"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 8 May 2020

☀"2019-20 ರ ಪ್ರಚಲಿತ ಹಾಗೂ ಮಹತ್ವದ ಘಟನೆಗಳನ್ನಾಧರಿಸಿದ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ ಭಾಗ 1"  (Multiple choice question paper based on 2019-20 important Current affairs PART-1)

☀"2019-20 ರ ಪ್ರಚಲಿತ ಹಾಗೂ ಮಹತ್ವದ ಘಟನೆಗಳನ್ನಾಧರಿಸಿದ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ ಭಾಗ 1"
(Multiple choice question paper based on 2019-20 important Current affairs PART-1)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)
★ ಪ್ರಚಲಿತ ಘಟನೆಗಳ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ
(Multiple choice question paper on current affairs)


•• ಸೂಚನೆಗಳು :-
★ ಇಲ್ಲಿ ತಯಾರಿಸಲಾದ ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 1ಯು 2019-20 ರ  ಪ್ರಚಲಿತ ಹಾಗೂ ಮಹತ್ವದ ಘಟನೆಗಳನ್ನಾಧರಿಸಿ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ.

★ ಸ್ಪರ್ಧಾಲೋಕ ಟೆಲೆಗ್ರಾಮ್ ಚಾನೆಲ್‌ (@spardhaloka) ನಲ್ಲಿ ದಿನಂಪ್ರತಿ ಕೇಳಲಾಗುವ ಕ್ವಿಝ್ ಎಲ್ಲವನ್ನೂ  ಇಲ್ಲಿ ಒಂದೆಡೆ ಕ್ರೋಢೀಕರಿಸಿರುವುದು.
★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಗಳನ್ನು ಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ ಭಾಗ 1ನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.

— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.



•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•


1.'ಕೆನ್‌ ಮತ್ತು ಬೆಟ್ವಾ ನದಿಗಳ ಜೋಡಣೆ ಪ್ರಾಜೆಕ್ಟ್' ಸಂಬಂಧಿತ ಕೆಳಕಂಡ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ.
1.ಇದು ಛತ್ತೀಸಘಡ ಮತ್ತು ಮಧ್ಯಪ್ರದೇಶದಲ್ಲಿ ಹರಿಯುವ ನದಿಗಳ ಜೋಡಣೆಗೆ ಸಂಬಂಧಿಸಿದೆ.
2.ಈ ಯೋಜನೆಯಿಂದ ಪನ್ನಾ ಹುಲಿಧಾಮಕ್ಕೆ ಹಾನಿಯುಂಟಾಗುವುದು.√
3.ಇದು ಭಾರತದ 2ನೇ ಪ್ರಮುಖ ನದಿ ಸಂಪರ್ಕ ಯೋಜನೆಯಾಗಿದೆ.
4.ನೀರು ಹೆಚ್ಚು ಇರುವ ಬೆಟ್ವಾ ನದಿಯಿಂದ ನೀರು ಕಡಿಮೆ ಇರುವ ಇದನ್ನು ನದಿಗೆ ಕಾಲುವೆ ಮೂಲಕ ನೀರು ಹರಿಸಲು ನಿರ್ಧರಿಸಲಾಗಿದೆ.


2. ಭಾರತೀಯ ಅರಣ್ಯ ಸರ್ವೇ (ಎಫ್ಎಸ್‌ಐ)ನ “2019ರ ಅರಣ್ಯಗಳ ಸ್ಥಿತಿಗತಿ ವರದಿ’ಯ ಪ್ರಕಾರ ಈ ಅವಧಿಯಲ್ಲಿ ಅರಣ್ಯ ಪ್ರದೇಶ ಹೆಚ್ಚು ವಿಸ್ತರಣೆ ಕಂಡ ದೇಶದ ಮೊದಲ ಮೂರು ರಾಜ್ಯಗಳು ದಕ್ಷಿಣ ಭಾರತದ್ದೇ ಆಗಿದ್ದು, ಅನುಕ್ರಮವಾಗಿ ಅವುಗಳಾವುವೆಂದರೆ —
1.ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಕೇರಳ √
2.ಕರ್ನಾಟಕ, ಕೇರಳ ಮತ್ತು ತೆಲಂಗಾಣ
3.ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಕೇರಳ
4.ತಮಿಳುನಾಡು, ಕರ್ನಾಟಕ ಹಾಗೂ ಕೇರಳ


3.ಇತ್ತೀಚೆಗೆ ಸುದ್ದಿಯಲ್ಲಿದ್ದ ‘ಆಪರೇಷನ್ ಟ್ವಿಸ್ಟ್’(Operation  Twist) ಎಂಬ  ಪದವು ಈ ಕೆಳಗಿನವುಗಳಿಗೆ ಸಂಬಂಧಿಸಿದೆ.
(ಎ) ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಮುಕ್ತ ಮಾರುಕಟ್ಟೆಗಳ ಕಾರ್ಯಾಚರಣೆ. √
(ಬಿ) ಬ್ಯಾಂಕೇತರ ಹಣಕಾಸು ಕಂಪನಿ (NBFC)ಗಳ ಬಿಕ್ಕಟ್ಟನ್ನು ನಿಭಾಯಿಸುವ ತಂತ್ರ.
(ಸಿ) ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಹೂಡಿಕೆ ಹಿಂತೆಗೆತ
(ಡಿ) ಮಧ್ಯಮ-ಆದಾಯದ ವಸತಿ ಮೂಲಸೌಕರ್ಯವನ್ನು ಹೆಚ್ಚಿಸುವ ಹಂತ.


4.‘ಮಾರುಕಟ್ಟೆಗಳನ್ನು ಸೃಷ್ಟಿಸುವುದು, ಅವಕಾಶಗಳನ್ನು ಸೃಷ್ಟಿಸುವುದು’ (creating  markets, creating opportunities) ಎಂಬ ಘೋಷಣೆ ಈ ಕೆಳಗಿನ ಯಾವ ಸಂಸ್ಥೆಗಳಿಗೆ ಸಂಬಂಧಿಸಿದೆ?
(ಎ) ಅಂತರರಾಷ್ಟ್ರೀಯ ಹಣಕಾಸು ನಿಗಮ(IFC) √
(ಬಿ) ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)
(ಸಿ) ವಿಶ್ವ ಆರ್ಥಿಕ ವೇದಿಕೆ (WEF)
(ಡಿ) ವಿಶ್ವ ವ್ಯಾಪಾರ ಸಂಸ್ಥೆ (WTO)


5.ಸ್ವಸಹಾಯ ಗುಂಪು - ಬ್ಯಾಂಕ್ ಲಿಂಕೆಜ್ ಪ್ರೋಗ್ರಾಂ (SHG-BLP) ಅನ್ನು  ಈ ಕೆಳಗಿನವುಗಳಿಂದ ಪ್ರಾರಂಭಿಸಲಾಗಿದೆ.
 (ಎ) ಭಾರತೀಯ ರಿಸರ್ವ್ ಬ್ಯಾಂಕ್ (RBI)
(ಬಿ) ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವದ್ಧಿ ಬ್ಯಾಂಕ್ (NABARD) √
(ಸಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
(ಡಿ) ವಿಶ್ವ ಬ್ಯಾಂಕ್ (The World Bank)


6. ಇವುಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ಆಮ್ಲೀಯ ಅಗ್ನಿಶಿಲೆಗಳಲ್ಲಿ ಸಿಲಿಕಾ ಪ್ರಮಾಣ ಹೆಚ್ಚಾಗಿರುತ್ತದೆ.
2.ಗೇಬ್ರೋ ಎಂಬುದು ಪ್ರತ್ಯಾಮ್ಲೀಯ ಅಗ್ನಿಶಿಲೆಯಾಗಿದ್ದು, ಇದರಲ್ಲಿ ಸಿಲಿಕಾ ಪ್ರಮಾಣ ಕಡಿಮೆ ಇರುತ್ತದೆ.
3.ಗ್ರಾನೈಟ್ ಅಗ್ನಿಶಿಲೆಯಲ್ಲಿ ಸಿಲಿಕಾ ಪ್ರಮಾಣ ಹೆಚ್ಚಾಗಿರುತ್ತದೆ.
— ಇವುಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ.
A) 1 ಮಾತ್ರ
B) 1 & 3 ಮಾತ್ರ √
C) 2 ಮಾತ್ರ.
D) ಮೇಲಿನ ಎಲ್ಲವೂ ಸರಿ.


7.ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ.
1. ಭೂಮಿಯ ಹೆಚ್ಚಿನ ಪ್ರಮಾಣದ ವಾಲಿಕೆಯು ತೀಕ್ಷ್ಣ ಶೆಖೆ ಹಾಗೂ ಕಡು ಚಳಿಗಾಲವನ್ನು ಉಂಟುಮಾಡುವುದು.
2.ಕಡಿಮೆ ವಾಲಿಕೆಯು ಬೇಸಿಗೆಯನ್ನು ತಂಪಾಗಿಯೂ ಚಳಿಗಾಲವನ್ನು ಬೆಚ್ಚಗೆ ಇರುವಂತೆಯೂ ಮಾಡುತ್ತದೆ.
A) 1 ಮಾತ್ರ
B) 2 ಮಾತ್ರ.
C) ಎರಡೂ ತಪ್ಪು
D) ಎರಡೂ ಸರಿ.√


8. ಕ್ವಿಟ್ ಇಂಡಿಯಾ ಚಳುವಳಿಯ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.ಕ್ವಿಟ್ ಇಂಡಿಯಾ ಚಳುವಳಿಯ ನೇತೃತ್ವವನ್ನು ಜಯಪ್ರಕಾಶ್ ನಾರಾಯಣರವರೂ ಕೂಡ ವಹಿಸಿಕೊಂಡಿದ್ದರು. 
!2.‘ದಿ ಫ್ರೀಡಂ ಸ್ಟ್ರಗಲ್ ಫ್ರಾಂಟ್’ ಎಂಬ ದಾಖಲೆ (Document) ಮೂಲಕ ಸಮಾಜವಾದಿಗಳು ತಮ್ಮ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತಂದರು.
— ಸರಿಯಾದ ಹೇಳಿಕೆಯನ್ನು ಗುರುತಿಸಿ.
A) 1 ಮಾತ್ರ.
B) 1 & 2 ಮಾತ್ರ .
C) 2 ಮಾತ್ರ.
D) ಮೇಲಿನ ಎಲ್ಲವೂ ಸರಿ.√


