"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 17 November 2014

★ ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆ 2014 ರ ಉತ್ತರಗಳು: (CIVIL POLICE CET KEY ANSWERS 2014)


POLCET-2014  

★ ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆ 2014 ರ ಉತ್ತರಗಳು:                    
(CIVIL POLICE CET KEY ANSWERS 2014)                                                            

1. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು?
— ಚಾಲುಕ್ಯರು

2. ಹೊಯ್ಸಳರ ರಾಜಧಾನಿ ಯಾವುದು?
— ದ್ವಾರಸಮುದ್ರ

3. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?
— ರಜಿಯಾ ಬೇಗಂ

4. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು?
— ಜಲಾಲ್-ಉದ್-ದೀನ್ ಮಹಮದ್

5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ?
— ಸರ್ ಎಂ ವಿಶ್ವೇಶ್ವರಯ್ಯ
6. ______________ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ.
— ಶ್ರೀ ವಿಜಯ

7. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.?
— ಕಾರ್ಬನ್ 14 ಮತ್ತು ಪೊಟ್ಯಾಷಿಯಂ                                                                  
8.ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ?
— ಹಿಂದೂಸ್ಥಾನಿ ಸಂಗೀತ                                                                              
9.ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :
ಎ) ಚಾಂದ್ ಬರ್ದಾಯಿ     1. ವಿಕ್ರಮಾಂಕದೇವಚರಿತ
ಬಿ) ಬಿಲ್ಹಣ                    2. ಅರ್ಥಶಾಸ್ತ್ರ
ಸಿ) ಕಲ್ಹಣ                    3. ಪೃಥ್ವಿರಾಜರಾಸೋ
ಡಿ) ಕೌಟಿಲ್ಯ                  4. ರಾಜತರಂಗಿಣಿ
ಉತ್ತರ:    ಎ-3, ಬಿ-1, ಸಿ-4, ಡಿ-2                                                                    
10. ಈ ಕೆಳಗೆ ಹೆಸರಿಸಿರುವ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಾಗಿರುವುದಿಲ್ಲ?
— ಬಾದಾಮಿ

11. ಭಾರತ ಸಂವಿಧಾನದ 24ನೇ ವಿಧಿಯ ಪ್ರಕಾರ ಎಷ್ಟು ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಲಾಗಿದೆ?    
— 14 ವರ್ಷ

12. ನಮ್ಮ ಸಂವಿಧಾನದ ಯಾವ ವಿಧಿಯು ಅಸ್ಪೃಷ್ಯತಾ ಆಚರಣೆಯನ್ನು ತೊಡೆದು ಹಾಕಿದೆ?
— 17 ನೇ ವಿಧಿ

13. ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ?
— ಬಾಂಗ್ಲಾದೇಶ

14. ಹಿಮಾಲಯ ಪರ್ವತ ಶ್ರೇಣಿಯು ಪಶ್ಚಿಮದಲ್ಲಿ __________ ದಿಂದ ಪ್ರಾರಂಭವಾಗುತ್ತದೆ?
— ಪಾಮಿರ್ ಗ್ರಂಥಿ

15. ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ _______________ ಇದೆ.
— ಅರಬ್ಬೀ ಸಮುದ್ರ

16. ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ ಯಾವುದು?
— ನಗರ ಯೋಜನೆ

17. ಜೈನ ಧರ್ಮದ ಮೊತ್ತಮೊದಲ ತೀರ್ಥಂಕರ ಯಾರು?
— ವೃಷಭನಾಥ

18. ಬೌದ್ಧ ಧರ್ಮವನ್ನು ಹರಡಲು ಅಫಘಾನಿಸ್ಥಾನ, ಬರ್ಮಾ, ಶ್ರೀಲಂಕಾ ಮತ್ತು ಯೂರೋಪಿಗೆ ನಿಯೋಗಗಳನ್ನು ಕಳುಹಿಸಿದ ದೊರೆ ಯಾರು?
— ಅಶೋಕ

19. ಪ್ರಾಚೀನ ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ ಯಾರು?
— ಆರ್ಯಭಟ

20. _________ ರವರು ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತನಾಮರಾಗಿದ್ದಾರೆ?
— ಮಾಸ್ಟರ್ ಹಿರಣ್ಣಯ್ಯ

21. ಈ ಕೆಳಗಿನವುಗಳಲ್ಲಿ ಯಾವುದು ವಾಣಿಜ್ಯ ಬೆಳೆ?
— ರಬ್ಬರ್

22. ಈ ಕೆಳಗಿನವುಗಳಲ್ಲಿ ಯಾವುದು ಅಣು ಖನಿಜ?
— ಯುರೇನಿಯಂ

23. ಮರ್ಮಗೋವಾ ಬಂದರು ಯಾವ ರಾಜ್ಯದಲ್ಲಿದೆ?
— ಗೋವಾ

24. ಪ್ರಪಂಚದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
— ಬ್ರೆಜಿಲ್

25. 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ
— 121 ಕೋಟಿ

26. ಈ ಕೆಳಕಂಡವರಲ್ಲಿ ಯಾರು ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕರಗಿರುತ್ತಾರೆ?
— ನಾಗಾಭರಣ                                                                            

27.ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಭಂದಿಸಿದಂತೆ ಈ ಕೆಳಕಂಡ ಯಾವ ವ್ಯಕ್ತಿಯೂ ಕ್ರಾಂತಿಕಾರಿ ಆಗಿರಲಿಲ್ಲ?
— ದಾದಾಭಾಯ್ ನವರೋಜಿ

28.ಗಾಂಧೀಜಿಯವರ ಪ್ರಸಿದ್ದ ‘ ಉಪ್ಪಿನ ಸತ್ಯಾಗ್ರಹ ‘ ಅಥವಾ ‘ ದಂಡಿ ಸತ್ತಯಾಗ್ರಹ ‘ವು ಯಾವ ವರ್ಷ ಆರಂಭವಾಯಿತು?
— 1930

29.ಸುಭಾಷ್ ಚಂದ್ರಬೋಸ್ ರವರು-----ಎಂದು ಪ್ರಖ್ಯಾತರಾಗಿದ್ದರು?
— ನೇತಾಜಿ

30.ಬಾಂಬೆ ಶಾಸನಸಭೆಗೆ ರಾಜೀನಾಮೆ ನೀಡಿ,ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿದವರು ಯಾರು?
— ಅಂದಾನಪ್ಪ ದೊಡ್ಡಮೇಟಿ

31. A x B = C ಆಗಿದ್ದು A=7  ಮತ್ತು C=0 ಆದರೆ, B=?
— 0

32. ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ.                
5, 12, 4, 13, 3, 14,  -
— 2

33. ಪೋಕ್ರಾನ್ ಯಾವ ರಾಜ್ಯದಲ್ಲಿದೆ?
— ರಾಜಸ್ಥಾನ

34. ನವೆಂಬರ್ 2013 ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರಿಗೆ ಯಾವ ಪ್ರಶಸ್ತಿ ಲಭಿಸಿತು?
— ಭಾರತರತ್ನ

35. ಬಯೋಕಾನ್ ಸಂಸ್ಥೆಯ ಸಂಸ್ಥಾಪಕರು ಯಾರು?
— ಕಿರಣ್ ಮಜುಂದಾರ್ ಷಾ

36. ನೈರುತ್ಯ ಮಾನ್ಸೂನ್ ಮಳೆಗಾಲ ________ ಅವಧಿಯಲ್ಲಿ ಬರುತ್ತದೆ.
— ಜೂನ್ ನಿಂದ ಸೆಪ್ಟೆಂಬರ್

37. ಯಾವ ಮಣ್ಣು ಹತ್ತಿ ಬೆಳೆಗೆ ಬಹು ಸೂಕ್ತವಾಗಿರುತ್ತದೆ?
— ಕಪ್ಪು ಮಣ್ಣು

38. ಕರ್ನಾಟಕದ ಯಾವ ಪ್ರದೇಶವನ್ನು ‘ಯುನೆಸ್ಕೋ’ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿದೆ?
— ಪಶ್ಚಿಮ ಘಟ್ಟಗಳು

39. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
ಎ) ಕಾಂಜಿರಂಗ ನ್ಯಾಷನಲ್ ಪಾರ್ಕ್           1) ಪಶ್ಚಿಮ ಬಂಗಾಳ
ಬಿ) ಸುಂದರಬನ                               2) ಗುಜರಾತ್
ಸಿ) ಹಜಾರಿಬಾಗ್ ನ್ಯಾಷನಲ್ ಪಾರ್ಕ್         3) ಅಸ್ಸಾಂ
ಡಿ) ಗಿರ್ ನ್ಯಾಷನಲ್ ಪಾರ್ಕ್                   4) ಬಿಹಾರ
— ಉತ್ತರ:  ಎ-3, ಬಿ-1, ಸಿ-4, ಡಿ-2

40. ವಿವಿಧೋದ್ದೇಶ ನದಿಕಣಿವೆ ಯೋಜನೆಯ ಉದ್ದೇಶ
— ಮೇಲ್ಕಂಡ ಎಲ್ಲವೂ


41. ಸುನೀತಾ ವಿಲಿಯಮ್ಸ್ ರವರು ಯಾವ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದಾರೆ?
— ನಾಸಾ

42.UNESCO ವನ್ನು ಬಿಡಿಸಿ ಬರೆಯಿರಿ.
— ಯುನೈಟೆಡ್ ನೇಷನ್ಸ್ ಎಜುಕೇಷನಲ್ ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಜೇಷನ್

43.ವಿಮಾನಗಳಲ್ಲಿ ಕಂಡುಬರುವ ‘ಬ್ಲಾಕ್ ಬಾಕ್ಸ್‘ ನ ನಿಜವಾದ ಬಣ್ಣ ಯಾವುದು?
— ಕಿತ್ತಳೆ ಬಣ್ಣ

44. ಚೀನಾ ದೇಶದ ಅಧಿಕೃತ ಭಾಷೆ ಯಾವುದು?
— ಮಂಡಾರಿನ್

45. ರಾಫೆಲ್ ನಡಾಲ್ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
— ಟೆನಿಸ್

46.        9           18         27
              8           16         ?
— 24

47. 10 ಜನರು 20 ಮನೆಗಳನ್ನು 30 ದಿನಗಳಲ್ಲಿ ಪೂರೈಸಿದರೆ, 5 ಜನರು 10 ಮನೆಗಳನ್ನು ನಿರ್ಮಿಸಲು ಎಷ್ಟುದಿನ ಬೇಕಾಗುವುದು?
— 30 ದಿನಗಳು

48. X ಎಂಬಾತನು ಗಣಿತದಲ್ಲಿ ಪಡೆದ ಅಂಕಗಳ ಮೂರನೇ ಒಂದು ಭಾಗದಷ್ಟು ಅಂಕಗಳನ್ನು ಹಿಂದಿ ಭಾಷೆಯಲ್ಲಿ ಪಡೆದಿರುತ್ತಾನೆ. ಅವನು ಈ ಎರಡೂ ವಿಷಯಗಳನ್ನು ಸೇರಿಸಿ ಗಳಿಸಿದ ಒಟ್ಟು ಅಂಕಗಳು 120 ಆಗಿದ್ದಲ್ಲಿ ಆತನು ಹಿಂದಿ ಭಾಷೆಯಲ್ಲಿ ಪಡೆದ ಅಂಕಗಳೆಷ್ಟು?
— 30

49. ಬಿಟ್ಟ ಸ್ಥಳ ಭರ್ತಿ ಮಾಡಿ. 3x3=18, 4x4=32, 5x5=50 ಆದರೆ 6x6=?
— 72

50. ಸಾಂಕೇತಿಕ ಭಾಷೆಯಲ್ಲಿ A ಯು C, C ಯು E ಮತ್ತು D ಯು F ಆದರೆ X ಯು
— Z

51. ವಾತಾವರಣದ ತಾಪದ ಬದಲಾವಣೆಗೆ ಅನುಗುಣವಾಗಿ ತಮ್ಮ ದೇಹದ ತಾಪವನ್ನು ಬದಲಾಯಿಸಿಕೊಳ್ಳುವ ಶೀತರಕ್ತ ಪ್ರಾಣಿಗಳ ವರ್ಗವನ್ನು ಏನೆಂದು ಕರೆಯುತ್ತಾರೆ?
— ಪೈಸಿಸ್ (Pisces)

52. ಈ ಕೆಳಗಿನವುಗಳಲ್ಲಿ ಯಾವುದು ಹಾರಬಲ್ಲ ಸಸ್ತನಿಯಾಗಿರುತ್ತದೆ?
— ಬಾವಲಿ

53. ಬಿದಿರು ಅತ್ಯಂತ ಎತ್ತರದ
— ಹುಲ್ಲು

54. ಎಬೋಲಾ ಸೋಂಕು ಯಾವುದರಿಂದ ಉಂಟಾಗುತ್ತದೆ?
— ವೈರಾಣು

55. ಯಾವುದು ಬಣ್ಣವಿಲ್ಲದ, ವಾಸನೆ ಇಲ್ಲದ ವಿಷಕಾರಿ ಅನಿಲ?
— ಕಾರ್ಬನ್ ಮೊನಾಕ್ಸೈಡ್

56. ವಿಶ್ವ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
— ನ್ಯೂಯಾರ್ಕ್ (ಯು.ಎಸ್.ಎ.)

57. ಭಾರತದ ಉಪರಾಷ್ಟ್ರಪತಿಯವರು ____________ ರವರಿಂದ ಆರಿಸಲ್ಪಡುತ್ತಾರೆ.
— ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು

58. ಯಾರು ರಾಜ್ಯಸಭೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ?
— ಉಪ ರಾಷ್ಟ್ರಪತಿ

59. ಲೋಕಸಭೆಗೆ ಆಯ್ಕೆಯಾಗಲು ಇರುವ ಕನಿಷ್ಠ ವಯೋಮಾನ ________ ವರ್ಷಗಳು.
— 25

60. ಈ ಕೆಳಗಿನ ಯಾವ ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ?
— ನೌಕರಿಯ ಹಕ್ಕು

61. ಇಸ್ರೋ ಸಂಸ್ಥೆಯ ಪ್ರಸಕ್ತ  ಮುಖ್ಯಸ್ಥರು ಯಾರು?
— ಕೆ. ರಾಧಾಕೃಷ್ಣನ್

62. 2014 ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ವಿಭಾಗದ 50 ಮೀ. ಪಿಸ್ತೂಲು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪಡೆದವರು ಯಾರು?
— ಜೀತು ರಾಯ್

63. ‘ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?
— ಸಿ. ರಾಜಗೋಪಾಲಾಚಾರಿ

64. ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿ ಯಾರು?
— ಚಂದ್ರಶೇಖರ ಪಾಟೀಲ

65. ‘ಸಂಸ್ಕಾರ’ ಪುಸ್ತಕವನ್ನು ಬರೆದ ಲೇಖಕರು ಯಾರು?
— ಯು.ಆರ್.ಅನಂತಮೂರ್ತಿ

66. ಗಡಿ ಭದ್ರತಾ ಪಡೆ (BSF) ಇದೊಂದು,
— ಯಾವುದೂ ಅಲ್ಲ

67. ಗ್ರಾಮೀಣ ಪ್ರದೇಶಗಳಲ್ಲಿ _________ ಒಂದು ಸ್ವಚ್ಛ, ಮಾಲಿನ್ಯ ರಹಿತ ಮತ್ತು ಅಗ್ಗವಾದ ಶಕ್ತಿಯ ಆಕರವಾಗಿದೆ.
— ಬಯೋಗ್ಯಾಸ್

68. ಶಬ್ದವನ್ನು ಅಳೆಯುವ ಮಾನಕ್ಕೆ ಏನೆಮದು ಕರೆಯುತ್ತಾರೆ?
— ಡೆಸಿಬಲ್

69. ಈ ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆಯ ಅನಿಲ ಆಗಿರುವುದಿಲ್ಲ.
— ಆಮ್ಲಜನಕ

70. ಅತಿಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು?
— ಆಮೆ

71. ಭಾರತದ ಸರ್ವೋಚ್ಚ ನ್ಯಾಯಾಲಯದ ಇಂದಿನ ಮುಖ್ಯ ನ್ಯಾಯಮೂರ್ತಿಗಳು ಯಾರು?
— ಹೆಚ್.ಎಲ್.ದತ್ತು

72. ಭಾರತ ಸರ್ಕಾರದ ಇಂದಿನ ಹಣಕಾಸು ಸಚಿವರು ಯಾರು?
— ಅರುಣ್ ಜೇಟ್ಲಿ

73. ಈ ಕೆಳಗೆ ಹೆಸರಿಸಿರುವ ಯಾವ ಕ್ರೀಡಾಪಟುವಿಗೆ 2014ನೇ ಸಾಲಿನಲ್ಲಿ ‘ಅರ್ಜುನ ಪ್ರಶಸ್ತಿ’ ಬಂದಿರುತ್ತದೆ?
— ಗಿರೀಶ್ ಹೆಚ್.ಎನ್.

