ: •—————• ಮುಂಬೈ (Mumbai)

●.ಶಾಸಕಾಂಗ ರಾಜಧಾನಿ: •—————• ನಾಗ್ಪುರ (Nagpur)(W / 2), ಮುಂಬೈ (S+B)

●.ನ್ಯಾಯಾಂಗ ರಾಜಧಾನಿ: •—————• ನಾಗ್ಪುರ (W), ಮುಂಬೈ (1818)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : 1960

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ದೇವೇಂದ್ರ ಫಡ್ನವೀಸ್.

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಚೆನ್ನಮಾನೆನಿ ವಿದ್ಯಾಸಾಗರ್ ರಾವ್.

━━━━━━━━━━━━━━━━━━━━━━━━━━━━━━━━━━━━━━━━━━━━━


22) ರಾಜ್ಯ : ಮಣಿಪುರ
 (Manipur) :

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•2,721,756

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) ———•(0.22%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————• 25

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 18.7%

●.ಗ್ರಾಮೀಣ ಜನಸಂಖ್ಯೆ •—————• 1,899,624 (79.79%)

●.ನಗರ ಜನಸಂಖ್ಯೆ •—————• 822,132 (20.21%)

●.ವಿಸ್ತೀರ್ಣ •—————• 22,327 km2 (8,621 sq mi)

●.ಸಾಂದ್ರತೆ •—————• 122/km2 (320/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 987

●.ಆಡಳಿತಾತ್ಮಕ ರಾಜಧಾನಿ: •—————•ಇಂಫಾಲ (Impal)

●.ಶಾಸಕಾಂಗ ರಾಜಧಾನಿ: •—————• ಇಂಫಾಲ

●.ನ್ಯಾಯಾಂಗ ರಾಜಧಾನಿ: •—————• ಇಂಫಾಲ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1947

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಒಕ್ರಮ್ ಇಬೋಬಿ ಸಿಂಗ್(03/02/2002(12 ವರ್ಷಗಳಿಂದ))

●.ಅಧಿಕಾರದಲ್ಲಿರುವ ಪಕ್ಷ :•—————•ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೆ.ಕೆ. ಪಾಲ್

━━━━━━━━━━━━━━━━━━━━━━━━━━━━━━━━━━━━━━━━━━━━━    


23) ರಾಜ್ಯ : ಮೇಘಾಲಯ
 (Meghalaya) :

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 2,964,007

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.24%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 23

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•27.8%

●.ಗ್ರಾಮೀಣ ಜನಸಂಖ್ಯೆ •—————•2,368,971 (79.92%)

●.ನಗರ ಜನಸಂಖ್ಯೆ •—————• 595,036 (20.08%)

●.ವಿಸ್ತೀರ್ಣ •—————• 22,429 km2 (8,660 sq mi)

●.ಸಾಂದ್ರತೆ •—————• 132/km2 (340/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 986

●. ಆಡಳಿತಾತ್ಮಕ ರಾಜಧಾನಿ: •—————•ಶಿಲ್ಲಾಂಗ್ (Shillong)

●.ಶಾಸಕಾಂಗ ರಾಜಧಾನಿ: •—————• ಶಿಲ್ಲಾಂಗ್

●.ನ್ಯಾಯಾಂಗ ರಾಜಧಾನಿ: •—————• ಶಿಲ್ಲಾಂಗ್

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1970

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಮುಕುಲ್ ಸಂಗ್ಮಾ (04/20/2010)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೆ.ಕೆ. ಪಾಲ್

━━━━━━━━━━━━━━━━━━━━━━━━━━━━━━━━━━━━━━━━━━━━━


24) ರಾಜ್ಯ : ಮಿಜೋರಾಂ
 (Mizoram):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 1,091,014

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.09%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •———• 28

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•22.8%

●.ಗ್ರಾಮೀಣ ಜನಸಂಖ್ಯೆ •—————•529,037 (48.49%)

●.ನಗರ ಜನಸಂಖ್ಯೆ •—————• 561,997 (51.51%)

●.ವಿಸ್ತೀರ್ಣ •—————• 21,081 km2 (8,139 sq mi)

●.ಸಾಂದ್ರತೆ •—————• 52/km2 (130/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 975

●.ಆಡಳಿತಾತ್ಮಕ ರಾಜಧಾನಿ:•—————• ಐಜ್ವಾಲ್ (Aizawl)

