"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 19 March 2015

☀ಕರ್ನಾಟಕ ಬಜೆಟ್ -2015 ಮುಖ್ಯಾಂಶಗಳು (Highlights of the Karnataka Budget-2015)

☀ಕರ್ನಾಟಕ ಬಜೆಟ್ -2015 ಮುಖ್ಯಾಂಶಗಳು
(Highlights of the Karnataka Budget-2015)

━━━━━━━━━━━━━━━━━━━━━━━━━━━━━━━━━━━━━━━━━━━━━

●.ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಿದೆ.
— ಮುಖ್ಯಮಂತ್ರಿಗಳು ಬಜೆಟ್ ‍ನಲ್ಲಿ ಘೋಷಣೆ ಮಾಡಿದ ಪ್ರಮುಖ ಅಂಶಗಳು ಇಲ್ಲಿವೆ.

✧.2015-16ನೇ ಸಾಲಿನ ಬಜೆಟ್ ಗಾತ್ರ 1.42.534 ಕೋಟಿ
✧.2014-15ರ ಬಜೆಟ್ ಗಾತ್ರ 1.38.008 ಕೋಟಿ
✧.2015-16ನೇ ಸಾಲಿನ ಯೋಜನಾ ಗಾತ್ರ 72.597 ಕೋಟಿ
✧.2014-15ರ ಯೋಜನಾ ಗಾತ್ರ 65.600 ಕೋಟಿ
✧.ಕಳೆದ ವರ್ಷಕ್ಕಿಂತ 10.67ರಷ್ಟು ಏರಿಕೆ
✧.ಕೃಷಿ – 3883 ಕೋಟಿ
✧.ಮಣ್ಣಿನಿಂದ ಅನ್ನವ ತೆಗೆಯುವ ನಮ್ಮ ಕುಳಗಳು
✧.ಸಗ್ಗವನೆ ದಿನವೂ ತೆರೆವ ಕೀಲಿ ಕೈಗಳು
✧.ಕೃಷಿ ಸಮಗ್ರ ದೂರ ದೃಷ್ಟಿಗೆ ತಜ್ಞರ ವಿಷನ್ ಗ್ರೂಪ್ ರಚನೆ
✧.ಲಘು ನೀರಾವರಿ ನೀತಿ 2015-16 ಜಾರಿ
✧.ಉತೃಷ್ಟ ಜ್ಞಾನ ಕೇಂದ್ರ ರಚನೆ
✧.ಬೆಳೆ ಸಮಸ್ಯೆ ನಿವಾರಣೆಗೆ ಕೃಷಿ ಅಭಿಯಾನ
✧.ರೈತ ಸಂಪರ್ಕ ಕೇಂದ್ರದಲ್ಲಿ ಒಂದೇ ಸೂರಿನಲ್ಲಿ ಎಲ್ಲಾ ಸೇವೆ
✧.78 ಹೊಸ ಸೇವಾ ಕೇಂದ್ರ ಆರಂಭ
✧.ಭೂ ಸಮೃದ್ಧಿ ಕಾರ್ಯಕ್ರಮ – 4 ಜಿಲ್ಲೆಗಳಿಗೆ ವಿಸ್ತರಣೆ
✧.ಕೆ.ಕಿಸಾನ್ ವಿದ್ಯುನ್ಮಾನ ಕೇಂದ್ರ ಸ್ಥಾಪನೆ – ರೈತ ಮಿತ್ರ ಕಾರ್ಡ್, ಮಣ್ಣು ಆರೋಗ್ಯ ಕಾರ್ಡ್ ನೀಡಿಕೆ
✧.ಜಲಾನಯನ ನಿರ್ವಹಣೆಗೆ ಡಿಜಿಟಲ್ ಗ್ರಂಥಾಲಯ
✧.ಸೂಕ್ತ ತಳಿ ಉತ್ತೇಜನಕ್ಕಾಗಿ ಸಂಶೋಧನೆ ಯೋಜನೆ
✧.ಶಿವಮೊಗ್ಗ ಕೃಷಿ ವಿವಿಗೆ ಹೊಸ ಕ್ಯಾಂಪಸ್ ನಿರ್ಮಾಣ
✧.ಮುಧೋಳ, ಮಂಡ್ಯದಲ್ಲಿ ಬೆಲ್ಲದ ಪಾರ್ಕ್ ಅಭಿವೃದ್ಧಿ

