"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 31 December 2022

•► ಬಾಂಬ್ ಸೈಕ್ಲೋನ್ (Bomb Cyclone) :

 
•►  ಬಾಂಬ್ ಸೈಕ್ಲೋನ್ (Bomb Cyclone) :
━━━━━━━━━━━━━━━━━━━━━━━━━


- ‘ಬಾಂಬ್ ಸೈಕ್ಲೋನ್’ ಎಂದು ಕರೆಸಿಕೊಳ್ಳುವ ಚಳಿಗಾಲದ ಚಂಡಮಾರತವು ಭೂಮಿಯ ಮೇಲ್ಮೈ ಭಾಗದ ಬೆಚ್ಚನೆಯ ಗಾಳಿಗೆ ಭಾರಿ ಶೀತಗಾಳಿ ಡಿಕ್ಕಿ ಹೊಡೆದಾಗ ಉಂಟಾಗುವ ಒತ್ತಡಕ್ಕೆ ಬಾಂಬ್‌ ಸೈಕ್ಲೋನ್‌ ಎಂದು ಕರೆಯಲಾಗುತ್ತದೆ.

 
- 24 ಗಂಟೆಯೊಳಗೆ ಗಾಳಿಯ ಒತ್ತಡ 20 ಮಿಲಿಬಾರ್‌ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಾಗ ಉಂಟಾಗುವ ತೀವ್ರಗತಿಯ ಮಾರುತ
ವನ್ನು ಸಹ ಇದೇ ಹೆಸರಿನಿಂದ ಕರೆಯಲಾಗುತ್ತದೆ.

- ವಾಯುಭಾರ ಒತ್ತಡವು ಇಳಿಕೆಯಾಗಿ, ಶೀತ ಗಾಳಿಯ ದ್ರವ್ಯರಾಶಿಯು ಬಿಸಿಗಾಳಿಯ ದ್ರವ್ಯರಾಶಿಯೊಂದಿಗೆ ಘರ್ಷಣೆಯಾದಾಗ “ಬಾಂಬ್‌ ಸೈಕ್ಲೋನ್‌’ ಉಂಟಾಗುತ್ತದೆ.

- ಒತ್ತಡವು ಎಷ್ಟು ಕಡಿಮೆಯಾಗುತ್ತದೋ ಗಾಳಿಯು ಅಷ್ಟೇ ಬಲಿಷ್ಠವಾಗುತ್ತದೆ. ಕೆಲವೇ ಗಂಟೆಗಳ ಅವಧಿಯಲ್ಲಿ ತಾಪಮಾನ 11 ಡಿ.ಸೆ.ಗಿಂತಲೂ ಹೆಚ್ಚು ಇಳಿಯುತ್ತದೆ.

- ಇಂತಹ ಪರಿಸ್ಥಿತಿಯಲ್ಲಿ ಫ್ರಾಸ್ಟ್‌ಬೈಟ್‌  (ಚಳಿಯ ಹೊಡೆತಕ್ಕೆ ಚರ್ಮಕ್ಕೆ ಆಗುವ ಗಾಯ)  ಉಂಟಾಗುವ ಹೆಚ್ಚು ಸಂಭವವಿರುತ್ತದೆ. ಫ್ರಾಸ್ಟ್‌ಬೈಟ್‌ ಎಂದರೆ ಅತಿಯಾದ ಶೀತಕ್ಕೆ ಮೈ ಒಡ್ಡಿಕೊಂಡರೆ ದೇಹದ ಅಂಗಾಂಶಗಳಿಗೆ ಉಂಟಾಗುವ ಗಾಯ. ಮೂಗು, ಕೈಬೆರಳು, ಕಾಲೆºರಳುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗ್ಯಾಂಗ್ರೀನ್‌ಗೂ ಕಾರಣವಾಗಬಹುದು.