●.ಶಾಸಕಾಂಗ ರಾಜಧಾನಿ: •—————• ಐಜ್ವಾಲ್

●.ನ್ಯಾಯಾಂಗ ರಾಜಧಾನಿ: •—————• ಗೌಹಾತಿ (Guwahati)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1972

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಪು ಲಲ್ತಾನ್ ವಾಲಾ(12/07/2008)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೇಸರಿನಾಥ್ ತ್ರಿಪಾಠಿ


To be Continued ...
***(ಮಾರ್ಚ್ 28, 2015 ರ ಮಾಹಿತಿಯಂತೆ ಅಪ್ ಡೇಟ್ ಗೊಳಿಸಲಾಗಿದೆ)

☀ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು:—ಭಾಗ Ⅰ (States and Union Territories of India: PART Ⅰ) 

☀ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು:—ಭಾಗ Ⅰ
(States and Union Territories of India: PART Ⅰ)

━━━━━━━━━━━━━━━━━━━━━━━━━━━━━━━━━━━━━━━━━━━━━


☀ ಭಾರತ (THE REPUBLIC OF INDIA):

●.ಭಾರತ ಹೊಂದಿರುವ ಒಟ್ಟು ರಾಜ್ಯಗಳು :•————• 29.

●.ಭಾರತ ಹೊಂದಿರುವ ಒಟ್ಟು ಕೇಂದ್ರಾಡಳಿತ ಪ್ರದೇಶಗಳು :•————•07

●.ಭಾರತದ ಒಟ್ಟು ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•————• 1,210,193,422

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (100%)

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 17,64%

●.ಗ್ರಾಮೀಣ ಜನಸಂಖ್ಯೆ •—————• 833,087,662 (68.84%)

●.ನಗರ ಜನಸಂಖ್ಯೆ •—————•377,105,760 (31.16%)

●.ವಿಸ್ತೀರ್ಣ •—————• 3,287,240 km2 (1,269,210 sq mi)

●.ಸಾಂದ್ರತೆ •—————• 382/km2 (990/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 940

________●_________●__________●__________●__________●_____



1) ಕೇಂದ್ರಾಡಳಿತ ಪ್ರದೇಶ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು :
(Andaman and Nicobar Islands):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•379,944

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.03%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•03

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•6.7%

●.ಗ್ರಾಮೀಣ ಜನಸಂಖ್ಯೆ •—————• 244,411 (64.33%)

●.ನಗರ ಜನಸಂಖ್ಯೆ •—————• 135,533 (35.67%)

●.ವಿಸ್ತೀರ್ಣ •—————•8,249 km2 (3,185 ಚದರ ಮೈಲಿ)

●.ಸಾಂದ್ರತೆ •—————•46/km2 (120/ಚದರ ಮೈಲಿ)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 878

●.ಆಡಳಿತಾತ್ಮಕ ರಾಜಧಾನಿ:•—————• ಪೋರ್ಟ್ ಬ್ಲೇರ್ (Port Blair)

●.ಶಾಸಕಾಂಗ ರಾಜಧಾನಿ:•—————• ಪೋರ್ಟ್ ಬ್ಲೇರ್

●.ನ್ಯಾಯಾಂಗ ರಾಜಧಾನಿ:•—————• ಕೋಲ್ಕತಾ (ಹಿಂದಿನ ಕಲ್ಕತ್ತಾ) (Kolkata)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 1956

●.ಹಳೆಯ ರಾಜಧಾನಿ:•—————• ಕಲ್ಕತ್ತಾ (1945-1956)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಎ. ಕೆ. ಸಿಂಗ್ (ಲೆಫ್ಟಿನೆಂಟ್ ಗವರ್ನರ್)

━━━━━━━━━━━━━━━━━━━━━━━━━━━━━━━━━━━━━━━━━━━━━

2 ರಾಜ್ಯ : ಆಂಧ್ರಪ್ರದೇಶ
(Andhra Pradesh):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 49,386,799

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (4.08%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•11

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 11.1%

●.ವಿಸ್ತೀರ್ಣ •—————•160,205 km2 (61,855 sq mi)

●.ಸಾಂದ್ರತೆ •—————• 308/km2 (800/sq mi)

●.ಆಡಳಿತಾತ್ಮಕ ರಾಜಧಾನಿ:•—————• ವಿಜಯವಾಡಾ (Vijayawada)

●.ಶಾಸಕಾಂಗ ರಾಜಧಾನಿ:•—————• ವಿಜಯವಾಡಾ

●.ನ್ಯಾಯಾಂಗ ರಾಜಧಾನಿ:•—————• ಹೈದರಾಬಾದ್ (Hyderabad)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 2 ಜೂನ್ 2014.