9."ಮುಕುರ್ತಿ ರಾಷ್ಟ್ರೀಯ ಉದ್ಯಾನವನ" ಕುರಿತಾದ ಹೇಳಿಕೆಯನ್ನು ಗುರುತಿಸಿ.
1.ಇದು ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ.
2.ಇಲ್ಲಿ ನೀಲಗಿರಿ ತಹರ್ ಎಂಬ ಅಪರೂಪದ ಪ್ರಾಣಿಯನ್ನು ರಕ್ಷಿಸಲಾಗುತ್ತಿದೆ.
3. ನೀಲಗಿರಿ ತಹರ್ ಎಂಬುದು ತಮಿಳುನಾಡು ರಾಜ್ಯದ ಪ್ರಾಣಿಯಾಗಿದೆ.
A) 1 ಮಾತ್ರ.
B) 1 & 3 ಮಾತ್ರ .
C) 2 ಮಾತ್ರ.
D) ಮೇಲಿನ ಎಲ್ಲವೂ ಸರಿ.√


10."ಟ್ರೈನ್ 18 / ವಂದೇ ಭಾರತ್ ಎಕ್ಸ್‌ಪ್ರೆಸ್‌" ರೈಲು ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ಇದು ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಿತ ಹೈಸ್ಪೀಡ್ ರೈಲು.
2.ದೇಶದ ಪ್ರಥಮ ಎಂಜಿನ್ ರಹಿತ ರೈಲು ಇದಾಗಿದೆ.
A) 1 ಮಾತ್ರ.
B) 1 & 3 ಮಾತ್ರ .
C) 2 ಮಾತ್ರ.
D) ಮೇಲಿನ ಎಲ್ಲವೂ ಸರಿ.√


11. ಇತ್ತೀಚೆಗೆ ‘ಮೈಕ್ರೊಹೈಲಾ ಡಾರ‍್ರೆಲಿ’ (Microhyla eos) ಎಂಬ ಹೆಸರಿನ ಹೊಸ ಪ್ರಭೇದದ ಕಪ್ಪೆಯೊಂದು ಈ ಪ್ರದೇಶದಲ್ಲಿ  ಪತ್ತೆಮಾಡಲಾಯಿತು.
A) ಆಂಧ್ರ ಪ್ರದೇಶ.
B) ಕರ್ನಾಟಕ.
C) ಅರುಣಾಚಲ ಪ್ರದೇಶ. √
D) ಮೇಘಾಲಯ.


12.ಇತ್ತೀಚೆಗೆ ಪ್ರಜಾಪ್ರಭುತ್ವದ ಉಳಿವಿಗಾಗಿ ‘ವಾಟರ್ ರೆವೊಲ್ಯೂಶನ್’ ಎಂಬ ದೊಡ್ಡಮಟ್ಟದ ಆಂದೋಲನ ಈ ರಾಷ್ಟ್ರದಲ್ಲಿ ಜರುಗಿತು.
A) ಆಲ್ಜೀರಿಯ
B) ಹಾಂಗ್ ಕಾಂಗ್  √
C) ದಕ್ಷಿಣ ಸುಡಾನ್
D) ರುವಾಂಡ.


13. ‘ಅಸ್ತ್ರ’ ಕ್ಷಿಪಣಿ ಕುರಿತ ಈ ಕೆಳಗಿನ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ಇದು ಭಾರತದ ಮೊದಲ ದೇಶೀ ನಿರ್ಮಿತ ಏರ್ ಟು ಏರ್ ಕ್ಷಿಪಣಿ.
2.ಇದು ಗೋಚರ ಸಾಮರ್ಥ್ಯ ಮೀರಿದ ಆಗಸದಿಂದ ಆಗಸಕ್ಕೆ ಚಿಮ್ಮುವ (ಬಿಯಾಂಡ್ ವಿಷುವಲ್ ರೇಂಜ್ ಏರ್ ಟು ಏರ್ ಮಿಸೈಲ್ (BVRRAM)) ಕ್ಷಿಪಣಿ.
A) 1 ಮಾತ್ರ.
B) 1 & 2 ಮಾತ್ರ .
C) 2 ಮಾತ್ರ.
D) ಮೇಲಿನ ಎಲ್ಲವೂ ಸರಿ. √


14. ಮಧ್ಯಕಾಲೀನ ಯುಗದಲ್ಲಿ ಗುಲಾಮರಿಗಾಗಿ 'ದಿವಾನ್-ಐ-ಬಂದಗನ್' ಎಂಬ ಇಲಾಖೆಯನ್ನು ಸ್ಥಾಪಿಸಿದವನೆಂದರೆ,
A) ಬಲ್ಬನ್.
B) ಅಲ್ಲಾವುದ್ದೀನ್ ಖಿಲ್ಜಿ.
C) ಇಲ್ತುಮಿಷ್.
D) ಫಿರೋಜ್ ಷಾ ತುಘಲಕ್. √


15. ಇತ್ತೀಚೆಗೆ ದೇಶದ ಅತಿ ಉದ್ದನೇಯ 'ವಿದ್ಯುದೀಕರಣಗೊಂಡ ರೈಲಿನ ಸುರಂಗ ಮಾರ್ಗ' ನಿರ್ಮಿಸಲಾಗಿದ್ದು ಯಾವ ರಾಜ್ಯದಲ್ಲಿ?
A) ಹಿಮಾಚಲ ಪ್ರದೇಶ.
B) ಮೇಘಾಲಯ.
C) ಆಂದ್ರ ಪ್ರದೇಶ.  √
D) ಕೇರಳ.


16.ವಿವಿಧ ಸ್ಥಳೀಯ ವಲಸೆ ಜೀವನಾಧಾರ ಬೇಸಾಯಕ್ಕೆ ಸಂಬಂಧಿಸಿದ ಕೆಳಕಂಡ ಸರಿಯಾದ ಜೋಡಿಯನ್ನು ಗುರುತಿಸಿ.
1.ಅಸ್ಸಾಂ — ‘ಝೂಮ್’,
2.ಒಡಿಶಾ — ‘ಕೋಮನ್’
3.ಕೇರಳ — ‘ಪೋನಮ್’
4.ಆಂಧ್ರಪ್ರದೇಶ — ‘ಪೋಡು’
A) 1 & 2 ಮಾತ್ರ
B) 3 ಮಾತ್ರ.
C) 3 & 4 ಮಾತ್ರ.
D) ಮೇಲಿನ ಎಲ್ಲವೂ ಸರಿ. √


17.ಕೆಳಗಿನವುಗಳಲ್ಲಿನ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ಕಲ್ಲಿದ್ದಲಿನಿಂದ ಗ್ರಾಫೈಟ್ ಉಂಟಾಗುವುದು ಪ್ರಾದೇಶಿಕ ರೂಪಾಂತರ ಹೊಂದುವ ಕ್ರಿಯೆ.
2.ಸುಣ್ಣದಕಲ್ಲು ಅಮೃತಶಿಲೆಯಾಗುವುದು ಸಂಪರ್ಕ ರೂಪಾಂತರ ಹೊಂದುವ ಕ್ರಿಯೆ.
A) 1 ಮಾತ್ರ.
B) 2 ಮಾತ್ರ .
C) ಮೇಲಿನ ಎಲ್ಲವೂ ತಪ್ಪು.
D) ಮೇಲಿನ ಎಲ್ಲವೂ ಸರಿ. √


18.ಹೆಮಿಸ್ ರಾಷ್ಟ್ರೀಯ ಉದ್ಯಾನವನದ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.ಇದು ಇಂಡಸ್ ನದಿಯ ದಂಡೆಯ ಮೇಲಿದೆ.
2.ಇಲ್ಲಿ ಹಿಮ ಚಿರತೆಗಳನ್ನು ಕಾಣಬಹುದು.
3.ಇದು ವಿಶ್ವದ ಅತಿ ಎತ್ತರ ಮತ್ತು ದಕ್ಷಿಣ ಏಷ್ಯಾದ ಅತಿದೊಡ್ಡ ಉದ್ಯಾನವನವಾಗಿದೆ.
— ಸರಿಯಾದ ಹೇಳಿಕೆಯನ್ನು ಗುರುತಿಸಿ.
A) 1 & 2 ಮಾತ್ರ.
B) 2 ಮಾತ್ರ .
C) 3 ಮಾತ್ರ.
D) ಮೇಲಿನ ಎಲ್ಲವೂ ಸರಿ. √


19.ಈ ಕೆಳಗಿನ ರೂಪಾಂತರ ಹೊಂದಿದ ಶಿಲೆಗಳ ಸರಿಯಾದ ಜೋಡಿಗಳನ್ನು ಗುರುತಿಸಿ.
1.ಗ್ರಾನೈಟ್ —→ ನೀಸ್.
2.ಬಸಾಲ್ಟ್ —→ ಶಿಸ್ಟ್.
3.ಮರಳುಶಿಲೆ —→ ಕ್ವಾರ್ಟ್‍ಝೈಟ್.
4.ಶೇಲ್ —→ ಸ್ಲೇಟು.
5.ಸುಣ್ಣದ ಕಲ್ಲು —→ ಅಮೃತಶಿಲೆ.
6.ಕಲ್ಲಿದ್ದಲು —→ ಗ್ರಾಫೈಟ್.
7.ಗ್ರಾಫೈಟ್  —→ ವಜ್ರ.
A) 1,2,3,5, 6 & 7 ಮಾತ್ರ.
B) 1,3,4,5,6 & 7 ಮಾತ್ರ .
C) 1,2,3,6,& 7 ಮಾತ್ರ.
D) ಮೇಲಿನ ಎಲ್ಲವೂ ಸರಿ. √


20. 'ವಿಶ್ವ ಆರ್ಥಿಕ ವೇದಿಕೆ' (ವರ್ಲ್ಡ್ ಎಕನಾಮಿಕ್ ಫೋರಂ — ಡಬ್ಲ್ಯು ಇ ಎಫ್ ) ಸಮಾವೇಶ ನಡೆಯುವ 'ದಾವೋಸ್'‌ ನಗರ ಇರುವುದು ಈ ರಾಷ್ಟ್ರದಲ್ಲಿ....
A) ಅಮೆರಿಕ.
B) ಜಿನಿವಾ.
C) ಸ್ವಿಜ್ಜರ್‌ಲ್ಯಾಂಡ್‌. √
D) ಬ್ರಿಟನ್.


21.ಇಸ್ರೋ ಪ್ರಾರಂಭಿಸಿದ "ಪ್ರಾಜೆಕ್ಟ್ ನೇತ್ರ" ಯೋಜನೆಯು ಇದಕ್ಕೆ ಸಂಬಂಧಿಸಿದೆ.
A) ದೇಶದ ಅತ್ಯಂತ ದೊಡ್ಡ ಸಂವಹನ ಉದ್ದೇಶದ ಉಪಗ್ರಹ ವ್ಯವಸ್ಥೆ.
B) ಬಾಹ್ಯಾಕಾಶದ ಭಗ್ನಾವಶೇಷಗಳ ಮತ್ತು ಅಪಾಯಗಳ ಬಗ್ಗೆ ಉಪಗ್ರಹಗಳಿಗೆ ಮುನ್ನೆಚ್ಚರಿಕೆಗಳನ್ನು ನೀಡುವುದು. √
C) ಸ್ವದೇಶಿ ತಂತ್ರಜ್ಞಾನ ಬಳಸಿ ಇಸ್ರೋ ನಿರ್ಮಿಸಿದ ಅತ್ಯಾಧುನಿಕ ಹವಾಮಾನ ಮುನ್ಸೂಚನೆ ಉಪಗ್ರಹ.
D) ಪ್ರಾಕೃತಿಕ ವಿಕೋಪದ ಎಚ್ಚರಿಕೆ, ಶೋಧನೆ ಮತ್ತು ರಕ್ಷಣೆ ಕಾರ್ಯ.


