"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 7 July 2017

☀ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) : ■. ವಿಶ್ವದ ದುಬಾರಿ ನಗರ - 2017: ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನ ವಿಶೇಷ ವರದಿ: (Special Reports on the world’s most expensive cities)

☀ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) :
■. ವಿಶ್ವದ ದುಬಾರಿ ನಗರ - 2017: ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನ ವಿಶೇಷ ವರದಿ:
(Special Reports on the world’s most expensive cities)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


■. ವಿಶ್ವದ ದುಬಾರಿ ನಗರ- 2017: ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನ ವಿಶೇಷ ವರದಿ:
(Special Reports on the world’s most expensive cities)


✧. ಅಂಗೋಲಾದ ರಾಜಧಾನಿ ಲುವಾಂಡಾ  ಜಗತ್ತಿನಲ್ಲೇ ಅತ್ಯಂತ ದುಬಾರಿ ನಗರ ಎಂದು ಸಮೀಕ್ಷೆಯೊಂದು ತಿಳಿಸಿದೆ. ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನಡೆಸಿದ 23ನೇ ವಾರ್ಷಿಕ ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದೆ.

- ಡಾಲರ್‌ ಎದುರು ಅಂಗೋಲಾದ ಸ್ಥಳೀಯ ಕರೆನ್ಸಿ ‘ಕ್ವಾಂಝಾ’ ಮೌಲ್ಯ  ಕುಸಿತವಾಗಿದ್ದರೂ ಲುವಾಂಡಾ  ದುಬಾರಿ ನಗರದ ಪಟ್ಟ ಪಡೆದುಕೊಂಡಿದೆ.
- ಜೀವನ ವೆಚ್ಚ ಕುರಿತ ವರದಿಯಲ್ಲೂ  ಸತತ ಮೂರು ವರ್ಷಗಳ ಕಾಲ ಲುವಾಂಡಾ  ನಗರ ಪ್ರಥಮ ಸ್ಥಾನ ಪಡೆದಿತ್ತು.

✧. ಮೊದಲ ಸ್ಥಾನದಲ್ಲಿದ್ದ ಹಾಂಗ್‌ಕಾಂಗ್‌ ನಗರ ಈಗ ಎರಡನೇ ಸ್ಥಾನ ಪಡೆದಿದೆ.  ಆದರೆ, ಏಷ್ಯಾದಲ್ಲೇ ಅತ್ಯಂತ ದುಬಾರಿ ನಗರವಾಗಿದೆ. ಈ ನಗರದಲ್ಲಿ ವಾಸಿಸುವ ಮನೆಗಳು ದುಬಾರಿಯಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

✧. 200 ನಗರಗಳಲ್ಲಿ ಈ ಸಮೀಕ್ಷೆ ನಡೆಸಿದ್ದು,  ವಸತಿ, ಆಹಾರ, ಸಾರಿಗೆ ಮತ್ತು ಮನರಂಜನೆ ಸೇರಿದಂತೆ  200 ಅಂಶಗಳನ್ನು ಹೋಲಿಕೆ ಮಾಡಲಾಗಿದೆ.

- ಕಳೆದ ಬಾರಿ 5ನೇ ಸ್ಥಾನದಲ್ಲಿದ್ದ ಟೋಕಿಯೊ ಈ ಸಲ ಮೂರನೇ ಸ್ಥಾನ ಪಡೆದಿದೆ. ಯೆನ್‌ ಮೌಲ್ಯ ಮತ್ತು ವಸತಿ ವಹಿವಾಟಿನಲ್ಲಿ ಹೆಚ್ಚಳವಾಗಿರುವುದು  ಇದಕ್ಕೆ ಕಾರಣವಾಗಿದೆ.

- ಸಿಂಗಪುರ 5ನೇ ಸ್ಥಾನದಲ್ಲಿದ್ದರೆ, ನ್ಯೂಯಾರ್ಕ್‌ ಒಂಬತ್ತನೇ ಸ್ಥಾನ ಪಡೆದಿದೆ.

