"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 26 March 2015

☀ ಸಾಮಾನ್ಯ ಜ್ಞಾನ (ಭಾಗ - 13) ☀ General Knowledge (Part-13): ☆.. ಪ್ರಚಲಿತ ಘಟನೆಗಳೊಂದಿಗೆ ...

☀ ಸಾಮಾನ್ಯ ಜ್ಞಾನ (ಭಾಗ - 13)
☀ General Knowledge (Part-13):

☆.. ಪ್ರಚಲಿತ ಘಟನೆಗಳೊಂದಿಗೆ ...

━━━━━━━━━━━━━━━━━━━━━━━━━━━━━━━━━━━━━━━━━━━━━


581) ಹರಗೋವಿಂದ ಖುರಾನ್ ಅವರಿಗೆ ನೊಬೆಲ್ ಪಾರಿತೋಷಕ ಯಾವ ವರ್ಷದಲ್ಲಿ ದೊರೆಯಿತು?
— 1968 ರಲ್ಲಿ.


582) ಜಾರ್ಖಂಡ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
—15/11/2000 ರಲ್ಲಿ.


583) ಪ್ರಸ್ತುತ ಬಾಂಗ್ಲಾದೇಶದ ಆಡಳಿತಾರೂಢ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷಗಳು ಯಾವವು?

— ಆಡಳಿತಾರೂಢ ಪಕ್ಷ: -ಅವಾಮಿ ಲೀಗ್ ಪಕ್ಷ (ಎಎಲ್‌)

— ವಿರೋಧ ಪಕ್ಷ: -ಬಾಂಗ್ಲಾದೇಶ್‌ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)


584) ಡೆನ್ಮಾರ್ಕ್ ದೇಶದ ರಾಷ್ಟ್ರೀಯ ಪಕ್ಷಿ ಯಾವುದು?
— ಕೋಗಿಲೆ.


585) ಭಾರತದಲ್ಲಿ ಜನಗಣತಿ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?
—10 ವರ್ಷಗಳಿಗೊಮ್ಮ


586) ಇತ್ತೀಚೆಗೆ (Fri, 9th Jan, 2015) ವಿಶ್ವ ಶಾಂತಿ ಪಾಲನಾ ಪಡೆಗಳಿಗೆ ಅತ್ಯಗತ್ಯ ನೆರವು ನೀಡುವ ವಿಭಾಗದ ಮುಖ್ಯಸ್ಥರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?
— ಅತುಲ್‌ ಖರೆ (ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ)


587) 2014ನೇ ಸಾಲಿನ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಕನ್ನಡದ 'ಉತ್ತರಾರ್ಧ' ಪ್ರಬಂಧ ಕೃತಿ ಆಯ್ಕೆಯಾಗಿದೆ. ಅಂದಹಾಗೆ ಇದರ ಲೇಖಕರು ಯಾರು?
—. ಡಾ. ಜಿ. ಎಚ್. ನಾಯಕ


588) MOM (ಮಾಮ್‌) ಎಂದರೆ "ಮಾರ್ಸ್‌ ಆರ್ಬಿಟರ್‌ ಮಿಷನ್" ಎಂದರ್ಥ.


589) ಜನಶ್ರೀ ವಿಮೆ ಯೋಜನೆಯ ರಾಜ್ಯ ಸರ್ಕಾರದ ಯಾವ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ?
— ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ.


590) ಭಾರತದ ಮೊದಲ ಆಧುನಿಕ ಖಗೋಳ ಪರೀವಿಕ್ಷಣಾಲಯ ಎಲ್ಲಿ ನಿರ್ಮಾಣವಾಯಿತು?
— ಚೆನ್ನೈ.


591) ಟರ್ಕಿ ದೇಶದ ರಾಜಧಾನಿ ಯಾವುದು?
— ಇಸ್ತಾಂಬುಲ್.