22.ಇತ್ತೀಚೆಗೆ ಸುದ್ದಿಯಲ್ಲಿದ್ದ 'ಗಿರಿಂಕಾ ಯೋಜನೆ' ಎಂಬ ಸಾಮಾಜಿಕ ಭದ್ರತೆ ಯೋಜನೆಯು ಈ ದೇಶಕ್ಕೆ ಸಂಬಂಧಿಸಿದೆ.
 A) ಹಂಗೇರಿಯಾ.
B) ದ.ಆಪ್ರಿಕಾ.
C) ಜಪಾನ್.
D) ರುವಾಂಡ.  √


23.ಇತ್ತೀಚೆಗೆ ವಿಶ್ವ ದಾಖಲೆಗಳ ಗಿನ್ನೆಸ್ ರೆಕಾರ್ಡ್ ಗೆ ಸೇರ್ಪಡೆಯಾದ 'ಶೊಂಡೋಲ್ ಜಾನಪದ ನೃತ್ಯ (Shondol dance)'  ವು ಈ ಪ್ರದೇಶದ್ದು,
A) ಹಿಮಾಚಲ ಪ್ರದೇಶ.
B) ಮೇಘಾಲಯ.
C) ಆಸ್ಸಾಂ.
D) ಲಡಾಖ್.  √


24.ಜಗತ್ತಿನ ಅತಿ ವೇಗದ ಸೂಪರ್‌ ಕಂಪ್ಯೂಟರ್ 'ಸಮ್ಮಿಟ್‌' (Summit) ಅನ್ನು ತಯಾರಿಸಿದ ದೇಶ?‌
A) ಅಮೆರಿಕ. √
B) ಜಪಾನ್.
C) ಚೀನಾ.
D) ರಷ್ಯಾ.


25.'ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ'ಯ ಕುರಿತ ಈ ಕೆಳಗಿನ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.18-40 ವರ್ಷ ವಯೋಮಿತಿಯವರು ಇದರ  ಫಲಾನುಭವಿಗಳಾಗಲು ಅರ್ಹ.
2.ಫಲಾನುಭವಿಗಳಿಗೆ 60 ವರ್ಷದ ನಂತರ ತಿಂಗಳಿಗೆ ರೂ. 3000 ಪಿಂಚಣಿ ಸಿಗಲಿದೆ.
3.ಆದಾಯ ತೆರಿಗೆ ಪಾವತಿ ಮಾಡುವ ಅಂಗಡಿ ಮಾಲೀಕರಿಗೆ ಈ ಯೋಜನೆ ಲಾಭ ಸಿಗುವುದಿಲ್ಲ.
A) 1 ಮಾತ್ರ.
B) 2 ಮಾತ್ರ.
C) ಮೇಲಿನ ಎಲ್ಲವೂ ಸರಿ.  √
D) ಮೇಲಿನ ಎಲ್ಲವೂ ತಪ್ಪು.


26. '2019 ರ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕ'ದ ಕುರಿತ ಕೆಳಗಿನ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕವನ್ನು ವಿಶ್ವ ಆರ್ಥಿಕ ವೇದಿಕೆ (WEF) ಯು ಪ್ರಕಟಿಸುತ್ತದೆ.
2.ಸ್ಪರ್ಧಾತ್ಮಕ ಆರ್ಥಿಕತೆ ರಾಷ್ಟ್ರಗಳ ಸಾಲಿನಲ್ಲಿ ಸಿಂಗಾಪುರ್ ಮೊದಲ ಸ್ಥಾನ ಪಡೆದಿದೆ.
3.ಈ ವರ್ಷದ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ 68ನೇ ಸ್ಥಾನ ಪಡೆದಿದೆ.
A) 1 ಮಾತ್ರ.
B) 1 & 2 ಮಾತ್ರ.
C) 2 & 3 ಮಾತ್ರ.
D) ಮೇಲಿನ ಎಲ್ಲವೂ ಸರಿ.  √


27. ಇತ್ತೀಚೆಗೆ ಪ್ರಧಾನಿ ಮೋದಿಯವರು 'ಗಾಂಧಿ ಸೋಲಾರ್ ಪಾರ್ಕ್’ ನ್ನು ಇಲ್ಲಿ ಉದ್ಘಾಟಿಸಿದರು.
A) ನ್ಯೂಯಾರ್ಕ್. √
B) ಕೊಲಂಬಿಯ.
C) ಅಹಮದಾಬಾದ.
D) ಲಂಡನ್.


28. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರ ಯಾರಿಗಿದೆ ?
A) ಸಂಸತ್ತಿಗೆ. √
B) ರಾಷ್ಟ್ರಪತಿಗೆ.
C) ಲೋಕಸಭೆಗೆ.
D) ಮೇಲಿನ ಯಾರೂ ಅಲ್ಲ.


29. ಭಾರತದಲ್ಲಿ ಬೀಸುವ ಮಾರುತಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.  ಜೂನ್‍ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಮಾರುತಗಳು ನೈರುತ್ಯದಿಂದ ಈಶಾನ್ಯ ದಿಕ್ಕಿನ ಕಡೆಗೆ ಬೀಸುತ್ತವೆ
2. ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಮಾರುತಗಳು ಈಶಾನ್ಯದಿಂದ ನೈರುತ್ಯ ದಿಕ್ಕಿನ ಕಡೆಗೆ ಬೀಸುತ್ತವೆ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


30. ಇತ್ತೀಚೆಗೆ ಸುದ್ದಿಯಲ್ಲಿದ್ದ "ಸಖಾಲಿನ್ I ಮತ್ತು ವ್ಯಾಂಕೋರ್ನೆಫ್ಟ್" ಪೆಟ್ರೋಲಿಯಂ ಕ್ಷೇತ್ರಗಳು, ಈ ದೇಶಕ್ಕೆ ಸಂಬಂಧಿಸಿದವುಗಳು...
A) ದ.ಕೋರಿಯಾ.
B) ಜಪಾನ್.
C) ಚೀನಾ.
D) ರಷ್ಯಾ. √


31. ಪಶ್ಚಿಮ ಘಟ್ಟಗಳಲ್ಲಿರುವ ಪ್ರಮುಖ ಕಣಿವೆಮಾರ್ಗಗಳು & ಅವು ಸಂಪರ್ಕಿಸುವ ಪ್ರದೇಶಗಳ ಸರಿಯಾಗಿ ಹೊಂದಿಕೆಯಾದ ಜೋಡಿಗಳನ್ನು ಗುರುತಿಸಿ.
1.ತಾಲಘಾಟ್ – ಮುಂಬಯಿ ಮತ್ತು ನಾಸಿಕ್.
2.ಬೋರ್ ‍ಘಾಟ್ – ಮುಂಬಯಿ ಮತ್ತು ಪುಣೆ
3.ಪಾಲ್‍ಘಾಟ್ – ತ್ರಿವೇಂಡ್ರಂ ಮತ್ತು ಚೆನೈ.
A) 1 ಮಾತ್ರ.
B) 1 & 2 ಮಾತ್ರ.
C) 2 & 3 ಮಾತ್ರ.
D) ಮೇಲಿನ ಎಲ್ಲವೂ ಸರಿ. √


32. ನೈಋತ್ಯ ಮಾನ್ಸೂನ್ ಮಾರುತಗಳಿಂದ ಭಾರತದ ಪಶ್ಚಿಮ ಭಾಗದಲ್ಲಿರುವ ಅರಾವಳಿ ಪರ್ವತಗಳು ಕಡಿಮೆ ಮಳೆಯನ್ನು ಪಡೆಯುತ್ತವೆ. ಏಕೆಂದರೆ,
1.ಈ ಮಾರುತಗಳು ಅರಾವಳಿ ಪರ್ವತಗಳಿಗೆ ಸಮಾನಾಂತರವಾಗಿ ಬೀಸುವುದರಿಂದ.
2. ರಾಜಸ್ಥಾನದ ಪಶ್ಚಿಮ ಭಾಗವನ್ನು ತಲುಪುವ ವೇಳೆಗೆ ತೇವಾಂಶವನ್ನು ಕಳೆದುಕೊಳ್ಳುವುದರಿಂದ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎಲ್ಲವೂ ಸರಿ. √
D) ಎಲ್ಲವೂ ತಪ್ಪು.


33.ಸಮಭಾಜಕವೃತ್ತದಿಂದ ಧ್ರುವದ ಕಡೆಗೆ ಹೋದಂತೆ ಎರಡು ರೇಖಾಂಶಗಳ ನಡುವಣ ಅಂತರವು____________.
1.ಕಡಿಮೆಯಾಗುತ್ತಾ ಹೋಗುತ್ತದೆ. √
2.ಹೆಚ್ಚಾಗುತ್ತಾ ಹೋಗುತ್ತದೆ.


34.ತೇವಾಂಶಭರಿತ (Moisture) ವಾಯು ಹಗುರಾಗಿದ್ದು, ಕಡಿಮೆ ಒತ್ತಡವನ್ನು ಹೊಂದಿದ್ದು,
ತಂಪಾದ ಗಾಳಿಯು ಅಧಿಕ ಒತ್ತಡವನ್ನು ಹೊಂದಿರುತ್ತದೆ.
1.ಮೇಲಿನ ಹೇಳಿಕೆಯು ಸರಿಯಾಗಿದೆ. √
2. ಮೇಲಿನ ಹೇಳಿಕೆಯು ತಪ್ಪಾಗಿದೆ.


35.ಭಾರತದ ಮೊದಲ ಇ-ವೇಸ್ಟ್ (ಇ-ತ್ಯಾಜ್ಯ) ಕ್ಲಿನಿಕ್ ಅನ್ನು ಸ್ಥಾಪಿಸಲಾಗಿದ್ದು ಎಲ್ಲಿ?
A) ಭೋಪಾಲ್. √
B) ಬೆಂಗಳೂರು.
C) ಹೈದ್ರಾಬಾದ್.
D) ನವ ದೆಹಲಿ.


36. 'ತಿಸ್ತಾ ನದಿ'ಯು ಭಾರತದಲ್ಲಿ ಈ ರಾಜ್ಯಗಳ ಮೂಲಕ ಹರಿಯುತ್ತದೆ.
1.ಪ.ಬಂಗಾಳ.
2) ಸಿಕ್ಕಿಂ.
3) ತ್ರಿಪುರಾ.
A) 1 ಮಾತ್ರ.
B) 1 & 2 ಮಾತ್ರ. √
C) 1 & 3 ಮಾತ್ರ.
D) ಮೇಲಿನ ಎಲ್ಲವೂ.


