"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 18 February 2015

☀ಭಾರತದ ನದಿದಂಡೆಯ ಮೇಲಿರುವ ಪ್ರಮುಖ ನಗರಗಳು  (List of Indian Cities Situated on Riverside)

☀ಭಾರತದ ನದಿದಂಡೆಯ ಮೇಲಿರುವ ಪ್ರಮುಖ ನಗರಗಳು
(List of Indian Cities Situated on Riverside)

━━━━━━━━━━━━━━━━━━━━━━━━━━━━━━━━━━━━━━━━━━━━━
♦ General Studies.
♦ ಸಾಮಾನ್ಯ ಅಧ್ಯಯನ.


✧.ಈ ಕೆಳಗೆ ವಿವರಿಸಲಾದ ಪ್ರಮುಖ ನಗರಗಳು ಆಯಾ ರಾಜ್ಯಗಳಲ್ಲಿ ಹರಿಯುವ ನದಿಗಳ ತೀರದಲ್ಲಿ ಸ್ಥಾಪನೆಗೊಂಡಿದ್ದು, ಆರ್ಥಿಕ, ರಾಜಕೀಯ, ವಾಣಿಜ್ಯ ವ್ಯವಹಾರಗಳ ದೃಷ್ಟಿಯಿಂದ ಮಹತ್ವ ಪಡೆದಿವೆ.

✧.ಪರೀಕ್ಷಾ ದೃಷ್ಟಿಯಿಂದ ಮಹತ್ವದೆನಿಸಿರುವ ಪ್ರಮುಖ ನಗರಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ.


●.ನಗರ •┈┈┈┈┈┈┈┈┈• ●.ನದಿ •┈┈┈┈┈┈┈┈┈• ●.ರಾಜ್ಯ
(CITY •┈┈┈┈┈┈┈┈┈• RIVER •┈┈┈┈┈┈┈┈┈• STATE)


(1) ಆಗ್ರಾ •┈┈┈┈┈┈┈┈┈• ಯಮುನಾ •┈┈┈┈┈┈┈┈┈• ಉತ್ತರ ಪ್ರದೇಶ

(2) ಅಹಮದಾಬಾದ್ •┈┈┈┈┈┈┈┈┈• ಸಬರಮತಿ •┈┈┈┈┈┈┈┈┈• ಗುಜರಾತ್

(3) ಅಯೋಧ್ಯೆ•┈┈┈┈┈┈┈┈┈• ಸರಯೂ •┈┈┈┈┈┈┈┈┈• ಉತ್ತರ ಪ್ರದೇಶ

(4) ಬದ್ರಿನಾಥ್ •┈┈┈┈┈┈┈┈┈• ಗಂಗಾ •┈┈┈┈┈┈┈┈┈• ಉತ್ತರಾಖಂಡ

(5) ಕಟಕ್ •┈┈┈┈┈┈┈┈┈• ಮಹಾನದಿ •┈┈┈┈┈┈┈┈┈• ಒರಿಸ್ಸಾ

(6) ದೆಹಲಿ •┈┈┈┈┈┈┈┈┈• ಯಮುನಾ •┈┈┈┈┈┈┈┈┈• ದೆಹಲಿ

(7) ದಿಬ್ರೂ •┈┈┈┈┈┈┈┈┈• ಬ್ರಹ್ಮಪುತ್ರ •┈┈┈┈┈┈┈┈┈• ಅಸ್ಸಾಂ

(8) ಹರಿದ್ವಾರ •┈┈┈┈┈┈┈┈┈• ಗಂಗಾ •┈┈┈┈┈┈┈┈┈• ಉತ್ತರಾಂಚಲ

(9) ಹೈದರಾಬಾದ್ •┈┈┈┈┈┈┈┈┈• ಮೂಸಿ •┈┈┈┈┈┈┈┈┈• ಆಂಧ್ರಪ್ರದೇಶ

(10) ಜಬಲ್ ಪುರ •┈┈┈┈┈┈┈┈┈• ನರ್ಮದಾ •┈┈┈┈┈┈┈┈┈• ಮಧ್ಯಪ್ರದೇಶ

(11) ಕಾನ್ಪುರ •┈┈┈┈┈┈┈┈┈• ಗಂಗಾ •┈┈┈┈┈┈┈┈┈• ಉತ್ತರ ಪ್ರದೇಶ

(12) ಕೋಲ್ಕತಾ •┈┈┈┈┈┈┈┈┈• ಹೂಗ್ಲಿ •┈┈┈┈┈┈┈┈┈• ಪಶ್ಚಿಮ ಬಂಗಾಳ

(13) ಕೋಟಾ •┈┈┈┈┈┈┈┈┈• ಚಂಬಲ್ •┈┈┈┈┈┈┈┈┈• ರಾಜಸ್ಥಾನ

(14) ಲಕ್ನೋ •┈┈┈┈┈┈┈┈┈• ಗೋಮತಿ •┈┈┈┈┈┈┈┈┈• ಉತ್ತರ ಪ್ರದೇಶ

(15) ಲುಧಿಯಾನ •┈┈┈┈┈┈┈┈┈• ಸಟ್ಲೆಜ್ •┈┈┈┈┈┈┈┈┈• ಪಂಜಾಬ್

(16) ನಾಸಿಕ್ •┈┈┈┈┈┈┈┈┈• ಗೋದಾವರಿ •┈┈┈┈┈┈┈┈┈• ಮಹಾರಾಷ್ಟ್ರ

(17) ಪಂಢರಪುರ •┈┈┈┈┈┈┈┈┈• ಭೀಮ •┈┈┈┈┈┈┈┈┈• ಮಹಾರಾಷ್ಟ್ರ

(18) ಪಾಟ್ನಾ •┈┈┈┈┈┈┈┈┈• ಗಂಗಾ•┈┈┈┈┈┈┈┈┈• ಬಿಹಾರ

(19) ರಾಜಮಹೇಂದ್ರಿ •┈┈┈┈┈┈┈┈┈• ಗೋದಾವರಿ •┈┈┈┈┈┈┈┈┈• ಆಂಧ್ರಪ್ರದೇಶ

(20) ಸಂಬಲ್ಪುರ್ •┈┈┈┈┈┈┈┈┈• ಮಹಾನದಿ -•┈┈┈┈┈┈┈┈┈• ಒರಿಸ್ಸಾ

(21) ಶ್ರೀನಗರ •┈┈┈┈┈┈┈┈┈• ಝೀಲಂ •┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ

(22) ಸೂರತ್ •┈┈┈┈┈┈┈┈┈• ತಪತಿ •┈┈┈┈┈┈┈┈┈• ಗುಜರಾತ್

(23) ತಿರುಚನಾಪಳ್ಳಿ •┈┈┈┈┈┈┈┈┈• ಕಾವೇರಿ •┈┈┈┈┈┈┈┈┈• ತಮಿಳುನಾಡು

(24) ವಾರಣಾಸಿ •┈┈┈┈┈┈┈┈┈• ಗಂಗಾ •┈┈┈┈┈┈┈┈┈• ಉತ್ತರ ಪ್ರದೇಶ

(25) ವಿಜಯವಾಡ •┈┈┈┈┈┈┈┈┈• ಕೃಷ್ಣ •┈┈┈┈┈┈┈┈┈• ಆಂಧ್ರಪ್ರದೇಶ

Tuesday 17 February 2015

☀ಸಪ್ಟೆಂಬರ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of September 2014)

☀ಸಪ್ಟೆಂಬರ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of September 2014)

★ಸಪ್ಟೆಂಬರ್ 2014
(September 2014)

━━━━━━━━━━━━━━━━━━━━━━━━━━━━━━━━━━━━━━━━━━━━━


♦.*ಸೆ.1:   ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಜಿಂಬಾಬ್ವೆ 31 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ನೂತನ ದಾಖಲೆ ಬರೆಯಿತು.


♦.*ಸೆ.2:    ಭಾರತದ ಮಾಜಿ ಅಟಾರ್ನಿ ಜನರಲ್‌ ಜಿ. ಇ. ವಹನ್ವತಿ ನಿಧನರಾದರು. ಅವರು ಸುಪ್ರಿಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದರು.


♦.*ಸೆ.3:    ಸಾರ್ವಜನಿಕ ಸ್ಥಳ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸುವಂತೆ ಹಿಮಾಚಲ ಪ್ರದೇಶ ಹೈಕೋರ್ಟ್‌ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿತು.


♦.*ಸೆ.3:    ಸುಪ್ರಿಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರನ್ನು ಕೇಂದ್ರ ಸರ್ಕಾರ ಕೇರಳ ರಾಜ್ಯದ ರಾಜ್ಯಪಾಲರನ್ನಾಗಿನೇಮಕ ಮಾಡಿತು.


♦.*ಸೆ.3:    ಸುಪ್ರಿಂ ಕೋರ್ಟ್‌ನ 42ನೇ ಮುಖ್ಯ ನ್ಯಾಯಮೂರ್ತಿಯನ್ನಾಗಿ ಕನ್ನಡಿಗ ಎಚ್‌.ಎಲ್‌ ದತ್ತು ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆದೇಶ ಹೊರಡಿಸಿದರು.


♦.*ಸೆ. 4:    ನ್ಯಾಯಮೂರ್ತಿ ಧರ್ಮಾಧಿಕಾರಿ ನೇತೃತ್ವದ ಸಮಿತಿ ಮಹಾರಾಷ್ಟ್ರದಲ್ಲಿ ಎಲ್ಲಾ ರೀತಿಯ ಡ್ಯಾನ್ಸ್‌ ಬಾರ್‌ಗಳನ್ನು ನಿಷೇಧಿಸುವಂತೆ ಬಾಂಬೆ ಹೈಕೋರ್ಟ್‌ಗೆ ವರದಿ ಸಲ್ಲಿಸಿತು.


♦.*ಸೆ.4:    ಅಮೆರಿಕದ ಖ್ಯಾತ ಹಾಸ್ಯಗಾರ ಹಾಗೂ ಭಾಷಣಕಾರ ಜಾನ್‌ ರಿವರ್‌ ನಿಧನರಾದರು. ಅವರು ವಿಶ್ವದಾದ್ಯಂತ ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯರಾಗಿದ್ದರು.


♦.*ಸೆ.5:    ಬೌದ್ಧ ಗುರು ದಲೈಲಾಮ ಅವರಿಗೆ ದಕ್ಷಿಣ ಆಫ್ರಿಕಾ ಸರ್ಕಾರ ವೀಸಾ ನೀಡಲು ನಿರಾಕರಿಸಿತು. ದಲೈಲಾಮ ಅವರನ್ನು ನೊಬೆಲ್‌ ಪ್ರಶಸ್ತಿ ಪ್ರದಾನ ಸಮಿತಿಯು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿತ್ತು.


♦.*ಸೆ.5:    ರಾಷ್ಟ್ರೀಯ ಸಣ್ಣ ಕೈಗಾರಿಕ ನಿಗಮದ (ಎನ್‌ಎಸ್‌ಐಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ರವೀಂದ್ರನಾಥ್‌ ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆರಾಷ್ಟ್ರೀಯ ಕೈಗಾರಿಕ ಹಣಕಾಸು ನಿಗಮದಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.


♦.*ಸೆ.5:   ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ ಸ್ಟಡಿ (ಐಐಎಎಸ್‌)ಯ ಮುಖ್ಯಸ್ಥರಾಗಿ ಚಂದ್ರಕಲಾ ಪಾಡಿಯ ಅವರು ನೇಮಕಗೊಂಡರು. ಪಾಡಿಯಾ ಅವರು ಈ ಸಂಸ್ಥೆಗೆ ನೇಮಕಗೊಂಡ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ.


♦.*ಸೆ.6:    ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬ್ಬಾಟ್‌ ಅವರು 11ನೇ ಶತಮಾನದ ಭಾರತೀಯ ವಿಗ್ರಹಗಳನ್ನು ಭಾರತ ಸರ್ಕಾರಕ್ಕೆ ಒಪ್ಪಿಸುವುದಾಗಿ ಪ್ರಕಟಿಸಿದರು. ಈ ವಿಗ್ರಹಗಳನ್ನು ಸುಮಾರು ಹತ್ತು ಶತಮಾನಗಳ ಹಿಂದೆ ಕಳವು ಮಾಡಿ ಅವುಗಳನ್ನು ಆಸ್ಟ್ರೇಲಿಯಾದಲ್ಲಿ ಇಡಲಾಗಿತ್ತು.


♦.*ಸೆ.7:    ಜವಾಹರ ಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರಿಯದರ್ಶಿನಿ ಮುಖರ್ಜಿ ಅವರಿಗೆ ಚೀನಾದ ಪ್ರತಿಷ್ಠಿತ ‘ಚೀನಾ ಬುಕ್‌ ಅವಾರ್ಡ್‌’ ಪ್ರಶಸ್ತಿ ಸಂದಿದೆ.


♦.*ಸೆ.8:    ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಬಹರೇನ್‌ ದೇಶಕ್ಕೆ ತೆರಳಿದರು.ಬಹರೇನ್‌ ದೇಶಕ್ಕೆ ಭೇಟಿ ನೀಡಿದ ಮೊದಲ ಮಹಿಳಾ ವಿದೇಶಾಂಗ ಸಚಿವೆ ಎಂಬ ಹೆಗ್ಗಳಿಕೆಗೆ ಸುಷ್ಮಾ ಸ್ವರಾಜ್‌ ಪಾತ್ರರಾಗಿದ್ದಾರೆ.


♦.*ಸೆ.9:    ಭಾರತದ ವೃತ್ತಿಪರ ಸ್ನೂಕರ್‌ ಆಟಗಾರ ಪಂಕಜ್‌ ಅಡ್ವಾಣಿ ನಿವೃತ್ತಿ ಘೋಷಿಸಿದರು. ಪಂಕಜ್‌ ಸ್ನೂಕರ್‌ ವಿಶ್ವ ಕಿರೀಟ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಟ್ರೋಫಿಗಳನ್ನು ಜಯಿಸಿದ್ದಾರೆ.


♦.*ಸೆ.10:    ಭಾರತದ ಹಿರಿಯ ಐಎಎಸ್‌ ಅಧಿಕಾರಿ ಸುಭಾಶ್‌ ಚಂದ್ರ ಗಾರ್ಗ್‌ ಅವರನ್ನು ವಿಶ್ವಬ್ಯಾಂಕ್‌ನ ಎಕ್ಸಿಕ್ಯೂಟಿವ್‌ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.


♦.*ಸೆ.11:    ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ ಪತ್ರಕರ್ತ ಜಿತೇಂದ್ರ ಪಾಲ್‌ ನಿಧನರಾದರು. ಅವರು ಸ್ವಾತಂತ್ರ್ಯ ಪೂರ್ವದ ಹಲವು ಪತ್ರಿಕೆಗಳಲ್ಲಿವರದಿಗಾರರಾಗಿ ಕೆಲಸ ಮಾಡಿದ್ದರು.

♦.*ಸೆ.12:    ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ ಅವರ ಆತ್ಮಕತೆ ‘ಅಂಡ್‌ ದೆನ್‌ ಒನ್‌ ಡೇ: ಎ ಮೆಮೊರ್‌’(And then One Day: A Memoir) ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.


♦.*ಸೆ.13:    ಐಎಸ್‌ಐಎಸ್‌ ಉಗ್ರರು ಬ್ರಿಟಿಷ್‌ ಪ್ರಜೆ ಡೇವಿಡ್‌ ಹೇನ್ಸ್‌ ಅವರ ತಲೆ ಕತ್ತರಿಸಿದ ವಿಡಿಯೊ ತುಣುಕನ್ನು ‘ಜಿಹಾದಿ’ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರು. ಡೇವಿಡ್‌ ಹೇನ್ಸ್‌ ಅವರನ್ನು ಸಿರಿಯಾ ದೇಶದಿಂದ ಅಪಹರಿಸಲಾಗಿತ್ತು.


♦.*ಸೆ.14:    ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ದೆಹಲಿ ಪೊಲೀಸರು ‘ಇ–ಪೊಲೀಸ್‌ ಠಾಣೆಯನ್ನು ಆರಂಭಿಸಿದರು. ಈ ಠಾಣೆಯಲ್ಲಿ ವಾಹನ ಕಳೆದುಕೊಂಡವರು ದೂರು ಸಲ್ಲಿಸಬಹುದು.


♦.*ಸೆ.15:    ದೂರದರ್ಶನದಲ್ಲಿ ಸುದ್ದಿ ವಾಚನ ಮಾಡುವ ಮೂಲಕ ದ್ವಿಲಿಂಗಿ ಪದ್ಮಿನಿ ಪ್ರಕಾಶ್‌ ನೂತನ ದಾಖಲೆ ಬರೆದರು.


♦.*ಸೆ.17:    ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಎರಡು ದಿನಗಳ ಸೌಹಾರ್ದ ಭೇಟಿಗಾಗಿ ವಿಯೆಟ್ನಾಂ ದೇಶಕ್ಕೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂ ಸೋಶಿಯಲ್‌ ರಿಪಬ್ಲಿಕ್‌ ದೇಶವಾಗಿವೆ.


♦.*ಸೆ.18:    ಲಲಿತಾ ಕುಮಾರ ಮಗಳಂ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.


♦.*ಸೆ.19:    ಪ್ರಾಚೀನ ನಳಂದ ವಿಶ್ವವಿದ್ಯಾಲಯವನ್ನು 800 ವರ್ಷಗಳ ಬಳಿಕ ಪುನರಾರಂಭಿಸಲಾಯಿತು.


♦.*ಸೆ.23:    ಹಿಂದಿ ಸಾಹಿತಿ ಗೋವಿಂದ್‌ ಮಿಶ್ರಾ 2013ನೇ ಸಾಲಿನ ಸರಸ್ವತಿ ಸಮ್ಮಾನ್‌ ಪ್ರಶಸ್ತಿಯನ್ನು ಸ್ವೀಕರಿಸಿದರು. 2008ರಲ್ಲಿ ಪ್ರಕಟವಾದ ‘ದೂಲ್‌ ಪದೂನ್‌ ಪರ್‌’ ಕಾದಂಬರಿಗೆ ಈ ಪುರಸ್ಕಾರ ಸಂದಿದೆ.


♦.*ಸೆ.24:    ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ತುಮಕೂರು ಸಮೀಪ ದೇಶದ ಮೊದಲ ಫುಡ್‌ಪಾರ್ಕ್‌ ಘಟಕವನ್ನು ಲೋಕಾರ್ಪಣೆ ಮಾಡಿದರು.


♦.*ಸೆ.25:    ಸಚಿನ್‌ ತೆಂಡೂಲ್ಕರ್‌ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟಿವಾ ಅವರು 201*ನೇ ಸಾಲಿನ ಬ್ರಾಡ್‌ಮನ್‌ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.


♦.*ಸೆ. 29:    ತಮಿಳುನಾಡಿನ ಮುಖ್ಯಮಂತ್ರಿಯಾಗಿ ಒ ಪನ್ನಿರ್‌ ಸೆಲ್ವಂ ಪ್ರಮಾಣವಚನ ಸ್ವೀಕರಿಸಿದರು.


♦.*ಸೆ.30:    ಟರ್ಕಿ ಸರ್ಕಾರ ಶಾಲಾ ಮಕ್ಕಳು ಟ್ಯಾಟು ಹಾಕುವುದರ ಮೇಲೆ ನಿಷೇಧ ಹಾಕಿತು. ಇದನ್ನು ವಿರೋಧಿಸಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿನೂರಕ್ಕೂ ಹೆಚ್ಚು ಮಕ್ಕಳು ಪೊಲೀಸರ ಗುಂಡಿಗೆ ಬಲಿಯಾದರು.

☀ರೆಪೋ ರೇಟ್ (Repo Rate), ರೆಪೋ ದರದ ಪರಿಣಾಮಗಳು:  (The Repo Rate and effects of the Repo Rate)

☀ರೆಪೋ ರೇಟ್ (Repo Rate), ರೆಪೋ ದರದ ಪರಿಣಾಮಗಳು:
(The Repo Rate and effects of the Repo Rate)

━━━━━━━━━━━━━━━━━━━━━━━━━━━━━━━━━━━━━━━━━━━━━

— ಅರ್ಥಶಾಸ್ತ್ರದ ವಿಷಯಕ್ಕೆ ಸಂಬಂಧಪಟ್ಟ ನೋಟ್ಸ್:

— ರೆಪೋ ರೇಟ್ ಹೆಚ್ಚಿಸಿರುವ ಅಥವಾ ಕಡಿಮೆಗೊಳಿಸಿರುವ ಸುದ್ದಿಯನ್ನು ನಾವು ನೋಡುತ್ತಲೇ ಇರುತ್ತೇವೆ. ಇದು ನಮಗೆ ನೇರವಾಗಿ ಸಂಬಂಧಿಸದ ವಿಷಯವಾದರೂ ನಮ್ಮ ದಿನನಿತ್ಯದ ಜೀವನದ ಮೇಲೆ, ನಾವು ಕೊಳ್ಳುವ ಸಾಲಗಳ ಮೇಲೆ ಇದರ ಪರಿಣಾಮ ಇರುತ್ತದೆ. ಹಾಗಾಗಿ ರೆಪೋ ರೇಟ್ ಹೆಚ್ಚು ಕಡಿಮೆಯಾದಂತೆ ನಾವು ತಗೆದುಕೊಂಡಿರುವ ಸಾಲಕ್ಕೆ ಕಟ್ಟಬೇಕಾದ ಬಡ್ಡಿ ಸಹ ಹೆಚ್ಚು ಕಡಿಮೆಯಾಗುವ ಸಾದ್ಯತೆ ಇರುತ್ತದೆ.



●•ರೆಪೋ ರೇಟ್ (Repo Rate) ಎಂದರೇನು?

✧.ರೆಪೋ ಎಂದರೆ ರೀಪರ್ಚೆಸ್ ರೇಟ್ (ಮರುಕೊಳ್ಳುವ ದರ). ಆರ್.ಬಿ.ಅಯ್.ನವರು ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರಕ್ಕೆ ರೆಪೋ ಎಂದು ಕರೆಯುತ್ತಾರೆ. ಇದು ಹಣಕಾಸಿನ ವಹಿವಾಟಿನಲ್ಲಿ ಒಂದು ಮುಕ್ಯವಾದ ಅಂಶ.

✧.ಬ್ಯಾಂಕ್ ಗಳಿಗೆ ತಮಗೆ ಹಣಬೇಕು ಎಂದನಿಸಿದಲ್ಲಿ ಆರ್.ಬಿ.ಅಯ್. ನಿಂದ ಸಾಲ ಪಡೆಯುತ್ತವೆ.ಆರ್.ಬಿ.ಅಯ್. ಹತ್ತಿರ ಸಾಲ ಪಡೆಯುವಾಗ ಬ್ಯಾಂಕ್ ಗಳು ತಮ್ಮಲ್ಲಿರುವ ಒಪ್ಪಿಗೆ ಪಡೆದ ಸರಕಾರಿ ಭದ್ರತೆಗಳನ್ನು ಅಡವಿಟ್ಟಿರುತ್ತಾರೆ.

✧.ಪಡೆದ ಸಾಲವನ್ನು ಇಂತಿಷ್ಟು ದಿನಗಳೊಳಗೆ ಬ್ಯಾಂಕ್ ಗಳು ತೀರಿಸಬೇಕು ಎಂದು ಆರ್.ಬಿ.ಅಯ್. ಕಟ್ಟಳೆ ವಿಧಿಸಿರುತ್ತದೆ. ಇಂತಿಷ್ಟು ದಿನದಲ್ಲಿ ಬ್ಯಾಂಕ್ ತಾನು ಪಡೆದಿರುವ ಸಾಲವನ್ನು ತೀರಿಸಬೇಕು.

✧.ಹಣವನ್ನು ಬ್ಯಾಂಕುಗಳಿಗೆ ಸಾಲವಾಗಿ ನೀಡಲು ಆರ್.ಬಿ.ಅಯ್. ಹಾಕುವ ಬಡ್ಡಿಗೆ ರೆಪೋ ಎಂದು ಕರೆಯಲಾಗುತ್ತದೆ.



●•ಸಾಲ ಕೊಡುವ ಬ್ಯಾಂಕ್ ಸಾಲ ಮಾಡುತ್ತದಾ?

✧.ನಮಗೆ ಹಣಕಾಸಿನ ತೊಂದರೆಯಾದಲ್ಲಿ (ತೊಂದರೆಯಾದಲ್ಲಿ ಎನ್ನುವುದಕ್ಕಿಂತ, ಅವಶ್ಯಕತೆ ಬಿದ್ದಲ್ಲಿ ಎಂದು ಹೇಳುವುದು ಒಳಿತು) ನಾವು ಬ್ಯಾಂಕ್ ನಿಂದ ಸಾಲ ತಗೆದುಕೊಳ್ಳುವ ಯೋಚನೆ ಮಾಡುತ್ತೇವೆ. ಇದಕ್ಕೆ ಬ್ಯಾಂಕ್ ಗಳು ಸಹ ತಾವು ನೀಡುವ ಸಾಲಕ್ಕೆ ಇಂತಿಷ್ಟು ಬಡ್ಡಿ ಹಾಕಿ ಹಿಂದಿರುಗಿಸಬೇಕು ಎಂದು ಕಟ್ಟಳೆ ಹಾಕುತ್ತವೆ.

✧.ಈ ಬ್ಯಾಂಕ್ ಗಳು ಸಹ ಮನೆ ಸಾಲ, ಬಂಡಿ ಸಾಲ, ಸ್ವಂತ ಸಾಲ, ಉದ್ದಿಮೆ ತೆರೆಯಲು ಸಾಲ, ಕೃಷಿ ಸಾಲ, ಹೀಗೆ ಹಲವಾರು ಸಾಲಗಳನ್ನು ಜನರಿಗೆ ನೀಡುತ್ತವೆ.

✧.ಒಂದು ವೇಳೆ ಆ ಬ್ಯಾಂಕ್ ಗೆ ಗ್ರಾಹಕರು ಹೆಚ್ಚಾಗಿ ಬ್ಯಾಂಕ್ ಗೆ ತನ್ನ ಗ್ರಾಹಕರಿಗೆ ನೀಡಲು ಬೇಕಿರುವ ಹಣ (ದುಡ್ಡು) ಕಡಿಮೆ ಬಿದ್ದಲ್ಲಿ ಆರ್.ಬಿ.ಅಯ್. ನಿಂದ ತಮಗೆ ಬೇಕಾದ(ಬೇಕಾದಷ್ಟು) ಸಾಲ ಪಡೆಯುತ್ತವೆ. ಆಗ ಸಾಲ ಕೊಡುವ ಅರ್.ಬಿ.ಅಯ್. ತಾವು ಕೊಡುವ ದುಡ್ಡಿಗೆ ಬಡ್ಡಿ ಹಾಕುತ್ತವೆ.



●•ರೆಪೋ ದರದಲ್ಲಾಗುವ ಏರಿಳಿತದಿಂದ ನಮ್ಮ ಮೇಲೆ ಇದರ ಪರಿಣಾಮವೇನು?

✧.ಒಂದು ವೇಳೆ ರೆಪೋ ದರ ಕಡಿಮೆ ಇದ್ದಲ್ಲಿ ಬ್ಯಾಂಕ್ ಗಳು ಹೆಚ್ಚಿನ ದುಡ್ಡನ್ನು ಆರ್.ಬಿ.ಅಯ್.ನಿಂದ ಪಡೆದು ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ.

✧.ಉದಾ: ಸಾಲಕ್ಕೆ ಸದ್ಯದ ರೆಪೋ ದರ 8.50 % ಇದೆ ಎಂದುಕೊಳ್ಳಿ, ಆಗ ಬ್ಯಾಂಕ್ ನ ಬಡ್ಡಿ ದರ 10-11% ಇರುತ್ತದೆ. ಕೆಲವು ವರ್ಷಗಳ ಹಿಂದೆ 2005 ರಲ್ಲಿ ರೆಪೋ ದರ 4.75% ಇತ್ತು ಆಗ ಬ್ಯಾಂಕ್ ಗಳು ಸುಮಾರು 7-8%ದರದಲ್ಲಿ ಸಾಲ ನೀಡುತ್ತಿದ್ದವು.

✧.ಅಂದರೆ ರೆಪೋ ದರ ಕಡಿಮೆ ಇದ್ದರೆ ನಮಗೆ ಮನೆ/ಬಂಡಿ/ಸ್ವಂತ ಸಾಲಗಳು ಕಡಿಮೆ ಬಡ್ಡಿಗೆ ಸಿಗುತ್ತವೆ.

✧.ರೆಪೋ ದರ ಹೆಚ್ಚಾದಲ್ಲಿ ನಾವು ಬ್ಯಾಂಕ್ ನಲ್ಲಿ ಇಡುವ ಹಣಕ್ಕೆ ಕೊಡುವ ಬಡ್ಡಿಯ ದರವೂ ಹೆಚ್ಚುತ್ತದೆ.

✧.ಆದರೆ ರೆಪೋ ದರ ಕಡಿಮೆ ಸಮಯದ ಅಂತರದಲ್ಲಿ ಹೆಚ್ಚು ಕಡಿಮೆಯಾಗುವುದರಿಂದ ಬ್ಯಾಂಕ್ ಗಳು ಇಂತಹ ನಿರ್ದಾರಗಳನ್ನು ಸಾಲದ ಮೇಲಿನ ಬಡ್ಡಿಏರಿಸುವಷ್ಟು ಬೇಗ ತೆಗೆದುಕೊಳುವುದಿಲ್ಲ.

✧.ರೆಪೋ ದರವನ್ನು ಹಣಕಾಸಿನರಿಮೆಯಲ್ಲಿ ಒಂದು ಮಟ್ಟ ಗುರುತು ಎಂದು ಹೇಳಲಾಗುತ್ತದೆ. ಕಡಿಮೆ ಬಡ್ಡಿ ದರವಿದ್ದಲ್ಲಿ ಒಂದು ನಾಡಿನ ಆರ್ಥಿಕತೆಗೆ ಹೆಚ್ಚಿನ ಸಹಾಯ ಒದಗಿಸಿದಂತಾಗುತ್ತದೆ.

✧.ಕಡಿಮೆ ಬಡ್ಡಿಗೆ ಸಾಲ ಸಿಗುವಾಗ ಜನರು ತಮ್ಮ ಕೆಲಸಗಳಲ್ಲಿ ಮತ್ತು ಸಾಮಾನುಗಳನ್ನು ಕೊಳ್ಳುವುದಕ್ಕೆ ಬಳಸುತ್ತಾರೆ. ಕಡಿಮೆ ಬಡ್ಡಿ ದರದ ನಡೆ ಮಾರುಕಟ್ಟೆಗೆ ಒಳ್ಳೆಯ ಬೆಳವಣಿಗೆ ಎಂದೇ ಪರಿಗಣಿಸಲಾಗುತ್ತದೆ. ಹಣಕಾಸಿನ, ಆಟೋಮೊಬಯ್ಲ್ ಮತ್ತು ಮನೆಕಟ್ಟುವಿಕೆ(ರಿಯಲ್ ಎಸ್ಟೇಟ್) ಉದ್ದಿಮೆಯಲ್ಲಿ ಹೆಚ್ಚಿನ ಚುರುಕು ಕಾಣಿಸುತ್ತದೆ.

(Courtesy: HONALU)

Monday 16 February 2015

☀ ಅಗಸ್ಟ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of August 2014)

☀ ಅಗಸ್ಟ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of August 2014)


★ಅಗಸ್ಟ್ 2014
(August 2014)


━━━━━━━━━━━━━━━━━━━━━━━━━━━━━━━━━━━━━━━━━━━━━


♦.ಆ. 1:— ಈಸ್ಟ್‌ ಬೆಂಗಾಲ್‌ ಕ್ಲಬ್‌ ನೀಡುವ 2014ನೇ ಸಾಲಿನ ‘ಭಾರತ್‌ ಗೌರವ್‌’ ಪ್ರಶಸ್ತಿಯನ್ನು ಬಚೇಂದ್ರಿ ಪಾಲ್‌ ಅವರಿಗೆ ನೀಡಲಾಯಿತು. ಬಚೇಂದ್ರಿ ಪಾಲ್‌ ಮೌಂಟ್‌ ಎವರೆಸ್ಟ್‌ ಶಿಖರ ಹತ್ತಿದ ಭಾರತದ ಮೊದಲ ಮಹಿಳೆ.


♦.ಆ. 2:— 2014ನೇ ಸಾಲಿನ ರಾಜೀವ್ ಗಾಂಧಿ ಸದ್ಭಾವನ ಪ್ರಶಸ್ತಿಗೆ ಹಿರಿಯ ಸಾಮಾಜಿಕ ಸೇವಾಕರ್ತ ಮುಜಾಫರ್‌ ಆಲಿ ಆಯ್ಕೆಯಾದರು. ಆಲಿ ಅವರು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.


♦.ಆ. 3:— ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ತೆರೆ ಬಿದ್ದಿತು. ಈ ಟೂರ್ನಿಯಲ್ಲಿ ಭಾರತ ಒಟ್ಟು 64 ಪದಕಗಳನ್ನು ಗೆಲ್ಲುವ ಮೂಲಕ ಐದನೇ ಸ್ಥಾನ ಪಡೆಯಿತು.


♦.ಆ. 3—: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪಿ.ಕಶ್ಯಪ್‌ ಪುರುಷರ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದರು. ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಕಶ್ಯಪ್‌ ಅವರದ್ದು.


♦.ಆ. 4:— ಮಾಜಿ ವಿದೇಶಾಂಗ ಅಧಿಕಾರಿ ಅರವಿಂದ್‌ ಗುಪ್ತ ಅವರನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರರನ್ನಾಗಿ ನೇಮಕ ಮಾಡಿತು. ಗುಪ್ತ ಈ ಹಿಂದೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.


♦.ಆ. 5:— ಖ್ಯಾತ ಕಾರ್ಟೂನಿಸ್ಟ್‌ ‘ಪ್ರಾಣ್‌’ ನಿಧನರಾದರು. ಅವರು ರಚಿಸಿದ ಧಾರಾವಾಹಿ (ಕಾರ್ಟೂನ್‌) ‘ಚಾಚಾ ಚೌಧರಿ’ ಭಾರಿ ಜನಪ್ರಿಯತೆ ಪಡೆದಿತ್ತು.


♦.ಆ. 6:— ಹೂಡಿಕೆ ಮತ್ತು ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಂತೆ ಸೆಕ್ಯೂರಿಟಿಸ್‌ ಲಾ ವಿಧೇಯಕವನ್ನು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.


♦.ಆ. 7:— ಮಾಜಿ ಕ್ರಿಕೆಟಿಗ ಕಪಿಲ್‌ದೇವ್‌ ಅವರನ್ನು ಅರ್ಜುನ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮತ್ತು ಮಾಜಿ ಹಾಕಿ ಆಟಗಾರ ಅಜಿತ್‌ಪಾಲ್‌ ಸಿಂಗ್‌ ಅವರನ್ನು ‘ದ್ರೋಣಾಚಾರ್ಯ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು.


♦.ಆ. 8:— ಕಾರ್ಖಾನೆಗಳು ಸಿಲಿಕಾನ್‌ ಬಳಸಿದ ನಂತರ ಅದರ ತ್ಯಾಜ್ಯವನ್ನು ಏನು ಮಾಡುತ್ತವೇ ಎಂಬುದನ್ನು ತಿಳಿಯಲು ಉತ್ತರಖಂಡ ಸರ್ಕಾರ ಹಿರಿಯ ವಿಜ್ಞಾನಿ ಎಸ್‌. ರಾಜಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು.