•—————••—————••—————••—————••—————•


●.ತೋಟಗಾರಿಕೆ – 760 ಕೋಟಿ

✧.ಸಂಗ್ರಹಣಾ ಕೇಂದ್ರ, ಕೃಷಿ ಯಾಂತ್ರಿಕ ಸಲಕರಣೆಗಳಿಗೆ ಶೇಕಡ 90ರಷ್ಟು ಸಬ್ಸಿಡಿ
✧.ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ ಕೃಷಿ ಉತ್ಪಾದಕ ಸಂಘಗಳ ಬಲಪಡಿಸುವಿಕೆ
✧.ನೀರಾ ಇಳಿಸಲು ಅನುಮತಿ ನೀಡಲು ಅಬಕಾರಿ ನಿಯಮಕ್ಕೆ ತಿದ್ದುಪಡಿ
✧.ಹಾಪ್‍ಕಾಮ್ಸ್ ಅಭಿವೃದ್ಧಿಗೆ ಗಣಕೀಕರಣ
✧.ರೈತೋತ್ಪಾದಕ ಕೇಂದ್ರಗಳು, ಏಜೆನ್ಸಿಗಳು ಸಾವಯವ ಕೃಷಿಯಲ್ಲಿ ರಾಜ್ಯ ಸರ್ಕಾರದೊಂದಿಗೆ ಪಾಲುದಾರಿಕೆ
✧.ಹಾವೇರಿ ಕಾಲೇಜಿನ ದೇವಿ ಹೊಸೂರು ಗ್ರಾಮದಲ್ಲಿ ತೋಟಗಾರಿಕೆ ಕಾಲೇಜು
✧.ಮೈಸೂರಿನ ಕುಪ್ಪಣ್ಣ ಪಾರ್ಕ್, ದಾವಣಗೆರೆ ಜಿಲ್ಲೆ ಶಾಮನೂರು ಗ್ರಾಮ, ಬಳ್ಳಾರಿಯಲ್ಲಿ ಗಾಜಿನ ಮನೆ

•—————••—————••—————••—————••—————•


●.ಪಶು ಸಂಗೋಪನೆ – 1882 ಕೋಟಿ

✧.ಪಶುಭಾಗ್ಯ
✧.ವಾಣಿಜ್ಯ ಬ್ಯಾಂಕ್‍ಗಳಿಂದ 1.2 ಲಕ್ಷದ ವರೆಗೆ ಸಾಲ
✧.ಎಸ್‍ಸಿಎಸ್‍ಟಿ ಶೇಕಡ 33 ರಷ್ಟು ಸಬ್ಸಿಡಿ, ಉಳಿದವರಿಗೆ ಶೇಕ 25ರಷ್ಟಿ ಸಬ್ಸಿಡಿ
✧.ಹಸು, ಕುರಿ, ಆಡು, ಹಂದಿ, ಕೋಳಿ ಸಾಕಣೆಗೆ ಪಶು ಭಾಗ್ಯ
✧.ಸಹಕಾರಿ ಬ್ಯಾಂಕ್‍ಗಳಲ್ಲಿ ಶೂನ್ಯದರದಲ್ಲಿ ಶೇಕಡ 50ರಷ್ಟು ಸಾಲ
✧.ಕುರಿಗಾಹಿ ಸುರಕ್ಷಾ ಯೋಜನೆ ಮುಂದುವರಿಕೆ
✧.ಕುರಿಗಾಹಿ ಸುರಕ್ಷಾ ಯೋಜನೆಗೆ ಹೆಚ್ಚುವರಿಯಾಗಿ 5 ಕೋಟಿ ಅನುದಾನ
✧.ಹಿತ್ತಲ ಕೋಳಿ ಸಾಕಾನೆಗೆ ಉತ್ತೇಜನ
✧.ಕರ್ನಾಟಕ ಕುರಿ, ಉಣ್ಣೆ ಅಭಿವೃದ್ಧಿ ನಿಗಮಕ್ಕೆ 4 ಪಟ್ಟು ಹೆಚ್ಚು ಅನುದಾನ – 25 ಕೋಟಿ ಅನುದಾನ
✧.ಗೋಶಾಲೆಗಳಿಗೆ 7 ಕೋಟಿ ಅನುದಾನ
✧.ಗೋಮಾಳ, ಕಾವಲ್ ಭೂಮಿಗಳಲ್ಲಿ ಮೇವು ಉತ್ಪಾದನೆಗೆ 10 ಕೋಟಿ
✧.ಉತ್ತರ ಕರ್ನಾಟಕದಲ್ಲಿ ಮುಂದಿನ 3 ವರ್ಷಗಳಲ್ಲಿ ಹೊಸದಾಗಿ 750 ಹಾಲು ಉತ್ಪಾದಕರ ಸಂಘಗಳ ಸ್ಥಾಪನೆ – 16 ಕೋಟಿ ಅನುದಾನ
✧.ದೇವಣಿ, ಮಲೆನಾಡು ಗಿಡ್ಡ ಹಸುಗಳ ಸಂರಕ್ಷಣೆಗಾಗಿ 10 ಕೋಟಿ ವೆಚ್ಚದಲ್ಲಿ ಗೋಕುಲ ಗ್ರಾಮ ಸ್ಥಾಪನೆ
✧.ಸಂಚಾರಿ ರೋಗ ನಿರ್ಧಾರ ಪ್ರಯೋಗಾಲಯ ಸ್ಥಾಪನೆ
✧.ಬೀದರ್ ಜಿಲ್ಲೆಯಲ್ಲಿ ಮಿಲ್ಕ್ ಶೆಡ್ ಪ್ರದೇಶಾಭಿವೃದ್ಧಿ – 8 ಲಕ್ಷ ಲೀಟರ್ ಹಾಲು ಉತ್ಪಾದನೆಗೆ ಕ್ರಮ
✧.ಸಂಕಷ್ಟದಲ್ಲಿರುವ ಕುರಿ, ಉಣ್ಣೆ ಉತ್ಪಾದನಾ ಸಹಕಾರ ಸಂಘಗಳಿಗೆ ಪ್ರೋತ್ಸಾಹ ಮುಂದುವರಿಕೆ – 20 ಕೋಟಿ