37. ಇತ್ತೀಚೆಗೆ ಸುದ್ದಿಯಲ್ಲಿದ್ದ 'ಮಳೀಮಠ್ ವರದಿ'ಯು ಈ ಕೆಳಕಂಡವುಗಳ ಸುಧಾರಣಾ ಶಿಫಾರಸುಗಳಿಗೆ ಸಂಬಂಧಿಸಿದುದಾಗಿದೆ.‌
A) ಕ್ರಿಮಿನಲ್‌ ನ್ಯಾಯ ವ್ಯವಸ್ಥೆ ಸುಧಾರಣೆ. √
B) ಪೊಲೀಸ್ ಇಲಾಖಾ ನಿರ್ವಹಣೆ.
C) ಚುನಾವಣಾ ಸುಧಾರಣೆಗಳು.
D) ತೆರಿಗೆ ಪದ್ಧತಿಯ ಅನುಷ್ಠಾನ.


38. ಈ ಕೆಳಗಿನ ಗ್ರಂಥಗಳು ಹಾಗೂ ಅದನ್ನು ರಚಿಸಿದವರೊಂದಿಗಿನ ಸರಿಯಾದ ಜೋಡಿಯನ್ನು ಗುರುತಿಸಿ.
1.  ಚಾಂದ್ ಬರ್ದಾಯಿ — 'ಪೃಧ್ವಿರಾಜ್ ರಾಸೋ'
2. ಮಲಿಕ್ ಮಹಮದ್ ಜೈಸಿ — 'ಪದ್ಮಾವತಿ'.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


39. ಅಲ್ಲಾವುದ್ದೀನ್ ಖಿಲ್ಜಿಯು ಈ ಕೆಳಗಿನ ಯಾವ ಐತಿಹಾಸಿಕ ವಾಸ್ತುಶಿಲ್ಪ ಕಟ್ಟಡಗಳನ್ನು ಕಟ್ಟಿಸಿಲ್ಲ.
1) ಜಾಮಿ ಮಸೀದಿ. √
2) ಹಜಾರ್ ಸಿತಮ್.
3) ಆಲೈ ದರ್ವಾಜಾ.
4) ಸಿರಿಯಕೋಟೆ.


40. ಇತ್ತೀಚೆಗೆ ನಾಸಾದಿಂದ ಉಡಾವಣೆಗೊಂಡ 'ಐಕಾನ್' ಉಪಗ್ರಹದ ಕಾರ್ಯವೇನೆಂದರೆ,
A) ವಿಶ್ವ ಕಿರಣಗಳ ಅಧ್ಯಯನ.
B) ಚಂದ್ರನ ಮೇಲಿನ ವಾತಾವರಣದ ಅಧ್ಯಯನ.
C) ಭೂಮಿ ಹಾಗೂ ಬಾಹ್ಯಾಕಾಶದ ವಾತಾವರಣ ಒಂದಾಗುವ ಪ್ರದೇಶದ ಹವಾಮಾನದ ತಪಾಸಣೆ.  √
D) ಶೂನ್ಯ ಗುರುತ್ವ ಬಲವಿರುವ ಪ್ರದೇಶದಲ್ಲಿ ಪ್ರೊಟೀನ್ ಬೆಳವಣಿಗೆ, ಜ್ವಾಲೆಯ ಗುಣಲಕ್ಷಣಗಳ ಕುರಿತು ಅಧ್ಯಯನ.


41.ಮಂಗಳ ಗ್ರಹದ ಅಧ್ಯಯನ ಮಾಡಲು ಉಪಗ್ರಹಗಳನ್ನು ಕಳುಹಿಸಿದ ಬಾಹ್ಯಾಕಾಶ ಸಂಸ್ಥೆಗಳಲ್ಲಿ
ಯಾವುದು ಸೇರಿಲ್ಲ.
A) ರಾಸ್ಕಾಸ್ಮೋಸ್.
B) ಇಸ್ರೋ.
C) ಜಾಕ್ಸಾ.
D) ಸ್ಪೇಸ್‌ಎಕ್ಸ್. √


42. ಇತ್ತೀಚೆಗೆ ಸುದ್ದಿಯಲ್ಲಿರುವ ಕೆಳಗಿನ  ಅಂತರರಾಷ್ಟ್ರೀಯ ಬುಡಕಟ್ಟು / ಸಮುದಾಯಗಳನ್ನು ಸರಿಯಾಗಿ ಹೊಂದಿಸಿ.
1) ಹಜಾರಸ್ (Hazaras) —→ ಅಫ್ಘಾನಿಸ್ತಾನ
2) ಮಾವೊರಿ (Maori) —→ ನ್ಯೂಜಿಲೆಂಡ್
3) ಉಯಿಘರ್ಸ್ (Uighurs)  —→ ಚೀನಾ
4) ರೋಹಿಂಗ್ಯಾ (Rohingyas) —→ ಮ್ಯಾನ್ಮಾರ್
5) ಅಹ್ಮದಿಯಾಸ್ (Ahmadiyas) —→ ಪಾಕಿಸ್ತಾನ
6) ಅಹಿಕುಂಟಕ (Ahikuntaka)  —→  ಶ್ರೀಲಂಕಾ
A) 1, 2, 4, 5 & 6 ಮಾತ್ರ.
B) 2, 3, 4 & 6 ಮಾತ್ರ .
C) 1, 2, 3, 4 & 5 ಮಾತ್ರ.
D) ಮೇಲಿನ ಎಲ್ಲವೂ ಸರಿ. √


43.ಇತ್ತೀಚೆಗೆ ಸುದ್ದಿಯಲ್ಲಿರುವ ಕೆಳಗಿನ ಕೆಲವು ಪ್ರಮುಖ ವಾಣಿಜ್ಯ ವಹಿವಾಟು ಬಾಂಡ್‌ಗಳ ಸರಿಯಾದ ಜೋಡಿಗಳನ್ನು ಗುರುತಿಸಿ.
1) ಮಸಾಲಾ ಬಾಂಡ್ —→ ಭಾರತ.
2) ಡಿಮ್-ಸಮ್ ಬಾಂಡ್ —→ ಚೀನಾ.
3) ಸಮುರಾಯ್ ಬಾಂಡ್ —→ ಜಪಾನ್.
4) ಯಾಂಕೀ ಬಾಂಡ್ —→ ಯುಎಸ್ಎ.
5) ಬುಲ್ ಡಾಗ್ —→ ಯುಕೆ.
A) 1, 2, 3 & 4 ಮಾತ್ರ.
B) 1, 3, 4 & 5 ಮಾತ್ರ .
C) 1, 2, 3 & 5 ಮಾತ್ರ.
D) ಮೇಲಿನ ಎಲ್ಲವೂ ಸರಿ. √


44.ಅಂತರರಾಷ್ಟ್ರೀಯ ವಿವಾದದಲ್ಲಿರುವ ಕೆಲವು ದ್ವೀಪ ಪ್ರದೇಶಗಳ ಸರಿಯಾದ ಜೋಡಿಗಳನ್ನು ಗುರುತಿಸಿ.
1) ಸೆನ್‌ಕಾಕು ದ್ವೀಪ —→ ಜಪಾನ್ vs ಚೀನಾ.
2) ಮಿಗಿಂಗೊ ದ್ವೀಪ —→ ಕೀನ್ಯಾ vs ಉಗಾಂಡಾ.
3) ಚಾಗೋಸ್ ದ್ವೀಪ —→ ಮಾರಿಷಸ್ vs ಯುಕೆ.
4) ಕುರಿಲ್ ದ್ವೀಪ —→ ದ.ಚೀನಾ ಸಮುದ್ರ vs ಫಿಲಿಪ್ಪೀನ್ಸ್‌
A) 1, 2 & 4 ಮಾತ್ರ.
B) 1, 2 & 3 ಮಾತ್ರ . √
C) 2, 3 & 4 ಮಾತ್ರ.
D) ಮೇಲಿನ ಎಲ್ಲವೂ ಸರಿ.
( ಕುರಿಲ್ ದ್ವೀಪ —‌ japan and russia)


45. ಹಿಂದೂ ಮಹಾಸಾಗರ (ವಲಯ) ಅಂಚಿನ ಸಹಕಾರ ಸಂಘಟನೆ (Indian Ocean Rim Association(IORA)) ಎಂಬ ಅಂತರರಾಷ್ಟ್ರೀಯ ಸಂಘಟನೆಯ ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ.
1) ಮ್ಯಾನ್ಮಾರ್ ಮತ್ತು ಪಾಕಿಸ್ತಾನ ದೇಶಗಳು ಇದರ ಸದಸ್ಯ ರಾಷ್ಟ್ರಗಳಲ್ಲ.
2) ಭಾರತ ಇದರ ಸದಸ್ಯರಾಷ್ಟ್ರವಾಗಿದೆ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


46.ವಿಧಾನಪರಿಷತ್‌ನ ಅಧಿಕಾರ ವ್ಯಾಪ್ತಿ ಕುರಿತಾದ ಕೆಳಕಂಡ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ.
1) ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಪರಿಷತ್‌ನಲ್ಲಿ ಮಂಡಿಸಲು ಅವಕಾಶ ಇಲ್ಲ.
2) ಹಣಕಾಸೇತರ ಮಸೂದೆಗಳಿಗೆ ತಿದ್ದುಪಡಿ ಮಾಡುವ, ಪರಿಶೀಲನೆಗೆ ಒಳಪಡಿಸುವ ಅಧಿಕಾರವನ್ನು ರಾಜ್ಯಸಭೆಯು ಹೊಂದಿದೆ. ಆದರೆ ಪರಿಷತ್‌ಗೆ ಇಂತಹ ಸಾಂವಿಧಾನಿಕ ಅಧಿಕಾರ ಇಲ್ಲ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


47.ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕುವ ಹಕ್ಕು ರಾಜ್ಯಸಭೆಯ ಸದಸ್ಯರಿಗೆ ಇದೆ. ಆದರೆ, ಪರಿಷತ್‌ ಸದಸ್ಯರಿಗೆ ಈ ಹಕ್ಕು ಇಲ್ಲ.
1.ಮೇಲಿನ ಹೇಳಿಕೆಯು ಸರಿಯಾಗಿದೆ. √
2. ಮೇಲಿನ ಹೇಳಿಕೆಯು ತಪ್ಪಾಗಿದೆ.


48. ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
1.ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕ —— a) ವಿಶ್ವ ಆರ್ಥಿಕ ವೇದಿಕೆ (WEF)
2.ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ —— b)  ರಿಪೋರ್ಟ್ಸ್ ವಿಥೌಟ್‌ ಬಾರ್ಡರ್ಸ್‌.
3.ಜಾಗತಿಕ ಹಸಿವು ಸೂಚ್ಯಂಕ —— c) ಕನ್ಸರ್ನ್‌ ವರ್ಲ್ಡ್‌ವೈಡ್
4.ಜಾಗತಿಕ ಸೇನಾ ವೆಚ್ಚ ವರದಿ —— d) ಸಿಪ್ರಿ
5.ಮಾನವ ಅಭಿವೃದ್ಧಿ ಸೂಚ್ಯಂಕ —— e) ಯುಎನ್‌ಡಿಪಿ.
6.'ಜಾಗತಿಕ ಮಾನವ ಬಂಡವಾಳ ಸೂಚ್ಯಂಕ’ —— f) ವಿಶ್ವ ಬ್ಯಾಂಕ್
A) 1— e, 2— b, 3—a, 4—d, 5—f, 6—e.
B) 1— e, 2— d, 3—b, 4—c, 5—e, 6—f.
C) 1— a, 2— b, 3—d, 4—c, 5—f, 6—e.
D) 1— a, 2— b, 3—c, 4—d, 5—e, 6—f. √



49. ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ.
1) 1881ರ ಕಾರ್ಖಾನೆಗಳ ಕಾಯಿದೆಯು ಕಾರ್ಖಾನೆ ಕಾರ್ಮಿಕರ ಸಂಬಳದ ಸಮಸ್ಯೆಯನ್ನು ಪರಿಹರಿಸಿತಲ್ಲದೆ ಅವರು ತಮ್ಮದೇ ಆದ ಕಾರ್ಮಿಕ ಸಂಘ-ಸಂಘಟನೆಗಳನ್ನು ಸಂಘಟಿಸಿಕೊಳ್ಳಲು ಅವಕಾಶ ನೀಡಿತು.
2) N.M ಲೋಖಂಡೆ ಎಂಬಾತನು ಭಾರತದಲ್ಲಿ ಕಾರ್ಮಿಕರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ  ಕಾರ್ಮಿಕರ ಚಳುವಳಿಯ ಮುಂದಾಳತ್ವ ವಹಿಸಿದನು.
(CSE - 2017)
A) 1 ಮಾತ್ರ ಸರಿ.
B) 2 ಮಾತ್ರ ಸರಿ.√
C) ಎರಡೂ ಸರಿ.
D) ಎರಡೂ ತಪ್ಪು.


50.'ಮಾಮಲ್ಲಪುರಂ' ನಲ್ಲಿರುವ 'ಶೋರ್ ಟೆಂಪಲ್' ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ.
1) ಇದು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆಯನ್ನು ಪಡೆದಿದೆ.
2) ಹಿಂದೆ ಇದನ್ನು 'ಸೆವೆನ್ ಪಗೋಡಾ' ಎಂದು  ಕರೆಯುತ್ತಿದ್ದರು.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


51.ಮೊದಲ ಶತಮಾನದ 'ಪೋಂಪುಹಾರ್ ಬಂದರು'  ಈ ರಾಜರ ಕಾಲದ ಸಾಗರ ಮೂಲ ಸೌಕರ್ಯ ಅಭಿವೃದ್ದಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪ್ರಸಿದ್ಧಿಯಾಗಿತ್ತು.
1) ಚೋಳರು. √
2) ಪಲ್ಲವರು.
3) ಗುಪ್ತರು.
4) ಶಾತವಾಹನರು.


52.ಇಂಟರ್‌ನ್ಯಾಷನಲ್ ಮೊನಿಟರಿ ಫಂಡ್ (IMF) ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣ ಮತ್ತು ಚಿನ್ನದ ರೂಪದಲ್ಲಿ ಇರುವ ಹೂಡಿಕೆಯನ್ನು ಕೂಡ ವಿದೇಶಿ ವಿನಿಮಯ ಮೀಸಲು ಎಂದು ಪರಿಗಣಿಸಲಾಗುತ್ತದೆ.
1.ಮೇಲಿನ ಹೇಳಿಕೆಯು ಸರಿಯಾಗಿದೆ. √
2.ಮೇಲಿನ ಹೇಳಿಕೆಯು ತಪ್ಪಾಗಿದೆ.


53.ಪ್ರಾದೇಶಿಕ ಜಾನಪದ ನೃತ್ಯಗಳ ಸರಿಯಾದ ಜೋಡಿಗಳನ್ನು ಗುರುತಿಸಿ.
1) ಅರುಣಾಚಲ ಪ್ರದೇಶ —→ ಬ್ರೊ-ಜಾಯಿ.
2) ಮೇಘಾಲಯ —→ ಶಾದ್‌.
3) ಅಸ್ಸಾಂ —→ ಧಮಾಯಿ,.
4) ಮಣಿಪುರ —→ ಲೈಹಾರೊಬ.
5) ತ್ರಿಪುರ —→ ಹೊಜಾಗಿರಿ.
6) ಮಿಜೊರಾಂ —→ ಸರ್ಲಾಮ್ ಕೈ.
A) 1, 2, 4, 5 & 6 ಮಾತ್ರ.
B) 2, 3, 4 & 6 ಮಾತ್ರ .
C) 1, 3, 5 ಮಾತ್ರ.
D) ಮೇಲಿನ ಎಲ್ಲವೂ ಸರಿ. √


54.'CO18 ಸಮಾವೇಶ' ಇದಕ್ಕೆ ಸಂಬಂಧಿಸಿದೆ
A) WTO.
B) ILO. √
C) UNESCO.
D) UN-habitat.


55.ಇತ್ತೀಚೆಗೆ ಸುದ್ದಿಯಲ್ಲಿದ್ದ ಕಳೆದ 12 ವರ್ಷಗಳಲ್ಲೇ ಅತ್ಯಂತ ಪ್ರಬಲ ಚಂಡಮಾರುತ ಎಂಬ ಕುಖ್ಯಾತಿಗೆ ಪಾತ್ರವಾದ 'ಕ್ಯಾರ್‌ ಚಂಡಮಾರುತ' (ಕ್ಯಾರ್‌ ಸೈಕ್ಲೋನ್‌) ರೂಪಗೊಂಡಿದ್ದು?
A) ಅರಬ್ಬಿ ಸಮಯದಲ್ಲಿ. √
B) ಬಂಗಾಳ ಕೊಲ್ಲಿಯಲ್ಲಿ.
C) ಶಾಂತ (ಪೆಸಿಫಿಕ್‌) ಸಾಗರದಲ್ಲಿ.
D) ದ.ಚೀನಾ ಸಮುದ್ರದಲ್ಲಿ.


56. ಚಂಡಮಾರುತಗಳ ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ.
1) ಭೂಮಿಯ ಉತ್ತರ ಗೋಳದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ & ದಕ್ಷಿಣ ಗೋಳದಲ್ಲಿ ಗಡಿಯಾರದ ದಿಕ್ಕಿನಲ್ಲಿ ಚಂಡಮಾರುತ ಸುತ್ತುತ್ತದೆ.
2) ಸಾಮಾನ್ಯವಾಗಿ ಕಡಿಮೆ ವಾಯುಭಾರ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ದೊಡ್ಡ ಪ್ರಮಾಣದ ಚಂಡ ಮಾರುತಗಳೇಳುತ್ತವೆ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


57. ಇತ್ತೀಚೆಗೆ ಸುದ್ದಿಯಲ್ಲಿದ್ದ 'ಎ-ವೆಬ್‌' ಎಂಬುವುದು ಇದಕ್ಕೆ ಸಂಬಂಧಿಸಿದೆ.
A) ದೇಶದ ಅಕಾಡೆಮಿಕ್‌ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಅತ್ಯಾಧುನಿಕ ಸೂಪರ್‌ ಕಂಪ್ಯೂಟರ್‌ಗಳ ಸೌಲಭ್ಯ ಜಾಲ.
B) ಅಂತರರಾಷ್ಟ್ರೀಯ ವಾಣಿಜ್ಯ ಭೂ ಮಾರ್ಗಗಳೆಲ್ಲವನ್ನು ಕೂಡಿಸುವ ಸಂಘಟನೆ.
C) ವಿಶ್ವ ಚುನಾವಣಾ ಸಂಸ್ಥೆಗಳ ಸಂಘಟನೆ.  √
D) 5ಜಿ ತಂತ್ರಜ್ಞಾನದಡಿ ದೇಶದಲ್ಲೆಲ್ಲೆಡೆ ಅತಿ ವೇಗದ ಮೊಬೈಲ್ ಮತ್ತು ವೈರ್ ಲೆಸ್ ಇಂಟರ್‌ನೆಟ್ ಸೇವೆ ಒದಗಿಸುವ ರಾಷ್ಟ್ರೀಯ ಯೋಜಿತ ಕಾರ್ಯಬಂಧ.


58.ಚಂಡಮಾರುತಗಳ ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ.
1) ಅಟ್ಲಾಂಟಿಕ್‌ ಮಹಾಸಾಗರದಲ್ಲಿ ಸೃಷ್ಟಿಯಾಗುವ ಚಂಡಮಾರುತವನ್ನು ಹುರಿಕೇನ್‌ ಎಂದು ಕರೆಯುತ್ತಾರೆ.
2) ಪೆಸಿಫಿಕ್‌ ಮಹಾಸಾಗರದಲ್ಲಿ ಸೃಷ್ಟಿಯಾಗುವ ಚಂಡಮಾರುತವನ್ನು ಟೈಫೂನ್‌ ಎಂದು ಹೇಳುತ್ತಾರೆ.
3) ಹಿಂದೂ ಮಹಾಸಾಗರದ ಚಂಡಮಾರುತವನ್ನು ಸೈಕ್ಲೋನ್‌ ಎಂದು ಕರೆಯುತ್ತಾರೆ.
A) 1 & 3 ಮಾತ್ರ.
B) 2 & 3 ಮಾತ್ರ.
C) 3 ಮಾತ್ರ.
D) ಮೇಲಿನ ಎಲ್ಲವೂ ಸರಿ. √


59.ಮೈಕ್ರೋ ಎಕಾನಮಿ (Micro Economy) ಯು ಇವುಗಳನ್ನು ಅಧ್ಯಯನ ಮಾಡುತ್ತದೆ.
1) ಗ್ರಾಹಕರ ನಡವಳಿಕೆ.
2) ವಸ್ತುವಿನ ಬೆಲೆ ನಿಗದಿ.
3) ಲಾಭ, ನಷ್ಟ.
A) 1  ಮಾತ್ರ.
B) 1 & 3 ಮಾತ್ರ.
C) 1 & 3 ಮಾತ್ರ.
D) ಮೇಲಿನ ಎಲ್ಲವೂ ಸರಿ. √


60.ಮ್ಯಾಕ್ರೋ ಎಕಾನಮಿ (Macro Economy) ಯು ಇವುಗಳನ್ನು ಅಧ್ಯಯನ ಮಾಡುತ್ತದೆ.
1) ಜಿಡಿಪಿ.
2) ಇಂಟರೆಸ್ಟ್ ರೇಟ್.
3) ಬಿಸಿನೆಸ್ ಸೈಕಲ್.
A) 1  ಮಾತ್ರ.
B) 1 & 3 ಮಾತ್ರ.
C) 1 & 3 ಮಾತ್ರ.
D) ಮೇಲಿನ ಎಲ್ಲವೂ ಸರಿ. √