♦.ಆ. 10:— ಪೊಲ್ಯಾಂಡ್‌ನಲ್ಲಿ  ನಡೆದ ವಿಶ್ವಕಪ್‌ ಅರ್ಚರಿಯಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕವನ್ನು ಗೆದ್ದಿತು. ದೀಪಿಕಾ ಕುಮಾರಿ ಈ ತಂಡದ ನಾಯಕಿಯಾಗಿದ್ದರು.


♦.ಆ. 11:— ಭಾರತದ ಮೊದಲ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ರಾಜಕಾರಣಿ ರೇಷ್ಮಾಲಾಲ್‌ ಜಂಗಡೆ ನಿಧನರಾದರು. ಮೂಲತಃ ಮಧ್ಯಪ್ರದೇಶ ರಾಜ್ಯದವರಾದ ಇವರು ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.


♦.ಆ. 12:— ರಾಜ್ಯದ ಜನಪ್ರಿಯ ಜಾನಪದ ಕಲಾವಿದೆ ಬುರ್ರಾ ಕಥಾ ಈರಮ್ಮ ನಿಧನರಾದರು. ಇವರು ಬಳ್ಳಾರಿ ಜಿಲ್ಲೆಯವರು.


♦.ಆ.12:— ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಗೆ ಬಿಜೆಪಿಯ ಹಿರಿಯ ನಾಯಕ ಅರುಣ್‌ ಜೇಟ್ಲಿ, ಕಾಂಗ್ರೆಸ್‌ನ ಕರಣ್‌ ಸಿಂಗ್‌ ಮತ್ತು ಸಂಯುಕ್ತ ಜನತಾದಳ ಪಕ್ಷದ ಶರದ್‌ ಯಾದವ್‌ ಅವರನ್ನು ಆಯ್ಕೆ ಮಾಡಲಾಯಿತು. ಈ ಪ್ರಶಸ್ತಿಯನ್ನು ರಾಷ್ಟ್ರಪತಿ ನೀಡುತ್ತಾರೆ.


♦.ಆ. 13:— ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗೌರ್ನರ್‌ ಭೀಮಲ್‌ ಜಲನ್‌ ಅವರನ್ನು ‘ವೆಚ್ಚ ವ್ಯವಸ್ಥಾಪನ ಮಂಡಳಿ’ಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು.


♦.ಆ.13:— ಲೋಕಸಭೆಯ ಡೆಪ್ಯೂಟಿ  ಸ್ಪೀಕರ್‌ ಆಗಿ ಎಂ. ತಂಬಿದೊರೈ ಆಯ್ಕೆಯಾಗಿದ್ದಾರೆ. ಇವರು ಎಐಎಡಿಎಂಕೆ ಪಕ್ಷದ ಸಂಸದರು.


♦.ಆ.13:— ಸೀಮಾಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯವಾಡ ಆಂಧ್ರದ ರಾಜಧಾನಿಯಾಗಲಿದೆ ಎಂದು ಪ್ರಕಟಿಸಿದರು.


♦.ಆ.14:— ಭಾರತವು ಮೊದಲ ಭಾರಿಗೆ 2015ರ ಪ್ಯಾರಾ–ಗ್ಲೈಡಿಂಗ್‌ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಇದು ಹಿಮಾಚಲ ಪ್ರದೇಶದಲ್ಲಿ ನಡೆಯಲಿದೆ.


♦.ಆ. 14:— ಇರಾಕ್‌ ಪ್ರಧಾನಿ ನೂರಿ ಅಲ್‌–ಮಲಿಕಿ ಅವರು ರಾಜೀನಾಮೆ ನೀಡಿದರು.


♦.ಆ. 15:— ಕೇಂದ್ರ ಸರ್ಕಾರ 60 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಭೀಮಾ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿತು.


♦.ಆ.16:— ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ರಜನಿ ರಾಜ್ದಾನ್‌ ಅವರನ್ನು ನೇಮಕ ಮಾಡಲಾಯಿತು.


♦.ಆ.17:— ಚಿಂಚಿನಾಟಿ ಟೆನಿಸ್‌ ಓಪನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ರೋಜರ್‌ ಫೇಡರರ್‌ ಚಿಂಚಿನಾಟಿ ಟ್ರೋಫಿ ಗೆದ್ದರು. ಆ ಮೂಲಕ ಅವರು ಒಟ್ಟು 80 ಅಂತರರಾಷ್ಟ್ರೀಯ ಟ್ರೋಫಿಗಳನ್ನು ಗೆದ್ದಂತಾಗಿದೆ.


♦.ಆ. 18:— ಬ್ರೆಜಿಲ್‌ನ ಅಧ್ಯಕ್ಷೀಯ ಅಭ್ಯರ್ಥಿ ಎಡ್ವರ್ಡೊ ಕಾಂಪೊಸ್‌ ನಿಗೂಢವಾಗಿ ಸಾವನ್ನಪ್ಪಿರುವ ವಿಷಯವನ್ನು ಬ್ರೆಜಿಲ್‌ ಸರ್ಕಾರ ಖಚಿತಪಡಿಸಿತು. ಕಾಂಪೊಸ್‌ ಆಗಸ್ಟ್‌ 13ರಂದು ಮೃತಪಟ್ಟಿದ್ದರು.


♦.ಆ. 19:— ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರನ್ನು ಭಾರತೀಯ ಕ್ರಿಕೆಟ್‌ ತಂಡದ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.


♦.ಆ. 22:— ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್‌. ಅನಂತಮೂರ್ತಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ಸಂಸ್ಕಾರ ಕಾದಂಬರಿ 15ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.


♦.ಆ.24:— ಗಾಂಧಿ ಚಿತ್ರವನ್ನು ನಿರ್ಮಾಣ ಮಾಡಿದ್ದ ರಿಚರ್ಡ್‌ ಅಟೆನ್‌ಬರ್ಗ್‌ ಅವರು ಲಂಡನ್‌ನಲ್ಲಿ ನಿಧನರಾದರು. ಈ ಚಿತ್ರ ಆಸ್ಕರ್‌ ಪ್ರಶಸ್ತಿಯನ್ನು ಪಡೆದಿತ್ತು.


♦.ಆ. 25:— ವಿಶ್ವದಲ್ಲಿಯೇ ಮೊದಲ ಬಳಕೆಯ ತಾಮ್ರ ಲೋಹವು ಇಸ್ರೇಲ್‌ ದೇಶದಲ್ಲಿ ಪತ್ತೆಯಾಗಿದೆ. ಇಲ್ಲಿಯೇ ಮಾನವನ ಮೊದಲ ನಾಗರಿಕತೆ ಆರಂಭವಾಗಿರಬಹುದು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


♦.ಆ. 26:— ಕರ್ನಾಟಕದ ರಾಜ್ಯಪಾಲರನ್ನಾಗಿ ವಜುಬಾಯಿ ವಾಲ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು.


♦.ಆ 28:— ಕೇಂದ್ರ ಸರ್ಕಾರ ಡಾಟ್‌ ಕಾಮ್‌, ಡಾಟ್‌ ಇನ್‌ ಡೊಮೈನ್‌ಗಳ ಮಾದರಿಯಂತೆ ‘ಡಾಟ್‌ ಭಾರತ್‌’ ಡೊಮೈನ್‌ ಅನ್ನು ಲೋಕಾರ್ಪಣೆ ಮಾಡಿತು. ಇದು ದೇವನಾಗರಿ ಭಾಷೆಯಲ್ಲಿ ಸಹ ಲಭ್ಯವಿದೆ.

(ಕೃಪೆ: ಪ್ರಜಾವಾಣಿ)

Sunday 15 February 2015

☀.ಭಾರತದ ಬಂದರುಗಳು ಮತ್ತು ಅವುಗಳ ಪ್ರಮುಖ ಲಕ್ಷಣಗಳು: (Ports in India and their Salient Features)

☀.ಭಾರತದ ಬಂದರುಗಳು ಮತ್ತು ಅವುಗಳ ಪ್ರಮುಖ ಲಕ್ಷಣಗಳು:
(Ports in India and their Salient Features)

♦. ಭಾರತದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━


●.ಬಂದರು ಎಂದರೇನು?

—ಹಡಗುಗಳು, ದೋಣಿಗಳು, ಮತ್ತು ಸರಕು ದೋಣಿಗಳು ಬಿರುಗಾಳಿಯ ಹವೆಯಿಂದ ಆಶ್ರಯ ಪಡೆಯುವ ಸ್ಥಳವಾಗಿದೆ ಅಥವಾ ಭವಿಷ್ಯದ ಬಳಕೆಗಾಗಿ ಸಂಗ್ರಹಿಸಲಾಗುತ್ತದೆ. ಬಂದರುಗಳು ನೈಸರ್ಗಿಕ ಅಥವಾ ಕೃತಕವಾಗಿರಬಹುದು.


●.ಕೃತಕ ಬಂದರುಗಳು ಎಂದರೇನು ?

—ಕೃತಕ ಬಂದರುಗಳನ್ನು ಸಾಮಾನ್ಯವಾಗಿ ಪೋರ್ಟ್‌ಗಳಾಗಿ ಬಳಕೆಗೆ ನಿರ್ಮಿಸಲಾಗುತ್ತದೆ.ಕೃತಕ ಬಂದರು ಉದ್ದೇಶಪೂರ್ವಕವಾಗಿ ನಿರ್ಮಿಸಿದ ಅಲೆತಡೆಗಳನ್ನು ಕಡಲಗೋಡೆಗಳನ್ನು ಅಥವಾ ಜೆಟ್ಟಿಗಳನ್ನು ಹೊಂದಿರುತ್ತದೆ.


●.ನೈಸರ್ಗಿಕ ಬಂದರುಗಳು ಎಂದರೇನು ?

 —ಭಾರತ ನೈಸರ್ಗಿಕ ಬಂದರು ಭೂರೂಪವಾಗಿದ್ದು, ನೀರಿನ ಸಂಗ್ರಹದ ಭಾಗವನ್ನು ರಕ್ಷಿಸಲಾಗಿದ್ದು, ಲಂಗರುದಾಣದ ಸೌಲಭ್ಯಕ್ಕೆ ಸಾಕಷ್ಟು ಆಳವಾಗಿದೆ. ಅಂತಹ ಅನೇಕ ಬಂದರುಗಳನ್ನು ಅಳಿವೆಗಳೆಂದು ಕರೆಯಲಾಗುತ್ತದೆ.


✧.ಭಾರತದಲ್ಲಿ ಜಲಮಾರ್ಗಗಳು ಪ್ರಾಧಿಕಾರವು ಭಾರತದ ಬಂದರುಗಳನ್ನು ಪ್ರಮುಖ, ಸಣ್ಣ ಮತ್ತು ಮಧ್ಯಂತರ ಬಂದರುಗಳೆಂದು ಮೂರು ವರ್ಗಗಳಾಗಿ ವಿಂಗಡಿಸುತ್ತದೆ.

✧.ಭಾರತವು ಸುಮಾರು 190 ಬಂದರುಗಳನ್ನು ಹೊಂದಿದ್ದು, 12 ಪ್ರಮುಖ ಮತ್ತು ಉಳಿದ ಎಲ್ಲಾ ಸಣ್ಣ ಮತ್ತು ಮಧ್ಯಂತರ ಬಂದರುಗಳಾಗಿ ಹೊಂದಿದೆ.


★.ಭಾರತದ ಪ್ರಮುಖ 12 ಬಂದರುಗಳು:


★.ಪೂರ್ವ ಕರಾವಳಿಯಲ್ಲಿ..

1.ಕಲ್ಕತ್ತಾ ಬಂದರು •—————• ಪಶ್ಚಿಮ ಬಂಗಾಳ (ಹಲ್ದಿಯಾ ಸೇರಿದಂತೆ)

2.ಪಾರಾದೀಪ ಬಂದರು •—————• ಒರಿಸ್ಸಾ.

3.ವಿಶಾಖಪಟ್ಟಣಂ ಬಂದರು •—————• ಆಂಧ್ರಪ್ರದೇಶ

4.ಚೆನ್ನೈ ಬಂದರು •—————• ತಮಿಳುನಾಡು

5.ಎನ್ನೋರ್ ಬಂದರು •—————• ತಮಿಳುನಾಡು

6.ಟುಟಿಕೋರಿನ್ ಬಂದರು •—————• ತಮಿಳುನಾಡು


★.ಪಶ್ಚಿಮ ಕರಾವಳಿಯಲ್ಲಿ ...

7.ಕೊಚ್ಚಿನ್ ಬಂದರು •—————• ಕೇರಳ

8.ನವ ಮಂಗಳೂರು ಬಂದರು •—————• ಕರ್ನಾಟಕ

9.ಮರ್ಮಗೋವ ಬಂದರು •—————• ಗೋವಾ

10.ಜವಾಹರ ಲಾಲ ನೆಹರು ಬಂದರು •—————• ಮಹಾರಾಷ್ಟ್ರ

11.ಮುಂಬಯಿ ಬಂದರು •—————• ಮಹಾರಾಷ್ಟ್ರ

12.ಕಾಂಡ್ಲಾ ಬಂದರು •—————• ಗುಜರಾತ್


★.ಪ್ರಮುಖ ಲಕ್ಷಣಗಳು: (Salient Features)

●. ಕೋಲ್ಕತಾ ಬಂದರು (ಹಲ್ದಿಯಾ ಸೇರಿದಂತೆ) (Kolkata Port (including Haldia)):
—ಕೋಲ್ಕತಾದ ಬಂಗಾಳ ಕೊಲ್ಲಿಯಿಂದ 128 ಕಿ.ಮೀ, ದೂರದಲ್ಲಿರುವ ಹೂಗ್ಲಿ ನದಿಯ ತೀರದಲ್ಲಿದೆ.
*ಇದು ಒಂದು ನದಿ ತೀರದ ಬಂದರಾಗಿದೆ.
•.ಕೋಲ್ಕತ್ತಾ ಬಂದರನ್ನು ಭಾರತದ ಚಹದ ಬಂದರು ಎಂದು ಕರೆಯಲಾಗುತ್ತಿದೆ.

●.ಹಾಲ್ಡಿಯಾ ಬಂದರು (Haldia) :
—ಕೊಲ್ಕತ್ತಾ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರಾಗಿದೆ.
ಕೋಲ್ಕತಾ ಬಂದರಿನ ವಿಪರೀತ ಹೂಳು ತುಂಬುವಿಕೆಯಿಂದಾಗುತ್ತಿದ್ದ ದೊಡ್ಡ ಹಡಗುಗಳು ಪ್ರವೇಶ ತಡೆಯನ್ನು ನಿವಾರಿಸಲು ಈ ಹಲ್ದಿಯಾ ಬಂದರನ್ನು ಅಭಿವೃದ್ಧಿಪಡಿಸಲಾಯಿತು.

●.ಪಾರದೀಪ್ ಬಂದರು (Paradip Port):
— ಒರಿಸ್ಸಾದ ಬಂಗಾಳ ಕೊಲ್ಲಿಯ ತೀರದಲ್ಲಿದೆ.
ಭಾರತವು ಇಲ್ಲಿಂದ ಜಪಾನ್ ಗೆ ಕಚ್ಚಾ ಕಬ್ಬಿಣವನ್ನು ರಫ್ತು ಮಾಡುತ್ತದೆ.

●.ವಿಶಾಖಪಟ್ಟಣಂ ಬಂದರು (Vishakhapatnam Port):
— ಇದು ಅತ್ಯಂತ ಆಳವಾದ ಬಂದರಾಗಿದ್ದು, ಆಂಧ್ರಪ್ರದೇಶದಲ್ಲಿದೆ.
 ಇದು ಭಿಲಾಯಿ ಮತ್ತು ರೂರ್ಕೆಲಾ ಪ್ರದೇಶಗಳ ಉಕ್ಕು ಉತ್ಪಾದನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತದೆ.

●.ಚೆನೈ ಬಂದರು (Chennai Port):
— ಹಳೆಯ ಕೃತಕ ಬಂದರು.
ಈ ಬಂದರು ದಟ್ಟಣೆಯನ್ನು ನಿರ್ವಹಿಸುವ ಸಾಮರ್ಥ್ಯದ ವಿಷಯದಲ್ಲಿ ಎರಡನೇ ಮುಂಬೈ ನಂತರ ಸ್ಥಾನದಲ್ಲಿದೆ.

●.ಎನ್ನೋರ್ ಬಂದರು (Ennore Port):
— ಇದನ್ನು 2001ರಲ್ಲಿ ಪ್ರಮುಖ ಬಂದರು ಎಂದು ಘೋಷಿಸಲಾಯಿತು.
 ಇದು ಖಾಸಗಿ (ಕಾರ್ಪೊರೇಟ್) ಸಹಭಾಗಿತ್ವದಲ್ಲಿರುವ ಮೊದಲ ಬಂದರಾಗಿದೆ.
ಉಷ್ಣ ಸ್ಥಾವರಕ್ಕೆ ಬೇಕಾದ ಕಲ್ಲಿದ್ದಲನ್ನು ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿ ಪವರ್ ಸ್ಟೇಷನ್ ಗೆ ಪೂರೈಸಲು ಈ ಬಂದರನ್ನು ಎಲ್ಲಾ ರೀತಿಯಿಂದ ಸುಸಜ್ಜಿತ ಆಧುನೀಕರಣಗೊಳಿಸಲಾಗಿದೆ.

●.ಟುಟಿಕೊರಿನ್ ಬಂದರು (Tuticorin Port):
— ಇದು ಪಾಂಡ್ಯ ರಾಜರ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿತು.
ಇದು ಕೃತಕ ಆಳವಾದ ಸಮುದ್ರದ ಬಂದರನ್ನು ಹೊಂದಿದೆ.

●.ಕೊಚ್ಚಿನ್ ಬಂದರು (Cochin Port):
— ಇದು ಕೇರಳ ಕರಾವಳಿಯಲ್ಲಿರುವ ಉತ್ತಮವಾದ ನೈಸರ್ಗಿಕ ಬಂದರು.
ಚಹಾ, ಕಾಫಿ ಮತ್ತು ಮೆಣಸು ಪದಾರ್ಥಗಳ ರಫ್ತು ಹಾಗು ಪೆಟ್ರೋಲಿಯಂ ಮತ್ತು ರಸ ಗೊಬ್ಬರಗಳ ಆಮದನ್ನು ನಿಭಾಯಿಸುತ್ತದೆ.

●.ನವ ಮಂಗಳೂರು ಬಂದರು (New Mangalore Port):
— ಇದನ್ನು 'ಕರ್ನಾಟಕದ ದ್ವಾರ' ಎಂದು ಕರೆಯುತ್ತಾರೆ.
ಕುದುರೆಮುಖದಲ್ಲಿ ತೆಗೆಯುವ ಕಬ್ಬಿಣದ ಅದಿರಿನ ರಫ್ತು ನಿಭಾಯಿಸುತ್ತದೆ.

●.ಮರ್ಮಗೋವಾ ಬಂದರು (Marmugao Port) :
— ಮರ್ಮಗೋವಾ ಬಂದರು ಗೋವಾ ರಾಜ್ಯದ ಝವಾರಿ ಕೊಲ್ಲಿಯ ಪ್ರದೇಶದಲ್ಲಿದೆ.
ಇದು ನೌಕಾ ನೆಲೆಯನ್ನು ಹೊಂದಿದ್ದು, ಭಾರತದ ಪ್ರಮುಖ ಕಬ್ಬಿಣದ ಅದಿರಿನ ರಫ್ತಿಗೆ ಹೆಸರಾದ ಬಂದರಾಗಿದೆ.

●.ಮುಂಬೈ ಬಂದರು (Mumbai Port):
— ಇದು ಒಂದು ನೈಸರ್ಗಿಕ ಬಂದರು.
ಭಾರತದ ಹೊಸ ಅತಿ ಜನನಿಬಿಡ ಬಂದರಾಗಿದೆ.

●.ನವಸೇವಾ ಬಂದರು (Nhava Sheva) :
— ಇದನ್ನು ಮುಂಬೈ ಬಂದರು ಬಳಿ ಅಭಿವೃದ್ಧಿಪಡಿಸಲಾಗುತ್ತಿದೆ.
ಮುಂಬಯಿ ಬಂದರಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ನವಶೇವಾ ಬಂದರನ್ನು ನಿರ್ಮಿಸಲಾಗಿದೆ.

●. ಜವಾಹರಲಾಲ್ ನೆಹರು ಬಂದರು (Jawaharlal Nehru Port):
— ವಿಶ್ವದ ವೇಗವಾಗಿ ಬೆಳೆಯುತ್ತಿರುವ ಬಂದರುಗಳಲ್ಲಿ ಇದು 5 ಸ್ಥಾನದಲ್ಲಿದೆ

●.ಕಾಂಡ್ಲಾ ಬಂದರು (Kandla Port) :
— ಇದನ್ನು ಕರಾಚಿ ಬಂದರಿನ ವಿಭಜನೆಯ ನಂತರ ಪರ್ಯಾಯವಾಗಿ ಅಭಿವೃದ್ಧಿಪಡಿಸಲಾಯಿತು.
ಇದು ಒಂದು ಉಬ್ಬರವಿಳಿತದ ಬಂದರಾಗಿದ್ದು, ಮುಕ್ತ ವ್ಯಾಪಾರ ವಲಯವಾಗಿದೆ.
 ಇದು ಕಛ್ ಖಾರಿಯ ರಣ್ ಪ್ರದೇಶದ ಶಿರೋಭಾಗದಲ್ಲಿದೆ.


☀. ಭಾರತದ ಜಲ ಸಾರಿಗೆ ಮತ್ತು ದೇಶದ 101 ನದಿಗಳ ಜಲ ಮಾರ್ಗ ಯೋಜನೆ: (Water Transport of India and The country's 101 rivers waterways plan)

☀. ಭಾರತದ ಜಲ ಸಾರಿಗೆ  ಮತ್ತು  ದೇಶದ 101 ನದಿಗಳ ಜಲ ಮಾರ್ಗ ಯೋಜನೆ:
(Water Transport of India and The country's 101 rivers waterways plan)

♦. ಭಾರತದ ಭೂಗೋಳ


━━━━━━━━━━━━━━━━━━━━━━━━━━━━━━━━━━━━━━━━━━━━━

✧.ಭಾರತದ ಜಲ ಸಾರಿಗೆಯು ಅತ್ಯಂತ ಸಮರ್ಥ, ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ಸಾರಿಗೆಯಾಗಿದೆ. ಭಾರತೀಯ ಸಂಚಾರ ಯೋಗ್ಯ ಜಲಮಾರ್ಗಗಳು ನದಿಗಳು, ಕಾಲುವೆಗಳು, ಹಿನ್ನೀರು ಇತ್ಯಾದಿಗಳ ಮೂಲಕ ಕಂಡುಬರುತ್ತವೆ.

✧.ಆರ್ಥಿಕ ಪ್ರಗತಿಯ ವೇಗ ಹೆಚ್ಚಿಸಲು ದೇಶದ 101 ನದಿಗಳನ್ನು ಜಲ ಮಾರ್ಗಗಳಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ.

✧.‘ಜಲ ಮಾರ್ಗಗಳ ನಿರ್ಮಾಣ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಜಲ ಮಾರ್ಗಗಳಾಗಿ ಪರಿವರ್ತಿಸಲು 101 ನದಿಗಳನ್ನು ಗುರುತಿಸಲಾಗಿದೆ. ಇದು ಅತ್ಯಂತ ಅಗ್ಗದ ಸಂಚಾರ ವ್ಯವಸ್ಥೆಯಾಗಲಿದೆ.

✧.ಯಾವುದೇ ನದಿಯನ್ನು ಜಲ ಮಾರ್ಗವಾಗಿ ಪರಿವರ್ತಿಸಲು ಅವಕಾಶ ನೀಡುವ ಮಸೂದೆಗೆ ಸಂಸತ್ತಿನ ಒಪ್ಪಿಗೆ ಬೇಕಾಗಿದೆ. ಈ ತನಕ ಸರ್ಕಾರ ಐದು ನದಿಗಳನ್ನು ಮಾತ್ರ ಜಲಮಾರ್ಗಗಳಾಗಿ ಗುರುತಿಸಿದೆ.

✧.ರಸ್ತೆ ಮತ್ತು ರೈಲು ಸಾರಿಗೆಗಿಂತ ಜಲ ಸಾರಿಗೆ ಅಗ್ಗ. ಜಲ ಸಾರಿಗೆ ತಗಲುವ ವೆಚ್ಚ ಕಿಲೋಮೀಟರ್‌ಗೆ 50 ಪೈಸೆ ಮಾತ್ರ. ಹಾಗಿದ್ದರೂ ಜಲ ಸಾರಿಗೆಯ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿಲ್ಲ.

✧.ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳಲಿದೆ. ಜಲ ಮಾರ್ಗಗಳು ಆರ್ಥಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಲಿವೆ. ನದಿ, ಸರೋವರ, ಕಾಲುವೆ, ಖಾರಿಗಳು, ಹಿನ್ನೀರು ಇತ್ಯಾದಿಯನ್ನು ಒಳನಾಡು ಜಲಸಾರಿಗೆಗೆ ಬಳಸಿ ಕೊಳ್ಳಲಾಗುವುದು. ಇವುಗಳಲ್ಲಿ 14,500 ಕಿಲೋ ಮೀಟರ್‌ ಜಲ ಮಾರ್ಗ ಅಭಿವೃದ್ಧಿಗೆ ಅವಕಾಶ ಇದೆ.

✧.ಪ್ರಧಾನ ಮಂತ್ರಿ ಜಲ ಮಾರ್ಗ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ. ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರವು (ಐಡಬ್ಲ್ಯುಎಐ) ಇತ್ತೀಚೆಗೆ ರಾಷ್ಟ್ರೀಯ ಜಲಮಾರ್ಗ 5 ಅಭಿವೃದ್ಧಿಗೆ ಒಡಿಶಾ ಸರ್ಕಾರ, ಪಾರಾದೀಪ್‌ ಬಂದರು ಮತ್ತು ಧಮ್ರಾ ಬಂದರುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

✧.ರಾಷ್ಟ್ರೀಯ ಜಲಮಾರ್ಗ–5 ಅಭಿವೃದ್ಧಿಗೆ ಪೂರ್ವ ಕರಾವಳಿ ಕಾಲುವೆಯನ್ನು ಬ್ರಹ್ಮಿಣಿ ಮತ್ತು ಮಹಾನದಿ ಮುಖಜ ಭೂಮಿಯ ನದಿಗಳೊಂದಿಗೆ ಜೋಡಿಸಲಾಗಿದೆ.

✧.ದಕ್ಷಿಣ ಬಕಿಂಗ್‌­ಹ್ಯಾಮ್‌ ಕಾಲುವೆಯಲ್ಲಿ ಶೋಲಿಂಗ ನಲ್ಲೂರು–ಕಲ್ಲಪಕ್ಕಂ ರಾಷ್ಟ್ರೀಯ ಜಲಮಾರ್ಗ–4 ಮಂಜೂರಾಗಿದೆ. ರಾಷ್ಟ್ರೀಯ ಜಲ ಮಾರ್ಗ 1, 2 ಮತ್ತು 3ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.

✧.ಇವುಗಳ ಒಟ್ಟು ಉದ್ದ 14,500 ಕಿ.ಮೀ. ಇದರಲ್ಲಿ 3700 ಕಿ.ಮೀ ಯಾಂತ್ರೀಕೃತ ದೋಣಿಗಳ ಸಂಚಾರವನ್ನು ಒಳಗೊಂಡಿದೆ.


★.ಭಾರತ ಸರ್ಕಾರವು ಈ ಕೆಳಗಿನ ರಾಷ್ಟ್ರೀಯ ಜಲಮಾರ್ಗಗಳು ಗುರುತಿಸಿದೆ.
(National Waterways of India)

●.NW 1:  ಗಂಗಾ–ಭಾಗೀರಥಿ–ಹೂಗ್ಲಿ ನದಿ ವ್ಯವಸ್ಥೆ •————• (ಅಲಹಾಬಾದ್‌ನಿಂದ— ಹಲ್ದಿಯಾ– 1620 ಕಿ. ಮೀ)

●.NW 2:  ಬ್ರಹ್ಮಪುತ್ರಾ ನದಿ •————• (ಧುಬ್ರಿಯಿಂದ— ಸಾದಿಯ– 891 ಕಿ.ಮೀ)

●.NW 3;  ಪಶ್ಚಿಮ ಕರಾವಳಿ ಕಾಲುವೆ •————• (ಕೋಟಪುರಂನಿಂದ—ಕೊಲ್ಲಂ) ಮತ್ತು ಉದ್ಯೋಗಮಂಡಲ್‌, ಚಂಪಕರ ಕಾಲುವೆಗಳು (205 ಕಿ. ಮೀ)

●.4.NW 4: ಗೋದಾವರಿ ಮತ್ತು ಕೃಷ್ಣಾ ನದಿಗಳಲ್ಲಿ •————• ಕಾಕಿನಾಡ–ಪುದುಚೇರಿ ಕಾಲುವೆಗಳು (1078 ಕಿ. ಮೀ)

●.NW 5: ಬ್ರಹ್ಮಿಣಿ, ಮಹಾನದಿ ಮುಖಜ ಭೂಮಿಯ ನದಿಗಳು ಸೇರಿದಂತೆ ಪೂರ್ವ ಕರಾವಳಿ ಕಾಲುವೆ (588 ಕಿ. ಮೀ).

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅵ  'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು' ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅵ

 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')


♦. ಕರ್ನಾಟಕದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━

...ಮುಂದುವರೆದ ಭಾಗ Ⅵ.


Ⅶ.ಕಾವೇರಿ ನದಿ ಏರ್ಪಾಟು:

✧.ಕಾವೇರಿ ನದಿಯು ದಕ್ಷಿಣ ಭಾರತದ ಅಂತರಾಜ್ಯಗಳ ನದಿಯಾಗಿದೆ. ಮುನ್ನೀರು ಭಾರತದ ಪೂರ್ವದ ಕಡೆಗೆ ಹರಿಯುವ ಈ ನದಿಯು ಬಂಗಾಳ ಕೊಲ್ಲಿ (ಕಡಲನ್ನು) ಸೇರುತ್ತದೆ.

✧.ಕೊಡಗಿನ ಕಾವೇರಿ ಎಂದೇ ಹೆಸರಾಗಿರುವ ಈ ನದಿಯು ಕೊಡಗಿನ ಬ್ರಹ್ಮಗಿರಿ ಬೆಟ್ಟದ ತಲಕಾವೇರಿಯಲ್ಲಿ ಸುಮಾರು 1341 ಮೀ. ಕಡಲ ಮಟ್ಟದಲ್ಲಿ ಹುಟ್ಟುತ್ತದೆ.

✧.ಕಾವೇರಿ ನದಿಯ ಒಟ್ಟು ಆಯಕಟ್ಟು 81,155 ಚದರ ಕಿ. ಮೀ.

✧.ಕಾವೇರಿ ನದಿ ಏರ್ಪಾಟಿನ ಇತರ ರಾಜ್ಯಗಳಲ್ಲಿ ಹರಡಿರುವ ಜಲಾನಯನ ಪ್ರದೇಶ ಮತ್ತು ಅದರ ಕಾಲುವೆ ವ್ಯವಸ್ತೆಯನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


★.ಜಲಾನಯನ (basin)ಇರುವ ರಾಜ್ಯ & ಆಯಕಟ್ಟು (catchment area ):

1ಕರ್ನಾಟಕ —  34,273 ಚದರ ಕಿ. ಮೀ

2ಕೇರಳ —   2,866 ಚದರ ಕಿ. ಮೀ

3ತಮಿಳು ನಾಡು—   43,868 ಚದರ ಕಿ. ಮೀ

4ಪಾಂಡಿಚರಿಯ ಕಾರೈಕಲ್ —   148 ಚದರ ಕಿ. ಮೀ

✧.ಒಟ್ಟು 81,155 ಚದರ ಕಿ. ಮೀ


✧.ಹಾರಂಗಿ, ಲಕ್ಶ್ಮಣ ತೀರ್ಥ, ಕಬಿನಿ, ಶಿಮ್ಶ, ಅರ್ಕಾವತಿ ಮತ್ತು ಸುವರ್ಣವತಿ ಇವೆಲ್ಲ ಕಾವೇರಿ ನದಿಯ ಬಹು ಮುಖ್ಯವಾದ ಉಪನದಿಗಳು.

✧.ಇವುಗಳಲ್ಲಿ ಕಬನಿ, ಅರ್ಕಾವತಿ ಮತ್ತು ಸುವರ್ಣವತಿ ನದಿಗಳು ಹೊರತಾಗಿ ಮಿಕ್ಕೆಲ್ಲ ನದಿಗಳು ನಮ್ಮ ಕರ್ನಾಟಕದಲ್ಲೆ ಹುಟ್ಟಿ, ಕರ್ನಾಟಕದಲ್ಲೆ ಹರಿಯುತ್ತವೆ.

—ಈ ನದಿಗಳ ಅಡಕವನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


✧.ಕಾವೇರಿ ನದಿಯ ಉಪನದಿಗಳು (tributary)

1ಹಾರಂಗಿ

●.ಆಯಕಟ್ಟು (catchment area):— 717 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟದ ಪುಶ್ಪಗಿರಿ ಬೆಟ್ಟ

●.ಮೂಲದ ಎತ್ತರ:—1067 ಮೀ,

●.ನದಿಯ ಉದ್ದ:—50 ಕಿ. ಮೀ.

●.ರಾಜ್ಯ :— ಕರ್ನಾಟಕ


2.ಹೇಮಾವತಿ

●.ಆಯಕಟ್ಟು (catchment area):— 5410 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟದ ಬಳ್ಳರಾಯನ ದುರ್ಗ,

●.ಮೂಲದ ಎತ್ತರ:—1219 ಮೀ,

●.ನದಿಯ ಉದ್ದ:— 245 ಕಿ. ಮೀ

●.ರಾಜ್ಯ :— ಕರ್ನಾಟಕ


3.ಕಬಿನಿ

●.ಆಯಕಟ್ಟು (catchment area):— 7040 ಚದರ ಕಿ.ಮೀ.

●.ನದಿಯ ಮೂಲ:—ಕೇರಳದ ಪಶ್ಚಿಮ ಘಟ್ಟ್ಟ,

●.ಮೂಲದ ಎತ್ತರ:—2,140 ಮೀ,

●.ನದಿಯ ಉದ್ದ:— 230 ಕಿ. ಮೀ.

●.ಒಳ –ಉಪನದಿಗಳು (sub-tributary):— ತರಕ, ಹೆಬ್ಬಳ್ಳ , ನುಗು, ಗುಂಡಲ್

●.ರಾಜ್ಯಗಳು :— ಕರ್ನಾಟಕ, ಕೇರಳ ಮತ್ತು ತಮಿಳು ನಾಡು


4.ಸುವರ್ಣವತಿ

●.ಆಯಕಟ್ಟು (catchment area):— 1787 ಚದರ ಕಿ.ಮೀ.

●.ನದಿಯ ಮೂಲ:—ನಸ್ರೂರ್ ಘಟ್ಟ್ಟದ ಸಾಲು,

●.ನದಿಯ ಉದ್ದ:— 88 ಕಿ. ಮೀ.

●.ರಾಜ್ಯಗಳು :— ಕರ್ನಾಟಕ ಮತ್ತು ತಮಿಳು ನಾಡು


5.ಲಕ್ಶ್ಮಣ ತೀರ್ಥ

●.ಆಯಕಟ್ಟು (catchment area):— 1690 ಚದರ ಕಿ.ಮೀ.