✧. ಸಮೀಕ್ಷೆಯನ್ನು ವಿವಿಧ ದೇಶಗಳು ಮತ್ತು ಉದ್ಯಮಗಳು ಗಂಭೀರವಾಗಿ ಪರಿಗಣಿಸಿವೆ. ವಿದೇಶಗಳಿಗೆ ತಮ್ಮ ನೌಕರರನ್ನು ಕಳುಹಿಸುವ ಸಂದರ್ಭದಲ್ಲಿ ಈ ಅಂಶಗಳನ್ನು ಪರಿಗಣಿಸುತ್ತವೆ ಎಂದು ವಿಶ್ಲೇಷಿಸಲಾಗಿದೆ.
ರಷ್ಯಾದ ಕೆಲವು ನಗರಗಳು ಮತ್ತಷ್ಟು ದುಬಾರಿಯಾಗಿವೆ. ಕಳೆದ ವರ್ಷ 53ನೇ ಸ್ಥಾನದಲ್ಲಿದ್ದ  ಮಾಸ್ಕೊ ನಗರ ಈ ಬಾರಿ 14ನೇ ಸ್ಥಾನದಲ್ಲಿದೆ. ಸೇಂಟ್‌ ಪೀಟರ್ಸ್‌ಬರ್ಗ್‌ 116ರಿಂದ 36ನೇ ಸ್ಥಾನಕ್ಕೇರಿದೆ.

✧. ದುಬಾರಿ ನಗರಗಳು
-  ಲುವಾಂಡಾ
- ಹಾಂಗ್‌ಕಾಂಗ್
- ಟೋಕಿಯೊ
- ಜ್ಯೂರಿಚ್‌
- ಸಿಂಗಪುರ

✧. ಬೆಂಗಳೂರಿಗೆ 166ನೇ ಸ್ಥಾನ

- ವಲಸಿಗರಿಗೆ ಮುಂಬೈ ದೇಶದಲ್ಲಿ ದುಬಾರಿ ನಗರವಾಗಿದ್ದು, ಜಗತ್ತಿನ ಪ್ರಮುಖ ನಗರಗಳ ಪಟ್ಟಿಯಲ್ಲಿ 57ನೇ ಸ್ಥಾನ ಪಡೆದಿದೆ.
- ಆರ್ಥಿಕ ಬೆಳವಣಿಗೆ, ಹಣದುಬ್ಬರ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

✧. ಜಾಗತಿಕ ಪಟ್ಟಿಯಲ್ಲಿ ನವದೆಹಲಿ 99, ಚೆನ್ನೈ 135, ಬೆಂಗಳೂರು 166 ಹಾಗೂ ಕೋಲ್ಕತ್ತ 184ನೇ ಸ್ಥಾನದಲ್ಲಿವೆ.

Tuesday 4 July 2017

●. ‘ಸೊಲಿಬಸಿಲ್ಲಸ್ ಕಲಾಮಿ’ : (Solibacillus kalamii)

●. ‘ಸೊಲಿಬಸಿಲ್ಲಸ್ ಕಲಾಮಿ’ :
(Solibacillus kalamii)
━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)


ಈ ಜೀವಿ ಒಂದು ರೀತಿಯ ಬ್ಯಾಕ್ಟೀರಿಯಾ ಆಗಿದ್ದು, ಸಂತಾನೋತ್ಪತ್ತಿ ಸಾಮರ್ಥ್ಯದ ಘಟಕ ಹೊಂದಿರುವ ಏಕಾಣು ಜೀವಿ. ಇದು ಭೂಮಿ ಮೇಲೆ ಅಸ್ತಿತ್ವದಲ್ಲಿಲ್ಲ. ಇದು ಪತ್ತೆಯಾಗಿರುವುದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್).

