"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 23 November 2020

•►(Part 1) ಮಹತ್ವದ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಪದಗಳ ಸಮಾನಾರ್ಥಕ ಪದಗಳು (IAS, KAS ಪರೀಕ್ಷೆಗಳೊಳಗೊಂಡಂತೆ KPSC C Posts Exam, SDA, FDA ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ) :

 •►(Part 1) ಮಹತ್ವದ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಪದಗಳ ಸಮಾನಾರ್ಥಕ ಪದಗಳು (IAS, KAS ಪರೀಕ್ಷೆಗಳೊಳಗೊಂಡಂತೆ KPSC C Posts Exam, SDA, FDA ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ) :
━━━━━━━━━━━━━━━━━━━━━━━━━━━━━━━━━

 

 

Thursday 19 November 2020

•► 2011ರ ಜನಗಣತಿ ಮತ್ತು ಕರ್ನಾಟಕದಲ್ಲಿ ಲಿಂಗ ತಾರತಮ್ಯದ ಪ್ರಾದೇಶಿಕ ಭಿನ್ನತೆ : ಒಂದು ಅವಲೋಕನ. (An Overview : 2011 Census and the Regional Diversity of Gender Discrimination in Karnataka)

 •► 2011ರ ಜನಗಣತಿ ಮತ್ತು ಕರ್ನಾಟಕದಲ್ಲಿ ಲಿಂಗ ತಾರತಮ್ಯದ ಪ್ರಾದೇಶಿಕ  ಭಿನ್ನತೆ : ಒಂದು ಅವಲೋಕನ.
(An Overview : 2011 Census and the Regional Diversity of Gender Discrimination in Karnataka)
━━━━━━━━━━━━━━━━━━━━━━━━━━━━━━━━━━━━━━━━

ಜನಸಂಖ್ಯೆಯ ಬೆಳವಣಿಗೆಯನ್ನು ಅಳತೆ ಮಾಡುವುದು ಮಾತ್ರ ಅದರ ಕೆಲಸವಲ್ಲ. ಒಂದು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಒಳನೋಟಗಳನ್ನು ಅದು ನೀಡುತ್ತಿರುತ್ತದೆ.

ಲಿಂಗ ಸಂಬಂಧಗಳ ಇತಿಮಿತಿಗಳನ್ನು ಅದು ಬಯಲಿಗೆಳೆಯುತ್ತಿರುತ್ತದೆ. ಅದೊಂದು ನೀತಿ-ನಿರ್ದೇಶನ ನೀಡುವ ಸೂಚಿಗಳ ರಾಶಿ.

ನಮ್ಮ ರಾಜ್ಯದ 2011ರ ಜನಗಣತಿಯ ತಾತ್ಪೂರ್ತಿಕ ಮಾಹಿತಿಯನ್ನು ಪ್ರಕಟಿಸಲಾಗಿದೆ. ಲಿಂಗ ಅನುಪಾತ ಮತ್ತು ಅದರಲ್ಲಿನ ಲಿಂಗ ತಾರತಮ್ಯ, ಸಾಕ್ಷರತೆ ಮತ್ತು ಅದಕ್ಕೆ ಸಂಬಂಧಿಸಿದ ಲಿಂಗ ಅಸಮಾನತೆ, ಜನಸಂಖ್ಯೆಯ ಬೆಳವಣಿಗೆಯಲ್ಲಿನ ಪ್ರಾದೇಶಿಕ ಅಸಮತೋಲನ, ಕಾಣೆಯಾದ ಮಹಿಳೆಯರು ಮುಂತಾದ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಜನಗಣತಿ ವರದಿಯು ನೆರವಾಗುತ್ತದೆ.

• ಕೆಲವು ಸೂಚಿಗಳು :

* ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಪ್ರತಿ ಸಾವಿರ ಪುರುಷರಿಗೆ ಎದುರಾಗಿ 2001ರಲ್ಲಿ 965ರಷ್ಟಿದ್ದ ಮಹಿಳೆಯರ ಸಂಖ್ಯೆ 2011ರಲ್ಲಿ 968 ಕ್ಕೇರಿದೆ. ಇದೇನು ಸಮಾಧಾನ ಪಟ್ಟುಕೊಳ್ಳಬಹುದಾದ ಅಥವಾ ಸಾಧನೆಯೆಂದು ಬೀಗಬಹುದಾದ ಸಂಗತಿಯಲ್ಲ.

ಪ್ರತಿ ಸಾವಿರ ಪುರುಷರಿಗೆ ಎದುರಾಗಿ 32 ಮಹಿಳೆಯರು ಕಾಣೆಯಾಗಿದ್ದಾರೆ.

ಇದು ರಾಜ್ಯದ ಜನಸಂಖ್ಯೆಯಲ್ಲಿನ ಮಹಿಳೆಯರ ಕೊರತೆಯನ್ನು ಸೂಚಿಸುತ್ತಿದೆ. ಈ ಕೊರತೆ 2011ರಲ್ಲಿ 9.57 ಲಕ್ಷ.  

* ಕರ್ನಾಟಕದಲ್ಲಿ 0-6 ವಯೋಮಾನದ ಮಕ್ಕಳಲ್ಲಿ ಲಿಂಗ ಅನುಪಾತ 1991ರಲ್ಲಿ  960 ರಷ್ಟಿದ್ದುದು 2001ರಲ್ಲಿ  948ರಷ್ಟಕ್ಕೆ ಮತ್ತು 2011ರಲ್ಲಿ 943ಕ್ಕಿಳಿದಿದೆ.

ಇಲ್ಲಿ  ಪ್ರತಿ ಸಾವಿರ ಗಂಡು ಮಕ್ಕಳಿಗೆ ಕಾಣೆಯಾದ ಹೆಣ್ಣು ಮಕ್ಕಳ ಸಂಖ್ಯೆ 57.

* ರಾಜ್ಯದಲ್ಲಿ ಒಟ್ಟು ಅಕ್ಷರಸ್ಥರ ಸಂಖ್ಯೆ 2011ರಲ್ಲಿ  410.29 ಲಕ್ಷ. ಇದರಲ್ಲಿ ಪುರುಷರ ಪ್ರಮಾಣ ಶೇ 55.59 (228.08 ಲಕ್ಷ)ರಷ್ಟಿದ್ದರೆ ಮಹಿಳೆಯರ ಪ್ರಮಾಣ ಶೇ 44.41(182.21 ಲಕ್ಷ). ಇದು ಲಿಂಗ ತಾರತಮ್ಯದ ಮತ್ತೊಂದು ಸೂಚಿ.

* ನಮ್ಮ ರಾಜ್ಯದಲ್ಲಿ 2011ರಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ 60 ದಾಟದ ಎಂಟು ಜಿಲ್ಲೆಗಳಿವೆ. ಸಾಕ್ಷರತೆಯಲ್ಲಿ  ಲಿಂಗ ಅಸಮಾನತೆಯು 2001ರಲ್ಲಿ ಶೇ 18.66 ಅಂಶಗಳಷ್ಟಿದ್ದುದು 2011 ಶೇ 15.62 ಅಂಶಗಳಿಗೆ ಇಳಿದಿದೆ. ನಮ್ಮ ರಾಜ್ಯದಲ್ಲಿ  ಸಾಕ್ಷರತೆಯಲ್ಲಿ ಲಿಂಗ ಅಸಮಾನತೆಯು ಶೇ 20 ಅಂಶಗಳು ಮತ್ತು ಅದಕ್ಕಿಂತ ಅಧಿಕ ಬಾಗಲಕೋಟೆ, ವಿಜಾಪುರ, ಕೊಪ್ಪಳ, ರಾಯಚೂರು ಮತ್ತು ಯಾದಗಿರ್ ಜಿಲ್ಲೆಗಳಲ್ಲಿದೆ.

* ನಮ್ಮ ರಾಜ್ಯದಲ್ಲಿ 18 ವರ್ಷಕ್ಕಿಂತ ಮೊದಲೇ ಮದುವೆಯಾಗುವ ಮಹಿಳೆಯರ ಪ್ರಮಾಣ 2007-08ರಲ್ಲಿ ಶೇ 25 ರಷ್ಟಿದೆ. ಆದರೆ ಅಂತಹ ಮಹಿಳೆಯರ ಪ್ರಮಾಣ ಕೊಪ್ಪಳ, ಗುಲಬರ್ಗಾ, ವಿಜಾಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶೇ 40ಕ್ಕಿಂತ ಅಧಿಕವಿದೆ.

* ಒಟ್ಟು ಸಂತಾನೋತ್ಪತ್ತಿ ಅಧಿಕವಾಗಿದ್ದರೆ ಅಲ್ಲಿ ಜನಸಂಖ್ಯಾ ಸ್ಫೋಟ ಉಂಟಾಗುತ್ತದೆಯೆಂದು ತಜ್ಞರು ಕಳವಳಪಡುತ್ತಾರೆ. ಮತ್ತೆ ಮತ್ತೆ ಗರ್ಭಿಣಿಯರಾಗುವುದರಿಂದ ಮಹಿಳೆಯರು ಸ್ವಾತಂತ್ರ್ಯದಿಂದ ವಂಚಿತರಾಗುತ್ತಾರೆಂಬುದು ಗಮನಿಸಬೇಕಾದ ಸಂಗತಿಯಾಗಿದೆ.

• ಲಿಂಗ ಅನುಪಾತದಲ್ಲಿ ತಾರತಮ್ಯ

ಪ್ರತಿ ಸಾವಿರ ಪುರುಷರಿಗೆ ಎದುರಿಗೆ ಎಷ್ಟು ಮಹಿಳೆಯರಿದ್ದಾರೆ ಎಂಬುದನ್ನು ಮಾಪನ ಮಾಡುವ ಸೂಚಿಯನ್ನು ಲಿಂಗ ಅನುಪಾತವೆಂದು ಕರೆಯಲಾಗಿದೆ. ಲಿಂಗ ಅನುಪಾತದ ಸಂಖ್ಯೆಯು ಸಾವಿರಕ್ಕಿಂತ ಅಧಿಕವಿರಬೇಕೆಂದು ತಜ್ಞರು ಹೇಳುತ್ತಾರೆ.

ಮಹಿಳೆಯರ ಜೀವನಾಯುಷ್ಯವು ಪುರುಷರ ಜೀವನಾಯುಷ್ಯಕ್ಕಿಂತ ಅಧಿಕವಾಗಿರುತ್ತದೆ. ಯಾವುದೇ ಬಗೆಯ ಪ್ರತಿಕೂಲ ಸಂದರ್ಭದಲ್ಲೂ ಬದುಕುಳಿಯುವ ಸಾಮರ್ಥ್ಯವನ್ನು ಮಹಿಳೆಯರು ಪಡೆದಿರುತ್ತಾರೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆಯು ಪುರುಷರ ಸಂಖ್ಯೆಗಿಂತ ಹೆಚ್ಚಿರಬೇಕೆಂದು ಅಮರ್ತ್ಯಸೆನ್ ವಾದಿಸುತ್ತಾರೆ.

ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯ ಲಿಂಗ ಅನುಪಾತವು 2001ರಲ್ಲಿ 965 ರಷ್ಟಿದ್ದುದು 2011ರಲ್ಲಿ 968ಕ್ಕೇರಿದೆ. ಲಿಂಗ ಅನುಪಾತ ಕನಿಷ್ಠ ಸಾವಿರವಿರಬೇಕೆಂದು ಭಾವಿಸಿದರೂ ಕರ್ನಾಟಕದಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆಯು 2011ರಲ್ಲಿ  9.57 ಲಕ್ಷ. ಲಿಂಗ ತಾರತಮ್ಯಕ್ಕೆ ಇವರೆಲ್ಲ ಬಲಿಯಾಗಿದ್ದಾರೆ. ಲಿಂಗ ಅನುಪಾತ 968 ವಾಸ್ತವವಾಗಿ ಜನಸಂಖ್ಯೆಯಲ್ಲಿರುವ ಮಹಿಳೆಯರ ಕೊರತೆಯನ್ನು ತೋರಿಸುತ್ತದೆ.

ಕರ್ನಾಟಕದಲ್ಲಿ ಲಿಂಗ ಅನುಪಾತ 2001ರಲ್ಲಿ ್ಲ ಸಾವಿರಕ್ಕಿಂತ ಅಧಿಕವಿದ್ದ ಮೂರು ಜಿಲ್ಲೆಗಳೆಂದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಹಾಸನ. ಈ ಗುಂಪಿಗೆ 2011ರಲ್ಲಿ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸೇರಿವೆ. ಈ ಗುಂಪಿನ ಸಂಖ್ಯೆಯು ಅಧಿಕವಾಗಬೇಕು.

• ಮಕ್ಕಳ ಲಿಂಗ ಅನುಪಾತ

ಕರ್ನಾಟಕದಲ್ಲಿ  0-6 ವಯೋಮಾನದ ಮಕ್ಕಳ ಸಂಖ್ಯೆ 1991ರಲ್ಲಿ  74.77 ಲಕ್ಷವಿದ್ದುದು 2001ರಲ್ಲಿ ಅದು 71.82 ಲಕ್ಷಕ್ಕೆ ಇಳಿದಿದೆ. ಅದು ಮತ್ತೆ 2011ರಲ್ಲಿ  68.55 ಲಕ್ಷಕ್ಕೆ ಇಳಿದಿದೆ. ಇದು ನಮ್ಮ ರಾಜ್ಯದಲ್ಲಿ ಒಟ್ಟು ಸಂತಾನೊತ್ಪತ್ತಿಯು ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ. ಆದರೆ ಇದರಲ್ಲಿನ ಲಿಂಗ ತಾರತಮ್ಯವು ಆತಂಕಕಾರಿಯಾಗಿದೆ. ಈ ವಯೋಮಾನದ ಮಕ್ಕಳ ಲಿಂಗ ಅನುಪಾತವು 1991ರಲ್ಲಿ 960ರಷ್ಟಿದ್ದುದು 2001ರಲ್ಲಿ  945ಕ್ಕೆ ಮತ್ತು 2011ರಲ್ಲಿ  ಮತ್ತೆ 943ಕ್ಕಿಳಿದಿದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಶಿಶು ಮರಣ ಪ್ರಮಾಣ (ಐಎಮ್‌ಆರ್)ದಲ್ಲಿನ ಲಿಂಗ ಅಸಮಾನತೆ. ಇಡೀ ದೇಶದಲ್ಲಿ 2008ರಲ್ಲಿ ಹೆಣ್ಣು ಶಿಶುಗಳ ಮರಣ ಪ್ರಮಾಣ (55) ಗಂಡು ಶಿಶುಗಳ ಮರಣ ಪ್ರಮಾಣಕ್ಕಿಂತ (52) ಅಧಿಕವಿದೆ.  ಕರ್ನಾಟಕದಲ್ಲಿ  ಪ್ರತಿ ಸಾವಿರ ಜೀವಂತ ಜನನಗಳಿಗೆ 2008ರಲ್ಲಿ ಗಂಡು ಶಿಶುಗಳ ಮರಣ ಪ್ರಮಾಣ 42ರಷ್ಟಿದ್ದರೆ ಹೆಣ್ಣು ಶಿಶುಗಳ ಮರಣ ಪ್ರಮಾಣ 45. ಲಿಂಗವನ್ನು ಗರ್ಭದಲ್ಲೇ  ಪತ್ತೆ ಮಾಡುವ ತಂತ್ರಜ್ಞಾನದ ಆವಿಷ್ಕಾರದಿಂದ ಹೆಣ್ಣು ಭ್ರೂಣ ಹತ್ಯೆಯ ಸಮಸ್ಯೆಯು ಉಲ್ಬಣಗೊಳ್ಳುತ್ತಿದೆ. ಈ ಸಂಗತಿಯು ಸಮಾಜದಲ್ಲಿ  ಅನೇಕ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳನ್ನು ಹುಟ್ಟುಹಾಕಬಹುದು. ಮತ್ತೆ `ಬಹುಪತಿತ್ವ~ ಕ್ಕೆ ಇದು ಕಾರಣವಾಗಿ ಬಿಡಬಹುದು. ಹೆಣ್ಣಿನ ಮೇಲಿನ ಅತ್ಯಾಚಾರಗಳು ಅಧಿಕವಾಗಬಹುದು. ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಈ ತಾರತಮ್ಯವನ್ನು ಸರಿಪಡಿಸಬೇಕೆಂಬುದು 2011ರ ಜನಗಣತಿಯ ಸಂದೇಶವಾಗಿದೆ.

• ಸಾಕ್ಷರತೆಯಲ್ಲಿ  ಲಿಂಗ ಅಸಮತೋಲನ

 ಲಿಂಗ ತಾರತಮ್ಯವೆನ್ನುವುದು ಜಾಗತಿಕವಾದ ಸಂಗತಿಯೆನ್ನುವುದು ಲಿಂಗ ಸಂಬಂಧಿ ಸಾಕ್ಷರತೆಯ ವಿವರಗಳಿಂದ  ತಿಳಿಯುತ್ತದೆ. ಸ್ಕ್ಯಾಂಡಿನೇವಿಯ ದೇಶಗಳನ್ನು ಬಿಟ್ಟರೆ ಪ್ರಪಂಚದ ಯಾವ ದೇಶದಲ್ಲೂ ಮಹಿಳೆಯರ ಸಾಕ್ಷರತೆಯ ಪ್ರಮಾಣ ಪುರುಷರ ಸಾಕ್ಷರತೆಯ ಪ್ರಮಾಣಕ್ಕೆ ಸಮನಾಗಿಲ್ಲ. ಈ ತಾರತಮ್ಯ ಬಂಡವಾಳಶಾಹಿ ದೇಶಗಳಲ್ಲೂ ಇದೆ, ಸಮಾಜವಾದಿ ದೇಶಗಳಲ್ಲೂ ಇದೆ. ಸರ್ವಾಧಿಕಾರಿ ವ್ಯವಸ್ಥೆಯಲ್ಲೂ ಕಂಡು ಬರುತ್ತದೆ. ಸಾಕ್ಷರತೆಯ ಲಿಂಗ ಸಂಬಂಧಿ ವ್ಯಾಪ್ತಿಯು ಸೀಮಿತವಾದುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಗೆ ಸಮವಾಗಿ ಬಿಟ್ಟರೆ ಲಿಂಗ ತಾರತಮ್ಯವು ನಿವಾರಣೆಯಾಗಿ ಬಿಡುತ್ತದೆಯೇ ಎಂದು ಯಾರೂ ಪ್ರಶ್ನೆ ಕೇಳಬಹುದು. ನಿಜ, ಅದರಿಂದ ತನ್ನಷ್ಟಕ್ಕೆ ತಾನೆ ಲಿಂಗ ಅಸಮಾನತೆಯು ಬಗೆಹರಿದು ಬಿಡುವುದಿಲ್ಲ. ತಮ್ಮ ಸ್ಥಾನಮಾನ ಯಾಕೆ ಕೆಳಮಟ್ಟದಲ್ಲಿದೆ, ತಾವು ಯಾಕೆ ಶೋಷಣೆಗೆ ಒಳಗಾಗಿದ್ದೇವೆ, ನಮ್ಮ ಬದುಕು ಯಾಕೆ ಗಂಡಸರ ಅನುಬಂಧದಂತಿದೆ ಮುಂತಾದ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಮತ್ತು ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಶಿಕ್ಷಣದಿಂದ ಮಹಿಳೆಯರಿಗೆ ಸಾಧ್ಯ.

ಕರ್ನಾಟದಲ್ಲಿ ಲಿಂಗ ಸಂಬಂಧಿ ಅಂತರ 2001ರಲ್ಲಿ  ಶೇ19.23 ಅಂಶಗಳಷ್ಟಿದ್ದುದು 2011ರಲ್ಲಿ ಅದು ಶೇ 14.72 ಅಂಶಕ್ಕಿಳಿದಿದೆ. ಆದರೆ ಇದು ರಾಯಚೂರು ಜಿಲ್ಲೆಯಲ್ಲಿ ಶೇ21.79 ಅಂಶಗಳಷ್ಟಿದ್ದರೆ ಕೊಪ್ಪಳ ಜಿಲ್ಲೆಯಲ್ಲಿ ಅದು ಶೇ21.99 ಅಂಶಗಳಷ್ಟಿದೆ. ಯಾದಗೀರ್ ಜಿಲ್ಲೆಯಲ್ಲಿ ಅದು ಶೇ 22.02ರಷ್ಟಿದೆ. ನಮ್ಮ ರಾಜ್ಯದ ಅತ್ಯಂತ ಹಿಂದುಳಿದ ರಾಯಚೂರು ಜಿಲ್ಲೆಯ ಮಹಿಳೆಯರ ಸಾಕ್ಷರತೆಯು 2011ರಲ್ಲಿ ಶೇ 50 ಮೀರಿಲ್ಲ. ಈ ಸಮಸ್ಯೆಯ ನಿವಾರಣೆಗೆ ಜ್ಲ್ಲಿಲಾ ಮಟ್ಟದಲ್ಲಿ  ಪ್ರಜ್ಞಾಪೂರ್ವಕವಾಗಿ ಪ್ರಯತ್ನ ನಡೆಸಬೇಕು.

• ಜನಸಂಖ್ಯೆಯ ಬೆಳವಣಿಗೆ ಮತ್ತು ಸಂತಾನೋತ್ಪತ್ತಿ ಒತ್ತಡ

ಮಹಿಳೆಯರ ಸಾಕ್ಷರತಾ ಪ್ರಮಾಣ ಮತ್ತು ಜನಸಂಖ್ಯೆಯ ಬೆಳವಣಿಗೆ ಪ್ರಮಾಣಗಳ ನಡುವೆ ವಿಲೋಮ ಬಿಂಬಕ ಸಂಬಂಧವಿದೆ. ಕರ್ನಾಟಕದ 26 ಜಿಲ್ಲೆಗಳಲ್ಲಿ 1991-2001ರ ದಶಕದಿಂದ 2001-2011ರ ದಶಕಗಳ ನಡುವೆ ಜನಸಂಖ್ಯಾ ಬೆಳವಣಿಗೆ ಪ್ರಮಾಣ ಕಡಿಮೆಯಾಗಿದೆ. ಆದರೆ ಯಾದಗಿರ್, ಬಳ್ಳಾರಿ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಅದು ಅಧಿಕಗೊಂಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲೂ ಅದು ಅಧಿಕಗೊಂಡಿದೆ.

ಆದರೆ ಅಲ್ಲಿನ ಕಾರಣ ಬೇರೆ ಇದೆ. ಈ ಮೂರು ಹಿಂದುಳಿದ ಜಿಲ್ಲೆಗಳ ಮಹಿಳೆಯರ ಸಾಕ್ಷರತಾ ಪ್ರಮಾಣ ಕಡಿಮೆ ಇರುವುದಕ್ಕೂ ಮತ್ತು ಅಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಅಧಿಕವಿರುವುದಕ್ಕೂ ನಡುವೆ ಸಂಬಂಧವಿದೆ. ಈ ಜಿಲ್ಲೆಗಳಲ್ಲಿ ಮಹಿಳೆಯರ ಮದುವೆ ವಯಸ್ಸು ಕೆಳಮಟ್ಟದಲ್ಲಿರುವುದರಿಂದ ಮತ್ತು ಮತ್ತೆ ಮತ್ತೆ ಗರ್ಭಿಣಿಯರಾಗಬೇಕಾದ ಒತ್ತಡಕ್ಕೆ ಮಹಿಳೆಯರು ಇಲ್ಲಿ ಒಳಗಾಗುವುದರಿಂದ ಹಿಂದುಳಿದ ಜಿಲ್ಲೆಗಳಲ್ಲಿ ಸಾಕ್ಷರತೆಯ ಲಿಂಗ ಅಸಮಾನತೆ ಪ್ರಮಾಣ ಅಧಿಕವಿದೆ.