●.ನದಿಯ ಮೂಲ:— ಪಶ್ಚಿಮ ಘಟ್ಟ್ಟ,

●.ಮೂಲದ ಎತ್ತರ:—1,950 ಮೀ,

●.ನದಿಯ ಉದ್ದ:— 131 ಕಿ. ಮೀ.

●.ಒಳ –ಉಪನದಿಗಳು (sub-tributary):— ರಾಮತೀರ್ಥ,

●.ರಾಜ್ಯಗಳು :— ಕರ್ನಾಟಕ.


6.ಶಿಂಷಾ

●.ಆಯಕಟ್ಟು (catchment area):— 8469 ಚದರ ಕಿ.ಮೀ.

●.ನದಿಯ ಮೂಲ:— ತುಮುಕೂರು ಜಿಲ್ಲೆ,

●.ಮೂಲದ ಎತ್ತರ:—914 ಮೀ,

●.ನದಿಯ ಉದ್ದ:— 221 ಕಿ. ಮೀ.

●.ಒಳ –ಉಪನದಿಗಳು (sub-tributary):— ವೀರ ವೈಶ್ನವಿ, ಕಣಿಹಳ್ಳ, ಚಿಕ್ಕೊಳೆ, ಹೆಬ್ಬಹಳ್ಳ, ಮುಲ್ಲಹಳ್ಳ ಮತ್ತು ಕಣ್ವ

●.ರಾಜ್ಯಗಳು :— ಕರ್ನಾಟಕ.


7.ಅರ್ಕಾವತಿ

●.ಆಯಕಟ್ಟು (catchment area):— 4351ಚದರ ಕಿ.ಮೀ.

●.ನದಿಯ ಮೂಲ:— ನಂದಿದುರ್ಗ,

●.ಮೂಲದ ಎತ್ತರ:—1,480 ಮೀ,

●.ನದಿಯ ಉದ್ದ:— 161 ಕಿ. ಮೀ

●.ಒಳ –ಉಪನದಿಗಳು (sub-tributary):— ಕುಮುದಾವತಿ , ಮಣಿಹಳ್ಳ,ಕುಟ್ಟೆಹೊಳೆ, ವೃಷಭಾವತಿ

●.ರಾಜ್ಯಗಳು :— ಕರ್ನಾಟಕ ಮತ್ತು ತಮಿಳು ನಾಡು.


☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅲ  'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು' ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅲ

 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')

♦. ಕರ್ನಾಟಕದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━

...ಮುಂದುವರೆದ ಭಾಗ Ⅲ.



Ⅵ.ಕೃಷ್ಣಾ ನದಿ ಏರ್ಪಾಟು :

✧.ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ 1337 ಮೀ. ಎತ್ತರದ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಈ ನದಿಯ ಪ್ರಸ್ಥಭೂಮಿಯು (peninsula) ಭಾರತದ ಎರಡನೆ ದೊಡ್ಡ ನದಿಯಾಗಿದೆ.

✧.ಪಶ್ಚಿಮದಿಂದ ದಕ್ಷಿಣಕ್ಕೆ ಹರಿಯುವ ಕೃಷ್ಣಾ ನದಿಯು 1400 ಕಿ. ಮೀ ಉದ್ದ (length) ಮಹಾರಾಷ್ಟ್ರ, ಕರ್ನಾಟಕ, ಆಂದ್ರಪ್ರದೇಶವನ್ನು ಹಾದು ಹೊಗುತ್ತದೆ.

✧.ಬೇರೆ ರಾಜ್ಯಗಳು ಕೂಡಿ ಈ ನದಿಯ ಒಟ್ಟು ಆಯಕಟ್ಟು ( catchment area) 2,58,948 ಚದರ ಕಿ. ಮೀ.


★.ಜಲಾನಯನ (basin)ಇರುವ ರಾಜ್ಯ & ಆಯಕಟ್ಟು (catchment area )

1ಮಹಾರಾಷ್ಟ್ರ—  69,425 ಚದರ ಕಿ. ಮೀ

2ಕರ್ನಾಟಕ—  113,271 ಚದರ ಕಿ. ಮೀ

3ಆಂದ್ರಪ್ರದೇಶ—  76,252 ಚದರ ಕಿ. ಮೀ

ಒಟ್ಟು—  2,58,948 ಚದರ ಕಿ. ಮೀ


✧.ಕರ್ನಾಟಕದಲ್ಲಿ ಕೃಷ್ಣಾ ನದಿಯ ಬಹು ಮುಖ್ಯ ಸೀಳುನದಿಗಳೆಂದರೆ ಘಟಪ್ರಭಾ, ಮಲಪ್ರಭಾ, ಭೀಮಾ ಮತ್ತು ತುಂಗಭದ್ರಾ.
ಇವುಗಳಲ್ಲಿ ಮಲಪ್ರಭಾ ನದಿಯು ಮಾತ್ರ ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡು ರಾಜ್ಯಗಳಲ್ಲೂ ತನ್ನ ಆಯಕಟ್ಟನ್ನು ಹೊಂದಿದೆ.


✧.ಉಪನದಿಗಳು ಅಥವಾ ಸೀಳುನದಿಗಳ ಒಂದು ಇಣುಕುನೋಟ ಕೆಳಗಿನ ಪಟ್ಟಿಯಲ್ಲಿದೆ.


1.ಘಟಪ್ರಭಾ

●.ಆಯಕಟ್ಟು (catchment area):— 8829 ಚದರ ಕಿ.ಮೀ.

●.ನದಿಯ ಮೂಲ;—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—884 ಮೀ,

●.ನದಿಯ ಉದ್ದ:—283 ಕಿ.ಮೀ

●.ಒಳ –ಉಪನದಿಗಳು (sub-tributary):— ಹಿರಣ್ಯಕೇಶಿ, ಮಾರ‍ಖಂಡೇಯ

●.ರಾಜ್ಯ:—ಮಹಾರಾಷ್ಟ್ರ, ಕರ್ನಾಟಕ


2.ಮಲಪ್ರಭಾ

●.ಆಯಕಟ್ಟು (catchment area):— 11549 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—792.48 ಮೀ,

●.ನದಿಯ ಉದ್ದ:—306 ಕಿ.ಮೀ

●.ಒಳ –ಉಪನದಿಗಳು (sub-tributary):— ಬೆಣ್ಣಿಹಳ್ಳ, ಹಿರೇಹಳ್ಳ, ಟಸ್ ನದಿ

●.ರಾಜ್ಯ:—ಕರ್ನಾಟಕ.


3.ಭೀಮಾ

●.ಆಯಕಟ್ಟು (catchment area):— 70,614 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—945 ಮೀ,

●.ನದಿಯ ಉದ್ದ:—861 ಕಿ.ಮೀ.

●.ಒಳ –ಉಪನದಿಗಳು (sub-tributary):— ಮುತ ಗೊಡ್, ನಿರ, ಸಿನ ನದಿಗಳ ಕೂಡುಹೊಳೆ ನೀರು

●.ರಾಜ್ಯಗಳು :—ಮಹಾರಾಷ್ಟ್ರ ಕರ್ನಾಟಕ


4.ತುಂಗಭದ್ರಾ

●.ಆಯಕಟ್ಟು (catchment area):— 47,866 ಚ.ಕಿ.ಮಿ

●.ನದಿಯ ಮೂಲ:—ಗಂಗ ಮೂಲದ ತುಂಗ & ಭದ್ರ, ವರದಾ, ಹಗರಿ (ವೇದಾವತಿ) ನದಿಗಳ ಕೂಡುಹೊಳೆ ನೀರು.

●.ಮೂಲ:—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—1198 ಮೀ,

●.ನದಿಯ ಉದ್ದ:—531 ಕಿ.ಮೀ

●.ರಾಜ್ಯಗಳು :— ಕರ್ನಾಟಕ & ಆಂದ್ರಪ್ರದೇಶ.


...ಮುಂದುವರೆಯುವುದು

Saturday 14 February 2015

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅱ  'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು' ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅱ
 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')

♦. ಕರ್ನಾಟಕದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━

...ಮುಂದುವರೆದ ಭಾಗ Ⅱ.


✧.ಹಿಂದಿನ ಭಾಗದಲ್ಲಿ ತಿಳಿಸಿರುವ ಜಲಾನಯನಗಳ (basin) ಜೊತೆ ಇನ್ನೊಂದಷ್ಟು ಸಣ್ಣ ಸಣ್ಣ ಆಯಕಟ್ಟು ಹೊಂದಿರುವ ನದಿಗಳು ಕಡಲಿಗೆ ಹತ್ತಿರವಿದ್ದು, ಕಡಿಮೆ ಎತ್ತರದಿಂದ ಹರಿದು ನೇರವಾಗಿ ಅರಬ್ಬಿ ಕಡಲನ್ನು ಸೇರುತ್ತವೆ.

✧.ಪಶ್ಚಿಮಕ್ಕೆ ಹರಿವ ನದಿಗಳ ಏರ್ಪಾಟಿನಲ್ಲಿ ತನ್ನದೇ ಆದ ಆಯಕಟ್ಟನ್ನು(independent catchment) ಹೊಂದಿರುವ ಇನ್ನಷ್ಟು ನದಿಗಳು ಕೆಳಗಿನಂತಿವೆ.


Ⅲ.ಶರಾವತಿ ಮತ್ತು ಚಕ್ರ ನದಿಗಳ ನಡುವಿನ ಆಯಕಟ್ಟು:

✧.ಅರಬ್ಬಿ ಸಮುದ್ರಕ್ಕೆ ಸೇರುವ ಸಣ್ಣ-ಸಣ್ಣ ನದಿಗಳು ಬಹಳ ಇವೆ. ಅವುಗಳಲ್ಲಿ ಕೆಲವು ಕೊಲ್ಲೂರು ನದಿ, ಗಂಟಿಹೊಳೆ, ವೆಂಕಟಪುರ, ಬೈಂದೂರು ಹೊಳೆ, ಶಂಕರಗುಂಡಿ, ಕುಂಬಾರಹೊಳೆ, ಯೆಡಮಾವಿನಹೊಳೆ.
ಈ ನದಿಗಳ ಪೂರ್ತಿ ಆಯಕಟ್ಟು ಕರ್ನಾಟಕದಲ್ಲಿದೆ.


★ ವರಾಹಿ ಮತ್ತು ನೆತ್ರಾವತಿ ನದಿಗಳ ನಡುವಿನ ಆಯಕಟ್ಟು :

✧.ಕರ್ನಾಟಕದಲ್ಲೆ ಇರುವ ಈ ಆಯಕಟ್ಟಿನಲ್ಲಿ ಸ್ವರ್ಣ, ಸೀತಾನದಿ, ಮುಲ್ಕಿ ನದಿ, ಪಾವಂಜೆ ,ನದಿಸಾಲು, ಗುರಪುರ, ಎಣ್ಣೆ ಹೊಳೆ, ಮಡಿಸಲ್ ಹೊಳೆಗಳು ಹರಿಯುತ್ತವೆ.


★ ನೇತ್ರಾವತಿ ಮತ್ತು ಚಂದ್ರಗಿರಿ (ಪಯಸ್ವಾಣಿ) ನದಿಗಳ ನಡುವಿನ ಆಯಕಟ್ಟು:
ಈ ಆಯಕಟ್ಟಿನಲ್ಲಿ ಮುಖ್ಯವಾಗಿ ಚಂದ್ರಗಿರಿ ಮತ್ತು ಶಿರಿಯ ನದಿಗಳು ಹರಿಯುತ್ತವೆ.

✧.ಚಂದ್ರಗಿರಿ ನದಿಯು ಕೊಡಗು ಜಿಲ್ಲೆಯ ಪಶ್ಚಿಮದ ಮೆರ್ಕೇರದಲ್ಲಿ ಸುಮಾರು 600 ಮೀ. ಎತ್ತರದಲ್ಲಿ ಹುಟ್ಟುತ್ತದೆ.

✧.ಪಯಸ್ವಾಣಿ ನದಿಯು ಕೊಡಗಿನ ಪಟ್ಟಿ ಗಟ್ಟದ ಕಾಡಿನಲ್ಲಿ ಸುಮಾರು 1350 ಮೀ. ಎತ್ತರದಲ್ಲಿ ಹುಟ್ಟುತ್ತದೆ.

✧.ಈ ಎರಡು ನದಿಗಳು ಅರಬ್ಬಿ ಸಮುದ್ರದ ಗತಿಗೆ ವಿರುದ್ದವಾಗಿ 15 ಕಿ.ಮೀ ದೂರದಲ್ಲಿ ಕಾಸರಗೋಡಿನ ಮಚಿಪನದಲ್ಲಿ ಸೇರುತ್ತವೆ.

✧.ಇದರ ಒಟ್ಟು ಆಯಕಟ್ಟು 1406 ಚದರ ಕಿ.ಮೀ ಇದೆಯಾದರೂ 836 ಚದರ ಕಿ.ಮೀ ನಮ್ಮ ಕರ್ನಾಟಕದಲ್ಲಿದ್ದು ಉಳಿದದ್ದು ಕೇರಳ ರಾಜ್ಯಕ್ಕೆ ಸೇರುತ್ತದೆ.



Ⅳ.ಉತ್ತರ ಪೆನ್ನಾರ್ ನದಿ ಏರ್ಪಾಟು:

✧.ಉತ್ತರ ಪಿನಾಕಿನಿ (ಉತ್ತರ ಪೆನ್ನಾರ್ ನದಿ)

●.ಜಲಾನಯನ ಪ್ರದೇಶ: 6937 ಚದರ ಕಿ.ಮೀ.

●.ನದಿಯ ಮೂಲ:  ಕೊಲಾರದ ನಂದಿ ಬೆಟ್ಟ.

●.ನದಿಯ ಉದ್ದ: 597 ಕಿ.ಮೀ.

●.ಒಳ-ಉಪನದಿಗಳು :  ಜಯಮಂಗಲಿ, ಕುಮುದಾವತಿ, ಚಿತ್ರಾವತಿ ಮತ್ತು ಪಾಪಗ್ನಿ

●.ರಾಜ್ಯಗಳು:  ಕರ್ನಾಟಕ & ಆಂದ್ರಪ್ರದೇಶ


✧.ದಕ್ಷಿಣ ಪೆನ್ನಾರ್ ನದಿ ಏರ್ಪಾಟು:

●.ಜಲಾನಯನ ಪ್ರದೇಶ:  4370 ಚದರ ಕಿ.ಮೀ.

●.ನದಿಯ ಮೂಲ:  ಕೊಲಾರದ ನಂದಿ ಬೆಟ್ಟ.

●.ರಾಜ್ಯಗಳು: ಕರ್ನಾಟಕ ಮತ್ತು ತಮಿಳು ನಾಡು.


Ⅴ.ಪಾಲಾರ್ ನದಿ ಏರ್ಪಾಟು:

●.ಜಲಾನಯನ ಪ್ರದೇಶ: 2813 ಚದರ ಕಿ.ಮೀ.

●.ನದಿಯ ಮೂಲ:  ಕೊಲಾರದ ತಲಗಾವರ ಹಳ್ಳಿ,

●.ಮೂಲದ ಎತ್ತರ:  900 ಮೀ

●.ನದಿಯ ಉದ್ದ:  348ಕಿ.ಮೀ.

●.ರಾಜ್ಯಗಳು:  ಕರ್ನಾಟಕ, ಆಂದ್ರಪ್ರದೇಶ ಮತ್ತು ತಮಿಳು ನಾಡು


...ಉಳಿದದ್ದನ್ನು ಮುಂದುವರೆಸಲಾಗುವುದು.

Wednesday 11 February 2015

☀.' ಕರ್ನಾಟಕದ ನದಿ ವ್ಯವಸ್ಥೆ', ಭಾಗ:Ⅰ 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'  ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ', ಭಾಗ Ⅰ
'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of Karnataka, The Major Rivers Flowing In Karnataka')

♦. ಕರ್ನಾಟಕದ ಭೂಗೋಳ
━━━━━━━━━━━━━━━━━━━━━━━━━━━━━━━━━━━━━━━━━━━━━


— ನಮ್ಮ ದಿನನಿತ್ಯದ ಬದುಕಿನಲ್ಲಿ ನೀರು ಬಹಳ ಮುಕ್ಯ ಪಾತ್ರ ವಹಿಸುತ್ತದೆ. ನೀರಿಲ್ಲದ ಜೀವನವನ್ನು ನೆನಿಸಿಕೊಳ್ಳಲೂ ಸಾದ್ಯವಾಗುವುದಿಲ್ಲ. ನೀರಿಗೆ ಮುಖ್ಯ ಆದಾರವೆ ನದಿಗಳು.


★ ನದಿ ಎಂದರೇನು ?
ಒಟ್ಟಾಗಿ ಹರಿಯುವ ನೀರಿನ ಒಂದು ಸಮೂಹವೆ ನದಿ. ಸಾಮಾನ್ಯವಾಗಿ ನದಿಗಳ ಮೂಲ ಬೆಟ್ಟಗಳೇ ಆದರೂ, ಅಷ್ಟು ನೀರು ನದಿಯಾಗಿ ಹರಿಯಲು ಕಾರಣ ಹಿಮ ಕರುಗುವಿಕೆ, ನೆಲದಡಿಯ ನೀರು ಇಲ್ಲವೇ ಮಳೆ ನೀರಿರಬಹುದು. ಮೊದಲಿನಿಂದಲೂ ನದಿಗಳು ಮಂದಿಯ ನಾಗರೀಕತೆಗಳಿಗೆ ಬಹು ಮುಖ್ಯವಾಗಿವೆ.


★ ಏನಿದು ಉಪನದಿ?
ಮಣ್ಣಿನ ಸವೆತದಿಂದಾಗಿ ಮುಡುಕು ಮೂಡಿಸುತ್ತ ಹರಿವ ದೊಡ್ದ ನದಿಗಳನ್ನು ಅಲ್ಲಲ್ಲಿ ಸಣ್ಣ ನದಿಗಳು ಸೇರುತ್ತವೆ. ಇಂತಹ ನದಿಗಳನ್ನು ಉಪನದಿ ಎನ್ನುತ್ತಾರೆ. ಸಣ್ಣ ನದಿ ಮತ್ತು ದೊಡ್ಡ ನದಿಗಳು ಕೂಡುವ ತಾಣಕ್ಕೆ ಕೂಡಲು ಎನ್ನಬಹುದು. ಹೀಗೆ ಹರಿವ ನದಿಯು ನದೀಮುಖವನ್ನು (ಸಾಗರ, ಕೆರೆ,ಕಟ್ಟೆ) ಸೇರುತ್ತದೆ ಹಾಗು ಸಣ್ಣ ಕಾಲುವೆಗಳಾಗುತ್ತವೆ.

✧.ಕರ್ನಾಟಕದಲ್ಲಿ ಒಟ್ಟು ಏಳು ಬಗೆಯ ನದಿ ಸಮೂಹಗಳಿವೆ. ಅವುಗಳ ಹೆಸರು ಮತ್ತು ಹರಿವನ್ನು ಕೆಳಗೆ ನೀಡಲಾಗಿದೆ.

1.ಗೋದಾವರಿ ನದಿ:  4.412.31ಚದರ ಕಿ.ಮೀ(sq.km)

2.ಕೃಷ್ಣ ನದಿ:   113.2959.48 ಚದರ ಕಿ.ಮೀ(sq.km)

3.ಕಾವೇರಿ ನದಿ:   34.2717.99 ಚದರ ಕಿ.ಮೀ(sq.km)

4.ಉತ್ತರ ಪೆನ್ನಾರ್ ನದಿ:   6.943.64 ಚದರ ಕಿ.ಮೀ(sq.km)

5.ದಕ್ಷಿಣ ಪೆನ್ನಾರ್ ನದಿ:   4.372.29 ಚದರ ಕಿ.ಮೀ(sq.km)

6.ಪಲಾರ್ ನದಿ:   2.971.56 ಚದರ ಕಿ.ಮೀ(sq.km)

7.ಪಶ್ಚಿಮಕ್ಕೆ ಹರಿಯುವ ಹೊಳೆಗಳು:   24.2512.73 ಚದರ ಕಿ.ಮೀ(sq.km)

✧.ಒಟ್ಟು190.5100 ಚದರ ಕಿ.ಮೀ(sq.km)



Ⅰ.ಗೋದಾವರಿ ನದಿ ಏರ್ಪಾಟು :

✧.ಅರಬ್ಬಿ ಕಡಲ ತೀರದಿಂದ ಸುಮಾರು 80 ಕಿ.ಮೀ. ದೂರದಲ್ಲಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ಗೋದಾವರಿ ನದಿಯು ಹುಟ್ಟುತ್ತದೆ.

✧.1067 ಮೀ ಎತ್ತರದಲ್ಲಿ ಹುಟ್ಟುವ ಈ ನದಿಯು 1465 ಕಿ.ಮೀ.ನಷ್ಟು ಪೂರ್ವ ದಿಕ್ಕಿಗೆ ಹರಿದು ಮಹಾರಾಷ್ಟ್ರ, ಆಂದ್ರಪ್ರದೇಶದ ಮೂಲಕ ರಾಜಮುಂಡ್ರಿಯ ಮೇಲೆ ಬಂಗಾಳ ಕೊಲ್ಲಿ (ಕಡಲನ್ನು) ಸೇರುತ್ತದೆ.

✧.ಗೋದಾವರಿಯ ಆಯಕಟ್ಟು ಸುಮಾರು 3,12,813 ಚದರ ಕಿ ಮೀ ನಷ್ಟಿದೆ. ಇದರ ವಿವರವನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


★ಗೋದಾವರಿಯ ಜಲಾನಯನ (basin)ಕ್ಕೊಳಪಟ್ಟ ರಾಜ್ಯಗಳು:

1.ಮದ್ಯಪ್ರದೇಶ— 26,168 ಚದರ ಕಿ .ಮೀ

2.ಛತ್ತಿಸ್ ಗಡ್— 39,087 ಚದರ ಕಿ .ಮೀ

3.ಕರ್ನಾಟಕ— 4,406 ಚದರ ಕಿ .ಮೀ

4.ಆಂದ್ರಪ್ರದೇಶ— 73,201 ಚದರ ಕಿ .ಮೀ

5.ಒರಿಸ್ಸ— 17,752 ಚದರ ಕಿ .ಮೀ

✧.ಒಟ್ಟು 3,12,813 ಚದರ ಕಿ .ಮೀ


✧.ಗೋದಾವರಿ ನದಿಯ ಬಹು ಮುಖ್ಯ ಸೀಳುನದಿಗಳೆಂದರೆ:
ಪ್ರವರ, ಪೂರ್ಣಾ, ಮಾಂಜ್ರ, ಪ್ರಣಹಿತ, ಇಂದ್ರಾವತಿ ಮತ್ತು ಸಬರಿ.


✧.ಕರ್ನಾಟಕದಲ್ಲಿ ತನ್ನ ಆಯಕಟ್ಟನ್ನು ಹೊಂದಿರುವ ಮಾಂಜ್ರ ಸೀಳುನದಿಯ ವಿವರ ಕೆಳಗಿನ ಪಟ್ಟಿಯಲ್ಲಿ ತಿಳಿಸಲಾಗಿದೆ.

● ಉಪನದಿ:— ಮಾಂಜ್ರ

●.ಜಲಾನಯನ ಪ್ರದೇಶ:—15,667 ಚದರ ಕಿ ಮೀ

● ಮೂಲ:— ಮಹಾರಾಷ್ಟ್ರ,

● ಮೂಲದ ಎತ್ತರ (Origin , Altitude):— 4,406 ಚದರ ಕಿ ಮೀ

● ಒಳ-ಉಪನದಿ ರಾಜ್ಯಗಳು:

—ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂದ್ರಪ್ರದೇಶ
— ಕರ್ನಾಟಕ, 10,772 ಚದರ ಕಿ ಮೀ
— ಆಂದ್ರಪ್ರದೇಶ ಬಾಲ ಘಾಟ್ ಬೆಟ್ಟಗಳ ಸಾಲು, 823 ಮೀ. ತಿರಿನ, ಕರಂಜ, ಹಲ್ ದಿ,ಲೆಂಡಿ ಮತ್ತು ಮನ್ನಾರ್


Ⅱ.ಪಶ್ಚಿಮಕ್ಕೆ ಹರಿವ ನದಿಗಳ ಏರ್ಪಾಟು:

✧.ಅರಬ್ಬಿ ಕಡಲತ್ತ ದಕ್ಷಿಣದಲ್ಲಿ, ಪಶ್ಚಿಮ ದಿಕ್ಕಿಗೆ ಬರುವ ಮುಂಗಾರಿಗೆ ಪಶ್ಚಿಮ ಘಟ್ಟಗಳು ಒಂದು ರೀತಿಯ ಅಡ್ಡಗೋಡೆಯಾಗಿ, ಪಶ್ಚಿಮದಲ್ಲಿ ಅತಿ ಹೆಚ್ಚು ಮಳೆಗೆ ಕಾರಣವಾಗಿವೆ ಹಾಗು ಜೂನ್ ನಿಂದ ಸೆಪ್ಟೆಂಬರ‍ವರೆಗಿನ ಮಳೆಗಾಲದಲ್ಲಿ ನೂರಕ್ಕೆ ತೊಂಬತ್ತರಷ್ಟು ಮಳೆಯನ್ನು ತನ್ನದಾಗಿಸಿಕೊಳ್ಳುತ್ತವೆ.

✧.ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು ಸುಮಾರು 400 ರ ರಿಂದ 1600 ಮೀ. ಎತ್ತರದಲ್ಲಿ ಉತ್ತರ ಘಟ್ಟಗಳ ತುದಿಗೆ ಹತ್ತಿರವಾಗಿ ಕಡಲ ಮೇಲ್ಮಟ್ಟದಲ್ಲಿ ಹುಟ್ಟುತ್ತವೆ.

✧.ಹೀಗೆ ಹುಟ್ಟುವ ನದಿಗಳು ಪಶ್ಚಿಮ ದಿಕ್ಕಿನಲ್ಲಿ ಹರಿದು ಸುಮಾರು 50 ರಿಂದ 300 ಕಿ.ಮೀ. ದೂರದಲ್ಲಿ ಅರಬ್ಬಿ ಕಡಲನ್ನು ಸೇರುತ್ತವೆ. ನದಿಗಳು ತನ್ನ ಮೆಲ್ಬಾಗದಲ್ಲಿ ಅತಿಹೆಚ್ಚು ಕಡಿದಾಗಿದ್ದು (steep), ನಡುಭಾಗದಲ್ಲಿ ಕಡಿಮೆ ಇರುತ್ತವೆ. ಕೇವಲ ಕಡಲ ಹತ್ತಿರ ಸಮನಾದ ನೆಲವನ್ನು (flat gradient) ಮತ್ತು ಹೊನಲು ಹರಿದ ಸಮತಲ ಬೂಮಿಯನ್ನು (flood plain) ಕಾಣಬಹುದು.



★.ಪಶ್ಚಿಮಕ್ಕೆ ಹರಿಯುವ ಇನ್ನಷ್ಟು ನದಿಗಳು, ಉಪನದಿಗಳು ಮತ್ತು ಇವುಗಳು ಹರಿವ ರಾಜ್ಯಗಳನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.

1.ಮಹಾದಾಯಿ/ಮಾಂಡವಿ ನದಿ.

●.ಜಲಾನಯನ ಪ್ರದೇಶ:— 2,032 ಚದರ ಕಿ.ಮೀ.

●.ಮೂಲ:— ಪಡುವಣ ಗಟ್ಟದ ಬೆಳಗಾವಿ ಜಿಲ್ಲೆ

●.ಮೂಲದ ಎತ್ತರ:— 600 ಮೀ.

●.ನದಿಯ ಉದ್ದ:— 87 ಕಿ.ಮೀ.

●.ಒಳ –ಉಪನದಿಗಳು:— ಮದೇರಿ

●.ರಾಜ್ಯ:— ಕರ್ನಾಟಕ, ಗೋವ


2.ಕಾಳಿ ನದಿ.
●.ಜಲಾನಯನ ಪ್ರದೇಶ:— 4,188 ಚದರ ಕಿ.ಮೀ.

●.ಮೂಲ:— ಪಡುವಣ ಗಟ್ಟದ ಬಿಡಿ ಹಳ್ಳಿ

●.ಮೂಲದ ಎತ್ತರ:— 600 ಮೀ.

●.ನದಿಯ ಉದ್ದ:— 153ಕಿ.ಮೀ.

●.ಒಳ –ಉಪನದಿಗಳು:— ಪಂಡರಿ, ತಟ್ಟಿ ಹಳ್ಳ ಮತ್ತು ನಾಗಿ

●.ರಾಜ್ಯ:— ಕರ್ನಾಟಕ


3.ಗಂಗವಲ್ಲಿ (ಬೆಡ್ತಿ) ನದಿ.

●.ಜಲಾನಯನ ಪ್ರದೇಶ:— 3,574 ಚದರ ಕಿ.ಮೀ.

●.ಮೂಲ:— ಪಡುವಣ ಘಟ್ಟದ ತೆಂಕಣ ದಾರವಾಡ

●.ಮೂಲದ ಎತ್ತರ:  700 ಮೀ.

●.ನದಿಯ ಉದ್ದ: 152ಕಿ.ಮೀ.

●.ರಾಜ್ಯ:  ಕರ್ನಾಟಕ


4.ಅಘನಾಶಿನಿ (ತದ್ರಿ) ನದಿ.

●.ಜಲಾನಯನ ಪ್ರದೇಶ:  1,330 ಚದರ ಕಿ.ಮೀ.

●.ಮೂಲ:  ಸಿರಸಿ ಹತ್ತಿರದ ಪಡುವಣ ಘಟ್ಟಗಳು

●.ಮೂಲದ ಎತ್ತರ: 500 ಮೀ.

●.ನದಿಯ ಉದ್ದ: 84 ಕಿ.ಮೀ.

●.ರಾಜ್ಯ: ಕರ್ನಾಟಕ


5.ಶರಾವತಿ ನದಿ.

●.ಜಲಾನಯನ ಪ್ರದೇಶ: 3,592 ಚದರ ಕಿ.ಮೀ.

●.ಮೂಲ: ಶಿವಮೊಗ್ಗ ಜಿಲ್ಲೆಯ ಹುಮಾಚ ಪಡುವಣ ಘಟ್ಟಗಳು

●.ಮೂಲದ ಎತ್ತರ: 700 ಮೀ.

●.ನದಿಯ ಉದ್ದ: 122 ಕಿ.ಮೀ.

●.ರಾಜ್ಯ: ಕರ್ನಾಟಕ


6.ಚಕ್ರ ನದಿ.

●.ಜಲಾನಯನ ಪ್ರದೇಶ: 336 ಚದರ ಕಿ.ಮೀ.

●.ಮೂಲ: ಮೂಡಣದ ಕೊಡಚಾದ್ರಿ, ಶಿವಮೊಗ್ಗ ಜಿಲ್ಲೆ

●.ಮೂಲದ ಎತ್ತರ: 600 ಮೀ.

●.ನದಿಯ ಉದ್ದ: 52 ಕಿ.ಮೀ.

●.ಒಳ –ಉಪನದಿಗಳು: ಕೊಲ್ಲೂರು

ರಾಜ್ಯ: ಕರ್ನಾಟಕ


7.ವರಾಹಿ (ಹಲದಿ) ನದಿ.

●.ಜಲಾನಯನ ಪ್ರದೇಶ: 759 ಚದರ ಕಿ.ಮೀ.

●.ಮೂಲ: ಕವಲೆದುರ್ಗ, ಶಿವಮೊಗ್ಗ ಜಿಲ್ಲೆ

●.ಮೂಲದ ಎತ್ತರ: 600 ಮೀ.

●.ನದಿಯ ಉದ್ದ: 66 ಕಿ.ಮೀ.

●.ರಾಜ್ಯ: ಕರ್ನಾಟಕ


8.ನೇತ್ರಾವತಿ ನದಿ.

●.ಜಲಾನಯನ ಪ್ರದೇಶ: 3,222 ಚದರ ಕಿ.ಮೀ.

●.ಮೂಲ: ತೆಂಕಣ ಕನ್ನಡದ ಬೆಳ್ಳರಾಯನ ದುರ್ಗ

●.ಮೂಲದ ಎತ್ತರ: 1000ಮೀ.

●.ನದಿಯ ಉದ್ದ: 103 ಕಿ.ಮೀ.

●.ಒಳ –ಉಪನದಿಗಳು: ಗುಡಿಹೊಳೆ, ಕುಮಾರದಾರ ಮತ್ತು ಶಿಸಿಯ ಹೊಳೆ

●.ರಾಜ್ಯ: ಕರ್ನಾಟಕ


9.ಬರಪೊಳೆ (ವಾಲಪಟ್ಟಣ) ನದಿ.

●.ಜಲಾನಯನ ಪ್ರದೇಶ: 1,867 ಚ.ಕಿ.ಮೀ

●.ಮೂಲ:  ಕೊಡಗಿನ ಬ್ರಮ್ಹಗಿರಿ ಘಟ್ಟದ ಕಾಡು

●.ಮೂಲದ ಎತ್ತರ:  900 ಮೀ.

●.ನದಿಯ ಉದ್ದ: 110 ಕಿ.ಮೀ.

●.ರಾಜ್ಯ: ಕರ್ನಾಟಕ ಮತ್ತು ಕೇರಳ.


*** ಉಳಿದದ್ದನ್ನು  ಮಂದುವರೆಯುವುದು.

☀.'ಎಬೋಲಾ' (Ebola) ಅಂದರೇನು ? ಇದು ಹೇಗೆ ಹರಡುತ್ತದೆ? ಪ್ರಸ್ತುತ ಭಾರತದಲ್ಲಿ ಎಬೋಲ ರೋಗದ ಸ್ಥಿತಿ-ಗತಿ ಕುರಿತು ಬರೆಯಿರಿ.  (What do you mean by 'Ebola'? How it spreads ? Write about the present status of the Ebola disease in India)

☀.'ಎಬೋಲಾ' (Ebola) ಅಂದರೇನು ? ಇದು ಹೇಗೆ ಹರಡುತ್ತದೆ? ಪ್ರಸ್ತುತ ಭಾರತದಲ್ಲಿ ಎಬೋಲ ರೋಗದ ಸ್ಥಿತಿ-ಗತಿ ಕುರಿತು ಬರೆಯಿರಿ.
(What do you mean by 'Ebola'? How it spreads ? Write about the present status of the Ebola disease in India)
━━━━━━━━━━━━━━━━━━━━━━━━━━━━━━━━━━━━━━━━━━━━━
♦.ಸಾಮಾನ್ಯ ವಿಜ್ಞಾನ.

ಪಶ್ಚಿಮ ಆಪ್ರಿಕಾದಲ್ಲಿ (West Africa) ಈಗಾಗಲೇ ಸಾವಿರಾರು ಮಂದಿಯ ಪ್ರಾಣ ತೆಗೆದುಕೊಂಡು ಜಗತ್ತನ್ನು ತಲ್ಲಣಗೊಳಿಸಿದೆ ಎಬೋಲ ವೈರಸ್ (Ebola virus). ಬಾರತದಲ್ಲಿ ಎಬೋಲಾ ಹರಡಿರುವುದು ಇನ್ನೂ ಗಟ್ಟಿಯಾಗಿಲ್ಲವಾದರೂ, ಈ ಕುರಿತ ಅಂಜಿಕೆ ಎಲ್ಲೆಡೆ ಮನೆಮಾಡಿದೆ. ಎಬೋಲಾ ತಡೆಗಟ್ಟಲು ಯಾವುದೇ ಮದ್ದು ಇಲ್ಲದಿರುವುದು ಜಗತ್ತಿನೆಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಮುಂತಾದವುಗಳ ಕುರಿತು ಈ ಬರಹದಲ್ಲಿ ತಿಳಿಯೋಣ.