- ಪ್ರಸ್ತುತ ಅಮೆರಿಕಕ್ಕೆ ಈ ತೀವ್ರ ಶೀತ ಚಂಡಮಾರುತ (ಬಾಂಬ್‌ ಸೈಕ್ಲೋನ್‌) ಅಪ್ಪಳಿಸಿದ್ದು, ತಾಪಮಾನ ‘ಮೈನಸ್‌ 40’ ಡಿಗ್ರಿವರೆಗೆ ಕುಸಿದಿದೆ. ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಡಕೋಟಾ, ಓಕ್ಲಹಾಮ, ಅಯೋವಾ ಮತ್ತು ಡಲ್ಲಾಸ್, ಟೆಕ್ಸಾಸ್‌ ಗಳೊಳಗೊಂಡಂತೆ ಎಲ್ಲ ರಾಜ್ಯಗಳ ಮೇಲೂ ಪರಿಣಾಮ ಬೀರಿದೆ.

Friday 23 December 2022

•► ಅನ್ನಿ ಬೆಸೆಂಟ್ ರವರ ಪ್ರಸಿದ್ಧ ಸಾಹಿತ್ಯ ಕೃತಿಗಳು: (Annie Besant's famous literary works)

 •► ಅನ್ನಿ ಬೆಸೆಂಟ್ ರವರ ಪ್ರಸಿದ್ಧ ಸಾಹಿತ್ಯ ಕೃತಿಗಳು:
(Annie Besant's famous literary  works)

━━━━━━━━━━━━━━━━━━━━━━━━━━━━

ಅನ್ನಿ ಬೆಸೆಂಟ್‍ರು ಐರಿಶ್ ಮೂಲದ ಭಾರತೀಯರ ಹಕ್ಕುಗಳಿಗಾಗಿ ಹೋರಾಡಿದ ಪ್ರಮುಖ ಥಿಯೊಸೊಫಿಸ್ಟ್ ರಾಜಕೀಯ ನಾಯಕಿ, ಬ್ರಿಟಿಷ್ ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಬರಹಗಾರ್ತಿ ಮತ್ತು ವಾಗ್ಮಿ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು. ಇವರು ವಿವಿಧ ಪ್ರಮುಖ ಚಳುವಳಿಗಳ ಮುಖ್ಯಸ್ಥರಾಗಿ ಮತ್ತು ಮಹಿಳಾ ಹಕ್ಕುಗಳ ಪರವಾದ ಹೋರಾಟದಲ್ಲಿ ನಾಯಕಿಯಾಗಿ 'ಜನತೆಯ ದಣಿವರಿಯದ ಸೇವಕಿ' ಎಂದು ಹೆಸರಾಗಿದ್ದರು.
 
1.ಅನ್ನಿ ಬೆಸೆಂಟ್ ಅವರ ಪ್ರಸಿದ್ಧ ಸಾಹಿತ್ಯ ಕೃತಿಗಳಲ್ಲಿ ಒಂದಾದ
'ಭಾರತ : ಒಂದು ರಾಷ್ಟ್ರ; ಸ್ವಯಂ ಸರ್ಕಾರಕ್ಕಾಗಿ ಕರೆ' (India:  A  Nation;  A  Plea  for  Self  Government) ಎಂಬ ಪುಸ್ತಕವನ್ನು  1915 ರಲ್ಲಿ ಬರೆದರು.
- ಈ ಪುಸ್ತಕದಲ್ಲಿ ಅವರು ಭಾರತೀಯ ದೃಷ್ಟಿಕೋನದಿಂದ ಜ್ವಲಂತ ಭಾರತೀಯರ ಪರಿಸ್ಥಿತಿಗಳು ಮತ್ತು ಸಮಸ್ಯೆಗಳನ್ನು ಬ್ರಿಟಿಷ್ ಗಮನಕ್ಕೆ ತಂದರು ಆ ಮೂಲಕ ಭಾರತದ ನಿಜವಾದ ಹಿತಾಸಕ್ತಿಗಳನ್ನು ಸ್ಪಷ್ಟಪಡಿಸಿದರು..
- ಇದು ರಾಜಕೀಯ ರಚನೆಯನ್ನು ಅಧ್ಯಯನ ಮಾಡುವ ಮೂಲಕ ಮತ್ತು ಭಾರತೀಯ ಪರಿಸ್ಥಿತಿಗಳು ಮತ್ತು ಹಿತಾಸಕ್ತಿಗಳನ್ನು  ಬ್ರಿಟಿಷ್ ಸಾಮ್ರಾಜ್ಯದ ಹಿತಾಸಕ್ತಿಗಳೊಂದಿಗೆ ಸಮನ್ವಯಗೊಳಿಸಲು ಪ್ರಯತ್ನಿಸಿತು.
 