•—————••—————••—————••—————••—————•


●.ರೇಷ್ಮೆ – 186 ಕೋಟಿ

✧.ವಿಶಾಲ, ಜಿ-2, ಸುವರ್ಣ ಹಿಪ್ಪುನೇರಳೆ ತಳಿಗಳ ಅಭಿವೃದ್ಧಿ ಶೇಕಡ 75ರಷ್ಟು ಪ್ರೋತ್ಸಾಹ ಧನ
✧.1 ಎಕರೆಗೆ 14 ಸಾವಿರ ರೂ.
✧.ಉತ್ತರ ಕರ್ನಾಟಕದಲ್ಲಿ 2, ದಕ್ಷಿಣ ಕರ್ನಾಟಕದಲ್ಲಿ 3, ಒಟ್ಟು 5 ರೈತ ಉತ್ಪಾದಕ ಸಂಘಗಳ ಸ್ಥಾಪನೆ
✧.ರಾಮನಗರ, ಶಿಡ್ಲಘಟ್ಟ, ಕೊಳ್ಳೇಗಾಲ ರೀಲೀಂಗ್ ಪಾರ್ಕ್ ಸ್ಥಾಪನೆ10 ಕೋಟಿ
✧.ಉತ್ತರ ಕರ್ನಾಟಕದಲ್ಲಿ ರೀಲೀಂಗ್ ಯಂತ್ರ ಅಳವಡಿಕೆ
ಶೇಕಡ 90ರಷ್ಟು ಸಬ್ಸಿಡಿ

