"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 2 July 2020

•► ️ಜುಲೈ 01 & 02 ರ ಪ್ರಮುಖ (01 & 02 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 01 & 02 July 2020)

•► ️ಜುಲೈ 01 & 02 ರ ಪ್ರಮುಖ (01 & 02 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  01 & 02 July 2020)

━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)


• 01 ಜುಲೈ:  ರಾಷ್ಟ್ರೀಯ ವೈದ್ಯರ ದಿನ.
— ಡಾ.ಬಿ.ಸಿ.ರಾಯ್‌ ಅವರ ಜನ್ಮದಿನವಾದ ಜುಲೈ 1 ಅನ್ನು ವೈದ್ಯರ ದಿನವಾಗಿ ಆಚರಿಸಲಾಗುತ್ತಿದೆ.
— ಇವರು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದರು.
– ಭಾರತ ಸರ್ಕಾರ 1991ರಲ್ಲಿ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಕರೆಕೊಟ್ಟಿತು.


• 01 ಜುಲೈ:  ಲೆಕ್ಕ ಪರಿಶೋಧಕರ ದಿನ.

• ಜುಲೈ 1, ಬ್ರಿಟನ್‌ ಆಡಳಿತದಿಂದ ಹಾಂಗ್‌ಕಾಂಗ್‌ ಚೀನಾಗೆ ಹಸ್ತಾಂತರಗೊಂಡ ದಿನವಾಗಿದೆ.

• ಇತ್ತೀಚೆಗೆ ಭಾರತ ಸರ್ಕಾರದಿಂದ ನಿಷೇಧಕ್ಕೊಳಗಾದ  ಚೀನಾ ಮೂಲದ ಕಂಪನಿಗಳ 59 ಆ್ಯಪ್‌ಗಳ ಪೈಕಿ ಒಂದಾದ ಟಿಕ್‌ಟಾಕ್‌ ಆ್ಯಪ್ ನ ಮಾತೃಸಂಸ್ಥೆ : ಬೈಟ್‌ಡಾನ್ಸ್.

• 'ಸ್ಟೇಟ್‌ ಆಫ್‌ ವರ್ಲ್ಡ್ ಪಾಪ್ಯುಲೇಷನ್‌-2020' ವರದಿಯನ್ನು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (NFPA) ಬಿಡುಗಡೆ ಮಾಡುವುದು.

• ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌ ಅವರು ಮಧ್ಯಪ್ರದೇಶದ ಹೆಚ್ಚುವರಿ ರಾಜ್ಯಪಾಲರಾಗಿ ಅಧಿಕಾರ.
— ಈ ಮೊದಲು ಮಧ್ಯಪ್ರದೇಶ ರಾಜ್ಯಪಾಲರಾಗಿದ್ದವರು:  ಲಾಲ್‌ಜಿ ಟಂಡನ್.
— ಪ್ರಸ್ತುತ ಮಧ್ಯಪ್ರದೇಶದ ಮುಖ್ಯಮಂತ್ರಿ : ಶಿವರಾಜ್‌ ಸಿಂಗ್‌ ಚೌಹಾಣ್‌.

• ಹಿರಿಯ ಐಎಫ್ಎಸ್ ಅಧಿಕಾರಿ ಇಂದ್ರಮಣಿ ಪಾಂಡೆ ಅವರನ್ನು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಕ.
— ವಿಶ್ವಸಂಸ್ಥೆಯ ಕೇಂದ್ರ ಕಚೇರಿ : ಜಿನೇವಾದಲ್ಲಿದೆ.


• ಟಿಬೆಟ್‌ ಮೇಲೆ ಚೀನಾದ ಆಳ್ವಿಕೆಯನ್ನು ವಿರೋಧಿಸುತ್ತಿರುವ, ಟಿಬೆಟ್‌ನಿಂದ ತಪ್ಪಿಸಿಕೊಂಡ ದಲೈಲಾಮ ಅವರು 1959ರಿಂದ ಭಾರತದಲ್ಲಿ ನೆಲೆಸಿದ್ದಾರೆ. ಇದೇ 6ರಂದು ಅವರು ಹುಟ್ಟಿದ ದಿನ.
— 'ಮೈ ಲ್ಯಾಂಡ್ ಆ್ಯಂಡ್ ಮೈ ಪೀಪಲ್' ಎಂಬುದು ದಲಾಯಿ ಲಾಮಾರವರ ಕೃತಿ.