74. ‘ಲುಫ್ತಾನ್ಸಾ ಏರ್ ಲೈನ್ಸ್’ ಯಾವ ದೇಶದ ವಿಮಾನಯಾನ ಸಂಸ್ಥೆ?
— ಜರ್ಮನಿ

75. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದವರು ಯಾರು?
— ಚಾವುಂಡರಾಯ

76. ಹೊಂದಿಸಿ ಬರೆಯಿರಿ:
ಎ) ಅಲ್ಯುಮಿನಿಯಂ                 1) ಬಳ್ಳಾರಿ
ಬಿ) ಕಬ್ಬಿಣ                          2) ಹಾಸನ
ಸಿ) ಚಿನ್ನ                            3) ಬೆಳಗಾವಿ
ಡಿ) ಕ್ರೋಮಿಯಂ                   4) ರಾಯಚೂರು
— ಡಿ) ಎ-3, ಬಿ-1, ಸಿ-4, ಡಿ-2

77. ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಯಾವ ಸಮಸ್ಯೆ ಉಂಟಾಗುತ್ತದೆ.
— ಸರಳ ಗಾಯಿಟರ್

78. ಪಿಟ್ಯೂಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ ಇರುತ್ತದೆ?
— ತಲೆ

79. ಜೀವ ವಿಕಾಸದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ ವಿಜ್ಞಾನಿ ಯಾರು?
— ಚಾರ್ಲ್ಸ್ ಡಾರ್ವಿನ್

80. ಭಾರತೀಯ ರಿಸರ್ವ್ ಬ್ಯಾಂಕ್ ನ ಈಗಿನ ಮುಖ್ಯಸ್ಥರು ಯಾರು?
— ಡಾ. ರಘುರಾಮ್ ಜಿ. ರಾಜನ್

81. ಕರ್ನಾಟಕದ ಇಂದಿನ ರಾಜ್ಯಪಾಲರು ಯಾರು?
— ವಜುಭಾಯ್ ವಾಲ

82. ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ಗಂಟೆಗೆ ಸರಾಸರಿ 40 ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ್ದು, ‘ಎ’ ನಗರದಿಂದ ‘ಬಿ’ ನಗರಕ್ಕಿರುವ ದೂರ 60 ಕಿ.ಮೀ. ಆಗಿರುತ್ತದೆ. ಹಾಗಾದರೆ ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ತಲುಪಲು ತೆಗೆದುಕೊಂಡ ಸಮಯ
— 90 ನಿಮಿಷಗಳು

83. ಈ ಸರಣಿಯ ಮುಂದಿನ ಸರಣಿಯನ್ನು ಬರೆಯಿರಿ, ACE, BDF, CEG, _____
— DFH

84. ಪೈಥಾಗೊರಾಸ್ ಪ್ರಮೇಯದ ವ್ಯಾಖ್ಯಾನ,
— ಒಂದು ಲಂಬಕೋನ ತ್ರಿಭುಜದಲ್ಲಿ, ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.

85. ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ ಎಷ್ಟು?
— 30

86. ದ.ರಾ.ಬೇಂದ್ರೆಯವರ ಯಾವ ಕೃತಿಗೆ ‘ಜ್ಞಾನಪೀಠ ಪ್ರಶಸ್ತಿ’ ಲಭಿಸಿದೆ?
— ನಾಕುತಂತಿ

87. 2014 ನೇ ಸಾಲಿನ ಏಷ್ಯನ್ ಗೇಮ್ಸ್ ಎಲ್ಲಿ ನಡೆಯಿತು?
— ಇಂಚಿಯಾನ್ (ದಕ್ಷಿಣ ಕೊರಿಯಾ)

88. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರವರ ಕಾವ್ಯನಾಮ ಯಾವುದು?
— ಕುವೆಂಪು

89. ಈ ಕೆಳಗೆ ಹೆಸರಿಸಿರುವ ಯಾರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಲಭಿಸಿದೆ?
— ಡಾ. ರಾಜ್ ಕುಮಾರ್

90. ಈ ಕೆಳಕಂಡ ಯಾವ ದೇಶಗಳಲ್ಲಿ 2015 ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ನಡೆಯಲಿದೆ?
— ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್

91. ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?
— ಎಸ್. ನಿಜಲಿಂಗಪ್ಪ

92. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏನೆಂದು ಮರುನಾಂಕರಣ ಮಾಡಲಾಗಿದೆ?
— ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

93. ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
— ಜಿನೆವಾ (ಸ್ವಿಡ್ಜರ್ ಲ್ಯಾಂಡ್)

94. ರಕ್ತದ ಒತ್ತಡವನ್ನ ಅಳೆಯುವ ಉಪಕರಣ ಯಾವುದು?
— ಸಿಗ್ಮೋಮಾನೋಮೀಟರ್

95. 1843 ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಪತ್ರಿಕೆ ಯಾವುದು?
— ಮಂಗಳೂರು ಸಮಾಚಾರ

96. ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?
— ಇಮ್ಮಡಿ ಪುಲಕೇಶಿ

97. ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?
— ವಿಶ್ವನಾಥನ್ ಆನಂದ್

98. ಟಿಪ್ಪು ಸುಲ್ತಾನನು ಬ್ರಿಟಿಷರೊಂದಿಗೆ ಯುದ್ಧದಲ್ಲಿ ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
— 1799

99. ‘ಮೈಸೂರು ಸಂಸ್ಥಾನ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲ್ಪಟ್ಟ ವರ್ಷ ಯಾವುದು?
— 1973

100. ‘ಗೋಲ್ಡನ್ ಚಾರಿಯೇಟ್’ ಎಂದು ______________ ನ್ನು ಹೆಸರಿಸಲಾಗಿದೆ.
— ರೈಲು

( ಕೃಪೆ:  ಸಾಧನಾ ಕೋಚಿಂಗ್ ಸೆಂಟರ್,  ಶಿಕಾರಿಪುರ)

Tuesday 4 November 2014

★ ಪ್ರಸ್ತುತ ಭಾರತದ ಹಳ್ಳಿಗಳ ಸ್ಥಿತಿಗತಿ - ಆವುಗಳ ಸರ್ವಾಂಗೀಣ ಅಭಿವೃದ್ದಿಗೆ ಇರುವ ಸವಾಲುಗಳು, ಪರಿಹಾರಗಳು.


★ ಪ್ರಸ್ತುತ ಭಾರತದ ಹಳ್ಳಿಗಳ ಸ್ಥಿತಿಗತಿ - ಆವುಗಳ ಸರ್ವಾಂಗೀಣ ಅಭಿವೃದ್ದಿಗೆ ಇರುವ ಸವಾಲುಗಳು,  ಪರಿಹಾರಗಳು.

ಭಾರತ ಹಳ್ಳಿಗಳ ದೇಶ, ಇದಕ್ಕೆ ಇಂಬು ಕೊಡಲೆಂದೇ ಇಂದಿಗೂ ಸುಮಾರು 70 ಕೋಟಿಯಷ್ಟು ಜನರು 6 ಲಕ್ಷಕ್ಕಿಂತ ಹೆಚ್ಚಿನ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ದೇಶದ ಅಭಿವೃದ್ದಿ ಬಹುವಾಗಿ ಈ ಭಾಗದ ಜನರ ಏಳ್ಗೆಯ ಮೇಲೆ ನಿಂತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅಲ್ಲಿನ ಜನರ ಬದುಕನ್ನು ಹೊಳಹೊಕ್ಕಿ ನೋಡಿದಾಗ ಕಂಡುಬರುವುದು ಹಸಿವು, ಬಾಯಾರಿಕೆ, ಕಿತ್ತು ತಿನ್ನುವ ಬಡತನ, ರೋಗ ಬಾಧೆಗಳಿಂದ ಸೊರಗಿದ ದೇಹ, ಮುಂದುವರಿದ ವರ್ಗದವರ ಅಮಾನವೀಯ ಶೋಷಣೆ, ಮತೀಯ ಗಲಭೆಗಳು, ಅವುಗಳಿಂದಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಾಜಘಾತಕ ಶಕ್ತಿಗಳು, ಭ್ರಷ್ಟ ಅಧಿಕಾರಿಗಳು ಜೊತೆಗೆ ಅವರ ನೆರಳಾಗಿ ನಿಂತಿರುವ ಹೊಲಸು ರಾಜಕೀಯ.

 21 ನೇ ಶತಮಾನದಲ್ಲೂ ಅನಕ್ಷರತೆ, ಅಸ್ಪೃಶ್ಯತೆ, ಅಂಧಕಾರ, ಹಾಗು ಗೊತ್ತು ಗುರಿಯಿಲ್ಲದ ಮೂಢನಂಬಿಕೆಗಳೇ ಮನೆಮಾಡಿವೆ. ಹೀಗಿರುವಾಗ ದೇಶದ ಅಭಿವೃದ್ದಿಯ ಕನಸು ಕಾಣುವುದಾದರೂ ಹೇಗೆ. ಕಳೆದೆರಡು ದಶಕಗಳ ಆರ್ಥಿಕ ಸುದಾರಣೆಯಿಂದ ದೇಶದ ಜನರ ಜೀವನ ಮಟ್ಟ ಗಮನಾರ್ಹ ರೀತಿಯಲ್ಲಿ ಸುದಾರಿಸುತ್ತಿದ್ದರೂ, ಗ್ರಾಮೀಣ ಜನರ ಬದುಕನ್ನು ನಗರವಾಸಿಗಳಿಗೆ ಹೋಲಿಸಿದಾಗ ಚಿಂತಾಜನಕವಾದ ಸ್ಥಿತಿ ಕಂಡು ಬರುವುದು ಸಾಮಾನ್ಯವಾಗಿದೆ.

ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ಅಲ್ಲಿನ ಬದುಕನ್ನು ಹಸನುಗೊಳಿಸಲು ಸಾಧ್ಯವಾಗದಿರುವುದು ನಮ್ಮನ್ನಾಳಿದ ಜನಪ್ರತಿನಿಧಿಗಳ ಯೋಜನೆಗಳು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ಅಧಿಕಾರಿಗಳ ಕರ್ತವ್ಯ ನಿಷ್ಠೆಯನ್ನು ಪ್ರತಿನಿಧಿಸುತ್ತದೆ. ಈ ನಾಗಾಲೋಟದಿಂದ ಓಡುತ್ತಿರುವ ಆಧುನಿಕ ಯುಗದಲ್ಲೂ ಹಳ್ಳಿಗಳ ಶೇ. ೫೦ ರಷ್ಟು ಮಂದಿ ಕೇವಲ ೨೦-೩೦ ರೂಪಾಯಿಗಳಲ್ಲಿ ತಮ್ಮ ದಿನವನ್ನು ದೂಡುತ್ತಿದ್ದಾರೆ ಎಂದರೆ ಅವರ ಜೀವನ ಮಟ್ಟವನ್ನು ಊಹಿಸಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ಇದು ಸತ್ಯದ ಸಂಗತಿಯೆಂದು ತಿಳಿದಾಗ ಸಮಾಜದ ನಾಗರೀಕರಿಗೆ ನೋವಾಗುವುದು ಸಹಜ ವಿಚಾರ.

 ದಿನನಿತ್ಯದ ಬವಣೆಯನ್ನು ಎದುರಿಸುವ ಮಾರ್ಗೊಪಾಯಗಳಿಲ್ಲದೆ ಹುಟ್ಟಿ ಬೆಳೆದ ಪರಿಸರವನ್ನು ಬಿಟ್ಟು ಬದುಕುವ ದಾರಿಯನ್ನು ಹುಡುಕಿಕೊಂಡು ನಗರಗಳಿಗೆ ಹಾಗು ಇತರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇವುಗಳನ್ನು ಹತ್ತಿಕ್ಕಲು ಗ್ರಾಮೀಣ ಪ್ರದೇಶಗಳ ಅಗತ್ಯಕ್ಕೆ ಅನುಗುಣವಾಗಿ ಮಾನಸಿಕ, ಭೌತಿಕ, ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಅವುಗಳನ್ನು ಸಮರ್ಪಕವಾಗಿ ಉಪಯೋಗಿಸುವ ಜವಾಬ್ದಾರಿಯನ್ನು ಬೆಳೆಸಬೇಕಾಗಿದೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಿ ಗ್ರಾಮೀಣ ಜನರಲ್ಲಿ ಬದುಕುವ ಧೈರ್ಯ ಹಾಗು ಉತ್ಸಾಹ ತುಂಬಿ ಸ್ವಾಭಿಮಾನಿ ಹಾಗು ಸ್ವಾವಲಂಭಿಗಳಾಗಿ ಬದುಕಲು ಆಸರೆಯಾಗಬೇಕಾಗಿದೆ. ಹೀಗಿರುವಾಗ ಇಂದಿನ ಆಡಳಿತರೂಡ ಸರ್ಕಾರಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳು, ತಂತ್ರಜ್ಞರು, ವಿಜ್ಞಾನಿಗಳು, ಚಿಂತನಶೀಲರು ಹಳ್ಳಿಗಳ ಬೆಳವಣಿಗೆಗೆ ಗಮನ ಹರಿಸಬೇಕಾಗಿರುವುದು ಒಂದು ಮುಖ್ಯ ವಿಚಾರವೇ ಸರಿ.

ಹಸಿರು ಕ್ರಾಂತಿಯು ಹಳ್ಳಿಗಳ ಅಭಿವೃದ್ಧಿಗೆ ಭಾರತದ ಬಹು ದೊಡ್ಡ ಕೊಡುಗೆ. ಇದು ದೇಶ ಆಹಾರ ತಯಾರಿಕೆಯಲ್ಲಿ ಸ್ವಾವಲಂಭಿಯಾಗಿ ನಿಲ್ಲಲು ಮತ್ತು ಗ್ರಾಮೀಣ ಜನರ ಜೀವನ ಮಟ್ಟ ಸುದಾರಿಸಲು ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ, ಹಾಗು ಈ ನಿಟ್ಟಿನಲ್ಲಿ ಇತರ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಕಣ್ಣು ತೆರೆಸುವಲ್ಲಿಯೂ ಯಶಸ್ಸನ್ನು ಕಂಡಿದೆ. ಹಾಗಿದ್ದರೂ ದೇಶದಲ್ಲಿ ೬೦ ದಶಲಕ್ಷ ಜನರು ಅತಿ ಮುಖ್ಯ ಜೀವನಾವಶ್ಯಕ ವಸ್ತುಗಳಾದ, ಮನೆ, ಪೌಷ್ಟಿಕಾಂಶ ಆಹಾರ, ಶುಚಿಯಾದ ಕುಡಿಯುವ ನೀರು, ನೈರ್ಮಲೀಕರಣ, ಆರೋಗ್ಯ, ಶಿಕ್ಷಣ, ಮತ್ತು ಉದ್ಯೋಗದಿಂದ ವಂಚಿತರಾಗಿದ್ದಾರೆ. ಹಳ್ಳಿಗಳಲ್ಲಿ ಬಡತನದಿಂದ ಜನರು ತತ್ತರಿಸಿದ್ದಾರೆ. ಗ್ರಾಮೀಣ ಜನರು, ಅದರಲ್ಲಿಯೂ ರೈತರು ಬದುಕಲು ಸಮಾನ ಅವಕಾಶಗಳಿಲ್ಲದೆ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ತಿತಿ ಏರ್ಪಟ್ಟಿದೆ. ದೇಶದ ಅನ್ನದಾತನ ಹೊಟ್ಟೆಯೇ ಬೆನ್ನಿಗೊಕ್ಕರೆ ಆಹಾರ ಸಮಸ್ಯೆಯನ್ನು ಬಗೆಹರಿಸುವುದಾದರು ಹೇಗೆ? ಬರುವ ದುಡಿಮೆಯ ಹಣ ದಿನ ನಿತ್ಯದ ಅಗತ್ಯತೆಗಳನ್ನು ಪೂರೈಸಲು ಸಾಕಾಗದೆ ಅವರ ಜೀವನ ಹೈರಾಣಾಗಿದೆ ಮತ್ತು ಅನೇಕ ಭಯಾನಕ ರೋಗ ರುಜಿನಗಳಿಂದ ನಳಲುತ್ತಿದ್ದಾರೆ.