2.ಪುರಾತನ ಲೋಕಜ್ಞಾನ (The Ancient  Wisdom)
3.ನಾಸ್ತಿಕತೆಯೆಡೆಗೆ ನನ್ನ ಮಾರ್ಗ.(My path  to atheism)
4.ಭಾರತೀಯ ರಾಜಕೀಯದ ಭವಿಷ್ಯ.(The Future Of  Indian  Politics)
5.ದೇವರಿಲ್ಲದ ಜಗತ್ತು.(A World Without  God)
6.ಗಾಂಧಿವಾದಿ ಅಸಹಕಾರ; ಅಥವಾ, ಭಾರತವು ಆತ್ಮಹತ್ಯೆ ಮಾಡಿಕೊಳ್ಳಬೇಕೆ?.(Gandhian Non Cooperation;  Or, Shall  India Commit  Suicide?)
7.ಎದ್ದೇಳು, ಭಾರತ: ಸಮಾಜ ಸುಧಾರಣೆಗಾಗಿ ಕರೆ.(Wake Up, India:  A  Plea For  Social  Reform)
8.ಕರ್ಮದ ಅಧ್ಯಯನ.( A Study  in Karma)

 
- ಥಿಯೊಸಾಫಿಕಲ್ ಸೊಸೈಟಿಯ ಸದಸ್ಯರಾಗಿ ಹಾಗೂ ನಂತರದಲ್ಲಿ ಅದರ ಅಧ್ಯಕ್ಷರಾಗಿ ಬೆಸೆಂಟ್ ಅವರು ಪ್ರಪಂಚದಾದ್ಯಂತ ವಿಶೇಷವಾಗಿ ಭಾರತದಲ್ಲಿ ಥಿಯೊಸಾಫಿಕಲ್ ನಂಬಿಕೆಗಳನ್ನು ಪ್ರಚುರಪಡಿಸಲು  ಶ್ರಮಿಸಿದರು. ಇವರು ಮೊದಲು 1893 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು ತದನಂತರ ಇಲ್ಲಿಯೇ ನೆಲೆಸಿ ಭಾರತೀಯ ರಾಷ್ಟ್ರೀಯ ಚಳುವಳಿಯಲ್ಲಿ ತೊಡಗಿಸಿಕೊಂಡರು.
 
-1916 ರಲ್ಲಿ ಅವರು ಇಂಡಿಯನ್ ಹೋಮ್ ರೂಲ್ ಲೀಗ್ ಅನ್ನು ಸ್ಥಾಪಿಸಿದರು ಹಾಗು ಅದರ ಅಧ್ಯಕ್ಷರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ಸದಸ್ಯರೂ ಕೂಡ ಆಗಿದ್ದರು.


- ಶಿಕ್ಷಣದಲ್ಲಿ ಇವರ ದೀರ್ಘಕಾಲದ ಆಸಕ್ತಿಯು ಬನಾರಸ್‌ನಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಲು ಕಾರಣವಾಯಿತು (1898).


- ಅನ್ನಿ ಬೆಸೆಂಟ್ ಅವರು "ದಿ ಕಾಮನ್‌ವೆಲ್" (The Commonweal)ಮತ್ತು "ನ್ಯೂ ಇಂಡಿಯಾ" (New  India) ಎಂಬ ಎರಡು ದಿನ ಪತ್ರಿಕೆಗಳನ್ನು ಸ್ಥಾಪಿಸಿದರು.
 