ವರಮಾನದ ಆಸ್ಫೋಟಕಾರಿ ವರ್ಧನೆಯಿಂದ ಅಥವಾ ತೀವ್ರಗತಿಯ ಆರ್ಥಿಕ ಅಭಿವೃದ್ಧಿಯಿಂದ ಲಿಂಗ ತಾರತಮ್ಯವನ್ನೆಲ್ಲ ನಿವಾರಣೆ ಮಾಡಿಬಿಡಬಹುದು ಎಂಬ ನಂಬಿಕೆ ವ್ಯಾಪಕವಾಗಿದೆ. ಆದರೆ ಅದು ಹುಸಿ ಎಂಬುದು ಅನೇಕ ಅಧ್ಯಯನಗಳಿಂದ ಸ್ಪಷ್ಟವಾಗಿದೆ. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳ ತಲಾ ವರಮಾನದ ಮಟ್ಟವು ಬಳ್ಳಾರಿ ಜಿಲ್ಲೆಯ ತಲಾ ವರಮಾನದ ಮಟ್ಟಕ್ಕಿಂತ ಬಹಳಷ್ಟು ಕಡಿಮೆ ಇದೆ. ಆದರೆ ಅವು ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಿವೆ. ಮಹಿಳೆಯರ ಮದುವೆಯ ವಯಸ್ಸು ಅಲ್ಲಿ ಅಧಿಕವಿದೆ. ಅಲ್ಲಿ ಮಹಿಳೆಯರ ಸಾಪೇಕ್ಷ ಸಾಕ್ಷರತೆಯ ಪ್ರಮಾಣ ಬಳ್ಳಾರಿ ಜಿಲ್ಲೆಯಲ್ಲಿರುವುದ್ಕಕಿಂತ ಅಧಿಕವಿದೆ.

• ಜನಗಣತಿ 2011ರ ಸಂದೇಶವೇನು?

ನಮ್ಮ ರಾಜ್ಯದ 2011ರ ಜನಗಣತಿ ಸಂದೇಶ ಸ್ಪಷ್ಟವಾಗಿದೆ. ಲಿಂಗ ತಾರತಮ್ಯವೆನ್ನುವುದು ತನ್ನಷ್ಟಕ್ಕೆ ತಾನೆ ಅಥವಾ ವರಮಾನ ಏರಿಕೆಯಾಗಿ ಬಿಟ್ಟರೆ ನಿವಾರಣೆಯಾಗಿ ಬಿಡುತ್ತದೆ ಎಂಬುದು ಖಚಿತವಾಗಿಲ್ಲ. ಅದನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಬೇಕಾಗಿದೆ. ತಕ್ಷಣ 0-6 ವಯೋಮಾನದ ಮಕ್ಕಳ ಲಿಂಗ ಅನುಪಾತದಲ್ಲಿನ ಕುಸಿತವನ್ನು ತಡೆಯಲು ತೀವ್ರ ಪ್ರಯತ್ನ ನಡೆಸಬೇಕು. ಲಿಂಗವನ್ನು ಹೊಟ್ಟೆಯಲ್ಲಿಯೇ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಅಪರಾಧದ ಕಾುದೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು.

ಲಿಂಗ ತಾರತಮ್ಯದ ಪ್ರ್ರಾದೇಶಿಕ  ಭಿನ್ನತೆಯ ಬಗ್ಗೆ ನಾವು ಹೆಚ್ಚು ಗಮನ ನೀಡುತ್ತಿಲ್ಲ. ಶಿಕ್ಷಣದ ಮಟ್ಟ, ವರಮಾನದ ಮಟ್ಟ, ನಗರೀಕರಣದ ಪ್ರಮಾಣ ಉತ್ತಮವಾಗಿ ಬಿಟ್ಟರೆ ಲಿಂಗ ಅಸಮಾನತೆಯು ನಿವಾರಣೆಯಾಗುವುದಿಲ್ಲ ಎಂಬ ಸಂಗತಿಯನ್ನು ಅಮರ್ತ್ಯಸೆನ್ ತನ್ನ ಅಧ್ಯಯನಗಳಲ್ಲಿ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದಾರೆ.  ಈ ಸಮಸ್ಯೆಯನ್ನು ನಾವು ಮೊದಲು ಸಮಸ್ಯೆಯೆಂದು ಗುರುತಿಸಬೇಕು. ಅದರ ಬಗ್ಗೆ ಜನಜಾಗೃತಿಯನ್ನು ಉಂಟು ಮಾಡಬೇಕು. ಈ ಸಮಸ್ಯೆಯ ನಿವಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೇವಲ ಅಂಕಿ-ಅಂಶಗಳ ರಾಶಿಯೆಂದು ನಾವು ಜನಗಣತಿ ವರದಿಗಳನ್ನು ನಿರ್ಲಕ್ಷಿಸುವುದು ಸಲ್ಲ. ಅದು ನಮಗೆ ಅನೇಕ ಸಂದೇಶಗಳನ್ನು ಪ್ರತ್ಯಕ್ಷವಾಗಿ ಮತ್ತು ಅಗೋಚರವಾಗಿ ನೀಡುತ್ತಿರುತ್ತದೆ. ಅದನ್ನು ಅರ್ಥ ಮಾಡಿಕೊಂಡು ನಾವು ಕಾರ್ಯ ಪ್ರವತ್ತರಾಗಬೇಕಾಗುತ್ತದೆ.
(ಕೃಪೆ : ಪ್ರಜಾವಾಣಿ)

Thursday 12 November 2020

•► ಭಾರತದಲ್ಲಿನ ರೈತರ ಮೇಲೆ ಜಾಗತೀಕರಣದ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಚರ್ಚಿಸಿ. (ಸಾಮಾನ್ಯ ಅಧ್ಯಯನ : 2) (Discuss the positive and negative effects of globalization on farmers in India)

 •► ಭಾರತದಲ್ಲಿನ ರೈತರ ಮೇಲೆ ಜಾಗತೀಕರಣದ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಚರ್ಚಿಸಿ. (ಸಾಮಾನ್ಯ ಅಧ್ಯಯನ : 2)
(Discuss  the positive and negative effects of  globalization on farmers in India)

━━━━━━━━━━━━━━━━━━━━━━━━━━━━━━━━━━
 ★ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಮಾದರಿ ಪ್ರಶ್ನೋತ್ತರಗಳು.
(KAS/IAS Mains answer writing in Kannada)
 
★ಸ್ಪರ್ಧಾರ್ಥಿಗಳಲ್ಲಿ ಸೂಚನೆ -

ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ ಇಲ್ಲಿ  ಮಾದರಿ ಪ್ರಶ್ನೆಯನ್ನು ಉತ್ತರದೊಂದಿಗೆ ನೀಡಲಾಗಿದ್ದು, ಇಲ್ಲಿ ವ್ಯಕ್ತಪಡಿಸಿದ ವಿಚಾರವು ಹಲವು ನಂಬಲರ್ಹವಾದ ಮೂಲಗಳಿಂದ ಸಂಗ್ರಹಿಸಿ, ನನ್ನ ಸ್ವಂತ ಅಭಿಪ್ರಾಯದೊಂದಿಗೆ ಮಂಡಿಸಲಾಗಿರುವುದು. ಈ ಕೆಳಗೆ ನೀಡಲಾದ ಮಾಹಿತಿಯು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇದೇ ಅಂತಿಮವಲ್ಲ!

ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)








✦ ದಿನನಿತ್ಯ (12-11-2020) The Hindu ದಿನಪತ್ರಿಕೆಯಿಂದ ಆಯ್ದ 10 ಮಹತ್ವದ ಇಂಗ್ಲಿಷ್ ವ್ಯಾಕರಣ ಶಬ್ದಗಳು : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ) (The Hindu Newspaper Vocabulary For All Competitive Exams)

 ✦ ದಿನನಿತ್ಯ (12-11-2020) The Hindu ದಿನಪತ್ರಿಕೆಯಿಂದ ಆಯ್ದ 10 ಮಹತ್ವದ ಇಂಗ್ಲಿಷ್ ವ್ಯಾಕರಣ ಶಬ್ದಗಳು : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
(The Hindu Newspaper Vocabulary For All Competitive Exams)

━━━━━━━━━━━━━━━━━━━━━━━━━━━━━━━
 
 
1. VIBRANT (ADJECTIVE): (ಲವಲವಿಕೆಯ, ರೋಮಾಂಚಕ, ಚೈತನ್ಯಶೀಲ, ಉತ್ಸಾಹಭರಿತ ): energetic

Synonyms: spirited, virile

Antonyms: dispirited, lethargic

Example Sentence:

The rich merchants are a part of a vibrant economy. 


2. CHASM (NOUN): (ಕಮರಿ, ಆಳವಾದ ಹಳ್ಳ, ಆಳವಾದ ಕಂದಕ, ಕುಳಿ): gap

Synonyms: crater, rift

Antonyms: closure, juncture

Example Sentence:

The chasm between the rich and poor has grown wider over the last decade. 


3. FUGITIVE (ADJECTIVE): (ಗಡಿಪಾರಾದ, ದೇಶಭ್ರಷ್ಠ): person escaping law

Synonyms: escapee, outlaw

Antonyms: enduring, confronting

Example Sentence:

The fugitive don rarely left his cabin to avoid any social contact. 


4. ADUMBRATE (VERB): (ನಿರೀಕ್ಷಿಸಲಾಗುವ,  ಮುನ್ಸೂಚಿಸಿದ, ಸ್ಥೂಲಚಿತ್ರಣ): foreshadow

Synonyms: outline, darken

Antonym: illuminate, light up

Example Sentence:

The setting sun adumbrates the bridge to create a scenic view. 


5. RAUCOUS (ADJECTIVE): (ಗಡುಸಾದ, ಕಿವಿಗೆ ಅಹಿತವಾದ, ಒರಟಾದ, ಉಗ್ರ): noisy

Synonyms: discordant, loud

Antonyms: mild, quiet

Example Sentence:

Her birthday parties were raucous but fun. 
 

6. CONSORT (NOUN): (ಧರ್ಮ ಪತ್ನಿ, ಅರ್ಧಾಂಗಿಯಾದ): concomitant

Synonyms: companion, mate

Antonyms: enemy, adversary

Example Sentence:

He is my true consort. 


7. ATTUNE (VERB): (ಲಯದಲ್ಲಿರು, ಸರಿಹೊಂದಿಸು, ಅವಕಾಶ ಕಲ್ಪಿಸುವ): accommodate

Synonyms: accustom, adapt

Antonyms: disarrange, disagree

Example Sentence:

Students are not attuned to making decisions.
 

8. CREDENCE (NOUN): (ಸ್ವೀಕೃತಿ): acceptance

Synonyms: assurance, certainty

Antonyms: denial, disbelief

Example Sentence:

If a person wants to give credence to his business, he should develop a company website. 


9. WHIP (VERB): (ನೆಲಕ್ಕಪ್ಪಳಿಸು, ಹೊಡೆ): bash

Synonyms: beat, lash

Antonyms: compliment, praise

Example Sentence:

He was whipped badly. 


10. CONTINUAL (ADJECTIVE): (ನಿರಂತರ): ceaseless

Synonyms: continuous, enduring

Antonyms: finished, end

Example Sentence:

Your words are the source of continual inspiration.

•► ಬುಡಕಟ್ಟು / ಆದಿವಾಸಿ ಜನಸಂಖ್ಯೆಯ ಮೇಲಿನ ನಗರೀಕರಣದ ಪ್ರಭಾವವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ. (ಸಾಮಾನ್ಯ ಅಧ್ಯಯನ : 1) (Critically examine the impact of urbanization on tribal populations)

 •► ಬುಡಕಟ್ಟು / ಆದಿವಾಸಿ ಜನಸಂಖ್ಯೆಯ ಮೇಲಿನ  ನಗರೀಕರಣದ ಪ್ರಭಾವವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ. (ಸಾಮಾನ್ಯ ಅಧ್ಯಯನ : 1)
(Critically examine the impact of urbanization on  tribal populations)

━━━━━━━━━━━━━━━━━━━━━━━━━━━━━━━
 
 
★ಸ್ಪರ್ಧಾರ್ಥಿಗಳಲ್ಲಿ ಸೂಚನೆ -

ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ ಇಲ್ಲಿ  ಮಾದರಿ ಪ್ರಶ್ನೆಯನ್ನು ಉತ್ತರದೊಂದಿಗೆ ನೀಡಲಾಗಿದ್ದು, ಇಲ್ಲಿ ವ್ಯಕ್ತಪಡಿಸಿದ ವಿಚಾರವು ಹಲವು ನಂಬಲರ್ಹವಾದ ಮೂಲಗಳಿಂದ ಸಂಗ್ರಹಿಸಿ, ನನ್ನ ಸ್ವಂತ ಅಭಿಪ್ರಾಯದೊಂದಿಗೆ ಮಂಡಿಸಲಾಗಿರುವುದು. ಈ ಕೆಳಗೆ ನೀಡಲಾದ ಮಾಹಿತಿಯು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇದೇ ಅಂತಿಮವಲ್ಲ!


ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


 

Wednesday 11 November 2020

✦ ದಿನನಿತ್ಯ (11-11-2020) The Hindu ದಿನಪತ್ರಿಕೆಯಿಂದ 10 ಮಹತ್ವದ ಇಂಗ್ಲಿಷ್ ವ್ಯಾಕರಣ ಶಬ್ದಗಳು : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ) (The Hindu Newspaper Vocabulary For All Competitive Exams)

 ✦ ದಿನನಿತ್ಯ (11-11-2020) The Hindu ದಿನಪತ್ರಿಕೆಯಿಂದ 10 ಮಹತ್ವದ ಇಂಗ್ಲಿಷ್ ವ್ಯಾಕರಣ ಶಬ್ದಗಳು : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
(The Hindu Newspaper Vocabulary For All Competitive Exams)

━━━━━━━━━━━━━━━━━━━━━━━━━━━━━━━
 

1. INFIRM (ADJECTIVE): (ದುರ್ಬಲವಾದ, ನಿಶ್ಯಕ್ತವಾದ): frail

Synonyms: weak, feeble

Antonyms: strong

Example Sentence:

Those who are old or infirm aren't allowed ro travel.

 

2. NULLIFY (VERB): (ಅಮಾನ್ಯಗೊಳಿಸು, ಇಲ್ಲದಾಗಿಸು, ತೊಡೆದು ಹಾಕು, ರದ್ದುಮಾಡಬಹುದು): annul

Synonyms: void, invalidate

Antonyms: ratify

Example Sentence:

Judges were unwilling to nullify government decisions.


3. ASSERTIVE (ADJECTIVE): (ಆತ್ಮ ವಿಶ್ವಾಸಿ, ಸ್ವ-ಸಮರ್ಥನೀಯ): confident

Synonyms: forceful, self-confident

Antonyms: retiring

Example Sentence:

The job of a salesman calls for assertive behaviour.



4. AMID (PREPOSITION): (ರ ಮಧ್ಯದಲ್ಲಿ, ರ ನಡುವೆ): in the middle of

Synonyms: among, between

Antonyms: surrounding

Example Sentence:

Our dream home, set amid magnificent rolling countryside.



5. INQUISITIVE (ADJECTIVE): (ಜಿಜ್ಞಾಸೆಯ,ಶೋಧನೆ ಮಾಡುವ, ಅನ್ವೇಷಣಶೀಲ): curious

Synonyms: intrigued, interested

Antonyms: uninterested

Example Sentence:

I didn't like to seem inquisitive.



6. TANGLE (VERB): (ಗಲಿಬಿಲಿಮಾಡು, ಗೊಂದಲಕ್ಕೀಡುಮಾಡು): confuse

Synonyms: jumble, mix up

Antonyms: simple

Example Sentence:

His ideas tangled matters even further.



7. ECONOMICAL (ADJECTIVE): (ಆರ್ಥಿಕ, ಮಿತವ್ಯಯದ): cost-effective

Synonyms: effective, efficient

Antonyms: extravagant

Example Sentence:

Solar power may provide a more economic solution.

 

8. ABATE (VERB): (ಇಳಿದುಹೋಗು, ನ್ಯೂನವಾಗು, ಕಡಿಮೆಯಾಗು): subside

Synonyms: lessen, let up

Antonyms: intensify

Example Sentence:

The storm had suddenly abated to a huge extent.



9. PREMIUM (NOUN): (ವರಿಷ್ಠ): superior

Synonyms: premier, high-end

Antonyms: inferior

Example Sentence:

Premium vine and good music is all he needs for a good weekend.


10. EXQUISITE (ADJECTIVE): (ಅತಿ ಸುಂದರ): beautiful

Synonyms: lovely, elegant

Antonyms: crude

Example Sentence:

The place was filled with exquisite, jewel- like portraits.

Monday 9 November 2020

✦ Page 5 - ಸಾಮಾನ್ಯ ಅಧ್ಯಯನ / ಜನರಲ್ ಸ್ಟಡೀಜ್ ನೋಟ್ಸ್ (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ) (General Studies Notes for all Competitive Exams)

 ✦ Page 5 - ಸಾಮಾನ್ಯ ಅಧ್ಯಯನ / ಜನರಲ್ ಸ್ಟಡೀಜ್ ನೋಟ್ಸ್ (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ)
(General Studies Notes for all Competitive Exams)

━━━━━━━━━━━━━━━━━━━━━━━━━━━━━━
 
30. ಸಂವಿಧಾನ ತಿದ್ದುಪಡಿ 
 
31. ಸರ್. ಎಂ.ವಿಶ್ವೇಶ್ವರಯ್ಯ

32. ಅಮೋಘವರ್ಷ ನೃಪತುಂಗ .

33. ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರು 
 
34. ಅಧಿಕ ಭರತಗಳು 
 
35. ಪಾರ್ಕಿನ್‌ಸನ್ ಕಾಯಿಲೆ 

36. ದೇಶದಲ್ಲಿ ಪ್ರಸ್ತುತ 4 ಜೀವ ವೈವಿಧ್ಯ ಕೇಂದ್ರಗಳು.

37. ನುಗು ವನ್ಯಜೀವಿ ಅಭಯಾರಣ್ಯ (Nugu Wildlife Sanctuary )  



Thursday 5 November 2020

✦ ದಿನನಿತ್ಯ (05-11-2020) The Hindu ದಿನಪತ್ರಿಕೆಯಿಂದ 10 ಮಹತ್ವದ ಇಂಗ್ಲಿಷ್ ವ್ಯಾಕರಣ ಶಬ್ದಗಳು : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ) (The Hindu Newspaper Vocabulary For All Competitive Exams)

 ✦ ದಿನನಿತ್ಯ (05-11-2020) The Hindu ದಿನಪತ್ರಿಕೆಯಿಂದ 10 ಮಹತ್ವದ ಇಂಗ್ಲಿಷ್ ವ್ಯಾಕರಣ ಶಬ್ದಗಳು : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
(The Hindu Newspaper Vocabulary For All Competitive Exams)

━━━━━━━━━━━━━━━━━━━━━━━━━━━━━━━

 
1. SUBSEQUENT (ADJECTIVE): (ಅನಂತರದ / ಮುಂಬರುವ / ಮುಂದಿನ): following

Synonyms: ensuing, succeeding

Antonyms: previous

Example Sentence:

The theory was developed subsequent to the earthquake of 1906.


 
2. INCUMBENT (ADJECTIVE): (ಪ್ರಸ್ತುತ / ಅಸ್ತಿತ್ವದಲ್ಲಿರುವ ): current

Synonyms: existing, present

Antonyms: past

Example Sentence:

The incumbent President had been defeated.


 
3. ABROGATION (NOUN): (ನಿರಾಕರಣೆ / ಅನಂಗೀಕಾರ / ರದ್ದುಗೊಳಿಸುವಿಕೆ): repudiation

Synonyms: revocation, repeal

Antonyms: institution

Example Sentence:

The ministry proposed for the abrogation of the electoral law of 1850.

 
4. HALT (VERB): (ತಂಗುವುದು / ಕೊನೆಗೊಳಿಸು / ನಿಲ್ಲಿಸು): stop

Synonyms: come to rest, pull up

Antonyms: start

Example Sentence:

There is growing pressure to halt the bloodshed. 


5. DEPRESS (VERB): (ನಿಗ್ರಹಿಸು / ಹತ್ತಿಕ್ಕು): slow down

Synonyms: reduce, lower

Antonyms: encourage

Example Sentence:

Fear of inflation in America depressed bond markets.
 

6. CONSERVATIVE (ADJECTIVE): (ಸಾಂಪ್ರದಾಯವಾದಿ): traditionalist

Synonyms: traditional, conventional

Antonyms: radical

Example Sentence:

They were very conservative in their outlook. 


7. SETBACK (NOUN): (ತೊಂದರೆ / ಸಮಸ್ಯೆ): problem

Synonyms: difficulty, issue

Antonyms: breakthrough

Example Sentence:

There was a serious setback for the peace. 


8. UPHOLD (VERB): (ಆಧಾರವಾಗಿರು / ಕಾಪಾಡು): maintain

Synonyms: sustain, continue

Antonyms: abandon

Example Sentence:

They uphold a tradition of not causing distress to living creatures. 


9. INCAPACITATE (VERB): (ಅಸಮರ್ಥ/ ಅಶಕ್ತ ): disabled

Synonyms: debilitated, indisposed

Antonyms: fit

Example Sentence:

He was incapacitated by a heart attack. 


10. PUERILE (ADJECTIVE): (ಬಾಲಿಶ / ಹುಡುಗುತನದ): childish

Synonyms: immature, infantile

Antonyms: mature

Example Sentence:

We had a puerile argument.

Tuesday 3 November 2020

✦ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ದಿನನಿತ್ಯ (03-11-2020) The Hindu ದಿನಪತ್ರಿಕೆಯಿಂದ 10 ಮಹತ್ವದ ಇಂಗ್ಲಿಷ್ ವ್ಯಾಕರಣ ಶಬ್ದಗಳು : (Daily 'The Hindu Newspaper' Vocabulary For All Competitive Exams)

✦ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ದಿನನಿತ್ಯ (03-11-2020) The Hindu ದಿನಪತ್ರಿಕೆಯಿಂದ 10 ಮಹತ್ವದ ಇಂಗ್ಲಿಷ್ ವ್ಯಾಕರಣ ಶಬ್ದಗಳು :
(Daily 'The Hindu Newspaper' Vocabulary For All Competitive Exams)

━━━━━━━━━━━━━━━━━━━━━━━━━━━━━━━

 
1. STAUNCH (ADJECTIVE):(ನಿಷ್ಠಾವಂತ): stalwart

Synonyms: loyal, faithful

Antonyms: disloyal

Example Sentence:

He is known for being a staunch supporter of the anti-nuclear lobby. 


2. NEEDLESS (ADJECTIVE): (ಅನುಪಯುಕ್ತ): unnecessary

Synonyms: inessential, non-essential

Antonyms: necessary

Example Sentence:

I deplore needless waste. 
 

3. REBELLION (NOUN): (ದಂಗೆ): defiance

Synonyms: disobedience, insubordination

Antonyms: obedience

Example Sentence:

What she did was nothing but an act of teenage rebellion. 


4. HASTEN (VERB): (ಬೇಗ ಮಾಡು): speed up

Synonyms: accelerate, quicken

Antonyms: delay

Example Sentence:

This tragedy probably hastened his own death from heart disease. 
 

5. OUTRAGEOUS (ADJECTIVE): (ಅತಿರೇಕದ,  ಅನನ್ಯ/ಅದ್ಭುತ): eye-catching

Synonyms: startling, striking

Antonyms: inconspicuous

Example Sentence:

Her routines and leotards tend to be outrageous. 
 

6. LAX (ADJECTIVE): (ಅಜಾಗರೂಕ / ಸಡಿಲವಾದ / ಬಿಗಿಯಿಲ್ಲದ): slack

Synonyms: slipshod, negligent

Antonyms: stern

Example Sentence:

We must ever be lax with our security. 
 

7. DIRE (ADJECTIVE): (ಭಯಾನಕ / ಭೀಕರ): terrible

Synonyms: dreadful, appalling

Antonyms: good

Example Sentence:

Misuse of drugs can have dire outcomes. 
 

8. DISENGAGE (VERB): (ಹಿಂತೆದುಕೊಳ್ಳುವುದು): withdraw

Synonyms: leave, pull out of

Antonyms: enter

Example Sentence:

The commanders disengaged their forces. 
 

9. REPRIEVE (VERB): (ಶಿಕ್ಷೆಯನ್ನು ಅಮಾನತುಗೊಳಿಸುವುದು): pardon

Synonyms: spare, acquit

Antonyms: charge

Example Sentence:

He was sentenced to death but then reprieved. 
 

10. DEFECTION (NOUN): (ಪಕ್ಷತ್ಯಾಗ / ಪಕ್ಷಾಂತರ): desertion

Synonyms: absconding, decamping

Antonyms: joining

Example Sentence:

One defection from the government dissolved Temaru's majority.