ಶೇಕಡ ೬೦ ರಷ್ಟಿರುವ ಯುವಕರೇ ಭಾರತದ ಅತಿ ದೊಡ್ಡ ಸಂಪನ್ಮೂಲ.ಯುವಕರಿಂದ ಹೇರಳವಾಗಿ ದೊರೆಯುವ ನೈಸರ್ಗಿಕ ಹಾಗು ಇತರ ಸಂಪತ್ತನ್ನು ಬಳಸಿಕೊಂಡು ಶೈಕ್ಷಣಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಗ್ರಾಮೀಣ ಭಾರತದ ಶಾಶ್ವತ ಅಭ್ಯುದಯಕ್ಕೆ ಸಹಕಾರಿಯಾಗಬೇಕಿದೆ. ಇಂತಹ ಯೋಜನೆಗಳನ್ನು ಸರ್ಕಾರ ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕಾಗಿದೆ. ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎನ್ನುವುದು ಬರೀ ಮರೀಚಿಕೆಯಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿರುವ ಹಾಗೆ ಹಳ್ಳಿ ಮತ್ತು ನಗರಗಳ ಮೂಲ ವ್ಯವಸ್ಥೆಗಳಲ್ಲಿನ ತಾರತಮ್ಯ ಹೋಗಲಾಡಿಸಿ, ಅಶಕ್ತರಿಗೆ (ಜಾತಿ ಧರ್ಮಗಳನ್ನು ಪರಿಗಣಿಸದೆ) ಜೀವನಾಗತ್ಯ ವಸ್ತುಗಳನ್ನು ದೊರಕಿಸಿಕೊಡಬೇಕು. ಅಧಿಕಾರಿಗಳ ಹಾಗು ಮೇಲ್ವರ್ಗದವರ ದುರಾಚಾರ, ದಬ್ಬಾಳಿಕೆ ಕೊನೆಗಾಣಬೇಕು. ಸರ್ಕಾರದಿಂದ ದೊರಕಬೇಕಾದ ಸಣ್ಣ ಪುಟ್ಟ ಕೆಲಸಗಳಿಗೂ ಲಂಚ ಕೊಟ್ಟು ಕೈಚಾಚಿ ನಿಲ್ಲುವುದು ದೂರವಾಗಬೇಕು.

ರೈತರು ದೇಶದ ಬೆನ್ನೆಲುಬು ಎನ್ನುವ ಸರ್ಕಾರಗಳೇ ಇತ್ತೀಚಿನ ದಿನಗಳಲ್ಲಿ ಅವನ ಬೆನ್ನೆಲುಬು ಮುರಿಯುತ್ತಿರುವುದನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿವೆ. ತನ್ನ ಬೆನ್ನೆಲುಬನ್ನು ಮುರಿದುಕೊಂದವನಿಗೆ ಇನ್ನಾರದೋ ಬೆನ್ನೆಲುಬಾಗಿ ನಿಲ್ಲುವ ಶಕ್ತಿಯು ಬರುವುದಾದರೂ ಹೇಗೆ? ಸರ್ಕಾರಿ ನೌಕರರಿಗಿರುವಂತೆ ಅವನಿಗೂ ವೇತನ ಆಯೋಗವೇಕಿರಬಾರದು? ಪ್ರಜಾಪ್ರಭುತ್ವ ದೇಶದಲ್ಲಿ ಇರಬೇಕಾದ ಸ್ಥಿತಿಗತಿಗಳು ನಿಜವಾಗಿಯೂ ನಮ್ಮ ಹಳ್ಳಿಗಳಲ್ಲಿ ಇದೆಯೇ?

★ ಆರೋಗ್ಯ:
ಗ್ರಾಮೀಣ ಜನರ ಆರೋಗ್ಯ ಸ್ಥಿತಿ ಚಿಂತಾಜನಕ. ಇದಕ್ಕೆ ಕಾರಗಳು ಅನೆಕ, ಬಡತನ, ಮನೆಯ ಸುತ್ತಲಿರುವ ಅವರೇ ನಿರ್ಮಿಸಿಕೊಂಡ ಪರಿಸರ, ಅವರಲ್ಲಿರುವ ಮೂಡನಂಭಿಕೆ, ಅನಕ್ಷರತೆ, ಆರೋಗ್ಯದ ಬಗ್ಗೆ ಕೊಡುವ ನಿರ್ಲಕ್ಷ್ಯ, ಹಾಗು ಸೂಕ್ತ ಕಾಲದಲ್ಲಿ ಸಿಗದಿರುವ ಆರೋಗ್ಯ ಸೇವೆ ಮುಖ್ಯವಾದವು. ದೇಶದಲ್ಲಿ ಭೀಕರ ಕಾಯಿಲೆಗಳಿಂದ ಮೃತಪಟ್ಟವರಲ್ಲಿ ಸುಮಾರು ೮೦ ರಷ್ಟು ಜನರು ಗ್ರಾಮೀಣ ಭಾಗದ ಅತೀ ಕಡು ಬಡವರಾಗಿದ್ದಾರೆ. ಕೆಮ್ಮು, ದಢಾರ, ಕ್ಷಯ, ಕಾಲರ, ಮಲೇರಿಯಾ, ನ್ಯುಮೋನಿಯಾ ಮುಂತಾದ ರೋಗಗಳನ್ನು ಅಗತ್ಯ ಶುಚಿತ್ವ ಕಾಪಾಡುವುದರಿಂದಲೂ ಮತ್ತು ರೋಗ ಉಲ್ಬಣ ಗೊಳ್ಳಲು ಅವಕಾಶ ಕೊಡದೆ ಅಗತ್ಯ ಔಷಧಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದರಿಂದಲೂ ತಡೆಗಟ್ಟಬಹುದು. ವೈದ್ಯರು, ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಅನೇಕ ಆರೋಗ್ಯ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ತಲುಪಲು ವಿಪಲವಾಗಿದೆ.

• ನಿಯಮಿತ ಪೌಷ್ಟಿಕ ಆಹಾರ ಹಾಗು ವ್ಯಾಯಾಮಗಳ ಅಗತ್ಯತೆ ಬಗ್ಗೆ ಗಮನ
• ಎಲ್ಲ ಹಳ್ಳಿಗಳಿಗೂ ಆರೋಗ್ಯ ಕೇಂದ್ರ ಮತ್ತು ಅಗತ್ಯ ಸೇವೆಗಳ ಲಬ್ಯತೆ
• ಹೋಬಳಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆಗಳಿರಬೇಕು
• ಮಹಿಳೆಯರು ಹಾಗು ಮಕ್ಕಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅಗತ್ಯ ಸೇವೆ
• ಆರೋಗ್ಯ ವಿಮೆಯನ್ನು ವಿನಾಯಿತಿ ದರದಲ್ಲಿ ದೊರಕಿಸಿಕೊಡಬೇಕು
• ಏಡ್ಸ್ ನಂತಹ ಭಯಾನಕ ರೋಗಗಳ ಬಗ್ಗೆ ಮಾಹಿತಿ
• ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು
• ಅಶುಚಿತ್ವದಿಂದ ತಗಲುವ ಸೋಂಕು ರೋಗಗಳ ಬಗ್ಗೆ ಎಚ್ಚರಿಕೆ
• ಧೂಮಪಾನ, ಮದ್ಯಪಾನಗಳಂತಹ ಕೆಟ್ಟ ಚಟಗಳು ಮತ್ತು ಅವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅಗತ್ಯ ಮಾಹಿತಿ

★ ವಸತಿ :
ಹಳ್ಳಿಗಳಲ್ಲಿ ಶೇಕಡ ೨೦ ರಷ್ಟು ಜನರು ಈಗಲೂ ಗುಡಿಸಲು ಹಾಗು ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನಷ್ಟು ಮಂದಿಗೆ ಮನೆಗಳಿದ್ದರೆ ಅವು ನೆಪಮಾತ್ರಕ್ಕೆ, ಮಳೆಗಾಲದಲ್ಲಿ ಅವುಗಳ ಸ್ಥಿತಿ ದೇವರಿಗೆ ತೃಪ್ತಿಯಾಗಬೇಕು. ಮಳೆಗಾಲ ಕಳೆದು ಬದುಕುಳಿದರೆ ಸಾಕು ಎನ್ನುವ ಜೀವ ಭಯದಲ್ಲಿ ದಿನಗಳನ್ನು ಕಳೆಯಬೇಕಾಗಿದೆ. ಸರ್ಕಾರಗಳು ಪ್ರತಿ ವರ್ಷ ಗೃಹ ಯೋಜನೆಯಡಿಯಲ್ಲಿ ಅನೇಕ ಮನೆಗಳನ್ನು ನಿರ್ಮಿಸಿಕೊಡುತ್ತಿವೆಯಾದರೂ , ಕಳಪೆ ಮಟ್ಟದ ಕಾಮಗಾರಿಗಳಿಂದ ಉದ್ಗಾಟನೆಗೆ ಮುಂಚೆಯೇ ಅವುಗಳಲ್ಲಿ ಅರ್ಧ ಮನೆಗಳು ಅಂತ್ಯ ಕಾಣುತ್ತವೆ ಇನ್ನುಳಿದ ಮನೆಗಳಲ್ಲಿ ವಾಸಿಸುವವರು ತಮ್ಮ ಜೀವವನ್ನು ಕೈಯಲ್ಲಿಡಿದು ಯಾವಾಗಲೂ ಜೀವ ಭಯದಲ್ಲಿ ದಿನ ಕಳೆಯಬೇಕಾದ ಭಾಗ್ಯ ಪಡೆಯುತ್ತಾರೆ.
• ಪ್ರತಿಯೊಂದು ಕುಟುಂಬಕ್ಕೂ ಮನೆಗಳನ್ನು ನಿರ್ಮಿಸಿಕೊಡಬೇಕು
• ಅವುಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ಲೋಪವಿರಬಾರದು
• ಅವುಗಳಿಗೆ ಶೌಚಾಲಯ ಸ್ನಾನಗೃಹ, ಗಾಳಿ ಮತ್ತು ಬೆಳಕಿನ ವ್ಯವಸ್ಥೆಯಿರಬೇಕು

★ ಪರಿಶುದ್ಧ ನೀರು :
ಭಾರತದ ಬಹುತೇಕ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಇದೆ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುವುದೇ ದುರ್ಲಭವಾಗಿದೆ. ಉತ್ತರದಲ್ಲಿ ಸಮಸ್ಯೆ ಅಷ್ಟಿಲ್ಲದಿದ್ದರೂ, ದೊರೆಯುವ ನೀರು ಕಲುಷಿತವಾಗಿರುತ್ತದೆ. ಇನ್ನು ದಕ್ಷಿಣ ರಾಜ್ಯಗಳಲ್ಲಿ ಎಷ್ಟೋ ಗ್ರಾಮಗಳಲ್ಲಿ ೨-೩ ದಿನಗಳಿಗೊಮ್ಮೆ ಕುಡಿಯುವ ನೀರು ಬರುವುದು ಸಾಮಾನ್ಯ. ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆಯೂ ಕುಡಿಯುವ ನೀರು ಲಭ್ಯವಿರುವುದಿಲ್ಲ. ಹಾಗೊಮ್ಮೆ ನೀರು ಬಂದರೂ ಕುಡಿಯಲು ಯೋಗ್ಯವಿರುವುದಿಲ್ಲ.

 ದಿನಂಪ್ರತಿ ಎಲ್ಲಾದರೂ ಒಂದು ಕಡೆ ಕಲುಷಿತ ನೀರು ಸೇವಿಸಿ ಶಾಲಾಮಕ್ಕಳು, ಗ್ರಾಮೀಣ ಪ್ರದೇಶದವರು ಅಥವಾ ಸಾಮನ್ಯ ನಾಗರಿಕರು ಅಸ್ವಸ್ಥ ಎನ್ನುವ ಸುದ್ದಿಯನ್ನು ದಿನಪತ್ರಿಕೆಗೆಳಲ್ಲಿ ನೋಡುತ್ತಿದ್ದೇವೆ. ಕುಡಿಯುವ ನೀರನ್ನೇ ಪೂರೈಸಲಾಗದಿದ್ದರೆ ಇತರ ಕೆಲಸಗಳಿಗೆ ನೀರನ್ನು ಒದಗಿಸುವುದಾದರು ಹೇಗೆ ಎನ್ನುವ ಸಮಸ್ಯೆ ಇದೆ. ನೀರಿನ ಸಮಸ್ಯೆ ತಲೆದೋರಿದರೆ ಶುಚಿತ್ವ ಕಾಪಾಡುವುದು ಕಷ್ಟದ ಕೆಲಸ. ಶುಚಿತ್ವ ಇಲ್ಲದಿದ್ದರೆ ಅನೇಕ ಭೀಕರ ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುತ್ತಾರೆ. ಇದು ಒಂದು ಕಡೆ ತಲೆದೋರಿದರೆ ಬಹು ಬೇಗ ದೇಶವ್ಯಾಪಿಯಗುತ್ತದೆ.

ಮಹತ್ತರ ಯೋಜನೆಗಳನ್ನು ರೂಪಿಸಿ ಉತ್ತರದ ಗಂಗಾ ಯಮುನಾ ನದಿಗಳನ್ನು ದಕ್ಷಿಣದ ನದಿಗಳೊಂದಿಗೆ ಜೋಡಿಸಿದರೆ ಅನೇಕ ರಾಜ್ಯಗಳ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಜನರ ಅಗತ್ಯಕ್ಕೆ ತಕ್ಕಂತೆ ಪ್ರತಿ ಹಳ್ಳಿಗಳಿಗೂ ಶುದ್ಧ ನೀರು ದೊರಕಿಸಿಕೊಡುವ ಪ್ರಮುಖ ಕೆಲಸ ಶೀಘ್ರವಾಗಿ ಆಗಬೇಕಾಗಿದೆ.

★ ನೈರ್ಮಲೀಕರಣ:
ಭಾರತದ ಹಳ್ಳಿಗಳ ನೈರ್ಮಲೀಕರಣದ ಬಗೆಗೆ ಹೇಳಲು ಹೊರಟರೆ ಮನಸ್ಸಿಗೆ ಬೇಸರವಾಗುವುದು ಸಹಜ. ಅಲ್ಲಿನ ಜನರು ಬದುಕುತ್ತಿರುವ ವಾತಾವರಣದಲ್ಲಿ ಬಹುಷಃ ಪ್ರಾಣಿಗಳು ಇರಲು ಹೇಸಿಗೆಪಡಬಹುದೇನೂ . ಗ್ರಾಮೀಣ ಪ್ರದೇಶಗಳು ತಿಪ್ಪೆಗಳಾಗಿವೆ. ಎಲ್ಲೆಂದರಲ್ಲಿ ಕಸ ಕಡ್ಡಿಗಳು, ಮನೆಯ ಸುತ್ತಮುತ್ತ ಕೊಳೆತು ನಾರುವ ವಸ್ತುಗಳು, ಎಷ್ಟೋ ಹಳ್ಳಿಗಳಲ್ಲಿ ಕನಿಷ್ಠ ಚರಂಡಿಗಳ ವ್ಯವಸ್ಥೆಯೇ ಇಲ್ಲದಿರುವುದು ಕಂಡುಬರುವ ವಿಚಾರ. ಸ್ನಾನಗೃಹವಾಗಲಿ, ಶೌಚಾಲಯಗಳಾಗಲಿ ಹಳ್ಳಿಗಳಲ್ಲಿ ಇರುವುದು ದುರ್ಲಬವೆ ಸರಿ. ಹೀಗಿರುವಾಗ ಅವರ ಆರೋಗ್ಯದ ಪರಿಸ್ತಿತಿಯಾದರು ಏನು, ಅಲ್ಲಿ ಹುಟ್ಟುವ ಮಕ್ಕಳು ಭೂಮಿಗೆ ಬರುವಾಗಲೇ ಅದೆಷ್ಟು ರೋಗಗಳನ್ನು ಹೊತ್ತು ತರುವುದಿಲ್ಲ. ಮುಂದೆ ಅವರ ಬದುಕು ಹಸನಗೊಳ್ಳುವುದಾದರು ಹೇಗೆ. ಇದನ್ನೆಲ್ಲಾ ನೋಡಿದರೆ ದೇಶದ ಬೆಳವಣಿಗೆ ಯಾವ ದಿಕ್ಕಿನಲ್ಲಿದೆ ಎಂಬ ಅರಿವಾಗುತ್ತದೆ.