•—————••—————••—————••—————••—————•


●.ಸಹಕಾರ – 1323 ಕೋಟಿ

✧.ಶೂನ್ಯ ಬಡ್ಡಿದರದಲ್ಲಿ 3 ಲಕ್ಷದವರೆಗೆ ಅಲ್ಪಾವಧಿ ಕೃಷಿ ಸಾಲ
✧.ಶೇಕಡ 3ರಷ್ಟು ಬಡ್ಡಿದರದಲ್ಲಿ 10 ಲಕ್ಷದವರೆಗೆ ಕೃಷಿ ಸಾಲ
✧.23 ಲಕ್ಷ ರೈತರಿಗೆ 10 ಸಾವಿರ ಕೋಟಿ ಸಾಲ
✧.ಯಶಸ್ವಿನಿ ಆರೋಗ್ಯ ರಕ್ಷಣಾ ಕವಚ ಯೋಜನೆಗೆ 110 ಕೋಟಿ
✧.ಬಿಪಿಎಲ್ ಕುಟುಂಬದ ಸದಸ್ಯರು ಸಹಕಾರ ಸಂಘಗಳಿಗೆ ಸದಸ್ಯರಾದರೆ ಶೇರು ಧನದ ಮೊತ್ತ ಸರ್ಕಾರದಿಂದ ಭರಿಸುತ್ತೇ – 32 ಕೋಟಿ ಮೀಸಲು
✧.ಕೃಷಿ ಉದ್ದೇಶದ ವಿಫಲ ಕೊಳವೆ ಬಾವಿಗಳ ಸಾಲ ಮನ್ನಾ – 2 ಕೋಟಿ
✧.ಹಾವೇರಿ, ಚಾಮರಾಜನಗರದಲ್ಲಿ ಪ್ರತ್ಯೇಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸ್ಥಾಪನೆ
✧.ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ವಿಭಜನೆ
✧.ದಾವಣಗೆರೆ, ಚಿತ್ರದುರ್ಗಕ್ಕೆ ಪ್ರತ್ಯೇಕ ಸಹಕಾರ ಹಾಲು ಒಕ್ಕೂಟ
✧.650 ಕೋಟಿ ವೆಚ್ಚದಲ್ಲಿ 72 ಸ್ಥಳದಲ್ಲಿ ಹೊಸದಾಗಿ ಉಗ್ರಾಣ ಕೇಂದ್ರ ಸ್ಥಾಪನೆ
✧.ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಉಡುಪಿ, ಬಳ್ಳಾರಿ, ಕಲಬುರಗಿ, ದಾವಣಗೆರೆ ಭಾನುವಾರದ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ – 7 ಕೋಟಿ
✧.ನಿರ್ಮಲ ಮಾರುಕಟ್ಟೆ ಯೋಜನೆ ಆರಂಭ
✧.ಮೈಸೂರು, ಶಿವಮೊಗ್ಗ, ಬಿಜಾಪುರ, ಬೆಂಗಳೂರಿನ ಸಿಂಗೇನ ಅಗ್ರಹಾರ ಪ್ರಮುಖ ಮಾರುಕಟ್ಟೆಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ
✧.ರೈತರಿಗೆ ಶುದ್ಧ ಕುಡಿಯುವ ನೀರು ನೀಡಲು – ಶುದ್ಧ ಕುಡಿಯುವ ನೀರಿನ ಘಟಕ
✧.ಹುಬ್ಬಳ್ಳಿ, ತುಮಕೂರು, ಬೆಂಗಳೂರಿನ ದಾಸನಪುರ ಮಾರುಕಟ್ಟೆಯಲ್ಲಿ ಶೀತಲ ಗೃಹ ಘಟಕ
✧.ಆಯ್ದ ಎಪಿಎಂಸಿಗಳಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ಮಿನಿ ಸೈಲೋಸ್ ನಿರ್ಮಾಣ
✧.ಮೈಸೂರು, ತುಮಕೂರು, ಹುಬ್ಬಳ್ಳಿ, ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 3 ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ವಿಶ್ಲೇಷಣಾ ಪ್ರಯೋಗಾಲಯ
✧.ಕೇಂದ್ರೀಕೃತ ಪರ್ಮಿಮ್ ಪರಿಶೀಲನೆ ವ್ಯವಸ್ಥೆಗೆ – ಇ-ಪರ್ಮಿಟ್ ಪದ್ಧತಿ