Tuesday 20 December 2022

•► ಘರಾನಾ ಜೌಗು ಪ್ರದೇಶ (ತೇವ ಭೂಮಿ) (Gharana Wetlands)

 •► ಘರಾನಾ ಜೌಗು ಪ್ರದೇಶ (ತೇವ ಭೂಮಿ)
(Gharana Wetlands)

━━━━━━━━━━━━━━━━━━━━━━━━━

- ಸಂರಕ್ಷಿತ ಜೌಗು ಪ್ರದೇಶ +  ಜಮ್ಮು ಮತ್ತು ಕಾಶ್ಮೀರದ ಭಾರತ-ಪಾಕಿಸ್ತಾನ ಗಡಿಯ ಪಕ್ಕದಲ್ಲಿರುವ  ರಣಬೀರ್ ಸಿಂಗ್‌ಪುರದ ಘರಾನಾ ಗ್ರಾಮದಲ್ಲಿನ ಜಲಾಶಯ - ಅರೆ-ಶುಷ್ಕ ತೇವ ಪ್ರದೇಶ + ಚೀನಾ, ಸೈಬೀರಿಯಾ ಮತ್ತು ಇತರ ದೇಶಗಳಿಂದ ಬರುವ 50 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ನೆಲೆ +  ಇದನ್ನು ಪ್ರಮುಖ ಪಕ್ಷಿ ಪ್ರದೇಶ (IBA) ಎಂದು ಘೋಷಿಸಲಾಗಿದೆ + ಜಮ್ಮುವಿನಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಘರಾನಾವು ಮಕ್ವಾಲ್, ಕುಕ್ಡಿಯನ್, ಅಬ್ದುಲ್ಲಿಯನ್ ಮತ್ತು ಪರ್ಗ್ವಾಲ್ ಜೌಗು ಪ್ರದೇಶಗಳಿಂದ ಆವೃತವಾಗಿದೆ + ಇಲ್ಲಿ 170 ಕ್ಕೂ ಹೆಚ್ಚು ತಳಿಯ  ಮೂಲವಾಸಿ  ಮತ್ತು ವಲಸೆ ಹಕ್ಕಿಗಳು ಚಳಿಗಾಲದಲ್ಲಿ ಸೇರುತ್ತವೆ. + ಈ ಘರಾನಾ ಜೌಗು ಪ್ರದೇಶವು ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ಚಳಿಗಾಲದ ತಿಂಗಳುಗಳಲ್ಲಿ 25,000-30,000 ಪಕ್ಷಿಗಳಿಗೆ ನೆಲೆಯಾಗಿದೆ.


— ಇಲ್ಲಿ ವಲಸೆ ಬರುವ ಪಕ್ಷಿಗಳಲ್ಲಿ ಪ್ರಮುಖವಾದವುಗಳೆಂದರೆ; ಬಾರ್-ಹೆಡೆಡ್ ಗೂಸ್,  ನಾರ್ದರ್ನ್ ಪಿನ್‌ಟೇಲ್, ನಾರ್ದರ್ನ್ ಶೊವೆಲರ್, ಬ್ಲ್ಯಾಕ್-ವಿಂಗ್ಡ್ ಸ್ಟಿಲ್ಟ್ ಮತ್ತು ಗ್ರೇ ಹೆರಾನ್ ಸಾಮಾನ್ಯವಾಗಿ ವಲಸೆ ಬರುವ ಪಕ್ಷಿಗಳಾದರೆ, ಘರಾನಾ ವೆಟ್‌ಲ್ಯಾಂಡ್‌ನಲ್ಲಿ ಕಂಡುಬರುವ ಇತರೆ ಹೊಸ ಪ್ರಭೇದದ ಪಕ್ಷಿಗಳೆಂದರೆ ವೈಟ್-ಬ್ರೆಸ್ಟೆಡ್ ಐಬಿಸ್, ಪೈಡ್ ಕಿಂಗ್‌ಫಿಷರ್ ಮತ್ತು ಯುರೇಷಿಯನ್ ವಿಜಿಯನ್ ಗಳಾಗಿವೆ. ಘರಾನಾದಲ್ಲಿ ವಿರಳವಾಗಿ ಕಂಡುಬರುವ ಉಣ್ಣೆಯ ಕುತ್ತಿಗೆಯ ಕೊಕ್ಕರೆಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜೌಗು ಪ್ರದೇಶಕ್ಕೆ ಹಾರಿವೆ.