• ‘ಮೆಡಿಕಲ್‌ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿ ಕಾಯ್ದೆ’ ಪ್ರಕಾರ ಗರ್ಭ ಧರಿಸಿ 20 ವಾರಗಳ ಅವಧಿ ಮೀರಿದ್ದರೆ ಗರ್ಭಪಾತಕ್ಕೆ ಅವಕಾಶ ಇಲ್ಲ. ಆದರೆ ಹೈಕೋರ್ಟ್‌ ಅನುಮತಿ ಪಡೆದು ಗರ್ಭಪಾತ ಮಾಡಿಸಲು ಅವಕಾಶ ಇದೆ.

• ಇತ್ತೀಚೆಗೆ ಪಾಕಿಸ್ತಾನದಲ್ಲಿ ಆನ್‌ಲೈನ್‌ ಗೇಮ್‌ 'ಪಬ್‌ಜಿ' ನಿರ್ಬಂಧ.
— ಜಾಗತಿಕ ಇಸ್ಪೋರ್ಟ್ಸ್‌ ಸ್ಪರ್ಧೆಗಳ ಜನಪ್ರಿಯ ಆನ್‌ಲೈನ್‌ ಗೇಮ್‌ಗಳಲ್ಲಿ ಒಂದಾದ (ಪಬ್‌ಜಿ) PUBG ಯ ವಿಸ್ತೃತ ರೂಪ :  ಪ್ಲೈಯರ್‌ಅನ್‌ನೌನ್ಸ್‌ ಬ್ಯಾಟಲ್‌ಗ್ರೌಂಡ್ಸ್‌ .
— ಈಗಾಗಲೇ ಜೋರ್ಡನ್, ಇರಾಕ್‌, ನೇಪಾಳ, ಇಂಡೊನೇಷ್ಯಾದ ಕೆಲವು ಪ್ರಾಂತ್ಯ ಹಾಗೂ ಭಾರತದ ಗುಜರಾತ್‌ನಲ್ಲಿ ಪಬ್‌ಜಿ ನಿಷೇಧಿಸಲಾಗಿದೆ.


• ಇತ್ತೀಚೆಗೆ ವಿದ್ಯುತ್ ಘಟಕದಲ್ಲಿ ಬಾಯ್ಲರ್‌ ಸ್ಫೋಟ ಅವಘಡ ಸಂಭವಿಸಿದ 'ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ವಿದ್ಯುತ್ ಘಟಕ' ಇರುವುದು : ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ.

• ಇರಾನ್‌ ರಾಜಧಾನಿ : ತೆಹ್ರಾನ್‌

• ಇಂಟರ್‌ಪೋಲ್ (INTERPOL) ಇರುವುದು : ಫ್ರಾನ್ಸ್‌ನ ಲಿಯಾನ್‌ನಲ್ಲಿ
— ವಿಸ್ತೃತ ರೂಪ : (The International Criminal Police Organisation).
— ಇದು ವಿಶ್ವದಾದ್ಯಂತ ತನ್ನ 194 ಸದಸ್ಯ ರಾಷ್ಟ್ರಗಳಲ್ಲಿ 07 ಪ್ರಾದೇಶಿಕ ಬ್ಯೂರೋಗಳನ್ನು ಹೊಂದಿದೆ.
— ಪ್ರಸ್ತುತ ಇದರ ಅಧ್ಯಕ್ಷ : ಕಿಮ್ ಜೊಂಗ್ ಯಾಂಗ್.
- ಉಪಾಧ್ಯಕ್ಷ : ಅಲೆಕ್ಸಾಂಡರ್ ಪ್ರೊಕೊಪ್ಚುಕ್.
- ಪ್ರಧಾನ ಕಾರ್ಯದರ್ಶಿ : ಜುರ್ಗೆನ್ ಸ್ಟಾಕ್.