— ಮನುಷ್ಯರು ಹಾಗು ಮನುಷ್ಯ ಜಾತಿಗೆ ಸೇರುವ ಕೋತಿಗುಂಪುಗಳನ್ನು (primates) ಕಾಡುವ ಈ ಬೇನೆಯನ್ನು ಎಬೋಲ ವೈರಸ್ ಗಳು (Ebola virus) ಉಂಟುಮಾಡುತ್ತವೆ. ಈ ವೈರಸ್ ವನ್ನು ಮೊದಲ ಬಾರಿಗೆ 1976 ರಲ್ಲಿ ಸುಡಾನ್ (ಈಗ ದಕ್ಷಿಣ ಸುಡಾನ್) ಹಾಗು ಕಾಂಗೋ ನಾಡುಗಳಲ್ಲಿ ಗುರುತಿಸಲಾಯಿತು. ಸಿಡಿಯುವಿಕೆ (outbreak) ಬಗೆಯಲ್ಲಿ ಹರಡುವ ಈ ವೈರಸ್, ಹೆಚ್ಚಾಗಿ ಉಷ್ಣವಲಯದ (tropical) ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ.

✧.ವಿಶ್ವ ಆರೋಗ್ಯ ಸಂಸ್ಥೆಯ (World Health Organization-WHO) ಮಾಹಿತಿಯ ಪ್ರಕಾರ 1976 ರಿಂದ 2013 ರವರೆಗೆ ಎಬೋಲ 1,716 ಮಂದಿಗೆ ತಗುಲಿತ್ತು.
ಹಿಂದೆಂದಿಗಿಂತಲೂ ದೊಡ್ಡದಾದ ಎಬೋಲಾ ಈಗ ಪಶ್ಚಿಮ ಆಪ್ರಿಕಾದ ಗಿನಿಯ (Guinea),ಸಿಯೆರ್ರ ಲಿಯೋನೆ (Sierra Leone) ಹಾಗು ನೈಜೀರಿಯ (Nigeria) ನಾಡುಗಳನ್ನು ಬಾದಿಸುತ್ತಿದೆ. 2014 ಆಗಸ್ಟ್ 22 ರವರೆಗೆ 2,615 ಮಂದಿಗೆ ಎಬೋಲ ತಗುಲಿದ್ದು, ಅವರಲ್ಲಿ 1,427 ಮಂದಿ ಸತ್ತಿರುವುದಾಗಿ ವರದಿಯಾಗಿದೆ.


★ ಹರಡುವ ಬಗೆ:

✧.ಎಬೋಲಾ ಮೊಟ್ಟಮೊದಲಿಗೆ ಬಾವಲಿಗಳಲ್ಲಿ ಕಂಡುಬಂದಿದ್ದಾಗಿ ತಿಳಿದುಬಂದಿದೆ. ಎಬೋಲ ಸೋಂಕು ತಗುಲಿದ ಪ್ರಾಣಿಗಳ ನೆತ್ತರು ಇಲ್ಲವೇ ಇನ್ಯಾವುದೇ ಮೈ ಹರಿಕಗಳು (body fluids) ಮನುಷ್ಯನನ್ನು ಸೋಕಿದಾಗ, ಎಬೋಲ ವೈರಸ್ ಗಳು ಮನುಷ್ಯರಲ್ಲಿ ಹರಡುತ್ತವೆ.

✧.ಆಪ್ರಿಕಾದ ನಾಡುಗಳಲ್ಲಿ ಎಬೋಲದಿಂದ ಸತ್ತ ಹಣ್ಣು ಬಾವಲಿ (fruit bat), ಚಿಂಪಾಂಜಿ, ಗೊರಿಲ್ಲ, ಕೋತಿ, ಜಿಂಕೆ ಇಲ್ಲವೇ ಮುಳ್ಳುಹಂದಿಗಳನ್ನು ಮನುಷ್ಯರು ಮುಟ್ಟುವ ಇಲ್ಲವೇ ಒಪ್ಪ ಮಾಡುವುದರಿಂದ ಎಬೋಲ ವೈರಸ್ ಹರಡಬಹುದೆಂದು ಎಣಿಸಲಾಗಿದೆ.

✧.ವೈರಸ್ ದ ಸೋಂಕು ಪ್ರಾಣಿಯಿಂದ ಮನುಷ್ಯನಿಗೆ ತಗುಲಿದ ಮೇಲೆ, ಬೇನೆಬಿದ್ದ ಮನುಷ್ಯರ ನೆತ್ತರು ಇಲ್ಲವೆ ಇನ್ಯಾವುದೇ ಮೈ ಗಂಧಗಳು (body fluids) ಮತ್ತೊಬ್ಬ ಮನುಶ್ಯನಿಗೆ ತಗುಲಿದರೆ ಸೋಂಕು ಹರಡುತ್ತದೆ.

✧.ಸೋಂಕು ತಗುಲಿದ ಗಂಡಸು ತನ್ನ ವೀರ್ಯದ (semen) ಮೂಲಕ ಎರಡು ತಿಂಗಳುಗಳವರೆಗೆ ಎಬೋಲ ವೈರಸ್ ವನ್ನು ಹರಡಲು ಸಾದ್ಯ.

✧.ಈ ಬಾರಿ ಕಂಡುಬರುತ್ತಿರುವ ಎಬೋಲಾ ಮೊದಲಿಗೆ ಆಪ್ರಿಕಾದಲ್ಲಿ 2 ವರ್ಷದ ಮಗುವಲ್ಲಿ ಕಾಣಿಸಿಕೊಂಡಿತು. ಆಮೇಲೆ ಆ ಮಗುವಿನ ತಾಯಿ ಮತ್ತು 3 ವರ್ಷದ ತಂಗಿಗೆ ಹರಡಿತು. ಅಲ್ಲಿಂದ ಆಪ್ರಿಕಾದ ಹಲವು ನಾಡುಗಳಿಗೆ ಮತ್ತು ಎಬೋಲಾದಿಂದ ಬಳಲುತ್ತಿರುವ ಮಂದಿಗೆ ಆರೈಯ್ಕೆ ನೀಡಿದ ಡಾಕ್ಟರ್, ನರ್ಸ್ ಗಳಿಗೂ ತಗುಲಿದ್ದು ವರದಿಯಾಗಿದೆ.


★ ಚಿಹ್ನೆಗಳು ಮತ್ತು ರೋಗಲಕ್ಷಣಗಳು (signs & symptoms):

✧.ಎಬೋಲ ವೈರಸ್ ಗಳು ಮನುಷ್ಯರ ಮಯ್ಯನ್ನು ಹೊಕ್ಕಿದ ಮೇಲೆ, ಮನುಷ್ಯರನ್ನು ಕಾಡಲು ಎರಡು ದಿನಗಳಿಂದ ಮೂರು ವಾರಗಳು ಬೇಕಾಗಬಹುದು.

✧.ಈ ಬೇನೆಯಲ್ಲಿ ಕಂಡುಬರುವ ಕುರುಹುಗಳೆಂದರೆ (symptoms) ಜ್ವರ, ಗಂಟಲು ನೋವು, ಮೈ ನೋವು ಹಾಗು ತಲೆನೋವು. ವಾಂತಿ, ಬೇದಿ, ಗಂದೆಗಳ (rashes) ಜೊತೆಗೆ ಲೀವರ್ (liver) ಹಾಗು ಕಿಡ್ನಿಗಳ (kidney) ಎಂದಿನ ಕೆಲಸವು ಇಳಿಮುಕವಾಗುತ್ತದೆ.

✧. ಲೀವರ್ ಹಾಗು ಕಿಡ್ನಿಗಳ ಕೆಡುವುದರಿಂದ ಮಯ್ ಮೇಲೆ ಹಾಗು ಮೈ ಒಳಗೆ ರಕ್ತ ಸೋರಿಕೆಯಾಗುತ್ತದೆ.


★ ಎಬೋಲ ರೋಗವನ್ನು ಕಂಡುಹಿಡಿಯುವ ಬಗೆ (diagnosis):

1) ಎಬೋಲದಲ್ಲಿ ಕಾಣಿಸುವ ಬೇನೆಯ ಕುರುಹುಗಳು ಮಲೇರಿಯ (malaria), ಟಯಪಾಯ್ಡ್ ಜ್ವರ (typhoid fever), ಪ್ಲೇಗ್ (plague), ಕಾಲರ (cholera) ಮುಂತಾದ ಬೇನೆಗಳಲ್ಲಿಯೂ ಇರುತ್ತವೆ.
ಮೊದನೆಯದಾಗಿ, ಸೋಂಕು ತಗುಲಿದ ಮನುಷ್ಯರಲ್ಲಿ ಕಂಡುಬರುತ್ತಿರುವ ಬೇನೆಯ ಕುರುಹುಗಳು ಕಾಣಿಸಲು ಈ ಬೇನೆಗಳು ಕಾರಣವಲ್ಲ ಎಂಬುವುದನ್ನು ಗೊತ್ತು ಮಾಡಿಕೊಳ್ಳುವುದು.

2) ಬೇನೆಯನ್ನು ಕಂಡುಹಿಡಿಯುವ ಎರಡನೆಯ ಹೆಜ್ಜೆಯಾಗಿ, ಕಾಡುತ್ತಿರುವ ಬೇನೆಯು ಎಬೋಲ ಎಂದು ಗಟ್ಟಿ ಮಾಡಿಕೊಳ್ಳಲು, ರೋಗದಿಂದ ಬಳಲುತ್ತಿರುವವರ ನೆತ್ತರನ್ನು ಎಬೋಲ ವೈರಸ್ ದ ಪ್ರತಿಕಾಯಗಳು (antibodies), ಆರ್.ಎನ್.ಎ (RNA) ಇಲ್ಲವೆ ಎಬೋಲ ವೈರಸ್ ಗಳಿಗಾಗಿ ಒರೆಹಚ್ಚಲಾಗುತ್ತದೆ.


★ ಎಬೋಲ ರೋಗವನ್ನು ತಡೆಯುವ ಬಗೆ:

1) ವೈರಸ್ ಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದನ್ನು ತಡೆಯವುದು.
—ನಮ್ಮ ಸುತ್ತಮುತ್ತಲಿನ ಪ್ರಾಣಿಗಳಲ್ಲಿ, ಈ ಸೋಂಕು ಇರುವುದರ ಬಗ್ಗೆ ಹುಡುಕಾಟ ನಡೆಸುವುದು. ಒರೆನೋಡಿದ ಪ್ರಾಣಿಗಳಲ್ಲಿ, ಈ ಸೋಂಕು ಇದೆ ಎಂದಾದರೆ, ಅವುಗಳನ್ನು ಸರಿಯಾದ ಬಗೆಯಲ್ಲಿ ಕೊಲ್ಲುವುದು ಹಾಗು ಕೊಂದ ಪ್ರಾಣಿಯನ್ನು ವೈರಸ್ ಹರಡದಂತೆ ಹೂಳುವುದು ಇಲ್ಲವೆ ಸುಡುವುದು.

2) ಬೇನೆಗೆ ಒಳಗಾದ ರೋಗಿಯ ರಕ್ತ ಹಾಗು ಇತರ ಮೈ ಗಂಧಗಳು (body fluid) ಮತ್ತೊಬ್ಬ ಆರೋಗ್ಯವಂತ ಮನುಷ್ಯನಿಗೆ ತಗುಲಿದಾಗ, ಎಬೋಲ ವೈರಸ್, ಆರೋಗ್ಯವಂತ ಮನುಷ್ಯನಿಗೆ ಹರಡುತ್ತದೆ.
—ಎಬೋಲದಿಂದ ಬಳಲುತ್ತಿರುವವರ ಹಾಗು ಆರೈಯ್ಕೆಯಲ್ಲಿ ತೊಡಗಿರುವವರ ಹಾಗು ಅವರ ಸುತ್ತಮುತ್ತ ಇರುವವರು ಬೇನೆ ಬಿದ್ದವರಿಂದ ಒಂದು ಮೀಟರಗಿಂತಲೂ ಕಡಿಮೆದೂರದಲ್ಲಿರುವಾಗ ವೈರಸ್ ದಿಂದ ಕಾಪನ್ನು (protection) ಒದಗಿಸುವಂತಹ ಉದ್ದನೆಯ ತೋಳಿನ ಬಟ್ಟೆಗಳನ್ನು (gown) ತೊಡುವುದು, ಕನ್ನಡಕ (protective goggles), ಹ್ಯಾಂಡ್ ಗ್ಲೋವ್ಸ್ (gloves) ಹಾಗು ಮುಖ ಮಾಸ್ಕಗಳನ್ನು (face mask) ತೊಡುವುದು, ಎಬೋಲದಿಂದ ನರುಳುತ್ತಿರುವವರನ್ನು ಆರೈಕೆಯ ಬಳಿಕ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು.

3) ಒರೆ ಹಚ್ಚಲು ಎಬೋಲ ರೋಗಿಯಿಂದ ತೆಗೆದುಕೊಳ್ಳುವ ಮೈ ಗಂಧಗಳು(body fluids) ಹಾಗು ಗೂಡುಕಟ್ಟುಗಳನ್ನು (tissue samples) ತೆಗೆದುಕೊಳ್ಳುವಾಗ, ಸಾಗಿಸುವಾಗ ಹಾಗು ಒರೆ ಹಚ್ಚುವಾಗ ಎಚ್ಚರವಹಿಸುವುದು.
ಎಬೋಲ ಬೇನೆಗೆ ಇದುವರೆಗೂ ಯಾವುದೇ ಗೊತ್ತುಪಡಿಸಿದ ಔಷಧ (medicine/treatment) ಇಲ್ಲದಿರುವುದರಿಂದ ಬೇನೆ ತಗುಲಿದವರಲ್ಲಿ 50-90%ರಶ್ಟು ಮಂದಿ ಸಾಯುತ್ತಾರೆ.
— ಎಬೋಲ ವೈರಸ್ ವನ್ನು ತಡೆಯುವ ಮದ್ದನ್ನು (vaccine) ತಯಾರಿಸುವಲ್ಲಿ ಎಲ್ಲಾ ಬಗೆಯ ಪ್ರಯತ್ನಗಳು ನಡೆಯುತ್ತಿವೆ. ಆದರೆ ಸದ್ಯದ ಮಟ್ಟಿಗೆ ಈ ಬೇನೆಗೆ ಯಾವುದೇ ಔಷಧ (medicine) ಹಾಗು ಮದ್ದು (vaccine) ಇಲ್ಲ.

4) ಎಬೋಲದಿಂದ ನರಳುತ್ತಿರುವವರಲ್ಲಿ ನೀರಿಳಿತ (dehydration) ಹೆಚ್ಚುವುದರಿಂದ, ಆರೈಕೆಯ ಬಾಗವಾಗಿ ಉಪ್ಪು-ಸಕ್ಕರೆಗಳನ್ನು ಹೊಂದಿರುವ ನೀರನ್ನು ಕುಡಿಸುವುದು ಹಾಗು ಬೇನೆಬಿದ್ದವರ ರಕ್ತಪರಿಚಲನೆಯ ವ್ಯವಸ್ಥೆ (circulatory system), ವಿದ್ಯುದ್ವಿಚ್ಛೇದ್ಯಗಳು (electrolytes) ಹೊಂದಿರುವ ರಕ್ತವನ್ನು ಏರಿಸುವುದು. ಇಂತಹ ಕೆಲವು ಆರೈಕೆಗಳನ್ನಷ್ಟೇ ಈಗ ಕಯ್ಗೊಳ್ಳಲಾಗುತ್ತಿದೆ.


★ ಭಾರತದಲ್ಲಿ ಎಬೋಲ ಸ್ಥಿತಿ-ಗತಿ:
✧.ಭಾರತ ಸರ್ಕಾರವು 2014 ಆಗಸ್ಟ್ ಎಂಟರಂದು, ಎಬೋಲದಿಂದ ಬಳಲುತ್ತಿರುವ ನಾಡುಗಳಿಂದ ಬರುವ ಜನರ ಮೇಲೆ ಕಣ್ಗಾವಲಿಗೆ ತನ್ನ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚರಿಕೆಯನ್ನು ವಹಿಸುವ ವ್ಯವಸ್ತೆಯನ್ನು ಮಾಡಿದೆ.

✧.ಎಬೋಲ ಬೇನೆಗೆ ಸಂಬಂದಿಸಿದಂತೆ ಇರಬಹುದಾದ ಬೇನೆ ಕುರುಹುಗಳು, ಪಯಣಿಗರು ಬರುತ್ತಿರುವ ನಾಡು ಹೀಗೆ ಎಬೋಲ ಸೋಂಕು ಇದ್ದಲ್ಲಿ, ಅದನ್ನು ಗುರುತಿಸುವ ಸಲುವಾಗಿ ಪಶ್ಚಿಮ ಆಪ್ರಿಕಾದ (Wester Africa) ನಾಡುಗಳಿಂದ ಬರುವ ಪಯಣಿಗರಿಂದ ಒಂದು ಅರ್ಜಿಯನ್ನು ತುಂಬಿಸಲಾಗುತ್ತಿದೆ.

✧.2014 ಆಗಸ್ಟ್ 26 ರಂದು ಲೈಬೀರಿಯಾದಲ್ಲಿ ನೆಲೆಸಿದ್ದ ಎಬೋಲಕ್ಕೆ ತುತ್ತಾಗಿರಬಹುದಾದ 112 ಮಂದಿ ಬಾರತದ ನಾಡಿಗರು ಮುಂಬಯಿ ಹಾಗು ಡೆಲ್ಲಿಗಳ ವಿಮಾನ ನಿಲ್ದಾಣವನ್ನು ತಲುಪಿದ್ದು, ಎಬೋಲ ವೈರಸ್ ಹರಡುವುದನ್ನು ತಡೆಯಲು, ಇವರನ್ನು ಉಳಿಸಿಕೊಳ್ಳಲು ಮುಂಬಯಿ ಹಾಗು ಡೆಲ್ಲಿಯ ಆಸ್ಪತ್ರೆಗಳಲ್ಲಿ (hospital) ಬೇರ್ಪಡಿತ (isolation) ಕೋಣೆಗಳಲ್ಲಿ ಇರಿಸಲಾಗಿದೆ.


— ಜಗತ್ತಿಗೆ ಸವಾಲೊಡ್ಡಿರುವ ಈ ಎಬೋಲಾ ವೈರಸ್ ತಡೆಗಟ್ಟುವ ಮುನ್ನೆಚ್ಚರಿಕೆಯ ಕೆಲಸಗಳು, ಇದನ್ನು ತೊಡೆದುಹಾಕಲು ಬೇಕಾಗಿರುವ ಮದ್ದಿನ ಅರಕೆಗಳು ಬಿರುಸಿನಿಂದ ಜಗತ್ತಿನೆಲ್ಲೆಡೆ ನಡೆಯುತ್ತಿವೆ, ಎಬೋಲಾ ಎದುರಿಸಲು ಜಗತ್ತು ಸಜ್ಜಾಗುತ್ತಿದೆ.

(ಕೃಪೆ: ಹೊನಲು)

Tuesday 10 February 2015

☀.‘ಭಾರತದಲ್ಲಿ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಅಭಿಯಾನದ ಕುರಿತು ಚರ್ಚಿಸಿ  ('Make in India' campaign)

☀.‘ಭಾರತದಲ್ಲಿ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಅಭಿಯಾನದ ಕುರಿತು ಚರ್ಚಿಸಿ
('Make in India' campaign)
━━━━━━━━━━━━━━━━━━━━━━━━━━━━━━━━━━━━━━━━━━━━━

— ದೇಶದ ತಯಾರಿಕಾ ವಲಯಕ್ಕೆ ಚೈತನ್ಯ ತುಂಬುವ ಮತ್ತು ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಎರಡು ಪ್ರಮುಖ ಸವಾಲುಗಳನ್ನು ಎದುರಿಸುವತ್ತ ಪ್ರಧಾನಿ ನರೇಂದ್ರ ಮೋದಿ ದೃಷ್ಟಿ ಹರಿಸಿದ್ದಾರೆ. ನಮ್ಮ ದೇಶದಲ್ಲಿ ಅಧಿಕಾರಶಾಹಿಯ ವಿಳಂಬ ಧೋರಣೆ, ಅಸಹ­ಕಾರ, ನಾನಾ ಬಗೆಯ ಕಾನೂನು ಕಟ್ಟಳೆಗಳು ಬಂಡವಾಳ ಹೂಡಿಕೆದಾರರಿಗೆ ಮತ್ತು ಉದ್ಯಮ ಸ್ಥಾಪಿಸುವವರಿಗೆ ಅಡಚಣೆಯಾಗಿವೆ ಎಂಬ ಕಟು ಸತ್ಯ ಅವರ ಗಮನಕ್ಕೂ ಬಂದಿದೆ.

— ಅದಕ್ಕಾಗಿಯೇ ನವ ದೆಹಲಿಯ ವಿಜ್ಞಾನ ಭವನದಲ್ಲಿ ಅವರು, ‘ಭಾರತದಲ್ಲಿ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ, ಹೂಡಿಕೆ ಮತ್ತು ತಯಾರಿಕಾ ಕ್ಷೇತ್ರಕ್ಕಿರುವ ಅಡ್ಡಿ ಆತಂಕಗಳನ್ನು ನಿವಾರಿಸುವ ಭರವಸೆ ಕೊಟ್ಟಿದ್ದಾರೆ. ‘ಮೊದಲು ಭಾರತದ ಅಭಿವೃದ್ಧಿ’ (ಫಸ್ಟ್ ಡೆವಲಪ್ ಇಂಡಿಯಾ) ಮತ್ತು ‘ಭಾರತದಲ್ಲಿ ತಯಾರಿಸಿ’ ಎಂಬ ಎರಡು ಮಂತ್ರಗಳೊಡನೆ ಅವರು ದೇಶಿ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರ ಮನವೊಲಿಸಲು ಮುಂದಾಗಿದ್ದು. ಈ ಮೂಲಕ ಎಫ್‌ಡಿಐಗೆ (ವಿದೇಶಿ ನೇರ ಹೂಡಿಕೆ) ಹೊಸ ಬಗೆಯ ವ್ಯಾಖ್ಯಾನ ನೀಡಿದ್ದಾರೆ. ಅಂದರಂತೆ ಷೇರು ಪೇಟೆಯ ಏರುಗತಿ ಮತ್ತು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳು, ಬ್ಯಾಂಕಿಂಗ್ ತಜ್ಞರ ಉತ್ಸಾಹದ ಪ್ರತಿಕ್ರಿಯೆಯೇ ಸಾಕ್ಷಿ.

— ದೇಶಿ ತಯಾರಿಕಾ  ಕ್ಷೇತ್ರದ ಬೆಳವಣಿಗೆ ದರ 2011ರಿಂದ ಈಚೆಗೆ ಕಳವಳಕಾರಿ ಮಟ್ಟಕ್ಕೆ ಇಳಿದಿದೆ. 2005—11ರ ಅವಧಿಯಲ್ಲಿ ಅದು ಶೇ 10ರಷ್ಟು ಏರಿಕೆ ದಾಖಲಿಸಿತ್ತು. 2011–12ರಲ್ಲಿ ಶೇ 2.7 ಮತ್ತು 2013ರಲ್ಲಿ ಶೇ 1ರ ಆಸುಪಾಸಿಗೆ ಕುಸಿದಿದೆ. ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ತಯಾರಿಕಾ ವಲಯದ ಪಾಲು ಕೆಲ ವರ್ಷಗಳಿಂದ ಶೇ 15ನ್ನು ದಾಟಿಲ್ಲ.  ಕೌಶಲಪೂರ್ಣ ಮಾನವ ಸಂಪನ್ಮೂಲ, ಯಥೇಚ್ಛ ಅವಕಾಶಗಳಿದ್ದರೂ ಚೀನಾವನ್ನು ಹಿಂದಿಕ್ಕಲು ನಮಗೆ ಸಾಧ್ಯವಾಗಿಲ್ಲ. ಕೆಲವೇ ವರ್ಷಗಳ ಹಿಂದೆ ಕಳಪೆ ವಸ್ತುಗಳಿಗಷ್ಟೇ ಹೆಸರಾಗಿದ್ದ ಚೀನಾ ಇಂದು ಗುಣಮಟ್ಟದ ಸಾಮಗ್ರಿಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಇಡೀ ವಿಶ್ವದ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಅದರಿಂದ ನಾವು ಕಲಿಯುವುದು ಬಹಳಷ್ಟಿದೆ. ಜತೆಗೆ, ನಮ್ಮ ಬಡ ವರ್ಗವನ್ನು ಮಧ್ಯಮ ವರ್ಗದ ಮಟ್ಟಕ್ಕೆ ತರುವುದರಿಂದ, ಕೊಳ್ಳುವ ಶಕ್ತಿ ಹೆಚ್ಚಿಸುವುದರಿಂದ ಆರ್ಥಿಕ ಪ್ರಗತಿ ಮತ್ತು ಉದ್ಯೋಗಾವಕಾಶ ಸೃಷ್ಟಿ ಸಾಧ್ಯ.



✧. ‘ಭಾರತದಲ್ಲಿ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಅಭಿಯಾನದ ಉದ್ದೇಶಗಳು:

1. ವಿದೇಶಿ ಅವಲಂಬನೆಯಿಂದ ಸಂಪೂರ್ಣ ಮುಕ್ತವಾಗಿ ಭಾರತವನ್ನು ಪ್ರಮುಖ ಉತ್ಪಾದಕ ರಾಷ್ಟ್ರವನ್ನಾಗಿಸುವುದು.

2. ಉತ್ಪಾದಕತೆ ಅಗತ್ಯವಾದ ಹೂಡಿಕೆಗಾಗಿ ದೇಶ-ವಿದೇಶದ ಹೂಡಿಕೆದಾರರನ್ನು ಆಕರ್ಷಿಸುವುದು.

3. ದೇಶೀಯ ಉದ್ಯಮಿಗಳ ಅಭಿವೃದ್ಧಿಗಾಗಿ ಸಕಲ ಸೌಲಭ್ಯ ಕಲ್ಪಿಸಿ ವಿಶ್ವಮಟ್ಟದಲ್ಲಿ ಬೆಳೆಸುವುದು.

4. ವಿದೇಶಿ ಕಂಪನಿಗಳನ್ನು ಸೆಳೆಯುವುದಕ್ಕಾಗಿ ಕಾನೂನು ಪ್ರಕ್ರಿಯೆ ಸರಳೀಕರಣಗೊಳಿಸುವುದು.

5. ಮಾಹಿತಿ ನೀಡಿಕೆ ಸುಲಭವಾಗುವಂತೆ 72 ಗಂಟೆಯೊಳಗೆ ಉತ್ತರ ನೀಡುವ ವ್ಯವಸ್ಥೆ ಜಾರಿ ಮಾಡುವುದು.

6. ಈ ಯೋಜನೆ ಕುರಿತಂತೆ ದೇಶದಾದ್ಯಂತ ಆಂದೋಲನ ಹಮ್ಮಿಕೊಳ್ಳಲಾಗುವುದು.

✧.‘ಭಾರತವನ್ನು ಒಂದು ಮಾರುಕಟ್ಟೆಯಾಗಿ ನೋಡಬಾರದು. ಪ್ರತಿಯೊಬ್ಬ ಭಾರತೀಯನ ಖರೀದಿ ಸಾಮರ್ಥ್ಯ ಹೆಚ್ಚಿಸಲು ಇಲ್ಲಿ ಅವಕಾಶಗಳಿವೆ ಎಂಬ ದೃಷ್ಟಿಯಿಂದ ನೋಡಬೇಕು. ಅದರಿಂದ ಎಲ್ಲರಿಗೂ ಒಳಿತು’ ಎಂಬ ಮೋದಿ ಅವರ ಮಾತು ಇಲ್ಲಿ ಪ್ರಸ್ತುತ. ಈ ಉತ್ಸಾಹ ಮತ್ತು ವಿಶ್ವಾಸ ಬಳಸಿಕೊಂಡು ಭಾರತವನ್ನೂ ಚೀನಾದಂತೆ ತಯಾರಿಕಾ ರಾಷ್ಟ್ರವಾಗಿ ಬದಲಿಸುವುದು ಸರ್ಕಾರ ಮತ್ತು ಉದ್ಯಮ ರಂಗದ ಜವಾಬ್ದಾರಿ.

✧.ಕೈಗಾರಿಕಾ ರಂಗಕ್ಕೆ ಉತ್ತೇಜನ ನೀಡುವ ಸಲುವಾಗಿ ಕಾರ್ಮಿಕ ಕಾಯ್ದೆ ಹಾಗೂ ಪರಿಸರ ಸಂಬಂಧಿ ಕಾಯ್ದೆಗಳಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರ್ಕಾರ ಯೋಚಿಸುತ್ತಿರುವುದು ಸರಿಯಾಗಿಯೇ ಇದೆ. ಕಾಯ್ದೆಗಳು ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಆಗಬೇಕು. ಅದೇ ರೀತಿ, ಭೂಸ್ವಾಧೀನಕ್ಕೆ ಸಂಬಂಧಿಸಿದ ತೊಡಕುಗಳ ನಿವಾರಣೆಗೂ ಗಮನಹರಿಸಬೇಕು. ಜಮೀನು ಕಳೆದುಕೊಳ್ಳುವ ರೈತರಿಗೂ ಅನ್ಯಾಯ ಆಗಬಾರದು. ಹೂಡಿಕೆದಾರರಿಗೂ ಹೊರೆಯೆನಿಸಬಾರದು. ಅಂತಹ ಮಧ್ಯಮ ಮಾರ್ಗ ಅನುಸರಿಸುವುದು ಒಳಿತು. ಪಾರದರ್ಶಕತೆ ಮೂಲಮಂತ್ರ ಆಗಬೇಕು.

☀" ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್ " ಸೌರಶಕ್ತಿ ಕೇಂದ್ರದ ಕುರಿತು ವಿಶ್ಲೇಷಣೆ  (Asia's largest Solar Park)

☀" ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್ " ಸೌರಶಕ್ತಿ ಕೇಂದ್ರದ ಕುರಿತು ವಿಶ್ಲೇಷಣೆ
(Asia's largest Solar Park)
━━━━━━━━━━━━━━━━━━━━━━━━━━━━━━━━━━━━━━━━━━━━━
♦.ಪರಿಸರ ಅಧ್ಯಯನ


— ಏಷ್ಯಾದಲ್ಲಿಯೇ ಬೃಹತ್ತಾದ, 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾದ ಸೌರಶಕ್ತಿ ಕೇಂದ್ರವನ್ನು ಗುಜರಾತ್‌ನಲ್ಲಿ ಸ್ಥಾಪಿಸಲಾಗಿದೆ. ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಈ ಘಟಕವನ್ನುಲೋಕಾರ್ಪಣೆಗೊಳಿಸಿದರು. ಕಛ್ ಪ್ರದೇಶದ ಪಠಣ್ ಜಿಲ್ಲೆಯ ಸುಮಾರು 3 ಸಾವಿರ ಎಕರೆಗಳಷ್ಟು ಬಂಜರು ಭೂಮಿಯಲ್ಲಿ ಸೋಲಾರ್ ಪಾರ್ಕ್ ಹರಡಿಕೊಂಡಿದೆ.

✧.ದೇಶದಲ್ಲಿ ಒಟ್ಟು 900 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಗುಜರಾತ್‌ನ ಈ ಘಟಕವು ಸುಮಾರು ಮೂರನೇ ಎರಡು ಭಾಗದಷ್ಟು ಸೌರವಿದ್ಯುತ್ ಉತ್ಪಾದಿಸಲಿದೆ.

✧.ದಿನೇ ದಿನೇ ಏರುತ್ತಿರುವ ಜಾಗತಿಕ ತಾಪಮಾನ, ಹವಾಗುಣ ಬದಲಾವಣೆ ತಂದೊಡ್ಡುವ ದುಷ್ಪರಿಣಾಮಕ್ಕೆ ಪರಿಸರ ಸ್ನೇಹಿ ಯೋಜನೆಗಳೇ ಪರಿಹಾರ. ಇದಕ್ಕೆ ಸುಸ್ಥಿರ ಮತ್ತು ನವೀಕರಿಸಬಹುದಾದ ಇಂಧನ ಮೂಲವೇ ಮಾರ್ಗದರ್ಶಕವೆಂಬ ತತ್ವದಡಿ, ಗುಜರಾತ್ ಸರಕಾರದ ಈ ಮಾದರಿ ಕ್ರಮದಿಂದಾಗಿ ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವ ಸುಮಾರು 80 ಲಕ್ಷ ಟನ್‌ಗಳಷ್ಟು ಇಂಗಾಲದ ಡೈ ಆಕ್ಸೆಡ್ ಪ್ರಮಾಣ ಕಡಿತವಾಗಲಿದೆ. ಜತೆಗೆ, ವಾರ್ಷಿಕವಾಗಿ ಸುಮಾರು 9 ಲಕ್ಷ ಟನ್ ನೈಸರ್ಗಿಕ ಅನಿಲ ಉಳಿತಾಯವಾಗಲಿದೆ.

✧.ಹಾಗೆಯೇ, ರಾಜ್ಯದ ಸೌರಶಕ್ತಿ ನೀತಿ ಅಡಿಯಲ್ಲಿ ಈ ವರ್ಷದ ಅಂತ್ಯಕ್ಕೆ ಸುಮಾರು 968.5 ಮೆಗಾವ್ಯಾಟ ಸೌರಶಕ್ತಿ ಉತ್ಪಾದಿಸುವ ಗುರಿಯೊಂದಿಗೆ ಗುಜರಾತ್ ಸರಕಾರ ಕಾರ್ಯೊನ್ಮುಖವಾಗಿದೆ.ಸೌರ ಶಕ್ತಿ ಉತ್ಪಾದಿಸುವ ಉಳಿದ ಯೋಜನೆಗಳನ್ನು ರಾಜ್ಯದ ಆನಂದ್, ಬಾನಾಸ ಕಾಂತ, ಜಾಮ್‌ನಗರ,ಜುನಾಘಡ, ಕಛ್, ಪೋರ್‌ಬಂದರ್, ರಾಜ್‌ಕೋಟ್, ಸೂರತ್ ಹಾಗೂ ಸುರೇಂದ್ರ ನಗರಗಳಲ್ಲಿ ಕೈಗೊಳ್ಳಲಾಗುತ್ತಿದೆ.

✧.`ಸೋಲಾರ್ ಪಾರ್ಕ್ನ ಉದ್ದೇಶ ಸೌರ ವಿದ್ಯುತ್ ಉತ್ಪಾದನೆ ಮಾತ್ರವಲ್ಲ, ಇದಕ್ಕೆ ಪೂರಕ ಚಟುವಟಿಕೆಗಳಿಗೆ ಉತ್ತೇಜನವೂ ಸೇರಿದೆ. ಸೌರ ಘಟಕದ ನಿರ್ವಹಣೆ ಮತ್ತು ಸ್ಥಾಪನೆಗೆ ಅಗತ್ಯ ಬಿಡಿಭಾಗಗಳ ಉತ್ಪಾದನಾ ಘಟಕಗಳನ್ನು ತೆರೆಯುವ ಯೋಜನೆ ಮುಂದಿನ ಹಂತದಲ್ಲಿದೆ. ಇದರಿಂದ ಉದ್ಯೋಗಾವಕಾಶ ಹೆಚ್ಚಲಿದೆ. `ಸೋಲಾರ್ ಪಾರ್ಕ್ ನ ನಿರ್ಮಾಣದ ಹಂತದಲ್ಲಿ 6ರಿಂದ 8 ಸಾವಿರ ಮಂದಿಗೆ ಉದ್ಯೋಗ ದೊರಕಿತ್ತು.