●.ಹಳೆಯ ರಾಜಧಾನಿ:•—————• ಕಲ್ಕತ್ತಾ (1945-1956) ಹೈದರಾಬಾದ್ (1956-2014) (2 ನೇ ಬಾರಿಗೆ ಮರು ಸಂಘಟಿತ)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ನಾರಾ ಚಂದ್ರಬಾಬು ನಾಯ್ಡು (06/08/2014)

●.ಅಧಿಕಾರದಲ್ಲಿರುವ ಪಕ್ಷ :•—————• ತೆಲುಗು ದೇಶಂ ಪಕ್ಷ.

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ. E.S.L ನರಸಿಂಹನ್ .

━━━━━━━━━━━━━━━━━━━━━━━━━━━━━━━━━━━━━━━━━━━━━


3)ರಾಜ್ಯ : ಅರುಣಾಚಲ ಪ್ರದೇಶ :
(Arunachal Pradesh)

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 1,382,611

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.11%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•27

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———• 25.9%

●.ಗ್ರಾಮೀಣ ಜನಸಂಖ್ಯೆ •—————• 1,069,165 (77.33%)

●.ನಗರ ಜನಸಂಖ್ಯೆ •—————• 313,446 (22.67%)

●.ವಿಸ್ತೀರ್ಣ •—————• 83,743 km2 (32,333 sq mi)

●.ಸಾಂದ್ರತೆ •—————• 17/km2 (44/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————•920

●.ಆಡಳಿತಾತ್ಮಕ ರಾಜಧಾನಿ: •—————• ಇಟಾನಗರ್ (Itanagar)

●.ಶಾಸಕಾಂಗ ರಾಜಧಾನಿ: •—————• ಇಟಾನಗರ್

●.ನ್ಯಾಯಾಂಗ ರಾಜಧಾನಿ: •—————• ಗೌಹಾತಿ (Guwahati)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1987

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ನಬ್ದಾಮ್ ಟುಕಿ.(11/01/2011)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ನಿರ್ಭಯ್ ಶರ್ಮಾ

━━━━━━━━━━━━━━━━━━━━━━━━━━━━━━━━━━━━━━━━━━━━━


4) ರಾಜ್ಯ : ಅಸ್ಸಾಂ :
(Assam):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 31,169,272

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.58%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•15

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 16.9%

●.ಗ್ರಾಮೀಣ ಜನಸಂಖ್ಯೆ •—————• 26,780,526 (85.92%)

●.ನಗರ ಜನಸಂಖ್ಯೆ •—————• 4,388,756 (14.08%)

●.ವಿಸ್ತೀರ್ಣ •—————• 78,438 km2 (30,285 sq mi)

●.ಸಾಂದ್ರತೆ •—————• 397/km2 (1,030/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 954

●.ಆಡಳಿತಾತ್ಮಕ ರಾಜಧಾನಿ:•—————• ದಿಸ್ಪುರ್ (Dispur)

●.ಶಾಸಕಾಂಗ ರಾಜಧಾನಿ:•—————• ಗೌಹಾತಿ (Guwahati)

●.ನ್ಯಾಯಾಂಗ ರಾಜಧಾನಿ: •—————• ಗೌಹಾತಿ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 1975.

●.ಹಳೆಯ ರಾಜಧಾನಿ: •—————• ಶಿಲ್ಲಾಂಗ್ (Shillong) (1874-1972)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಶ್ರೀ ತರುಣ್ ಕುಮಾರ್ ಗೊಗೋಯಿ (05/17/2001 (13 ವರ್ಷಗಳಿಂದ))

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಜಾನಕಿ ಬಲ್ಲಭ್ ಪಟ್ನಾಯಕ್

━━━━━━━━━━━━━━━━━━━━━━━━━━━━━━━━━━━━━━━━━━━━━


5 ) ರಾಜ್ಯ : ಬಿಹಾರ (Bihar)

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•103,804,637

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(8.58%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————• 03

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•25.1%

●.ಗ್ರಾಮೀಣ ಜನಸಂಖ್ಯೆ •—————• 92,075,028 (88.70%)

●.ನಗರ ಜನಸಂಖ್ಯೆ •—————• 11,729,609 (11.30%)