• ಇತ್ತೀಚೆಗೆ ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ.
— ಈ ಮೊದಲು ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದರು.

• ಸುಮಾರು 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಅಭಿಮಾನಿಗಳಿಗೆ ಹಾಸ್ಯದೂಟ ಬಡಿಸಿದ್ದ 69 ವಯಸ್ಸಿನ. ನಟ ಮಿಮಿಕ್ರಿ ರಾಜಗೋಪಾಲ್ ವಿಧಿವಶ.
— 1983ರಿಂದ ಸಿನಿಮಾದಲ್ಲಿ ಅಭಿನಯಿಸಲು ಆರಂಭ.
— ಡಿಡಿ 1 ಆರಂಭವಾದಾಗಿನಿಂದ 'ಪಾಪ ಪಾಂಡು'ವರೆಗೂ ಸುಮಾರು ಧಾರಾವಾಹಿಗಳಲ್ಲಿ ಅಭಿನಯ.


• ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನ  ಮುಖ್ಯಸ್ಥರಾಗಿದ್ದ ಶಶಾಂಕ್ ಮನೋಹರ್ ಮುಖ್ಯಸ್ಥ ಹುದ್ದೆಯಿಂದ ನಿರ್ಗಮನ.
— ಉಪ ಮುಖ್ಯಸ್ಥರಾಗಿರುವ ಇಮ್ರಾನ್ ಖ್ವಾಜಾ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರ.
— ಮುಖ್ಯಸ್ಥರಿಗೆ ಗರಿಷ್ಠ ಮೂರು ಅವಧಿಯಲ್ಲಿ(ಆರು ವರ್ಷ) ಕಾರ್ಯನಿರ್ವಹಿಸುವ ಅವಕಾಶ ಇರುವುದು.


• ‘ಐಸಿಸಿ ಹಾಲ್‌ ಆಫ್‌ ಫೇಮ್’‌ ಗೌರವಕ್ಕೆ ಭಾಜನರಾಗಿದ್ದ,  ಈ ಸಮಿತಿಯ ಸದಸ್ಯರೂ ಆಗಿದ್ದ ವೆಸ್ಟ್‌ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಎವರ್ಟನ್‌ ವೀಕ್ಸ್‌ (95) ಅವರು ವಿಧಿವಶ.


• ಭಾರತ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜ, ವಿಸ್ಡನ್ ನಿಯತಕಾಲಿಕೆಯ  ’21ನೇ ಶತಮಾನದ ಶ್ರೇಷ್ಠ ಭಾರತೀಯ ಟೆಸ್ಟ್ ‌ಕ್ರಿಕೆಟಿಗ‘ ಗೌರವಕ್ಕೆ ಪಾತ್ರ.
— 97.3 ಎಂವಿಪಿ (ಅತ್ಯಂತ ಅಮೂಲ್ಯ ಆಟಗಾರ) ರೇಟಿಂಗ್‌ ‍ಗಳಿಸಿರುವ 31 ವರ್ಷದ ಜಡೇಜ ಅವರು, ವಿಶ್ವದ ಶ್ರೇಷ್ಠ ಟೆಸ್ಟ್‌ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಅಗ್ರಸ್ಥಾನವು ಶ್ರೀಲಂಕಾದ ದಿಗ್ಗಜ ಸ್ಪಿನ್ನರ್‌ ಮುತ್ತಯ್ಯ ಮರಳೀಧರನ್‌ ಪಾಲಾಗಿದೆ.
— 2012ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿರುವ ಜಡೇಜ, ಭಾರತದ ಪರ 49 ಟೆಸ್ಟ್‌ಗಳನ್ನು ಆಡಿದ್ದಾರೆ. ಒಂದು ಶತಕ, 14 ಅರ್ಧಶತಕಗಳನ್ನು ಗಳಿಸಿದ್ದಾರೆ. 1,869 ರನ್‌ ಕಲೆ ಹಾಕಿದ್ದಾರೆ. 213 ವಿಕೆಟ್‌ಗಳು ಅವರ ಖಾತೆಯಲ್ಲಿವೆ
— ಕ್ರಿಕ್‌ವಿಜ್‌ ಸಂಸ್ಥೆಯು ನಡೆಸಿದ ವಿಶ್ಲೇಷಣೆಯನ್ನು ಆಧರಿಸಿ, ವಿಶ್ವ ಕ್ರಿಕೆಟ್‌ನ ಪ್ರತಿಯೊಬ್ಬ ಆಟಗಾರನಿಗೆ ಎಂವಿಪಿ ರೇಟಿಂಗ್‌ ನೀಡಲಾಗುತ್ತದೆ. ಸಮಾನ ಸಾಮರ್ಥ್ಯ, ವಯಸ್ಸು ಅಥವಾ ಸಮಾನ ಆಟದ ಮಾದರಿ ಹೊಂದಿರುವ ಆಟಗಾರರೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಅವರು ಪಂದ್ಯದ ಮೇಲೆ ಬೀರಿದ ಪ್ರಭಾವ, ಅಂಕಿ ಅಂಶಗಳನ್ನು ರೇಟಿಂಗ್‌ಗೆ ಪರಿಗಣಿಸಲಾಗುತ್ತದೆ.
— ಜಡೇಜ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಸರಾಸರಿ 10.62. ಈ ಸರಾಸರಿಯು ಶತಮಾನದಲ್ಲಿ 1000ಕ್ಕಿಂತ ಹೆಚ್ಚು ರನ್‌ ಮತ್ತು 150 ವಿಕೆಟ್‌ ಗಳಿಸಿರುವ ವಿಶ್ವದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಅವರನ್ನು ನಿಲ್ಲಿಸಿದೆ’ ಎಂದು ಫ್ರೆಡ್ಡಿ ವಿಶ್ಲೇಷಿಸಿದ್ದಾರೆ.