61.ಒಂದು ಪಕ್ಷವು ರಾಷ್ಟ್ರೀಯ ಪಕ್ಷ ಎಂದು ಮಾನ್ಯತೆ ಗಳಿಸಬೇಕಿದ್ದರೆ ಅದು,
1) ಕನಿಷ್ಠ 4 ರಾಜ್ಯಗಳಲ್ಲಿ ರಾಜ್ಯ ಮಟ್ಟದ ಪಕ್ಷ ಎಂಬ ಮಾನ್ಯತೆ ಹೊಂದಿರಬೇಕು.
2) ಲೋಕಸಭೆ ಚುನಾವಣೆಯಲ್ಲಿ ಶೇ.2ರಷ್ಟು ಸೀಟುಗಳನ್ನು ಕನಿಷ್ಠ 3 ರಾಜ್ಯಗಳಲ್ಲಿ ಗೆಲ್ಲಬೇಕು. .
3) ಲೋಕಸಭೆ ಅಥವಾ ಅಸೆಂಬ್ಲಿ ಚುನಾವಣೆಯಲ್ಲಿ ಆ ರಾಜ್ಯಗಳಲ್ಲಿ ಒಟ್ಟು ಮತಗಳ ಪೈಕಿ ಕನಿಷ್ಠ ಶೇ.3ರಷ್ಟು ಗಳಿಸಿರಬೇಕು.
— ಸರಿಯಾದ ಹೇಳಿಕೆಯನ್ನು ಗುರುತಿಸಿ.
A) 1 & 2 ಮಾತ್ರ. √
B) 2 ಮಾತ್ರ.
C) 1 & 3 ಮಾತ್ರ.
D) ಮೇಲಿನ ಎಲ್ಲವೂ ಸರಿ.
(-ಲೋಕಸಭೆ ಅಥವಾ ಅಸೆಂಬ್ಲಿ ಚುನಾವಣೆಯಲ್ಲಿ ಆ ರಾಜ್ಯಗಳಲ್ಲಿ ಒಟ್ಟು ಮತಗಳ ಪೈಕಿ ಕನಿಷ್ಠ ಶೇ.6ರಷ್ಟು ಗಳಿಸಿರಬೇಕು.)


62.ಉತ್ತರ ಹಿಂದೂ ಮಹಾಸಾಗರ ಪ್ರವಾಹಗಳು ಹೆಚ್ಚಾಗಿ ಮಾನ್ಸೂನ್ ಮಾರುತಗಳ ಪ್ರಭಾವಕ್ಕೆ ಒಳಪಟ್ಟಿವೆ ಆದರೆ ದಕ್ಷಿಣ ಹಿಂದೂ ಮಹಾಸಾಗರ ಪ್ರವಾಹಗಳಲ್ಲ.
1.ಮೇಲಿನ ಹೇಳಿಕೆಯು ಸರಿಯಾಗಿದೆ. √
2. ಮೇಲಿನ ಹೇಳಿಕೆಯು ತಪ್ಪಾಗಿದೆ.


63.ವಾಯು ಮಂಡಲದ ಒತ್ತಡದ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳಲ್ಲಿ ಈ ಕೆಳಗಿನವು ಸಂಬಂಧ ಪಡುವುದಿಲ್ಲ.
1) ಎತ್ತರ.
2) ಅಕ್ಷಾಂಶ.
3) ನೀರಾವಿ.
4) ಸಮುದ್ರದಿಂದ ಇರುವ ಅಂತರ.
A) 1 & 4 ಮಾತ್ರ.
B) 3 ಮಾತ್ರ.
C) 3 & 4 ಮಾತ್ರ.
D) 4 ಮಾತ್ರ. √


64.ಇತ್ತೀಚೆಗೆ ಸುದ್ದಿಯಲ್ಲಿದ್ದ 'ಪ್ಯಾಂಗಾಂಗ್ ಸೋ ‌ ಸರೋವರ'ದ ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ.
A) ಇದು ಒಂದು ಉಪ್ಪು ನೀರಿನ ಸರೋವರ.
B) ಈ ಸರೋವರವು ಲಡಾಖ್‌ನಲ್ಲಿದೆ.
C) ಇದರ ⅓ನಷ್ಟು ನೀರು ಮಾತ್ರ ಭಾರತದ ನಿಯಂತ್ರಣದಲ್ಲಿದ್ದು ಉಳಿದೆಲ್ಲ ಚೀನಾದ ನಿಯಂತ್ರಣದಲ್ಲಿರುವುದು.
D) ಮೇಲಿನೆಲ್ಲವೂ ಸರಿ. √


65.ಜಗತ್ತಿನ ಅತ್ಯಂತ ಎತ್ತರದ ಮೋಟಾರು ರಸ್ತೆ (ಮೋಟೋರೇಬಲ್‌ ಪಾಸ್ (ವಾಹನ ಸಂಚಾರಿ ಮಾರ್ಗ)) ಎಂಬ ಖ್ಯಾತಿ ಹೊಂದಿರುವ ರಸ್ತೆ ಯಾವುದು?
— ಖರ್ದುಗ್‌ ಲಾ (ಕರ್ದುಂಗ್ ಲಾ) ಪಾಸ್.
(18,380 ಅಡಿ ಎತ್ತರದಲ್ಲಿದೆ.
ಇದು ಲಧಾಖ್ ಪ್ರಾಂತ್ಯದಲ್ಲಿದೆ.)


66.ದೇಶದಲ್ಲಿ ರಣಹದ್ದುಗಳ ಸಂತತಿ ಕ್ಷೀಣಿಸುತ್ತಿದ್ದು, ಕೆಳಕಂಡವುಗಳಲ್ಲಿ ಯಾವವು ಅಳಿವಿನಂಚಿನಲ್ಲಿವೆ? ‌
1) ಬಿಳಿಬೆನ್ನಿನ ರಣಹದ್ದು (Gyps vultures White-backed).
2) ನೀಳ ಕೊಕ್ಕಿನ ರಣಹದ್ದು (Long-billed vulture).
3) ಸಣ್ಣ ಕೊಕ್ಕಿನ ರಣಹದ್ದು (Slender-billed vulture) .
A) 1 ಮಾತ್ರ.
B) 1 & 2 ಮಾತ್ರ
C) 2 & 3 ಮಾತ್ರ.
D) ಮೇಲಿನ ಎಲ್ಲವೂ. √


67.ಪೆನ್ನಾರ್‌ ನದಿ (ಪಿನಾಕಿನಿ, ದಕ್ಷಿಣ ಪೆನ್ನಾರ್‌) ನೀರು ಹಂಚಿಕೆ ವಿವಾದವು ಈ ರಾಜ್ಯಗಳ ನಡುವೆ ಇರುವುದು.
A) ಕೇರಳ ಮತ್ತು ತಮಿಳುನಾಡು.
B) ಕರ್ನಾಟಕ ಮತ್ತು ತಮಿಳುನಾಡು. √
C) ಕೇರಳ ಮತ್ತು ಕರ್ನಾಟಕ.
D) ಆಂದ್ರ ಪ್ರದೇಶ ಮತ್ತು ತಮಿಳುನಾಡು.


68. ವೇಳೆಯ ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ನಾವು ಗ್ರೀನ್‌ವಿಚ್ನಿಂದ ಪಶ್ಚಿಮದಿಂದ ಪೂರ್ವದ ಕಡೆಗೆ ಚಲಿಸುವಾಗ ವೇಳೆಯು ಹೆಚ್ಚಾಗುತ್ತದೆ.  2.ಪೂರ್ವದಿಂದ ಪಶ್ಚಿಮದ ಕಡೆಗೆ ಚಲಿಸುವಾಗ ವೇಳೆಯು ಕಡಿಮೆಯಾಗುತ್ತಾ ಹೋಗುತ್ತದೆ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.‍‍


69.ಇತ್ತೀಚೆಗೆ ಒಂದೇ ವರ್ಷದಲ್ಲಿ ಮೂರು ಬಾರಿ ಚುನಾವಣೆ ಎದುರಿಸಿ ಸುದ್ದಿಯಲ್ಲಿದ್ದ 'ಲಿಕುಡ್ ಪಕ್ಷ' ಮತ್ತು 'ಬ್ಲೂ ಅಂಡ್ ವೈಟ್ ಪಕ್ಷ'ಗಳು ಈ ದೇಶಕ್ಕೆ ಸಂಬಂಧಿಸಿದವು.
A) ಇಸ್ರೇಲ್. √
B) ಇಂಡೋನೇಷ್ಯಾ.
C) ಥೈಲ್ಯಾಂಡ್‌.
D) ಫೆಲೆಸ್ತೀನ್.


70.ಯುನಿಸೆಫ್ 2017ರ ವರದಿಯ ಪ್ರಕಾರ ಜಾಗತಿಕವಾಗಿ ಅತೀ ಹೆಚ್ಚು ಶಿಶುಗಳ ಮರಣ ದಾಖಲಾಗಿರುವ ದೇಶ ?
A) ಭಾರತ. √
B) ಬಾಂಗ್ಲಾದೇಶ.
C) ಉಗಾಂಡಾ.
D) ನೈಜೀರಿಯಾ.


71.ವಿಶ್ವ ಸಂಸ್ಥೆಯು ಬಿಡುಗಡೆ ಮಾಡುವ ಮಾನವ ಅಭಿವೃದ್ಧಿ ಸೂಚ್ಯಂಕ-2019 (HDI) ರ ಕುರಿತಾದ ಕೆಳಗಿನ ಸರಿಯಾದ ಹೇಳಿಕೆಯನ್ನು ಗುರುತಿಸಿ.
1) ದಕ್ಷಿಣ ಏಷ್ಯಾವು ಜೀವಿತಾವಧಿಯಲ್ಲಿ ಏರಿಕೆಯನ್ನು ಕಂಡಿದೆ.
2) ದಕ್ಷಿಣ ಏಷ್ಯಾದಲ್ಲಿ ಲಿಂಗಾನುಪಾತಗಳ ಅಂತರ ಹೆಚ್ಚಾಗಿದೆ.
3) ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP)ವು ಈ ವರದಿಯನ್ನು ಬಿಡುಗಡೆ ಮಾಡುತ್ತದೆ.
A) 1 ಮಾತ್ರ.
B) 1 & 3 ಮಾತ್ರ
C) 2 & 3 ಮಾತ್ರ.
D) ಮೇಲಿನ ಎಲ್ಲವೂ. √


72.ಅಪತಾನಿ ಬುಡಕಟ್ಟು ಜನಾಂಗ ಯಾವ ರಾಜ್ಯದ ನಿವಾಸಿಗಳು?
A) ಹಿಮಾಚಲ ಪ್ರದೇಶ. √
B) ಮೇಘಾಲಯ.
C) ಆಂದ್ರ ಪ್ರದೇಶ.
D) ಕೇರಳ.