•—————••—————••—————••—————••—————•


●.ಜಲಸಂಪನ್ಮೂಲ -12.956 ಕೋಟಿ

✧. ಭಾರಿ ಮತ್ತು ಮಧ್ಯಮ ನೀರಾವರಿ
✧.ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಅನುಷ್ಠಾನ – ಈ ಯೋಜನೆಯ 9 ಉಪಯೋಜನೆಗಳಲ್ಲಿ 8 ಉಪಯೋಜನೆಗಳಾದ ಮುಳವಾಡ ಚಿಮ್ಮಲಗಿ, ಇಂಡಿ, ರಾಂಪುರ, ಮಲ್ಲಾಬಾದ್, ಕೊಪ್ಪಳ ಹಾಗೂ ಹೆರಕಲ್ ಏತ ನೀರಾವರಿ, ನಾರಾಯಣ ಬಲದಂಡೆ ಕಾಲುವೆ ವಿಸ್ತರಣೆ
✧.ಶಿಂಶಾ ಅಣೆಕಟ್ಟು ಬಲದಂಡೆ ನಾಲೆ ಆಧುನೀಕರಣ
✧.ವೃಷಭಾವತಿ ಕಣಿವೆಯಲ್ಲಿ ಹರಿಯುವ ನೀರನ್ನು ಸಂಸ್ಕರಿಸಿ ರಾಮನಗರ ಜಿಲ್ಲೆಯ ಬೈರಾಮಂಗಲ ಕೆರೆ ತುಂಬಿಸುವ ಯೋಜನೆ
✧.ಕೆ.ಆರ್.ಎಸ್. ಜಲಾಶಯದ ಬೃಂದಾವನ ಉದ್ಯಾನವನ ಆಧುನಿಕ ತಂತ್ರಜ್ಞಾನ ಬಳಸಿ ವಿಶ್ವದರ್ಜೆಗೆ ಕಬ್ಬು ಬೆಳೆಗೆ ಹನಿನೀರಾವರಿ ಪದ್ಧತಿ
✧.ಪ್ರಥಮ ಹಂತದಲ್ಲಿ ಆಯ್ದ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಯೋಜನೆ ಜಾರಿ
✧.ಮೇಕೆದಾಟು ಮೇಲ್ಭಾಗ ಸಮತೋಲನ ಜಲಾಶಯ ನಿರ್ಮಾಣಕ್ಕೆ ವಿವರವಾದ ವರದಿ ನೀಡಲು 25 ಕೋಟಿ
✧.ಬರಪೀಡಿತ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ, ಹಾವೇರಿ, ಬಾಗಲಕೋಟೆ, ಗದಗದಲ್ಲಿ 12 ಪ್ರಮುಖ ಯೋಜನೆಗೆ ಸೂಕ್ಷ್ಮ ನೀರಾವರಿ ಪದ್ಧತಿ
✧.ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಮತ್ತು ವಾಲ್ಮಿ ಸಂಸ್ಥೆಗಳ ಬಲವರ್ಧನೆ
✧.ಟೀ. ನರಸೀಪುರ ತಾಲೂಕಿನ ತಲಕಾಡಿನಲ್ಲಿ ಮಾಧವ ಮಂತ್ರಿ ಅಣೆಕಟ್ಟು ಆಧುನೀಕರಣ
✧.ಹೇಮಾವತಿ, ಕಬಿನಿ ಅಣೆಕಟ್ಟೆ ಕೆಳಭಾಗದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಉದ್ಯಾನವನ ನಿರ್ಮಾಣ
✧.ಚನ್ನಗಿರಿ ತಾಲೂಕು ಸಂತೆಬೆನ್ನೂರು ಮತ್ತು ಕಸಬಾ ಹೋಬಳಿ ಏತನೀರಾವರಿ ಯೋಜನೆಗೆ 267 ಕೋಟಿ
✧.ಚನ್ನಗಿರಿ, ಮಾಯಕೊಂಡ, ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ 77 ಕೆರೆ ತುಂಗಭದ್ರಾ ನದಿ ನೀರಿನಿಂದ ತುಂಬಿಸಲು 50 ಕೋಟಿ