Monday 2 November 2020

Sunday 1 November 2020

✦ Page 4 - ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅಧ್ಯಯನ / ಜನರಲ್ ಸ್ಟಡೀಜ್ ನೋಟ್ಸ್ (General Studies Notes for all Competitive Exams)

 ✦ Page 4 - ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅಧ್ಯಯನ / ಜನರಲ್ ಸ್ಟಡೀಜ್ ನೋಟ್ಸ್
(General Studies Notes for all Competitive Exams)

━━━━━━━━━━━━━━━━━━━━━━━━━━━━━━━

24. ಕರಾವಳಿ ನಿಯಂತ್ರಣ ವಲಯ (CRZ)  ವಿಭಾಗಗಳು

25. ಕನಿಷ್ಠ ಭರತಗಳು

26. ‘ಶ್ರಮಬಲದ ಅನಿಶ್ಚಿತತೆ’ (Casualisation of Work force)

27. ಅಕ್ಷಾಂಶ & ರೇಖಾಂಶ

28.‘ಚೌತ್’ ಮತ್ತು 'ಸರ್ದೇಶ್‍ಮುಖಿ'.

29.ಸರ್ವೋಚ್ಚ ನ್ಯಾಯಾಲಯ

... ಮುಂದುವರೆಯುವುದು.
 
 

 

Saturday 31 October 2020

● (PART III) ಜಾಗತಿಕವಾಗಿ ಪ್ರಕಟಗೊಳ್ಳುವ ಪ್ರಮುಖ ಜಾಗತಿಕ ಸೂಚ್ಯಂಕಗಳು / ವರದಿಗಳು. (Important Reports Published by International Organisations Globally)

 ● (PART III) ಜಾಗತಿಕವಾಗಿ ಪ್ರಕಟಗೊಳ್ಳುವ ಪ್ರಮುಖ ಜಾಗತಿಕ ಸೂಚ್ಯಂಕಗಳು / ವರದಿಗಳು.  
(Important Reports Published by International Organisations Globally)

━━━━━━━━━━━━━━━━━━━━━━━━━━━━━━━━━


13) ಜಾಗತಿಕ ಶಾಂತಿ ಸೂಚ್ಯಂಕ (Global Peace Index)

14) ಉದ್ಯಮಸ್ನೇಹಿ ಉಪಕ್ರಮಗಳ ಜಾಗತಿಕ ಶ್ರೇಯಾಂಕ / 'ಈಸ್ ಆಫ್ ಡೂಯಿಂಗ್ ಬಿಸಿನೆಸ್ ಸೂಚ್ಯಂಕ' (Ease of Doing Business)

15) ಜಾಗತಿಕ ಮಾನವ ಬಂಡವಾಳ ಸೂಚ್ಯಂಕ (Global Human Capital Index)

16) ಜಾಗತಿಕ ಪ್ರವಾಸ ಮತ್ತು ಪ್ರವಾಸೋದ್ಯಮ (TTCI) ಸ್ಪರ್ಧಾತ್ಮಕತೆ ಸೂಚ್ಯಂಕ.

17) ಸಾಮಾಜಿಕ ಸ್ಥಿತ್ಯಂತರ ಸೂಚ್ಯಂಕ / ಸೋಷಿಯಲ್‌ ಮೊಬಿಲಿಟಿ ಇಂಡೆಕ್ಸ್‌ (Global Social Mobility Index)

18) ಜಾಗತಿಕ ಲಿಂಗ ಅಸಮಾನತೆ (ಗ್ಲೋಬಲ್‌ ಜೆಂಡರ್‌ ) ಸೂಚ್ಯಂಕ
 
 
 


Friday 30 October 2020

● (PART II) ಜಾಗತಿಕವಾಗಿ ಪ್ರಕಟಗೊಳ್ಳುವ ಪ್ರಮುಖ ಜಾಗತಿಕ ಸೂಚ್ಯಂಕಗಳು / ವರದಿಗಳು. (Important Reports Published by International Organisations Globally)

 ● (PART II) ಜಾಗತಿಕವಾಗಿ ಪ್ರಕಟಗೊಳ್ಳುವ ಪ್ರಮುಖ ಜಾಗತಿಕ ಸೂಚ್ಯಂಕಗಳು / ವರದಿಗಳು.   
(Important Reports Published by International Organisations Globally)

━━━━━━━━━━━━━━━━━━━━━━━━━━━━━━━━━━━━━━━━

7) ಜಾಗತಿಕ ಆವಿಷ್ಕಾರ ಸೂಚ್ಯಂಕ (global innovation index-ಜಿಐಐ)

8) ಜಾಗತಿಕ ಭ್ರಷ್ಟಚಾರ ಪಾರದರ್ಶಕ ಗ್ರಹಿಕಾ ಸೂಚ್ಯಂಕ (ಸಿಪಿಐ-2019) (Global Corruption Perception Index)

9) ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ (World Press Freedom Index)

10) ಜಾಗತಿಕ ಆಹಾರ ಭದ್ರತೆಯ ಸೂಚ್ಯಂಕ (Global Food Security Index (GFSI))

11) ಜಾಗತಿಕ ‘ಸಮಗ್ರ ಸಮೃದ್ಧಿ’ ಸೂಚ್ಯಂಕ (ಗ್ಲೋಬಲ್ ಪ್ರಾಸ್ಪರಿಟಿ ಇಂಡೆಕ್ಸ್)

12) ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ (Global Economic Freedom Index 2020)

...ಮುಂದುವರೆಯುವುದು. 

 

 


 

 

 

Wednesday 28 October 2020

● (PART I) ಜಾಗತಿಕವಾಗಿ ಪ್ರಕಟಗೊಳ್ಳುವ ಪ್ರಮುಖ ಜಾಗತಿಕ ಸೂಚ್ಯಂಕಗಳು / ವರದಿಗಳು. (Important Reports Published by International Organisations Globally)

 ● (PART I) ಜಾಗತಿಕವಾಗಿ ಪ್ರಕಟಗೊಳ್ಳುವ ಪ್ರಮುಖ ಜಾಗತಿಕ ಸೂಚ್ಯಂಕಗಳು / ವರದಿಗಳು.   
(Important Reports Published by International Organisations Globally)

━━━━━━━━━━━━━━━━━━━━━━━━━━━

 1) ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ
(Global Democracy Index)
 
2) ಮಾನವ ಅಭಿವೃದ್ಧಿ ಸೂಚ್ಯಂಕ (HDI)

3) ವಿಶ್ವ ಸೂಕ್ಷ್ಮತೆ ಸೂಚ್ಯಂಕ / ಸಮಗ್ರ ಸೂಕ್ಷ್ಮ ದೇಶಗಳ ಸೂಚ್ಯಂಕ (FSI)

4) ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕ ((ಜಿಸಿಐ) - Global Competitiveness Index)

5) ಸುಸ್ಥಿರತೆ ಹಾಗೂ ಮಕ್ಕಳ ಅಭಿವೃದ್ಧಿ ಸೂಚ್ಯಂಕ (Sustainability and Child Flourishing Index)

6) ಜಾಗತಿಕ ಹಸಿವು ಸೂಚ್ಯಂಕ
(Global Hunger Index)

...ಮುಂದುವರೆಯುವುದು.





Monday 26 October 2020

✦ Page 3 - ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅಧ್ಯಯನ / ಜನರಲ್ ಸ್ಟಡೀಜ್ ನೋಟ್ಸ್ (General Studies Notes for all Competitive Exams)

 ✦ Page 3 - ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅಧ್ಯಯನ / ಜನರಲ್ ಸ್ಟಡೀಜ್ ನೋಟ್ಸ್
(General Studies Notes for all Competitive Exams)

━━━━━━━━━━━━━━━━━━━━━━━━━━━━━━━━━━━━━━━━

16. ಪ್ರಪಂಚದ ಪ್ರಮುಖ, ಹುಲ್ಲುಗಾವಲು / ಸಸ್ಯವರ್ಗಗಳು.
17. 'ನಿರ್ವಿಕ್' (NIRVIK).
18. ಅಲ್ಲಾವುದ್ದೀನ್ ಖಿಲ್ಜಿಯ ತೆರಿಗೆಗಳು.
19. ಒಟ್ಟು ಕೋಶೀಯ ಕೊರತೆ.
20. ಭಾರತದ ಕಡಲ ಗಡಿಗಳು.
21. ಜಗತ್ತಿನ ಪ್ರಮುಖ ಜಲಪಾತಗಳು.
22. ಮಾರುತಗಳ ಚಲನೆ.
23.ವಿಶ್ವಸಂಸ್ಥೆಯ ಮರುಭೂಮೀಕರಣ ವಿರುದ್ಧ ಸಮರ ಕುರಿತ 14ನೇ ಸಮ್ಮೇಳನ -ಸಿಒಪಿ 14-2019


...ಮುಂದುವರೆಯುವುದು.






Sunday 25 October 2020

✦ Page 2 - ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅಧ್ಯಯನ / ಜನರಲ್ ಸ್ಟಡೀಜ್ ನೋಟ್ಸ್ (General Studies Notes for all Competitive Exams)

 ✦ Page 2 - ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅಧ್ಯಯನ / ಜನರಲ್ ಸ್ಟಡೀಜ್ ನೋಟ್ಸ್
(General Studies Notes for all Competitive Exams)

━━━━━━━━━━━━━━━━━━━━━━━━━━━━━━━━━━━━━━━━


8. ಇತ್ತೀಚೆಗೆ ಅರೇಬಿಯನ್ ಸಮುದ್ರದಲ್ಲಿ ಕಂಡುಬಂದ ಚಂಡಮಾರುತಗಳು.
9. ಇತ್ತೀಚೆಗೆ ಬಂಗಾಳ ಕೊಲ್ಲಿ ಕಂಡುಬಂದ ಚಂಡಮಾರುತಗಳು
10. ಮಾರುತಗಳು
11. ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಪ್ರಮುಖ ಪ್ರವಾಸಿಗರು
12. ಲೋಹಾಭಗಳು
13. ವೈಯಕ್ತಿಕ ವರಮಾನ (PI)
14. ಇತ್ತೀಚೆಗೆ ಸುದ್ದಿಯಲ್ಲಿದ್ದ ಕೆಲವು ಪ್ರಮುಖ ಸೇತುವೆಗಳು ಮತ್ತು ಸುರಂಗಗಳು
15. ‘ದಾಗ್’ & 'ಹುಲಿಯ'


... ಮುಂದುವರೆಯುವುದು.




Saturday 24 October 2020

✦ Page 1 - ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅಧ್ಯಯನ / ಜನರಲ್ ಸ್ಟಡೀಜ್ ನೋಟ್ಸ್ (General Studies Notes for all Competitive Exams)

 ✦ Page 1 - ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅಧ್ಯಯನ / ಜನರಲ್ ಸ್ಟಡೀಜ್ ನೋಟ್ಸ್
(General Studies Notes for all Competitive Exams)

━━━━━━━━━━━━━━━━━━━━━━━━━━━━━━━━━━━━━━━━


1. ಹಿಮಾಲಯ ಪರ್ವತ
2. 'ಕಿಂಬರ್ಲಿ ಪ್ರಕ್ರಿಯೆ' (Kimberley Process).
3. ಓಝೋನ್.
4. ಸಂವಿಧಾನ ತಿದ್ದುಪಡಿ
5. ಪ್ಲಾಸ್ಟಿಡ್‍ (plastid)
6. ‘ಕೈಗಾರಿಕಾ ಸಂಬಂಧಗಳ ಸಂಹಿತೆ, 2020’ ಮಸೂದೆ .
7. ಆಸ್ತಿ ಮೂಲಭೂತ ಹಕ್ಕು 


... ಮುಂದುವರೆಯುವುದು.


General Studies notes in Kannada


Wednesday 14 October 2020

•► 2020ರ IAS (ಯುಪಿಎಸ್‌ಸಿ) ನಾಗರಿಕ ಸೇವಾ (ಪ್ರಿಲಿಮನರಿ) ಪರೀಕ್ಷೆ ಪ್ರಶ್ನೆ ಪತ್ರಿಕೆಯ ವಿಶ್ಲೇಷಣೆ (Analysis of Question paper UPSC CSE 2020)

•► 2020ರ IAS (ಯುಪಿಎಸ್‌ಸಿ) ನಾಗರಿಕ ಸೇವಾ (ಪ್ರಿಲಿಮನರಿ) ಪರೀಕ್ಷೆ ಪ್ರಶ್ನೆ ಪತ್ರಿಕೆಯ ವಿಶ್ಲೇಷಣೆ
(Analysis of Question paper UPSC CSE 2020)

━━━━━━━━━━━━━━━━━━━━━━━━━

★ ಐಎಎಸ್ ಪೂರ್ವಭಾವಿ ಪರೀಕ್ಷೆ 2020
(IAS Preliminary Exam 2020)

 ★ಸ್ಪರ್ಧಾರ್ಥಿಗಳಲ್ಲಿ ಸೂಚನೆ -

ಇಲ್ಲಿ ವ್ಯಕ್ತಪಡಿಸಿದ ವಿಚಾರವು ಹಲವು ನಂಬಲರ್ಹವಾದ ಮೂಲಗಳಿಂದ ಸಂಗ್ರಹಿಸಿ, ಪರೀಕ್ಷೆ ಎದುರಿಸಿದ ಸ್ಪರ್ಧಾರ್ಥಿಗಳಿಂದ ನೇರವಾಗಿ ಚರ್ಚಿಸಿ ನನ್ನ ಸ್ವಂತ ಅಭಿಪ್ರಾಯದೊಂದಿಗೆ ಮಂಡಿಸಲಾಗಿರುವುದು.  ಈ ಕೆಳಗೆ ನೀಡಲಾದ ಮಾಹಿತಿಯು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇದೇ ಅಂತಿಮವಲ್ಲ!

ಶೀಘ್ರದಲ್ಲೇ ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ 2020ರಲ್ಲಿ ಕೇಳಲಾದಾಗ ವಿಷಯವಾರು ಪ್ರಶ್ನೆಗಳ ವಿಶ್ಲೇಷಣೆ (UPSC Prelims Subject-wise Exam Analysis 2020)ಯನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.


ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)
-----------------------------------------------------------------------------------------------------
 
ಕರ್ನಾಟಕ ರಾಜ್ಯದಿಂದ —
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅಕ್ಟೋಬರ್‌ 4ರಂದು ನಡೆಸಿದ ನಾಗರಿಕ ಸೇವಾ (ಪ್ರಿಲಿಮನರಿ) ಪರೀಕ್ಷೆಗೆ ಕರ್ನಾಟಕ ರಾಜ್ಯದಿಂದ ಸುಮಾರ 37 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

• ಈ ವರ್ಷದ ಪ್ರಿಲಿಮ್ಸ್ ಪತ್ರಿಕೆಯು ಯುಪಿಎಸ್‍ಸಿಯು ವಿದ್ಯಾರ್ಥಿಗಳಿಂದ ಏನನ್ನು ನಿರೀಕ್ಷಿಸುತ್ತಿದೆ ಎಂಬ ಬಗ್ಗೆ ಕಠಿಣ ಚರ್ಚೆಯನ್ನು ಪ್ರಾರಂಭಿಸಿದೆ. ಅನೇಕ ಅಭ್ಯರ್ಥಿಗಳು ಪತ್ರಿಕೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ.
 
• ಪ್ರಶ್ನೆ ಪತ್ರಿಕೆಯಲ್ಲಿ ಅಭ್ಯರ್ಥಿಯು ಯಾವ ಪ್ರಶ್ನೆಯನ್ನು ಉತ್ತರಿಸಬೇಕೆನ್ನುವುದಕ್ಕಿಂತ ಯಾವ ಪ್ರಶ್ನೆಯನ್ನು ಬಿಡಬೇಕೆಂದು ನಿರ್ಣಯಿಸುವುದು ಹೆಚ್ಚು ಮುಖ್ಯವಾಗಿತ್ತು!

1. ಪ್ರಶ್ನೆ ಪತ್ರಿಕೆಯ ಕಠಿಣತೆಯ ಮಟ್ಟ - ಮಧ್ಯಮ ಕಠಿಣತೆಯಿಂದ ಕಷ್ಟಕರ ಪ್ರಶ್ನೆಗಳನ್ನು ಹೊಂದಿರುವಂಥವು. 

2. ವನ್ಯ ಜೀವಿ ವೈವಿಧ್ಯ ಮತ್ತು ನೈಸರ್ಗಿಕ ಉದ್ಯಾನಗಳ ಕುರಿತು ಹೆಚ್ಚಿನ ನಕ್ಷೆ ಆಧಾರಿತ ಭೌಗೋಳಿಕ ಪ್ರಶ್ನೆಗಳಿದ್ದವು.

3. ಪ್ರಶ್ನಾವಳಿಯಲ್ಲಿ ಕೃಷಿ (Agriculture)ಯನ್ನು ಆಧರಿಸಿದ ಸಾಮಾನ್ಯ ಪ್ರಶ್ನೆಗಳಿದ್ದು, ಅವು ಕೃಷಿ ಸಂಬಂಧಿತ ನಿರ್ದಿಷ್ಟ ಸಂಗತಿಗಳಿಗಿಂತ ಅವುಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಅಗತ್ಯತೆಯನ್ನು ಬಯಸಿರುವಂಥವು.

4. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಭ್ಯರ್ಥಿಗಳ ಐಎಎಸ್ ಕುರಿತಾದ Mindset ವಿಚಲಿತಗೊಳ್ಳುವಂತಹ  ಸಾಮಾನ್ಯ ಸಂಗತಿ(raw facts)ಗಳನ್ನಾಧರಿಸಿದ ಕೆಲವು ಪ್ರಶ್ನೆಗಳು ಕೇಳಲಾಗಿದೆ! 
 
5. ಯುಪಿಎಸ್‌ಸಿ ಪರೀಕ್ಷೆಯ ಗುಣಮಟ್ಟವನ್ನು ತೋರಿಸುವಂತಹ ಪ್ರಶ್ನೆಗಳು ಅಂದರೆ ಗಾಂಧಿ ಮತ್ತು ಮಾರ್ಕ್ಸ್ ಸಿದ್ಧಾಂತಗಳಂತಹ ಪರಿಕಲ್ಪನಾ (Conceptual) ಪ್ರಶ್ನೆಗಳನ್ನು ಕೇಳಿದ್ದು ನಿಜವಾಗಿಯೂ ಶ್ಲಾಘನೀಯವಾಗಿದ್ದು. 

6. ರಾಜಕೀಯ(Polity) ಆಧಾರಿತ ಪ್ರಶ್ನೆಗಳು — ಸರಳತೆಯಿಂದ ಮಧ್ಯಮ ಕಷ್ಟಕರವಾದವುಗಳು. ಯೋಜನೆಗಳಿಗೆ ಸಂಬಂಧಪಟ್ಟಂತೆ ಕೇವಲ 2 ಪ್ರಶ್ನೆಗಳನ್ನು ಕೇಳಲಾಗಿತ್ತು. 

7. ಇತಿಹಾಸ (History) ಆಧಾರಿತ ಪ್ರಶ್ನೆಗಳು — ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವಂಥದು. 

8. ಆರ್ಥಿಕತೆ (Economy) ಗೆ ಸಂಬಂಧಿಸಿದ ಪ್ರಶ್ನೆಗಳು — ವಾಣಿಜ್ಯ ಕಾಗದ, ಸಗಟು ಬೆಲೆ ಸೂಚ್ಯಂಕ (WPI), ಹಣದ ಪೂರೈಕೆ ಆಧಾರಿತ ಆರ್ಥಿಕ ಪ್ರಶ್ನೆಗಳು ಶುದ್ಧ ಪರಿಕಲ್ಪನೆ (pure concepts)ಗಳಾಗಿದ್ದು ಆಳವಾದ ಅಧ್ಯಯನದ (In-depth) ಅಗತ್ಯವಿದೆ.

9. ಜೆಟ್ ಸ್ಟೀಮ್‌ಗಳಂತಹ ಭೌಗೋಳಿಕ ಪರಿಕಲ್ಪನಾ ಪ್ರಶ್ನೆಗಳನ್ನು ಇನ್ನೂ ಕೇಳಲಾಗುತ್ತಿದೆ.

ಒಟ್ಟಾರೆ ವಿಶ್ಲೇಷಣೆ — ಪ್ರಶ್ನೆ ಪತ್ರಿಕೆ ಕಠಿಣತೆ - ಮಧ್ಯಮ ಕಠಿಣತೆಯಿಂದ ಕಷ್ಟಕರ ಮಟ್ಟದ್ದು.

ಉತ್ತಮ ಪ್ರಯತ್ನ - 65-87 ಪ್ರಶ್ನೆಗಳಿಗೆ ಸರಿ ಉತ್ತರಿಸಿದ್ದಲ್ಲಿ ಅರ್ಹತೆ ಪಡೆಯಬಹುದು.

• ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ 2020 ಕಟ್-ಆಫ್ ಬಗ್ಗೆ
━━━━━━━━━━━━━━━━━━━━━
 
— ಪ್ರಶ್ನೆಪತ್ರಿಕೆಯು ಅಸಾಂಪ್ರದಾಯಿಕ (unconventional)ವಾದ್ದರಿಂದ ಹಿಂದಿನ ವರ್ಷಗಳ ಪತ್ರಿಕೆಗಳಂತೆಯೇ ಇತ್ತು ಈ ವರ್ಷದ ಕಟ್-ಆಫ್ ಕೂಡ ಕಳೆದ ವರ್ಷದಂತೆಯೇ ಇರಬಹುದಾಗಿದೆ.

ಪ್ರಚಲಿತ ಘಟನೆಗಳಾಧಾರಿತ ಪ್ರಶ್ನೆಗಳು ಪರಿಕಲ್ಪನಾ ಸ್ಪಷ್ಟತೆಯನ್ನು ಬಯಸುವಂಥವು. ಈ ಪ್ರಶ್ನೆಗಳು ನೇರ ಮತ್ತು ವಿಶ್ಲೇಷಣೆಯ ಪ್ರಶ್ನೆಗಳ ಮಿಶ್ರಣವಾಗಿದ್ದು, ಪ್ರಚಲಿತ ಸುದ್ದಿಗಳನ್ನು ಸತತವಾಗಿ ಅನುಸರಿಸಿದವರು ಮಾತ್ರ ಅವುಗಳನ್ನು ಬಿಡಿಸಬಹುದಾಗಿದ್ದವು.

ಹಿಂದಿನ ವರ್ಷಗಳ ಕಟ್-ಆಫ್
━━━━━━━━━━━
━━━
ಸಾಮಾನ್ಯ ವರ್ಗದ ಅಭ್ಯರ್ಥಿಗೆ ಕಟ್-ಆಫ್ ಹೀಗೆ ಇತ್ತು.

ಯುಪಿಎಸ್ಸಿ ಪ್ರಿಲಿಮ್ಸ್ 2019 ರಲ್ಲಿ ▪️98,
ಯುಪಿಎಸ್ಸಿ ಪ್ರಿಲಿಮ್ಸ್ 2018 ರಲ್ಲಿ ▪️98, ಮತ್ತು
ಯುಪಿಎಸ್ಸಿ ಪ್ರಿಲಿಮ್ಸ್ 2017 ರಲ್ಲಿ ▪️105.34.

ಯುಪಿಎಸ್ಸಿಯು ಪರೀಕ್ಷೆಯನ್ನು ನಡೆಸಿದ 50 ದಿನಗಳಲ್ಲಿ ಪ್ರಿಲಿಮ್ಸ್ ಫಲಿತಾಂಶಗಳನ್ನು ಘೋಷಿಸುತ್ತದೆ.
 