●.ವಿಸ್ತೀರ್ಣ •—————• 94,163 km2 (36,357 sq mi)

●.ಸಾಂದ್ರತೆ •—————• 1,102/km2 (2,850/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 916

●. ಆಡಳಿತಾತ್ಮಕ ರಾಜಧಾನಿ:•—————• ಪಟ್ನಾ (Patna)

●.ಶಾಸಕಾಂಗ ರಾಜಧಾನಿ: •—————• ಪಾಟ್ನಾ

●.ನ್ಯಾಯಾಂಗ ರಾಜಧಾನಿ: •—————• ಪಾಟ್ನಾ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 1912

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ನಿತೀಶ್ ಕುಮಾರ್

●.ಅಧಿಕಾರದಲ್ಲಿರುವ ಪಕ್ಷ :•—————• ಜನತಾ ದಳ (ಯು)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಕೇಸರಿ ನಾಥ್ ತ್ರಿಪಾಠಿ

━━━━━━━━━━━━━━━━━━━━━━━━━━━━━━━━━━━━━━━━━━━━━

 
6) ಕೇಂದ್ರಾಡಳಿತ ಪ್ರದೇಶ :  ಚಂಡೀಘಢ
(Chandigarh):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•1,054,686

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.09%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•02

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•17.1%

●.ಗ್ರಾಮೀಣ ಜನಸಂಖ್ಯೆ •—————• 29,004 (02.75%)

●.ನಗರ ಜನಸಂಖ್ಯೆ •—————• 1,025,682 (97.25%)

●.ವಿಸ್ತೀರ್ಣ •—————•114 km2 (44 sq mi)

●.ಸಾಂದ್ರತೆ •—————•9,252/km2 (23,960/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 818

●.ಆಡಳಿತಾತ್ಮಕ ರಾಜಧಾನಿ: •—————•ಚಂಡೀಘಢ

●.ಶಾಸಕಾಂಗ ರಾಜಧಾನಿ: •—————• ಚಂಡೀಘಢ

●.ನ್ಯಾಯಾಂಗ ರಾಜಧಾನಿ:              —

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1966

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಶಿವರಾಜ್ ವಿ ಪಾಟೀಲ್

━━━━━━━━━━━━━━━━━━━━━━━━━━━━━━━━━━━━━━━━━━━━━


7) ರಾಜ್ಯ : ಛತ್ತೀಸ್ ಗಢ
(Chhattisgarh):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•25,540,196

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(2.11%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————• 17

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 22.6%

●.ಗ್ರಾಮೀಣ ಜನಸಂಖ್ಯೆ •—————• 19,603,658 (76.76%)

●.ನಗರ ಜನಸಂಖ್ಯೆ •—————• 5,936,538 (23.24%)

●.ವಿಸ್ತೀರ್ಣ •—————• 135,191 km2 (52,198 sq mi)

●.ಸಾಂದ್ರತೆ •—————• 189/km2 (490/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 991

●.ಆಡಳಿತಾತ್ಮಕ ರಾಜಧಾನಿ:•—————• ರಾಯ್ ಪುರ (Raipur)

●.ಶಾಸಕಾಂಗ ರಾಜಧಾನಿ: •—————• ರಾಯ್ ಪುರ

●.ನ್ಯಾಯಾಂಗ ರಾಜಧಾನಿ: •—————• ಬಿಲಾಸ್ ಪುರ್ (Bilaspur)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 2000

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ರಮಣ್ ಸಿಂಗ್12/07/2003(10 ವರ್ಷಗಳಿಂದ)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ಜನತಾ ಪಕ್ಷ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಬಾಲ್ ರಾಮಜಿ ದಾಸ ಟಂಡನ್

━━━━━━━━━━━━━━━━━━━━━━━━━━━━━━━━━━━━━━━━━━━━━


8) ಕೇಂದ್ರಾಡಳಿತ ಪ್ರದೇಶ : ದಾದ್ರಾ ಮತ್ತು ನಗರ ಹವೇಲಿ
(Dadra and Nagar Haveli):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•342,853

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.03%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•04

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•55.5%

●.ಗ್ರಾಮೀಣ ಜನಸಂಖ್ಯೆ •—————• 183,024 (53.38%)

●.ನಗರ ಜನಸಂಖ್ಯೆ •—————• 159,829 (46.62%)

●.ವಿಸ್ತೀರ್ಣ •—————•491 km2 (190 ಚದರ ಮೈಲಿ)