ಅಂತರ್‌ಗ್ರಹ ಪ್ರಯಾಣದ ಕುರಿತು ಸಂಶೋಧನೆ ನಡೆಸುವ ನಾಸಾದ ಅಗ್ರಗಣ್ಯ ಪ್ರಯೋಗಾಲಯ ‘ಜೆಟ್ ಪ್ರೊಪಲ್ಷನ್ ಪ್ರಯೋಗಾಲಯ’ದ  (ಜೆಪಿಎಲ್‌) ಸಂಶೋಧಕರು ಐಎಸ್‌ಎಸ್‌ನ ಫಿಲ್ಟರ್‌ಗಳ ಮೇಲೆ ಇದ್ದ ಹೊಸ ಜೀವಿಯನ್ನು ಪತ್ತೆಹಚ್ಚಿದ್ದು,  ಇದಕ್ಕೆ  ‘ಸೊಲಿಬಸಿಲ್ಲಸ್ ಕಲಾಮಿ’  ಎಂದು ಹೆಸರಿಟ್ಟಿದ್ದಾರೆ.

- ಇತ್ತೀಚೆಗೆ ಪತ್ತೆಯಾದ ಹೊಸ ಏಕಾಣು ಜೀವಿಗೆ ಖ್ಯಾತ ವಿಜ್ಞಾನಿ ಭಾರತದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡುವ ಮೂಲಕ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಗೌರವ ಸಲ್ಲಿಸಿದೆ. 

●.ತೀಸ್ತಾ ನದಿ (Tystha River) — ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಹುಟ್ಟಿಕೊಂಡಿದ್ದು ಹೇಗೆ?


●.ತೀಸ್ತಾ ನದಿ (Tystha River) — ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಹುಟ್ಟಿಕೊಂಡಿದ್ದು ಹೇಗೆ?
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(general studies)


- ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಕಳೆದ 34 ವರ್ಷಗಳಿಂದಲೂ ಬಗೆಹರಿಯದೆ ಉಳಿದಿದೆ. 2011ರಲ್ಲಿ ಡಾ.ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎರಡೂ ರಾಷ್ಟ್ರಗಳು ಈ ಸಂಬಂಧ ಒಪ್ಪಂದವೊಂದಕ್ಕೆ ಸಹಿಹಾಕಲು ಮುಂದಾಗಿದ್ದವು. ಆದರೆ, ಕೊನೆಕ್ಷಣದಲ್ಲಿ ಮಮತಾ ಬ್ಯಾನರ್ಜಿ ವಿರೋಧದಿಂದ ಒಪ್ಪಂದ ಏರ್ಪಡಲಿಲ್ಲ. ಆದರೆ ಜಲವಿವಾದಕ್ಕೆ ತೆರೆಬೀಳುವ ಮುನ್ಸೂಚನೆಗಳು ಈಗ ಸಿಕ್ಕಿವೆ.


●.ತೀಸ್ತಾ ನದಿಯ ಹುಟ್ಟು :
━━━━━━━━━━━━━━━
ಸಿಕ್ಕಿಂನ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ತೀಸ್ತಾ ಹುಟ್ಟುತ್ತದೆ. ಖಾಂಗ್ಸೆ ಮತ್ತು ಝೆಮು ಹಿಮನದಿಗಳು ಕರಗಿ ಕಾಂಚನಗಂಗಾದ ಸಮೀಪದಲ್ಲಿರುವ ತ್ಸೋ ಲಾಮೋ ಸರೋವರಕ್ಕೆ ಸೇರುತ್ತವೆ. ಅಲ್ಲಿಂದ ತೀಸ್ತಾ ಹುಟ್ಟಿಕೊಳ್ಳುತ್ತದೆ. ಈ ನದಿಯು ಮುಂದೆ ಡಾರ್ಜಿಲಿಂಗ್​ನ ತೀಸ್ತಾಬಜಾರ್ ಸಮೀಪ ರಂಜೀತ್ ನದಿಯೊಂದಿಗೆ ಸಂಗಮವಾಗಿ ವಿಶಾಲ ರೂಪ ಪಡೆದುಕೊಳ್ಳುತ್ತದೆ. ಆ ಬಳಿಕ ಉತ್ತರ ಬಾಂಗ್ಲಾದ ಕೂಚ್​ಬೆಹಾರ್ ಜಿಲ್ಲೆಯ ಮೆಖ್ಸಿಗುಂಜ್​ನಲ್ಲಿ ಅಂತಾರಾಷ್ಟ್ರೀಯ ಗಡಿ ದಾಟಿ ಬಾಂಗ್ಲಾದೇಶಕ್ಕೆ ಪ್ರವೇಶಿಸಿ ಅಲ್ಲಿ ಬ್ರಹ್ಮಪುತ್ರಾ ನದಿಯೊಂದಿಗೆ ಸಂಗಮ ವಾಗುತ್ತದೆ. ಕೊನೆಗೆ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.