• ನಗರದ ಮೂಲ ಸೌಲಭ್ಯಗಳು ಹಳ್ಳಿಗಳಿಗೂ ದೊರೆಯಬೇಕು
• ಎಲ್ಲ ಮನೆಗಳಿಗೂ ಶೌಚಾಲಯ ಮತ್ತು ಸ್ನಾನಗೃಹಗಳಿಗೆ ಅವಕಾಶ
• ಸಾರ್ವಜನಿಕ ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು
• ಜನರಲ್ಲಿ ಶುಚಿತ್ವದ ಬಗೆಗೆ ಕಾಳಜಿ ರೂಪಿಸಬೇಕು

★ ಶಿಕ್ಷಣ :
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಅಲ್ಲಿ ವಿದ್ಯಾಭ್ಯಾಸ ಎನ್ನುವುದು ಕೇವಲ ಉದ್ಯೋಗಕ್ಕಾಗಿ ಎನ್ನುವ ನಂಬಿಕೆಯಿದೆ. ನಮ್ಮ ಮಕ್ಕಳು ಕಲಿತು ಯಾವ ಅಧಿಕಾರಿ ಹಾಗಬೇಕು ಅಥವಾ ರಾಜ್ಯಭಾರ ಮಾಡಬೇಕು ಎನ್ನುವ ಅನಿಸಿಕೆಯನ್ನು ವ್ಯಕ್ತಪಡಿಸುವ ಪೋಷಕರು ಹಾಗು ತಂದೆ ತಾಯಿಗಳೇ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಇದಕ್ಕೆ ಬಹುಮಟ್ಟಿನ ಕಾರಣ ಅವರ ಶೈಕ್ಷಣಿಕ, ಸಾಮಾಜಿಕ, ಹಾಗು ಕೌಟುಂಬಿಕ ಹಿನ್ನೆಲೆ, ಇದರ ಜೊತೆಗೆ ಇಲ್ಲಿಯವರೆಗೂ ಅಧಿಕಾರ ನಡೆಸಿದವರು ಮತ್ತು ಅವರ ಚಿಂತನೆಗಳೂ ಸಹ.

ಗ್ರಾಮೀಣ ಜನರಿಗೆ ದಿನನಿತ್ಯದ ಬದುಕಿಗೆ ಸಹಕಾರಿಯಾಗುವ, ಪ್ರಪಂಚದ ಹಾಗು ಹೋಗುಗಳನ್ನು ಅರಿಯುವ, ಹಾಗು ಶಾಂತಿ ಮತ್ತು ಸಹಬಾಳ್ವೆಯನ್ನು ಪ್ರತಿನಿಧಿಸುವ ಶಿಕ್ಷಣ ಅಗತ್ಯವಾಗಿ ದೊರೆಯಬೇಕು. ವಿದ್ಯೆಯಿಂದ ತಮ್ಮ ಮೂಲಭೂತ ಹಕ್ಕುಗಳನ್ನು ಮತ್ತು ಜವಾಬ್ದಾರಿಗಳನ್ನು ಅರಿತು ಸರ್ಕಾರ ಹಾಗು ಇತರ ಸಂಘ ಸಂಸ್ಥೆಗಳಿಂದ ದೊರೆಯುವ ಅನುಕೂಲಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ತಮ್ಮ ಸ್ವಂತ ಹಾಗು ಸುತ್ತಮುತ್ತಲಿರುವವರ ಆರೋಗ್ಯದ ಬಗೆಗೆ ಕಾಳಜಿ ವಹಿಸಲು, ಪರಿಸರವನ್ನು ಶುಚಿಯಾಗಿಡಲು ದಾರಿಯಾಗುತ್ತದೆ.

ತಂದೆ ತಾಯಂದಿರು ಹಾಗು ಮನೆಯ ಹಿರಿಯರು ವಿದ್ಯಾವಂತರಾದರೆ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಅನುವಾಗುವುದಷ್ಟೇ ಅಲ್ಲದೆ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಇಡೀ ಪ್ರದೇಶದ ಅಬಿವೃದ್ದಿಗೆ ನಾಂದಿಯಾಗುತ್ತದೆ. ಮಕ್ಕಳಿಗೆ ಮನೆಯಲ್ಲಿ ತಾಯಿಯ ಜೋಗುಳದಿಂದ ಪ್ರಾರಂಭವಾಗುವ ಶಿಕ್ಷಣ, ಅಷ್ಟೇ ಪ್ರೀತಿ ವಾತ್ಸಲ್ಯದಿಂದ ಪ್ರೌಢಾವಸ್ಥೆಯವರೆಗೂ ದೊರಕಬೇಕು. ಶಿಕ್ಷಣದಿಂದ ಅವರಲ್ಲಿ ಚಿಂತನಾ ಶಕ್ತಿ ವೃದ್ದಿಸುವುದರ ಜೊತೆಗೆ, ಜೀವನದ ಗುರಿ ಮುಟ್ಟಲು, ಮತ್ತು ಅದರಿಂದ ಬಾಳನ್ನು ಬೆಳಕಾಗಿಸಿಕೊಳ್ಳಲು ಸಹಕಾರಿಯಾಗುವುದು. ಆದುದರಿಂದ ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಬಹು ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿಸಿ ಅವರನ್ನು ಶಿಕ್ಷಣದ ದಾರಿಗೆ ಕರೆತರುವ ಕೆಲಸವಾಗಬೇಕು.

• ಎಲ್ಲ ಹಳ್ಳಿಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವ ಶಾಲೆಗಳಿರಬೇಕು
• ಶಿಕ್ಷಕರಲ್ಲಿ ಪ್ರೀತಿ ವಾತ್ಸಲ್ಯದಿಂದ ಕೂಡಿದ ಕರ್ತವ್ಯ ನಿಷ್ಠೆಯಿರಬೇಕು
• ಶಿಕ್ಷಕರು ಮಕ್ಕಳ ಪ್ರತಿಭೆಗೆ, ಅಭಿರುಚಿಗೆ ಅನುಸಾರ ಪಾಠ ಪ್ರವಚನಗಳನ್ನು ಹೇಳಿಕೊಡಬೇಕು
• ಮಕ್ಕಳಿಗೆ ಸಾಂಸ್ಕೃತಿಕ ಮತ್ತು ಅಟೋಟಗಳ ಬಗ್ಗೆ ಲಕ್ಷ್ಯ ಬೆಳೆಸಬೇಕು
• ವಯಸ್ಕರಿಗೆ ಅಗತ್ಯವಾದ ಶಿಕ್ಷಣ ದೊರೆಯಬೇಕು
• ಹಳ್ಳಿಗಳಲ್ಲಿ ವೃತ್ತಿಶಿಕ್ಷಣ ಕಾಲೇಜುಗಳನ್ನು, ವಿಶ್ವವಿದ್ಯಾಲಯಗಳನ್ನು ತೆರೆಯಬೇಕು ಇದರಿಂದ ದ್ವಿಮುಖ ವಲಸೆಗೆ ಅನುಕೂಲವಾಗುತ್ತದೆ

★ ವ್ಯವಸಾಯ :
ಗ್ರಾಮೀಣ ಜನರ ಬದುಕು ಮುಖ್ಯವಾಗಿ ಕೃಷಿಯನ್ನವಲಂಬಿಸಿದೆ. ದಕ್ಷಿಣ ಭಾಗದಲ್ಲಿ ಹೆಚ್ಚಿನವರು ಮಳೆಯಾದಾರಿತ ಬೆಸಾಯವನ್ನವಲಂಬಿಸಿದ್ದರೆ, ಉತ್ತರದಲ್ಲಿ ನೀರಾವರಿಯುಕ್ತ ಕೃಷಿ ಮುಖ್ಯವಾಗಿದೆ. ಹವಾಮಾನ ಹಾಗು ದೊರೆಯುವ ಸೌಲಭ್ಯಗಳಿಗನುಗುಣವಾಗಿ ವಿವಿಧ ರೀತಿಯ ಆಹಾರ (ಭತ್ತ, ರಾಗಿ, ಜೋಳ, ಗೋದಿ, ಇತ್ಯಾದಿ) ಮತ್ತು ಹಣಕಾಸಿನ (ಕಾಫಿ, ಟೀ, ನೆಲಗಡಲೆ, ಸೂರ್ಯಕಾಂತಿ, ಕಬ್ಬು, ಮಸಾಲ ಪದಾರ್ಥಗಳು) ಬೆಳೆಗಳನ್ನು ಹಾಗು ಅನೇಕ ಹಣ್ಣುಗಳನ್ನು ಬೆಳೆಯುತ್ತಾರೆ.

ಪುರಾತನ ವ್ಯವಸಾಯ ಪದ್ಧತಿಗಳು ಮತ್ತು ಚೆಲ್ಲಾಟವಾಡುವ ಮಳೆಯನ್ನು ನಂಬಿದ ಕೃಷಿಕರು, ಕಾಲಕ್ಕೆ ಸರಿಯಾಗಿ ಬಿತ್ತನೆ ಅಥವಾ ನಾಟಿ ಮಾಡದೆ, ಅಥವಾ ನಂತರ ಕೈಕೊಡುವ ಮಳೆಯಿಂದ ಹಾಗು ಬಿತ್ತಿದ ಬೆಳೆ ಅನೇಕ ರೋಗಗಳಿಗೆ ತುತ್ತಾಗುವುದರಿಂದ, ಜೊತೆಗೆ ಕೊನೆಯಲ್ಲಿ ಕಾಡು ಪ್ರಾಣಿ ಪಕ್ಷಿಗಳಿಗೆ ಈಡಾಗುವುದರಿಂದ ಬೆಳೆ ನಾಶವಾಗಿ ಸಾಲ ಮಾಡಿ ಹಾಕಿದ ಬೀಜ ಗೊಬ್ಬರ ಮತ್ತು ಪಟ್ಟ ಶ್ರಮ ಎಲ್ಲವೂ ವ್ಯರ್ಥವಾಗಿ ಕೈ ಚೆಲ್ಲಿ ಕುಳಿತುಕೊಳ್ಳುವ ಸಂದಿಗ್ದತೆ ಎದುರಾಗುತ್ತದೆ. ಉತ್ತರ ಭಾರತದ ರೈತರು ಮಳೆಯಾದಾರಿತ ವ್ಯವಸಾಯವನ್ನು ಅವಲಂಬಿಸಿಲ್ಲವಾದರೂ, ಅತಿವೃಷ್ಟಿ ಹಾಗು ಅನಾವೃಷ್ಟಿ ಹಾಗು ಇತರ ಸಮಸ್ಯೆಗಳು ಇದ್ದೆ ಇರುತ್ತವೆ. ಇಂತಹ ಕ್ಲಿಷ್ಟ ಪರಿಸ್ತಿತಿಗಳು ಪುನರಾವರ್ತನೆಯಾದಾಗ, ತೀರಿಸಲಾಗದಷ್ಟು ಮಾಡಿದ ಸಾಲಗಳು ಚಿಂತೆಗೆ ತಳ್ಳುವುದರ ಜೊತೆಗೆ , ಹಸಿವು, ಆರೋಗ್ಯವಿಲ್ಲದ ಜೀವನ ಅವರದ್ದಾಗುತ್ತದೆ. ಬೀಜ, ರಸಗೊಬ್ಬರ, ವ್ಯವಸಾಯೋತ್ಪನ್ನಗಳು ಹಾಗು ವೈಜ್ಞಾನಿಕ ಯಂತ್ರೋಪಕರಣಗಳ ಮೇಲೆ ಸರ್ಕಾರವು ಕೊಡುವ ತೆರಿಗೆ ವಿನಾಯಿತಿಗಳು ಸಣ್ಣ ಹಾಗು ಅತಿ ಸಣ್ಣ ಹಿಡುವಳಿ ರೈತರಿಗೆ ತಲುಪುವ ಬದಲು, ಯಾವುದೊ ಕಂಪನಿಯ ಅಥವಾ ಎಜೆಂಟುಗಳ ಸ್ವಾರ್ಥಕ್ಕಾಗುತ್ತವೆ.

 ಕಳೆದ ವರ್ಷಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗು ಕೇರಳ ರಾಜ್ಯಗಳಲ್ಲಿ ತಮ್ಮ ಅವಸ್ಥೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿರುವ ವಿಚಾರ. ಕಷ್ಟಕಾಲದಲ್ಲಿ ರೈತರಿಗೆ ಮಾನಸಿಕವಾಗಿ ಹಾಗು ಆರ್ಥಿಕವಾಗಿ ಸಹಾಯ ದೊರಕಿಸಿಕೊಡಲು ಸರ್ಕಾರ ಹಾಗು ಸಂಘ ಸಂಸ್ಥೆಗಳು ಶ್ರಮಿಸಬೇಕು.