●.ಸಾಂದ್ರತೆ •—————•698/km2 (1,810/ಚದರ ಮೈಲಿ)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 775

●.ಆಡಳಿತಾತ್ಮಕ ರಾಜಧಾನಿ:•—————• ಸಿಲ್ವಸಾ (Silvasa)

●.ಶಾಸಕಾಂಗ ರಾಜಧಾನಿ: —

●.ನ್ಯಾಯಾಂಗ ರಾಜಧಾನಿ: •—————•ಮುಂಬೈ (Mumbai)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ :•—————• 1945

●.ಹಳೆಯ ರಾಜಧಾನಿ: •—————• ಮುಂಬೈ (1954-1961), ಪಣಜಿ (1961-1987)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ರಣಜಿತ್ ಭಲ್ಲಾ

━━━━━━━━━━━━━━━━━━━━━━━━━━━━━━━━━━━━━━━━━━━━━

9) ಕೇಂದ್ರಾಡಳಿತ ಪ್ರದೇಶ : ದಮನ್ ಮತ್ತು ದಿಯು
(Daman and Diu):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•242,911

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.02%)

●.ಭಾರತದ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ •——•05

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•53.5%

●.ಗ್ರಾಮೀಣ ಜನಸಂಖ್ಯೆ •—————• 60,331(24.84%)

●.ನಗರ ಜನಸಂಖ್ಯೆ •—————• 182,580 (75.16%)

●.ವಿಸ್ತೀರ್ಣ •—————•112 km2 (43 ಚದರ ಮೈಲಿ)

●.ಸಾಂದ್ರತೆ •—————•2,169/km2 (5,620/ಚದರ ಮೈಲಿ)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 618

●.ಆಡಳಿತಾತ್ಮಕ ರಾಜಧಾನಿ: •—————•ದಮನ್ (Daman)

●.ಶಾಸಕಾಂಗ ರಾಜಧಾನಿ: —

●.ನ್ಯಾಯಾಂಗ ರಾಜಧಾನಿ: •—————• ಮುಂಬೈ(Mumbai)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1987

●.ಹಳೆಯ ರಾಜಧಾನಿ: •—————• ಅಹಮದಾಬಾದ್ (Ahmedabad) (1961-1963), ಪಣಜಿ (Panaji) (1963-1987)

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ರಣಜಿತ್ ಭಲ್ಲಾ

━━━━━━━━━━━━━━━━━━━━━━━━━━━━━━━━━━━━━━━━━━━━━

10 ) ರಾಷ್ಟ್ರೀಯ ರಾಜಧಾನಿ ಪ್ರದೇಶ: ದೆಹಲಿ
(National Capital Territory of Delhi):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•16,753,235

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(1.38%)

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———•21%

●.ಗ್ರಾಮೀಣ ಜನಸಂಖ್ಯೆ •—————• 419,319 (02.50%)

●.ನಗರ ಜನಸಂಖ್ಯೆ •—————•16,333,916 (97.50%)

●.ವಿಸ್ತೀರ್ಣ •—————• 1,484 km2 (573 sq mi)

●.ಸಾಂದ್ರತೆ •—————• 11,297/km2 (29,260/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 866

●.ಆಡಳಿತಾತ್ಮಕ ರಾಜಧಾನಿ: •—————•ಹೊಸ ದಹಲಿ (New Delhi)

●.ಶಾಸಕಾಂಗ ರಾಜಧಾನಿ: •—————• ಹೊಸ ದಹಲಿ

●.ನ್ಯಾಯಾಂಗ ರಾಜಧಾನಿ: •—————• ಹೊಸ ದೆಹಲಿ

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————•1952

●.ಹಳೆಯ ರಾಜಧಾನಿ: — ಇಲ್ಲಾ—  

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಅರವಿಂದ್ ಕೇಜ್ರಿವಾಲ್.