Friday 2 October 2020

•► ️ಇತ್ತೀಚೆಗೆ ಸುದ್ದಿಯಲ್ಲಿರುವ ಪ್ರಮುಖ ಸಮಿತಿಗಳು / ವರದಿಗಳು - ಭಾಗ 2 : ( Important Committees / Reports recently in News)

 •► ️ಇತ್ತೀಚೆಗೆ ಸುದ್ದಿಯಲ್ಲಿರುವ ಪ್ರಮುಖ ಸಮಿತಿಗಳು  / ವರದಿಗಳು - ಭಾಗ 2 :
( Important Committees / Reports recently in News)

━━━━━━━━━━━━━━━━━━━━━━━━

ಮುಂದುವರೆದ ಭಾಗ :
 


 

Wednesday 30 September 2020

Saturday 26 September 2020

•► ️PART XXX — ಪ್ರಚಲಿತ ವಿದ್ಯಮಾನಗಳೊಂದಿಗೆ ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes on Current Affairs in Kannada)

 
•► ️PART XXX  — ಪ್ರಚಲಿತ ವಿದ್ಯಮಾನಗಳೊಂದಿಗೆ  ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ :
(IAS/KAS Exam Preparation Short Notes on Current Affairs in Kannada)
━━━━━━━━━━━━━━━━━━━━━━━━━━━━

★ Covered Topics :


199. ಲಿಂಗ ಆಧಾರಿತ ಪ್ರಮುಖ ಜಾಗತಿಕ ಸೂಚ್ಯಂಕಗಳು / ವರದಿಗಳು :

200. ಯುನೆಸ್ಕೋ (UNESCO)ದಿಂದ ಬಿಡುಗಡೆಗೊಳ್ಳುವ ಪ್ರಮುಖ ಸೂಚ್ಯಂಕಗಳು / ವರದಿಗಳು : (ಇತ್ತೀಚೆಗೆ ಸುದ್ದಿಯಲ್ಲಿದ್ದ)

201. ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)ಯೊಂದಿಗೆ ಸಂಬಂಧಿಸಿದ ಪ್ರಮುಖ ಸೂಚ್ಯಂಕಗಳು / ವರದಿಗಳು.(ಇತ್ತೀಚೆಗೆ ಸುದ್ದಿಯಲ್ಲಿದ್ದ)


202. ಆಹಾರ ಮತ್ತು ಕೃಷಿ ಸಂಸ್ಥೆ (FAO) ಯೊಂದಿಗೆ ಸಂಬಂಧಿಸಿದ ಪ್ರಮುಖ ಸೂಚ್ಯಂಕಗಳು / ವರದಿಗಳು.


203. ವಿಶ್ವಸಂಸ್ಥೆಯ ವ್ಯಾಪರ ವಿಭಾಗ ಯುಎನ್‍ಸಿಟಿಎಡಿ (UNCTAD) ನೊಂದಿಗೆ ಸಂಬಂಧಿಸಿದ ಪ್ರಮುಖ ಸೂಚ್ಯಂಕಗಳು / ವರದಿಗಳು.


204. ವಿಶ್ವ ಆರ್ಥಿಕ ಒಕ್ಕೂಟ (WEF) ದೊಂದಿಗೆ ಸಂಬಂಧಿಸಿದ ಪ್ರಮುಖ ಸೂಚ್ಯಂಕಗಳು / ವರದಿಗಳು.




Saturday 19 September 2020

•► ಹೊಸ ವರ್ಷ ಆಚರಣೆಯ ಇತರೆ ಪ್ರಾದೇಶಿಕ ಹೆಸರುಗಳು. (New Year's Day celebration in Different Regions)

•► ಹೊಸ ವರ್ಷ ಆಚರಣೆಯ ಇತರೆ ಪ್ರಾದೇಶಿಕ ಹೆಸರುಗಳು.
(New Year's Day celebration in Different Regions)
━━━━━━━━━━━━━━━━━━━━━━━━━
 (ಸಾಮಾನ್ಯ ಅಧ್ಯಯನ)

1. ಆಂಧ್ರಪ್ರದೇಶ ಮತ್ತು ತೆಲಂಗಾಣ: ಉಗಾದಿ.

2. ಕರ್ನಾಟಕ: ಯುಗಾದಿ.

3. ಮಹಾರಾಷ್ಟ್ರ: ಗುಡಿ ಪಾಡ್ವಾ.

4. ಸಿಂಧಿಗಳು: ಚೇತಿ ಚಾಂದ್.

5. ಮಣಿಪುರಿಸ್: ಸಾಜಿಬು ಚೀರೊಬಾ.

6.ಕೇರಳ : ವಿಶು.

7.ಅಸ್ಸಾಮ್ : ಬಿಹು (ವಿಶು)

8.ಪಂಜಾಬ್ : ವಸಾಖಿ,

9.ಅಸ್ಸಾಂ : ರೋಂಗಲಿ ಬಿಹು / ಗೊರುಬಿಹು.

10.ಪ.ಬಂಗಾಳ : ‘ಪೊಯ್ಲ ಬೈಷಾಕ್’.

11.ತಮಿಳುನಾಡು : ವರ್ಷಪಿರುಪ್ಪು.

12.ಜಮ್ಮು & ಕಾಶ್ಮೀರ : "ನವ್ರೆಹ್".

13.ಗುಜರಾತ್‌ :‘ಬೆಸ್ತು ವರಸ್‌’.

14.ಸಿಕ್ಕಿಂನ : ‘ಲೊಸೂಂಗ್‌’

11.ಬಾಲಿ ಮತ್ತು ಇಂಡೋನೇಷ್ಯಾ : ನೈಪಿ(Nyepio)

12.ಬಾಂಗ್ಲಾದೇಶ : "ಪೈಲಾ ಬೈಸಾಖ್"

13.ಥಾಯ್ಲೆಂಡ್‌ : ಸೊಂಕ್ರಾನ್

Thursday 17 September 2020

•► ಪ್ರಮುಖ ಮೊಘಲ್ / ದೆಹಲಿ ಅರಸರ ಸಮಾಧಿ ಸ್ಥಳಗಳು : (The tombs of Famous Mughal / Delhi Emperors)

•► ಪ್ರಮುಖ ಮೊಘಲ್ / ದೆಹಲಿ ಅರಸರ ಸಮಾಧಿ ಸ್ಥಳಗಳು :
(The tombs of Famous Mughal / Delhi Emperors)
━━━━━━━━━━━━━━━━━━━━━━━

— ಬಾಬರ್ ನ ಸಮಾಧಿ ಸ್ಥಳ —  ಕಾಬೂಲ್ (1483-1530).

— ಹುಮಾಯೂನ್ ನ ಸಮಾಧಿ ಸ್ಥಳ—  ದೆಹಲಿ (1530-1556).

— ಶೇರಷಹಾ ಸೂರಿಯ ಸಮಾಧಿ ಸ್ಥಳ— ಬಿಹಾರದ  ಸಸಾರಾಂ (1545).

— ಅಕ್ಷರ ನ ಸಮಾಧಿ ಸ್ಥಳ— ಆಗ್ರಾ (ಸಿಕಂದ್ರ) (UP) (1542-1605)

— ಜಹಾಂಗೀರ್ ನ ಸಮಾಧಿ ಸ್ಥಳ—  ಲಾಹೋರದ ಶಾಹದರ್(1627).

— ಷಹಾಜಹಾನ್ ನ ಸಮಾಧಿ ಸ್ಥಳ—  ಆಗ್ರಾ (1592-1666)

— ಔರಂಗಜೇಬನ ಸಮಾಧಿ ಸ್ಥಳ—  (1707) ದೌಲತಾಬಾದ್.

Tuesday 15 September 2020

•► ಇತ್ತೀಚೆಗೆ ಸುದ್ದಿಯಲ್ಲಿದ್ದ ಸೈಬರ್ ದಾಳಿಗೆ ಕಾರಣವಾದ ಪ್ರಮುಖ ವೈರಸ್‌, ಮಾಲ್‌ವೇರ್, ಸ್ಪೈವೇರ್‌ಗಳು : (The latest (MOST DANGEROUS) Virus & Malware Threats in 2020)

•► ಇತ್ತೀಚೆಗೆ ಸುದ್ದಿಯಲ್ಲಿದ್ದ ಸೈಬರ್ ದಾಳಿಗೆ ಕಾರಣವಾದ ಪ್ರಮುಖ ವೈರಸ್‌, ಮಾಲ್‌ವೇರ್, ಸ್ಪೈವೇರ್‌ಗಳು :
(The latest (MOST DANGEROUS) Virus & Malware Threats in 2020)
 ━━━━━━━━━━━━━━━━━━━━━━━━━━━━━━
★ ಮಾಹಿತಿ ಮತ್ತು ತಂತ್ರಜ್ಞಾನ
(Information and Technology)

ಸೈಮನ್‌ಟೆಕ್‌ ಎಂಬ ಸೈಬರ್ ಸೆಕ್ಯುರಿಟಿ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಸೈಬರ್ ದಾಳಿಗೆ ಒಳಗಾಗಬಹುದಾದ ಸಾಧ್ಯತೆಗಳಿರುವ ಪ್ರಮುಖ ಮೂರು ದೇಶಗಳ ಪೈಕಿ ಭಾರತವೂ ಒಂದಾಗಿದೆ. ಅಮೆರಿಕ ಮತ್ತು ಚೀನಾ ಈ ಪಟ್ಟಿಯಲ್ಲಿ ಇತರ ಎರಡು ದೇಶಗಳಾಗಿದ್ದು, ಸೈಬರ್‌ ಸೆಕ್ಯುರಿಟಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಇವು ನಮಗಿಂತ ತುಂಬಾ ಮುಂದಿವೆ.

— ವಂಚನೆಯು ಸೈಬರ್‌ ದಾಳಿಕೋರರ ಪ್ರಮುಖ ಉದ್ದೇಶವಾಗಿದೆ. ವೈರಸ್‌, ಸ್ಪೈವೇರ್ ಹರಡುವಿಕೆ, ಸರ್ವರ್‌, ನಿರ್ಣಾಯಕ ಮೂಲ ಸೌಕರ್ಯದ ಮಾಹಿತಿ, ಮೇಲ್ವಿಚಾರಣೆ ನಿಯಂತ್ರಣ, ದತ್ತಾಂಶ ಸಂಗ್ರಹ ವ್ಯವಸ್ಥೆ ಹಾಗೂ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನೂ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಮುಖ್ಯವಾಗಿ ಇ–ಆಡಳಿತ, ಇ–ಕಾಮರ್ಸ್‌ ಅಪ್ಲಿಕೇಶನ್‌ಗಳ ಮೇಲೂ ದಾಳಿಗಳು ನಡೆದಿವೆ

• ಟೆಕ್ಯಾ —
ಈ ಮಾಲ್‌ವೇರ್ ಆ್ಯಪ್​ಗಳು ಪ್ಲೇ ಸ್ಟೋರ್​ನಲ್ಲಿ ಲಭ್ಯವಿದ್ದು, ಇದನ್ನು ಇನ್​ಸ್ಟಾಲ್ ಮಾಡಿದರೆ​ ನಿಮ್ಮ ರಹಸ್ಯ ಮಾಹಿತಿಗಳು ಹ್ಯಾಕರುಗಳ ಪಾಲಾಗಲಿದೆ.

• ‘ಈವೆಂಟ್ ಬಾಟ್’ (EventBot)
ಮೊಬೈಲ್ ಬ್ಯಾಂಕಿಂಗ್ ಬಳಸುವ ಆಂಡ್ರಾಯ್ಡ್ ಬಳಕೆದಾರರು ಗುರಿಯಾಗಬಹುದಾದ ಹೊಸ ಮಾಲ್ವೇರ್ + ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಆಫ್ ಇಂಡಿಯಾದ (CERT) ಪ್ರಕಾರ ಈ ಹೊಸ ಮಾಲ್ವೇರ್ ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಕದಿಯುವುದು + ಜನ್ ವೈರಸ್ ಮೈಕ್ರೋಸಾಫ್ಟ್ ವರ್ಡ್ ಅಡೋಬ್ ಫ್ಲ್ಯಾಷ್ ಮತ್ತು ಇತರರು ಥರ್ಡ್ ಪಾರ್ಟಿ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಸೈಟ‍‍್‍ಗಳನ್ನು ಬಲಿಪಶು ಸಾಧನಕ್ಕೆ ಒಳನುಸುಳಲು ಬಳಸುವಂತಹ ಕಾನೂನುಬದ್ಧ ಅಪ್ಲಿಕೇಶನ್ನಂತೆ ಮಾಸ್ಕ್ವೆರೇಡ್ ಮಾಡುತ್ತವೆ.

• ಪೆಗಾಸಸ್‌ ವೈರಸ್‌ (Pegasus Hacking) —
ಗ್ರೀಕ್‌ ಪುರಾಣಗಳಲ್ಲಿ ಪ್ರಚಲಿತವಾಗಿರುವ ಹಾರುವ ಕುದುರಿಗೆ 'ಪೆಗಾಸಸ್‌' ಎಂಬ ಹೆಸರಿದೆ.  'ಪೆಗಾಸಸ್‌' ಎಂಬ ಅತ್ಯಾಧುನಿಕ ಸ್ಪೈಯಿಂಗ್‌ ಟೂಲ್‌ ಅನ್ನು ಇಸ್ರೇಲ್‌ ಮೂಲದ ಸವೀರ್‍ಲೆನ್ಸ್‌ ಟೆಕ್‌ ಕಂಪನಿ 'ಎನ್‌ಎಸ್‌ಒ ಗ್ರೂಪ್‌' ಸಿದ್ಧಪಡಿಸಿದ್ದು, ಇದನ್ನು 'ಕ್ಯೂ ಸೈಬರ್‌ ಟೆಕ್ನಾಲಜಿಸ್‌' ಎಂದೂ ಕರೆಯಲಾಗುತ್ತದೆ. +  ಸಂತ್ರಸ್ತ ವ್ಯಕ್ತಿಗಳ ಫೋನ್‌ಗಳಿಗೆ ವಾಟ್ಸಪ್ ಕಾಲ್‌ ಮಾಡುವ ಮೂಲಕ ಪೆಗಾಸಸ್‌ ಸ್ಪೈವೇರ್‌ ಅನ್ನು ಸಕ್ರಿಯಗೊಳಿಸಿ, ಗೂಢಚರ್ಯ ಮಾಡುವುದರೊಂದಿಗೆ, ಅವರಿಗೆ ಸಂಬಂಧಿಸಿದ ಎಲ್ಲಮಾಹಿತಿಯನ್ನು ಕದಿಯಲಾಗಿರುವುದು. + ಆಂಡ್ರಾಯ್ಡ್‌, ಐಒಎಸ್‌, ವಿಂಡೋಸ್‌ ಫೋನ್‌, ಬ್ಲ್ಯಾಕ್‌ಬೆರಿ, ಸಿಂಬಿಯನ್‌ ಮತ್ತು ಟಿಜೆನ್‌ ಆಪರೇಟಿಂಗ್‌ ಸಾಫ್ಟ್‌ವೇರ್‌ ಆಧರಿತ ಡಿವೈಸ್‌ಗಳಲ್ಲಿಪೆಗಾಸಸ್‌ ಸ್ಪೈವೇರ್‌ ಕೆಲಸ ಮಾಡುತ್ತದೆ.+ ಕುತಂತ್ರದ ಮೂಲಕವೇ ಫೋನ್‌ ಪ್ರವೇಶಿಸುವ ಈ ಸ್ಪೈವೇರ್‌ ಅಲ್ಲಿರುವ ಎಲ್ಲಮಾಹಿತಿಯನ್ನು ಕದಿಯುತ್ತದೆ. ಇದನ್ನು ಅತ್ಯಾಕರ್ಷಕ ಲಿಂಕ್‌ಗಳ ಮೂಲಕ ಮೊಬೈಲ್‌ ಫೋನ್‌ಗಳಿಗೆ ರವಾನಿಸಲಾಗುತ್ತದೆ. ಇದನ್ನು ಆ್ಯಕ್ಟಿವೇಟ್‌ ಮಾಡಿದ ಕೂಡಲೇ ಬಳಕೆದಾರರ ಕರೆಗಳು, ವಿಡಿಯೊ, ಚಾಟ್‌, ಫೋಟೊ, ಕಾರ್ಯಕ್ರಮಗಳು, ಚಲನವಲನಗಳೆಲ್ಲವೂ ಬೇರೊಂದು ಕಡೆ ದಾಖಲಾಗುತ್ತಾ ಹೋಗುತ್ತವೆ. ಇದು ಸ್ಕೈಪ್‌, ಟೆಲಿಗ್ರಾಂ, ವಿ ಚಾಟ್‌, ಫೇಸ್‌ಬುಕ್‌ ಮೆಸೆಂಜರ್‌ಗೂ ಪ್ರವೇಶ ಪಡೆಯುವ ಸಾಮರ್ಥ್ಯವನ್ನು ಈ ಸ್ಕೈವೇರ್‌ ಹೊಂದಿದೆ. ಈಗ ಭಾರತವೂ ಸೇರಿದಂತೆ ಜಗತ್ತಿನ ಹಲವು ಜನರ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ವಾಟ್ಸಪ್ ಕಾಲ್‌ ಮೂಲಕ ಪ್ರವೇಶಿಸಿ ಕನ್ನ ಹಾಕಿದೆ.

• ಟ್ರೋಜನ್ (Trojan) 
ಬಳಕೆದಾರರಿಗೆ ಅಗತ್ಯವಿರುವ ಸಾಫ್ಟ್ವೇರ್ ಎಂದು ನಂಬುವಂತೆ ಮೋಸ ಮಾಡುವ ಮೂಲಕ ಸಾಧನವನ್ನು ಪ್ರವೇಶಿಸುತ್ತದೆ. + ಅದು ನಂತರ ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗಿನಿಂದ ಆಕ್ರಮಿಸುತ್ತದೆ. ಇದು ಮೊಬೈಲ್-ಬ್ಯಾಂಕಿಂಗ್ ಟ್ರೋಜನ್ ಮತ್ತು ಮಾಹಿತಿ-ಕಳ್ಳತನವಾಗಿದ್ದು ಹಣಕಾಸಿನ ಅಪ್ಲಿಕೇಶನ್ ಗಳಿಂದ ಬಳಕೆದಾರರ ಡೇಟಾವನ್ನು ಕದಿಯಲು ಬಳಕೆದಾರರ SMS ಸಂದೇಶಗಳನ್ನು ಓದಲು ಮತ್ತು SMS ಸಂದೇಶಗಳನ್ನು ಪ್ರತಿಬಂಧಿಸಲು ಆಂಡ್ರಾಯ್ಡ್ ನ ಅಂತರ್ ನಿರ್ಮಿತ ಪ್ರವೇಶದ ವೈಶಿಷ್ಟ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತದೆ. ಮಾಲ್ವೇರ್ ಎರಡು ಅಂಶಗಳ ದೃಢೀಕರಣವನ್ನು ಬೈಪಾಸ್ ಮಾಡಲು ಅನುವು ಮಾಡಿಕೊಡುತ್ತದೆ.

• ‘ಬ್ಲ್ಯಾಕ್‌ರಾಕ್‌’ ವೈರಸ್' (BlackRock Virus)‌ — 
ಇದು ಆಂಡ್ರಾಯ್ಡ್‌ ಮೊಬೈಲ್‌ ಫೋನ್‌ಗಳ ಮೇಲೆ ದಾಳಿ + ಮಾಲ್‌ವೇರ್‌ ಮೂಲಕ ಮೊಬೈಲ್‌ ಬಳಕೆದಾರರ ಬ್ಯಾಂಕ್‌ ವಿವರ ಮತ್ತು ಖಾಸಗಿ ಮಾಹಿತಿಯನ್ನು ಹ್ಯಾಕರ್‌ಗಳು ಕದಿಯಬಹುದು.+ ಝೆರಕ್ಸ್‌ ಬ್ಯಾಂಕಿಂಗ್‌ ಮಾಲ್‌ವೇರ್‌ನ ಸೋರ್ಸ್‌ ಕೋಡ್‌ ಬಳಸಿ ಇದನ್ನು ರೂಪಿಸಲಾಗಿದೆ. ಇದು ಟ್ರೋಜನ್‌ ಹಾರ್ಸ್‌ ಮಾದರಿಯ ಮಾಹಿತಿ ಕದಿಯುವ ಮಾಲ್‌ವೇರ್‌ ಆಗಿದೆ

• ಜೋಕರ್ ಮಾಲ್ವೇರ್ (Joker Malware) — 
ಮೊಬೈಲ್‍ನ ಪ್ಲೇ ಸ್ಟೋರ್‌ಗೆ ಕಾಲಿರಿಸಿದ್ದು, ಗ್ರಾಹಕರ ವೈಯಕ್ತಿಕ ಮಾಹಿತಿ ಕದಿಯುವುದು. ಆಂಡ್ರಾಯ್ಡ್ ಓಎಸ್‌ಗೆ ಜೋಕರ್ ವೈರಸ್ ಹಾವಳಿ ಸಾಮಾನ್ಯವಾಗಿದ್ದು, ಈ ಮೊದಲು ಕೂಡ ವಿವಿಧ ಸ್ಮಾರ್ಟ್‌ಫೋನ್‌ಗಳಿಗೆ ಹಾನಿ.

• ಏಜೆಂಟ್ ಸ್ಮಿತ್ (Agent Smith)
ಏಜೆಂಟ್ ಸ್ಮಿತ್ ಹೆಸರಿನ ಕೋಡ್‌ನೇಮ್ ಹೊಂದಿರುವ ಮಾಲ್ವೇರ್ ಒಂದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಪ್ರವೇಶಿಸಿದ್ದು, ವಾಟ್ಸಪ್‌ ಅನ್ನೇ ನುಂಗಿ ಹಾಕುತ್ತಿದೆ. ವಾಟ್ಸಪ್‌ನಂತೆಯೇ ಪೋಸ್ ಕೊಡುವ ನಕಲಿ ಮಾಲ್ವೇರ್, ಆಂಡ್ರಾಯ್ಡ್ ಆಪರೇಟಿಂಗ್ ವ್ಯವಸ್ಥೆಯಲ್ಲಿನ ಕೆಲವೊಂದು ಭದ್ರತಾ ಲೋಪವನ್ನು ಬಳಸಿಕೊಂಡು, ಒಳನುಸುಳಿದೆ + ಮೂಲಗಳ ಪ್ರಕಾರ ದೇಶದಲ್ಲಿ 1.5 ಕೋಟಿಗೂ ಅಧಿಕ ಆಂಡ್ರಾಯ್ಡ್ ವಾಟ್ಸಪ್ ಬಳಕೆದಾರರು ಸಮಸ್ಯೆಗೆ ತುತ್ತಾಗಿದ್ದಾರೆ. ಏಜೆಂಟ್ ಸ್ಮಿತ್ ಹೆಸರಿನ ಮಾಲ್ವೇರ್ ಹರಡುತ್ತಿರುವ ಬಗ್ಗೆ ಇಸ್ರೇಲ್‌ನ ಭದ್ರತಾ ಸಂಸ್ಥೆ ಚೆಕ್‌ ಪಾಯಿಂಟ್ ವರದಿ ಹೇಳಿದೆ. + ಗೂಗಲ್‌ನ ಪ್ಲೇ ಸ್ಟೋರ್ ಹೊರತಾಗಿ, ಚೀನಾದ ಅಲಿಬಾಬಾ ಒಡೆತನದ ಥರ್ಡ್ ಪಾರ್ಟಿ ಆ್ಯಪ್‌ ಸ್ಟೋರ್ 9apps.com ಮೂಲಕ ಮಾಲ್ವೇರ್ ಹರಡಿದೆ.

• ವನ್ನಾಕ್ರೈ ರಾನ್ಸಮ್‌ವೇರ್ (WannaCry) —
2017ರಲ್ಲಿ ಜಗತ್ತಿನಾದ್ಯಂತ ಕಂಪ್ಯೂಟರ್‌ಗಳಿಗೆ ದಾಳಿ ಮಾಡಿದ್ದ ವನ್ನಾಕ್ರೈ, ಈಗಲೂ ಬದುಕಿದ್ದು, ಈಗ ಪುನಃ 2019 Septನಿಂದ ದೇಶ-ವಿದೇಶದ ಕಂಪ್ಯೂಟರ್ ಜಾಲದ ಮೇಲೆ ಸೈಬರ್ ದಾಳಿ + ದುರುದ್ದೇಶಕ್ಕೆ ಬಳಸಲಾಗುತ್ತಿರುವ ಮಾಲ್‌ವೇರ್‌ಗಳ (ಮಾಲೀಶಿಯಸ್‌ ಸಾಫ್ಟ್‌ವೇರ್‌) ಕೆಟಗರಿಯಲ್ಲಿ ಬರುವ ರಾರ‍ಯನ್ಸಮ್‌ವೇರ್‌ ಹೆಸರು ಬಂದಿದ್ದೇ ಸುಲಿಗೆಗೆ ಅದು ಸಹಾಯ ಮಾಡುವುದರಿಂದ. ಯಾವುದಾದರೂ ಕಂಪ್ಯೂಟರ್‌, ಫೋಲ್ಡರ್‌ ಅಥವಾ ಮಹತ್ವದ ಫೈಲನ್ನು ಲಾಕ್‌ ಮಾಡಿ, ಅದರ ಬೀಗ ತೆಗೆಯಬೇಕಿದ್ದರೆ ಇಂತಿಷ್ಟು ಹಣ ಕೊಡಬೇಕು ಅಂತ ಸೈಬರ್‌ ಕ್ರಿಮಿನಲ್‌ಗಳು ತಾವು ಕುಳಿತಲ್ಲಿಂದಲೇ ಆದೇಶ ಮಾಡುತ್ತಾರೆ. ಹಣ ಪಾವತಿಗೆ ನಿರ್ದಿಷ್ಟ ಲಿಂಕ್‌ ಕೊಟ್ಟಿರುತ್ತಾರೆ. ಈಗ ಬಂದಿರುವ WannaCry ಅಂತ ಹೆಸರಿಡಲಾಗಿರುವ ಈ ಕುತಂತ್ರಾಂಶವು ಮಾಡುವುದೂ ಇದನ್ನೇ.