• ನೀರನ್ನು ಶೇಕರಿಸಿಡುವುದು, ಇದಕ್ಕಾಗಿ ಸಣ್ಣ ಕೆರೆಗಳನ್ನು ಇಂಗು ಗುಂಡಿಗಳನ್ನು ನಿರ್ಮಿಸುವುದು
• ಹೆಚ್ಚಿನ ಮಳೆಯ ನೀರು ಪೋಲಾಗದೆ ಹಣೆಕಟ್ಟುಗಳನ್ನೂ ಕಟ್ಟಿ ನೀರನ್ನು ಶೇಕರಿಸಿ ವ್ಯವಸಾಯಕ್ಕೆ ಬಳಸಿಕೊಳ್ಳಲು ಸಹಕರಿಸುವುದು
• ಮಣ್ಣನ್ನು ಪಳವತ್ತುಗೊಳಿಸಲು ಅಗತ್ಯ ಮಾರ್ಗದರ್ಶನ
• ನೈಸರ್ಗಿಕ ಹಾಗು ಜೈವಿಕ ಗೊಬ್ಬರಗಳನ್ನು ಉಪಯೋಗಿಸಲು ಉತ್ತೇಜನ
• ವೈಜ್ಞಾನಿಕ ಪದ್ಧತಿ ಅಳವಡಿಕೆ ಹಾಗು ಯಂತ್ರೋಪಕರಣಗಳ ಬಳಕೆ
• ಅವರ ವೃತ್ತಿಗೆ ಅಗತ್ಯವಾದ ಮಾಹಿತಿ ಒದಗಿಸುವುದು
• ಉತ್ತಮ ಗುಣಮಟ್ಟದ ಬೀಜಗಳನ್ನು ನೀಡುವುದು
• ಹವಾಮಾನಕ್ಕನುಗುಣವಾಗಿ ಆಹಾರ ಮತ್ತು ಆರ್ಥಿಕ ಬೆಳೆ ಬೆಳೆಯಲು ಅವಕಾಶ ಕಲ್ಪಿಸುವುದು
• ಸಾಂಪ್ರದಾಯಿಕ ನಾಟಿ ಬೆಳೆಗಳ ಜೊತೆಗೆ ಮಿಶ್ರತಳಿ ಹಾಗು ತಳಿ ಪರಿವರ್ತನೆ ಮಾಡಿದ ಬೆಳೆ ಬೆಳೆಯಲು ಉತ್ತೇಜನ
• ಆಹಾರ ಸಂಸ್ಕರಣ ಕೇಂದ್ರಗಳು ಮತ್ತು ಗೋದಾಮುಗಳ ಅವಶ್ಯಕತೆ
• ತೋಟಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ
• ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಸದ್ಬಳಕೆ
• ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು
• ಎಲ್ಲಾ ಗ್ರಾಮಗಳಿಗೆ ವ್ಯವಸಾಯೋತ್ಪನ್ನ ಸಹಕಾರ ಸಂಘಗಳಿರಬೇಕು ಹಾಗು ಇವುಗಳ ಮೂಲಕ ರೈತರಿಗೆ ಬೇಕಾಗುವ ಗೊಬ್ಬರ, ಬೀಜ, ಹಾಗು ಇತರ ಸಲಕರಣೆಗಳು ನಿಯಮಿತ ದರಗಳಲ್ಲಿ ದೊರಕುವಂತಿರಬೇಕು
• ಬ್ಯಾಂಕ್ ಹಾಗು ಇತರ ವಾಣಿಜ್ಯ ಸೇವೆಗಳು ಎಲ್ಲ ಗ್ರಾಮಗಳಿಗೂ ದೊರಕಬೇಕು
• ಹಳ್ಳಿಗಳ ಮತ್ತು ನಗರ ಯೋಜನೆಗಳಿಗೆ ವ್ಯತ್ಯಾಸವಿರದಂತೆ ಎಚ್ಚರವಹಿಸುವುದು
• ಉತ್ತಮ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿ ಭಂಡವಾಳಶಾಹಿಗಳನ್ನು ವಿಕೇಂದ್ರಿಕರಣಗೊಳಿಸಬೆಕು
• ದಿನನಿತ್ಯ ಜೀವನಕ್ಕೆ ಬೇಕಾಗುವ ವಸ್ತುಗಳು, ಸಲಕರಣೆಗಳು ಹೇರಳವಾಗಿ ದೊರೆಯಬೇಕು
• ಹಳ್ಳಿಗಳಿಂದ ನಗರಗಳಿಗೆ ಬರುವ ವಲಸೆ ತಡೆಯಲು ಅಗತ್ಯ ಕಾರ್ಖಾನೆಗಳನ್ನು ತೆರೆಯಬೇಕು
• ಸಾಮಾಜಿಕ, ವಾಣಿಜ್ಯ, ಹಾಗು ಖಾಸಗಿ ಉದ್ಯಮಗಳಲ್ಲಿ ಹಣ ಹೂಡಿಕೆ

★ ಪಶುಪಾಲನೆ :
ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯದ ನಂತರ ಪಶುಪಾಲನೆ ಬಹು ಮುಖ್ಯ ಉದ್ಯೋಗ. ಅನೇಕ ರೈತರು ವ್ಯವಸಾಯದ ಜೊತೆಗೆ ಪಶುಪಾಲನೆಯನ್ನು ಉಪ ಕಸುಬನ್ನಾಗಿಯೂ ಅವಲಂಭಿಸಿದ್ದಾರೆ. ಪ್ರಾಚೀನ ಕಾಲದಿಂದಲೂ ಜನರು ಇದರ ಮೇಲೆ ಅವಲಂಬಿತವಾಗಿದ್ದರೂ ಅದರ ಏಳ್ಗೆ ಮಾತ್ರ ತೃಪ್ತಿದಾಯಕವಾಗಿಲ್ಲ. ಆರ್ಥಿಕವಾಗಿ ಸಬಲರಲ್ಲದವರು, ಸಣ್ಣಬೇಸಾಯಗಾರರು ಅನೇಕ ಸಾಕು ಪ್ರಾಣಿಗಳನ್ನು ವ್ಯವಸಾಯಕ್ಕಾಗಿಯೂ ಬಳಸುತ್ತಾರೆ. ಹಸು, ಎಮ್ಮೆಗಳನ್ನು ಹಾಲು ಮತ್ತು ಹಾಲಿನ ಉತ್ಪನ್ನಗಳಿಗಾಗಿ, ದನಗಳು ಮತ್ತು ಕೋಣಗಳನ್ನು ಭೂಮಿಯನ್ನು ಉಳಲು ಹಾಗು ಕುರಿ, ಮೇಕೆ, ಕೋಳಿ ಮುಂತಾದವುಗಳನ್ನು ಮಾಂಸಕ್ಕಾಗಿಯೂ ಸಾಕುತ್ತಾರೆ. ಆದರೆ ದುರದೃಷ್ಟವಾಗಿ ಪಶುಪಾಲನೆಯನ್ನು ಒಂದು ಲಾಭದಾಯಕ ಉದ್ದಿಮೆಯನ್ನಗಿ ಪರಿವರ್ತಿಸಲು ಇಲ್ಲಿಯವರೆಗೂ ಸಾಧ್ಯವಾಗದಿರುವುದು ವಿಷಾದನೀಯ.

• ಅಗತ್ಯ ಒಳ್ಳೆಯ ತಳಿಗಳಗಳನ್ನೂ ಒದಗಿಸುವುದು
• ಮೇವು ಮತ್ತು ಇತರ ಅಗತ್ಯ ಆಹಾರ ಮತ್ತು ಔಷಧಿಗಳ ಪೂರೈಕೆ
• ಗೋಧಾಮುಗಳ ನಿರ್ಮಾಣ
• ಪಶುಗಳ ಆಸ್ಪತ್ರೆಗಳ ನಿರ್ಮಾಣ ಮತ್ತು ಉತ್ತಮ ಚಿಕಿತ್ಸೆ ದೊರೆಯುವಂತೆ ಗಮನ
• ಹಾಲು ಸಂಸ್ಕರಣೆ ಮತ್ತು ಅದರ ಇತರ ಉತ್ಪನ್ನಗಳ ತಯಾರಿಕಾ ಗಟಕಗಳನ್ನು ತೆರೆಯುವುದು

★ ಮೀನುಸಾಕಣೆ :
ಹೊರ ಪ್ರಪಂಚಕ್ಕೆ ಮೀನುಸಾಕಣೆ ಹೆಚ್ಚಿನ ಲಾಭದಾಯಕ ಗ್ರಾಮೀಣ ಕಸುಬುಗಳಲ್ಲಿ ಒಂದು. ಆದರೆ ಇದಕ್ಕೆ ಸಿಗುತ್ತಿರುವ ಪ್ರೋತ್ಸಾಹ ಅತ್ಯಲ್ಪ ಆದ್ದರಿಂದ ಇದು ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆ. ಇದು ಕೇವಲ ಕರಾವಳಿ ಪ್ರದೇಶಗಳ, ನದಿತೀರ ಪ್ರದೇಶಗಳ ಜನರ ಕಸುಬಾಗದೆ ಒಳನಾಡಿಗೂ ವೃದ್ದಿಸಬೇಕು. ಉದ್ದಿಮೆಗೆ ಹೆಚ್ಚಿನ ಸಹಕಾರ ಮತ್ತು ಅಗತ್ಯ ಮೂಲ ವ್ಯವಸ್ಥೆಗಳನ್ನು ಕಲ್ಪಿಸುವುದರಿಂದ ರೈತರನ್ನು ಆಕರ್ಷಿಸಬಹುದು ಮತ್ತು ಇದರಿಂದ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬಹುದು.

• ಕೆರೆ ಕುಂಟೆಗಳು, ಹೊಂಡಗಳನ್ನು ನಿರ್ಮಿಸಿ ಮಿನುಸಾಕಣೆಗೆ ವಿಪುಲ ಅವಕಾಶಗಳನ್ನು ಕಲ್ಪಿಸುವುದು
• ರೈತರಿಗೆ ಉತ್ತಮ ತರಬೇತಿ ಕೊಡುವುದು
• ಸ್ವಚ್ಛತೆ ಹಾಗು ಸುರಕ್ಷತೆಗೆ ಆಧ್ಯತೆ ನೀಡುವುದು
• ವಿವಿದ ರೀತಿಯ ಲಾಭದಾಯಕ ತಳಿಗಳನ್ನು ಒದಗಿಸುವುದು
• ಆಹಾರ ಮತ್ತು ಔಷಧಿಗಳ ಪೂರೈಕೆ
• ವಾತಾವರಣ, ಅವುಗಳ ಆಹಾರ ಮತ್ತು ತಗಲುವ ರೋಗಗಳ ಬಗ್ಗೆ ಮತ್ತು ನಿವಾರಣೆಯ ಬಗ್ಗೆ ಅಗತ್ಯ ಮಾಹಿತಿ ಒದಗಿಸುವುದು

★ ಕಾಡು ಬೆಳೆಸುವುದು :
ಹಿಂದೊಮ್ಮೆ ನಮ್ಮ ಹಳ್ಳಿಗೆ ಅರಣ್ಯದ ಮದ್ಯೆ ಹೋಗಬೇಕೆಂದರೆ ಸಂತಸವಾಗುತ್ತಿತ್ತು. ಅದರಲ್ಲೂ ಪಕ್ಕದೂರಿನ ಶಾಲೆಗೆ ನಡೆದೇ ಹೋಗಬೇಕಾಗಿದ್ದರಿಂದ ಗಿಡ ಮರಗಳ ನಡುವೆ ಆಟವಾಡಿಕೊಂಡು ಹೋಗುವಾಗಿನ ಮಜವೇ ಬೇರೆ. ಆದರೆ ಈಗ ಬೆಂಗಾಡು, ಸುಡುವ ಬಿಸಿಲನ ಜೊತೆ ನಡೆಯಬೇಕಾದ ಪರಿಸ್ಥಿತಿ. ಹೇಗೆ ನಾಶವಾಯಿತು ಎಂದು ಹೇಳಬೇಕಾದ ಅವಶ್ಯಕತೆಯಿಲ್ಲ. ಇದು ನಮ್ಮೂರಿಗಷ್ಟೇ ಒದಗಿಲ್ಲ, ದೇಶದ ಎಲ್ಲ ಭಾಗಗಳಲ್ಲಿ ಕಂಡು ಬರುವ ಸಾಮಾನ್ಯ ಸನ್ನಿವೇಶ. ಆದರೆ ಇದರಿಂದ ಹಾಗುವ ಅಡ್ಡ ಪರಿಣಾಮಗಳನ್ನು ಹಾಗು ಕಾಡು ಬೆಳೆಸುವುದರಿಂದ ಹಾಗುವ ಪ್ರಯೋಜನಗಳನ್ನು ಸಾಮಾನ್ಯಜನರಿಗೆ ತಿಳಿಸಿ, ಅನೇಕ ಸಾಲುಮರದ ತಿಮ್ಮಕ್ಕನಂತಹವರನ್ನು ಸೃಷ್ಟಿಸಬೇಕಾಗಿದೆ.

★ ಸಾರಿಗೆ :
ಗ್ರಾಮೀಣ ಪ್ರದೇಶಗಳ ಸಾರಿಗೆ ಮತ್ತು ಸಂಪರ್ಕದ ಸ್ಥಿತಿ ಶೋಚನೀಯ. ೨೧ ನೇ ಶತಮಾನದಲ್ಲೂ ಅನೇಕ ಹಳ್ಳಿಗಳಿಗೆ ರಸ್ತೆಗಳಿಲ್ಲದೆ ಇಂದಿಗೂ ಕಾಲು ದಾರಿಯಲ್ಲೇ ತಲುಪಬೇಕೆಂಬುದು ಅಚ್ಚರಿಯೆನಿಸಿದರೂ ಸತ್ಯ ಸಂಗತಿ ಮತ್ತು ನಾಚಿಕೆ ತರಿಸುವಂತ ವಿಷಯ. ಇನ್ನು ಕೆಲವು ಪ್ರದೇಶಗಳಲ್ಲಿ ಇರುವ ರಸ್ತೆಗಳಲ್ಲಿ ಪ್ರಯಾಣಿಸಲು ಪೂರ್ವ ತಯಾರಿ ಮತ್ತು ಧೈರ್ಯ ಇರಲೇಬೇಕು. ಕೆಲ ಊರುಗಳಿಗೆ ಹೊಸದಾಗಿ ರಸ್ತೆ ಭಾಗ್ಯ ಲಭಿಸಿದರೆ ಮೂರು ತಿಂಗಳುಗಳಲ್ಲಿ ಅಲ್ಲಿದ್ದ ರಸ್ತೆ ಮಾಯವಾಗಿ ಹಳ್ಳ ಗುಂಡಿಗಳನ್ನು ಕಾಣಬಹುದು. ಹೀಗಿರುವಾಗ ರೈತರು ತಾವು ಬೆಳೆದ ದವಸ ದಾನ್ಯಗಳನ್ನು ನಗರದ ಮಾರುಕಟ್ಟೆಯಲ್ಲಿ ಮಾರಲು ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಅಲ್ಲಿಂದ ತರಬೇಕಾದ ಬವಣೆ ಹೇಳತೀರದು. ಸರ್ಕಾರಗಳು ಎಲ್ಲ ಗ್ರಾಮಗಳಿಗೆ ಗುಣಮಟ್ಟದ ರಸ್ತೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು.

• ಸುತ್ತಮುತ್ತಲಿನ ಹಳ್ಳಿಗಳು ಹಾಗು ನಗರಗಳ ಜೋಡಣೆ ಹಾಗು ಹೆಚ್ಚಿನ ಸಂಪರ್ಕ
• ವಿಶಾಲವಾದ ಮತ್ತು ಗುಣಮಟ್ಟದ ರಸ್ತೆಗಳ ಅವಶ್ಯಕತೆ

★ ಉತ್ತಮ ಮಾರುಕಟ್ಟೆ
ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕೊಳ್ಳುವವರಿಲ್ಲದೆ ಎಷ್ಟೋ ಬಾರಿ ದಾರಿಯಲ್ಲಿ ಅಥವಾ ಚರಂಡಿಗೆ ಸುರಿದು ಪ್ರತಿಭಟಿಸಿರುವ ಅನೇಕ ಘಟನೆಗಳನ್ನು ದಿನ ನಿತ್ಯ ಕಾಣುತ್ತೇವೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಲು ದೂರದ ನಗರಗಳ ಮಾರುಕಟ್ಟೆಯನ್ನು ಅವಲಂಭಿಸುವುದು ಲಾಭಕರವಲ್ಲ ಹಾಗಾಗಿ ಹೋದಷ್ಟಕ್ಕೆ ಮಾರುವುದು ವಾಡಿಕೆ.  ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಅತ್ಯುತ್ತಮ ಮಾರುಕಟ್ಟೆಯ ಅಗತ್ಯ ಪ್ರಶ್ನಾತೀತವಾದದ್ದು. ಇದರಿಂದ ತಾವು ಬೆಳೆದ ಬೆಳೆಗಳನ್ನು ಸ್ಪರ್ಧಾತ್ಮಕ ಬೆಲೆಗೆ ಮಾರಲು ಮತ್ತು ಅಗತ್ಯ ವಸ್ತುಗಳನ್ನು ಸೂಕ್ತ ಬೆಲೆಗೆ ಕರೀದಿಸಲು ಅನುಕೂಲವಾಗುತ್ತದೆ.