●.ಗಮನಿಸಬೇಕಾದ ಅಂಶಗಳು :
━━━━━━━━━━━━━━━━━━
- 414 ಕಿಲೋಮೀಟರ್ ತೀಸ್ತಾ ನದಿಯ ಒಟ್ಟು ಉದ್ದ
- ಸಿಕ್ಕಿಂನಲ್ಲಿ 150 ಕಿಮೀ, ಪಶ್ಚಿಮ ಬಂಗಾಳದಲ್ಲಿ 123 ಕಿಮೀ ಮತ್ತು ಬಾಂಗ್ಲಾದಲ್ಲಿ 140 ಕಿಮೀ ನದಿ ಹರಿಯುತ್ತದೆ.
- ಬಾಂಗ್ಲಾದೇಶದಲ್ಲಿ 1 ಕೋಟಿ ಜನರಿಗೆ ಜೀವನಾಧಾರ
- ಬಾಂಗ್ಲಾದ ಶೇ.14ರಷ್ಟು ಕೃಷಿಗೆ ತೀಸ್ತಾ ಅಗತ್ಯ
- ಬಾಂಗ್ಲಾದ 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ.
- ಪಶ್ಚಿಮ ಬಂಗಾಳದ ಜಲಪೈಗುರಿ ಮತ್ತು ದಕ್ಷಿಣ ದಿನಾಜಪುರಕ್ಕೆ ತೀಸ್ತಾ ನೀರಿನ ಮೂಲ.



●.ಬಾಂಗ್ಲಾ, ಪಶ್ಚಿಮಬಂಗಾಳಕ್ಕೆ ಜೀವನದಿ
━━━━━━━━━━━━━━━━━━━━━━━
ತೀಸ್ತಾ ನದಿ ಅಂದಾಜು 414 ಕಿಲೋಮೀಟರ್​ಗಳಷ್ಟು ದೂರ ಹರಿಯುತ್ತದೆ. ಇದರಲ್ಲಿ 150 ಕಿಲೋಮೀಟರ್ ಸಿಕ್ಕಿಂನಲ್ಲಿ, 123 ಕಿಲೋಮೀಟರ್ ಪಶ್ಚಿಮ ಬಂಗಾಳ ಮತ್ತು 140 ಕಿಲೋಮೀಟರ್​ಗಳಷ್ಟು ಬಾಂಗ್ಲಾದೇಶದಲ್ಲಿ ಹರಿಯುತ್ತದೆ. ತೀಸ್ತಾ ನದಿ ಬಾಂಗ್ಲಾದೇಶದ ಉತ್ತರ ಭಾಗಕ್ಕೆ ನೀರಿನ ಪ್ರಮುಖ ಮೂಲವಾಗಿದೆ. ಬಾಂಗ್ಲಾದ ನಾಲ್ಕನೇ ಅತಿದೊಡ್ಡ ನದಿ ಎಂಬ ಹೆಗ್ಗಳಿಕೆಯೂ ಇದರದ್ದು. ಬಾಂಗ್ಲಾದ 1 ಕೋಟಿ ಜನರಿಗೆ ಜೀವನಾಧಾರವೂ ಈ ತೀಸ್ತಾ. ಶೇ.14ರಷ್ಟು ಕೃಷಿ, ಐದು ಜಿಲ್ಲೆಗಳ 1 ಲಕ್ಷ ಹೆಕ್ಟೇರ್​ನಷ್ಟು ಪ್ರದೇಶಕ್ಕೆ ನೀರಿನ ಮೂಲಕೂಡ ಆಗಿದೆ ಈ ನದಿ. ಹೀಗಾಗಿಯೇ ಬಾಂಗ್ಲಾದೇಶವು ನದಿಯ ಶೇ.50ರಷ್ಟು ನೀರು ತನಗೆ ಸಲ್ಲಬೇಕು ಎಂದು ಪಟ್ಟು ಹಿಡಿದಿದೆ. ಪಶ್ಚಿಮ ಬಂಗಾಳಕ್ಕೂ ತೀಸ್ತಾ ಜೀವನದಿ ಆಗಿದೆ. ಅಲ್ಲಿನ ಜಲಪೈಗುರಿ, ದಕ್ಷಿಣ ದಿನಾಜಪುರ ಮತ್ತು ಡಾರ್ಜಿಲಿಂಗ್​ನಲ್ಲಿನ ಕೃಷಿಗೂ ತೀಸ್ತಾ ಆಧಾರವಾಗಿದೆ.