• ಡಿಟ್ರ್ಯಾಕ್‌ ರಾಯಟ್‌ (DTrackRAT) —
 ಡಿಟ್ರ್ಯಾಕ್ ಮಾಲ್‌ವೇರ್ ಉತ್ತರ ಕೊರಿಯಾ ಸರ್ಕಾರದ ನಿಯಂತ್ರಣದಲ್ಲಿರುವ ಲಾಜಾರಸ್ ಎಂಬ ಗುಂಪಿಗೆ ಸಂಬಂಧಿಸಿದ್ದಾಗಿದೆ. + ಸೈಬರ್ ಭದ್ರತಾ ಸಂಸ್ಥೆ ಕಾಸ್ಪೆರೆಸ್ಕಿ ನೀಡಿರುವ ವರದಿ ಪ್ರಕಾರ, ಭಾರತದ 18 ರಾಜ್ಯಗಳಲ್ಲಿನ ಅರ್ಥಿಕ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಈ ಮಾಲ್‌ವೇರ್ ಪತ್ತೆಯಾಗಿದೆ. + ಕೂಡಂಕುಲಂ ಹಾಗೂ ಇಸ್ರೋ ಸಂಸ್ಥೆಗಳಿಗೆ ‘ಡಿಟ್ರ್ಯಾಕ್‌’ ಎಂಬ ಮಾಲ್‌ವೇರ್‌ ದಾಳಿ ಕುರಿತ ಸಂದೇಶವನ್ನು ಅಮೆರಿಕ ಮೂಲದ ಸೈಬರ್‌ ಭದ್ರತಾ ಕಂಪನಿಯೊಂದು ಈ ಸಂಸ್ಥೆ ಜತೆಗೆ ಸೆ.3 ರಂದು ಹಂಚಿಕೊಂಡಿತ್ತು. ಅದಾದ ಮರುದಿನವೇ ಕೂಡಂಕುಲಂ ಅಣು ಸ್ಥಾವರ ನಿರ್ವಹಿಸುತ್ತಿರುವ ರಾಷ್ಟ್ರೀಯ ಅಣು ವಿದ್ಯುತ್‌ ನಿಗಮ ಹಾಗೂ ಇಸ್ರೋ ಜತೆಗೆ ಸೈಬರ್‌ ಸಮನ್ವಯ ಕೇಂದ್ರ ಮಾಹಿತಿ ವಿನಿಮಯ ಮಾಡಿಕೊಂಡಿತ್ತು. ಯಾವುದೇ ದಾಳಿ ಆಗಿಲ್ಲ ಎಂದು ಅ.29 2019ರಂದು ಕೂಡಂಕುಲಂ ಅಧಿಕಾರಿಗಳು ಹೇಳಿದ್ದರು. ಆದರೆ ಅದಾದ ಮರುದಿನವೇ ಸ್ಪಷ್ಟನೆ ನೀಡಿ, ಆಡಳಿತ ವಿಭಾಗದ ಕಂಪ್ಯೂಟರ್‌ ಹ್ಯಾಕ್‌ ಆಗಿವೆ. ಅಣು ರಿಯಾಕ್ಟರ್‌ಗಳ ವ್ಯವಸ್ಥೆ ಭದ್ರವಾಗಿದೆ ಎಂದು ಹೇಳಿಕೊಂಡಿದ್ದರು.

Monday 14 September 2020

•► ️PART XXIX — ಪ್ರಚಲಿತ ವಿದ್ಯಮಾನಗಳೊಂದಿಗೆ ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes on Current Affairs in Kannada)

•► ️PART XXIX — ಪ್ರಚಲಿತ ವಿದ್ಯಮಾನಗಳೊಂದಿಗೆ  ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ :
(IAS/KAS Exam Preparation Short Notes on Current Affairs in Kannada)
━━━━━━━━━━━━━━━━━━━━━━━━━━━━

• Covered Topics :

195. ನೀಲಿ ಕಡಲ ನೌಕಾಪಡೆ (ಬ್ಲೂ ವಾಟರ್ ನೇವಿ ಅಥವಾ ಬ್ಲೂ ವಾಟರ್‌ ಫೋರ್ಸ್ (Blue Water Force / Navy)


196. ಫಾಸ್ಟ್ ಬ್ರೀಡರ್ ಟೆಸ್ಟ್ ರಿಯಾಕ್ಟರ್ (FBTR).


197. ‘ಹಸಿರು ಮಹಾಗೋಡೆ’ ನಿರ್ಮಾಣ ಯೋಜನೆ  (The Great Green Wall Initiative).


198. ಪೈರೊಟೆಕ್ನಿಕ್.



Sunday 6 September 2020

•► ️PART XXVIII — ಪ್ರಚಲಿತ ವಿದ್ಯಮಾನಗಳೊಂದಿಗೆ ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes on Current Affairs in Kannada)

•► ️PART XXVIII — ಪ್ರಚಲಿತ ವಿದ್ಯಮಾನಗಳೊಂದಿಗೆ  ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ :
(IAS/KAS Exam Preparation Short Notes on Current Affairs in Kannada)

━━━━━━━━━━━━━━━━━━━━━━━━━━━━  

• Covered Topics :

189. 'ಹಿಂದೂ ಮಹಾಸಾಗರ ಪ್ರಾಂತ್ಯ ವಿಭಾಗ'(IORD - Indian Ocean Region Division)


190. ಚೆನಾನಿ-ನಶ್ರೀ ಸುರಂಗ / ಪಟ್ನಿಟಾಪ್ ಸುರಂಗ.


191. ಸಮಗ್ರ ಸೂಕ್ಷ್ಮ ದೇಶಗಳ ಸೂಚ್ಯಂಕ / ವಿಶ್ವ ಸೂಕ್ಷ್ಮತೆ ಸೂಚ್ಯಂಕ (ಎಫ್‌ಎಸ್‌ಐ - Fragile States Index) - 2020 


192. ಸುಸ್ಥಿರತೆ ಹಾಗೂ ಮಕ್ಕಳ ಅಭಿವೃದ್ಧಿ ಸೂಚ್ಯಂಕ (Sustainability and Child Flourishing Index)  (Feb 2020)


193. ಬ್ಲೂ ಫ್ಲಾಗ್‌ (Blue Flag)



Saturday 29 August 2020

•► ಸಾಮಾನ್ಯ ಅಧ್ಯಯನ - 3: ️‘ವಿಪತ್ತು’ — ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವ ಪ್ರಕ್ರಿಯೆ — (NDRF) ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ — ವಿಪತ್ತು ಪರಿಹಾರ ನಿಧಿ. (Disaster - The process of National Disaster Declaration In India - (NDRF) National Disaster Response Fund - Disaster Relief Fund)

•► ಸಾಮಾನ್ಯ ಅಧ್ಯಯನ - 3: ️‘ವಿಪತ್ತು’ — ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವ ಪ್ರಕ್ರಿಯೆ — (NDRF) ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ — ವಿಪತ್ತು ಪರಿಹಾರ ನಿಧಿ.
(Disaster - The process of National Disaster Declaration In India - (NDRF) National Disaster Response Fund - Disaster Relief Fund)

━━━━━━━━━━━━━━━━━━━━━━━━━━━━━━━━━━━━━━━━

• ವಿಪತ್ತು ನಿರ್ವಹಣಾ ಕಾಯ್ದೆ, 2005ರ ಪ್ರಕಾರ, ‘ವಿಪತ್ತು’ ಎಂದರೆ ಯಾವುದೇ ಪ್ರದೇಶದಲ್ಲಿ ಸಂಭವಿಸುವ ವಿಪತ್ತು, ಅಪಘಾತ ಅಥವಾ ಗಂಭೀರ ಘಟನೆ, ನೈಸರ್ಗಿಕ ಅಥವಾ ಮಾನವ ನಿರ್ಮಿತ ಕಾರಣಗಳಿಂದ ಉಂಟಾಗುತ್ತದೆ, ಅಥವಾ ಅಪಘಾತ ಅಥವಾ ನಿರ್ಲಕ್ಷದಿಂದ ಗಣನೀಯ ಪ್ರಮಾಣದ ಜೀವ ನಷ್ಟ ಅಥವಾ ಮಾನವ ಸಂಕಟಗಳಿಗೆ ಕಾರಣವಾಗುತ್ತದೆ ಅಥವಾ ಪರಿಸರಕ್ಕೆ ಹಾನಿ ಮತ್ತು ನಾಶ, ಆಸ್ತಿ, ಅಥವಾ ಹಾನಿ, ಅಥವಾ ಅವನತಿ, ಮತ್ತು ಪೀಡಿತ ಪ್ರದೇಶದ ಸಮುದಾಯದ ನಿಭಾಯಿಸುವ ಸಾಮರ್ಥ್ಯವನ್ನು ಮೀರಿದಂತಹ ಸ್ವಭಾವ ಅಥವಾ ಪ್ರಮಾಣ.

• ನೈಸರ್ಗಿಕ ವಿಪತ್ತು ಭೂಕಂಪ, ಪ್ರವಾಹ, ಭೂಕುಸಿತ, ಚಂಡಮಾರುತ, ಸುನಾಮಿ, ನಗರ ಪ್ರವಾಹ, ಶಾಖದ ಅಲೆ; ಮಾನವ ನಿರ್ಮಿತ ವಿಪತ್ತು ಪರಮಾಣು, ಜೈವಿಕ ಮತ್ತು ರಾಸಾಯನಿಕವಾಗಿರಬಹುದು.

• ನೈಸರ್ಗಿಕ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಯಾವುದೇ ನಿಬಂಧನೆ, ಕಾರ್ಯನಿರ್ವಾಹಕ ಅಥವಾ ಕಾನೂನು ಇಲ್ಲ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್) / ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿಆರ್‌ಎಫ್) ಯ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳು, ವಿಪತ್ತು ಎಂದು ಘೋಷಿಸುವ ಉಲ್ಲೇಖವಿಲ್ಲ.

• 2001ರಲ್ಲಿ, ಅಂದಿನ ಪ್ರಧಾನ ಮಂತ್ರಿಯ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣೆಯ ರಾಷ್ಟ್ರೀಯ ಸಮಿತಿಯು ರಾಷ್ಟ್ರೀಯ ವಿಪತ್ತನ್ನು ವ್ಯಾಖ್ಯಾನಿಸಬೇಕಾದ ನಿಯಮಗಳನ್ನು ಪರಿಶೀಲಿಸುವಂತೆ ಆದೇಶಿಸಲಾಯಿತು. ಆದರೆ, ಸಮಿತಿ ಯಾವುದೇ ಸ್ಥಿರ ಮಾನದಂಡವನ್ನು ಸೂಚಿಸಿಲ್ಲ.

• ಇತ್ತೀಚಿನ ದಿನಗಳಲ್ಲಿ, ಕೆಲವು ಘಟನೆಗಳನ್ನು ನೈಸರ್ಗಿಕ ವಿಪತ್ತುಗಳೆಂದು ಘೋಷಿಸಲು ರಾಜ್ಯಗಳಿಂದ ಬೇಡಿಕೆಗಳು ಬಂದವು, ಉದಾಹರಣೆಗೆ 2013ರಲ್ಲಿ ಉತ್ತರಾಖಂಡ ಪ್ರವಾಹ, 2014 ರಲ್ಲಿ ಆಂಧ್ರಪ್ರದೇಶದ ಚಂಡಮಾರುತ ಮತ್ತು 2015ರ ಅಸ್ಸಾಂ ಪ್ರವಾಹ.

• 10ನೇ ಹಣಕಾಸು ಆಯೋಗವು (1995-2000) ಒಂದು ವಿಪತ್ತನ್ನು ರಾಜ್ಯದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರ ಮೇಲೆ ಪರಿಣಾಮ ಬೀರಿದರೆ ಅದನ್ನು ‘ಅಪರೂಪದ ತೀವ್ರತೆಯ ರಾಷ್ಟ್ರೀಯ ವಿಪತ್ತು’ ಎಂದು ಕರೆಯುವ ಪ್ರಸ್ತಾಪವನ್ನು ಪರಿಶೀಲಿಸಿತು. ‘ಅಪರೂಪದ ತೀವ್ರತೆಯ ವಿಪತ್ತು’ನ್ನು ವ್ಯಾಖ್ಯಾನಿಸಲಿಲ್ಲ ಆದರೆ ಅಪರೂಪದ ತೀವ್ರತೆಯ ವಿಪತ್ತನ್ನು ಅಗತ್ಯವಾಗಿ ಕೇಸ್-ಟು-ಕೇಸ್ ಆಧಾರದ ಮೇಲೆ ತೀರ್ಮಾನಿಸಬೇಕಾಗುತ್ತದೆ. ಉತ್ತರಾಖಂಡ ಮತ್ತು ಹುಧುದ್ ಚಂಡಮಾರುತದಲ್ಲಿನ ಪ್ರವಾಹವನ್ನು ನಂತರ ‘ತೀವ್ರ ಸ್ವಭಾವ’ದ ವಿಪತ್ತುಗಳು ಎಂದು ವರ್ಗೀಕರಿಸಲಾಯಿತು.

• ವಿಪತ್ತುಗಳ ಪರಿಗಣನೆ ಹೇಗೆ :
ಸಾಮಾನ್ಯವಾಗಿ ಸರ್ಕಾರದ ಪ್ರಕಾರ ಜಿಲ್ಲಾ ಮಟ್ಟದ ವಿಪತ್ತು, ರಾಜ್ಯ ಮಟ್ಟದ ವಿಪತ್ತು ಮತ್ತು ರಾಷ್ಟ್ರೀಯ ವಿಪತ್ತು ಎಂದು ಮೂರು ಆಯಾಮಗಳಲ್ಲಿ ಗುರುತಿಸಲಾಗುತ್ತದೆ.

ಭೂಕಂಪ, ನೆರೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿ, ಇಡೀ ಒಂದು ವ್ಯಾಪಕ ಪ್ರದೇಶ ಪುನರುಜ್ಜೀವನವಾಗಬೇಕೆಂದು ಕೇಂದ್ರಕ್ಕೆ ಮನವರಿಕೆ ಆದಾಗ ಅದನ್ನು ರಾಷ್ಟ್ರೀಯ ವಿಪತ್ತೆಂದು ಪರಿಗಣಿಸಲಾಗುತ್ತದೆ. ಇಲ್ಲವಾದಲ್ಲಿ ಕೆಲವು ಭಾಗ ಹಾನಿಯಾಗಿದ್ದರೆ ಕೇಂದ್ರ ತನ್ನ ನಿಯಮಗಳ ಅನುಸಾರ ನಷ್ಟದ ಅಂದಾಜನ್ನು ಲೆಕ್ಕ ಹಾಕಿ, ನಷ್ಟಕ್ಕೆ ತಕ್ಕಂತೆ ಮಾತ್ರ ರಾಜ್ಯಕ್ಕೆ ನೆರವು ನೀಡುತ್ತದೆ.

• ವಿಪತ್ತು ಪರಿಹಾರ ನಿಧಿ (ಸಿಆರ್‌ಎಫ್) :
ವಿಪತ್ತನ್ನು ‘ಅಪರೂಪದ ತೀವ್ರತೆ’ / ‘ತೀವ್ರ ಸ್ವಭಾವ’ ಎಂದು ಘೋಷಿಸಿದಾಗ, ರಾಜ್ಯ ಸರಕಾರಕ್ಕೆ ರಾಷ್ಟ್ರಮಟ್ಟದಲ್ಲಿ ಬೆಂಬಲವನ್ನು ನೀಡಲಾಗುತ್ತದೆ. ಎನ್‌ಡಿಆರ್‌ಎಫ್‌ನಿಂದ ಹೆಚ್ಚುವರಿ ಸಹಾಯವನ್ನೂ ಕೇಂದ್ರ ಪರಿಗಣಿಸುತ್ತದೆ. ವಿಪತ್ತು ಪರಿಹಾರ ನಿಧಿಯನ್ನು (ಸಿಆರ್‌ಎಫ್) ಸ್ಥಾಪಿಸಲಾಗಿದೆ, ಕಾರ್ಪಸ್ ಕೇಂದ್ರ ಮತ್ತು ರಾಜ್ಯಗಳ ನಡುವೆ 3:1 ಅನ್ನು ಹಂಚಿಕೊಂಡಿದೆ. ಸಿಆರ್‌ಎಫ್‌ನಲ್ಲಿನ ಸಂಪನ್ಮೂಲಗಳು ಅಸಮರ್ಪಕವಾಗಿದ್ದಾಗ, ಹೆಚ್ಚುವರಿ ಸಹಾಯವನ್ನು ರಾಷ್ಟ್ರೀಯ ವಿಪತ್ತು ಆಕಸ್ಮಿಕ ನಿಧಿಯಿಂದ (ಎನ್‌ಸಿಸಿಎಫ್) ಪರಿಗಣಿಸಲಾಗುತ್ತದೆ, ಇದನ್ನು ಕೇಂದ್ರವು ಶೇ. 100ರಷ್ಟು ಹಣವನ್ನು ನೀಡುತ್ತದೆ. ಸಾಲವನ್ನು ಮರುಪಾವತಿಸುವಲ್ಲಿನ ಪರಿಹಾರ ಅಥವಾ ರಿಯಾಯಿತಿ ನಿಯಮಗಳ ಮೇಲೆ ಪರಿಣಾಮ ಬೀರುವ ವ್ಯಕ್ತಿಗಳಿಗೆ ಹೊಸ ಸಾಲಗಳನ್ನು ನೀಡುವುದನ್ನೂ ಸಹ, ವಿಪತ್ತನ್ನು ‘ತೀವ್ರ’ ಎಂದು ಘೋಷಿಸಿದ ನಂತರ ಪರಿಗಣಿಸಲಾಗುತ್ತದೆ.

• ಹಾನಿಯ ಮೌಲ್ಯಮಾಪನ ಮತ್ತು ಅಗತ್ಯವಿರುವ ಪರಿಹಾರ ಸಹಾಯ ಅನುಮೋದನೆ :
ವಿಪತ್ತು ನಿರ್ವಹಣೆಯ ರಾಷ್ಟ್ರೀಯ ನೀತಿ, 2009ರ ಪ್ರಕಾರ, ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯು ಗಂಭೀರ ಅಥವಾ ರಾಷ್ಟ್ರೀಯ ಶಾಖೆಗಳನ್ನು ಹೊಂದಿರುವ ಪ್ರಮುಖ ಬಿಕ್ಕಟ್ಟುಗಳನ್ನು ನಿರ್ವಹಿಸುತ್ತದೆ. ತೀವ್ರ ಪ್ರಕೃತಿಯ ವಿಪತ್ತುಗಳಿಗೆ, ಹಾನಿಯ ಮೌಲ್ಯಮಾಪನ ಮತ್ತು ಅಗತ್ಯವಿರುವ ಪರಿಹಾರ ಸಹಾಯಕ್ಕಾಗಿ ಕೇಂದ್ರ ತಂಡಗಳನ್ನು ಪೀಡಿತ ರಾಜ್ಯಗಳಿಗೆ ನಿಯೋಜಿಸಲಾಗುತ್ತದೆ.

• ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಅಂತರ್-ಮಂತ್ರಿಮಂಡಲದ ಗುಂಪು ಮೌಲ್ಯಮಾಪನವನ್ನು ಅಧ್ಯಯನ ಮಾಡುತ್ತದೆ ಮತ್ತು ಎನ್‌ಡಿಆರ್‌ಎಫ್/ರಾಷ್ಟ್ರೀಯ ವಿಪತ್ತು ಆಕಸ್ಮಿಕ ನಿಧಿಯಿಂದ (ಎನ್‌ಸಿಸಿಎಫ್) ಸಹಾಯದ ಪ್ರಮಾಣವನ್ನು ಶಿಫಾರಸು ಮಾಡುತ್ತದೆ. ಇದರ ಆಧಾರದ ಮೇಲೆ ಹಣಕಾಸು ಸಚಿವರನ್ನು ಅಧ್ಯಕ್ಷರಾಗಿ ಮತ್ತು ಗೃಹ ಸಚಿವರು, ಕೃಷಿ ಸಚಿವರು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಕೇಂದ್ರ ಸಹಾಯವನ್ನು ಅನುಮೋದಿಸುತ್ತದೆ.

• ಅಮೆರಿಕದ 'ಫೆಮಾ' —
ಅಮೆರಿಕದಲ್ಲಿ, ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ (ಫೆಮಾ) ವಿಪತ್ತು ನಿರ್ವಹಣೆಯಲ್ಲಿ ಸರಕಾರದ ಪಾತ್ರವನ್ನು ಸಂಘಟಿಸುತ್ತದೆ. ಒಂದು ಘಟನೆಯು ಅಂತಹ ತೀವ್ರತೆ ಮತ್ತು ಪ್ರಮಾಣದಿಂದ ರಾಜ್ಯ ಮತ್ತು ಸ್ಥಳೀಯ ಸರಕಾರಗಳ ಸಾಮರ್ಥ್ಯಗಳನ್ನು ಮೀರಿದಾಗ, ಅಲ್ಲಿಯ ಗವರ್ನರ್ ಅಥವಾ ಮುಖ್ಯ ಕಾರ್ಯನಿರ್ವಾಹಕರು ಸ್ಟಾಫರ್ಡ್ ಕಾಯ್ದೆಯಡಿ ಫೆಡರಲ್ ಸಹಾಯವನ್ನು ಕೋರಬಹುದು. ವಿಶೇಷ ಸಂದರ್ಭಗಳಲ್ಲಿ, ಅಮೆರಿಕ ಅಧ್ಯಕ್ಷರು ರಾಜ್ಯಪಾಲರ ಕೋರಿಕೆಯಿಲ್ಲದೆ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ಸ್ಟಾಫರ್ಡ್ ಆ್ಯಕ್ಟ್ ಅಥವಾ ಪ್ರಮುಖ ವಿಪತ್ತು (ಹೆಚ್ಚು ತೀವ್ರ) ಎಂದು ಘೋಷಿಸಿದ ನಂತರ ಸ್ಥಳೀಯ ಮತ್ತು ರಾಜ್ಯ ಸರಕಾರಗಳು, ಕೆಲವು ಖಾಸಗಿ ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಹಣಕಾಸಿನ ಮತ್ತು ಇತರ ನೆರವು ನೀಡಲು ಸ್ಟಾಫರ್ಡ್ ಆ್ಯಕ್ಟ್ ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ.
(Courtesy : ‘ವಾರ್ತಾ ಭಾರತಿ’)

Friday 28 August 2020

•► ️PART XXVII — ಪ್ರಚಲಿತ ವಿದ್ಯಮಾನಗಳೊಂದಿಗೆ ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes on Current Affairs in Kannada)

•► ️PART XXVII — ಪ್ರಚಲಿತ ವಿದ್ಯಮಾನಗಳೊಂದಿಗೆ  ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ :
(IAS/KAS Exam Preparation Short Notes on Current Affairs in Kannada)
━━━━━━━━━━━━━━━━━━━━━━━━━━━━

~ Covered Topics :

184. ಮಾಮಲ್ಲಪುರಂ - ಮೋದಿ & ಕ್ಸಿ ಶೃಂಗಸಭೆ (IIನೇ  ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ)

185. ಭಾರತ - ಕ್ಯಾರಿಕೊಮ್ (CARICOM) ಶೃಂಗ

186. ನುವಾಖೈ ಜುಹಾರ್ ಹಬ್ಬ

187.ಭಾರತೀಯ ವಿಂಗಡಣೆ ಆಯುಕ್ತಾಲಯ / ಗಡಿ‌ ಮರು ನಿರ್ಣಯ ಆಯೋಗ 

(Delimitation commission or Boundary commission of India)

188.ಪದ್ಮನಾಭಸ್ವಾಮಿ ದೇವಾಲಯ.