592) ಇತ್ತೀಚೆಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜೀವನ ಆಧಾರಿತ ‘ದ ರೆಡ್‌ ಸ್ಯಾರಿ: ಎ ಡ್ರಾಮಾಟೈಸ್ಡ್‌ ಬಯಾಗ್ರಫಿ ಆಫ್ ಸೋನಿಯಾ ಗಾಂಧಿ’ ವಿವಾದಾತ್ಮಕ ಜೀವನ ಚರಿತ್ರೆಯನ್ನು ಬರೆದವರು ಯಾರು?
— ಸ್ಪೇನ್‌ ಲೇಖಕ ಜೇವಿಯರ್‌ ಮೋರೊ.


593) ಇತ್ತೀಚೆಗೆ "ಶ್ರೀಲಂಕಾದ ಮೊದಲ ಸಂತ" ಎಂದು ಕ್ರೈಸ್ತ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು ಯಾರನ್ನು ಘೋಷಿಸಿದರು.
— ಭಾರತ ಮೂಲದ ಜೋಸೆಫ್‌ ವಾಜ್‌.


594) ಇತ್ತೀಚೆಗೆ ಅಮೆರಿಕ ಮೂಲದ ನ್ಯಾಷನಲ್ ಸ್ಪೇಸ್ ಸೊಸೈಟಿ(ಎನ್‌ಎಸ್‌ಎಸ್)ಯು "2015 ಸ್ಪೇಸ್ ಪಯನಿಯರ್ ಅವಾರ್ಡ್" ಅನ್ನು ಯಾರಿಗೆ ಘೋಷಿಸಿದೆ?
— ಇಸ್ರೋಗೆ .


595) ಪ್ರಸ್ತುತ (2015) ಭೂತಾನ್ ದೇಶದ ಪ್ರಧಾನಿ ಯಾರು?
— ತ್ಸೆರಿಂಗ್‌ ತೊಗ್ಬೆ.


596) 'ಆಳ್ವಾಸ್ ವಿರಾಸತ್ - 2015'ರ ಪ್ರಶಸ್ತಿಗೆ ಆಯ್ಕೆಯಾದ ಉಸ್ತಾದ್ ಅಮ್ಜದ್ ಆಲಿಖಾನ್ ಅವರು ಯಾವ ವಾದ್ಯದಲ್ಲಿ ಹೆಸರುವಾಸಿಯಾಗಿದ್ದಾರೆ?
—ಸರೋದ್


597) ತುರ್ತು ಪರಿಸ್ಥತಿ ಹೇಳಿಕೆಯನ್ನು ವಿರೋಧಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಕನ್ನಡ ಲೇಖಕರು ಯಾರು ?
—ಶಿವರಾಮ್ ಕಾರಂತ


598) CBFC (ಸಿಬಿಎಫ್‌ಸಿ) ಎಂದರೆ:
— "ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ" ಎಂದರ್ಥ.


599) ‘ಮಾಮ್’ ನೆರವಿನಿಂದ ಬಳಸಿಕೊಂಡು ಅಧ್ಯಯನ ಮಾಡಬೇಕೆಂದಿರುವ ಅಗಸ್ಟ್.19ರಂದು ಮಂಗಳನ ಕಕ್ಷೆಯನ್ನು ಹಾದು ಹೋಗಲಿರುವ ಧೂಮಕೇತುವು ಯಾವುದು?
— ಮಂಗಳನ ಸನಿಹದಲ್ಲಿರುವ ‘ಸೈಡಿಂಗ್‌ ಸ್ಪ್ರಿಂಗ್‌’ ಎಂಬ ಧೂಮಕೇತು.


600) ತಾಲಿಬಾನ್ ಉಗ್ರರಿಂದ ಮಕ್ಕಳ ಹತ್ಯಾಕಾಂಡದ ಸಾಮೂಹಿಕ ಘಟನೆ ಈಚೆಗೆ ಕೆಳಕಂಡ ಯಾವ ಸ್ಥಳದಲ್ಲಿ ನಡೆಯಿತು?
— ಪೇಶಾವರ್


To be continued...

No comments:

Post a Comment