✧.ಸಣ್ಣ ನೀರಾವರಿ
✧.ನೈಸರ್ಗಿಕ ನದಿ ಕೊಳ್ಳಗಳಿಗೆ ಸರಣಿಯಲ್ಲಿ ಪಿಕಪ್ ನಿರ್ಮಾಣ – 100 ಕೋಟಿ
✧.ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ರಾಮನಗರ ಜಿಲ್ಲೆಯಲ್ಲಿ ಪಿಕಪ್ ನಿರ್ಮಾಣ
✧.ಕೆರೆ ಅಭಿವೃದ್ಧಿ ನಾಡಿನ ಶ್ರೇಯೋಭೀವೃದ್ಧಿ – 190 ಕೆರೆಗಳ ಸಮಗ್ರ ಅಭಿವೃದ್ಧಿ
✧.ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಒತ್ತುವರಿ ತೆರವು ಅಭಿಯಾನ, ಕೆರೆಗಳ ಪೋಷಕ ಕಾಲುವೆ/ರಾಜಾಕಾಲುವೆ ದುರಸ್ತಿಗೆ 100 ಕೋಟಿ
✧.ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಕೋರಮಂಗಲ ಚನ್ನಘಟ್ಟ ಕಣಿವೆಯಿಂದ ಹರಿಯುವ ಕೊಳಚೆ ನೀರು ಸಂಸ್ಕರಣೆ – ಈ ನೀರನ್ನು ಏತ ನೀರಾವರಿ ಮೂಲಕ ಕೈಗೊಳ್ಳಲು ಯೋಜನಾ ವರದಿ ಸಿದ್ಧ – ಶೀಘ್ರ ಯೋಜನೆ ಜಾರಿ
✧.ಆನೇಕಲ್ ತಾಲೂಕಿನ 60 ಕೆರೆಗಳಿಗೆ ದಕ್ಷಿಣ ಪಿನಾಕಿನಿ ನದಿಗೆ ಹರಿಯುವ ಸಂಸ್ಕರಿಸಿದ ಕೊಳಚೆ ನೀರು ತುಂಬಿಸಲು ಮುತ್ತಸಂದ್ರ ಗ್ರಾಮದ ಸಮೀಪ ಏತ ನೀರಾವರಿ ಯೋಜನೆ

•—————••—————••—————••—————••—————•


●.ಅರಣ್ಯ, ಪರಿಸರ, ಜೀವಿಶಾಸ್ತ್ರ – 1757 ಕೋಟಿ

✧.ತಾಲೂಕಿಗೊಂದು ಹಸಿರು ಗ್ರಾಮ – 3 ಕೋಟಿ
✧.ಪ್ರತಿ ತಾಲೂಕಿನ ಆಯ್ಕೆ ಗ್ರಾಮದಲ್ಲಿ ಅರಣ್ಯ ಪ್ರದೇಶಾಭಿವೃದ್ಧಿ, ಔಷಧಿ ಸಸ್ಯ ಬೆಳೆಸುವುದು
✧.ಪರ್ಯಾಯ ಇಂಧನ ಮೂಲದಿಂದ ಅಭಿವೃದ್ಧಿ ಪಡಿಸಿದ ವಿದ್ಯುತ್ ಒದಗಿಸುವುದು
✧.ಕಾಂಪೋಸ್ಟಿಂಗ್, ಎರೆಹುಳು ಗೊಬ್ಬರ ತಯಾರಿಕಾ ತರಬೇತಿ
✧.ವಿದ್ಯಾರ್ಥಿಗಳಿಗೆ ಅರಣ್ಯ, ಪರಿಸರದ ಅರಿವು ಮೂಡಿಸಲು 2 ಹೊಸ ಯೋಜನೆ
✧.ತಾಲೂಕಿಗೊಂದು ಹಸಿರು ಶಾಲಾವನ –ಚಿಣ್ಣರ ವನ ದರ್ಶನ ಯೋಜನೆ
✧.ತಾಲೂಕಿಗೊಂದು ಹಸಿರು ಶಾಲಾವನ – ಪ್ರತಿ ತಾಲೂಕಿನಲ್ಲಿ 3ರಿಂದ 5 ಎಕರೆ ಪ್ರದೇಶದಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನು ತೊಡಗಿಸಿ ಮರ, ಗಿಡ ಬೆಳೆಸಲು 2.25 ಕೋಟಿ – 5 ವರ್ಷಗಳ ಯೋಜನೆ
✧.ಚಿಣ್ಣರ ವನ ದರ್ಶನ ಯೋಜನೆ
✧.ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ 10 ಸಾವಿರ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು 5 ಕೋಟಿ ಯೋಜನೆ
✧.ಹುಲಿ ಸಂರಕ್ಷಿತ ಪ್ರದೇಶ, ವನ್ಯ ಜೀವಿ ಧಾಮ, ರಾಷ್ಟ್ರೀಯ ಉದ್ಯಾನವನದ ಅರಣ್ಯವಾಸಿಗಳ ಸ್ಥಳಾಂತರಕ್ಕೆ ಪುನರ್ವಸತಿ ಘಟಕ ಸ್ಥಾಪನೆ
✧.ಜೀವ ವೈವಿಧ್ಯ ಉದ್ಯಾನಗಳ ಅಭಿವೃದ್ಧಿ – ಮಡಿವಾಳ ಕೆರೆ ಜೀವ ವೈವಿಧ್ಯ ಉದ್ಯಾನ ಅಭಿವೃದ್ಧಿಗೆ 24.72 ಕೋಟಿ
✧.ಹವಾಮಾನ ಬದಲಾವಣೆಯ ರಾಜ್ಯದ ಕ್ರಿಯಾ ಯೋಜನೆಗೆ ಕೇಂದ್ರದ ಮಂಜೂರಾತಿ ಯೋಜನೆ ಅನುಷ್ಠಾನಕ್ಕೆ 2 ಕೋಟಿ
✧.ಮಹಾನಗರ ಪ್ರದೇಶಗಳ ಕೆರೆಗಳ ರಕ್ಷಣೆ, ಕೆರೆಗಳ ಅಭಿವೃದ್ಧಿ, ಕೆರೆಗಳ ಸೌಂದರ್ಯವೃದ್ಧಿಗೆ 5.56 ಕೋಟಿ