• ಪ್ರಸ್ತುತ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ (ಎಎಫ್‌ಸಿ) ಯ ಅಧ್ಯಕ್ಷ : ಶೇಕ್‌ ಸಲ್ಮಾನ್‌ ಬಿನ್‌ ಇಬ್ರಾಹಿಂ ಅಲ್‌ ಖಲೀಫಾ.
— 1956ರಲ್ಲಿ ಏಷ್ಯಾಕಪ್‌ ಟೂರ್ನಿಯನ್ನು ಪರಿಚಯಿಸಲಾಗಿದೆ.
— ಏಷ್ಯಾ ಫುಟ್‌ಬಾಲ್‌ ಇತಿಹಾಸದಲ್ಲಿ ತವರಿನ ನೆಲದಲ್ಲಿ ಎರಡು ಬಾರಿ ಟ್ರೋಫಿ ಗೆದ್ದುಕೊಂಡ ಏಕೈಕ ತಂಡ :  ಇರಾನ್.


• ಮ್ಯೂಚುವಲ್‌ ಫಂಡ್‌ಗಳ ಖರೀದಿಗೆ ಇತ್ತೀಚೆಗೆ ಜಾರಿಗೆ ಬಂದಿರುವ ಮುದ್ರಾಂಕ ಶುಲ್ಕ : ಶೇ 0.005ರಷ್ಟು.
— ಶೇ 0.005ರಷ್ಟು ಶುಲ್ಕವು ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ), ವ್ಯವಸ್ಥಿತ ವರ್ಗಾವಣೆ ಯೋಜನೆ (ಎಸ್‌ಟಿಪಿ), ಲಾಭಾಂಶ ಮರು ಹೂಡಿಕೆ ಮತ್ತು ಒಂದೇ ಕಂಪನಿಯ ಒಂದು ಯೋಜನೆಯಿಂದ ಇನ್ನೊಂದು ಯೋಜನೆಗೆ ಹೂಡಿಕೆ ಬದಲಿಸುವ (ಒಂದು ಡಿಮ್ಯಾಟ್‌ ಖಾತೆಯಿಂದ ಇನ್ನೊಂದು ಡಿಮ್ಯಾಟ್‌ ಖಾತೆಗೆ ವರ್ಗಾವಣೆ ಮಾಡಲು) ವಹಿವಾಟಿಗೆ  ಅನ್ವಯ. ಯುನಿಟ್ಸ್‌ಗಳನ್ನು ಮರಳಿಸಿ ಹಣ ಮರಳಿ ಪಡೆಯುವುದಕ್ಕೆ ಅನ್ವಯಗೊಳ್ಳುವುದಿಲ್ಲ.
— ಸ್ಟ್ಯಾಂಪ್‌ ಡ್ಯೂಟಿಯನ್ನು ಒಂದು ಬಾರಿಗೆ ಮಾತ್ರ ವಿಧಿಸಲಾಗುವುದು.