• ಗ್ರಾಮೀಣ ಮಾರುಕಟ್ಟೆಗಳ ಸೌಲಭ್ಯ ಒದಗಿಸುವುದು
• ರೈತರ ಬೆಳೆಗೆ ಸ್ಪರ್ಧಾತ್ಮಕ ಬೆಲೆ ಸಿಗುವಂತೆ ಎಚ್ಚರ
• ದಲ್ಲಾಳಿಗಳ ಮತ್ತು ವರ್ತಕರ ಮೋಸ ವಂಚನೆಗಳಿಂದ ಮುಕ್ತಿ
• ತೆರಿಗೆಗಳಿಂದ ವಿನಾಯಿತಿ
• ಮುಕ್ತ ವ್ಯಾಪಾರಕ್ಕೆ ಅನುಮತಿ ಕೊಡಬೇಕು

★ ಪ್ರವಾಸೋದ್ಯಮ:
ಪ್ರಪಂಚದ ಕೆಲವು ದೇಶಗಳ ಆರ್ಥಿಕತೆ ಬಹುವಾಗಿ ಪ್ರವಾಸೋದ್ಯಮದ ಮೇಲೆಯೇ ನಿಂತಿದೆ ಎಂದರೆ ಅಚ್ಚರಿಯಾಗಬಹುದು, ಆದರೂ ಇದು ಸತ್ಯವೆಂದು ಒಪ್ಪಿಕೊಳ್ಳಬೇಕಾಗಿದೆ. ದೇಶದಲ್ಲಿ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದ್ದರೂ ಅವುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ನಮ್ಮ ದೇಶದಲ್ಲಿರುವ ಅನೇಕ ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳನ್ನು ಪುರಾತತ್ವ ಗುಡಿ ಗೋಪುರಗಳನ್ನು ಅಭಿವೃದ್ದಿಪಡಿಸಿ, ಅಗತ್ಯ ರಕ್ಷಣೆ ಮತ್ತು ಸೂಕ್ತ ಸೌಲಭ್ಯಗಳನ್ನು ಒದಗಿಸಿದರೆ ಪ್ರಪಂಚದ ಮೂಲೆ ಮೂಲೆಗಳಿಂದ ಯಾತ್ರಿಕರನ್ನು ಆಕರ್ಷಿಸಬಹುದು.

• ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಅಭಿವೃದ್ದಿಪಡಿಸಿದರೆ ಪ್ರದೇಶಾಭಿವೃದ್ದಿಯ ಜೊತೆಗೆ ಆರ್ಥಿಕವಾಗಿಯೂ ಪ್ರಗತಿ ಸಾದಿಸಬಹುದು

* ಉದ್ಯೋಗ
ದೇಶದ ಹಳ್ಳಿಗಳಲ್ಲಿ ಉದ್ಯೋಗವೆಂದರೆ ಕೇವಲ ಹೊಟ್ಟೆಪಾಡಿಗೆ ಮಾಡುವ ಒಂದು ಕೆಲಸವಾಗಿದೆ. ಆದರೆ ವಾಸ್ತವದಲ್ಲಿ ಅದಕ್ಕೂ ಕುತ್ತು. ಕುಟುಂಬ ಪಾರಂಪರ್ಯವಾಗಿ ಬಂದಿರುವ ಕೆಲಸಗಳನ್ನು ಅನೇಕ ಕಾರಣಗಳಿಂದ ಮುಂದುವರಿಸಲಾಗದೆ, ಹಾಗೆ ಒಮ್ಮೆ ಮಾಡಿದರೂ ಅದರಿಂದ ಸೂಕ್ತ ಪ್ರಯೋಜನವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಮ್ಮ ಹಳ್ಳಿಯ ಜನರದ್ದು. ಬೇರೆ ಉದ್ಯೋಗಗಳನ್ನು ಮಾಡಲು ಅಗತ್ಯ ತರಬೇತಿ, ಹಾಗು ಅದಕ್ಕೆ ಬೇಕಾದ ಅವಕಾಶಗಳಿಲ್ಲದಿರುವುದು ಜನರನ್ನು ಒಂದೆಡೆ ನಗರ ಪ್ರದೇಶಗಳಿಗೆ ವಲಸೆ ಹೋಗಲು ಪ್ರಚೋದಿಸುವುದರ ಜೊತೆಗೆ ಮತ್ತೊಂದೆಡೆ ಸೋಮರಿಗಳನ್ನಾಗಿಯೂ, ಹಾಗು ಇತರ ಆತಂಕಕಾರಿ ಕೆಲಸಗಳಿಗೆ ಮಾರು ಹೋಗಲು ಅವಕಾಶವಾಗಿಸಿದೆ. ಹಳ್ಳಿಗಳಲ್ಲಿ ದೊರೆಯುವ ಸಂಪನ್ಮೂಲಗಳಿಗನುಗುಣವಾಗಿ ಅಲ್ಲಿ ಉಪಯುಕ್ತ ಕಾರ್ಖಾನೆಗಳನ್ನು ನಿರ್ಮಿಸಿ ಹೆಚ್ಚಿನ ಉದ್ಯೋಗ ಸೃಷ್ಟಿಸಬಹುದಾಗಿದೆ.

• ಗುಡಿ ಕೈಗಾರಿಕೆ ಮತ್ತು ಗ್ರಾಮೀಣ ಉದ್ದಿಮೆಗಳಿಗೆ ಉತ್ತೇಜನ ಮತ್ತು ಅಗತ್ಯ ತರಬೇತಿ
• ಕರ ಕುಶಲ ವಸ್ತುಗಳ ತಯಾರಿಕೆಗೆ ಪ್ರೋತ್ಸಾಹ
• ಸ್ವಂತ ಉದ್ಯೋಗ ಮಾಡುವವರಿಗೆ ಪ್ರೋತ್ಸಾಹ
• ವಿವಿಧ ವಲಯಗಳಲ್ಲಿ ಉದ್ಯೋಗ ಸೃಷ್ಟಿ
• ಕೈಗಾರಿಕಾ ವಲಯಗಳನ್ನು ಸ್ಥಾಪಿಸಿ, ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸಿ ಬಂದವಾಳಶಾಹಿಗಳನ್ನು ಆಕರ್ಷಿಸಬೇಕು

★ ವಿದ್ಯುತ್ ಮತ್ತು ಇಂದನ : ಶಕ್ತಿಯನ್ನು ಬಳಸುವಿಕೆ
ದೇಶ ಇಂಧನದ ಕೊರತೆಯನ್ನು ಅನುಭವಿಸುತ್ತಿರುವುದು ತಿಳಿದ ವಿಷಯ. ಇದನ್ನು ಸರಿದೂಗಿಸಲು ಸರ್ಕಾರ ಅನೇಕ ತೊಡರುಗಳ ನಡುವೆಯೂ ಅಮೆರಿಕದೊಂದಿಗೆ ಅಣು ಒಪ್ಪಂದಕ್ಕೆ ಸಹಿ ಮಾಡಿದೆ, ಇದರಿಂದ ದೇಶದ ಹಿತಕ್ಕೆ ದಕ್ಕೆ ಬಾರದಿರಲಿ. ವಾಸ್ತವಿಕವಾಗಿ ಹಲವು ರಾಜ್ಯಗಳ ಹಳ್ಳಿಗಳಲ್ಲಿ ದಿನಕ್ಕೆ ೪ ರಿಂದ ೫ ಘಂಟೆ ವಿದ್ಯುತ್ ಸಿಗುವುದೂ ಕಷ್ಟಕರ. ಹೀಗಿರುವಾಗ ಇಂಧನವನ್ನು ಹಿತ ಮಿತವಾಗಿ ಬಳಸುವುದು ಶ್ರೇಯಸ್ಕರ. ಇದರ ಬಗ್ಗೆ ಜನರಲ್ಲಿ ತಿಳುವಳಿಕೆ ಹಾಗು ಅರಿವು ಮೂಡಿಸುವುದು ಅತ್ಯಗತ್ಯ. ಜೊತೆಗೆ ಸೌರಶಕ್ತಿ ಮತ್ತು ಸಾವಯವ ಶಕ್ತಿಗಳ ಉತ್ಪಾದನೆ ಮತ್ತು ಬಳಸುವ ಬಗೆಗೆ ತರಬೇತಿ ನೀಡುವುದರಿಂದ ಬಹು ಮಟ್ಟಿನ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.
• ಸೌರ ಶಕ್ತಿ ಮತ್ತು ಸಾವಯವ ಶಕ್ತಿಗಳ ಬಳಕೆ
• ಇಂಧನದ ಮಿತ ಬಳಕೆಯ ಬಗ್ಗೆ ಅಗತ್ಯ ಮಾಹಿತಿ

★ ಸ್ತ್ರೀ ಸಭಲೀಕರಣ :
ದೇಶದಲ್ಲಿ ಸ್ತ್ರೀಯರು ಬಹುತೇಕ ಎಲ್ಲ ರಂಗಗಳಲ್ಲಿ, ಪುರುಷನಿಗೆ ಸರಿ ಸಮಾನವಾಗಿ ನಿಲ್ಲಲು ದಾಪುಗಾಲಿಡುತ್ತಿದ್ದಾರೆಂಬುದು ಸಂತೋಷದ ವಿಷಯ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಹಿಳೆಯರು ಪುರುಷರ ಆಣತಿಯ ಮೇರೆಗೆ ಜೀವನ ಸಾಗಿಸಬೇಕಾಗಿದೆ. ಪುರುಷರ ಲೈಂಗಿಕ ಶೋಷಣೆ, ದಬ್ಬಾಳಿಕೆ ಮಾನಸಿಕ ಹಾಗು ದೈಹಿಕ ಹಿಂಸೆಗಳು ಅವರನ್ನು ಅಬಲಳನ್ನಾಗಿಸಿವೆ. ಅನೇಕ ರೋಗ ರುಜಿನಗಳಿಂದ ನರಳುತ್ತಿದ್ದರೂ ಮುಚ್ಚಿಡುವ ಪರಿಸ್ತಿತಿಯನ್ನೂ ಎದುರಿಸುತ್ತಾರೆ. ಪುರುಷ ಪ್ರಧಾನ ಸಮಾಜಕ್ಕೆ ಹೆದರಿ ತಾನೆಷ್ಟೇ ಸಬಲಳಿದ್ದರೂ, ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಯಿದೆ. ಇದಕ್ಕೆ ಕಾರಣಗಳು ಅನೇಕ, ಅಂದಕಾರ, ಅನಕ್ಷರತೆ ಹಾಗು ಕೆಲಸಕ್ಕೆ ಬಾರದ ಸಾಮಾಜಿಕ ಕಟ್ಟಳೆಗಳು.

 ಒಬ್ಬ ಸ್ತ್ರೀ ಶಿಕ್ಷಣ ಪಡೆದರೆ ತನ್ನ ಇಡೀ ಕುಟುಂಬಕ್ಕೆ ಶಿಕ್ಷಣ ನೀಡಬಲ್ಲಳು. ಒಂದು ಕುಟುಂಬದವರು ವಿದ್ಯಾವಂತರಾದರೆ ಕೊನೆಯ ಪಕ್ಷ ನೆರೆ ಹೊರೆಯವರ ಕಣ್ಣನ್ನಾದರು ತೆರೆಸಲು ಸಹಾಯವಾಗುತ್ತದೆ. ಮುಂದೆ ಅದು ದೇಶದ ಉದ್ದಾರಕ್ಕೆ ಸಹಾಯವಾಗುತ್ತದೆ. ಆದ್ದರಿಂದ ಮಹಿಳೆಯರಿಗೆ ಅಗತ್ಯ ಶಿಕ್ಷಣ ಮತ್ತು ಸಹಾಯ ನೀಡಿ ಆಧುನಿಕ ಸಮಾಜದ ಬಾಗಿಲಿಗೆ ಕರೆತರಬೇಕಾಗಿದೆ.

• ಅವರಲ್ಲಿ ಧೈರ್ಯ ಹಾಗು ಭರವಸೆ ಮೂಡಿಸುವ ಕಡ್ಡಾಯ ಶಿಕ್ಷಣದ ಅಗತ್ಯ
• ಅಗತ್ಯ ಆರೋಗ್ಯ ಸೇವೆ
• ವೃತ್ತಿ ಶಿಕ್ಷಣ ತರಬೇತಿ ಮತ್ತು ಪ್ರೋತ್ಸಾಹ
• ಸ್ತ್ರೀ ಸಹಾಯ ಗುಂಪುಗಳನ್ನ ರಚಿಸಿ ಅವುಗಳಿಂದ ಸ್ತ್ರೀಯರ ಏಳ್ಗೆಗೆ ಅವಕಾಶ

★ ಬಾಲಕಾರ್ಮಿಕ ಪದ್ಧತಿ :
ತಂದೆ ತಾಯಿಗಳ ಬದತನದಿಂದಲೂ ಅಥವಾ ಅವರಿಗೆ ಬೇಡವಾಗಿಯೋ ಅನೇಕ ಮಕ್ಕಳು ಆಟ ಪಾಠ ಗಳನ್ನು ಕಲಿಯುವ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಇದರಿಂದ ಮುಂದೆ ದೇಶದ ಭವಿಷ್ಯ ಬರೆಯುವ ಕೈಗಳು ತಮ್ಮ ಜೀವನವನ್ನೇ ಕತ್ತಲೆಯ ಗೂಡಾಗಿಸಿಕೊಳ್ಳುತ್ತವೆ. ಅರಳಬೇಕಾದ ಹೂವುಗಳು ವಯಸ್ಸಿಗೆ ಮೀರಿದ ಮಾನಸಿಕ ಹಾಗು ದೈಹಿಕ ಹಿಂಸೆಯಿಂದ ಮುರುಟಿ ಹೋಗುತ್ತವೆ. ತನ್ನ ಒಡೆಯ ಕೊಡುವ ಒಪ್ಪೊತ್ತಿನ ಊಟಕ್ಕಾಗಿ ತಮ್ಮ ಬದುಕನ್ನೇ ಬಲಿಕೊಡುತ್ತಾರೆ. ಕೆಲವರು ನರಕಯಾತನೆಯನ್ನು ತಾಳಲಾರದೆ ಅಡ್ಡದಾರಿ ಹಿಡಿದು ಸಮಾಜಕ್ಕೆ ಮಾರಕವಾಗುವುದೂ ಉಂಟು. ಇವರನ್ನು ಇಂತಹ ಸಂಕಷ್ಟದಿಂದ ರಕ್ಷಿಸಿ ಪೌಷ್ಟಿಕ ಆಹಾರ, ಬಟ್ಟೆ ಹಾಗು ಇತರ ಸೌಲಭ್ಯಗಳನ್ನು ಒದಗಿಸಿ ಪ್ರೀತಿ ವಾತ್ಸಲ್ಯದಿಂದ ಶಿಕ್ಷಣವನ್ನು ನೀಡಿ ಉತ್ತಮ ನಾಗರೀಕರನ್ನಾಗಿಸುವುದು ಎಲ್ಲರ ಹೊಣೆಯಾಗಬೇಕು.

ಹಳ್ಳಿಗಳು ವ್ರುದ್ದಾಶ್ರಮವಾಗುವುದನ್ನು ತಪ್ಪಿಸಿ
ಹಳ್ಳಿಗಳಲ್ಲಿನ ಜನರು ಬಡತನದ ಜೀವನದಲ್ಲಿ ಬೆಂದು ನೊಂದು, ತಮ್ಮ ಒಪ್ಪತ್ತಿನ ಗಂಜಿಗೂ ತತ್ವಾರವಿರುವುದನ್ನರಿತು ಇಲ್ಲಿ ಇದ್ದು ತಮ್ಮ ಬದುಕನ್ನು ರೂಪಿಸಿಕೊಳ್ಳುವುದು ದುಸ್ಸಾಧ್ಯವೆಂದು ಬಗೆದು ನಗರಗಳ ಕಡೆ ಗುಳೇ ಹೊರಟಿದ್ದಾರೆ. ಅದರಲ್ಲಿಯೂ ಯುವ ಜನಾಂಗ ತಮ್ಮ ವಂಶ ಪಾರಂಪರ್ಯವಾಗಿ ಮಾಡುತ್ತಿದ್ದ ವ್ಯವಸಾಯ ಹಾಗು ಇನ್ನಿತರ ಕುಲ ಕಸುಬುಗಳನ್ನು ತೊರೆದು ನಗರಗಳಲ್ಲಿ ದೊರೆಯುವ ಕಾರ್ಖಾನೆಗಳಲ್ಲಿನ ಕೆಲಸ, ಬಟ್ಟೆ ಉದ್ಯಮಗಳಲ್ಲಿನ ಕೆಲಸ, ಹಾಗು ಇತರ ಕೂಲಿ ಕೆಲಸಗಳನ್ನರಸಿ, ತಮ್ಮ ಹುಟ್ಟಿದ  ಊರುಗಳನ್ನೂ ತೊರೆಯುತ್ತಿದ್ದಾರೆ. ಇದರಿಂದ ಅನೇಕ ಹಳ್ಳಿಗಳಲ್ಲಿ ಇಂದು ವೃದ್ದಾಪ್ಯ ತಂದೆ ತಾಯಿಗಳು ತಮ್ಮ ಬದುಕಿನ ಕೊನೆಯ ದಿನಗಳನ್ನು ಆತಂಕದಿಂದ ಕಳೆಯಬೇಕಾಗಿದೆ.