●.ಅಧಿಕಾರದಲ್ಲಿರುವ ಪಕ್ಷ :•—————• ಆಮ್ ಆದ್ಮಿ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ನಜೀಬ್ ಜಂಗ್ (ಲೆಫ್ಟಿನೆಂಟ್ ಗವರ್ನರ್)

━━━━━━━━━━━━━━━━━━━━━━━━━━━━━━━━━━━━━━━━━━━━━


11) ರಾಜ್ಯ : ಗೋವಾ
(Goa):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————•1,457,723

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%) •———•(0.12%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•26

●.(2001-2011ರ) ದಶಕದ ಪ್ರತಿಶತ(%) ಬೆಳವಣಿಗೆ •———• 8.2%

●.ಗ್ರಾಮೀಣ ಜನಸಂಖ್ಯೆ •—————• 551,414 (37.83%)

●.ನಗರ ಜನಸಂಖ್ಯೆ •—————• 906,309 (62.17%)

●.ವಿಸ್ತೀರ್ಣ •—————• 3,702 km2 (1,429 sq mi)

●.ಸಾಂದ್ರತೆ •—————• 394/km2 (1,020/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 968

●.ಆಡಳಿತಾತ್ಮಕ ರಾಜಧಾನಿ: •—————• ಪಣಜಿ (Panaji)

●.ಶಾಸಕಾಂಗ ರಾಜಧಾನಿ:•—————• ಪೊರ್ವೊರಿಮ್ (Porvorim)

●.ನ್ಯಾಯಾಂಗ ರಾಜಧಾನಿ: •—————• ಮುಂಬೈ (Mumbai)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1961

●.ಹಳೆಯ ರಾಜಧಾನಿ: •—————• ಪಣಜಿ (1961-1987)

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಲಕ್ಷ್ಮಿಕಾಂತ್ ಪಾರ್ಸೇಕರ್

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ಜನತಾ ಪಕ್ಷ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಮೃದುಲಾ ಸಿನ್ಹಾ

━━━━━━━━━━━━━━━━━━━━━━━━━━━━━━━━━━━━━━━━━━━━━


12) ರಾಜ್ಯ : ಗುಜರಾತ್
 (Gujarat):

●.ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ )•—————• 60,383,628

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಪ್ರತಿಶತ (%)•———• (5.00%)

●.ಭಾರತದ ಜನಸಂಖ್ಯೆಯಲ್ಲಿ ಹೊಂದಿರುವ ಸ್ಥಾನ :•—————•09

●.(2001-2011ರ) ದಶಕದ ಪ್ರತಿಶತ(%) ಜನಸಂಖ್ಯೆಯಲ್ಲಿ ಬೆಳವಣಿಗೆ •———• 19.2%

●.ಗ್ರಾಮೀಣ ಜನಸಂಖ್ಯೆ •—————• 34,670,817 (57.42%)

●.ನಗರ ಜನಸಂಖ್ಯೆ •—————•25,712,811 (42.58%)

●.ವಿಸ್ತೀರ್ಣ •—————• 196,024 km2 (75,685 sq mi)

●.ಸಾಂದ್ರತೆ •—————• 308/km2 (800/sq mi)

●.ಲಿಂಗಾನುಪಾತ (ಪ್ರತಿ 1000 ಪುರುಷರಿಗೆ)•—————• 918

●.ಆಡಳಿತಾತ್ಮಕ ರಾಜಧಾನಿ: •—————• ಗಾಂಧಿನಗರ (Gandhinagar)

●.ಶಾಸಕಾಂಗ ರಾಜಧಾನಿ: •—————• ಗಾಂಧಿನಗರ್

●.ನ್ಯಾಯಾಂಗ ರಾಜಧಾನಿ: •—————• ಅಹಮದಾಬಾದ್ (Ahmedabad)

●.ಹೊಸ ರಾಜಧಾನಿ ಅಸ್ತಿತ್ವಕ್ಕೆ ಬಂದ ವರ್ಷ : •—————• 1960

●.ಹಳೆಯ ರಾಜಧಾನಿ: •—————• ಅಹಮದಾಬಾದ್ (1960-1970)    

●.ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ: •—————• ಆನಂದಿಬೆನ್ ಪಾಟೀಲ್ (05/22/2014)

●.ಅಧಿಕಾರದಲ್ಲಿರುವ ಪಕ್ಷ :•—————• ಭಾರತೀಯ ಜನತಾ ಪಕ್ಷ

●.ರಾಜ್ಯದ ಪ್ರಸ್ತುತ ರಾಜ್ಯಪಾಲ (ಗವರ್ನರ್) :•—————• ಶ್ರೀ ಓಂ ಪ್ರಕಾಶ್ ಕೊಹ್ಲಿ


To be Continued ...

***(ಮಾರ್ಚ್ 28, 2015 ರ ಮಾಹಿತಿಯಂತೆ ಪರೀಷ್ಕರಿಸಲಾಗಿದೆ)