•—————••—————••—————••—————••—————•


●.ಪ್ರಾಥಮಿಕ-ಪ್ರೌಢಶಿಕ್ಷಣ – 16204 ಕೋಟಿ

✧.ಸರ್ಕಾರಿ ಶಾಲಾ,ಕಾಲೇಜುಗಳಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಹೊಸ ಕಟ್ಟಡ, ಹೆಚ್ಚುವರಿ ಕಟ್ಟಡ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗೆ 110 ಕೋಟಿ
✧.ಟೆಲಿ ಶಿಕ್ಷಣ ಕಾರ್ಯಕ್ರಮ ಸಾವಿರ ಶಾಲೆಗಳಿಗೆ ವಿಸ್ತರಣೆ
✧.ಶಾಲೆಗಾಗಿ ನಾವು ನೀವು ಯೋಜನೆ – ಶಾಲಾ, ಕಾಲೇಜುಗಳ ಮೂಲಭೂತ ಸೌಕರ್ಯ, ಶೈಕ್ಷಣಿಕ ಅಭಿವೃದ್ಧಿಗೆ ಸಿಎಸ್‍ಆರ್ ಸಮಿತಿ(ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ)
54.54 ಲಕ್ಷ ಮಕ್ಕಳಿಗೆ 1 ಜೊತೆ ಶೂ, 1 ಜೊತೆ ಸಾಕ್ಸ್ ಒದಗಿಸಲು 120 ಕೋಟಿ
✧.ಡಿಎಸ್‍ಇಆರ್‍ಟಿ, ಸಿಟಿಇ, ಡಯಟ್ ಮೇಲ್ದರ್ಜೆಗೆ
✧.ಶಿಕ್ಷಣ ಸೇವಾ ಕೇಂದ್ರ ಸ್ಥಾಪನೆ
✧.ರಾಜ್ಯದಲ್ಲಿ ಗ್ರೀನ್ ಪವರ್ ಶಾಲೆ ಆರಂಭ
✧.ವಿದ್ಯುತ್ ಉಳಿಸಲು ಸೋಲಾರ್ ವಿದ್ಯುತ್ ಉಪಕರಣ ಅಳವಡಿಕೆ
✧.100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,
✧.100 ಸರ್ಕಾರಿ ಹಿರಿಯ ಪ್ರೌಢಶಾಲೆ,
✧.100 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೋಲಾರ್ ಎಜುಕೇಷನ್ ಕಿಟ್
✧.ಸ್ಪರ್ಧಾಕಲಿ ಕಾರ್ಯಕ್ರಮ ಜಾರಿ
✧.ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಲ್ಲಿ ಶೈಕ್ಷಣಿಕ ಕಲಿಕೆಯ ಅರಿವು ಮೂಡಿಸಲು ಯೋಜನೆ
✧.ಚಿಕ್ಕಬಳ್ಳಾಪುರ ಬಿಇಡಿ ಕಾಲೇಜು ಉನ್ನತೀಕರಣ
✧.ಮುದ್ರಣ ಲೇಖನ ಸಾಮಗ್ರಿ, ಪ್ರಕಟಣೆ ಇಲಾಖೆ ಗಣಕೀಕರಣ
✧.ಅಬಕಾರಿ ಇಲಾಖೆಯ ಭದ್ರತಾ ಚೀಟಿ ಸರ್ಕಾರಿ ಮುದ್ರಣಾಲಯದಲ್ಲೇ ಮುದ್ರಣ
✧.ಸ್ಟೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ತರಬೇತಿ, ಶಿಬಿರ ಕೇಂದ್ರಕ್ಕೆ 5 ಕೋಟಿ