★.ಮೋದಿ ಮಾದರಿ:

ಸೋಲಾರ್ ಪಾರ್ಕ್‌ಗಳ ಸ್ಥಾಪನೆ ಆಗಿನ ಮೋದಿ ಸರಕಾರದ ಒಂದು ವಿಭಿನ್ನ ಹಾಗೂ ಮಾದರಿ ಕ್ರಮವಾಗಿದೆ. ಸೌರಶಕ್ತಿ ಉತ್ಪಾದನೆಗಾಗಿ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದೆ. ಸೌರಶಕ್ತಿ ಯೋಜನೆಗಳಿಗೆ ಹಣ ಒಟ್ಟುಗೂಡಿಸುವ ಬಂಡವಾಳ ಹಾಗೂ ತಂತ್ರಜ್ಞಾನ ಮೇಳವೂ ಗುಜರಾತ್‌ನ ಗಾಂಧಿನಗರದಲ್ಲಿ ಏ.20 ಮತ್ತು 21ರಂದು ಆಯೋಜನೆಯಾಗಿತ್ತು. 

☀.ಅಗ್ನಿ-5 ಕ್ಷಿಪಣಿ: ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM) (Missile Agni -5: Inter-Continental Ballistic Missile)

☀.ಅಗ್ನಿ-5 ಕ್ಷಿಪಣಿ: ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM)
(Missile Agni -5: Inter-Continental Ballistic Missile)
━━━━━━━━━━━━━━━━━━━━━━━━━━━━━━━━━━━━━━━━━━━━━
♦.ಸಾಮಾನ್ಯ ವಿಜ್ಞಾನ.


— ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 5,000 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ 1.5 ಟನ್ ಅಣ್ವಸ್ತ್ರ ಸಿಡಿತಲೆಯೊಂದಿಗೆ ಕ್ರಮಿಸಬಲ್ಲ ಡಿಆರ್‌ಡಿಓ ಮಹತ್ವಾಕಾಂಕ್ಷಿಯ ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಜಿಗಿಯುವ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಅಗ್ನಿ-5 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಇದರೊಂದಿಗೆ ಜಗತ್ತಿನ ಖಂಡಾಂತರ ಕ್ಷಿಪಣಿ ಸಾಮರ್ಥ್ಯ ಹೊಂದಿರುವ ಪ್ರಮುಖ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾದ ಹೆಮ್ಮೆಗೆ ಭಾರತ ಪಾತ್ರವಾಗಿದೆ.

✧.ಒಡಿಶಾ ಕರಾವಳಿಯ ವ್ಹೀಲರ್ ಐಲ್ಯಾಂಡ್‌ನಿಂದ Apr 19, 2012ರಲ್ಲಿ ಘನ ಇಂಧನ ಬಳಸಿ ಚಾಲನೆಗೊಳ್ಳುವ ಅಗ್ನಿ-5 ಕ್ಷಿಪಣಿಯನ್ನು ರಕ್ಷಣಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯು (ಡಿಆರ್‌ಡಿಒ) ಯಶಸ್ವಿಯಾಗಿ ಉಡಾಯಿಸಿತು.

✧. ಅಗ್ನಿ-5ರ ಮೊದಲ ಎರಡು ಪ್ರಯೋಗಗಳನ್ನು 'ಹಾಟ್ ಲಾಂಚ್ ಕಾನ್ಫಿಗರೇಶನ್'ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಪ್ರಯೋಗ (ಎ5-01) 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಪ್ರಯೋಗ (ಎ5-02) 2013ರ ಸೆಪ್ಟೆಂಬರ್ 15ರಂದು ನಡೆದಿದೆ.

✧.ಇದು ಅಗ್ನಿ-5ರ ಮೂರನೇ ಪರೀಕ್ಷೆಯಾಗಿದ್ದು, ಇದೇ ಪ್ರಥಮ ಬಾರಿಗೆ ಕ್ಯಾನಿಸ್ಟರ್ ಮೂಲಕ ಉಡಾವಣೆ ಮಾಡಲಾಗಿದೆ. ಈ ಕ್ಷಿಪಣಿಯ ಎಲ್ಲ ಮೂರು ಹಂತಗಳನ್ನು ಫ್ಲೆಕ್ಸ್ ನೋಜಲ್ ಪದ್ಧತಿ ಮೂಲಕ ನಿಯಂತ್ರಿಸಲಾಗಿದೆ. 'ಇನ್ನೋವೇಟಿವ್ ಇನರ್ಶಿಯಲ್ ಎನರ್ಜಿ ಮ್ಯಾನೇಜ್‌ಮೆಂಟ್ ಎಕ್ಸ್‌ಪ್ಲಿಸಿಟ್ ಗೈಡೆನ್ಸ್‌'ನಿಂದ ಮಾರ್ಗದರ್ಶನ ಸಿಕ್ಕಿದೆ.

✧.ಅಗ್ನಿ-5ರ ಮೊದಲ ಎರಡು ಪ್ರಯೋಗಗಳನ್ನು 'ಹಾಟ್ ಲಾಂಚ್ ಕಾನ್ಫಿಗರೇಶನ್'ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಪ್ರಯೋಗ (ಎ5-01) 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಪ್ರಯೋಗ (ಎ5-02) 2013ರ ಸೆಪ್ಟೆಂಬರ್ 15ರಂದು ನಡೆದಿದೆ.

✧.ಈ ಪರೀಕ್ಷೆಯೊಂದಿಗೆ ಭಾರತ ಕ್ಷಿಪಣಿ ಪ್ರಾಬಲ್ಯದಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ನೆಲದಿಂದ ನೆಲಕ್ಕೆ ಚಿಮ್ಮುವ ಸ್ವದೇಶಿ ನಿರ್ಮಿತ ಖಂಡಾಂತರ ಕ್ಷಿಪಣಿ ನೆರೆ ರಾಷ್ಟ್ರ ಚೀನಾದ ಯಾವುದೇ ಭಾಗವನ್ನು ಮತ್ತು ಯೂರೋಪ್ ರಾಷ್ಟ್ರಗಳನ್ನೂ ಗುರಿ ಮಾಡುವಷ್ಟು ಸಾಮರ್ಥ್ಯ ಹೊಂದಿದೆ.

✧.1.5 ಟನ್ ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಈ ಪ್ರದೇಶಗಳಿಗೆ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. ಅಲ್ಲದೇ ಇದು ಸ್ವಯಂಚಾಲಿತ ಸೌಲಭ್ಯವನ್ನೂ ಹೊಂದಿದೆ. ವಿವಿಧ ರೇಡಾರ್ ಮತ್ತು ಸಂಪರ್ಕ ವ್ಯವಸ್ಥೆಯ ಮೂಲಕವೂ ಮಾಹಿತಿ ಪಡೆಯುವ ವಿಶೇಷ ಗುಣ ಇದಕ್ಕಿದೆ.

✧.ಕ್ಷಿಪಣಿ ಬಂದೂಕಿನ ಗುಂಡುಗಳ ರೂಪ ಹೊಂದಿದ್ದು, ಇದನ್ನು ರಸ್ತೆ ಮತ್ತು ರೈಲು ಮಾರ್ಗದಲ್ಲಿ ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ರಾಷ್ಟ್ರ ರಕ್ಷಣೆಯಲ್ಲಿ ಶತ್ರುಗಳ ದಾಳಿ ತಡೆಯಲು ಮೇಲ್ಮೈಯಿಂದ ಮೇಲ್ಮೈಗೆಗೆ ಚಿಮ್ಮುವ ಕ್ಷಿಪಣಿ ಅತ್ಯುಪಯುಕ್ತವಾಗಿದೆ



★.ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ:

— ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆಯಲ್ಲಿ ಭಾರತ ಯಶಸ್ವಿಯಾಗುವುದರೊಂದಿಗೆ ಖಂಡಾಂತರ ಕ್ಷಿಪಣಿ ಸಾಮರ್ಥ್ಯವನ್ನು ಹೊಂದಿರುವ ಜಗತ್ತಿನ ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಿದೆ. ಅಮೆರಿಕಾ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ರಷ್ಯಾ ಇದಕ್ಕೂ ಮೊದಲು ಈ ಸಾಮರ್ಥ್ಯ ಹೊಂದಿದ್ದವು.



★'ಅಗ್ನಿ-5'ರ ವಿಶೇಷತೆಗಳು :

* 17 ಮೀಟರ್ ಉದ್ದ, 2 ಮೀಟರ್ ವ್ಯಾಸ, 50 ಟನ್ ತೂಕ.

* ಸುಮಾರು 5 ಸಾವಿರ ಕಿ.ಮೀ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯ.

* 1.5 ಟನ್ ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವಷ್ಟು ಶಕ್ತಿಶಾಲಿ.

* ಕ್ಷಿಪಣಿ ನಿರ್ಮಾಣಕ್ಕೆ 2,500 ಕೋಟಿ ರೂ. ವೆಚ್ಚ.

* ಸೇನೆಗೆ 2014-15ರ ವೇಳೆಗೆ ನಿಯೋಜನೆ .

* ಈ ಕ್ಷಿಪಣಿಯನ್ನು ಸಣ್ಣ ಕೃತಕ ಉಪಗ್ರಹಗಳ ಉಡ್ಡಯನಕ್ಕೂ ಬಳಸಬಹುದಾಗಿದೆ.

* ಕಕ್ಷೆಯಲ್ಲಿರುವ ವೈರಿ ರಾಷ್ಟ್ರದ ಕೃತಕ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ.

* ಒಂದು ಸಲ ಉಡಾವಣೆ ಮಾಡಿದರೆ, ಅದನ್ನು ತಡೆಯುವುದು ಅಸಾಧ್ಯ.

* ಭದ್ರತೆಗಾಗಿನ ಸಂಪುಟ ಸಮಿತಿ ಒಪ್ಪಿಗೆ ಕೊಟ್ಟರೆ ಮಾತ್ರ ಈ ಕ್ಷಿಪಣಿ ಉಡಾವಣೆಗೆ ಅವಕಾಶ.

* ನಿಕೋಬಾರ್ ದ್ವೀಪದಿಂದ ಉಡಾವಣೆ ಮಾಡಿದರೆ ಇಡೀ ಚೀನಾ ತಲುಪಬಲ್ಲುದು.

* ಪೂರ್ವ ಯುರೋಪ್, ಉತ್ತರ ಯುರೋಪ್, ಪೂರ್ವ ಆಫ್ರಿಕಾ ಮತ್ತು ಆಸ್ಟ್ರೇಲಿಯಾವನ್ನುಕ್ರಮಿಸುವ ಸಾಮರ್ಥ್ಯ.

* ಭೂ ವಾತಾವರಣವನ್ನು ಮರು ಪ್ರವೇಶಿಸಿದಾಗ 5 ಸಾವಿರ ಡಿಗ್ರಿ ಉಷ್ಣಾಂಶವನ್ನು ಕಾಯ್ದಿಟ್ಟುಕೊಳ್ಳುತ್ತದೆ.

* ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗುವುದರೊಂದಿಗೆ ಚೀನಾದ ಪ್ರಾಬಲ್ಯ ಹತ್ತಿಕ್ಕಿ ಪ್ರಾದೇಶಿಕ ಶಕ್ತಿಯಾಗಿ ಭಾರತ ಮಹತ್ವದ ಹೆಜ್ಜೆ..

(Courtesy: All Newspapers) 
☀.ಅಗ್ನಿ-5 ಕ್ಷಿಪಣಿ: ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM)
(Missile Agni -5: Inter-Continental Ballistic Missile)
━━━━━━━━━━━━━━━━━━━━━━━━━━━━━━━━━━━━━━━━━━━━━
♦.ಸಾಮಾನ್ಯ ವಿಜ್ಞಾನ.

— ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 5,000 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ 1.5 ಟನ್ ಅಣ್ವಸ್ತ್ರ ಸಿಡಿತಲೆಯೊಂದಿಗೆ ಕ್ರಮಿಸಬಲ್ಲ ಡಿಆರ್‌ಡಿಓ ಮಹತ್ವಾಕಾಂಕ್ಷಿಯ ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಜಿಗಿಯುವ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಅಗ್ನಿ-5 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಇದರೊಂದಿಗೆ ಜಗತ್ತಿನ ಖಂಡಾಂತರ ಕ್ಷಿಪಣಿ ಸಾಮರ್ಥ್ಯ ಹೊಂದಿರುವ ಪ್ರಮುಖ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾದ ಹೆಮ್ಮೆಗೆ ಭಾರತ ಪಾತ್ರವಾಗಿದೆ.

✧.ಒಡಿಶಾ ಕರಾವಳಿಯ ವ್ಹೀಲರ್ ಐಲ್ಯಾಂಡ್‌ನಿಂದ Apr 19, 2012ರಲ್ಲಿ ಘನ ಇಂಧನ ಬಳಸಿ ಚಾಲನೆಗೊಳ್ಳುವ ಅಗ್ನಿ-5 ಕ್ಷಿಪಣಿಯನ್ನು ರಕ್ಷಣಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯು (ಡಿಆರ್‌ಡಿಒ) ಯಶಸ್ವಿಯಾಗಿ ಉಡಾಯಿಸಿತು. ಅಗ್ನಿ-5ರ ಮೊದಲ ಎರಡು ಪ್ರಯೋಗಗಳನ್ನು 'ಹಾಟ್ ಲಾಂಚ್ ಕಾನ್ಫಿಗರೇಶನ್'ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಪ್ರಯೋಗ (ಎ5-01) 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಪ್ರಯೋಗ (ಎ5-02) 2013ರ ಸೆಪ್ಟೆಂಬರ್ 15ರಂದು ನಡೆದಿದೆ.

✧.ಇದು ಅಗ್ನಿ-5ರ ಮೂರನೇ ಪರೀಕ್ಷೆಯಾಗಿದ್ದು, ಇದೇ ಪ್ರಥಮ ಬಾರಿಗೆ ಕ್ಯಾನಿಸ್ಟರ್ ಮೂಲಕ ಉಡಾವಣೆ ಮಾಡಲಾಗಿದೆ. ಈ ಕ್ಷಿಪಣಿಯ ಎಲ್ಲ ಮೂರು ಹಂತಗಳನ್ನು ಫ್ಲೆಕ್ಸ್ ನೋಜಲ್ ಪದ್ಧತಿ ಮೂಲಕ ನಿಯಂತ್ರಿಸಲಾಗಿದೆ. 'ಇನ್ನೋವೇಟಿವ್ ಇನರ್ಶಿಯಲ್ ಎನರ್ಜಿ ಮ್ಯಾನೇಜ್‌ಮೆಂಟ್ ಎಕ್ಸ್‌ಪ್ಲಿಸಿಟ್ ಗೈಡೆನ್ಸ್‌'ನಿಂದ ಮಾರ್ಗದರ್ಶನ ಸಿಕ್ಕಿದೆ.

✧.ಅಗ್ನಿ-5ರ ಮೊದಲ ಎರಡು ಪ್ರಯೋಗಗಳನ್ನು 'ಹಾಟ್ ಲಾಂಚ್ ಕಾನ್ಫಿಗರೇಶನ್'ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಪ್ರಯೋಗ (ಎ5-01) 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಪ್ರಯೋಗ (ಎ5-02) 2013ರ ಸೆಪ್ಟೆಂಬರ್ 15ರಂದು ನಡೆದಿದೆ.

✧.ಈ ಪರೀಕ್ಷೆಯೊಂದಿಗೆ ಭಾರತ ಕ್ಷಿಪಣಿ ಪ್ರಾಬಲ್ಯದಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ನೆಲದಿಂದ ನೆಲಕ್ಕೆ ಚಿಮ್ಮುವ ಸ್ವದೇಶಿ ನಿರ್ಮಿತ ಖಂಡಾಂತರ ಕ್ಷಿಪಣಿ ನೆರೆ ರಾಷ್ಟ್ರ ಚೀನಾದ ಯಾವುದೇ ಭಾಗವನ್ನು ಮತ್ತು ಯೂರೋಪ್ ರಾಷ್ಟ್ರಗಳನ್ನೂ ಗುರಿ ಮಾಡುವಷ್ಟು ಸಾಮರ್ಥ್ಯ ಹೊಂದಿದೆ.
✧.1.5 ಟನ್ ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಈ ಪ್ರದೇಶಗಳಿಗೆ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. ಅಲ್ಲದೇ ಇದು ಸ್ವಯಂಚಾಲಿತ ಸೌಲಭ್ಯವನ್ನೂ ಹೊಂದಿದೆ. ವಿವಿಧ ರೇಡಾರ್ ಮತ್ತು ಸಂಪರ್ಕ ವ್ಯವಸ್ಥೆಯ ಮೂಲಕವೂ ಮಾಹಿತಿ ಪಡೆಯುವ ವಿಶೇಷ ಗುಣ ಇದಕ್ಕಿದೆ.
✧.ಕ್ಷಿಪಣಿ ಬಂದೂಕಿನ ಗುಂಡುಗಳ ರೂಪ ಹೊಂದಿದ್ದು, ಇದನ್ನು ರಸ್ತೆ ಮತ್ತು ರೈಲು ಮಾರ್ಗದಲ್ಲಿ ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ರಾಷ್ಟ್ರ ರಕ್ಷಣೆಯಲ್ಲಿ ಶತ್ರುಗಳ ದಾಳಿ ತಡೆಯಲು ಮೇಲ್ಮೈಯಿಂದ ಮೇಲ್ಮೈಗೆಗೆ ಚಿಮ್ಮುವ ಕ್ಷಿಪಣಿ ಅತ್ಯುಪಯುಕ್ತವಾಗಿದೆ

★.ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ:
ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆಯಲ್ಲಿ ಭಾರತ ಯಶಸ್ವಿಯಾಗುವುದರೊಂದಿಗೆ ಖಂಡಾಂತರ ಕ್ಷಿಪಣಿ ಸಾಮರ್ಥ್ಯವನ್ನು ಹೊಂದಿರುವ ಜಗತ್ತಿನ ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಿದೆ. ಅಮೆರಿಕಾ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ರಷ್ಯಾ ಇದಕ್ಕೂ ಮೊದಲು ಈ ಸಾಮರ್ಥ್ಯ ಹೊಂದಿದ್ದವು.

★'ಅಗ್ನಿ-5'ರ ವಿಶೇಷತೆಗಳು :
* 17 ಮೀಟರ್ ಉದ್ದ, 2 ಮೀಟರ್ ವ್ಯಾಸ, 50 ಟನ್ ತೂಕ.* ಸುಮಾರು 5 ಸಾವಿರ ಕಿ.ಮೀ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯ.* 1.5 ಟನ್ ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವಷ್ಟು ಶಕ್ತಿಶಾಲಿ.* ಕ್ಷಿಪಣಿ ನಿರ್ಮಾಣಕ್ಕೆ 2,500 ಕೋಟಿ ರೂ. ವೆಚ್ಚ.* ಸೇನೆಗೆ 2014-15ರ ವೇಳೆಗೆ ನಿಯೋಜನೆ .* ಈ ಕ್ಷಿಪಣಿಯನ್ನು ಸಣ್ಣ ಕೃತಕ ಉಪಗ್ರಹಗಳ ಉಡ್ಡಯನಕ್ಕೂ ಬಳಸಬಹುದಾಗಿದೆ.* ಕಕ್ಷೆಯಲ್ಲಿರುವ ವೈರಿ ರಾಷ್ಟ್ರದ ಕೃತಕ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ.* ಒಂದು ಸಲ ಉಡಾವಣೆ ಮಾಡಿದರೆ, ಅದನ್ನು ತಡೆಯುವುದು ಅಸಾಧ್ಯ.* ಭದ್ರತೆಗಾಗಿನ ಸಂಪುಟ ಸಮಿತಿ ಒಪ್ಪಿಗೆ ಕೊಟ್ಟರೆ ಮಾತ್ರ ಈ ಕ್ಷಿಪಣಿ ಉಡಾವಣೆಗೆ ಅವಕಾಶ.* ನಿಕೋಬಾರ್ ದ್ವೀಪದಿಂದ ಉಡಾವಣೆ ಮಾಡಿದರೆ ಇಡೀ ಚೀನಾ ತಲುಪಬಲ್ಲುದು.* ಪೂರ್ವ ಯುರೋಪ್, ಉತ್ತರ ಯುರೋಪ್, ಪೂರ್ವ ಆಫ್ರಿಕಾ ಮತ್ತು ಆಸ್ಟ್ರೇಲಿಯಾವನ್ನುಕ್ರಮಿಸುವ ಸಾಮರ್ಥ್ಯ.* ಭೂ ವಾತಾವರಣವನ್ನು ಮರು ಪ್ರವೇಶಿಸಿದಾಗ 5 ಸಾವಿರ ಡಿಗ್ರಿ ಉಷ್ಣಾಂಶವನ್ನು ಕಾಯ್ದಿಟ್ಟುಕೊಳ್ಳುತ್ತದೆ.* ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗುವುದರೊಂದಿಗೆ ಚೀನಾದ ಪ್ರಾಬಲ್ಯ ಹತ್ತಿಕ್ಕಿ ಪ್ರಾದೇಶಿಕ ಶಕ್ತಿಯಾಗಿ ಭಾರತ ಮಹತ್ವದ ಹೆಜ್ಜೆ.
☀.ಅಗ್ನಿ-5 ಕ್ಷಿಪಣಿ: ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM)
(Missile Agni -5: Inter-Continental Ballistic Missile)
━━━━━━━━━━━━━━━━━━━━━━━━━━━━━━━━━━━━━━━━━━━━━
♦.ಸಾಮಾನ್ಯ ವಿಜ್ಞಾನ.

— ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 5,000 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ 1.5 ಟನ್ ಅಣ್ವಸ್ತ್ರ ಸಿಡಿತಲೆಯೊಂದಿಗೆ ಕ್ರಮಿಸಬಲ್ಲ ಡಿಆರ್‌ಡಿಓ ಮಹತ್ವಾಕಾಂಕ್ಷಿಯ ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಜಿಗಿಯುವ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಅಗ್ನಿ-5 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಇದರೊಂದಿಗೆ ಜಗತ್ತಿನ ಖಂಡಾಂತರ ಕ್ಷಿಪಣಿ ಸಾಮರ್ಥ್ಯ ಹೊಂದಿರುವ ಪ್ರಮುಖ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾದ ಹೆಮ್ಮೆಗೆ ಭಾರತ ಪಾತ್ರವಾಗಿದೆ.

✧.ಒಡಿಶಾ ಕರಾವಳಿಯ ವ್ಹೀಲರ್ ಐಲ್ಯಾಂಡ್‌ನಿಂದ Apr 19, 2012ರಲ್ಲಿ ಘನ ಇಂಧನ ಬಳಸಿ ಚಾಲನೆಗೊಳ್ಳುವ ಅಗ್ನಿ-5 ಕ್ಷಿಪಣಿಯನ್ನು ರಕ್ಷಣಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯು (ಡಿಆರ್‌ಡಿಒ) ಯಶಸ್ವಿಯಾಗಿ ಉಡಾಯಿಸಿತು. ಅಗ್ನಿ-5ರ ಮೊದಲ ಎರಡು ಪ್ರಯೋಗಗಳನ್ನು 'ಹಾಟ್ ಲಾಂಚ್ ಕಾನ್ಫಿಗರೇಶನ್'ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಪ್ರಯೋಗ (ಎ5-01) 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಪ್ರಯೋಗ (ಎ5-02) 2013ರ ಸೆಪ್ಟೆಂಬರ್ 15ರಂದು ನಡೆದಿದೆ.

✧.ಇದು ಅಗ್ನಿ-5ರ ಮೂರನೇ ಪರೀಕ್ಷೆಯಾಗಿದ್ದು, ಇದೇ ಪ್ರಥಮ ಬಾರಿಗೆ ಕ್ಯಾನಿಸ್ಟರ್ ಮೂಲಕ ಉಡಾವಣೆ ಮಾಡಲಾಗಿದೆ. ಈ ಕ್ಷಿಪಣಿಯ ಎಲ್ಲ ಮೂರು ಹಂತಗಳನ್ನು ಫ್ಲೆಕ್ಸ್ ನೋಜಲ್ ಪದ್ಧತಿ ಮೂಲಕ ನಿಯಂತ್ರಿಸಲಾಗಿದೆ. 'ಇನ್ನೋವೇಟಿವ್ ಇನರ್ಶಿಯಲ್ ಎನರ್ಜಿ ಮ್ಯಾನೇಜ್‌ಮೆಂಟ್ ಎಕ್ಸ್‌ಪ್ಲಿಸಿಟ್ ಗೈಡೆನ್ಸ್‌'ನಿಂದ ಮಾರ್ಗದರ್ಶನ ಸಿಕ್ಕಿದೆ.
✧.ಅಗ್ನಿ-5ರ ಮೊದಲ ಎರಡು ಪ್ರಯೋಗಗಳನ್ನು 'ಹಾಟ್ ಲಾಂಚ್ ಕಾನ್ಫಿಗರೇಶನ್'ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಪ್ರಯೋಗ (ಎ5-01) 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಪ್ರಯೋಗ (ಎ5-02) 2013ರ ಸೆಪ್ಟೆಂಬರ್ 15ರಂದು ನಡೆದಿದೆ.

✧.ಈ ಪರೀಕ್ಷೆಯೊಂದಿಗೆ ಭಾರತ ಕ್ಷಿಪಣಿ ಪ್ರಾಬಲ್ಯದಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ನೆಲದಿಂದ ನೆಲಕ್ಕೆ ಚಿಮ್ಮುವ ಸ್ವದೇಶಿ ನಿರ್ಮಿತ ಖಂಡಾಂತರ ಕ್ಷಿಪಣಿ ನೆರೆ ರಾಷ್ಟ್ರ ಚೀನಾದ ಯಾವುದೇ ಭಾಗವನ್ನು ಮತ್ತು ಯೂರೋಪ್ ರಾಷ್ಟ್ರಗಳನ್ನೂ ಗುರಿ ಮಾಡುವಷ್ಟು ಸಾಮರ್ಥ್ಯ ಹೊಂದಿದೆ.
✧.1.5 ಟನ್ ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಈ ಪ್ರದೇಶಗಳಿಗೆ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. ಅಲ್ಲದೇ ಇದು ಸ್ವಯಂಚಾಲಿತ ಸೌಲಭ್ಯವನ್ನೂ ಹೊಂದಿದೆ. ವಿವಿಧ ರೇಡಾರ್ ಮತ್ತು ಸಂಪರ್ಕ ವ್ಯವಸ್ಥೆಯ ಮೂಲಕವೂ ಮಾಹಿತಿ ಪಡೆಯುವ ವಿಶೇಷ ಗುಣ ಇದಕ್ಕಿದೆ.
✧.ಕ್ಷಿಪಣಿ ಬಂದೂಕಿನ ಗುಂಡುಗಳ ರೂಪ ಹೊಂದಿದ್ದು, ಇದನ್ನು ರಸ್ತೆ ಮತ್ತು ರೈಲು ಮಾರ್ಗದಲ್ಲಿ ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ರಾಷ್ಟ್ರ ರಕ್ಷಣೆಯಲ್ಲಿ ಶತ್ರುಗಳ ದಾಳಿ ತಡೆಯಲು ಮೇಲ್ಮೈಯಿಂದ ಮೇಲ್ಮೈಗೆಗೆ ಚಿಮ್ಮುವ ಕ್ಷಿಪಣಿ ಅತ್ಯುಪಯುಕ್ತವಾಗಿದೆ

★.ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ:
ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆಯಲ್ಲಿ ಭಾರತ ಯಶಸ್ವಿಯಾಗುವುದರೊಂದಿಗೆ ಖಂಡಾಂತರ ಕ್ಷಿಪಣಿ ಸಾಮರ್ಥ್ಯವನ್ನು ಹೊಂದಿರುವ ಜಗತ್ತಿನ ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಿದೆ. ಅಮೆರಿಕಾ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ರಷ್ಯಾ ಇದಕ್ಕೂ ಮೊದಲು ಈ ಸಾಮರ್ಥ್ಯ ಹೊಂದಿದ್ದವು.

★'ಅಗ್ನಿ-5'ರ ವಿಶೇಷತೆಗಳು :
* 17 ಮೀಟರ್ ಉದ್ದ, 2 ಮೀಟರ್ ವ್ಯಾಸ, 50 ಟನ್ ತೂಕ.* ಸುಮಾರು 5 ಸಾವಿರ ಕಿ.ಮೀ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯ.* 1.5 ಟನ್ ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವಷ್ಟು ಶಕ್ತಿಶಾಲಿ.* ಕ್ಷಿಪಣಿ ನಿರ್ಮಾಣಕ್ಕೆ 2,500 ಕೋಟಿ ರೂ. ವೆಚ್ಚ.* ಸೇನೆಗೆ 2014-15ರ ವೇಳೆಗೆ ನಿಯೋಜನೆ .* ಈ ಕ್ಷಿಪಣಿಯನ್ನು ಸಣ್ಣ ಕೃತಕ ಉಪಗ್ರಹಗಳ ಉಡ್ಡಯನಕ್ಕೂ ಬಳಸಬಹುದಾಗಿದೆ.* ಕಕ್ಷೆಯಲ್ಲಿರುವ ವೈರಿ ರಾಷ್ಟ್ರದ ಕೃತಕ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ.* ಒಂದು ಸಲ ಉಡಾವಣೆ ಮಾಡಿದರೆ, ಅದನ್ನು ತಡೆಯುವುದು ಅಸಾಧ್ಯ.* ಭದ್ರತೆಗಾಗಿನ ಸಂಪುಟ ಸಮಿತಿ ಒಪ್ಪಿಗೆ ಕೊಟ್ಟರೆ ಮಾತ್ರ ಈ ಕ್ಷಿಪಣಿ ಉಡಾವಣೆಗೆ ಅವಕಾಶ.* ನಿಕೋಬಾರ್ ದ್ವೀಪದಿಂದ ಉಡಾವಣೆ ಮಾಡಿದರೆ ಇಡೀ ಚೀನಾ ತಲುಪಬಲ್ಲುದು.* ಪೂರ್ವ ಯುರೋಪ್, ಉತ್ತರ ಯುರೋಪ್, ಪೂರ್ವ ಆಫ್ರಿಕಾ ಮತ್ತು ಆಸ್ಟ್ರೇಲಿಯಾವನ್ನುಕ್ರಮಿಸುವ ಸಾಮರ್ಥ್ಯ.* ಭೂ ವಾತಾವರಣವನ್ನು ಮರು ಪ್ರವೇಶಿಸಿದಾಗ 5 ಸಾವಿರ ಡಿಗ್ರಿ ಉಷ್ಣಾಂಶವನ್ನು ಕಾಯ್ದಿಟ್ಟುಕೊಳ್ಳುತ್ತದೆ.* ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗುವುದರೊಂದಿಗೆ ಚೀನಾದ ಪ್ರಾಬಲ್ಯ ಹತ್ತಿಕ್ಕಿ ಪ್ರಾದೇಶಿಕ ಶಕ್ತಿಯಾಗಿ ಭಾರತ ಮಹತ್ವದ ಹೆಜ್ಜೆ.

☀ಭಾರತ ಮತ್ತು ಪಾಕಿಸ್ತಾನದ ಸೈನ್ಯದ ಶಕ್ತಿ ಸಾಮರ್ಥ್ಯಗಳು: (Military Power Capabilities of India and Pakistan)

☀ಭಾರತ ಮತ್ತು ಪಾಕಿಸ್ತಾನದ ಸೈನ್ಯದ ಶಕ್ತಿ ಸಾಮರ್ಥ್ಯಗಳು:
(Military Power Capabilities of India and Pakistan)

—ಮುಂಬೈನಲ್ಲಿ ಉಗ್ರರು ಅಟ್ಟಹಾಸ ಮೆರೆದ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳು ಹದಗೆಟ್ಟಿವೆ.ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಎಂಬ ಆತಂಕ ಮನೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೈನ್ಯದ ಶಕ್ತಿ ಸಾಮರ್ಥ್ಯಗಳ ಬಗ್ಗೆ ಒಂದು ಇಣುಕು ನೋಟ.

☆.ಇಲ್ಲಿ ಕೊಟ್ಟ ಅಂಶಗಳನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ಅಂದಾಜು ಮಾಡಿವೆ.


☀ಭಾರತ (INDIA)

★.ಭೂ ಸೈನ್ಯ ಸೈನಿಕರು——-13,25,000;

✧.ಮೀಸಲು ಪಡೆ——-5,35,000;

✧.ಅರೆ ಸೈನಿಕ ಪಡೆ——-10,89,700;

✧.ಯುದ್ಧ ಟ್ಯಾಂಕರ್ ಗಳು——-3,898;

✧.ಇತರೆ ಸೈನಿಕ ಸಿಬ್ಬಂದಿ——-4,500


★.ವಾಯುಪಡೆ:

✧.ಯುದ್ಧ ವಿಮಾನಗಳು——-680;


★.ನೌಕಾಪಡೆ:

✧.ಜಲಾಂರ್ಗಾಮಿಗಳು——-16;

✧.ಯುದ್ಧ ನೌಕೆಗಳು——-25


★.ಅಣ್ವಸ್ತ್ರ ಸಿಡಿತಲೆಗಳು: 100—150


★.ಪ್ರಮುಖ ಕ್ಷಿಪಣಿಗಳು:

✧.ಅಗ್ನಿ-—1,2,3,4,5;
✧.ಪೃಥ್ವಿ;
✧.ನಾಗ್;
✧.ಆಕಾಶ್,
✧.ಬ್ರಹ್ಮೋಸ್

——————————————————————————————————————————


☀ಪಾಕಿಸ್ತಾನ (PAKISTAN)

★.ಭೂ ಸೈನ್ಯ ಸೈನಿಕರು——-6,19,000;

✧.ಮೀಸಲು ಪಡೆ——-5,13,000;

✧.ಅರೆಸೈನಿಕ ಪಡೆ——-2,90,000;

✧.ಯುದ್ಧ ಟ್ಯಾಂಕರ್ ಗಳು——-2, 460;

✧.ಇತರೆ ಸೈನಿಕ ಸಿಬ್ಬಂದಿ——-2,000


★.ವಾಯುಪಡೆ:

✧.ಯುದ್ಧವಿಮಾನಗಳು—— -415


★.ನೌಕಾಪಡೆ:

✧.ಜಲಾಂತರ್ಗಾಮಿಗಳು——-08;

✧.ಯುದ್ಧ ನೌಕೆಗಳು——-07


★.ಅಣ್ವಸ್ತ್ರ ಸಿಡಿತಲೆಗಳು: 20—25


★.ಪ್ರಮುಖ ಕ್ಷಿಪಣಿಗಳು:

✧.ಷಹೀನ್—-1,2;
✧.ಘೋರಿ-—1,2;
✧.ಹತಾಫ್—-1,2,3;
✧.ಬಾಬರ್

(ಕೃಪೆ: ವಿಜಯ ಕರ್ನಾಟಕ)

Monday 9 February 2015

☀ಜೈವಿಕ ಎಥೆನಾಲನ್ನು ಹೇಗೆ ತಯಾರಿಸಲಾಗುತ್ತದೆ?  (How can be prepared Organic Ethenal)

☀ಜೈವಿಕ ಎಥೆನಾಲನ್ನು ಹೇಗೆ ತಯಾರಿಸಲಾಗುತ್ತದೆ?
(How can be prepared Organic Ethenal)


☆.ಜೈವಿಕ ಎಥೆನಾಲನ್ನು ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಶರ್ಕಾರಾಂಶಗಳಿಂದ ಉತ್ಪಾದಿಸಲಾಗುತ್ತದೆ. ಕೃಷಿ ತ್ಯಾಜ್ಯಗಳಾದ ಕಬ್ಬಿನ ಸಿಪ್ಪೆ, ಹುಲ್ಲು ಮೊದಲಾದವುಗಳಲ್ಲಿರುವ ಸೆಲ್ಯುಲೋಸ್ ಎಂಬ ಸಂಯುಕ್ತ ಶರ್ಕರಾಂಶದಿಂದಲೂ ಎಥೆನಾಲ್ ಅನ್ನು ಉತ್ಪಾದಿಸಬಹುದಾಗಿದೆ. ಜೊತೆಗೆ, ಅನುಪಯುಕ್ತ ಹಣ್ಣುಗಳನ್ನು ಕೂಡ ಉಪಯೋಗಿಸಿ ಎಥೆನಾಲ್ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ.