 — Telegram Channel : @spardhaloka




•► ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Daily 10 Multiple Choice Questions)

•► ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
 (Daily 10 Multiple Choice Questions)

━━━━━━━━━━━━━━━━━━━━━━

151.ಈ ಕೆಳಗೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
1.ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಕಚೇರಿ ಈಗ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಬರುತ್ತದೆ.
2. ಸುಪ್ರೀಂ ಕೋರ್ಟ್ ನ‌ ಕೊಲಿಜಿಯಂ ಕೂಡ ಆರ್‌ಟಿಐ ವ್ಯಾಪ್ತಿಯಡಿ ಬರುತ್ತದೆ.
A) 1 ಮಾತ್ರ.
B) 2 ಮಾತ್ರ
C) ಮೇಲಿನ ಎಲ್ಲವೂ
D) ಮೇಲಿನ ಯಾವುದು ಅಲ್ಲ.


152.ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ 2019ರ ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.ಲಡಾಖ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿದೆ.
2.ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಚುನಾಯಿತ ಪ್ರತಿನಿಧಿಗಳ ಕೈಯಲ್ಲಿ ಭೂಮಿಯ ಮೇಲೆ ಹಕ್ಕು ಇರುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 2 ಮಾತ್ರ
C) ಮೇಲಿನ ಎಲ್ಲವೂ
D) ಮೇಲಿನ ಯಾವುದು ಅಲ್ಲ.


153.ಭಾರತವು ಇತ್ತೀಚೆಗೆ ಈ ದೇಶದೊಂದಿಗೆ 'ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ಪೂರ್ವಾನ್ವಯ ಅನುಮೋದನೆ ನೀಡಿತು.
A) ಜಿಂಬಾಬ್ವೆ.
B) ಮಾರಿಷಸ್.
C) ನ್ಯೂಜಿಲೆಂಡ್.
D) ಜಪಾನ್.


155.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1. ಸಮತೋಲನ ಬೆಲೆಗಿಂತ ಕಡಿಮೆ ಮಟ್ಟದ ಬೆಲೆಮಿತಿ (Price ceiling) ವಿಧಿಸುವಿಕೆಯು ಅಧಿಕ ಬೇಡಿಕೆಗೆ ಕಾರಣವಾಗುತ್ತದೆ.
2. ಸಮತೋಲನ ಬೆಲೆಗಿಂತ ಅಧಿಕ ಪ್ರಮಾಣದ ಬೆಲೆ ಅಂತಸ್ತಿನ (Price Floor) ವಿಧಿಸುವಿಕೆಯು ಅಧಿಕ ಪೂರೈಕೆಗೆ ಕಾರಣವಾಗುತ್ತದೆ.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 2 ಮಾತ್ರ
C) ಮೇಲಿನ ಎಲ್ಲವೂ
D) ಮೇಲಿನ ಯಾವುದು ಅಲ್ಲ.


156.ಕೋಶೀಯ / ವಿತ್ತೀಯ ಕೊರತೆ ಅಥವಾ ಹಣಕಾಸು ಕೊರತೆ (Fiscal Deficit)ಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ.
1.ಸಾಲ ವಸೂಲಾತಿಗಳು.
2.ಸಾರ್ವಜನಿಕ ಒಡೆತನದ ಘಟಕ (PSU)ಗಳ ಮಾರಾಟದಿಂದ ಬರುವ ಆದಾಯಗಳು.
3. ಕಂದಾಯ ಸ್ವೀಕೃತಿಗಳು.
A) 1 ಮಾತ್ರ
B) 1 ಮತ್ತು 2 ಮಾತ್ರ
C)  3 ಮಾತ್ರ
D) ಮೇಲಿನ ಎಲ್ಲವೂ.


157.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1.ಒಂದು ವೇಳೆ ಸರ್ಕಾರವು ಸಂಸತ್ತಿನ ಒಪ್ಪಿಗೆ ಪಡೆಯದ ಯಾವುದಾದರೂ ಬಾಬಿನಲ್ಲಿ ಹಣ ವಿನಿಯೋಗಿಸಬೇಕಾಗಿ ಬಂದಲ್ಲಿ ಅದಕ್ಕಾಗಿ ಪೂರಕ ಹಣಕಾಸು ಬೇಡಿಕೆಯನ್ನು ಸಂಸತ್ತಿನ ಎದುರು  ಮಂಡಿಸಲಾಗುತ್ತದೆ.
2.ಬಜೆಟ್‌ಗೆ ಮಂಜೂರಾತಿ ಕೊಡಲು ಲೋಕಸಭೆಗೆ ಮಾತ್ರ ಅಧಿಕಾರವಿದೆ.
3.ರಾಜ್ಯಸಭೆಯು ಬಜೆಟ್‌ಗೆ ತಿದ್ದುಪಡಿಗಳನ್ನು ಮಾತ್ರ ಸೂಚಿಸಬಹುದು.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 1 ಮತ್ತು 2 ಮಾತ್ರ
C) 2 ಮತ್ತು 3 ಮಾತ್ರ
D) ಮೇಲಿನ ಎಲ್ಲವೂ.


158.ಈ ಕೆಳಗೆ ನೀಡಿರುವ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?
1.ಏಂಜಲ್ ಜಲಪಾತ — ಚುರುನ್ ನದಿ
2.ನಯಾಗರ ಜಲಪಾತ — ಸೆಂಟ್ ಲಾರೆನ್ಸ್
3.ವಿಕ್ಟೋರಿಯಾ ಜಲಪಾತ — ಜಾಂಬೆಜಿ ನದಿ.
A) 1 ಮತ್ತು 2 ಮಾತ್ರ
B) 2 ಮಾತ್ರ
C) 2 ಮತ್ತು 3 ಮಾತ್ರ
D) ಮೇಲಿನ ಎಲ್ಲವೂ.


159.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1.ಸರಾಸರಿ ಶೇಕಡಾ 60ಕ್ಕಿಂತ ಕಡಿಮೆ ಮಳೆಯಾದರೆ ಬರಗಾಲ ಎಂದು ಪರಿಗಣಿಸಲಾಗುತ್ತದೆ.
2.ರಾಜ್ಯ ಸರ್ಕಾರ 2019ನ್ನು ಜಲವರ್ಷ ಎಂದು ಘೋಷಿಸಿದೆ.
3.ಹೆಚ್ಚು ಪ್ರಕೃತಿ ವಿಕೋಪ ಹಾನಿಗೊಳಗಾಗುವ ರಾಜ್ಯಗಳ ಪೈಕಿ ಕರ್ನಾಟಕವು 3ನೇ ಸ್ಥಾನದಲ್ಲಿದೆ
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 1 ಮತ್ತು 2 ಮಾತ್ರ
C) 2 ಮತ್ತು 3 ಮಾತ್ರ
D) ಮೇಲಿನ ಎಲ್ಲವೂ.


160.ಕೆಳಗಿನ ಜೋಡಿಗಳನ್ನು ಪರಿಗಣಿಸಿ:
   • ಬೆಟ್ಟಗಳು        • ಪ್ರದೇಶ
1. ಖೈಮೂರ್ ಬೆಟ್ಟಗಳು : ಕೊಂಕಣ ಕರಾವಳಿ
2. ಏಲಕ್ಕಿ ಬೆಟ್ಟಗಳು : ಕೋರಮಂಡಲ್
3. ಮಹಾದೇವ್ ಬೆಟ್ಟಗಳು : ಮಧ್ಯ ಭಾರತ
4. ಮಿಖಿರ್ ಬೆಟ್ಟಗಳು : ಈಶಾನ್ಯ ಭಾರತ
— ಮೇಲಿನ ಯಾವ ಜೋಡಿಗಳನ್ನು ಸರಿಯಾಗಿ ಹೊಂದಿಸಲಾಗಿದೆ?
A) 1 ಮತ್ತು 2
B) 1 ಮತ್ತು 3
C) 3 ಮತ್ತು 4
D) 1 ಮತ್ತು 4

Wednesday 26 August 2020

•► ಕೆಪಿಎಸ್‍ಸಿಯಿಂದ ️ಕೆಎಎಸ್ (ಗೆಜೆಟೆಡ್ ಪ್ರೋಬೆಷನರ್) ಮೇನ್ಸ್ ಲಿಖಿತ ಪರೀಕ್ಷೆ ಪತ್ರಿಕೆಗಳ ಕುರಿತು ಇತ್ತೀಚಿನ ತಿದ್ದುಪಡಿಗಳ ಅಧಿಸೂಚನೆ : 05/08/ 2020 (Latest Amendments on KAS (Gazetted Probationer) Mains Written Examination Papers: 05/08/2020)

•► ಕೆಪಿಎಸ್‍ಸಿಯಿಂದ ಕೆಎಎಸ್ (ಗೆಜೆಟೆಡ್ ಪ್ರೋಬೆಷನರ್) ಮೇನ್ಸ್ ಲಿಖಿತ ಪರೀಕ್ಷೆ ಪತ್ರಿಕೆಗಳ ಕುರಿತು ಇತ್ತೀಚಿನ ತಿದ್ದುಪಡಿಗಳ ಅಧಿಸೂಚನೆ : 05/08/ 2020
(Latest Amendments on KAS (Gazetted Probationer) Mains Written Examination  Papers: 05/08/2020)

━━━━━━━━━━━━━━━━━━━━━━━━━━━━━━━━━━━━━━━━



Monday 24 August 2020

•► ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (ಸರಿ ಉತ್ತರಗಳೊಂದಿಗೆ) (Daily 10 Multiple Choice Questions with Answers)

•► ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (ಸರಿ ಉತ್ತರಗಳೊಂದಿಗೆ)
 (Daily 10 Multiple Choice Questions with Answers)
━━━━━━━━━━━━━━━━━━━━━━━━━━━━━━━━━━━━━━━━


141.ಸಿಂಧೂ ನದಿಯ ಜಲಾನಯನ ಪ್ರದೇಶವು ಈ ಕೆಳಕಂಡ ದೇಶಗಳೊಂದಿಗೆ ಹಂಚಿಹೋಗಿದೆ.
A) ಭಾರತ, ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ.
B) ನೇಪಾಳ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ.
C) ಚೀನಾ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ.√
D) ಭಾರತ, ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ.

142. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ  “ಕ್ಸೆನೋಬೊಟ್ಸ್”(Xenobots) ಎಂಬ ಪದವು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದುದಾಗಿದೆ?
A) ಇದು ಸ್ವಯಂಚಾಲಿತ ಪ್ರೊಗ್ರಾಮೆಬಲ್ ಮಾಲ್ವೇರ್ ಆಗಿದ್ದು ಸಿಸ್ಟಮ್ ಸೆನ್ಸಿಟಿವ್ ಫೈಲ್‌ಗಳಲ್ಲಿ ಅನುಚಿತವಾಗಿ ಮಧ್ಯಪ್ರವೇಶಿಸುವ ಕಾರ್ಯಾಚರಣೆ.
B) COVID ಸ್ಕ್ರೀನಿಂಗ್ ಮತ್ತು ಕಣ್ಗಾವಲುಗೆ ಸಹಾಯ ಮಾಡುವ ಭಾರತೀಯ ರೈಲ್ವೆಯ ರೋಬೋಟ್.
C) ಸ್ವ-ಗುಣಪಡಿಸುವ (self- healing) ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ಜೈವಿಕ ರೋಬೋಟ್ √
D) ನೈಜ ಮಾನವರಂತೆ ಸಂಭಾಷಿಸುವ ಮತ್ತು ಸಹಾನುಭೂತಿ ತೋರುವ ಸಾಮರ್ಥ್ಯ ಹೊಂದಿದ ವಿಶ್ವದ ಮೊದಲ ಕೃತಕ ಮಾನವ.

143. ಇತ್ತೀಚೆಗೆ  (Feb 2019) ದೇಶದ ಮೊದಲ ರೋಬೋಟ್ ಪೊಲೀಸ್ 'ಕೆಪಿ-ಬೋಟ್' (KP-BOT) - ಹ್ಯೂಮನಾಯ್ಡ್  ಪೊಲೀಸ್ ರೋಬೋ (ಮಾನವರ ಜತೆ ಸಂಭಾಷಣೆ ನಡೆಸುವಂಥ ಯಂತ್ರ ಮಾನವ) ಗೆ ಚಾಲನೆ ನೀಡಿದ ರಾಜ್ಯ?
A) ಕೇರಳ.√
B) ನವ ದೆಹಲಿ.
C) ತಮಿಳು ನಾಡು.
D) ಪಂಜಾಬ್.

144.ಕೆಳಗಿನವುಗಳಲ್ಲಿನ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1.ಶ್ಯೋಕ್ ನದಿಯು ಸಿಂಧೂ ನದಿಯ ಉಪನದಿ.
2.ಈ ನದಿಯು ನುಬ್ರ ಕಣಿವೆಯಲ್ಲಿ ಹರಿಯುತ್ತದೆ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.√
D. ಮೇಲಿನ ಯಾವುದೂ ಅಲ್ಲ.

145.'ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಜಡ್ -Coastal Regulation Zone) ಅಧಿಸೂಚನೆ 2018' ರ ಕುರಿತ ಕೆಳಗಿನವುಗಳಲ್ಲಿನ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1.ಎಲ್ಲ ದ್ವೀಪಗಳ 20 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿಗೆ ಅವಕಾಶ ಇರುವುದಿಲ್ಲ.
2.ಸಮುದ್ರದ ಕಡಿಮೆ ಉಬ್ಬರವಿಳಿತದಿಂದ ಸಮುದ್ರದಲ್ಲಿ 12 ನಾಟಿಕಲ್‌ ಮೈಲುಗಳ ಪ್ರದೇಶವು ಪರಿಸರ ಸೂಕ್ಷ್ಮ ಜೈವಿಕ ವಲಯವೆಂದು ಪರಿಗಣಿಸಲಾಗಿದೆ.
A. 1 ಮಾತ್ರ.√
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.

(ಸಿ.ಆರ್.ಝೆಡ್. ೧ರ ಪ್ರಕಾರ, ಹೆಚ್ಚು ಉಬ್ಬರವಿಳಿತದ ರೇಖೆಯಿಂದ ೫೦೦ ಮೀಟರ್ವರೆಗೆ ಅಭಿವೃದ್ಧಿಕರ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಸಿ.ಆರ್.ಝೆಡ್. ೪ ಪ್ರಕಾರ, ಕಡಿಮೆ ಉಬ್ಬರವಿಳಿತದ ರೇಖೆಯಿಂದ ೧೨ ಕಡಲ ಮೈಲುಗಳವರೆಗೆ ಸಾಗರದೊಳಗಿರುವ ಪ್ರದೇಶಗಳು ಪರಿಸರ ಸೂಕ್ಷ್ಮವಲ್ಲದ ಪ್ರದೇಶಕ್ಕೆ ಸೇರಿದ್ದು)

146.ಇತ್ತೀಚೆಗೆ ಬಿಡುಗಡೆಯಾದ 'ರಾಷ್ಟ್ರೀಯ ಹುಲಿ  ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ವರದಿ'ಯ (Jun 2020) ಪ್ರಕಾರ...
1.ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶವಾಗಿದೆ.
2.ಮಹಾರಾಷ್ಟ್ರದಲ್ಲಿಯೇ ಗರಿಷ್ಠ ಹುಲಿಗಳು ಸಾವನ್ನಪ್ಪಿದೆ.
ಮೇಲಿನವುಗಳಲ್ಲಿನ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
A. 1 ಮಾತ್ರ.√
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.

(ಮಧ್ಯ ಪ್ರದೇಶದಲ್ಲಿ ಗರಿಷ್ಠ ಹುಲಿಗಳು ಸಾವನ್ನಪ್ಪಿದೆ. ಮಧ್ಯಪ್ರದೇಶದಲ್ಲಿ ಮಾತ್ರವಾಗಿ 173 ಹುಲಿಗಳು ಬಲಿಯಾಗಿದೆ. ಮಧ್ಯ ಪ್ರದೇಶ ಹೊರತಾಗಿ ಮಹಾರಾಷ್ಟ್ರದಲ್ಲಿ 125, ಕರ್ನಾಟಕದಲ್ಲಿ 111, ಉತ್ತರಾಖಂಡದಲ್ಲಿ 88, ತಮಿಳುನಾಡು ಹಾಗೂ ಅಸ್ಸಾಂನಲ್ಲಿ ತಲಾ 54, ಕೇರಳ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 35 ಹುಲಿಗಳ ಸಾವು ಸಂಭವಿಸಿದೆ.
 ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶವಾಗಿದ್ದು, ಅಲ್ಲಿ 526 ಹುಲಿಗಳಿವೆ.)

147. 'ನವರೂಜ್‌ ಹಬ್ಬ(Nowruz)'ದ ಕುರಿತ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
1.ಇದು ಇಸ್ಲಾಂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದು.
2.ಒಮರ್ ಖಯ್ಯಾಂ ‘ನವರೂಜ್ ನಾಮಾ’ ಬರೆದಿದ್ದಾನೆ.
3.ಪ್ರತಿವರ್ಷ ಮಾರ್ಚ್‌ 21 'ಅಂತರರಾಷ್ಟ್ರೀಯ ನವರೂಜ್ ರಜೆ'ಯಾಗಿ ವಿಶ್ವಸಂಸ್ಥೆಯಿಂದ ಘೊಷಿಸಲಾಗಿದೆ.
A. 1 ಮತ್ತು 3 ಮಾತ್ರ
B. 3 ಮಾತ್ರ.
C. 2 ಮತ್ತು 3 ಮಾತ್ರ.√
D. ಮೇಲಿನ ಎಲ್ಲವೂ.

 ('ನವರೋಜ್ ಹಬ್ಬ'ವು ಪಾರ್ಸಿಗಳ ಹೊಸವರ್ಷ ಆಚರಣೆಯ ಹಬ್ಬವಾಗಿದೆ.)

148.ಈ ಕೆಳಗಿನ ಯಾವ ಘಟನೆ-ಗಳು 'ಅಸಹಕಾರ ಚಳವಳಿ'ಗೆ (NCM) ಸಂಬಂಧಿಸಿವೆ?
1. ಅನ್ನಿ ಬೆಸೆಂಟ್‍ರ ಬಂಧನ
2. ಮಲಬಾರ್‌ನ ಮಾಪ್ಪಿಲಾ ದಂಗೆ
3. ಚೌರಿ ಚೌರಾ ಹಿಂಸೆ
4. ಗಾಂಧಿ ಮತ್ತು ಲಾರ್ಡ್ ರೀಡಿಂಗ್‍ರ ಮಾತುಕತೆ
— ಕೆಳಗೆ ನೀಡಿರುವ ಸರಿಯಾದ ಉತ್ತರವನ್ನು ಆರಿಸಿ.
A) 3 ಮಾತ್ರ
B) 3 ಮತ್ತು 4 ಮಾತ್ರ.√
C) 1 ಮತ್ತು 2 ಮಾತ್ರ.
D) ಮೇಲಿನ ಎಲ್ಲವೂ.
 
149. ಈ ಕೆಳಗಿನವುಗಳಲ್ಲಿ ಯಾವವು ಭಾರತದ 'ಗಡಿ‌ ಮರು ನಿರ್ಣಯ ಆಯೋಗ'(ಡಿಲಿಮಿಟೇಶನ್ ಕಮಿಷನ್) ನ ಪ್ರಮುಖ ಕಾರ್ಯಗಳಾಗಿವೆ?
1. ರಾಜ್ಯದ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವುದು.
2. ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ಚುನಾವಣಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು.
3. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸ್ಥಾನಗಳನ್ನು ಗುರುತಿಸುವುದು.
— ಕೆಳಗೆ ನೀಡಿರುವ ಸರಿಯಾದ ಉತ್ತರವನ್ನು ಆರಿಸಿ.
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ √
C) 2 ಮತ್ತು 3 ಮಾತ್ರ
D) ಮೇಲಿನ ಎಲ್ಲವೂ.

150.ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ “ಪಿಎಂ-ಸ್ವನಿಧಿ ಯೋಜನೆ (PM Svandihi scheme)” ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಹೆಚ್ಚು ಗ್ರಾಮೀಣ ಭೂಹೀನ ವ್ಯಕ್ತಿಗಳಿಗೆ ರೂ.10,000 ವರೆಗೆ ಕೈಗೆಟುಕುವ ಸಾಲವನ್ನು ನೀಡುವ ವಿಶೇಷ ಮೈಕ್ರೋ-ಕ್ರೆಡಿಟ್ ಸೌಲಭ್ಯ ಯೋಜನೆಯಾಗಿದೆ. 2. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಈ ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ಪಾಲುದಾರ. 3. ಇದನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಾರಂಭಿಸಿದ್ದು, ಮೇಲ್ವಿಚಾರಣೆಯನ್ನು ಕೂಡ ಇದು ಕೈಗೊಳ್ಳುವುದು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 1 ಮತ್ತು 2 ಮಾತ್ರ
C) 2 ಮತ್ತು 3 ಮಾತ್ರ √
D) ಮೇಲಿನ ಎಲ್ಲವೂ.

(ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಪುನರಾರಂಭಿಸಲು ಕೇಂದ್ರ ಸರ್ಕಾರವು ‘ಪಿಎಂ ಸ್ವನಿಧಿ’ ಯೋಜನೆಯಡಿ ₹ 10 ಸಾವಿರದ ತನಕ ಸಾಲ ನೀಡುವ ಉದ್ದೇಶವನ್ನು ಹೊಂದಿದೆ’)

Sunday 23 August 2020

•► ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Daily 10 Multiple Choice Questions)

•► ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
 (Daily 10 Multiple Choice Questions)

━━━━━━━━━━━━━━━━━━━━━


141.ಸಿಂಧೂ ನದಿಯ ಜಲಾನಯನ ಪ್ರದೇಶವು ಈ ಕೆಳಕಂಡ ದೇಶಗಳೊಂದಿಗೆ ಹಂಚಿಹೋಗಿದೆ.
A) ಭಾರತ, ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ.
B) ನೇಪಾಳ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ.
C) ಚೀನಾ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ.
D) ಭಾರತ, ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ.


142. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ  “ಕ್ಸೆನೋಬೊಟ್ಸ್”(Xenobots) ಎಂಬ ಪದವು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದುದಾಗಿದೆ?
A) ಇದು ಸ್ವಯಂಚಾಲಿತ ಪ್ರೊಗ್ರಾಮೆಬಲ್ ಮಾಲ್ವೇರ್ ಆಗಿದ್ದು ಸಿಸ್ಟಮ್ ಸೆನ್ಸಿಟಿವ್ ಫೈಲ್‌ಗಳಲ್ಲಿ ಅನುಚಿತವಾಗಿ ಮಧ್ಯಪ್ರವೇಶಿಸುವ ಕಾರ್ಯಾಚರಣೆ.
B) COVID ಸ್ಕ್ರೀನಿಂಗ್ ಮತ್ತು ಕಣ್ಗಾವಲುಗೆ ಸಹಾಯ ಮಾಡುವ ಭಾರತೀಯ ರೈಲ್ವೆಯ ರೋಬೋಟ್.
C) ಸ್ವ-ಗುಣಪಡಿಸುವ (self- healing) ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ಜೈವಿಕ ರೋಬೋಟ್
D) ನೈಜ ಮಾನವರಂತೆ ಸಂಭಾಷಿಸುವ ಮತ್ತು ಸಹಾನುಭೂತಿ ತೋರುವ ಸಾಮರ್ಥ್ಯ ಹೊಂದಿದ ವಿಶ್ವದ ಮೊದಲ ಕೃತಕ ಮಾನವ.


143. ಇತ್ತೀಚೆಗೆ  (Feb 2019) ದೇಶದ ಮೊದಲ ರೋಬೋಟ್ ಪೊಲೀಸ್ 'ಕೆಪಿ-ಬೋಟ್' (KP-BOT) - ಹ್ಯೂಮನಾಯ್ಡ್  ಪೊಲೀಸ್ ರೋಬೋ (ಮಾನವರ ಜತೆ ಸಂಭಾಷಣೆ ನಡೆಸುವಂಥ ಯಂತ್ರ ಮಾನವ) ಗೆ ಚಾಲನೆ ನೀಡಿದ ರಾಜ್ಯ?
A) ಕೇರಳ.
B) ನವ ದೆಹಲಿ.
C) ತಮಿಳು ನಾಡು.
D) ಪಂಜಾಬ್.