•—————••—————••—————••—————••—————•


●.ಉನ್ನತ ಶಿಕ್ಷಣ – 3896 ಕೋಟಿ

✧.ಸಹಭಾಗಿತ್ವ ಯೋಜನೆ ಆರಂಭ
✧.ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಕಾಲೇಜುಗಳು, ವಿವಿಗಳಲ್ಲಿ ಸಹಭಾಗಿತ್ವದ ಯೋಜನೆ – 10 ಕೋಟಿ
✧.ಜ್ಞಾನಸಂಗಮ ಯೋಜನೆಯಡಿ ಹಂತ ಹಂತವಾಗಿ ಮೂಲಭೂತ ಸೌಕರ್ಯ ಒದಗಿಸಲು ಕ್ರಮ
✧.ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಐಪಿಆರ್ ಅರಿವಿಗೆ ಪ್ರೋತ್ಸಾಹ ನೀಡಲು ಸ್ವಾವಲಂಬನೆ ಯೋಜನೆ ಆರಂಭ
✧.ಜ್ಞಾನ ಪ್ರಸಾರ ಯೋಜನೆಯಡಿ ಅಧ್ಯಾಪಕರ ಕೊರತೆ ನೀಗಿಸಲು ಕ್ರಮ
✧.ವಿಜ್ಞಾನ-ಸುಜ್ಞಾನ ಯೋಜನೆ ಮೂಲಕ ಪದವಿ, ಸ್ನಾತಕ ಮಟ್ಟದಲ್ಲಿ ವಿಜ್ಞಾನ ಕೋರ್ಸ್ ಆರಂಭ – 10 ಕೋಟಿ ರೂ.
✧.ಹಿರಿಮೆ-ಗರಿಮೆ ಯೋಜನೆಯಡಿ 100, 75, 50 ವರ್ಷ ಪೂರ್ಣಗೊಳಿಸಿದ ಸರ್ಕಾರಿ ✧.ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯ ಪೂರೈಸಲು 10 ಕೋಟಿ ರೂ
✧.ಮೈಸೂರು ವಿವಿ ಶತಮಾನೋತ್ಸವ ಆಚರಣೆಗೆ 50 ಕೋಟಿ ರೂ.
✧.ಅಭ್ಯಾಸ ಯೋಜನೆ – ಹಿಂದುಳಿದ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕಾ ಪರಿಣಾಮ ಉಂಟುಮಾಡಲು ಪ್ರೋತ್ಸಾಹ – 40 ಕೋಟಿ
✧.ಮಂಗಳೂರು ವಿವಿಯಲ್ಲಿ ರಾಣಿ ಅಬ್ಬಕ್ಕ ಪೀಠ ಸ್ಥಾಪನೆಗೆ 1 ಕೋಟಿ ರೂ.
✧.ಬೆಂಗಳೂರು ವಿವಿಯಲ್ಲಿ ನೆಹರೂ ಚಿಂತನಾ ಕೇಂದ್ರಕ್ಕೆ 3 ಕೋಟಿ ರೂ.
✧.ಮೈಸೂರು ವಿವಯಲ್ಲಿ ಅನಂತಮೂರ್ತಿ ಪೀಠಕ್ಕೆ 1 ಕೋಟಿ ರೂ.
✧.ಕೆಂಗೇರಿಯ ಗಾಣಕಲ್ ಗ್ರಾಮದಲ್ಲಿ ಚಿತ್ರಕಲಾ ಪರಿಷತ್ ಹೊರಾವರಣ ಕೇಂದ್ರ ಸ್ಥಾಪನೆ – 20 ಕೋಟಿ ವಿಶೇಷ ಅನುದಾನ
✧.ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿ ನಳಂದಾ ಬೌದ್ಧ ಅಧ್ಯಯನ ಕೇಂದ್ರ ಸ್ಥಾಪನೆಗೆ 5 ಕೋಟಿ.

(ಕೃಪೆ: Public TV) 

No comments:

Post a Comment