73. ಕಲ್ವರಿ, ಖಾಂದೇರಿ, ವೇಲಾ ಹಾಗೂ ಕಾರಂಜ್ ಎಂಬುವು ಇದಕ್ಕೆ ಸಂಬಂಧಿಸಿದ್ದಾಗಿವೆ.
A) ಕ್ವಾಂಟಂ ದೂರಸಂಪರ್ಕ ತಂತ್ರಜ್ಞಾನ ಹೊಂದಿರುವ ದೇಶದ ಸುಪರ್ ಕಂಪ್ಯೂಟರ್‌ಗಳು.
B) ಪ್ರಾಜೆಕ್ಟ್‌ 17 ಅಲ್ಫಾ(ಪಿ17 ಎ) ಸರಣಿಯ ಯುದ್ಧ ನೌಕೆಗಳು.
C) ಕುಲಾಂತರಿ ಹೊಂದಿದ ಉತ್ಕೃಷ್ಟ ದರ್ಜೆಯ ಹಸುವಿನ ತಳಿಗಳು.
D) ಸ್ಕಾರ್ಪಿನ್‌ ಸರಣಿಯ ಜಲಾಂತರ್ಗಾಮಿಗಳು. √



74.ಇತ್ತೀಚೆಗೆ ಯಾವ ರಾಷ್ಟ್ರೀಯ ಉದ್ಯಾನವನದ 'ಪರಿಸರ ಸೂಕ್ಷ್ಮ ವಲಯ(ESZ)'ದ ಹಾಲಿ ಇರುವ  ವಿಸ್ತೀರ್ಣವನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ?
A) ಬಂಡೀಪುರ ರಾಷ್ಟ್ರೀಯ ಉದ್ಯಾನವನ.
B) ಮೌಂಟ್ ಆಬು ವನ್ಯಜೀವಿ ಧಾಮ
C) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ. √
D) ಪನ್ನಾ ರಾಷ್ಟ್ರೀಯ ಉದ್ಯಾನ.


75.ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ ‘ಪ್ರಧಾನಮಂತ್ರಿ ವಯ ವಂದನಾ ಯೋಜನೆ’ಯ  (Pradhan Mantri Vaya Vandana Yojana scheme– PMVVY) ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ. ‌
1) ಈ ಯೋಜನೆಗೆ ಜಿಎಸ್‌ಟಿ ವಿನಾಯ್ತಿ ನೀಡಲಾಗಿದೆ.
2) ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


76. ಈ ಕೆಳಗಿನವುಗಳಲ್ಲಿ ಯಾವುವು ಸರಿಯಾಗಿ ಹೊಂದಿಕೆಯಾಗಿರುತ್ತದೆ?
1) ಕರ್ನಾಟಕ — ರಂಗೋಲಿ,
2) ಚತ್ತೀಸ್‍ಗಡ — ಛೋಕ್‍ಪೂರ್ಣ,
3) ರಾಜಸ್ಥಾನ — ಮಂದನಾ,
4) ಬಿಹಾರ — ಅರಿಪನ್,
5) ಪಶ್ಚಿಮ ಬಂಗಾಳ — ಅಲ್ಪೋನಾ,
6) ತಮಿಳುನಾಡು — ಕೋಲಮ್,
7) ಆಂಧ್ರ ಪ್ರದೇಶ — ಮುಗ್ಗು,
8) ಕೇರಳ — ಗೋಲಮ್,
9) ಗುಜರಾತ — ಸತಿಯಾ
— ಎಲ್ಲವೂ  √


77.'ಭಾರತ್ ಬಾಂಡ್ ಇಟಿಎಫ್' (ಷೇರು ವಿನಿಮಯ- ವಹಿವಾಟು ನಿಧಿ) ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ. ‌
1) ಅನಿವಾಸಿ ಭಾರತೀಯರು (NRI) ಇದರಲ್ಲಿ ಹೂಡಿಕೆ ಮಾಡಬಹುದು.
2) ಸರ್ಕಾರಿ ವಲಯದ ಉದ್ಯಮಗಳು (CPSE) ನೀಡುವ ಬಾಂಡ್‌ಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತದೆ.
3) ಇಟಿಎಫ್‌ನಲ್ಲಿನ ಹೂಡಿಕೆಯು ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುತ್ತದೆ.
A) 1 & 3 ಮಾತ್ರ.
B) 2 ಮಾತ್ರ
C) 2 & 3 ಮಾತ್ರ.
D) ಮೇಲಿನ ಎಲ್ಲವೂ. √


78.'ಅವಿಶ್ವಾಸ ನಿರ್ಣಯ' ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ. ‌
1) ಲೋಕಸಭೆಯಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಬಹುದು.
2) ಸದನದ ಯಾವುದೇ ಸದಸ್ಯ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಬಹುದು.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


79.ನೀರಾವಿಯ ಪ್ರಮಾಣ ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ಎತ್ತರಕ್ಕೆ ಹೋದಂತೆ ಹಾಗೂ ಸಮಭಾಜಕ ವೃತ್ತದಿಂದ ದೃವಗಳ ಕಡೆಗೆ ಹೋದಂತೆ __________
A) ಹೆಚ್ಚಾಗುತ್ತದೆ.
B) ಕಡಿಮೆಯಾಗುತ್ತದೆ. √
C) ಸ್ಥಿರವಾಗಿರುತ್ತದೆ.
D) ಹೇಳಿಕ್ಕಾಗದು.

80.ಮಳೆಗಾಲವು ಕೇರಳದಲ್ಲಿ ಆಗಮಿಸಿದಾಗ, ಭಾರತೀಯ ಪರ್ಯಾಯ ದ್ವೀಪದ ಮೇಲಿನ ಉಷ್ಣಾಂಶವು, ಹಿಂದೂ ಮಹಾಸಾಗರದ ಮೇಲಿನ ಉಷ್ಣಾಂಶಕ್ಕಿಂತ ಹೆಚ್ಚಿನದ್ದಾಗಿರುತ್ತದೆ. ಇತರ ಸಮಯಗಳಲ್ಲಿ, ಭಾರತೀಯ ಪರ್ಯಾಯ ದ್ವೀಪದ ಮೇಲೆ ಉಷ್ಣತೆಯು ಸಮುದ್ರದ ಮೇಲಿನ ಉಷ್ಣಾಂಶಕ್ಕಿಂತ ಕಡಿಮೆಯಿರುತ್ತದೆ.
1.ಮೇಲಿನ ಹೇಳಿಕೆಯು ಸರಿಯಾಗಿದೆ. √
2.ಮೇಲಿನ ಹೇಳಿಕೆಯು ತಪ್ಪಾಗಿದೆ.


81.ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಮೇಲೆ ತಾಪಮಾನವು ಹೆಚ್ಚಿದಾಗ, ಭಾರತದಲ್ಲಿ ಮುಂಗಾರು ವಿಳಂಬವಾಗುತ್ತದೆ.
1.ಮೇಲಿನ ಹೇಳಿಕೆಯು ಸರಿಯಾಗಿದೆ. √
2.ಮೇಲಿನ ಹೇಳಿಕೆಯು ತಪ್ಪಾಗಿದೆ.


82.ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.‌
1) ಕನ್ನಡದ ಮೊದಲ ಜೋತಿಷ್ಯಶಾಸ್ತ್ರ ಗ್ರಂಥದ ಕರ್ತೃ ಶ್ರೀಧರಾಚಾರ್ಯ.
2) ಸಂಸ್ಕೃತದ ಪ್ರಥಮ ವಿಶ್ವಕೋಶದ ಕರ್ತೃ 3ನೇ ಸೋಮೇಶ್ವರ.
3) ಕನ್ನಡದ ಮೊದಲ ಶಬ್ದಕೋಶದ ಕರ್ತೃ 2ನೇ ನಾಗವರ್ಮ.
— ಇವರು ಈ ರಾಜರ ರಾಜಾಶ್ರಯ ಪಡೆದವರಾಗಿದ್ದರು.
A) ಕಲ್ಯಾಣದ ಚಾಲುಕ್ಯರು. √
B) ಕದಂಬರು.
C) ರಾಷ್ಟ್ರಕೂಟರು.
D) ಬಾದಾಮಿ ಚಾಲುಕ್ಯರು.


83.ರಾಷ್ಟ್ರೀಯತೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ 'ಪ್ರಭುದ್ಧ ಭಾರತ' ಮತ್ತು ‘ಉದ್ಭೋದನಾ’ ಎಂಬ ಸುದ್ದಿ ಪತ್ರಿಕೆಗಳನ್ನು ಪ್ರಕಟಿಸಿದವರು,
A) ವಿ.ಡಿ.ಸಾವರ್ಕರ್.
B) ಸ್ವಾಮಿ ವಿವೇಕಾನಂದ. √
C) ರಾಜಾ ರಾಮ್ ಮೋಹನ್‌ರಾಯ.
D) ಅರವಿಂದ್ ಘೋಷ್.


84. ಮಾರ್ಕ್ ಕಬ್ಬನ್‍ನ ಸಮಯದಲ್ಲಿ‍ ರಾಜ್ಯದಲ್ಲಿನ ಆಡಳಿತಾತ್ಮಕ ಸುಧಾರಣೆಗಳನ್ನು ಪರಿಗಣಿಸಿ.‌
1) ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದನು.
2) ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಲಾಯಿತು.
3) ಮೈಸೂರು ರಾಜ್ಯದ ಪ್ರಥಮ ರೈಲು ಮಾರ್ಗವನ್ನು ಹಾಕಲಾಯಿತು.
— ಮೇಲಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ.
A) 1 ಮಾತ್ರ.
B) 1 & 2 ಮಾತ್ರ
C) 2 & 3 ಮಾತ್ರ.
D) ಮೇಲಿನ ಎಲ್ಲವೂ. √


85. ಇತ್ತೀಚೆಗೆ 'ಭೂಮಿಯ ಮೇಲಿನ ಅತ್ಯಂತ ದೊಡ್ಡ ಗುಹೆ ಮೀನಿನ ಜಾತಿಯ ಮೀನೊಂದು ಕಂಡುಬಂದ ಸ್ಥಳ?
(ಇತ್ತೀಚೆಗೆ ಪ್ರಧಾನಿಯವರಿಂದ ಮನ್ ಕಿ ಬಾತ್ ನಲ್ಲಿ ವಿವರಿಸಿದಂತೆ)
A) ಆಸ್ಸಾಂ.
B) ಮೇಘಾಲಯ. √
C) ಪ.ಬಂಗಾಳ.
D) ಹಿಮಾಚಲ ಪ್ರದೇಶ.
*(ಮೇಘಾಲಯದ ಜೈನಿತಾ ಬೆಟ್ಟಗಳ ನಡುವೆ)


86.ಅಕ್ಷಾಂಶಗಳ ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ಕೆಳ ಅಕ್ಷಾಂಶದಲ್ಲಿ ಅಧಿಕ ಉಷ್ಣಾಂಶ ದಾಖಲಾಗಿರುವುದರಿಂದ ಒತ್ತಡ ಕಡಿಮೆಯಾಗುತ್ತದೆ.   2.ಮೇಲಿನ ಅಕ್ಷಾಂಶಗಳಲ್ಲಿ ಕಡಿಮೆ ಉಷ್ಣಾಂಶವಿರುವುದರಿಂದ ಒತ್ತಡವು ಹೆಚ್ಚಾಗಿರುತ್ತದೆ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


87. ಇತ್ತೀಚೆಗೆ ಐದು ದಶಕಗಳ ದೀರ್ಘಕಾಲ ಆಳ್ವಿಕೆ ನಡೆಸಿ ವಿಧಿವಶನಾದ ದೊರೆ ಖಾಬೂಸ್ ಬಿನ್ ಸಯೀದ್ ಈ ದೇಶದ ರಾಜನಾಗಿದ್ದನು.
A) ಯಮೆನ್.
B) ಲೈಬಿರಿಯಾ.
C) ಓಮನ್. √
D) ನೈಜರ್.