144.ಶ್ಯೋಕ್ ನದಿಯ ಕುರಿತ ಈ ಕೆಳಗಿನವುಗಳಲ್ಲಿನ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1.ಶ್ಯೋಕ್ ನದಿಯು ಸಿಂಧೂ ನದಿಯ ಉಪನದಿ.
2.ಈ ನದಿಯು ನುಬ್ರ ಕಣಿವೆಯಲ್ಲಿ ಹರಿಯುತ್ತದೆ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.


145.'ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಜಡ್ -Coastal Regulation Zone) ಅಧಿಸೂಚನೆ 2018' ರ ಕುರಿತ ಕೆಳಗಿನವುಗಳಲ್ಲಿನ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1.ಎಲ್ಲ ದ್ವೀಪಗಳ 20 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿಗೆ ಅವಕಾಶ ಇರುವುದಿಲ್ಲ.
2.ಸಮುದ್ರದ ಕಡಿಮೆ ಉಬ್ಬರವಿಳಿತದಿಂದ ಸಮುದ್ರದಲ್ಲಿ 12 ನಾಟಿಕಲ್‌ ಮೈಲುಗಳ ಪ್ರದೇಶವು ಪರಿಸರ ಸೂಕ್ಷ್ಮ ಜೈವಿಕ ವಲಯವೆಂದು ಪರಿಗಣಿಸಲಾಗಿದೆ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.


146.ಇತ್ತೀಚೆಗೆ ಬಿಡುಗಡೆಯಾದ 'ರಾಷ್ಟ್ರೀಯ ಹುಲಿ  ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ವರದಿ'ಯ (Jun 2020) ಪ್ರಕಾರ...
1.ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶವಾಗಿದೆ.
2.ಮಹಾರಾಷ್ಟ್ರದಲ್ಲಿಯೇ ಗರಿಷ್ಠ ಹುಲಿಗಳು ಸಾವನ್ನಪ್ಪಿದೆ.
ಮೇಲಿನವುಗಳಲ್ಲಿನ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.


147. 'ನವರೂಜ್‌ ಹಬ್ಬ(Nowruz)'ದ ಕುರಿತ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
1.ಇದು ಇಸ್ಲಾಂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದು.
2.ಒಮರ್ ಖಯ್ಯಾಂ ‘ನವರೂಜ್ ನಾಮಾ’ ಬರೆದಿದ್ದಾನೆ.
3.ಪ್ರತಿವರ್ಷ ಮಾರ್ಚ್‌ 21 'ಅಂತರರಾಷ್ಟ್ರೀಯ ನವರೂಜ್ ರಜೆ'ಯಾಗಿ ವಿಶ್ವಸಂಸ್ಥೆಯಿಂದ ಘೊಷಿಸಲಾಗಿದೆ.
A. 1 ಮತ್ತು 3 ಮಾತ್ರ
B. 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನ ಎಲ್ಲವೂ.

148.ಈ ಕೆಳಗಿನ ಯಾವ ಘಟನೆ-ಗಳು 'ಅಸಹಕಾರ ಚಳವಳಿ'ಗೆ (NCM) ಸಂಬಂಧಿಸಿವೆ?
1. ಅನ್ನಿ ಬೆಸೆಂಟ್‍ರ ಬಂಧನ
2. ಮಲಬಾರ್‌ನ ಮಾಪ್ಪಿಲಾ ದಂಗೆ
3. ಚೌರಿ ಚೌರಾ ಹಿಂಸೆ
4. ಗಾಂಧಿ ಮತ್ತು ಲಾರ್ಡ್ ರೀಡಿಂಗ್‍ರ ಮಾತುಕತೆ
— ಕೆಳಗೆ ನೀಡಿರುವ ಸರಿಯಾದ ಉತ್ತರವನ್ನು ಆರಿಸಿ.
A) 3 ಮಾತ್ರ
B) 3 ಮತ್ತು 4 ಮಾತ್ರ.
C) 1 ಮತ್ತು 2 ಮಾತ್ರ.
D) ಮೇಲಿನ ಎಲ್ಲವೂ.

 
149. ಈ ಕೆಳಗಿನವುಗಳಲ್ಲಿ ಯಾವವು ಭಾರತದ 'ಗಡಿ‌ ಮರು ನಿರ್ಣಯ ಆಯೋಗ'(ಡಿಲಿಮಿಟೇಶನ್ ಕಮಿಷನ್) ನ ಪ್ರಮುಖ ಕಾರ್ಯಗಳಾಗಿವೆ?
1. ರಾಜ್ಯದ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವುದು.
2. ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ಚುನಾವಣಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು.
3. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸ್ಥಾನಗಳನ್ನು ಗುರುತಿಸುವುದು.
— ಕೆಳಗೆ ನೀಡಿರುವ ಸರಿಯಾದ ಉತ್ತರವನ್ನು ಆರಿಸಿ.
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ
D) ಮೇಲಿನ ಎಲ್ಲವೂ.


150.ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ “ಪಿಎಂ-ಸ್ವನಿಧಿ ಯೋಜನೆ (PM Svandihi scheme)” ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಹೆಚ್ಚು ಗ್ರಾಮೀಣ ಭೂಹೀನ ವ್ಯಕ್ತಿಗಳಿಗೆ ರೂ.10,000 ವರೆಗೆ ಕೈಗೆಟುಕುವ ಸಾಲವನ್ನು ನೀಡುವ ವಿಶೇಷ ಮೈಕ್ರೋ-ಕ್ರೆಡಿಟ್ ಸೌಲಭ್ಯ ಯೋಜನೆಯಾಗಿದೆ. 2. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಈ ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ಪಾಲುದಾರ. 3. ಇದನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಾರಂಭಿಸಿದ್ದು, ಮೇಲ್ವಿಚಾರಣೆಯನ್ನು ಕೂಡ ಇದು ಕೈಗೊಳ್ಳುವುದು.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 1 ಮತ್ತು 2 ಮಾತ್ರ
C) 2 ಮತ್ತು 3 ಮಾತ್ರ
D) ಮೇಲಿನ ಎಲ್ಲವೂ.

(ಸರಿ ಉತ್ತರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು)

Saturday 22 August 2020

•► ️PART XXVI — ಪ್ರಚಲಿತ ವಿದ್ಯಮಾನಗಳೊಂದಿಗೆ ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes on Current Affairs in Kannada)

•► ️PART XXVI — ಪ್ರಚಲಿತ ವಿದ್ಯಮಾನಗಳೊಂದಿಗೆ  ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ :
(IAS/KAS Exam Preparation Short Notes on Current Affairs in Kannada)
━━━━━━━━━━━━━━━━━━━━━━━━━━━━


~ Covered Topics :

180. ವಿಶ್ವಸಂಸ್ಥೆಯ ಮರುಭೂಮೀಕರಣ ವಿರುದ್ಧ ಸಮರ ಕುರಿತ 14ನೇ ಸಮ್ಮೇಳನ -UNCCD COP 14 - 2019.

181. ಪೈಕಾ ರೆಬೆಲಿಯನ್ / ಪೈಕಾ ಬಿದ್ರೋಹ.

182.55ನೇ ಜ್ಞಾನಪೀಠ ಪ್ರಶಸ್ತಿ .

183. ಬರ್ಲಿನ್ ಗೋಡೆಯ ಪತನ
.
Telegram Channel — @spardhaloka



Tuesday 18 August 2020

•► ಯುಪಿಎಸ್‌ಸಿ: 2021ರ ನಾಗರಿಕ ಸೇವೆಗಳ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ : (UPSC Exam Calendar 2021 released on upsc.gov.in)

•► ಯುಪಿಎಸ್‌ಸಿ: 2021ರ ನಾಗರಿಕ ಸೇವೆಗಳ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ :
(UPSC Exam Calendar 2021 released on upsc.gov.in)

━━━━━━━━━━━━━━━━━━━━━━━━━━━━━━
 ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2021ನೇ ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.



ಹೆಚ್ಚಿನ ಮಾಹಿತಿಗೆ www.upsc.gov.in ವೆಬ್‌ಸೈಟ್ ವೀಕ್ಷಿಸಿ.

Monday 17 August 2020

•► (ಸರಿ ಉತ್ತರಗಳೊಂದಿಗೆ) ಪ್ರಚಲಿತ ಘಟನೆಗಳಾಧಾರಿತ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ-2020"- "ಭಾಗ 3 (Multiple choice questions based on Current affairs - 2020)

•► (ಸರಿ ಉತ್ತರಗಳೊಂದಿಗೆ) ಪ್ರಚಲಿತ ಘಟನೆಗಳಾಧಾರಿತ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ-2020"- "ಭಾಗ 3 (Multiple choice questions based on Current affairs - 2020)━━━━━━━━━━━━━━━━━━━━━━━━━━━━━━━━━━━━━━━━


•• .ಸೂಚನೆಗಳು :-
★ ಇಲ್ಲಿ ತಯಾರಿಸಲಾದ ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆಯು 2019-20 ರ  ಪ್ರಚಲಿತ ಹಾಗೂ ಮಹತ್ವದ ಘಟನೆಗಳನ್ನಾಧರಿಸಿ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ.

★ ಸ್ಪರ್ಧಾಲೋಕ ಟೆಲೆಗ್ರಾಮ್ ಚಾನೆಲ್‌ (@spardhaloka) ನಲ್ಲಿ ದಿನಂಪ್ರತಿ ಕೇಳಲಾಗುವ ಕ್ವಿಝ್ ಎಲ್ಲವನ್ನೂ  ಇಲ್ಲಿ ಒಂದೆಡೆ ಕ್ರೋಢೀಕರಿಸಿರುವುದು.
★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಗಳನ್ನು ಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ ಭಾಗ 3ನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.

— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.




121. 'ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್'- 2019' ಕುರಿತ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.ಸರ್ಕಾರವು ದೇಶದ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ ಸಮೀಕ್ಷೆಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸುವುದು.
 2.ಅರಣ್ಯ ವ್ಯಾಪ್ತಿ ಹೆಚ್ಚಾಗಿರುವ ರಾಜ್ಯಗಳಲ್ಲಿ ಕರ್ನಾಟಕವು ಪ್ರಥಮ ಸ್ಥಾನದಲ್ಲಿದೆ.
 — ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2 √
ಡಿ. ಇವೆರಡೂ ಸರಿಯಾಗಿಲ್ಲ.

122. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ.
1.ಪಿ-ನೋಟ್ಸ್ ಮೂಲಕ ನಡೆಸುವ ವ್ಯವಹಾರವು ಸೆಬಿಯಿಂದ ನಿಯಂತ್ರಿಸಲ್ಪಡುತ್ತದೆ.
2.ಪಿ-ನೋಟ್ಸ್ ಗಳ ಮೂಲಕ ಭಾರತೀಯ ಮಾರುಕಟ್ಟೆಗಳಲ್ಲಿ ವಿದೇಶಿ ಹೂಡಿಕೆದಾರರು ತಮ್ಮ ಗುರುತನ್ನು ಬಹಿರಂಗಪಡಿಸದೆ ಹೂಡಿಕೆ ಮಾಡಬಹುದು.
ಎ. 1 ಮಾತ್ರ
ಬಿ. 2 ಮಾತ್ರ √
ಸಿ. 1 ಮತ್ತು 2
ಡಿ. ಇವೆರಡೂ ಸರಿಯಾಗಿಲ್ಲ.
(ಸೆಬಿಯಲ್ಲಿ ನೋಂದಣಿ ಆಗದೆ ಭಾರತೀಯ ಮಾರುಕಟ್ಟೆಗಳಲ್ಲಿ  ವಿದೇಶಿ ಹೂಡಿಕೆದಾರರು ತಮ್ಮ ಗುರುತನ್ನು ಬಹಿರಂಗಪಡಿಸದೆ ಹೂಡಿಕೆ ಮಾಡುವುದನ್ನು ಪಿ-ನೋಟ್ಸ್ ಎಂದು ಕರೆಯುತ್ತಾರೆ.)

123.  ಈ ಕೆಳಗಿನವುಗಳಲ್ಲಿ ಸರಿಯಾದವನ್ನು ಗುರುತಿಸಿ.
a. ಕಿಶೆನ್ ಗಂಗಾ - ಜಮ್ಮು ಮತ್ತು ಕಾಶ್ಮೀರ.
b. 'ಪೆನಗಂಗಾ ನದಿ' - ಮಹಾರಾಷ್ಟ್ರ
c. 'ವೆನಗಂಗಾ ನದಿ'- ಮಧ್ಯಪ್ರದೇಶ
1) a ಮಾತ್ರ
2) a & b ಮಾತ್ರ
3) b & c ಮಾತ್ರ
4) ಮೇಲಿನೆಲ್ಲವೂ.√

124.ಇತ್ತೀಚೆಗೆ ಸುದ್ದಿಯಲ್ಲಿದ್ದ 'ಆಪರೇಷನ್ ಪೀಸ್ ಸ್ಪ್ರಿಂಗ್' ಕಾರ್ಯಾಚರಣೆಯನ್ನು ನಡೆಸಿದ ದೇಶ?
A) ಟರ್ಕಿ.√
B) ಸಿರಿಯಾ.
C) ಯಮೆನ್.
D) ಸೌದಿ ಅರೇಬಿಯಾ.

125. ಇತ್ತೀಚೆಗೆ ಸುದ್ದಿಯಲ್ಲಿದ್ದ 'ಒರೊಮೊ ಸಮುದಾಯ' / 'ಒರೊಮಿಯಾ ಪ್ರಾಂತ್ಯ' ಈ ದೇಶಕ್ಕೆ ಸಂಬಂಧಿಸಿರುವುದು.
A) ಬುರ್ಕಿನಾ ಫಾಸೊ.
B) ಇಥಿಯೋಪಿಯಾ.√
C) ಹೊಂಡುರಾಸ್‌.
D) ನ್ಯೂಜಿಲೆಂಡ್.

126.ಈ ಕೆಳಕಂಡ ಯಾವ್ಯಾವ 'ಕಾನ್ಫರೆನ್ಸ್ ಆಫ್ ಪಾರ್ಟಿಸ್' (ಸಿಒಪಿ) ಜಾಗತಿಕ ಸಮ್ಮೇಳನಗಳು ಇತ್ತೀಚೆಗೆ ಭಾರತದಲ್ಲಿ ಹಮ್ಮಿಕೊಂಡಿರುವಂಥವು?
1.UNCCD.
2.UNFCCC
3.UNCBD
— ಸರಿಯಾದುದನ್ನು ಗುರುತಿಸಿ.
A. 2 ಮಾತ್ರ
B. 1 ಮತ್ತು 2
C. 2 ಮತ್ತು 3
D. ಮೇಲಿನ ಎಲ್ಲವೂ.√

127.'ಹಳದಿ ಉಡುಗೆ ಪ್ರತಿಭಟನೆ'(Yellow Vest)ಯು ಇತ್ತೀಚೆಗೆ ಸುದ್ದಿಯಲ್ಲಿದ್ದು, ಈ ದೇಶಕ್ಕೆ ಸಂಬಂಧಿಸಿದೆ.
A) ಫ್ರಾನ್ಸ್.√
B) ಟರ್ಕಿ.
C) ಸಿರಿಯಾ.
D) ಹಾಂಗ್‌ಕಾಂಗ್.

128. ಇತ್ತೀಚೆಗೆ ಜಾಗತಿಕ ತಾಪಮಾನ ನಿಯಂತ್ರಣ, ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿತಗೊಳಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ತನ್ನ  ವರದಿಯಲ್ಲಿ ’ಇಂಗಾಲದ ಮೇಲಿನ ತೆರಿಗೆ’ (ಕಾರ್ಬನ್‌ ಟ್ಯಾಕ್ಸ್‌)‌' ಬಗ್ಗೆ ಸೂಚಿಸಿದ್ದು, ಪ್ರತಿ ಟನ್‌ ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆ'ಗೆ ಎಷ್ಟು ತೆರಿಗೆ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ?
A) 100 ಅಮೆರಿಕನ್‌ ಡಾಲರ್‌(₹7,000).
B) 70 ಅಮೆರಿಕನ್‌ ಡಾಲರ್‌(₹4,840).√
C) 50 ಅಮೆರಿಕನ್‌ ಡಾಲರ್‌(₹3,457).
D) 10 ಅಮೆರಿಕನ್‌ ಡಾಲರ್‌(₹690).

129 ಇತ್ತೀಚೆಗೆ ಭಾರತದಲ್ಲಿ ಹಮ್ಮಿಕೊಳ್ಳಲಾದ ಯಾವ ಜಾಗತಿಕ ಸಮಾವೇಶದಲ್ಲಿ “ದೆಹಲಿ ಘೋಷಣೆ”(Delhi Declaration) ಎಂಬ ನಿರ್ಣಾಯಕ ಭವಿಷ್ಯದ ಕ್ರಿಯಾಯೋಜನೆಯನ್ನು ಘೋಷಿಸಲಾಯಿತು?
A. UNCCD.√
B. UNFCCC.
C. UNCBD.
D. CMS COP13.

130. ಜಾಗತಿಕ ಮಟ್ಟದಲ್ಲಿ ಜೀವ ವೈವಿಧ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು 'ಜೀವವೈವಿಧ್ಯತೆಯ ಕುರಿತ ವಿಶ್ವಸಂಸ್ಥೆಯ ಸಮಾವೇಶ' (United Nations Convention on Biodiversity) ವು 3 ಪ್ರಮುಖ ಪೂರಕಗಳನ್ನು ಹೊಂದಿದೆ, ಅವುಗಳೆಂದರೆ ಕಾರ್ಟಜೆನಾ ಪ್ರೋಟೋಕಾಲ್, ಐಚಿ ಜೀವವೈವಿಧ್ಯ ಪ್ರೋಟೋಕಾಲ್ ಮತ್ತು ನಾಗೋಯಾ ಪ್ರೋಟೋಕಾಲ್.
— ಸರಿಯಾದ ದೇಶಗಳೊಂದಿಗೆ ಹೊಂದಿಸಲಾದ ಆಯಾ ಸ್ಥಳವನ್ನು ಗುರುತಿಸಿ.
1) ಕಾರ್ಟಜೆನಾ - ವೆನೆಜುವೆಲಾ
2) ಐಚಿ - ಜಪಾನ್
3) ನಾಗೋಯಾ - ಜಪಾನ್
— ಸರಿಯಾದುದನ್ನು ಗುರುತಿಸಿ.
A. 1 ಮಾತ್ರ
B. 2 ಮಾತ್ರ.
C. 2 ಮತ್ತು 3√
D. ಮೇಲಿನ ಎಲ್ಲವೂ.
(ಕಾರ್ಟಜೆನಾ - ಕೊಲಂಬಿಯದಲ್ಲಿದೆ)

131. ಈ ಕೆಳಗಿನ ಯಾವ ಬುಡಕಟ್ಟು ಜನಾಂಗಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ ?
1) ಕಾನಿಕರಣ್ ಬುಡಕಟ್ಟು - ಅಗಸ್ತ್ಯಮಾಲೈ ಬಯೋಸ್ಪಿಯರ್ ರಿಸರ್ವ್
2) ತೋಡಾ ಬುಡಕಟ್ಟು - ನೀಲಗಿರಿ ಬಯೋಸ್ಪಿಯರ್ ರಿಸರ್ವ್
3) ಮಂಕಿಡಿಯಾ ಬುಡಕಟ್ಟು - ಸಿಂಪ್ಲಿಪಾಲ್ ಬಯೋಸ್ಪಿಯರ್ ರಿಸರ್ವ್
4) ಮಾಲ್ಧಾರಿ ಬುಡಕಟ್ಟು - ಕಚ್ ಬಯೋಸ್ಪಿಯರ್ ರಿಸರ್ವ್.
A. 1 ಮತ್ತು 3 ಮಾತ್ರ
B. 1 ಮತ್ತು 4 ಮಾತ್ರ.
C. 1, 3 ಮತ್ತು 4 ಮಾತ್ರ.
D. ಮೇಲಿನ ಎಲ್ಲವೂ.√

132.'ಬಾರಾ-ಲಾಚ್ ಲಾ ಕಣಿವೆಮಾರ್ಗ' ಇತ್ತೀಚೆಗೆ ಸುದ್ದಿಯಲ್ಲಿತ್ತು. ಈ ನಿಟ್ಟಿನಲ್ಲಿ ಈ ಕೆಳಗಿನ ನೀಡಲಾದ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
1. ಇದು ಕಾರಕೋರಂ ಶ್ರೇಣಿಯಲ್ಲಿದೆ.
2. ಇದು ಹಿಮಾಚಲ ಪ್ರದೇಶದ ಲಾಹೌಲ್ ಜಿಲ್ಲೆಯನ್ನು ಲಡಾಖ್‌ನ ಲೇಹ್ ಜಿಲ್ಲೆಗೆ ಸಂಪರ್ಕಿಸುತ್ತದೆ.
3. ಇದು ಭಾಗಾ ನದಿ ಮತ್ತು ಯುನಮ್ ನದಿಯ ನಡುವೆ ಗಡಿ ವಿಭಜನೆಯಾಗಿ ನೆಲೆಗೊಂಡಿದೆ.
A. 1 ಮತ್ತು 3 ಮಾತ್ರ
B. 3 ಮಾತ್ರ.
C. 2 ಮತ್ತು 3 ಮಾತ್ರ.√
D. ಮೇಲಿನ ಎಲ್ಲವೂ.
(ಇದು ಜಾಂಸ್ಕರ್ ಶ್ರೇಣಿಯಲ್ಲಿದೆ.)

133. 'ಆಯುಷ್ಮಾನ್‌ ಭಾರತ್‌ ಅಥವಾ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ' (PMJAY) ಕುರಿತ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
1.ಇದು ಒಂದು ಅರ್ಹತೆ ಆಧಾರಿತ ಯೋಜನೆಯಾಗಿದ್ದು ಭಾರತದಾದ್ಯಂತ ಎಲ್ಲಾ ಸಾರ್ವಜನಿಕ ಮತ್ತು ಎಂಪನೇಲ್ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೇವೆಗಳನ್ನು ಪಡೆಯಬಹುದು.
2.ಆಯುಷ್ಮಾನ್ ಭಾರತ್ ಯೋಜನೆಯಡಿ ಕೋವಿಡ್-19 ಚಿಕಿತ್ಸೆಯೂ ಸೇರ್ಪಡೆಯಾಗಿದೆ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.√
D. ಮೇಲಿನ ಯಾವುದೂ ಅಲ್ಲ.

134.'ಹೋಪ್ (HOPE) ಬಾಹ್ಯಾಕಾಶ ನೌಕೆ' ಕುರಿತ  ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1. ಇದು ಜಪಾನ್‌ ಸಹಭಾಗಿತ್ವದಲ್ಲಿ, ಸಂಯುಕ್ತ ಅರಬ್ ಸಂಸ್ಥಾನ(ಯುಎಇ) ನಿರ್ಮಿಸಿರುವ ಬಾಹ್ಯಾಕಾಶ ನೌಕೆಯಾಗಿದೆ.
2. ಮಂಗಳ ಗ್ರಹದ ಕೆಳ ವಾತಾವರಣದಲ್ಲಿನ ವಾತಾವರಣ ಮತ್ತು ಹವಾಮಾನ ಘಟನೆಗಳನ್ನು ಅಧ್ಯಯನ ಮಾಡುತ್ತದೆ.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.√
D. ಮೇಲಿನ ಯಾವುದೂ ಅಲ್ಲ.

135. ಇತ್ತೀಚೆಗೆ ಸುದ್ದಿಯಲ್ಲಿದ್ದ ಸಕ್ರಿಯ ಜ್ವಾಲಾಮುಖಿಗಳು & ಅವುಗಳಿರುವ ದೇಶಗಳ ಸರಿಯಾದ ಜೋಡಿ ಗುರುತಿಸಿ.
1. ಮೌಂಟ್ ಮೆರಾಪಿ — ಇಂಡೋನೇಷ್ಯಾ.
2. ಒಲ್‌ ಡೋಯಿನ್ಯೋ ಲೆಂಗಾಯಿ — ತಾಂಜಾನಿಯಾ.
3. ಎರ್ಟಾ ಏಲ್ — ಇಂಥಿಯೋಪಿಯಾ‌
A. 1 ಮತ್ತು 3 ಮಾತ್ರ
B. 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನ ಎಲ್ಲವೂ.√

136. ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಿಂದ (ಸಿಐಐಎಲ್) ಅಧಿಕೃತವಾಗಿ ಘೋಷಿಸಲಾದ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ  ಅಳಿವಿನಂಚಿನಲ್ಲಿರುವ `ಸೈಮರ್ ಬುಡಕಟ್ಟು ಭಾಷೆ'ಯು ಯಾವ ರಾಜ್ಯದಲ್ಲಿ ಕಂಡುಬರುವುದು?
A) ತ್ರಿಪುರ.√
B) ನಾಗಾಲ್ಯಾಂಡ್.
C) ಆಸ್ಸಾಂ.
D) ರಾಜಸ್ಥಾನ.