●.ವಿವಾದದ ಹುಟ್ಟಿಕೊಂಡಿದ್ದು ಹೇಗೆ?
━━━━━━━━━━━━━━━━━━━━━━━
ಪಶ್ಚಿಮ ಬಂಗಾಳದ ಕೃಷಿಕರ ನೀರಾವರಿ ಅಗತ್ಯಗಳನ್ನು ಪೂರೈಸುವ ಸಲುವಾಗಿ 1980ರ ದಶಕದಲ್ಲಿ ತೀಸ್ತಾಗೆ ಅಡ್ಡಲಾಗಿ ಎರಡು ಅಣೆಕಟ್ಟುಗಳನ್ನು ನಿರ್ವಿುಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಇದಕ್ಕೆ ಬಾಂಗ್ಲಾದೇಶ ತೀವ್ರ ವಿರೋಧ ವ್ಯಕ್ತಪಡಿಸಿತು. ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸಿತು. ಆಗಿನ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಾಂಗ್ಲಾದೇಶದೊಡನೆ ಚರ್ಚೆ ನಡೆಸಿ 1983ರಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿತು. ಅದರಂತೆ ತೀಸ್ತಾ ನದಿಯ ಶೇ. 39ರಷ್ಟು ನೀರು ಭಾರತಕ್ಕೆ ಮತ್ತು ಶೇ.36ರಷ್ಟು ನೀರು ಬಾಂಗ್ಲಾದೇಶಕ್ಕೆ ಎಂದು ಹಂಚಿಕೆ ಮಾಡಲಾಗಿತ್ತು. ಉಳಿದ ಶೇ.25ರಷ್ಟು ನೀರನ್ನು ಹಂಚಿಕೆ ಮಾಡಿರಲಿಲ್ಲ. ಆದಾಗ್ಯೂ, ಈ ಸೂತ್ರ ಹೆಚ್ಚು ಕಾಲ ಉಳಿಯಲಿಲ್ಲ.


●.ಜಲವಿದ್ಯುತ್ ಉತ್ಪಾದನೆಗೆ ತಟ್ಟಲಿದೆ ಬಿಸಿ
━━━━━━━━━━━━━━━━━━━━━━━
ತೀಸ್ತಾ ನದಿ ಜಲವಿದ್ಯುತ್​ನ ಮೂಲವೂ ಹೌದು. ಭಾರತದಲ್ಲಿ ತೀಸ್ತಾ ನದಿಯನ್ನು ಆಧರಿಸಿ 26 ಜಲವಿದ್ಯುತ್ ಯೋಜನೆಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ ಹೆಚ್ಚಿನ ಯೋಜನೆಗಳು ಸಿಕ್ಕಿಂನಲ್ಲಿ ಸ್ಥಾಪಿತವಾಗಿವೆ. ಇವುಗಳ ಮೂಲಕ 50,000 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಬಾಂಗ್ಲಾದೇಶಕ್ಕೆ ನೀರು ಹಂಚಿಕೆ ಮಾಡಬೇಕಾದದ್ದೇ ಆದಲ್ಲಿ ಈ ಯೋಜನೆಗಳಿಗೆ ಅಡ್ಡಿಯಾಗಲಿದೆ.

(courtesy :ವಿಜಯವಾಣಿ ಸುದ್ದಿಜಾಲ )