☆.ಮೊದಲಿಗೆ ಸಂಯುಕ್ತಗಳನ್ನು ಸರಳ ಸಕ್ಕರೆಯನ್ನಾಗಿ ಪರಿವರ್ತಿಸಲಾಗುತ್ತದೆ. ನಂತರಇದನ್ನು ಸೂಕ್ಷ್ಮಜೀವಿಗಳನ್ನು ಬಳಸಿ ಹುದುಗಿಸಲಾಗುತ್ತದೆ. ಹೀಗೆ ಬರುವ ಎಥನಾಲ್ ಅನ್ನು ಭಟ್ಟಿಇಳಿಸುವಿಕೆಯ ಮುಖಾಂತರ ಜೈವಿಕ ಎಥೆನಾಲ್ ಅನ್ನು ಪಡೆಯಬಹುದು.

☆.ಜೈವಿಕ ಎಥೆನಾಲನ್ನು ಸಾಮಾನ್ಯವಾಗಿ ಇ 100 ಅಂದರೆ ಶೇ.100 ರಷ್ಟು ಎಥೆನಾಲ್, ಇ 85 ಅಂದರೆ ಶೇ.85 ರಷ್ಟು ಎಥೆನಾಲನ್ನು ಶೇ.15 ರ ಗ್ಯಾಸೋಲಿನ್ ಮಿಶ್ರಣದೊಂದಿಗೆ ಉಪಯೋಗಿಸುವುದು. ಶೇ.10 ರಷ್ಟು ಎಥೆನಾಲನ್ನು ಶೇ.90 ರಷ್ಟು ಗ್ಯಾಸೋಲಿನ್ ಮಿಶ್ರಣದೊಂದಿಗೆ ಗ್ಯಾಸೋಹಾಲ್ ಎಂಬ ಹೆಸರಿನಿಂದ ವಿವಿಧೆಡೆ ಉಪಯೋಗದಲ್ಲಿದೆ.

☀.ಬಯೋಡೀಸಲ್ (Biodiesel) ಎಂದರೇನು? ಅದನ್ನು ಹೇಗೆ ತಯಾರಿಸಲಾಗುತ್ತದೆ? 

☀.ಬಯೋಡೀಸಲ್ (Biodiesel) ಎಂದರೇನು? ಅದನ್ನು ಹೇಗೆ ತಯಾರಿಸಲಾಗುತ್ತದೆ?


☆.ಬಯೋಡೀಸಲ್ (Biodiesel) ಎಂದರೆ ಸಸ್ಯ ಜನ್ಯ, ತೈಲ, ಪ್ರಾಣಿ ಜನ್ಯ ಕೊಬ್ಬಿನಿಂದ ತಯಾರಿಸಿದ ಇಂಧನ.

—'ಬಯೋಡೀಸಲ್ (Biodiesel)' ಎಂಬುದು ಸಸ್ಯಜನ್ಯ-ತೈಲ ಅಥವಾ ಪಶು-ಕೊಬ್ಬು ಆಧಾರಿತ ಡೀಸೆಲ್‌ ರೂಪದ ಇಂಧನ. ಇದು ಆಲ್ಕೈಲ್‌(ಮಿತೈಲ್‌,ಪ್ರೊಪೈಲ್‌ ಅಥವಾ ಇತೈಲ್‌) ಎಸ್ಟರ್‌ಗಳ ಸರಣಿ ಹೊಂದಿದೆ. ಸಸ್ಯ-ತರಕಾರಿ ತೈಲ, ಪಶುವಿನ ಕೊಬ್ಬು (ಟ್ಯಾಲೊ) ನಂತಹ ಲಿಪಿಡ್‌ಗಳನ್ನು ಆಲ್ಕೊಹಾಲ್‌ನೊಂದಿಗೆ ರಾಸಾಯನಿಕ ಕ್ರಿಯೆಗೊಳಪಡಿಸಿ ಜೈವಿಕ ಡೀಸೆಲ್‌ ತಯಾರಿಸಲಾಗುತ್ತದೆ.


☆.ಜೈವಿಕ ಡೀಸೆಲ್ ಅನ್ನು ಸಸ್ಯಜನ್ಯ ಎಣ್ಣೆ ಅಥವಾ ಪ್ರಾಣಿಜನ್ಯ ಕೊಬ್ಬಿನಿಂದ ಉತ್ಪಾದಿಸಲಾಗುತ್ತದೆ. ಜೈವಿಕ ಡೀಸೆಲ್ ದೀರ್ಘ ಸರಪಳಿ ಕೊಬ್ಬಿನ ಆಮ್ಲದಿಂದ (Long Chain fatty acid) ಉತ್ಪತ್ತಿಯಾದ ಮೋನೊ ಅಲ್ಕೈಲ್ ಎಸ್ಟರ್ (Mono Alkyl Ester). ಎಣ್ಣೆ ಅಥವಾ ಕೊಬ್ಬನ್ನು ಮೆಥನಾಲ್ ಅಥವಾ ಎಥನಾಲ್ ಜೊತೆ ಸೇರಿಸಿ NaOH/KOH ಎಂಬ ಪ್ರತ್ಯಾಮ್ಲ ಪ್ರಚೋದಕದೊಂದಿಗೆ ಟ್ರಾನ್ಸ್‌ಎಸ್ಟರಿಫಿಕೇಷನ್ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ಜೈವಿಕ ಡೀಸಲ್ ತಯಾರಿಸಲಾಗುತ್ತದೆ.

—ಈ ವಿಧಾನದಿಂದ ಜೈವಿಕ ಇಂಧನವು ಡೀಸೆಲ್ ಹೊಂದಿರುವ ಸುಲಭವಾಗಿ ಉರಿಯುವ ಗುಣಗಳನ್ನು ಹೊಂದಿರುವುದರಿಂದ, ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮವನ್ನು ಕಾರ್ಯ ರೂಪಕ್ಕೆ ತಂದಾಗ ಇದನ್ನು ಬಹು ಮಟ್ಟಿಗೆ ಪೆಟ್ರೋಲಿಯಂ ಇಂಧನಕ್ಕೆ ಪರ್ಯಾಯವಾಗಿ ಉಪಯೋಗಿಸಬಹುದು.ವಿವಿದ ಮರಗಿಡಗಳ ಬೀಜಗಳಿಂದ, ಪ್ರಾಣಿಗಳ ಕೊಬ್ಬಿನಿಂದ ಉತ್ಪಾದಿಸಲ್ಪಡುವ ಎಣ್ಣೆ ಅಥವಾ ತೈಲಗಳೇ ಜೈವಿಕ ಇಂಧನಗಳಾಗಿವೆ, ಈ ರೀತಿಯ ತೈಲಗಳನ್ನು ಕೆಲವು ಖಾದ್ಯಮತ್ತು ಅಖಾದ್ಯವಾದುವುಗಳೆಂದು ವರ್ಗೀಕರಿಸಲಾಗಿದೆ.

—ಖಾದ್ಯ ತೈಲಗಳ ಉತ್ಪಾದನೆಯಲ್ಲಿ ಕೊರತೆಯಿರುವುದರಿಂದ ಮತ್ತು ಉತ್ಪಾದನಾವೆಚ್ಚ ಹೆಚ್ಚಾಗಿರುವುದರಿಂದ ಈ ತೈಲಗಳನ್ನು ಇಂಧನವನ್ನಾಗಿಬಳಸುವುದು ಸಾದ್ಯವಾಗುತ್ತಿಲ್ಲ, ಬದಲಿಗೆ ಅಖಾದ್ಯ ತೈಲಗಳನ್ನು ಮಾತ್ರ ಇಂಧನವನ್ನಾಗಿ ಬಳಸುವುದು ಬಹು ಸೂಕ್ತವಾಗಿದೆ. ಈ ತೈಲಗಳು ಮೂಲತಃ ಜೀವಜನ್ಯವಾಗಿರುವರಿಂದ ಮತ್ತು ಇದನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಡೀಸಲ್ ಯಂತ್ರಗಳಲ್ಲಿ(ಎಂಜಿನ್) ಬಳಸಬಹುದಾದ್ದರಿಂದ ಇದನ್ನು ಆಂಗ್ಲ ಭಾಷೆಯಲ್ಲಿ”ಬಯೋಡೀಸಲ್”(ಜೈವಿಕ ಡೀಸಲ್) ಎಂದು ಕರೆಯಲಾಗಿದೆ.

—ನಮ್ಮ ಪರಿಸರದಲ್ಲಿ ಕಾಣಬರುವ ಹೊಂಗೆ, ಬೇವು, ಜಟ್ರೋಫಾ, ಹಿಪ್ಪೆ, ಹರಳು, ಸಿಮರೂಬ ಇತ್ಯಾದಿ ಮರಗಳ ಬೀಜಗಳಿಂದ ದೊರೆಯುವ ತೈಲಗಳನ್ನು ಬಯೋಡೀಸಲ್ಲಾಗಿ ಬಳಸಬಹುದಾಗಿದೆ.ಬಯೋಡೀಸಲ್, ಪೆಟ್ರೋಲಿಯಂ ಡೀಸಲ್‌ಗೆ ಪರ್ಯಾಯವಾಗಿಬಳಸುವ ಇಂಧನವಾಗಿ ಬಳಸುವ ಕಾರಣದಿಂದಲೂ ಇದನ್ನು”ಬಯೋಡೀಸಲ್”(ಜೈವಿಕ ಡೀಸಲ್) ಎಂದು ಕರೆಯಲಾಗಿದೆ.

—ಸರಳವಾಗಿ ಜೈವಿಕ ಇಂಧನ ಎಂದರೆ ನೈಸರ್ಗಿಕವಾಗಿ ಪರಿಸರದಲ್ಲಿ ವಿಫುಲವಾಗಿ ಎಲ್ಲೆಡೆ ಬೆಳೆಯುವ, ದೊರೆಯುವ, ವಿವಿಧ ಜೀವರಾಶಿ ಗಿಡಮರಗಳಿಂದ ಮತ್ತು ಅವುಗಳ ಬೀಜಗಳಿಂದ ಉತ್ಪಾದಿಸಬಹುದಾದ ಎಣ್ಣೆ ಅಥವಾ ತೈಲವಾಗಿದೆ. ಈ ಎಣ್ಣೆಗಳು ಪರಿಸರ ಸ್ನೇಹಿಗಳಾಗಿದ್ದು, ಹಲವಾರು ಆರೋಗ್ಯಕರ ಉಪಯುಕ್ತತೆಯನ್ನು ಹೊಂದಿವೆ ಮತ್ತು ಈ ಎಣ್ಣೆ ಅಥವಾ ತೈಲಗಳನ್ನು ಕೃಷಿ, ಕೈಗಾರಿಕೆ, ಸಾರಿಗೆಯಂತಹ ವಿವಿಧ ವ್ಯವಸ್ಥೆಗಳಲ್ಲಿ ಇಂಧನವನ್ನಾಗಿ ಉಪಯೊಗಿಸಬಹುದಾಗಿದೆ. ಇಂಧನ ಉದ್ದೇಶಗಳಿಗಾಗಿ ಬಳಸಬಹುದಾದ ಈ ತೈಲಗಳನ್ನು ಜೈವಿಕ ಇಂಧನವೆಂದು ಕರೆಯುತ್ತಾರೆ.

 —ಈ ತೈಲಗಳನ್ನು ಎಲ್ಲೆಡೆ ಸುಲಭವಾಗಿ ಕಡಿಮೆ ವೆಚ್ಚದಲ್ಲಿ ನಿರಂತರವಾಗಿ ಮರು ಉತ್ಪಾದಿಸಬಹುದಾಗಿದೆ, ಎಲ್ಲಕ್ಕಿಂತ ಮುಖ್ಯವಾಗಿ ಈ ಇಂಧನಗಳ ಉಪಯೋಗದಿಂದ ಪರಿಸರಕ್ಕೆ ಮತ್ತು ಜೀವಜಗತ್ತಿನ ಮೇಲೆ ಯಾವುದೇ ಕೆಟ್ಟ ಪರಿಣಾಮಗಳಾಗುವುದಿಲ್ಲ ಬದಲಿಗೆ ಸುರಕ್ಫಿತ ಇಂಧನಗಳಾಗಿ ಆರ್ಥಿಕ ವ್ಯವಸ್ಥೆಗೆ ಮತ್ತು ದೇಶದ ಇಂಧನ ಸುರಕ್ಷೆತೆಗೆ ಭದ್ರಬುನಾದಿಯಾಗುತ್ತವೆ.


☀ ಜೈವಿಕ ಡೀಸಲ್ ತಯಾರಿಕೆಗೆ ಉಪಯೋಗಿಸುವ ಅಖಾದ್ಯ ತೈಲ ಬೀಜಗಳು ಯಾವುವು?

☆.ಹೊಂಗೆ, ಬೇವು, ಹಿಪ್ಪೆ, ಸೀಮರೂಬಾ ಹಾಗೂ ಜಟ್ರೋಪ ಇತ್ಯಾದಿ.


☀.ಬಯೋಡೀಸಲ್ (Biodiesel) ಎಂದರೇನು? ಅದನ್ನು ಹೇಗೆ ತಯಾರಿಸಲಾಗುತ್ತದೆ?


☆.ಬಯೋಡೀಸಲ್ (Biodiesel) ಎಂದರೆ ಸಸ್ಯ ಜನ್ಯ, ತೈಲ, ಪ್ರಾಣಿ ಜನ್ಯ ಕೊಬ್ಬಿನಿಂದ ತಯಾರಿಸಿದ ಇಂಧನ.
'ಬಯೋಡೀಸಲ್ (Biodiesel)' ಎಂಬುದು ಸಸ್ಯಜನ್ಯ-ತೈಲ ಅಥವಾ ಪಶು-ಕೊಬ್ಬು ಆಧಾರಿತ ಡೀಸೆಲ್‌ ರೂಪದ ಇಂಧನ. ಇದು ಆಲ್ಕೈಲ್‌(ಮಿತೈಲ್‌,ಪ್ರೊಪೈಲ್‌ ಅಥವಾ ಇತೈಲ್‌) ಎಸ್ಟರ್‌ಗಳ ಸರಣಿ ಹೊಂದಿದೆ. ಸಸ್ಯ-ತರಕಾರಿ ತೈಲ, ಪಶುವಿನ ಕೊಬ್ಬು (ಟ್ಯಾಲೊ) ನಂತಹ ಲಿಪಿಡ್‌ಗಳನ್ನು ಆಲ್ಕೊಹಾಲ್‌ನೊಂದಿಗೆ ರಾಸಾಯನಿಕ ಕ್ರಿಯೆಗೊಳಪಡಿಸಿ ಜೈವಿಕ ಡೀಸೆಲ್‌ ತಯಾರಿಸಲಾಗುತ್ತದೆ.

☆.ಜೈವಿಕ ಡೀಸೆಲ್ ಅನ್ನು ಸಸ್ಯಜನ್ಯ ಎಣ್ಣೆ ಅಥವಾ ಪ್ರಾಣಿಜನ್ಯ ಕೊಬ್ಬಿನಿಂದ ಉತ್ಪಾದಿಸಲಾಗುತ್ತದೆ. ಜೈವಿಕ ಡೀಸೆಲ್ ದೀರ್ಘ ಸರಪಳಿ ಕೊಬ್ಬಿನ ಆಮ್ಲದಿಂದ (Long Chain fatty acid) ಉತ್ಪತ್ತಿಯಾದ ಮೋನೊ ಅಲ್ಕೈಲ್ ಎಸ್ಟರ್ (Mono Alkyl Ester). ಎಣ್ಣೆ ಅಥವಾ ಕೊಬ್ಬನ್ನು ಮೆಥನಾಲ್ ಅಥವಾ ಎಥನಾಲ್ ಜೊತೆ ಸೇರಿಸಿ NaOH/KOH ಎಂಬ ಪ್ರತ್ಯಾಮ್ಲ ಪ್ರಚೋದಕದೊಂದಿಗೆ ಟ್ರಾನ್ಸ್‌ಎಸ್ಟರಿಫಿಕೇಷನ್ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ಜೈವಿಕ ಡೀಸಲ್ ತಯಾರಿಸಲಾಗುತ್ತದೆ.

ಈ ವಿಧಾನದಿಂದ ಜೈವಿಕ ಇಂಧನವು ಡೀಸೆಲ್ ಹೊಂದಿರುವ ಸುಲಭವಾಗಿ ಉರಿಯುವ ಗುಣಗಳನ್ನು ಹೊಂದಿರುವುದರಿಂದ, ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮವನ್ನು ಕಾರ್ಯ ರೂಪಕ್ಕೆ ತಂದಾಗ ಇದನ್ನು ಬಹು ಮಟ್ಟಿಗೆ ಪೆಟ್ರೋಲಿಯಂ ಇಂಧನಕ್ಕೆ ಪರ್ಯಾಯವಾಗಿ ಉಪಯೋಗಿಸಬಹುದು.ವಿವಿದ ಮರಗಿಡಗಳ ಬೀಜಗಳಿಂದ, ಪ್ರಾಣಿಗಳ ಕೊಬ್ಬಿನಿಂದ ಉತ್ಪಾದಿಸಲ್ಪಡುವ ಎಣ್ಣೆ ಅಥವಾ ತೈಲಗಳೇ ಜೈವಿಕ ಇಂಧನಗಳಾಗಿವೆ, ಈ ರೀತಿಯ ತೈಲಗಳನ್ನು ಕೆಲವು ಖಾದ್ಯಮತ್ತು ಅಖಾದ್ಯವಾದುವುಗಳೆಂದು ವರ್ಗೀಕರಿಸಲಾಗಿದೆ.

ಖಾದ್ಯ ತೈಲಗಳ ಉತ್ಪಾದನೆಯಲ್ಲಿ ಕೊರತೆಯಿರುವುದರಿಂದ ಮತ್ತು ಉತ್ಪಾದನಾವೆಚ್ಚ ಹೆಚ್ಚಾಗಿರುವುದರಿಂದ ಈ ತೈಲಗಳನ್ನು ಇಂಧನವನ್ನಾಗಿಬಳಸುವುದು ಸಾದ್ಯವಾಗುತ್ತಿಲ್ಲ, ಬದಲಿಗೆ ಅಖಾದ್ಯ ತೈಲಗಳನ್ನು ಮಾತ್ರ ಇಂಧನವನ್ನಾಗಿ ಬಳಸುವುದು ಬಹು ಸೂಕ್ತವಾಗಿದೆ. ಈ ತೈಲಗಳು ಮೂಲತಃ ಜೀವಜನ್ಯವಾಗಿರುವರಿಂದ ಮತ್ತು ಇದನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಡೀಸಲ್ ಯಂತ್ರಗಳಲ್ಲಿ(ಎಂಜಿನ್) ಬಳಸಬಹುದಾದ್ದರಿಂದ ಇದನ್ನು ಆಂಗ್ಲ ಭಾಷೆಯಲ್ಲಿ”ಬಯೋಡೀಸಲ್”(ಜೈವಿಕ ಡೀಸಲ್) ಎಂದು ಕರೆಯಲಾಗಿದೆ.

ನಮ್ಮ ಪರಿಸರದಲ್ಲಿ ಕಾಣಬರುವ ಹೊಂಗೆ, ಬೇವು, ಜಟ್ರೋಫಾ, ಹಿಪ್ಪೆ, ಹರಳು, ಸಿಮರೂಬ ಇತ್ಯಾದಿ ಮರಗಳ ಬೀಜಗಳಿಂದ ದೊರೆಯುವ ತೈಲಗಳನ್ನು ಬಯೋಡೀಸಲ್ಲಾಗಿ ಬಳಸಬಹುದಾಗಿದೆ.ಬಯೋಡೀಸಲ್, ಪೆಟ್ರೋಲಿಯಂ ಡೀಸಲ್‌ಗೆ ಪರ್ಯಾಯವಾಗಿಬಳಸುವ ಇಂಧನವಾಗಿ ಬಳಸುವ ಕಾರಣದಿಂದಲೂ ಇದನ್ನು”ಬಯೋಡೀಸಲ್”(ಜೈವಿಕ ಡೀಸಲ್) ಎಂದು ಕರೆಯಲಾಗಿದೆ.

ಸರಳವಾಗಿ ಜೈವಿಕ ಇಂಧನ ಎಂದರೆ ನೈಸರ್ಗಿಕವಾಗಿ ಪರಿಸರದಲ್ಲಿ ವಿಫುಲವಾಗಿ ಎಲ್ಲೆಡೆ ಬೆಳೆಯುವ, ದೊರೆಯುವ, ವಿವಿಧ ಜೀವರಾಶಿ ಗಿಡಮರಗಳಿಂದ ಮತ್ತು ಅವುಗಳ ಬೀಜಗಳಿಂದ ಉತ್ಪಾದಿಸಬಹುದಾದ ಎಣ್ಣೆ ಅಥವಾ ತೈಲವಾಗಿದೆ. ಈ ಎಣ್ಣೆಗಳು ಪರಿಸರ ಸ್ನೇಹಿಗಳಾಗಿದ್ದು, ಹಲವಾರು ಆರೋಗ್ಯಕರ ಉಪಯುಕ್ತತೆಯನ್ನು ಹೊಂದಿವೆ ಮತ್ತು ಈ ಎಣ್ಣೆ ಅಥವಾ ತೈಲಗಳನ್ನು ಕೃಷಿ, ಕೈಗಾರಿಕೆ, ಸಾರಿಗೆಯಂತಹ ವಿವಿಧ ವ್ಯವಸ್ಥೆಗಳಲ್ಲಿ ಇಂಧನವನ್ನಾಗಿ ಉಪಯೊಗಿಸಬಹುದಾಗಿದೆ. ಇಂಧನ ಉದ್ದೇಶಗಳಿಗಾಗಿ ಬಳಸಬಹುದಾದ ಈ ತೈಲಗಳನ್ನು ಜೈವಿಕ ಇಂಧನವೆಂದು ಕರೆಯುತ್ತಾರೆ.

 ಈ ತೈಲಗಳನ್ನು ಎಲ್ಲೆಡೆ ಸುಲಭವಾಗಿ ಕಡಿಮೆ ವೆಚ್ಚದಲ್ಲಿ ನಿರಂತರವಾಗಿ ಮರು ಉತ್ಪಾದಿಸಬಹುದಾಗಿದೆ, ಎಲ್ಲಕ್ಕಿಂತ ಮುಖ್ಯವಾಗಿ ಈ ಇಂಧನಗಳ ಉಪಯೋಗದಿಂದ ಪರಿಸರಕ್ಕೆ ಮತ್ತು ಜೀವಜಗತ್ತಿನ ಮೇಲೆ ಯಾವುದೇ ಕೆಟ್ಟ ಪರಿಣಾಮಗಳಾಗುವುದಿಲ್ಲ ಬದಲಿಗೆ ಸುರಕ್ಫಿತ ಇಂಧನಗಳಾಗಿ ಆರ್ಥಿಕ ವ್ಯವಸ್ಥೆಗೆ ಮತ್ತು ದೇಶದ ಇಂಧನ ಸುರಕ್ಷೆತೆಗೆ ಭದ್ರಬುನಾದಿಯಾಗುತ್ತವೆ.

☀ ಜೈವಿಕ ಡೀಸಲ್ ತಯಾರಿಕೆಗೆ ಉಪಯೋಗಿಸುವ ಅಖಾದ್ಯ ತೈಲ ಬೀಜಗಳು ಯಾವುವು?
☆.ಹೊಂಗೆ, ಬೇವು, ಹಿಪ್ಪೆ, ಸೀಮರೂಬಾ ಹಾಗೂ ಜಟ್ರೋಪ ಇತ್ಯಾದಿ.

Sunday 8 February 2015

☀.ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿರುವ ಪ್ರಮುಖ ಹುದ್ದೆಗಳ ಮುಖ್ಯಸ್ಥರು,  ಪ್ರಸ್ತುತ ಕೇಂದ್ರ ಸಚಿವ ಸಂಪುಟ Updated** (The heads of the most important posts in the national level, The current Cabinet)

☀.ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿರುವ ಪ್ರಮುಖ ಹುದ್ದೆಗಳ ಮುಖ್ಯಸ್ಥರು,
ಪ್ರಸ್ತುತ ಕೇಂದ್ರ ಸಚಿವ ಸಂಪುಟ Updated**
(The heads of the most important posts in the national level, The current Cabinet)
━━━━━━━━━━━━━━━━━━━━━━━━━━━━━━━━━━━━━━━━━━━━━


☀.ಕೇಂದ್ರ ಸಂವಿಧಾನಿಕ ಮುಖ್ಯಸ್ಥರು :

1.ರಾಷ್ಟ್ರಪತಿ ------------> ಪ್ರಣಬ್ ಮುಖರ್ಜಿ

2.ಉಪ ರಾಷ್ಟ್ರಪತಿ ------------> ಹಮೀದ್ ಅನ್ಸಾರಿ

3.ಲೋಕಸಭೆಯ ಸಭಾಧ್ಯಕ್ಷರು ------------> ಸುಮಿತ್ರಾ ಮಹಾಜನ್

4.ರಾಜ್ಯಸಭೆಯ ಸಭಾಪತಿ ------------> ಹಮೀದ್ ಅನ್ಸಾರಿ

5.ಲೋಕಸಭೆಯ ಉಪ ಸಭಾಪತಿ ------------> ತಂಬಿ ದೊರೈ

6. ರಾಜ್ಯಸಭೆಯ ಉಪ ಸಭಾಪತಿ ------------ > ಪಿ.ಜಿ. ಕುರಿಯನ್

━━━━━━━━━━━━━━━━━━━━━━━━━━━━━━━━━━━━━━━━━━━━━


☀.ಕ್ಯಾಬಿನೆಟ್ ದರ್ಜೆಯ ಸಚಿವರು

☆.ನರೇಂದ್ರ ಮೋದಿ- ------------ > ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣುಶಕ್ತಿ ವಿಭಾಗ, ಬಾಹ್ಯಾಕಾಶ ಮತ್ತು ಎಲ್ಲಾ ಪ್ರಮುಖ ನೀತಿ ನಿರೂಪಣೆ ಹಾಗೂ ಸಚಿವರಿಗೆ ನೀಡದೇ ಇರುವ ಖಾತೆಗಳು.

☆.ರಾಜನಾಥ್ ಸಿಂಗ್ ------------ > ಗೃಹ

ಸುಷ್ಮಾ ಸ್ವರಾಜ್ ------------ > ವಿದೇಶಾಂಗ ವ್ಯವಹಾರ

☆.ಅರುಣ್ ಜೇಟ್ಲಿ ------------ > ಹಣಕಾಸು, ಕಾರ್ಪೋರೇಟ್, ವಾರ್ತಾ ಮತ್ತು ಪ್ರಸಾರ

☆.ವೆಂಕಯ್ಯ ನಾಯ್ಡು ------------ > ನಗರಾಭಿವೃದ್ಧಿ, ವಸತಿ, ಬಡತನ ನಿರ್ಮೂಲನೆ, ಸಂದೀಯ ವ್ಯವಹಾರ

☆.ನಿತಿನ್ ಗಡ್ಕರಿ ------------ > ಹೆದ್ದಾರಿ ಮತ್ತು ರಸ್ತೆ ಸಾರಿಗೆ ಹಡಗು.

☆.ಮನೋಹರ್ ಪರಿಕ್ಕರ್ ------------ > ರಕ್ಷಣೆ

☆.ಸುರೇಶ್ ಪ್ರಭು ------------ > ರೈಲ್ವೆ

☆.ಚೌಧರಿ ಬೀರೇಂದರ್ ಸಿಂಗ್ ------------ > ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು

☆.ಡಿ.ವಿ. ಸದಾನಂದಗೌಡ ------------ > ಕಾನೂನು ಮತ್ತು ನ್ಯಾಯ.

☆.ಉಮಾಭಾರತಿ ------------ > ಜಲಸಂಪನ್ಮೂಲ, ನದಿ ಅಭಿವೃದ್ಧಿ, ಗಂಗಾ ನದಿ ಪುನರುಜ್ಜೀವನ

☆.ನಜ್ಮಾ ಹೆಫ್ತುಲ್ಲಾ ------------ > ಅಲ್ಪಸಂಖ್ಯಾತ ವ್ಯವಹಾರ

☆.ರಾಮ್ ವಿಲಾಸ್ ಪಾಸ್ವಾನ್ ------------ > ಆಹಾರ, ಪಡಿತರ ವಿತರಣೆ

☆.ಕಲ್ ರಾಜ್ ಮಿಶ್ರಾ ------------ > ಸಣ್ಣ ಕೈಗಾರಿಕೆ

☆.ಮನೇಕಾ ಗಾಂಧಿ ------------ > ಮಹಿಳೆ ಮತ್ತು ಮಕ್ಕಳ ಕಲ್ಯಾಣ

☆.ಜೆಪಿ ನಡ್ಡಾ ------------ > ಆರೋಗ್ಯ ಮತ್ತು ಕುಟುಂಬ ಕಲ್ಯಾಣ

☆.ರವಿಶಂಕರ್ ಪ್ರಸಾದ್ ------------ > ಟೆಲಿಕಾಂ, ಐಟಿ

☆.ಅಶೋಕ್ ಜಗಪತಿ ರಾಜು ------------ > ನಾಗರಿಕ ವಿಮಾನಯಾನ

☆.ಅನಂತ್ ಗೀತೆ ------------ > ಬೃಹತ್ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ

☆.ಹರ್ಸಿಮ್ರತ್ ಕೌರ್ ಬಾದಲ್ ------------ > ಆಹಾರ ಸಂಸ್ಕರಣೆ

☆.ನರೇಂದ್ರ ಸಿಂಗ್ ತೋಮರ್ ------------ > ಗಣಿ ಮತ್ತು ಉಕ್ಕು

☆.ಜುವಾಲ್ ಓರಮ್ ------------ > ಬುಡಕಟ್ಟು

☆.ರಾಧಾ ಮೋಹನ್ ಸಿಂಗ್ ------------ > ಕೃಷಿ

☆.ಥಾವರ್ ಚಂದ್ ಗೆಹ್ಲೋಟ್ ------------ > ಸಮಾಜ ಕಲ್ಯಾಣ

☆.ಸ್ಮೃತಿ ಇರಾನಿ ------------ > ಮಾನವ ಸಂಪನ್ಮೂಲ ಅಭಿವೃದ್ಧಿ

☆.ಹರ್ಷವರ್ಧನ್ ------------ > ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ

━━━━━━━━━━━━━━━━━━━━━━━━━━━━━━━━━━━━━━━━━━━━━



☀.ರಾಜ್ಯ ಖಾತೆ ಸಚಿವರು (ಸ್ವತಂತ್ರ ನಿರ್ವಹಣೆ)

☆.ಬಂಡಾರು ದತ್ತಾತ್ರೇಯ ------------ > ಕಾರ್ಮಿಕ, ಉದ್ಯೋಗ

☆.ರಾಜೀವ್ ಪ್ರತಾಪ್ ರೂಡಿ ------------ > ಕೌಶಲ್ಯಾಭಿವೃದ್ಧಿ, ಸಂಸದೀಯ ವ್ಯವಹಾರ

☆.ಧರ್ಮೇಂದ್ರ ಪ್ರಧಾನ್ ------------ > ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ

☆.ಪ್ರಕಾಶ್ ಜಾವ್ಡೇಕರ್ ------------ > ಪರಿಸರ, ಅರಣ್ಯ, ಹವಾಮಾನ ಬದಲಾವಣೆ

☆.ಪೀಯುಷ್ ಗೋಯಲ್ ------------ > ಇಂಧನ, ಕಲ್ಲಿದ್ದಲು

☆.ನಿರ್ಮಲಾ ಸೀತಾರಾಮನ್ ------------ > ವಾಣಿಜ್ಯ ಮತ್ತು ಕೈಗಾರಿಕೆ

☆.ಮಹೇಶ್ ಶರ್ಮಾ ------------ > ಸಂಸ್ಕೃತಿ, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ

☆.ಮುಖ್ತಾರ್ ಅಬ್ಬಾಸ್ ನಖ್ವಿ ------------ > ಅಲ್ಪಸಂಖ್ಯಾತ, ಸಂಸದೀಯ ವ್ಯವಹಾರ

☆.ಗಿರಿರಾಜ್ ಸಿಂಗ್ ------------ > ಸಣ್ಣ, ಮಧ್ಯಮ ಕೈಗಾರಿಕೆ

☆.ಜಯಂತ್ ಸಿನ್ಹಾ ------------ > ಹಣಕಾಸು

☆.ರಾಜ್ಯವರ್ಧನ್ ಸಿಂಗ್ ರಾಥೋಡ್ ------------ > ವಾರ್ತಾ ಮತ್ತು ಪ್ರಸಾರ ಖಾತೆ.


★ 2015 ಫೆಬ್ರುವರಿಯಲ್ಲಿರುವ ಮಾಹಿತಿಯಂತೆ ಪರೀಷ್ಕೃತಗೊಂಡಿದೆ.***
★ Updated as per 2015 February Information.

☀.ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ Ⅱರ ಅವಲೋಕನ.  (Brief Overview on KAS mains General Studies Paper Ⅱ)


☀.ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ Ⅱರ ಅವಲೋಕನ.
H📼?☀☀.ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ Ⅱರ ಅವಲೋಕನ
(Brief Overview on KAS mains General Studies Paper Ⅱ)
━━━━━━━━━━━━━━━━━━━━━━━━━━━━━━━━━━━━━━━━━━━━━

●*— ಈ ಪತ್ರಿಕೆಗೆ 300 ಅಂಕಗಳು. ಸಮಯ: 3 ಗಂಟೆ ನಿಗಧಿತ.