88.'ಆಫ್ರಿಕಾದ ಮೃತ ಹೃದಯ'ವೆಂದು ಕರೆಯಲಾಗುವ ಗಣರಾಜ್ಯ?
A) ಕೆಮರೂನ್.
B) ಲೈಬಿಯಾ.
C) ಸುಡಾನ್.
D) ಚಾಡ್. √


89.  ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(i).ಚಂಡಮಾರುತ ನೀರಿನ ಮೇಲೆ (ಸಮುದ್ರದ ಮೇಲೆ) ರೂಪುಗೊಂಡರೆ, ಟಾರ್ನೆಡೊ (Tornado) ಭೂಮಿ ಮೇಲೆ ರೂಪುಗೊಳ್ಳುತ್ತವೆ.
(ii).ಟಾರ್ನೆಡೊದ ಗಾತ್ರ ಮತ್ತು ತೀವ್ರತೆಯು ಸಾಗರದಲ್ಲಿನ ಚಂಡಮಾರುತಗಳಿಗೆ ಹೋಲಿಸಿದರೆ ತುಂಬ ಕಡಿಮೆ ಇರುತ್ತದೆ.
(ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ)ಮೇಲಿನೆಲ್ಲವೂ.
(ಡಿ) ಯಾವುದು ಅಲ್ಲ.√


90.2019 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ ಏಬಿಯ್ ಅಹ್ಮದ್ ಎಂಬುವರು ಆಫ್ರಿಕಾ ಖಂಡದ ಈ ದೇಶದ ಪ್ರಧಾನಿಯಾಗಿದ್ದಾರೆ.
A) ಎರಿಟ್ರಿಯಾ.
B) ಇಥಿಯೋಪಿಯಾ. √
C) ಮೊಜಾಂಬಿಕ್.
D) ಟ್ಯುನಿಸಿಯಾ.


91.ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ.
(i) ವಿಂದ್ಯಾಪರ್ವತವು ಉತ್ತರ ಭಾರತವನ್ನು ದಕ್ಷಿಣ ಭಾರತದಿಂದ ಪ್ರತ್ಯೇಕಿಸುವ ಶ್ರೇಣಿಯಾಗಿದೆ.
(ii) ಮೂರು ಸಮುದ್ರಗಳು ಸಂಗಮವಾಗುವ ರಾಜ್ಯವೆಂದರೆ, ತಮಿಳುನಾಡು.
(iii) ಸೈಬಿರಿಯಾದಿಂದ ಭಾರತದ ಕಡೆಗೆ ಬೀಸುವ ಮಾರುತವೆಂದರೆ ಶೀತಮಾರುತ.
—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) (i) ಮತ್ತು (ii) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (ii) ಮತ್ತು (iii) ಮಾತ್ರ.
(ಡಿ) ಮೇಲಿನೆಲ್ಲವೂ. √


92.ಸರ್ಕಾರದಿಂದ ಈ ಉದ್ದೇಶಕ್ಕಾಗಿ 'ಅಲ್ಬೆಂಡಾಝೋಲ್‌ ಮಾತ್ರೆ'ಗಳನ್ನು ವಿತರಿಸಲಾಗುತ್ತಿದೆ.‌
A) ಅಪೌಷ್ಠಿಕತೆ ನಿವಾರಣೆಗಾಗಿ.
B) ಜಂತು ಹುಳು ನಿವಾರಣೆಗಾಗಿ. √
C) ಕರುಳು ಬೇನೆ ನಿವಾರಣೆಗಾಗಿ.
D) ರಕ್ತಹೀನತೆ ನಿವಾರಣೆಗಾಗಿ.


93. ಅಂತರರಾಜ್ಯ ನದಿ ನೀರು ವಿವಾದಗಳ (ತಿದ್ದುಪಡಿ) ಮಸೂದೆ-2019ರ ಕುರಿತ ತಪ್ಪಾದ ಹೇಳಿಕೆ/ಗಳನ್ನು ಗುರುತಿಸಿ.
1) ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾಯಮಂಡಳಿಗೆ ಅಧ್ಯಕ್ಷರಾಗಿರುತ್ತಾರೆ.
2) ವಿವಾದದ ಪರಿಹಾರಕ್ಕೆ ಪೀಠಕ್ಕೆ ಇರುವ ಗರಿಷ್ಠ ಅವಧಿ 2 ವರ್ಷ ಮಾತ್ರ.
3) ರಾಜ್ಯಗಳ ಜತೆ ಸಮಾಲೋಚನೆ ಮಾಡುವ ಅವಕಾಶ ಈ ಮಸೂದೆಯಲ್ಲಿಲ್ಲ.
A) 1 ಮಾತ್ರ.
B) 1 & 2 ಮಾತ್ರ.
C) 3 ಮಾತ್ರ.
D) ಯಾವುದೂ ತಪ್ಪಿಲ್ಲ. √


94. ಇತ್ತೀಚೆಗೆ ಸುದ್ದಿಯಲ್ಲಿದ್ದ ಕುಂಡುಜ್ ನಗರ ಯಾವ ದೇಶಕ್ಕೆ ಸಂಬಂಧಿಸಿದ್ದು?
A) ಅಫಘಾನಿಸ್ತಾನ. √
B) ಸಿರಿಯಾ.
C) ಇರಾನ್.
D) ಯಮೆನ್.


95.'ಯೂರಿಯಾ ಸಬ್ಸಿಡಿ ಯೋಜನೆ' ಕುರಿತ ಕೆಳಗಿನ ತಪ್ಪಾದ ಹೇಳಿಕೆಗಳನ್ನು ಗುರುತಿಸಿ.
1) ಯೂರಿಯಾ ಸಬ್ಸಿಡಿಯು ಕೇಂದ್ರ ವಲಯದ ಯೋಜನೆಯ ಭಾಗವಾಗಿದೆ.
2) ಯೂರಿಯಾ ಸಾಗಾಟಕ್ಕೆ ತಗುಲುವ ಸಾಗಾಣಿಕೆ ವೆಚ್ಚವನ್ನು ಕೂಡ ಇದು ಒಳಗೊಂಡಿರುತ್ತದೆ.
3) ಇದು ಆಮದು ಮಾಡಿಕೊಂಡ ಯೂರಿಯಾ ಪೂರೈಕೆಗೂ ಅನ್ವಯಿಸುತ್ತದೆ.
A) 1 ಮಾತ್ರ.
B) 2 & 3 ಮಾತ್ರ
C) 3 ಮಾತ್ರ.
D) ಯಾವುದೂ ತಪ್ಪಿಲ್ಲ. √


96.'ಪ್ರಾಜೆಕ್ಟ್ ರೋಶಿನಿ ಯೋಜನೆ' ಕುರಿತ ಕೆಳಗಿನ ತಪ್ಪಾದ ಹೇಳಿಕೆಗಳನ್ನು ಗುರುತಿಸಿ.
1) ಇದು ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ)ಯಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗಿದೆ.
2) ಶಾಲೆಗಳನ್ನು ವಿಶ್ವದರ್ಜೆಯ ಶಿಕ್ಷಣ ಕೇಂದ್ರಗಳನ್ನಾಗಿ ರೂಪಾಂತರ ಮಾಡುವುದಾಗಿದೆ.
3) ಗ್ರಾಮೀಣ ಪ್ರದೇಶದ ಮನೆಗಳಿಗೆ ಕನಿಷ್ಠ ಒಂದು ಸೋಲಾರ್‌ ಲೈಟ್‌ ಒದಗಿಸುವುದು.
A) 1 ಮಾತ್ರ.
B) 1 & 2 ಮಾತ್ರ.
C) 3 ಮಾತ್ರ. √
D) ಯಾವುದೂ ತಪ್ಪಿಲ್ಲ.


97. 'ಪುಲಿಕಲಿ' ಎಂಬ ಮನರಂಜನಾ ಜಾನಪದ (ಆಟ) ಕಲೆಯು ಈ ರಾಜ್ಯಕ್ಕೆ ಸಂಬಂಧಿಸಿದ್ದು,
A) ಕೆರಳ. √
B) ತಮಿಳುನಾಡು.
C) ಕರ್ನಾಟಕ.
D) ಮಣಿಪುರ.


98. ಡಿಟ್ರ್ಯಾಕ್ (Dtrack) ಎಂಬುದು ಒಂದು...
A) ಸ್ಪೈವೇರ್.
B) ಮಾಲ್ವೇರ್. √
C) ಸುಪರ್ ಕಂಪ್ಯೂಟರ್.
D) ಕ್ವಾಂಟಂ ಕಂಪ್ಯೂಟರ್.



99.ಇತ್ತೀಚೆಗೆ  'ಆಪರೇಷನ್ ಪೀಸ್ ಸ್ಪ್ರಿಂಗ್' ಎಂಬ ಕಾರ್ಯಾಚರಣೆ ಕೈಗೊಂಡ ರಾಷ್ಟ್ರ ಯಾವುದು?
A) ಟರ್ಕಿ. √
B) ಅಫಘಾನಿಸ್ತಾನ.
C) ಇರಾನ್.
D) ಯಮೆನ್.


100. ಇತ್ತೀಚೆಗೆ ಸುದ್ದಿಯಲ್ಲಿದ್ದ 'ಅಂಬ್ರೆಲಾ ಮೂವ್‌ಮೆಂಟ್ (ಚಳವಳಿ)' ಈ ದೇಶಕ್ಕೆ ಸಂಬಂಧಿಸಿದ್ದು,
A) ಹಾಂಗ್‌ಕಾಂಗ್. √
B) ಯಮೆನ್.
C) ಸುಡಾನ್.
D) ಸಿರಿಯಾ.