★ ಸಂಘಜೀವನ :
ನಗರಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಸಂಘ ಜೀವನ ಇನ್ನೂ ಉಳಿದಿದೆ. ಅಜ್ಜ-ಅಜ್ಜಿ, ತಾಯಿ-ತಂದೆ, ಮಕ್ಕಳು ಒಂದೇ ಮನೆಯಲ್ಲಿ ಇರುವುದನ್ನೂ ಇಂದಿಗೂ ನೋಡಬಹುದು. ಇದರಿಂದಲೇ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗಳ ಅಬ್ಬರದ ನಡುವೆಯೂ ದೇಶ ತನ್ನ ಭಿನ್ನತೆಯನ್ನು ಉಳಿಸಿಕೊಂಡಿದೆ. ಭಾರತದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಲು ಪರಸ್ಪರ ಸ್ನೇಹ, ಸಹಕಾರ, ಸೌಹಾರ್ಧತೆಯನ್ನು ಬೆಳೆಸಿ, ಎಲ್ಲ ಜಾತಿ ದರ್ಮಗಳ ನಡುವೆ ಒಮ್ಮತ ಮೂಡಿಸಿ, ಜನರಲ್ಲಿ ಭಾವೈಕ್ಯತೆಯನ್ನು ಬೆಳೆಸಬೇಕಾಗಿದೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ಸಹಬಾಳ್ವೆಯನ್ನು ಪ್ರೋತ್ಸಹಿಸಬೇಕಾಗಿದೆ.
ಸಾಂಸ್ಕೃತಿಕ ಚಟುವಟಿಕೆಗಳು
ದುಡಿದು ದಣಿದ ಮನಸ್ಸಿಗೆ ಮುದ ನೀಡಲು, ಸಾಂಸ್ಕೃತಿಕ ಚಟುವಟಿಕೆಗಳು ಅತ್ಯವಶ್ಯಕ. ಗ್ರಾಮೀಣ ಪ್ರದೇಶದ ಜನರು ತಮ್ಮ ಬಿಡುವಿನ ವೇಳೆಯಲ್ಲಿ, ಹಬ್ಬ ಹರಿದಿನಗಳಲ್ಲಿ ಅತ್ಯುತ್ಸಾಹದಿಂದ ಪ್ರಾದೇಶಿಕವಾದ ನಾಟಕಗಳು, ಬಯಲಾಟಗಳು, ಕೋಲಾಟ ಹಾಗು ವಿವಿಧ ರೀತಿಯ ಹಾಡು ಭಜನೆ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ದೂರದರ್ಶನ, ಸಿನಿಮಾ ಮತ್ತು ಇತರ ಮಾದ್ಯಮಗಳ ಹೊಡೆತದಿಂದ ಅವುಗಳಲ್ಲಿ ಭಾಗಿಯಾಗುವವರೂ ಇಲ್ಲ ಹಾಗು ಒಂದು ವೇಳೆ ಯಾರಾದರು ಆ ದಿಕ್ಕಿನಲ್ಲಿ ಮನಸ್ಸು ಮಾಡಿದರೆ ಅದಕ್ಕೆ ಸಿಗುವ ಬೆಲೆ ಒತ್ತಟ್ಟಿಗಿರಲಿ ನೋಡುವವರೂ ಇರುವುದಿಲ್ಲ. ಇದರಿಂದ ದೇಶದ ನೈಜ ಸಾಂಸ್ಕೃತಿಕ ಕಲೆ ಅಳಿಯುವುದು ಸಹಜ. ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಅನೇಕ ಮಂದಿಗೆ ಬದುಕನ್ನೂ ನೀಡಬಹುದು.

ಯೋಜನೆಗಳನ್ನು ಸಾಕಾರಗೊಳಿಸಲು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಗ್ರಾಮೀಣ ಜನರ ಸಹಬಾಗಿತ್ವದಲ್ಲಿ ಅಭಿವೃದ್ದಿ ಸಂಸ್ಥೆಗಳನ್ನು ನಿರ್ಮಿಸಿ ಅದಕ್ಕೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಹಾಗು ಜನಪ್ರತಿನಿಧಿಗಳನ್ನು ನಿಯಮಿಸಿ ಅವರಿಗೆ ಅವಶ್ಯಕ ತರಬೇತಿಯನ್ನು ಕಲ್ಪಿಸಬೆಕು. ವಿಕಲಾಂಗರು, ಬಡವರು, ಅನಕ್ಷರಸ್ಥರು ಮತ್ತು ಸಮಾಜದ ಸೌಲಭ್ಯಗಳು ವಂಚಿತರಾದವರಿಗೆ ಸರ್ಕಾರಗಳಿಂದ ಮತ್ತು ಇತರ ಸಂಘ ಸಂಸ್ಥೆಗಳಿಂದ ಒದಗುವ ಸಹಾಯಗಳ ಬಗೆಗೆ ಮಾಹಿತಿ ನೀಡುವುದು ಮತ್ತು ಅವರಿಗೆ ಲಭ್ಯವಾಗುವ ರೀತಿಯಲ್ಲಿ ಕ್ರಿಯಾತ್ಮಕ ಸಹಾಯಹಸ್ತ ನೀಡುವುದು. ಇಲ್ಲಿಯವರೆಗೂ ಸರ್ಕಾರದ ಯೋಜನೆಗಳು ಸೌಲಭ್ಯಗಳು ತಲುಪದೇ ಇರುವ ಪ್ರದೇಶಗಳಿಗೆ ಹೆಚ್ಚಿನ ಗಮನ ನೀಡುವುದು. ದಲಿತರು ಅಲೆಮಾರಿಗಳು, ಆದಿವಾಸಿಗಳು, ಹಾಗು ಗುಡ್ಡಗಾಡು ಪ್ರದೇಶದ ಕಾಡುಜನರ ಉದ್ದಾರಕ್ಕೆ ಶ್ರಮಿಸುವುದು.
ಬಡವರ ಅತಿ ಮುಖ್ಯ ಆರ್ಥಿಕ ಮತ್ತು ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸಲು ಸಹಕಾರಿ ಸಂಘಗಳನ್ನು ನಿರ್ಮಿಸಿ ಅದು ಸೂಕ್ತವಾಗಿ ಕಾರ್ಯರೂಪಿಸುವಂತೆ ಕ್ರಮ ಕೈಗೊಳ್ಳುವುದು. ಭಯ ಮತ್ತು ದುಗುಡತೆಯನ್ನು ನಿವಾರಿಸಲು ಗ್ರಾಮೀಣ ಜನರ ಅಗತ್ಯ ವಸ್ತುಗಳು ಹೇರಳವಾಗಿ ದೊರೆಯುವಂತೆ ನೋಡಿಕೊಳ್ಳುವುದು. ಹಸಿದವನಿಗೆ ಒಂದು ಹೊತ್ತಿನ ಊಟ ಬಡಿಸುವುದು ತಪ್ಪಲ್ಲದಿದ್ದರೂ, ಅಂತಹ ತಾತ್ಕಾಲಿಕ ಯೋಜನೆಗಳನ್ನು ಜಾರಿಗೊಳಿಸಿ ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳುವ ಬದಲು, ಗ್ರಾಮೀಣ ಜನರೇ ದುಡಿದು ಜೀವನ ನಡೆಸಲು ಸಹಕಾರಿಯಾಗುವಂತಹ ಶಾಶ್ವತ ಯೋಜನೆಗಳನ್ನು ರೂಪಿಸಿ ಅವುಗಳನ್ನು ಪ್ರಾದೆಶಿಕ್ಕನುಗುಣವಾಗಿ ಅನುಷ್ಟಾನಗೊಳಿಸಿದರೆ ಸಪಲತೆಯನ್ನು ನಿರೀಕ್ಷಿಸಲು ಸಾಧ್ಯವಾಗುವುದು. ಒಟ್ಟಿನಲ್ಲಿ ಸ್ವಾವಲಂಭಿಯಾಗಿ, ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಲ್ಲುವಂತಹ ಗ್ರಾಮೀಣ ಸಮಾಜವನ್ನು ಸೃಷ್ಟಿಸಿದರೆ ಅದು ದೇಶದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗುವುದರಲ್ಲಿ ಅನುಮಾನವಿಲ್ಲ.

ಮೂಲ:  ( ಲೇಖಕರು: ಜಿ. ಆರ್. ವಸಂತಕುಮಾರ್ )

Sunday 2 November 2014

★ ಸಾಮಾನ್ಯ ಜ್ಞಾನ (ಭಾಗ - 9) General Knowledge (Part-9):


 ★ ಸಾಮಾನ್ಯ ಜ್ಞಾನ (ಭಾಗ - 9) General Knowledge (Part-9):


★ ಕರ್ನಾಟಕದ ಮೊದಲ ಮಹಿಳೆಯರು

300) ಕರ್ನಾಟಕದ ಪ್ರಥಮ ವಚನಗಾರ್ತಿ ಯಾರು?
- ಅಕ್ಕಮಹಾದೇವಿ


301) ಕರ್ನಾಟಕದ ಪ್ರಥಮ ಪತ್ರಕರ್ತೆ / ಪ್ರಕಾಶಕಿ ಯಾರು?
- ನಂಜನಗೂಡು ತಿರುಮಲಾಂಬಾ


302) ನಾಟಕ ರಂಗದ ಮೇಲೆ ಏರಿದ ಕನ್ನಡದ ಮೊದಲ ಸ್ತ್ರೀ ಯಾರು?
- ಗಂಗೂಬಾಯಿ ಗುಳೇದಗುಡ್ಡ


303) ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿ ಯಾರು?
- ಗ್ರೇಸ್ ಠಕ್ಕರ್


304) ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು ಯಾರು?
- ಜಯದೇವಿ ತಾಯಿ ಲಿಗಾಡೆ


305) ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿತಿ ಯಾರು?
- ಅನುಪಮಾ ನಿರಂಜನ


306) ಕನ್ನಡದ ಪ್ರಥಮ ನವೋದಯ ಕವಯಿತ್ರಿ ಯಾರು?
- ಬೆಳಗೆರೆ ಜಾನಕಮ್ಮ


★'''''★'''''★


★ ಪತ್ರಿಕಾ ಲೋಕದ ಪ್ರಥಮರು ★

307) ಕರ್ನಾಟಕದ ಪ್ರಥಮ ಪತ್ರಿಕೆ ಯಾವುದು?
- ಮಂಗಳೂರು ಸಮಾಚಾರ (೧೮೪೮)


308) ಕರ್ನಾಟಕದ ಪ್ರಥಮ ದಿನಪತ್ರಿಕೆ ಯಾವುದು?
- ಸೂರ್ಯೋದಯ ಪ್ರಕಾಶಿಕ (೧೮೭೦)


309) ಕರ್ನಾಟಕದ ಪ್ರಥಮ ಕನ್ನಡ e-ಪತ್ರಿಕೆ ಯಾವುದು?
- ವಿಶ್ವಕನ್ನಡ


310) ಕರ್ನಾಟಕದ ಪ್ರಥಮ ವಾರ ಪತ್ರಿಕೆ ಯಾವುದು?
- ಸುಬುದ್ಧಿ ಪ್ರಕಾಶ (೧೮೫೦)


311) ಕರ್ನಾಟಕದ ಪ್ರಥಮ ವಿಜ್ಞಾನ ಪತ್ರಿಕೆ ಯಾವುದು?
- ವಿಜ್ಞಾನ


312) ಕರ್ನಾಟಕದ ಪ್ರಥಮ ವಿಡಿಯೋ ಪತ್ರಿಕೆ ಯಾವುದು?
- ಬೆಳ್ಳಿಚುಕ್ಕಿ


313) ಕರ್ನಾಟಕದ ಪ್ರಥಮ ಮಕ್ಕಳ ಪತ್ರಿಕೆ ಯಾವುದು?
- ಮಕ್ಕಳ ಪುಸ್ತಕ


314) ಕರ್ನಾಟಕದ ಪ್ರಥಮ ಮಹಿಳಾ ಪತ್ರಿಕೆ ಯಾವುದು?
- ಕರ್ನಾಟಕ ನಂದಿನಿ (೧೯೧೩)


315) ಕರ್ನಾಟಕದ ಪ್ರಥಮ ಸಾಹಿತ್ಯಿಕ ವೈಜ್ಞಾನಿಕ ಪತ್ರಿಕೆ ಯಾವುದು?
- ಕರ್ನಾಟಕ ಜ್ಞಾನ ಮಂಜರಿ (೧೮೭೮)


316) ಕರ್ನಾಟಕದ ಪ್ರಥಮ ಶಿಕ್ಷಣ ಪತ್ರಿಕೆ ಯಾವುದು?
- ಕನ್ನಡ ಜ್ಞಾನ ಬೋಧಿನಿ (೧೮೬೨)


317) ಕರ್ನಾಟಕದ ಪ್ರಥಮ ಜಿಲ್ಲಾ ಪತ್ರಿಕೆ ಯಾವುದು?
- ಜ್ಞಾನೋದಯ (ಶಿವಮೊಗ್ಗ)


318) ಕನ್ನಡದಲ್ಲಿ ಪ್ರಾರಂಭವಾದ ಮೊದಲ ಕಾಮಶಾಸ್ತ್ರ ಪತ್ರಿಕೆ ಯಾವುದು?
- ಪ್ರೇಮ


319) ಕರ್ನಾಟಕದ ಮೊಟ್ಟಮೊದಲ ಕಾನೂನು ಪತ್ರಿಕೆ ಯಾವುದು?
- ನ್ಯಾಯ ಸಂಗ್ರಹ


320) ಕರ್ನಾಟಕದ ಮೊಟ್ಟಮೊದಲ ಚಲನಚಿತ್ರ ಪತ್ರಿಕೆ ಯಾವುದು?
- ಸಿನಿಮಾ


321) ಕನ್ನಡದಲ್ಲಿ ಆರಂಭಗೊಂಡ ಮೊದಲ ಹಾಸ್ಯ ಪತ್ರಿಕೆ ಯಾವುದು?
- ವಿಕಟ ಪ್ರತಾಪ


322) ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಕನ್ನಡದ ಮೊದಲ ಪತ್ರಿಕೆ ಯಾವುದು?
- ಉದಯವಾಣಿ



★'''''★'''''★



★ ಕರ್ನಾಟಕದ ಸಾಹಿತ್ಯ ಲೋಕ  ಪ್ರಥಮರು ★


323) ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜಮಾರ್ಗ


324) ಕನ್ನಡದಲ್ಲಿ ರಚನೆಗೊಂಡ ಮೊದಲ ಕಾವ್ಯ ಯಾವುದು?
- ಆದಿಪುರಾಣ


325) ಕನ್ನಡದ ಮೊದಲ ಗದ್ಯ ಕೃತಿ ಯಾವುದು?
- ವಡ್ಡಾರಾಧನೆ


326) ಕನ್ನಡದಲ್ಲಿ ರಚನೆಗೊಂಡ ಮೊದಲ ನಾಟಕ ಯಾವುದು?
- ಮಿತ್ರಾವಿಂದಾ ಗೋವಿಂದಾ


327) ಕನ್ನಡದ ಮೊದಲ ಗೀತ ನಾಟಕ ಯಾವುದು?
- ಮುಕ್ತದ್ವಾರ


328) ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಯಾವುದು?
- ಜಾತಕ ತಿಲಕ ( ಶ್ರೀಧರಾಚಾರ್ಯ )