●*— ಈ ಪತ್ರಿಕೆಯು ಅಗಾಧ ವಿಷಯ ವಿಸ್ತಾರವನ್ನು ಒಳಗೊಂಡಿರುತ್ತದೆ. ದಿನಪತ್ರಿಕೆಗಳ ವಿಸ್ತಾರವಾದ ಓದು, ಪ್ರಸ್ತುತ ಘಟನಾವಳಿಗಳ ಅರಿವು, ಕರ್ನಾಟಕ ಗ್ಯಾಸೆಟಿಯರ್‌ ಇಲಾಖೆ ಪ್ರಕಟಿಸಿರುವ ಗ್ಲಿಂಪ್ಸಸ್‌ ಆಫ್ ಕರ್ನಾಟಕ, ಕರ್ನಾಟಕ ಕೈಪಿಡಿ, ಎ ಹ್ಯಾಂಡ್‌ ಬುಕ್‌ ಆಫ್ ಕರ್ನಾಟಕ ಮತ್ತು ಅವುಗಳ ಜೊತೆಗೆ ನೀಡಲಾಗಿದ್ದ ಡಿವಿಡಿಯಲ್ಲಿ ಅಡಕಗೊಳಿಸಲಾಗಿದ್ದ ಆರ್ಥಿಕ ಸಮೀಕ್ಷೆ, ಎಕನಾಮಿಕ್‌ ಸರ್ವೇ, ಇಂಡಿಯ- 2015,

●*— ಜನಗಣತಿಯ ಅಂಕಿ ಅಂಶಗಳು ಮತ್ತು ಸಾಮಾನ್ಯ ಜ್ಞಾನ ಮಾಹಿತಿಯನ್ನು ಆಧರಿಸಿದ್ದ ಹಲವು ಪ್ರಶ್ನೆಗಳು ಈ ಪತ್ರಿಕೆಯು ಒಳಗೊಂಡಿರುತ್ತದೆ.

●*— ಸರ್ಕಾರದ ಅಧಿಕೃತ ಮಾಹಿತಿಯನ್ನು ಆಧರಿಸಿದ್ದ ಇಲಾಖೆಯ ಪ್ರಕಟಣೆಗಳನ್ನು, ಯೋಜನಾದಂತಹ ನಿಯತಕಾಲಿಕೆಗಳನ್ನು ಓದಿದವರಿಗೆ ಸುಲಭವೆನಿಸಬಹುದು.


★.ವಿಷಯಗಳು:
1. ಭಾರತದ ರಾಜಕೀಯ/ಆಡಳಿತ ವ್ಯವಸ್ಥೆ- ಕರ್ನಾಟಕ ರಾಜ್ಯದ ರಾಜಕೀಯ/ಆಡಳಿತ ವ್ಯವಸ್ಥೆಗೆ ವಿಶೇಷ ಆದ್ಯತೆ
2. ಭಾರತದ ಆರ್ಥಿಕತೆ ಮತ್ತು ಭಾರತದ ಭೂಗೋಳ- ಕರ್ನಾಟಕ ರಾಜ್ಯದ ಆರ್ಥಿಕತೆ ಮತ್ತು ಭೂಗೋಳಕ್ಕೆ ವಿಶೇಷ ಆದ್ಯತೆ
3. ಕರ್ನಾಟಕ ಮತ್ತು ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಹಾಗೂ ಪ್ರಾಮುಖ್ಯತೆ
ಈ ಮೇಲ್ಕಂಡ ವಿಷಯಗಳ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.


★.ಗಮನಿಸಿ:
ನಿಮ್ಮ ಅಭ್ಯಾಸಕ್ಕಾಗಿ ಇಲ್ಲಿ 2011ರ ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ Ⅱ ನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಈ ಪತ್ರಿಕೆಯನ್ನು ಮಾದರಿಯಾಗಿಟ್ಟುಕೊಂಡು ಮುಂಬರುವ ಕೆಎಎಸ್‌ ಮುಖ್ಯ ಪರೀಕ್ಷೆಯನ್ನು ಎದುರಿಸಲು ತಯಾರಿ ನಡೆಯಬೇಕೆಂಬ ಆಸೆ ನನ್ನದು.

━━━━━━━━━━━━━━━━━━━━━━━━━━━━━━━━━━━━━━━━━━━━━


☀ 2011ರ ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ Ⅱ— ಅಂಕಗಳು 300  ಸಮಯ: 3 ಗಂಟೆ


★ ಭಾಗ - ಎ

1. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200ರಿಂದ 250 ಪದಗಳಷ್ಟಿರಲಿ: 20 x 1= 20

ಎ. ಲೋಕಪಾಲ ಮಸೂದೆಯ ಅಂಗೀಕಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಹಾಗೂ ಅಣ್ಣಾ ತಂಡದ ನಡುವಿನ ವಿರಸ ಕುರಿತು ವಿಮಶಾìತ್ಮಕವಾಗಿ ಬರೆಯಿರಿ.

ಬಿ. ಇ-ಆಡಳಿತ ಎಂದರೇನು? ಕರ್ನಾಟಕ ಸರ್ಕಾರು ಆರಂಭಿಸಿರುವ ಇ-ಆಡಳಿತ ಪರಿಯೋಜನೆಗಳನ್ನು ಪರಿಶೀಲಿಸಿ.



2. ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100-125 ಪದಗಳಲ್ಲಿ ಉತ್ತರಿಸಿ. 10x3=30

ಎ. ಈಗ ಕಂಡುಬರುತ್ತಿರುವ ರಾಜಕೀಯ ದೃಶ್ಯಾವಳಿಗಳ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಹುಟ್ಟಿಕೊಳ್ಳುವ ನಿರೀಕ್ಷೆಯ ಕುರಿತು ವ್ಯಾಖ್ಯಾನಿಸಿ.

ಬಿ. ಕರ್ನಾಟಕದ ಹಿಂದುಳಿದ ವರ್ಗಗಳ ಚಳುವಳಿ ಕುರಿತು ಒಂದು ಟಿಪ್ಪಣಿ ಬರೆಯಿರಿ.

ಸಿ. ರಾಜ್ಯ ವಿಧಾನಸಭೆಯ ರಚನೆ, ಅಧಿಕಾರಗಳು ಹಾಗೂ ಕೆಲಸಗಳನ್ನು ವಿವರಿಸಿ.

ಡಿ. ಲಿಂಗಾಧಾರಿತ ಅಸಮಾನತೆಯನ್ನು ನಿವಾರಿಸುವ ಒಂದು ಪರಿಣಾಮಕಾರಿ ಕ್ರಮವಾಗಿ ಭಾರತದ ಸಂಸತ್ತಿನಲ್ಲಿ ಲಿಂಗಾಧಾರಿತ ಪಾಲು ನೀಡಿಕೆ ಕುರಿತು ಚರ್ಚಿಸಿ.

ಇ. ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತದ ವ್ಯವಸ್ಥೆ ಮತ್ತು ಅದರ ಅಧಿಕಾರ ವ್ಯಾಪ್ತಿಯನ್ನು ಕುರಿತು ಪರಿಶೀಲಿಸಿ.



3. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 50-55 ಪದಗಳಲ್ಲಿ ಉತ್ತರಿಸಿ: 5x4=20

ಎ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಚನೆ ಹಾಗೂ ಕಾರ್ಯವನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.

ಬಿ. ಕೇಂದ್ರ- ರಾಜ್ಯಗಳ ಹಣಕಾಸು ಸಂಬಂಧಗಳನ್ನು ವಿವರಿಸಿ.

ಸಿ. ಧಾರ್ಮಿಕ ಸ್ವಾತಂತ್ರÂದ ಹಕ್ಕನ್ನು ಕುರಿತಂತೆ ಸಂವಿಧಾನದಲ್ಲಿರುವ ಉಪಬಂಧಗಳನ್ನು ವಿವರಿಸಿ.

ಡಿ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಸಂವಿಧಾನಿಕ ರಕ್ಷಣೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

ಇ. ಸಕಾಲ ಎಂದರೇನು? ಕರ್ನಾಟಕ ರಾಜ್ಯದಲ್ಲಿ ಇದರ ಮಹತ್ವವನ್ನು ವಿವರಿಸಿ.

ಎಫ್. 73ನೇ ಸಂವಿಧಾನ ತಿದ್ದುಪಡಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ವಿಕೇಂದ್ರೀಕರಣವನ್ನು ಕುರಿತು ಪರಿಶೀಲಿಸಿ.



4. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20

ಎ. ನ್ಯಾಯಮೂರ್ತಿ ಸೋಮಶೇಖರ್‌ ಆಯೋಗ

ಬಿ. ಕಲ್ಲಿದ್ದಲು ಗಣಿಗಾರಿಕೆ ವಿವಾದ

ಸಿ. ಟಾಟಾ ಟ್ರಕ್‌ ಪ್ರಕರಣ

ಡಿ. ಡಾ.ಡಿ.ಎಮ್‌. ನಂಜುಂಡಪ್ಪ ಸಮಿತಿ

ಇ. ಆಡಳಿತದಲ್ಲಿ ಪಾರದರ್ಶಕತೆ

ಎಫ್. ನಾಗರಿಕ ಸಮಾಜ

ಜಿ. ಡಿ. ದೇವರಾಜ ಅರಸ್‌

ಎಚ್‌. ವ್ಯಕ್ತಿಯ ಪ್ರತ್ಯಕ್ಷ ಹಾಜರಿ ಆದೇಶ(ರಿಟ್‌)

ಐ. ವಲಯ ಪರಿಷತ್ತುಗಳು

ಜೆ. ಸರೋಜಿನಿ ಮಹಿಷಿ ವರದಿ



★ ಭಾಗ- ಬಿ

5. ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200 ರಿಂದ 250 ಪದಗಳಿಗೆ ಮೀರದಂತಿರಬೇಕು: 20x1=20

ಎ. ಕರ್ನಾಟಕದಲ್ಲಿನ ಮಾನವ ಅಭಿವೃದ್ಧಿಯ ಪ್ರಾದೇಶಿಕ ಅಸಮತೆಗಳನ್ನು ವಿವರಿಸಿ.

ಬಿ. ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯ ಧ್ಯೇಯಗಳು ಹಾಗೂ ವ್ಯಾಪ್ತಿಯನ್ನು ವಿವರಿಸಿ. ಆಹಾರ ಭದ್ರತೆಯನ್ನು ಖಚಿತಪಡಿಸುವುದಕ್ಕೆ ಇದು ನೆರವಾಗುವುದೇ?



6. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 125 ಪದಗಳಲ್ಲಿ ಉತ್ತರಿಸಿ: 10x3=30

ಎ. ಸ್ಪರ್ಧಾಕಾನೂನಿನ ವಿಶಿಷ್ಟ ಲಕ್ಷಣಗಳೇನು?

ಬಿ. ಕರ್ನಾಟಕದಲ್ಲಿ ವಿದೇಶಿ ಹಣದ ನೇರ ಹೂಡಿಕೆಯ ಹರಿವಿಗೆ ಸಂಬಂಧಿಸಿದಂತೆ ಪ್ರಾದೇಶಿಕ ವ್ಯತ್ಯಾಸಗಳ ಬಗ್ಗೆ ನಿರೂಪಿಸಿ.

ಸಿ. ಕರ್ನಾಟಕ ರಾಜ್ಯ ಬಜೆಟ್‌ 2012- 13ರ ವಿಶಿಷ್ಟ ಲಕ್ಷಣಗಳನ್ನು ನಿರೂಪಿಸಿ.

ಡಿ. ಕರ್ನಾಟಕದಲ್ಲಿ ಜೀವವೈವಿಧ್ಯ ಸಂರಕ್ಷಣೆಯ ಸ್ಥಿತಿಗತಿ ಹಾಗೂ ನಿರ್ವಹಣೆಯನ್ನು ಕುರಿತು ವ್ಯಾಖ್ಯಾನಿಸಿ.

ಇ. ಭಾರತದ ಇಂಧನ ಬಿಕ್ಕಟ್ಟಿನ ಸ್ವರೂಪವನ್ನು ವಿವರಿಸಿ. ಈ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕ್ರಮಗಳನ್ನು ಸೂಚಿಸಿ.



7. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ/ ಟಿಪ್ಪಣಿ ಬರೆಯಿರಿ. ಉತ್ತರಗಳು ತಲಾ 50-55 ಪದಗಳ ಮಿತಿಯಲ್ಲಿರಬೇಕು: 5x4=20

ಎ. ಯುಎಸ್‌ ಡಾಲರ್‌ಗೆ ಪ್ರತಿಯಾಗಿ ರೂಪಾಯಿಯ ಮೌಲ್ಯವು ಕ್ಷೀಣಿಸುವುದಕ್ಕೆ ಕಾರಣಗಳನ್ನು ನಿರೂಪಿಸಿ.

ಬಿ. ಕರ್ನಾಟಕದ ಸಾರ್ವಜನಿಕ ವಿತರಣೆಯಲ್ಲಿರುವ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸಿ.

ಸಿ. ಕರ್ನಾಟಕದ ಸಾರ್ವಜನಿಕ ವಲಯದ ನೋಟವನ್ನು ವಿವರಿಸಿ.

ಡಿ. ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೀವು ಯಾವ ಕಾರ್ಯನೀತಿಯ ಕ್ರಮಗಳನ್ನು ಸೂಚಿಸುತ್ತೀರಿ?

ಇ. ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಭಾರತವು ಆರಂಭಿಸಿರುವ ಕ್ರಮಗಳನ್ನು ವಿವರಿಸಿ.

ಎಫ್. ಭಾರತದ ಮೇಲೆ ಯೂರೋಪ್‌ ವಲಯದ ಬಿಕ್ಕಟ್ಟಿನ ಪರಿಣಾಮಗಳನ್ನು ವಿವರಿಸಿ.



8. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20

ಎ. 13ನೇ ಹಣಕಾಸು ಆಯೋಗದ ಶಿಫಾರಸ್ಸುಗಳು

ಬಿ. ಉನ್ನತ ಶಿಕ್ಷಣದ ಖಾಸಗೀಕರಣ

ಸಿ. ಯುವ ಭಾರತ

ಡಿ. ಕರ್ನಾಟಕದಲ್ಲಿ ಸಾಮಾಜಿಕ ಭದ್ರತಾ ಕ್ರಮಗಳು

ಇ. ಕರ್ನಾಟಕದಲ್ಲಿ ವಿದ್ಯುತ್ಛಕ್ತಿ ವಿತರಣೆ

ಎಫ್. ಕರ್ನಾಟಕದ ಹೊಸ ಕೈಗಾರಿಕಾ ನೀತಿ

ಜಿ. ಕರ್ನಾಟಕದಲ್ಲಿ ಉದ್ಯೋಗ ಕಾರ್ಯಕ್ರಮಗಳು

ಎಚ್‌. ಆಡಳಿತದಲ್ಲಿ ICT

ಐ. ಪೆಟ್ರೋಲಿಯಂ ಸಬ್ಸಿಡಿಗಳು

ಜೆ. ಸಾಲದ ದರ ನಿರ್ಧಾರಣಾ ಏಜೆನ್ಸಿಗಳು



★ ಭಾಗ- ಸಿ

9. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20

ಎ. ಕರ್ನಾಟಕದ ನದಿ ವ್ಯವಸ್ಥೆಗಳನ್ನು ಕುರಿತು ವಿಸ್ತಾರವಾದ ಟಿಪ್ಪಣಿ ಬರೆಯಿರಿ.

ಬಿ. ಕರ್ನಾಟಕದ ವಿಶೇಷ ಉÇÉೇಖದೊಂದಿಗೆ ಭಾರತದ ಕರಾವಳಿ ಪ್ರದೇಶದ ಸಂಕ್ಷಿಪ್ತ ವಿವರಣೆ ನೀಡಿ.



10. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 100 ರಿಂದ 120 ಪದಗಳಷ್ಟಿರಲಿ: 10x1=10

ಎ. ಮಲೆನಾಡು ಪ್ರದೆಶದ ಭೌಗೋಳಿಕ ವೈಶಿಷ್ಟಗಳನ್ನು ವಿವರಿಸಿ.

ಬಿ. ಭಾರತದ ಸುವರ್ಣ ಚತುಭುìಜ/ ಚತುಷ್ಪತ ಕಾರಿಡಾರ್‌ಗಳ ಬಗ್ಗೆ ಬರೆಯಿರಿ.



11. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉತ್ತರ ಸುಮಾರು 50 ಪದಗಳಷ್ಟಿರಲಿ: 5x2= 10

ಎ. ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ.

ಬಿ. ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ನಿರೂಪಿಸಿ.

ಸಿ. ಮಹಾನಗರಗಳ ಬೆಳವಣಿಗೆ ಬಗ್ಗೆ ವಿವರಿಸಿ.



★ ಭಾಗ- ಡಿ

12. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20

ಎ. ಸಾಂಪ್ರದಾಯಿಕವಲ್ಲದ ಶಕ್ತಿ ಎಂದರೇನು? ಸಾಂಪ್ರದಾಯಿಕವಲ್ಲದ ಕೆಲವು ಮುಖ್ಯವಾದ ಶಕ್ತಿಮೂಲಗಳ ವಿಧಗಳನ್ನು ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ ಮತ್ತು ಅವುಗಳಿಂದ ಸಿಗುವ ಲಾಭಗಳನ್ನು ತಿಳಿಸಿ.

ಬಿ. ಕರ್ನಾಟಕ ಸರ್ಕಾರ 2011ರಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ನೀತಿ ಹಾಗೂ ವಿದ್ಯುನ್ಮಾನ ಹಾರ್ಡ್‌ವೇರ್‌ ನೀತಿಯನ್ನು ಬಿಡುಗಡೆ ಮಾಡಿತು. ಈ ನೀತಿಗಳನ್ನು ಬಿಡುಗಡೆ ಮಾಡಿದ್ದರ ಹಿಂದಿರುವ ಪ್ರೇರಣೆ ಏನು ಎಂಬ ಬಗ್ಗೆ ಟಿಪ್ಪಣಿ ಬರೆಯಿರಿ ಮತ್ತು ಈ ಎರಡೂ ನೀತಿಗಳ ವಿವಿಧ ಲಕ್ಷಣಗಳನ್ನು ಕುರಿತು ಚರ್ಚಿಸಿ.



13. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 120 ಪದಗಳಲ್ಲಿ ಉತ್ತರಿಸಿ: 10x4=40

ಎ. ತಾರಾ ಶಕ್ತಿ

ಬಿ. ಜೀವಾವರಣದ ಪಾದಮುದ್ರೆ

ಸಿ. ಪರಮಾಣು ವಿಕಿರಣಗಳ ಜೈವಿಕ ಪರಿಣಾಮಗಳು

ಡಿ. ಕರ್ನಾಟಕ ಹಾಗೂ ಭಾರತದ ತಂತ್ರವಿಜ್ಞಾನದ ಪರಿಚಯವನ್ನು ಹೆಚ್ಚಿಸುವಲ್ಲಿ, ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯವು ಸ್ಥಾಪಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ(R - ಈ) ಪಾತ್ರ.

ಇ. ಸಾಮಾನ್ಯ ಬಳಕೆಯ ಪ್ಲಾರಸೆಂಟ್‌ ದೀಪಗಳು ಹಾಗೂ ಅಡಕ ಫ್ಲಾರಸೆಂಟ್‌ ದೀಪಗಳು.

ಎಫ್. ತಳಿವೈಜ್ಞಾನಿಕವಾಗಿ ಮಾರ್ಪಾಟು ಮಾಡಿದ(ಎM) ಬೆಳೆಗಳು ಹಾಗೂ ಆಹಾರ



14. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10=20

ಎ. ಪ್ಯೂರೋಸಿಸ್‌

ಬಿ. ವಾಯುಮಾಲಿನ್ಯ

ಸಿ. ಆಮ್ಲಮಳೆ

ಡಿ. ಜೆಲ್‌ಗ‌ಳು

ಇ. ಭೂಸವಕಳಿ

ಎಫ್. ಡಾಲಿ ಎಂಬ ಕುರಿ

ಜಿ. ಕರ್ನಾಟಕದ ಜಿಲ್ಲಾಮಟ್ಟದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ

ಎಚ್‌. ಬಯೋಮೆಟ್ರಿಕ್‌ ಸಾಧನಗಳು

ಐ. ಹೈನುಗಾರಿಕೆ ಮತ್ತು ಹೈನು ತಂತ್ರಜ್ಞಾನ

ಜೆ. ಕೃಷಿ ವಿಜ್ಞಾನ ಕೇಂದ್ರಗಳು 📼📼📼☀📼📼📼☀ ?BEST OF LUCK ☀📼📼📼☀📼

 ☀📼📼📼☀BEST OF LUCK ☀📼📼📼☀
☀.ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ Ⅱರ ಅವಲೋಕನ.
(Brief Overview on KAS mains General Studies Paper Ⅱ)
━━━━━━━━━━━━━━━━━━━━━━━━━━━━━━━━━━━━━━━━━━━━━

●*— ಈ ಪತ್ರಿಕೆಗೆ 300 ಅಂಕಗಳು. ಸಮಯ: 3 ಗಂಟೆ ನಿಗಧಿತ.

●*— ಈ ಪತ್ರಿಕೆಯು ಅಗಾಧ ವಿಷಯ ವಿಸ್ತಾರವನ್ನು ಒಳಗೊಂಡಿರುತ್ತದೆ. ದಿನಪತ್ರಿಕೆಗಳ ವಿಸ್ತಾರವಾದ ಓದು, ಪ್ರಸ್ತುತ ಘಟನಾವಳಿಗಳ ಅರಿವು, ಕರ್ನಾಟಕ ಗ್ಯಾಸೆಟಿಯರ್‌ ಇಲಾಖೆ ಪ್ರಕಟಿಸಿರುವ ಗ್ಲಿಂಪ್ಸಸ್‌ ಆಫ್ ಕರ್ನಾಟಕ, ಕರ್ನಾಟಕ ಕೈಪಿಡಿ, ಎ ಹ್ಯಾಂಡ್‌ ಬುಕ್‌ ಆಫ್ ಕರ್ನಾಟಕ ಮತ್ತು ಅವುಗಳ ಜೊತೆಗೆ ನೀಡಲಾಗಿದ್ದ ಡಿವಿಡಿಯಲ್ಲಿ ಅಡಕಗೊಳಿಸಲಾಗಿದ್ದ ಆರ್ಥಿಕ ಸಮೀಕ್ಷೆ, ಎಕನಾಮಿಕ್‌ ಸರ್ವೇ, ಇಂಡಿಯ- 2015,

●*— ಜನಗಣತಿಯ ಅಂಕಿ ಅಂಶಗಳು ಮತ್ತು ಸಾಮಾನ್ಯ ಜ್ಞಾನ ಮಾಹಿತಿಯನ್ನು ಆಧರಿಸಿದ್ದ ಹಲವು ಪ್ರಶ್ನೆಗಳು ಈ ಪತ್ರಿಕೆಯು ಒಳಗೊಂಡಿರುತ್ತದೆ.

●*— ಸರ್ಕಾರದ ಅಧಿಕೃತ ಮಾಹಿತಿಯನ್ನು ಆಧರಿಸಿದ್ದ ಇಲಾಖೆಯ ಪ್ರಕಟಣೆಗಳನ್ನು, ಯೋಜನಾದಂತಹ ನಿಯತಕಾಲಿಕೆಗಳನ್ನು ಓದಿದವರಿಗೆ ಸುಲಭವೆನಿಸಬಹುದು.


★.ವಿಷಯಗಳು:
1. ಭಾರತದ ರಾಜಕೀಯ/ಆಡಳಿತ ವ್ಯವಸ್ಥೆ- ಕರ್ನಾಟಕ ರಾಜ್ಯದ ರಾಜಕೀಯ/ಆಡಳಿತ ವ್ಯವಸ್ಥೆಗೆ ವಿಶೇಷ ಆದ್ಯತೆ
2. ಭಾರತದ ಆರ್ಥಿಕತೆ ಮತ್ತು ಭಾರತದ ಭೂಗೋಳ- ಕರ್ನಾಟಕ ರಾಜ್ಯದ ಆರ್ಥಿಕತೆ ಮತ್ತು ಭೂಗೋಳಕ್ಕೆ ವಿಶೇಷ ಆದ್ಯತೆ
3. ಕರ್ನಾಟಕ ಮತ್ತು ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಹಾಗೂ ಪ್ರಾಮುಖ್ಯತೆ
ಈ ಮೇಲ್ಕಂಡ ವಿಷಯಗಳ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.


★.ಗಮನಿಸಿ:
ನಿಮ್ಮ ಅಭ್ಯಾಸಕ್ಕಾಗಿ ಇಲ್ಲಿ 2011ರ ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ Ⅱ ನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಈ ಪತ್ರಿಕೆಯನ್ನು ಮಾದರಿಯಾಗಿಟ್ಟುಕೊಂಡು ಮುಂಬರುವ ಕೆಎಎಸ್‌ ಮುಖ್ಯ ಪರೀಕ್ಷೆಯನ್ನು ಎದುರಿಸಲು ತಯಾರಿ ನಡೆಯಬೇಕೆಂಬ ಆಸೆ ನನ್ನದು.

━━━━━━━━━━━━━━━━━━━━━━━━━━━━━━━━━━━━━━━━━━━━━


☀ 2011ರ ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ Ⅱ— ಅಂಕಗಳು 300  ಸಮಯ: 3 ಗಂಟೆ

★ ಭಾಗ - ಎ

1. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200ರಿಂದ 250 ಪದಗಳಷ್ಟಿರಲಿ: 20 x 1= 20

ಎ. ಲೋಕಪಾಲ ಮಸೂದೆಯ ಅಂಗೀಕಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಹಾಗೂ ಅಣ್ಣಾ ತಂಡದ ನಡುವಿನ ವಿರಸ ಕುರಿತು ವಿಮಶಾìತ್ಮಕವಾಗಿ ಬರೆಯಿರಿ.

ಬಿ. ಇ-ಆಡಳಿತ ಎಂದರೇನು? ಕರ್ನಾಟಕ ಸರ್ಕಾರು ಆರಂಭಿಸಿರುವ ಇ-ಆಡಳಿತ ಪರಿಯೋಜನೆಗಳನ್ನು ಪರಿಶೀಲಿಸಿ.


2. ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100-125 ಪದಗಳಲ್ಲಿ ಉತ್ತರಿಸಿ. 10x3=30
ಎ. ಈಗ ಕಂಡುಬರುತ್ತಿರುವ ರಾಜಕೀಯ ದೃಶ್ಯಾವಳಿಗಳ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಹುಟ್ಟಿಕೊಳ್ಳುವ ನಿರೀಕ್ಷೆಯ ಕುರಿತು ವ್ಯಾಖ್ಯಾನಿಸಿ.
ಬಿ. ಕರ್ನಾಟಕದ ಹಿಂದುಳಿದ ವರ್ಗಗಳ ಚಳುವಳಿ ಕುರಿತು ಒಂದು ಟಿಪ್ಪಣಿ ಬರೆಯಿರಿ.
ಸಿ. ರಾಜ್ಯ ವಿಧಾನಸಭೆಯ ರಚನೆ, ಅಧಿಕಾರಗಳು ಹಾಗೂ ಕೆಲಸಗಳನ್ನು ವಿವರಿಸಿ.
ಡಿ. ಲಿಂಗಾಧಾರಿತ ಅಸಮಾನತೆಯನ್ನು ನಿವಾರಿಸುವ ಒಂದು ಪರಿಣಾಮಕಾರಿ ಕ್ರಮವಾಗಿ ಭಾರತದ ಸಂಸತ್ತಿನಲ್ಲಿ ಲಿಂಗಾಧಾರಿತ ಪಾಲು ನೀಡಿಕೆ ಕುರಿತು ಚರ್ಚಿಸಿ.
ಇ. ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತದ ವ್ಯವಸ್ಥೆ ಮತ್ತು ಅದರ ಅಧಿಕಾರ ವ್ಯಾಪ್ತಿಯನ್ನು ಕುರಿತು ಪರಿಶೀಲಿಸಿ.

3. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 50-55 ಪದಗಳಲ್ಲಿ ಉತ್ತರಿಸಿ: 5x4=20
ಎ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಚನೆ ಹಾಗೂ ಕಾರ್ಯವನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.
ಬಿ. ಕೇಂದ್ರ- ರಾಜ್ಯಗಳ ಹಣಕಾಸು ಸಂಬಂಧಗಳನ್ನು ವಿವರಿಸಿ.
ಸಿ. ಧಾರ್ಮಿಕ ಸ್ವಾತಂತ್ರÂದ ಹಕ್ಕನ್ನು ಕುರಿತಂತೆ ಸಂವಿಧಾನದಲ್ಲಿರುವ ಉಪಬಂಧಗಳನ್ನು ವಿವರಿಸಿ.
ಡಿ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಸಂವಿಧಾನಿಕ ರಕ್ಷಣೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
ಇ. ಸಕಾಲ ಎಂದರೇನು? ಕರ್ನಾಟಕ ರಾಜ್ಯದಲ್ಲಿ ಇದರ ಮಹತ್ವವನ್ನು ವಿವರಿಸಿ.
ಎಫ್. 73ನೇ ಸಂವಿಧಾನ ತಿದ್ದುಪಡಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ವಿಕೇಂದ್ರೀಕರಣವನ್ನು ಕುರಿತು ಪರಿಶೀಲಿಸಿ.

4. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20
ಎ. ನ್ಯಾಯಮೂರ್ತಿ ಸೋಮಶೇಖರ್‌ ಆಯೋಗ
ಬಿ. ಕಲ್ಲಿದ್ದಲು ಗಣಿಗಾರಿಕೆ ವಿವಾದ
ಸಿ. ಟಾಟಾ ಟ್ರಕ್‌ ಪ್ರಕರಣ
ಡಿ. ಡಾ.ಡಿ.ಎಮ್‌. ನಂಜುಂಡಪ್ಪ ಸಮಿತಿ
ಇ. ಆಡಳಿತದಲ್ಲಿ ಪಾರದರ್ಶಕತೆ
ಎಫ್. ನಾಗರಿಕ ಸಮಾಜ
ಜಿ. ಡಿ. ದೇವರಾಜ ಅರಸ್‌
ಎಚ್‌. ವ್ಯಕ್ತಿಯ ಪ್ರತ್ಯಕ್ಷ ಹಾಜರಿ ಆದೇಶ(ರಿಟ್‌)
ಐ. ವಲಯ ಪರಿಷತ್ತುಗಳು
ಜೆ. ಸರೋಜಿನಿ ಮಹಿಷಿ ವರದಿ

★ ಭಾಗ- ಬಿ
5. ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200 ರಿಂದ 250 ಪದಗಳಿಗೆ ಮೀರದಂತಿರಬೇಕು: 20x1=20
ಎ. ಕರ್ನಾಟಕದಲ್ಲಿನ ಮಾನವ ಅಭಿವೃದ್ಧಿಯ ಪ್ರಾದೇಶಿಕ ಅಸಮತೆಗಳನ್ನು ವಿವರಿಸಿ.
ಬಿ. ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯ ಧ್ಯೇಯಗಳು ಹಾಗೂ ವ್ಯಾಪ್ತಿಯನ್ನು ವಿವರಿಸಿ. ಆಹಾರ ಭದ್ರತೆಯನ್ನು ಖಚಿತಪಡಿಸುವುದಕ್ಕೆ ಇದು ನೆರವಾಗುವುದೇ?

6. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 125 ಪದಗಳಲ್ಲಿ ಉತ್ತರಿಸಿ: 10x3=30
ಎ. ಸ್ಪರ್ಧಾಕಾನೂನಿನ ವಿಶಿಷ್ಟ ಲಕ್ಷಣಗಳೇನು?
ಬಿ. ಕರ್ನಾಟಕದಲ್ಲಿ ವಿದೇಶಿ ಹಣದ ನೇರ ಹೂಡಿಕೆಯ ಹರಿವಿಗೆ ಸಂಬಂಧಿಸಿದಂತೆ ಪ್ರಾದೇಶಿಕ ವ್ಯತ್ಯಾಸಗಳ ಬಗ್ಗೆ ನಿರೂಪಿಸಿ.
ಸಿ. ಕರ್ನಾಟಕ ರಾಜ್ಯ ಬಜೆಟ್‌ 2012- 13ರ ವಿಶಿಷ್ಟ ಲಕ್ಷಣಗಳನ್ನು ನಿರೂಪಿಸಿ.
ಡಿ. ಕರ್ನಾಟಕದಲ್ಲಿ ಜೀವವೈವಿಧ್ಯ ಸಂರಕ್ಷಣೆಯ ಸ್ಥಿತಿಗತಿ ಹಾಗೂ ನಿರ್ವಹಣೆಯನ್ನು ಕುರಿತು ವ್ಯಾಖ್ಯಾನಿಸಿ.
ಇ. ಭಾರತದ ಇಂಧನ ಬಿಕ್ಕಟ್ಟಿನ ಸ್ವರೂಪವನ್ನು ವಿವರಿಸಿ. ಈ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕ್ರಮಗಳನ್ನು ಸೂಚಿಸಿ.

7. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ/ ಟಿಪ್ಪಣಿ ಬರೆಯಿರಿ. ಉತ್ತರಗಳು ತಲಾ 50-55 ಪದಗಳ ಮಿತಿಯಲ್ಲಿರಬೇಕು: 5x4=20
ಎ. ಯುಎಸ್‌ ಡಾಲರ್‌ಗೆ ಪ್ರತಿಯಾಗಿ ರೂಪಾಯಿಯ ಮೌಲ್ಯವು ಕ್ಷೀಣಿಸುವುದಕ್ಕೆ ಕಾರಣಗಳನ್ನು ನಿರೂಪಿಸಿ.
ಬಿ. ಕರ್ನಾಟಕದ ಸಾರ್ವಜನಿಕ ವಿತರಣೆಯಲ್ಲಿರುವ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸಿ.
ಸಿ. ಕರ್ನಾಟಕದ ಸಾರ್ವಜನಿಕ ವಲಯದ ನೋಟವನ್ನು ವಿವರಿಸಿ.
ಡಿ. ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೀವು ಯಾವ ಕಾರ್ಯನೀತಿಯ ಕ್ರಮಗಳನ್ನು ಸೂಚಿಸುತ್ತೀರಿ?
ಇ. ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಭಾರತವು ಆರಂಭಿಸಿರುವ ಕ್ರಮಗಳನ್ನು ವಿವರಿಸಿ.
ಎಫ್. ಭಾರತದ ಮೇಲೆ ಯೂರೋಪ್‌ ವಲಯದ ಬಿಕ್ಕಟ್ಟಿನ ಪರಿಣಾಮಗಳನ್ನು ವಿವರಿಸಿ.

8. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20
ಎ. 13ನೇ ಹಣಕಾಸು ಆಯೋಗದ ಶಿಫಾರಸ್ಸುಗಳು
ಬಿ. ಉನ್ನತ ಶಿಕ್ಷಣದ ಖಾಸಗೀಕರಣ
ಸಿ. ಯುವ ಭಾರತ
ಡಿ. ಕರ್ನಾಟಕದಲ್ಲಿ ಸಾಮಾಜಿಕ ಭದ್ರತಾ ಕ್ರಮಗಳು
ಇ. ಕರ್ನಾಟಕದಲ್ಲಿ ವಿದ್ಯುತ್ಛಕ್ತಿ ವಿತರಣೆ
ಎಫ್. ಕರ್ನಾಟಕದ ಹೊಸ ಕೈಗಾರಿಕಾ ನೀತಿ
ಜಿ. ಕರ್ನಾಟಕದಲ್ಲಿ ಉದ್ಯೋಗ ಕಾರ್ಯಕ್ರಮಗಳು
ಎಚ್‌. ಆಡಳಿತದಲ್ಲಿ ಐಇಖ
ಐ. ಪೆಟ್ರೋಲಿಯಂ ಸಬ್ಸಿಡಿಗಳು
ಜೆ. ಸಾಲದ ದರ ನಿರ್ಧಾರಣಾ ಏಜೆನ್ಸಿಗಳು

★ ಭಾಗ- ಸಿ
9. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20
ಎ. ಕರ್ನಾಟಕದ ನದಿ ವ್ಯವಸ್ಥೆಗಳನ್ನು ಕುರಿತು ವಿಸ್ತಾರವಾದ ಟಿಪ್ಪಣಿ ಬರೆಯಿರಿ.
ಬಿ. ಕರ್ನಾಟಕದ ವಿಶೇಷ ಉÇÉೇಖದೊಂದಿಗೆ ಭಾರತದ ಕರಾವಳಿ ಪ್ರದೇಶದ ಸಂಕ್ಷಿಪ್ತ ವಿವರಣೆ ನೀಡಿ.

10. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 100 ರಿಂದ 120 ಪದಗಳಷ್ಟಿರಲಿ: 10x1=10
ಎ. ಮಲೆನಾಡು ಪ್ರದೆಶದ ಭೌಗೋಳಿಕ ವೈಶಿಷ್ಟÂಗಳನ್ನು ವಿವರಿಸಿ.
ಬಿ. ಭಾರತದ ಸುವರ್ಣ ಚತುಭುìಜ/ ಚತುಷ್ಪತ ಕಾರಿಡಾರ್‌ಗಳ ಬಗ್ಗೆ ಬರೆಯಿರಿ.

11. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉತ್ತರ ಸುಮಾರು 50 ಪದಗಳಷ್ಟಿರಲಿ: 5x2= 10
ಎ. ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ.
ಬಿ. ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ನಿರೂಪಿಸಿ.
ಸಿ. ಮಹಾನಗರಗಳ ಬೆಳವಣಿಗೆ ಬಗ್ಗೆ ವಿವರಿಸಿ.

★ ಭಾಗ- ಡಿ
12. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20
ಎ. ಸಾಂಪ್ರದಾಯಿಕವಲ್ಲದ ಶಕ್ತಿ ಎಂದರೇನು? ಸಾಂಪ್ರದಾಯಿಕವಲ್ಲದ ಕೆಲವು ಮುಖ್ಯವಾದ ಶಕ್ತಿಮೂಲಗಳ ವಿಧಗಳನ್ನು ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ ಮತ್ತು ಅವುಗಳಿಂದ ಸಿಗುವ ಲಾಭಗಳನ್ನು ತಿಳಿಸಿ.
ಬಿ. ಕರ್ನಾಟಕ ಸರ್ಕಾರ 2011ರಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ನೀತಿ ಹಾಗೂ ವಿದ್ಯುನ್ಮಾನ ಹಾರ್ಡ್‌ವೇರ್‌ ನೀತಿಯನ್ನು ಬಿಡುಗಡೆ ಮಾಡಿತು. ಈ ನೀತಿಗಳನ್ನು ಬಿಡುಗಡೆ ಮಾಡಿದ್ದರ ಹಿಂದಿರುವ ಪ್ರೇರಣೆ ಏನು ಎಂಬ ಬಗ್ಗೆ ಟಿಪ್ಪಣಿ ಬರೆಯಿರಿ ಮತ್ತು ಈ ಎರಡೂ ನೀತಿಗಳ ವಿವಿಧ ಲಕ್ಷಣಗಳನ್ನು ಕುರಿತು ಚರ್ಚಿಸಿ.

13. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 120 ಪದಗಳಲ್ಲಿ ಉತ್ತರಿಸಿ: 10x4=40
ಎ. ತಾರಾ ಶಕ್ತಿ
ಬಿ. ಜೀವಾವರಣದ ಪಾದಮುದ್ರೆ
ಸಿ. ಪರಮಾಣು ವಿಕಿರಣಗಳ ಜೈವಿಕ ಪರಿಣಾಮಗಳು
ಡಿ. ಕರ್ನಾಟಕ ಹಾಗೂ ಭಾರತದ ತಂತ್ರವಿಜ್ಞಾನದ ಪರಿಚಯವನ್ನು ಹೆಚ್ಚಿಸುವಲ್ಲಿ, ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯವು ಸ್ಥಾಪಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ(R - ಈ) ಪಾತ್ರ.
ಇ. ಸಾಮಾನ್ಯ ಬಳಕೆಯ ಪ್ಲಾರಸೆಂಟ್‌ ದೀಪಗಳು ಹಾಗೂ ಅಡಕ ಫ್ಲಾರಸೆಂಟ್‌ ದೀಪಗಳು.
ಎಫ್. ತಳಿವೈಜ್ಞಾನಿಕವಾಗಿ ಮಾರ್ಪಾಟು ಮಾಡಿದ(ಎM) ಬೆಳೆಗಳು ಹಾಗೂ ಆಹಾರ

14. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10=20
ಎ. ಪ್ಯೂರೋಸಿಸ್‌
ಬಿ. ವಾಯುಮಾಲಿನ್ಯ
ಸಿ. ಆಮ್ಲಮಳೆ
ಡಿ. ಜೆಲ್‌ಗ‌ಳು
ಇ. ಭೂಸವಕಳಿ
ಎಫ್. ಡಾಲಿ ಎಂಬ ಕುರಿ
ಜಿ. ಕರ್ನಾಟಕದ ಜಿಲ್ಲಾಮಟ್ಟದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ
ಎಚ್‌. ಬಯೋಮೆಟ್ರಿಕ್‌ ಸಾಧನಗಳು
ಐ. ಹೈನುಗಾರಿಕೆ ಮತ್ತು ಹೈನು ತಂತ್ರಜ್ಞಾನ
ಜೆ. ಕೃಷಿ ವಿಜ್ಞಾನ ಕೇಂದ್ರಗಳು

📼📼📼☀📼📼📼☀📼📼📼☀📼📼📼☀📼📼📼

Saturday 7 February 2015

☀ ಜುಲೈ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of July 2014) ★ಜುಲೈ 2014 (July 2014) 

☀ ಜುಲೈ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of July 2014)

★ಜುಲೈ 2014
(July 2014)

━━━━━━━━━━━━━━━━━━━━━━━━━━━━━━━━━━━━━━━━━━━━━


♦*ಜು.1: ಜುಲೈ ಒಂದರಿಂದ ಜಾರಿಗೆ ಬರುವಂತೆ ಅಫ್ಘಾನಿಸ್ತಾನ ಪ್ರಜೆಗಳಿಗೆ ಭಾರತ ಸರ್ಕಾರ ವೀಸಾ ಸರಳೀಕರಣ ಯೋಜನೆಯನ್ನು ಘೋಷಣೆ ಮಾಡಿತು. ಇದರ ಅನ್ವಯ ವೈದ್ಯಕೀಯ, ಶಿಕ್ಷಣ ಮತ್ತು ಸಮಾಜ ಸೇವೆ ನೆಲೆಗಟ್ಟಿನ ಅಡಿಯಲ್ಲಿ ಆಫ್ಘನ್‌ ಪ್ರಜೆಗಳು ಈ ವೀಸಾ ಸೌಲಭ್ಯ ಪಡೆಯಬಹುದು.


♦*ಜು. 1: ಫಿಲಿಡೆಲ್ಪಿಯಾ ದೇಶ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಲಿಬರ್ಟಿ ಮೆಡಲ್‌’ ಪಾಕಿಸ್ತಾನದ ಯುವ ಸಾಮಾಜಿಕ ಸೇವಾಕರ್ತೆ ಮಲಾಲ ಯೂಸೂಫ್‌ಝೈಗೆ ಸಂದಿದೆ.
ಈ ಪ್ರಶಸ್ತಿಯನ್ನು ಇಲ್ಲಿನ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವವರಿಗೆ 1998ರಿಂದ ನೀಡುತ್ತ ಬಂದಿದೆ.
 

♦*ಜು. 2: ಬಾಲಿವುಡ್‌ ನಟ ಶಾರೂಕ್‌ ಖಾನ್‌ ಅವರಿಗೆ ಫ್ರಾನ್ಸ್‌ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ನೈಟ್‌ ಆಫ್‌ ದಿ ಲಿಜಿಯನ್‌ ಆಫ್‌ ಆನರ್‌’ (Knight of the Legion of Honor) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ವಿಶ್ವದಾದ್ಯಂತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಮಾನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವುದು.


♦*ಜು.2: ರಾಜಸ್ತಾನ ಸರ್ಕಾರ ಒಂಟೆಯನ್ನು ರಾಜ್ಯ ಪ್ರಾಣಿಯನ್ನಾಗಿ ಘೋಷಣೆ ಮಾಡಿತು. ಜೈಪುರದಲ್ಲಿ ನಡೆದ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.


♦*ಜು.3: ಚೀನಾ ಮತ್ತು ಉತ್ತರ ಕೊರಿಯಾ ದೇಶಗಳ ದ್ವಿಪಕ್ಷೀಯ ಸಭೆ ಸಿಯೋಲ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಉಭಯ ದೇಶಗಳು ಯುದ್ಧ ತಂತ್ರ ಕುರಿತಂತೆ ಚರ್ಚೆ ನಡೆಸಿದವು.


♦*ಜು.4: ಗೋವಾದ ರಾಜ್ಯಪಾಲ ಬಿ.ವಿ.ವಾಂಚೂ ಅವರು ರಾಜೀನಾಮೆ ನೀಡಿದರು. ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದರು.


♦*ಜು.6: ಸಚಿನ್‌ ತೆಂಡೂಲ್ಕರ್‌ ನೇತೃತ್ವದ ಎಂಸಿಸಿ ಇಲೆವನ್‌ ಕ್ರಿಕೆಟ್‌ ತಂಡವು, ವಿಶ್ವ ಇಲೆವನ್‌ ತಂಡವನ್ನು ಮಣಿಸುವ ಮೂಲಕ 200ನೇ ಗೆಲುವನ್ನು ದಾಖಲಿಸಿತು. ಈ ಪಂದ್ಯ ಕ್ರಿಕೆಟ್‌ ಕಾಶಿ ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆಯಿತು.


♦*ಜು.6: ನೊವೊಕ್‌ ಜೊಕೊವಿಕ್‌ ಅವರು 2014ನೇ ಸಾಲಿನ ವಿಂಬಲ್ಡನ್‌ ಪುರುಷರ ಸಿಂಗಲ್‌ ಪ್ರಶಸ್ತಿಯನ್ನು ಗೆದ್ದರು. ಈ ಪ್ರಶಸ್ತಿಯನ್ನು ಅವರು ಎರಡನೇ ಸಲ ಪಡೆದರು. ಈ ಹಿಂದೆ 2011ರಲ್ಲಿ ವಿಂಬಲ್ಡನ್‌ ಪ್ರಶಸ್ತಿ ಗೆದ್ದಿದ್ದರು.


♦*ಜು.7: ಸುಪ್ರೀಂ ಕೋರ್ಟ್‌ ಷರಿಯತ್‌ ಕೋರ್ಟ್‌ಗಳು ಕಾನೂನು ಬಾಹಿರ ಎಂದು ಮಹತ್ವದ ತೀರ್ಪು ಪ್ರಕಟಿಸಿತು.


♦*ಜು.8: ಭಾರತೀಯ ಸಂವಿಧಾನ ತಜ್ಞ ಗ್ರೇನೆವಿಲ್‌ ಅಸ್ಟೀನ್‌ ಅವರು ವಾಷಿಂಗ್ಟನ್‌ನಲ್ಲಿ ನಿಧನರಾದರು. ಅವರು ಭಾರತೀಯ ಸಂವಿಧಾನ ಕುರಿತಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.


♦*ಜು.8: ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನ್ಯಾ. ಅರುಣ್‌ ಮಿಶ್ರಾ, ನ್ಯಾ.ಆದರ್ಶ್‌ ಕುಮಾರ್‌ ಗೋಯಲ್‌ ಮತ್ತು ಎಫ್‌.ನಾರಿಮನ್‌ ಅವರು ಪ್ರಮಾಣವಚನ ಸ್ವೀಕರಿಸಿದರು.


♦*ಜು.9: ನೈಜೀರಿಯಾ ತಂಡವನ್ನು ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಾವಳಿಗಳಿಂದ ನಿಷೇಧಿಸಲಾಯಿತು. ಪ್ರಸಕ್ತ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅನುಚಿತ ವರ್ತನೆ ತೋರಿದಕ್ಕೆ ಫಿಫಾ ಈ ನಿರ್ಣಯ ಕೈಗೊಂಡಿತು.


♦*ಜು.10: ಬಾಲಿವುಡ್‌ ಹಿರಿಯ ನಟಿ ಜೋಹ್ರಾ ಸೆಹಗಲ್‌   ತಮ್ಮ 102ನೇ ವಯಸ್ಸಿಗೆ ನಿಧನರಾದರು. ಅವರನ್ನು ಬಾಲಿವುಡನ್‌ ‘ಗ್ರ್ಯಾಂಡ್‌ ಓಲ್ಡ್‌ ಲೇಡಿ’ ಎಂದು ಕರೆಯಲಾಗುತ್ತದೆ.


♦*ಜು.13: 2014ನೇ ಸಾಲಿನ ಫಿಫಾ ವಿಶ್ವಕಪ್‌ ಪ್ರಶಸ್ತಿಯನ್ನು ಜರ್ಮನಿ ಗೆದ್ದುಕೊಂಡಿತು. ಅರ್ಜೆಂಟಿನಾ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 1–0ಯಿಂದ ಜರ್ಮನಿ ವಿಶ್ವಕಪ್‌ ಗೆದ್ದಿತು. ಜರ್ಮನಿ ಪರವಾಗಿ ಗೊಟ್ಜೆ ಒಂದು ಗೋಲು ಭಾರಿಸಿದರು.


♦*ಜು.13: ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕ ಗಿರಿರಾಜ್‌ ಕಿಶೋರ್‌ ಅವರು ನವದೆಹಲಿಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.


♦*ಜು.16: ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ನ ಅಧ್ಯಕ್ಷರಾಗಿ ಬಿ. ಅಶೋಕ್‌ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿತು.


♦*ಜು.16: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌ ಅವರು ವಿಶ್ವದ ಲಾರೆಸ್‌ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡರು.


♦*ಜು.17: ಕೇರಳದಲ್ಲಿ  ಜುಲೈ 17 ರಿಂದ ಆಗಸ್ಟ್‌ 16ರವರೆಗೆ ರಾಮಾಯಣ ಪಾರಾಯಾಣ ಅಭಿಯಾನ ನಡೆಯಿತು. ಹಿಂದೂ ಭಕ್ತರು ದೇವಾಲಯ ಮತ್ತು ಮನೆಗಳಲ್ಲಿ ಒಂದು ತಿಂಗಳ ಕಾಲ ರಾಮಾಯಣ ಪಾರಾಯಣ ಮಾಡಿದರು.


♦*ಜು. 17: 7ನೇ ಬ್ರಿಕ್ಸ್‌ ಸಮ್ಮೇಳನ ರಷ್ಯಾದಲ್ಲಿ ನಡೆಯಲಿದೆ ಎಂದು ಬ್ರಿಕ್ಸ್‌ ಸಂಘಟನೆಯ ಕಾರ್ಯಾಲಯ ಪ್ರಕಟಿಸಿತು.


♦*ಜು.17: ಗುಜರಾತ್‌ನ ರಾಜ್ಯಪಾಲರಾಗಿ ಓಂ ಪ್ರಕಾಶ್‌ ಕೊಹ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಮಲ್‌ ಬೆನ್ನಿವಾಲ್‌ ಅವರಿದ್ದ ಸ್ಥಾನಕ್ಕೆ ಕೊಹ್ಲಿ ಅವರನ್ನು ನೇಮಕ ಮಾಡಲಾಯಿತು. ಬೆನ್ನಿವಾಲ್‌ ಅವರನ್ನು ಮಿಜೊರಾಂ ಮತ್ತು ನಾಗಲ್ಯಾಂಡ್‌ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.


♦*ಜು.17: ಪ್ರಧಾನಿ ನರೇಂದ್ರ ಮೋದಿ ಅವರು 6ನೇ ಬ್ರಿಕ್ಸ್‌ ಸಮೇಳನದಲ್ಲಿ ಭಾಗವಹಿಸಲು ಬ್ರೆಜಿಲ್‌ ದೇಶಕ್ಕೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಬ್ರಿಕ್ಸ್‌ ದೇಶಗಳ ಜೊತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಹಿ ಹಾಕಿದರು.


♦*ಜು.18: 7ನೇ ಇಬ್ಸಾ ಸಮ್ಮೇಳನ 2015ರಲ್ಲಿ ನವದೆಹಲಿಯಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಇಂಡಿಯಾ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ದೇಶಗಳು ಬಾಗವಹಿಸಲಿವೆ.


♦*ಜು.18: ಮಲೇಶಿಯಾ ನಾಗರಿಕ ವಿಮಾನ ಉಕ್ರೇನ್‌ ವಾಯುನೆಲೆಯಲ್ಲಿ ಅಪಘಾತಕ್ಕೆ ಈಡಾಯಿತು. ಈ ದುರಂತದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.


♦*ಜು.19: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು 2013ನೇ ಸಾಲಿನ ಆರೋಗ್ಯ ಪಾಲಿಸಿಯನ್ನು ದೇಶಕ್ಕೆ ಪರಿಚಯಿಸಿದರು.


♦*ಜು.19: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ನಿತಾರಿ ಕೊಲೆ ಪ್ರಕರಣದ ಐವರು ಅಪರಾಧಿಗಳಿಗೆ ದಯಾಮರಣ ನೀಡಲು ನಿರಾಕರಿಸಿದರು. ಇವರಲ್ಲಿ ಪ್ರಮುಖ ಅಪರಾಧಿ ಸುರೇಂದರ್‌ ಕೋಲಿ ಅವರು ಸೇರಿದ್ದಾರೆ.

(ಕೃಪೆ: ಪ್ರಜಾವಾಣಿ)

☀ವಿಶ್ವದ ಎರಡನೆಯ ಅತಿ ದೊಡ್ಡ ಮಾನವ ನಿರ್ಮಿತ ಗುಂಬಜ್ ಗೋಲ ಗುಮ್ಮಟ (Gol Gumbaz) ದ ಕುರಿತು ವರ್ಣಿಸಿರಿ. (250 ಶಬ್ಧಗಳಲ್ಲಿ)

☀ವಿಶ್ವದ ಎರಡನೆಯ ಅತಿ ದೊಡ್ಡ ಮಾನವ ನಿರ್ಮಿತ ಗುಂಬಜ್ ಗೋಲ ಗುಮ್ಮಟ (Gol Gumbaz) ದ ಕುರಿತು ವರ್ಣಿಸಿರಿ.
(250 ಶಬ್ಧಗಳಲ್ಲಿ)


♦ ಇದು ಮಹಮದ್ ಆದಿಲ್ ಶಾ (ಆಳ್ವಿಕೆ: 1627-1657)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು 1659ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ರವರು ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ 50 ಮೀ , ಹೊರಗಡೆ ಎತ್ತರ 198 ಅಡಿ ಮತ್ತು ಒಳಗಡೆ ಎತ್ತರ 175 ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ 39 ಮೀ (124ಅಡಿ) ವ್ಯಾಸ ಹೊಂದಿದೆ.ಅದರಂತೆ 8 ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ – ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್).

ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ! ಹಾಗೆಯೆ ಇಲ್ಲಿರುವ “ಪಿಸುಗುಟ್ಟುವ ಶಾಲೆ”ಯಲ್ಲಿ ಅತಿ ಸಣ್ಣ ಶಬ್ದವೂ 37 ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ. ಇದರ ಹತ್ತಿರ ಬಿಜಾಪುರ ಆದಿಲ್ ಶಾಹಿಗಳಿಗೆ ಸಂಭದಿಸಿದ ವಸ್ತು ಸಂಗ್ರಾಹಾಲಯವು ಇದೆ.

ಗೋಲ ಗುಮ್ಮಟ ಬಿಜಾಪುರದಲ್ಲಿ ಸ್ಥಿತವಾಗಿರುವ ಮೊಹಮ್ಮದ್ ಆದಿಲ್ ಶಾ (1627 – 1657) ಅವರ ಸಮಾಧಿ. ಗೋಲ್ ಗುಂಬಜ್ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲ್ ನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುಬ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು.

ಗೋಲ್ ಗುಂಬಜ್, ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಿಂಗಲ್ ಛೇಂಬರ್ ಸ್ಟ್ರಕ್ಚರ್ ಗಳಲ್ಲಿ ಒಂದು. ಇಲ್ಲಿರುವ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ. ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ.

ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ.ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ.

☀ ಸಾಮಾನ್ಯ ಜ್ಞಾನ (ಭಾಗ - 12) ☀ General Knowledge (Part-12): ☆.. ಪ್ರಚಲಿತ ಘಟನೆಗಳೊಂದಿಗೆ..

☀ ಸಾಮಾನ್ಯ ಜ್ಞಾನ (ಭಾಗ - 12) ☀ General Knowledge (Part-12):
☆.. ಪ್ರಚಲಿತ ಘಟನೆಗಳೊಂದಿಗೆ..
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

531) ಕಂಪೆನಿ ಅಕ್ಬರ್ ಎಂದು ಕರೆಯಲ್ಪಟ್ಟವರು ಯಾರು?
— ಲಾರ್ಡ್ ವೆಲ್ಲೆಸ್ಲಿ.


532) 'ವಿಶ್ವ ಅಂಚೆ ಚೀಟಿ ದಿನ' ಯಾವಾಗ ಆಚರಿಸಲಾಗುವುದು?
— ಅಕ್ಟೋಬರ್ 09.


533) IAEA ಎಂದರೆ ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಎಂದರ್ಥ.


534) ಪ್ರಸ್ತುತ ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳು ಯಾವವು?
—ಆಡಳಿತಾರೂಢ ಪಕ್ಷ 'ಅವಾಮಿ ಲೀಗ್ ಪಕ್ಷ (ಎಎಲ್‌)' AALಮತ್ತು
—ವಿರೋಧ ಪಕ್ಷ 'ಬಾಂಗ್ಲಾದೇಶ್‌ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)'BNP.


535) ದಂತಕ್ಷಯ ತಡೆಯಲು ಟೂತ್ ಪೇಸ್ಟ್‌ನಲ್ಲಿ ಬಳಸುವ ಪದಾರ್ಥ ಯಾವುದು?
— ಸೋಡಿಯಂ ಫ್ಲೋರೈಡ್


536) "ಪೀಪಲ್ಸ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) PLA" ಯಾವ ದೇಶಕ್ಕೆ ಸಂಬಂಧಿಸಿದ ಯೋಧರು?
— ಚೀನಾ.


537) ಪ್ರಸ್ತುತ ದೇಶದಲ್ಲಿ ಎಷ್ಟು ಅಣುವಿದ್ಯುತ್ ಸ್ಥಾವರಗಳಿವೆ?
-20 (ವಿಶ್ವದಲ್ಲಿ 1400 ಕ್ಕೂ ಹೆಚ್ಚು ಪರಮಾಣು ವಿದ್ಯುತ್ ಸ್ಥಾವರಗಳಿವೆ )


538) ಇತ್ತೀಚೆಗೆ 'ಕೇಂದ್ರ ಚುನಾವಣಾ ಆಯೋಗ'ದ ನೂತನ ಮುಖ್ಯ ಆಯುಕ್ತರಾಗಿ ನೇಮಕಗೊಂಡವರು ಯಾರು?
— ಹರಿಶಂಕರ್‌ ಬ್ರಹ್ಮ


539) ಪ್ರಸ್ತುತ ಭಾರತೀಯ ಸೇನಾ ಮುಖ್ಯಸ್ಥ ಯಾರು?
—ಜನರಲ್‌ ದಲ್ಬೀರ್ ಸಿಂಗ್‌ ಸುಹಾಗ್‌


540) ಬಿಳಿ ಆನೆಯ ನಾಡೆಂದು ಯಾವುದನ್ನು ಕರೆಯುತ್ತಾರೆ?
— ಥೈಲ್ಯಾಂಡ್


541) ಭಾಷಾವಾರು ಪ್ರಾಂತ್ಯಗಳ ಮೇರೆಗೆ ಸ್ಥಾಪನೆಗೊಂಡ ಮೊದಲ ಭಾರತೀಯ ರಾಜ್ಯ ಯಾವುದು?
— ಆಂಧ್ರ ಪ್ರದೇಶ


542) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ISRO ಅಧ್ಯಕ್ಷ
—ಕೆ. ರಾಧಾಕೃಷ್ಣನ್


543) ಕರ್ನಾಟಕದ "ಚಿನ್ನದ ನಾಡು-ಭತ್ತದ ಕಣಜ" ಎಂದೇ ಖ್ಯಾತಿಯಾಗಿರುವ ಜಿಲ್ಲೆ ಯಾವುದು?
— ರಾಯಚೂರು ಜಿಲ್ಲೆ


544) ಪ್ರಸ್ತುತ ಕೇಂದ್ರ ಹಣಕಾಸು ಕಾರ್ಯದರ್ಶಿ ಯಾರು?
— ರಾಜೀವ್‌ ಮೆಹ್ರಿಷಿ.


545) ಓಜೋನ್ ಪದರಿಗೆ ಹಾನಿ ಮಾಡುವಂತ ರಾಸಾಯನಿಕ ಯಾವುದು?
— ಕ್ಲೋರೋಫ್ಲೋರೋ ಕಾರ್ಬನ್


546) IRNSS (ಐ.ಆರ್.ಎನ್.ಎಸ್.ಎಸ್) ಎಂದರೆ "ಭಾರತೀಯ ಪ್ರದೇಶ ದಿಕ್ಸೂಚಿ ಉಪಗ್ರಹ ವ್ಯವಸ್ಥೆ " ಎಂದರ್ಥ.


547) ಡೆಂಗ್ಯೂ ಜ್ವರ ಹರಡುವ ಮಾಡುವ ಸೊಳ್ಳೆ ಯಾವುದು?
— ಕ್ಯುಲೆಕ್ಸ್ ಸೊಳ್ಳೆ


548) ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವರು ಯಾರು?
—ಅರವಿಂದ್‌ ಪನಗರಿಯಾ (ಮುಕ್ತ ಮಾರುಕಟ್ಟೆ ಆರ್ಥಿಕ ತಜ್ಞ)


549) KPCAL  (ಕೆಪಿಸಿಎಲ್‌) ಎಂದರೆ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ಎಂದರ್ಥ.


550) ಪ್ರಸ್ತುತ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಯಾರು?
—ಅರವಿಂದ್‌ ಸುಬ್ರಹ್ಮಣಿಯನ್‌,


551) ಇತ್ತೀಚೆಗೆ ಇಸ್ರೊದ ನೂತನ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
— ಆಲೂರು ಸೀಳಿನ್‌ ಕಿರಣ್‌ ಕುಮಾರ್‌.


552) ರಾಜಾಸಂಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
— ಅಮೃತ ಸರ


553) ಇತ್ತೀಚೆಗೆ '19ನೇ ರಾಷ್ಟ್ರೀಯ ಯುವ ಉತ್ಸವ' ಯಾವ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿತ್ತು?
— ಗುವಾಹಟಿಯಲ್ಲಿ


554) ಸಂವಿಧಾನದ ಯಾವ ತಿದ್ದುಪಡಿಯಲ್ಲಿ ಮತದಾನದ ವಯಸ್ಸು 21 ರಿಂದ 18ಕ್ಕೆ ವರ್ಷಕ್ಕೆ ಇಳಿಸಲಾಯಿತು?
—62 ನೇ ತಿದ್ದುಪಡಿ


555) 2013 ನೇ ಸಾಲಿನ ‘ಬಸವ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದವರು ಯಾರು?
—ಡಾ.ಎಂ.ಎಂ. ಕಲಬುರ್ಗಿ (ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಹಿರಿಯ ಸಂಶೋಧಕ )


556) NDFB (ಎನ್‌ಡಿಎಫ್‌ಬಿ) ಎಂದರೆ "ನಿಷೇಧಿತ ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್‌ ಬೋಡೊಲ್ಯಾಂಡ್‌ನ ಬಂಡುಕೋರರು" ಎಂದರ್ಥ.


557) ಇತ್ತೀಚೆಗೆ ಉಗ್ರಗಾಮಿಗಳಿಂದ ದಾಳಿಗೊಳಗಾದ ವಿಡಂಬನಾ ಪತ್ರಿಕೆ ‘ಚಾರ್ಲಿ ಹೆಬ್ಡೊ’ ಪ್ರಕಟಗೊಳ್ಳುವುದು ಯಾವ ದೇಶದಿಂದ? ಫ್ರಾನ್ಸ್‌ (ಪ್ಯಾರಿಸ್‌ನ ಕೇಂದ್ರಭಾಗದಲ್ಲಿ)


558) ಇತ್ತೀಚೆಗೆ 'ಬೋಕೊ ಹರಾಮ್'‌ ಉಗ್ರ ಸಂಘಟನೆಯ ತೀವ್ರ ದಾಳಿಗೊಳಗಾಗುತ್ತಿರುವ ದೇಶ ಯಾವುದು?
—  ನೈಜೀರಿಯಾ


559) ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ (ಕೆಎಸ್‌ಟಿಎ) ಅಧ್ಯಕ್ಷರು ಯಾರು?
— ಪ್ರೊ. ಯು.ಆರ್‌. ರಾವ್‌


560) ಗೋಬರ್ ಗ್ಯಾಸ್‌ನಲ್ಲಿರುವ ಅನಿಲ ಯಾವುದು?
—ಮೀಥೇನ್


561) ಪ್ರಸ್ತುತ ಕೇಂದ್ರ ಹಣಕಾಸು ಸಚಿವ ಯಾರು?
—ಅರುಣ್‌ ಜೇಟ್ಲಿ .


562) ಇತ್ತೀಚೆಗೆ ರಾಜಕೀಯ ಮೊಗಸಾಲೆಯಲ್ಲಿ ತಲ್ಲಣ ಸೃಷ್ಟಿಸಿರುವ 'ಶಾರದಾ ಚಿಟ್‌ ಫಂಡ್‌ ಹಗರಣ' ಸಂಬಂಧಿಸಿದ್ದು ಯಾವ ರಾಜ್ಯಕ್ಕೆ?— ಪಶ್ಚಿಮ ಬಂಗಾಳ


563) ಮೊದಲ ಬಾರಿಗೆ ಭೂಮಿಯ ಮೇಲೆ ಕಾಣಿಸಿಕೊಂಡ ಸಸ್ಯಜಾತಿ ಯಾವುದು?
— ಥ್ಯಾಲೋಪೈಟ್


564) ಪ್ರಸ್ತುತ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಯಾರು?
— ಜಯಂತ್‌ ಸಿನ್ಹಾ


565) (POK) ಎಂದರೆ "ಪಾಕಿಸ್ತಾನ ಆಕ್ರಮಿತ ಕಾಶ್ಮೀರ " ಎಂದರ್ಥ.


566) ಭಾರತದ ಮೊದಲನೆಯ ಮುಖ್ಯ ಚುನಾವಣಾ ಆಯುಕ್ತರು ಯಾರು?
— ಸುಕುಮಾರ್ ಸೇನ್


567) ಪ್ರಸ್ತುತ ದಕ್ಷಿಣ ಕೊರಿಯಾದ ಅಧ್ಯಕ್ಷೆ ಯಾರಾಗಿದ್ದಾರೆ?
— ಪಾರ್ಕ್‌ ಜ್ಯುನ್‌ ಹೈ


568) ಪ್ರಸ್ತುತ ಉತ್ತರ ಕೊರಿಯಾದ ಮುಖಂಡ ಯಾರಾಗಿದ್ದಾರೆ?
—ಕಿಮ್‌ ಜಾಂಗ್‌ ಉನ್‌


569) ಆರೋಗ್ಯವಂತ ವಯಸ್ಕನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತವಿರುತ್ತದೆ?
—5-6 ಲೀಟರ್‌ಗಳು


570) ಬಾಂಗ್ಲಾದೇಶದ ಪ್ರಸ್ತುತ ಅಧ್ಯಕ್ಷರು ಯಾರು?
— ಮೊಹ್ಮದ್‌ ಅಬ್ದುಲ್‌ ಹಮೀದ್‌


571) ಇತ್ತೀಚೆಗೆ ನಿಧನರಾದ 1950–60 ರ ದಶಕದಲ್ಲಿ ಸ್ವಿಟ್ಜರ್‌ಲೆಂಡ್‌ನ ‘ಸೌಂದರ್ಯದ ಗಣಿ’ ಎಂದೇ ಹೆಸರಾಗಿದ್ದ ಖ್ಯಾತ ಅಂತರ್ರಾಷ್ಟ್ರೀಯ ನಟಿ ಯಾರು?
— ಸ್ವಿಟ್ಜರ್‌ಲೆಂಡ್‌ನ ಅನಿಟಾ ಎಕ್‌ಬರ್ಗ್‌(83).


572) ರಾಮನಾಥ ಅಂಕಿತವಿಟ್ಟು ವಚನಗಳನ್ನು ಬರೆದ ವಚನಕಾರ ಯಾರು?
— ದೇವರದಾಸಿಮಯ್ಯ


573) `ಮನುಷ್ಯನಲ್ಲಿ ಕೇವಲ ನಾಲ್ಕು ವರ್ಣಗ್ರಾಹಿ ನರಪುಂಜಗಳಿವೆ; ಆದರೆ ಆಸ್ಟ್ರೇಲಿಯಾದ ಕಡಲಂಚಿನ `ಮ್ಯೋಂಟಿಸ್' ಸೀಗಡಿಗಳಲ್ಲಿ ಹದಿನಾರು ನರಪುಂಜಗಳಿವೆ.


574) ಬೆಂಗಳೂರಿನಲ್ಲಿ ಹೈಕೋರ್ಟ್ ಪ್ರಾರಂಭವಾದ ವರ್ಷ ಯಾವುದು?
—1864 ರಲ್ಲಿ.


575) ಇತ್ತೀಚೆಗೆ ಬಾಂಗ್ಲಾಕ್ಕೆ ಮೊದಲ ಹಿಂದೂ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡವರು ಯಾರು?
—ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿದ್ದ ಎಸ್‌.ಕೆ.ಸಿನ್ಹಾ


576) ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವವರು ಯಾರು?
— ರಾಷ್ಟ್ರಪತಿ


577) ಪ್ರಸ್ತುತ ಅಂತರರಾಷ್ಟ್ರೀಯ ಕಾಫಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
—  ಜಾವೇದ್‌ ಅಖ್ತರ್‌ (ಪ್ರಸ್ತುತ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ)


578) IS (ಐ.ಎಸ್‌) ಎಂದರೆ ಇಸ್ಲಾಮಿಕ್ ಸ್ಟೇಟ್‌ ಉಗ್ರರು ಎಂದರ್ಥ.


579) ಭಾರತದ ಮೊಗಲ ಸಾಮ್ರಾಜ್ಯ ಕೊನೆಯ ಚಕ್ರವರ್ತಿ ಯಾರು?
— 2ನೇಯ ಬಹದ್ಧೂರ ಷಾ


580) ಮದ್ಯದ ಬಾಟಲಿ ಮತ್ತು ಟಿನ್‌ಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಮುದ್ರಿಸಿ ವಿವಾದಕ್ಕೆ ಸಿಲುಕಿದ್ದ ಮದ್ಯ ತಯಾರಿಕಾ ಕಂಪೆನಿ ಯಾವುದು?
— ಅಮೆರಿಕದ ಕನೆಕ್ಟಿಕಟ್‌ ಮೂಲದ ನ್ಯೂ ಇಂಗ್ಲೆಂಡ್

To be continued.....