137. ಇತ್ತೀಚೆಗೆ ಸುದ್ದಿಯಲ್ಲಿದ್ದ 'ಸಕ್ಟೆಂಗ್‌ ಅಭಯಾರಣ್ಯ ಪ್ರದೇಶ'ವು ಇವೆರಡು ದೇಶಗಳ ನಡುವಿನ ವಿವಾದಿತ ಪ್ರದೇಶವಾಗಿದೆ.
A) ಭೂತಾನ್‌ ಮತ್ತು ಭಾರತ.
B) ಚೀನಾ ಮತ್ತು ಭೂತಾನ್‌.√
C) ನೇಪಾಳ ಮತ್ತು ಭಾರತ.
D) ಚೀನಾ ಮತ್ತು ಭಾರತ.

138. ಫೈನಾನ್ಶಿಯಲ್ ಆಕ್ಷನ್ ಟಾಸ್ಕ್‌ ಫೋರ್ಸ್ (FATF) ಕುರಿತ  ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1.ಇದು ನ್ಯೂಯಾರ್ಕ್ ಮೂಲದ ಅಂತರ ಸರ್ಕಾರಿ ಮಟ್ಟದ ಸಂಸ್ಥೆಯಾಗಿದೆ.
2. ಪಾಕಿಸ್ತಾನವನ್ನು ಉಗ್ರ ಚಟುವಟಿಕೆಗಳಿಂದ ಸುಧಾರಿಸಲು ಕೊನೆಯ ಎಚ್ಚರಿಕೆ ನೀಡುವ ಮೂಲಕ ‘ಕಡು­ಬೂದು’ ಪಟ್ಟಿಯಲ್ಲಿ ಸೇರಿಸಿದೆ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.√
(FATFಯು ಪ್ಯಾರಿಸ್‌ ಮೂಲ +  39 ಸದಸ್ಯ ದೇಶಗಳು + ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಅಂತರ್‌ರಾಷ್ಟ್ರೀಯ ಕಣ್ಗಾವಲು ಸಂಸ್ಥೆ +  ಪ್ರಸ್ತುತ ಪಾಕಿಸ್ತಾನ  ಬೂದು ಬಣ್ಣದ ಪಟ್ಟಿಯಲ್ಲಿದೆ. + ಇರಾನನ್ನು ತನ್ನ ಕಪ್ಪುಪಟ್ಟಿಯಲ್ಲಿರಿಸಿದೆ)

139. 'ಅಶ್ಗಬತ್ ಒಪ್ಪಂದ' (Ashgabat Agreement) ವು ಬಹುರಾಷ್ಟ್ರೀಯ ಸಾರಿಗೆ ಒಪ್ಪಂದವಾಗಿದ್ದು, ಇದು ಅಂತರರಾಷ್ಟ್ರೀಯ ಸಾರಿಗೆ ಮತ್ತು ಸಾಗಣೆ ಕಾರಿಡಾರ್ ಅನ್ನು ಮಧ್ಯ ಏಷ್ಯಾವನ್ನು ಪರ್ಷಿಯನ್ ಗಲ್ಫ್‌ನೊಂದಿಗೆ ಸಂಪರ್ಕಿಸುತ್ತದೆ.
— ಈ ಒಪ್ಪಂದಕ್ಕೊಳಪಡುವ ದೇಶಗಳು ಯಾವವೆಂದರೆ;
1.ಕಝಾಕಿಸ್ತಾನ್ 2.ಇರಾನ್ 3.ಭಾರತ 4.ಪಾಕಿಸ್ತಾನ 5.ಅಫ್ಘಾನಿಸ್ತಾನ.

A) 2, 3 ಮತ್ತು 5 ಮಾತ್ರ.
B) 2, 3, 4 ಮತ್ತು 5 ಮಾತ್ರ.
C) 1,3 ಮತ್ತು 5 ಮಾತ್ರ.
D) 1, 2, 3 ಮತ್ತು 4 ಮಾತ್ರ√


140. ಇತ್ತೀಚೆಗೆ  "ಓಷನ್ಸ್ ಅಂಡ್ ಕ್ರಯೊಸ್ಪಿಯರ್" ಎಂಬ ವಿಶೇಷ ವರದಿಯನ್ನು ಬಿಡುಗಡೆ ಮಾಡಿದ  ಸಂಸ್ಥೆ?
A) UNFCC.
B) WMO.
C) ಗ್ಲೋಬಲ್ ಗ್ರೀನ್ ಗ್ರೋತ್ ಇನ್‌ಸ್ಟಿಟ್ಯೂಟ್ ಹಾಗೂ CSTEP.
D) IPCC.√

Sunday 16 August 2020

•► ಪ್ರಚಲಿತ ಘಟನೆಗಳಾಧಾರಿತ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ-2020"- "ಭಾಗ 3 (Multiple choice questions based on Current affairs - 2020)

•► ಪ್ರಚಲಿತ ಘಟನೆಗಳಾಧಾರಿತ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ-2020"- "ಭಾಗ 3 
(Multiple choice questions based on Current affairs - 2020)
━━━━━━━━━━━━━━━━━━━━━━━━━━━━━━━━━━━━━━━━


•• .ಸೂಚನೆಗಳು :-
★ ಇಲ್ಲಿ ತಯಾರಿಸಲಾದ ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆಯು 2019-20 ರ  ಪ್ರಚಲಿತ ಹಾಗೂ ಮಹತ್ವದ ಘಟನೆಗಳನ್ನಾಧರಿಸಿ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ. 
★ ಸ್ಪರ್ಧಾಲೋಕ ಟೆಲೆಗ್ರಾಮ್ ಚಾನೆಲ್‌ (@spardhaloka) ನಲ್ಲಿ ದಿನಂಪ್ರತಿ ಕೇಳಲಾಗುವ ಕ್ವಿಝ್ ಎಲ್ಲವನ್ನೂ  ಇಲ್ಲಿ ಒಂದೆಡೆ ಕ್ರೋಢೀಕರಿಸಿರುವುದು.
★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಗಳನ್ನು ಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ ಭಾಗ 3ನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.

— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.


121. 'ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್'- 2019' ಕುರಿತ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.ಸರ್ಕಾರವು ದೇಶದ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ ಸಮೀಕ್ಷೆಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸುವುದು.
 2.ಅರಣ್ಯ ವ್ಯಾಪ್ತಿ ಹೆಚ್ಚಾಗಿರುವ ರಾಜ್ಯಗಳಲ್ಲಿ ಕರ್ನಾಟಕವು ಪ್ರಥಮ ಸ್ಥಾನದಲ್ಲಿದೆ.
 — ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಇವೆರಡೂ ಸರಿಯಾಗಿಲ್ಲ.

122. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ.
1.ಪಿ-ನೋಟ್ಸ್ ಮೂಲಕ ನಡೆಸುವ ವ್ಯವಹಾರವು ಸೆಬಿಯಿಂದ ನಿಯಂತ್ರಿಸಲ್ಪಡುತ್ತದೆ.
2.ಪಿ-ನೋಟ್ಸ್ ಗಳ ಮೂಲಕ ಭಾರತೀಯ ಮಾರುಕಟ್ಟೆಗಳಲ್ಲಿ ವಿದೇಶಿ ಹೂಡಿಕೆದಾರರು ತಮ್ಮ ಗುರುತನ್ನು ಬಹಿರಂಗಪಡಿಸದೆ ಹೂಡಿಕೆ ಮಾಡಬಹುದು.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಇವೆರಡೂ ಸರಿಯಾಗಿಲ್ಲ.

123.  ಈ ಕೆಳಗಿನವುಗಳಲ್ಲಿ ಸರಿಯಾದವನ್ನು ಗುರುತಿಸಿ.
a. ಕಿಶೆನ್ ಗಂಗಾ - ಜಮ್ಮು ಮತ್ತು ಕಾಶ್ಮೀರ.
b. 'ಪೆನಗಂಗಾ ನದಿ' - ಮಹಾರಾಷ್ಟ್ರ
c. 'ವೆನಗಂಗಾ ನದಿ'- ಮಧ್ಯಪ್ರದೇಶ
1) a ಮಾತ್ರ
2) a & b ಮಾತ್ರ
3) b & c ಮಾತ್ರ
4) ಮೇಲಿನೆಲ್ಲವೂ.

124.ಇತ್ತೀಚೆಗೆ ಸುದ್ದಿಯಲ್ಲಿದ್ದ 'ಆಪರೇಷನ್ ಪೀಸ್ ಸ್ಪ್ರಿಂಗ್' ಕಾರ್ಯಾಚರಣೆಯನ್ನು ನಡೆಸಿದ ದೇಶ?
A) ಟರ್ಕಿ.
B) ಸಿರಿಯಾ.
C) ಯಮೆನ್.
D) ಸೌದಿ ಅರೇಬಿಯಾ.

125. ಇತ್ತೀಚೆಗೆ ಸುದ್ದಿಯಲ್ಲಿದ್ದ 'ಒರೊಮೊ ಸಮುದಾಯ' / 'ಒರೊಮಿಯಾ ಪ್ರಾಂತ್ಯ' ಈ ದೇಶಕ್ಕೆ ಸಂಬಂಧಿಸಿರುವುದು.
A) ಬುರ್ಕಿನಾ ಫಾಸೊ.
B) ಇಥಿಯೋಪಿಯಾ.
C) ಹೊಂಡುರಾಸ್‌.
D) ನ್ಯೂಜಿಲೆಂಡ್.

126.ಈ ಕೆಳಕಂಡ ಯಾವ್ಯಾವ 'ಕಾನ್ಫರೆನ್ಸ್ ಆಫ್ ಪಾರ್ಟಿಸ್' (ಸಿಒಪಿ) ಜಾಗತಿಕ ಸಮ್ಮೇಳನಗಳು ಇತ್ತೀಚೆಗೆ ಭಾರತದಲ್ಲಿ ಹಮ್ಮಿಕೊಂಡಿರುವಂಥವು?
1.UNCCD.
2.UNFCCC
3.UNCBD
— ಸರಿಯಾದುದನ್ನು ಗುರುತಿಸಿ.
A. 2 ಮಾತ್ರ
B. 1 ಮತ್ತು 2
C. 2 ಮತ್ತು 3
D. ಮೇಲಿನ ಎಲ್ಲವೂ.

127.'ಹಳದಿ ಉಡುಗೆ ಪ್ರತಿಭಟನೆ'(Yellow Vest)ಯು ಇತ್ತೀಚೆಗೆ ಸುದ್ದಿಯಲ್ಲಿದ್ದು, ಈ ದೇಶಕ್ಕೆ ಸಂಬಂಧಿಸಿದೆ.
A) ಫ್ರಾನ್ಸ್.
B) ಟರ್ಕಿ.
C) ಸಿರಿಯಾ.
D) ಹಾಂಗ್‌ಕಾಂಗ್.

128. ಇತ್ತೀಚೆಗೆ ಜಾಗತಿಕ ತಾಪಮಾನ ನಿಯಂತ್ರಣ, ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿತಗೊಳಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ತನ್ನ  ವರದಿಯಲ್ಲಿ ’ಇಂಗಾಲದ ಮೇಲಿನ ತೆರಿಗೆ’ (ಕಾರ್ಬನ್‌ ಟ್ಯಾಕ್ಸ್‌)‌' ಬಗ್ಗೆ ಸೂಚಿಸಿದ್ದು, ಪ್ರತಿ ಟನ್‌ ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆ'ಗೆ ಎಷ್ಟು ತೆರಿಗೆ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ?
A) 100 ಅಮೆರಿಕನ್‌ ಡಾಲರ್‌(₹7,000).
B) 70 ಅಮೆರಿಕನ್‌ ಡಾಲರ್‌(₹4,840).
C) 50 ಅಮೆರಿಕನ್‌ ಡಾಲರ್‌(₹3,457).
D) 10 ಅಮೆರಿಕನ್‌ ಡಾಲರ್‌(₹690).

129 ಇತ್ತೀಚೆಗೆ ಭಾರತದಲ್ಲಿ ಹಮ್ಮಿಕೊಳ್ಳಲಾದ ಯಾವ ಜಾಗತಿಕ ಸಮಾವೇಶದಲ್ಲಿ “ದೆಹಲಿ ಘೋಷಣೆ”(Delhi Declaration) ಎಂಬ ನಿರ್ಣಾಯಕ ಭವಿಷ್ಯದ ಕ್ರಿಯಾಯೋಜನೆಯನ್ನು ಘೋಷಿಸಲಾಯಿತು?
A. UNCCD.
B. UNFCCC.
C. UNCBD.
D. CMS COP13.

130. ಜಾಗತಿಕ ಮಟ್ಟದಲ್ಲಿ ಜೀವ ವೈವಿಧ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು 'ಜೀವವೈವಿಧ್ಯತೆಯ ಕುರಿತ ವಿಶ್ವಸಂಸ್ಥೆಯ ಸಮಾವೇಶ' (United Nations Convention on Biodiversity) ವು 3 ಪ್ರಮುಖ ಪೂರಕಗಳನ್ನು ಹೊಂದಿದೆ, ಅವುಗಳೆಂದರೆ ಕಾರ್ಟಜೆನಾ ಪ್ರೋಟೋಕಾಲ್, ಐಚಿ ಜೀವವೈವಿಧ್ಯ ಪ್ರೋಟೋಕಾಲ್ ಮತ್ತು ನಾಗೋಯಾ ಪ್ರೋಟೋಕಾಲ್.
— ಸರಿಯಾದ ದೇಶಗಳೊಂದಿಗೆ ಹೊಂದಿಸಲಾದ ಆಯಾ ಸ್ಥಳವನ್ನು ಗುರುತಿಸಿ.
1) ಕಾರ್ಟಜೆನಾ - ವೆನೆಜುವೆಲಾ
2) ಐಚಿ - ಜಪಾನ್
3) ನಾಗೋಯಾ - ಜಪಾನ್
— ಸರಿಯಾದುದನ್ನು ಗುರುತಿಸಿ.
A. 1 ಮಾತ್ರ
B. 2 ಮಾತ್ರ.
C. 2 ಮತ್ತು 3.
D. ಮೇಲಿನ ಎಲ್ಲವೂ.

131. ಈ ಕೆಳಗಿನ ಯಾವ ಬುಡಕಟ್ಟು ಜನಾಂಗಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ ?
1) ಕಾನಿಕರಣ್ ಬುಡಕಟ್ಟು - ಅಗಸ್ತ್ಯಮಾಲೈ ಬಯೋಸ್ಪಿಯರ್ ರಿಸರ್ವ್
2) ತೋಡಾ ಬುಡಕಟ್ಟು - ನೀಲಗಿರಿ ಬಯೋಸ್ಪಿಯರ್ ರಿಸರ್ವ್
3) ಮಂಕಿಡಿಯಾ ಬುಡಕಟ್ಟು - ಸಿಂಪ್ಲಿಪಾಲ್ ಬಯೋಸ್ಪಿಯರ್ ರಿಸರ್ವ್
4) ಮಾಲ್ಧಾರಿ ಬುಡಕಟ್ಟು - ಕಚ್ ಬಯೋಸ್ಪಿಯರ್ ರಿಸರ್ವ್.
A. 1 ಮತ್ತು 3 ಮಾತ್ರ
B. 1 ಮತ್ತು 4 ಮಾತ್ರ.
C. 1, 3 ಮತ್ತು 4 ಮಾತ್ರ.
D. ಮೇಲಿನ ಎಲ್ಲವೂ.

132.'ಬಾರಾ-ಲಾಚ್ ಲಾ ಕಣಿವೆಮಾರ್ಗ' ಇತ್ತೀಚೆಗೆ ಸುದ್ದಿಯಲ್ಲಿತ್ತು. ಈ ನಿಟ್ಟಿನಲ್ಲಿ ಈ ಕೆಳಗಿನ ನೀಡಲಾದ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
1. ಇದು ಕಾರಕೋರಂ ಶ್ರೇಣಿಯಲ್ಲಿದೆ.
2. ಇದು ಹಿಮಾಚಲ ಪ್ರದೇಶದ ಲಾಹೌಲ್ ಜಿಲ್ಲೆಯನ್ನು ಲಡಾಖ್‌ನ ಲೇಹ್ ಜಿಲ್ಲೆಗೆ ಸಂಪರ್ಕಿಸುತ್ತದೆ.
3. ಇದು ಭಾಗಾ ನದಿ ಮತ್ತು ಯುನಮ್ ನದಿಯ ನಡುವೆ ಗಡಿ ವಿಭಜನೆಯಾಗಿ ನೆಲೆಗೊಂಡಿದೆ.
A. 1 ಮತ್ತು 3 ಮಾತ್ರ
B. 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನ ಎಲ್ಲವೂ.

133. 'ಆಯುಷ್ಮಾನ್‌ ಭಾರತ್‌ ಅಥವಾ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ' (PMJAY) ಕುರಿತ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
1.ಇದು ಒಂದು ಅರ್ಹತೆ ಆಧಾರಿತ ಯೋಜನೆಯಾಗಿದ್ದು ಭಾರತದಾದ್ಯಂತ ಎಲ್ಲಾ ಸಾರ್ವಜನಿಕ ಮತ್ತು ಎಂಪನೇಲ್ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೇವೆಗಳನ್ನು ಪಡೆಯಬಹುದು.
2.ಆಯುಷ್ಮಾನ್ ಭಾರತ್ ಯೋಜನೆಯಡಿ ಕೋವಿಡ್-19 ಚಿಕಿತ್ಸೆಯೂ ಸೇರ್ಪಡೆಯಾಗಿದೆ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.

134.'ಹೋಪ್ (HOPE) ಬಾಹ್ಯಾಕಾಶ ನೌಕೆ' ಕುರಿತ  ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1. ಇದು ಜಪಾನ್‌ ಸಹಭಾಗಿತ್ವದಲ್ಲಿ, ಸಂಯುಕ್ತ ಅರಬ್ ಸಂಸ್ಥಾನ(ಯುಎಇ) ನಿರ್ಮಿಸಿರುವ ಬಾಹ್ಯಾಕಾಶ ನೌಕೆಯಾಗಿದೆ.
2. ಮಂಗಳ ಗ್ರಹದ ಕೆಳ ವಾತಾವರಣದಲ್ಲಿನ ವಾತಾವರಣ ಮತ್ತು ಹವಾಮಾನ ಘಟನೆಗಳನ್ನು ಅಧ್ಯಯನ ಮಾಡುತ್ತದೆ.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.

135. ಇತ್ತೀಚೆಗೆ ಸುದ್ದಿಯಲ್ಲಿದ್ದ ಸಕ್ರಿಯ ಜ್ವಾಲಾಮುಖಿಗಳು & ಅವುಗಳಿರುವ ದೇಶಗಳ ಸರಿಯಾದ ಜೋಡಿ ಗುರುತಿಸಿ.
1. ಮೌಂಟ್ ಮೆರಾಪಿ — ಇಂಡೋನೇಷ್ಯಾ.
2. ಒಲ್‌ ಡೋಯಿನ್ಯೋ ಲೆಂಗಾಯಿ — ತಾಂಜಾನಿಯಾ.
3. ಎರ್ಟಾ ಏಲ್ — ಇಂಥಿಯೋಪಿಯಾ‌
A. 1 ಮತ್ತು 3 ಮಾತ್ರ
B. 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನ ಎಲ್ಲವೂ.

136. ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಿಂದ (ಸಿಐಐಎಲ್) ಅಧಿಕೃತವಾಗಿ ಘೋಷಿಸಲಾದ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ  ಅಳಿವಿನಂಚಿನಲ್ಲಿರುವ `ಸೈಮರ್ ಬುಡಕಟ್ಟು ಭಾಷೆ'ಯು ಯಾವ ರಾಜ್ಯದಲ್ಲಿ ಕಂಡುಬರುವುದು?.
A) ತ್ರಿಪುರ.
B) ನಾಗಾಲ್ಯಾಂಡ್.
C) ಆಸ್ಸಾಂ.
D) ರಾಜಸ್ಥಾನ.

137. ಇತ್ತೀಚೆಗೆ ಸುದ್ದಿಯಲ್ಲಿದ್ದ 'ಸಕ್ಟೆಂಗ್‌ ಅಭಯಾರಣ್ಯ ಪ್ರದೇಶ'ವು ಇವೆರಡು ದೇಶಗಳ ನಡುವಿನ ವಿವಾದಿತ ಪ್ರದೇಶವಾಗಿದೆ.
A) ಭೂತಾನ್‌ ಮತ್ತು ಭಾರತ.
B) ಚೀನಾ ಮತ್ತು ಭೂತಾನ್‌.
C) ನೇಪಾಳ ಮತ್ತು ಭಾರತ.
D) ಚೀನಾ ಮತ್ತು ಭಾರತ.

138. ಫೈನಾನ್ಶಿಯಲ್ ಆಕ್ಷನ್ ಟಾಸ್ಕ್‌ ಫೋರ್ಸ್ (FATF) ಕುರಿತ  ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1.ಇದು ನ್ಯೂಯಾರ್ಕ್ ಮೂಲದ ಅಂತರ ಸರ್ಕಾರಿ ಮಟ್ಟದ ಸಂಸ್ಥೆಯಾಗಿದೆ.
2. ಪಾಕಿಸ್ತಾನವನ್ನು ಉಗ್ರ ಚಟುವಟಿಕೆಗಳಿಂದ ಸುಧಾರಿಸಲು ಕೊನೆಯ ಎಚ್ಚರಿಕೆ ನೀಡುವ ಮೂಲಕ ‘ಕಡು­ಬೂದು’ ಪಟ್ಟಿಯಲ್ಲಿ ಸೇರಿಸಿದೆ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.

139. 'ಅಶ್ಗಬತ್ ಒಪ್ಪಂದ' (Ashgabat Agreement) ವು ಬಹುರಾಷ್ಟ್ರೀಯ ಸಾರಿಗೆ ಒಪ್ಪಂದವಾಗಿದ್ದು, ಇದು ಅಂತರರಾಷ್ಟ್ರೀಯ ಸಾರಿಗೆ ಮತ್ತು ಸಾಗಣೆ ಕಾರಿಡಾರ್ ಅನ್ನು ಮಧ್ಯ ಏಷ್ಯಾವನ್ನು ಪರ್ಷಿಯನ್ ಗಲ್ಫ್‌ನೊಂದಿಗೆ ಸಂಪರ್ಕಿಸುತ್ತದೆ.
— ಈ ಒಪ್ಪಂದಕ್ಕೊಳಪಡುವ ದೇಶಗಳು ಯಾವವೆಂದರೆ;
1.ಕಝಾಕಿಸ್ತಾನ್ 2.ಇರಾನ್ 3.ಭಾರತ 4.ಪಾಕಿಸ್ತಾನ 5.ಅಫ್ಘಾನಿಸ್ತಾನ.

A) 2, 3 ಮತ್ತು 5 ಮಾತ್ರ.
B) 2, 3, 4 ಮತ್ತು 5 ಮಾತ್ರ.
C) 1,3 ಮತ್ತು 5 ಮಾತ್ರ.
D) 1, 2, 3 ಮತ್ತು 4 ಮಾತ್ರ.

140. ಇತ್ತೀಚೆಗೆ  "ಓಷನ್ಸ್ ಅಂಡ್ ಕ್ರಯೊಸ್ಪಿಯರ್" ಎಂಬ ವಿಶೇಷ ವರದಿಯನ್ನು ಬಿಡುಗಡೆ ಮಾಡಿದ  ಸಂಸ್ಥೆ?
A) UNFCC.
B) WMO.
C) ಗ್ಲೋಬಲ್ ಗ್ರೀನ್ ಗ್ರೋತ್ ಇನ್‌ಸ್ಟಿಟ್ಯೂಟ್ ಹಾಗೂ CSTEP.
D) IPCC..

... ಸರಿಯುತ್ತರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.