329) ಕನ್ನಡದ ಮೊದಲ ಸ್ವತಂತ್ರ ಪೌರಾಣಿಕ ನಾಟಕ ಯಾವುದು?
- ಪೃಥು ವಿಜಯ


330) ಕನ್ನಡದಲ್ಲಿ ರಚನೆಗೊಂಡ ಮೊದಲ ಗಾದೆಗಳ ಸಂಕಲನ ಯಾವುದು?
- ಕನ್ನಡ ಗಾದೆಗಳು


331) ಕನ್ನಡದಲ್ಲಿ ರಚನೆಗೊಂಡ ಮೊದಲ ಒಗಟುಗಳ ಸಂಗ್ರಹ ಯಾವುದು?
- ಮಕ್ಕಳ ಒಡಪುಗಳು


332) ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರಬಂಧ ಸಂಕಲನ ಯಾವುದು?
- ಲೋಕರಹಸ್ಯ


333) ಕನ್ನಡದ ಮೊದಲ ಛಂದಶಾಸ್ತ್ರ ಗ್ರಂಥ ಯಾವುದು?
- ಛಂದೋಂಬುಧಿ


334) ಕನ್ನಡದ ಮೊದಲ ವೈದ್ಯ ಗ್ರಂಥ ಯಾವುದು?
- ಗೋವೈದ್ಯ ( ಕೀರ್ತಿವರ್ಮ )


335) ಕನ್ನಡದ ಮೊದಲ ವಿಷಯ ವಿಶ್ವಕೋಶ ಯಾವುದು?
- ವಿವೇಕ ಚಿಂತಾಮಣಿ


336) ಕನ್ನಡದ ಮೊದಲ ವಿಶ್ವಕೋಶ ಯಾವುದು?
- ಲೋಕೋಪಕಾರ


337) ಕನ್ನಡದಲ್ಲಿ ರಚನೆಗೊಂಡ ಮೊದಲ ಮಕ್ಕಳ ವಿಶ್ವಕೋಶ ಯಾವುದು?
- ಬಾಲ ಪ್ರಪಂಚ


338) ಕನ್ನಡದ ಮೊದಲ ನವ್ಯತೆಯನ್ನೊಳಗೊಂಡ ಕಾದಂಬರಿ ಯಾವುದು?
- ವಿಶ್ವಾಮಿತ್ರನ ಸೃಷ್ಟಿ (ಶ್ರೀರಂಗ)


339) ಕನ್ನಡದಲ್ಲಿ ರಚನೆಗೊಂಡ ಮೊದಲ ಮನೋವೈಜ್ಞಾನಿಕ ಕಾದಂಬರಿ ಯಾವುದು?
- ಅಂತರಂಗ ( ದೇವುಡು )


340) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?
- ಶಬ್ದಮಣಿ ದರ್ಪಣ


341) ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ಯಾವುದು?
- ಕವಿರಾಜ ಮಾರ್ಗ


342) ಮೊಟ್ಟಮೊದಲು ಬೈಬಲ್ ನ್ನು ಕನ್ನಡೀಕರಣಗೊಳಿಸಿದವರು ಯಾರು?
 - ಜಾನ್ ಹ್ಯಾಂಡ್ಸ್


343) ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ ಯಾರು?
- ಸಂಸ


344) ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರವಾಸ ಕಥನ ಯಾವುದು?
 - ದಕ್ಷಿಣ ಭಾರತ ಯಾತ್ರೆ


345) ಕನ್ನಡದಲ್ಲಿ ರಚನೆಗೊಂಡ ಮೊದಲ ಪತ್ತೇದಾರಿ ಕಾದಂಬರಿ ಯಾವುದು?
- ಚೋರಗ್ರಹಣ ತಂತ್ರ


346) ಕನ್ನಡದ ಮೊದಲ ಆಯುರ್ವೇದ ಗ್ರಂಥ ಯಾವುದು?
- ಕರ್ಣಾಟಕ ಕಲ್ಯಾಣಕಾರಕ


347) ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಯಾವುದು?
- ಇಂದಿರಾಬಾಯಿ


348) ಕನ್ನಡದಲ್ಲಿ ರಚನೆಗೊಂಡ ಮೊದಲ ಐತಿಹಾಸಿಕ ಕಾದಂಬರಿ ಯಾವುದು?
- ಮುದ್ರಾಮಂಜೂಷ


349) ಕನ್ನಡದಲ್ಲಿ ರಚನೆಗೊಂಡ ಮೊದಲ ಜೀವನಚರಿತ್ರೆ ಯಾವುದು?
- ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ


350) ಕನ್ನಡದ ಮೊದಲ ಅಭಿನಂದನಾ ಗ್ರಂಥ ಯಾವುದು?
- ಸಂಭಾವನೆ ( ಬಿ.ಎಂ.ಶ್ರೀ.ಯವರಿಗೆ )


351) ಕನ್ನಡದಲ್ಲಿ ರಚನೆಗೊಂಡ ಮೊದಲ ಇಂಗ್ಲೀಷ್ - ಕನ್ನಡ ನಿಘಂಟುಕಾರ ಯಾರು?
- ವಿಲಿಯಮ್ ರೀವ್ಸ್


352) ಕನ್ನಡದ ಮೊದಲ ತಾಂತ್ರಿಕ ಪದಕೋಶ ಯಾವುದು?
- ಔದ್ಯಮಿಕ ನಿಘಂಟು


353) ಕನ್ನಡದ ಮೊದಲ ಕಾವ್ಯ ನಿಘಂಟು ಯಾವುದು?
- ರನ್ನಕಂದ


354) ಕನ್ನಡದ ಮೊದಲ ಗದ್ಯ ನಿಘಂಟು ಯಾವುದು?
- ಕರ್ಣಾಟಕ ಶಬ್ದಸಾರ


355) ಕನ್ನಡದಲ್ಲಿ ರಚನೆಗೊಂಡ ಮೊದಲ ವೈದ್ಯಕೀಯ ನಿಘಂಟು ಯಾವುದು?
- ವೈದ್ಯ ಪದಕೋಶ


★'''''★'''''★



★ ಬಣ್ಣದ ಲೋಕದ ಪ್ರಥಮರು ★


356) ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಮೊದಲ ಚಿತ್ರ ಯಾವುದು?
- ಬೇಡರ ಕಣ್ಣಪ್ಪ


357) ಕನ್ನಡದ ಮೊದಲ ಐತಿಹಾಸಿಕ ಚಿತ್ರ ಯಾವುದು?
- ರಣಧೀರ ಕಂಠೀರವ


358) ಕನ್ನಡದ ಮೊದಲ ಮೂಕಿ ಚಿತ್ರ ಯಾವುದು?
- ಮೃಚ್ಛಕಟಿಕ


359) ಕನ್ನಡದ ಮೊದಲ ವರ್ಣ ಚಲನಚಿತ್ರ ಯಾವುದು?
- ಅಮರಶಿಲ್ಪಿ ಜಕಣಾಚಾರಿ


360) ಕರ್ನಾಟಕದ ಮೊಟ್ಟಮೊದಲ ಚಿತ್ರಮಂದಿರ ಯಾವುದು?
- ಪ್ಯಾರಾಮೌಂಟ್ ( ೧೯೦೫ )


361) ಕನ್ನಡದ ಮೊದಲ ಕಾದಂಬರಿ ಆಧಾರಿತ ಚಲನಚಿತ್ರ ಯಾವುದು?
- ಕರುಣೆಯೇ ಕುಟುಂಬದ ಕಣ್ಣು


362) ಕನ್ನಡದ ಮೊದಲ ರಿಯಾಯಿತಿ (ಸಬ್ಸಿಡಿ ) ಪಡೆದ ಚಿತ್ರ ಯಾವುದು?
- ನಕ್ಕರೆ ಅದೇ ಸ್ವರ್ಗ


363) ಕನ್ನಡದ ಮೊದಲ ಸಾಮಾಜಿಕ ಚಲನಚಿತ್ರ ಯಾವುದು?
- ಸಂಸಾರ ನೌಕೆ (೧೯೩೬)


364) ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಕನ್ನಡದ ಮೊದಲಿಗರು ಯಾರು?
- ಶಿವಮೊಗ್ಗ ಸುಬ್ಬಣ್ಣ


365) ಚಿತ್ರ ಸಂಗೀತಕ್ಕೆ ೨ ಬಾರಿ ರಾಷ್ಟ್ರ ಪ್ರಶಸ್ತಿ ಕನ್ನಡದ ಮೊದಲಿಗರು ಯಾರು?
- ಬಿ.ವಿ.ಕಾರಂತ್


366) ಕನ್ನಡದ ಮೊದಲ ಭಾವಗೀತೆ ಧ್ವನಿಸುರುಳಿ ಯಾವುದು?
- ನಿತ್ಯೋತ್ಸವ


367) ಕರ್ನಾಟಕದ ಮೊಟ್ಟಮೊದಲ ವೃತ್ತಿನಾಟಕ ಕಂಪೆನಿ ಯಾವುದು?
- ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ


368) ಕರ್ನಾಟಕದ ಮೊಟ್ಟಮೊದಲ ಬೀದಿ ನಾಟಕ ಪ್ರಯೋಗ ಯಾವುದು?
-  ಕಟ್ಟು


369) ಕನ್ನಡದ ಮೊಟ್ಟಮೊದಲ ಹವ್ಯಾಸಿ ನಾಟಕ ತಂಡ ಯಾವುದು?
- ಭಾರತ ಕಲೋತ್ತೇಜಕ ಸಂಗೀತ ಸಮಾಜ


370) ಕನ್ನಡದ ಮೊಟ್ಟಮೊದಲ ರೇಡಿಯೋ ನಾಟಕ ಯಾವುದು?
- ನೀರಗಂಟಿ ಮಾರ ( ವಿ.ಕೆ.ಶ್ರೀನಿವಾಸನ್ )


371) ಕರ್ನಾಟಕದಲ್ಲಿ ಪ್ರದರ್ಶನಗೊಂಡ ಮೊದಲ ಅಸಂಗತ ನಾಟಕ ಯಾವುದು?
- ಬೊಕ್ಕತಲೆಯ ನರ್ತಕಿ ( ಸುಮತೀಂದ್ರ ನಾಡಿಗ್ )



★'''''★'''''★



★ನಾಡಿನ ಮೊದಲುಗಳು ★

372) ಕರ್ನಾಟಕದ ಮೊಟ್ಟಮೊದಲ ರಾಜವಂಶ ಯಾವುದು?
- ಕದಂಬ


373) ಕರ್ನಾಟಕದಲ್ಲಿ ಕಟ್ಟಲಾದ ಮೊಟ್ಟಮೊದಲ ಕೆರೆ ಯಾವುದು?
- ಚಂದ್ರವಳ್ಳಿ


374) ಕರ್ನಾಟಕದಲ್ಲಿ ನಿರ್ಮಿಸಲಾದ ಮೊದಲ ಶಿಲ್ಪ ಯಾವುದು?
- ನಾಗಶಿಲ್ಪ


375) ಕರ್ನಾಟಕದ ಮೊಟ್ಟಮೊದಲ ಶಾಸನ ಯಾವುದು?
- ಹಲ್ಮಿಡಿ


376) ಕರ್ನಾಟಕದಲ್ಲಿ ನಿರ್ಮಿಸಲಾದ ಮೊಟ್ಟಮೊದಲ ಕೋಟೆ ಯಾವುದು?
- ಬಾದಾಮಿ ಕೋಟೆ


377) ಕರ್ನಾಟಕದಲ್ಲಿ ನಿರ್ಮಿಸಲಾದ ಮೊಟ್ಟಮೊದಲ ಜೈನ ದೇವಾಲಯ ಯಾವುದು?
- ಪ್ರಣವೇಶ್ವರ ದೇವಾಲಯ, ತಾಳಗುಂದ


378) ಕರ್ನಾಟಕದಲ್ಲಿ ಕಟ್ಟಲಾದ ಮೊಟ್ಟಮೊದಲ ಬೌದ್ಧ ವಿಹಾರ ಯಾವುದು?
- ಬನವಾಸಿ


379) ಕರ್ನಾಟಕದ ಅತಿ ಪ್ರಾಚೀನ ಕಲ್ಲಿನ ನಿರ್ಮಿತ ಕಟ್ಟಡ ಯಾವುದು?
- ಹಲಸಿಯ ಜೈನ ಬಸದಿ


380) ಕರ್ನಾಟಕದ ಮೊಟ್ಟಮೊದಲ ವಿಶ್ವವಿದ್ಯಾಲಯ ಯಾವುದು?
- ಮೈಸೂರು ವಿ.ವಿ.


381) ಕರ್ನಾಟಕದ ಮೊಟ್ಟಮೊದಲ ಕಾಲೇಜು ಯಾವುದು?
- ಸೆಂಟ್ರಲ್ ಕಾಲೇಜು, ಬೆಂಗಳೂರು.


382) ಕರ್ನಾಟಕದ ಮೊಟ್ಟಮೊದಲ ವೈದ್ಯಕೀಯ ಕಾಲೇಜು ಯಾವುದು?
- ಮೈಸೂರು.


383) ಕರ್ನಾಟಕದ ಮೊಟ್ಟಮೊದಲ ಪಾಲಿಟೆಕ್ನಿಕ್ ಕಾಲೇಜು ಯಾವುದು?
- ಶ್ರೀ ಜಯಚಾಮರಾಜೇಂದ್ರ ಪಾಲಿಟೆ.



★'''''★'''''★



★ ಖಂಡವಾರು ಅತಿ ದೊಡ್ಡ  ನದಿಗಳು ★


384) ಏಷ್ಯಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಯಾಂಗ್ ಶಿಕಿಯಾಂಗ.


385) ಆಫ್ರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ನೈಲ್.


386) ಉತ್ತರ ಅಮೇರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಮಿಸಿಸಿಪ್ಪಿ.


387) ದಕ್ಷಿಣ ಅಮೇರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಅಮೆಜಾನ್.


388) ಯುರೋಪ ಖಂಡದ ಅತಿ ದೊಡ್ಡ  ನದಿ ಯಾವುದು?
-ಓಲ್ಗಾ.


389) ಆಸ್ಟ್ರೇಲಿಯಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಮುರ್ರೆ.


★ ಭಾರತದ ಮೊದಲ ಮಹಿಳೆಯರು:


390) ಭಾರತದ ರಾಷ್ಟ್ರೀಯ ಕಾಂಗ್ರೆಸನ  ಪ್ರಥಮ ಮಹಿಳಾ ಅಧ್ಯಕ್ಷೆ ಯಾರು?
-ಸರೋಜಿನಿ ನಾಯ್ಡು


391) ಯು.ಎಸ್.ಜನರಲ್ ಅಸೆಂಬ್ಲಿಯ ಅಧ್ಯಕ್ಷರಾದ ಪ್ರಥಮ ಮಹಿಳೆ
-ವಿಜಯಲಕ್ಷ್ಮಿ ಪಂಡಿತ್ .


392) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನಚಾಲಕಿ ಯಾರು?
-ದರ್ಬಾ ಬ್ಯಾನರ್ಜಿ.


393) ಇಂಗ್ಲಿಷ್ ಕಾಲುಮೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ ಯಾರು?
-ಆರತಿಸಹ.

394) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ ಯಾರು?
-ಡಾ|| ಮುತ್ತುಲಕ್ಷ್ಮಿ ರೆಡ್ಡಿ.


395) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ ಯಾರು?
-ಲೈಲಾ ಸೇಠ್.


396) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?
-ಬಚೇಂದ್ರಿ ಪಾಲ್.


397) ಸೇನಾಪದಕ ಪಡೆದ ಮೊದಲ ಮಹಿಳೆ ಯಾರು?
-ಬಿನ್ ಲಾದೇವಿ.


398) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಭಾರತೀಯ ಸುಂದರಿ ಯಾರು?
-ರೀಟಾ ಫೆರಿಯಾ.


399) ಭಾರತದ ಮೊದಲ ಮಹಿಳಾ ಇಂಜಿನಿಯರ್ ಯಾರು?
ಪಿ.ಕೆ. ಥ್ರೇಸಿಯಾ.


400) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ ಯಾರು?
-ಕಲ್ಪನಾ ಚಾವ್ಲಾ


(ಕೃಪೆ: gklights)