• (ಎನ್‌ಬಿಎಫ್‌ಸಿ) — ಬ್ಯಾಂಕೇತರ ಹಣಕಾಸು ಕಂಪನಿಗಳು.
• (ಎನ್‌ಪಿಎ) — ವಸೂಲಾಗದ ಸಾಲದ ಪ್ರಮಾಣ.


• ಇತ್ತೀಚೆಗೆ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ನ (ಐಒಎಲ್‌) ಅಧ್ಯಕ್ಷರಾಗಿ ಶ್ರೀಕಾಂತ್ ಮಾಧವ ವೈದ್ಯ ಅಧಿಕಾರ ಸ್ವೀಕಾರ.
— ಈ ಮೊದಲು ಸಂಜೀವ್ ಸಿಂಗ್ ಅಧ್ಯಕ್ಷರಾಗಿದ್ದರು.


• ನಿರುದ್ಯೋಗ ನಿವಾರಣೆಗಾಗಿ ಕರ್ನಾಟಕ ಸರಕಾರದಿಂದ  ‘ಕೌಶಲ್ಯ ಸಂಪರ್ಕ ವೇದಿಕೆ’ ಪೋರ್ಟಲ್‌ ಆರಂಭ.
— ಕೌಶಲ್ಯಾಭಿವೃದ್ಧಿ ನಿಗಮವು ಖಾಸಗಿ ಉದ್ಯೋಗದಾತರು ಮತ್ತು ಉದ್ಯೋಗಾಂಕ್ಷಿಗಳನ್ನು ಒಂದೇ ವೇದಿಕೆಗೆ ತಂದು ನಿರುದ್ಯೋಗ ನಿವಾರಿಸುವ ಗುರಿಯೊಂದಿಗೆ ಈ ವೇದಿಕೆ ರೂಪಿಸಿದೆ.


• ಭಾರತೀಯ ಲೇಖಕಿ, 29 ವರ್ಷದ ಕೃತಿಕಾ ಪಾಂಡೆ ಅವರು '2020ನೇ ಸಾಲಿನ ಕಾಮನ್‌‌ವೆಲ್ತ್ ಸಣ್ಣಕಥೆ ವಿಭಾಗ'ದಲ್ಲಿ ಏಷ್ಯಾದ ಪ್ರಾದೇಶಿಕ ಪ್ರಶಸ್ತಿ (2020 Commonwealth Short Story Prize) ಗೆ ಆಯ್ಕೆ.
— ‘ದಿ ಗ್ರೇಟ್ ಇಂಡಿಯನ್ ಟೀ ಮತ್ತು ಹಾವುಗಳು’ ಎಂಬ ಕಥೆಗಾಗಿ ಪ್ರಶಸ್ತಿ ಸಂದಿದೆ.
—ಲೇಖಕಿಯು ಮೂಲತಃ ಜಾರ್ಖಂಡ್‌ನ ರಾಂಚಿ ಮೂಲದವರು.


• ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್)
ಭಾರತದ ಅತ್ಯುನ್ನತ, ವಿಶ್ವದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ವೈದ್ಯಕೀಯ ಬಯೋಮೆಡಿಕಲ್ ಸಂಶೋಧನಾ ಸಂಸ್ಥೆಗಳಲ್ಲಿ ಒಂದು.
— ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಡಿಯಲ್ಲಿ ಆರೋಗ್ಯ ಸಂಶೋಧನಾ ಇಲಾಖೆಯ ನಿರ್ದೇನದಲ್ಲಿ ಕಾರ್ಯ ನಿರ್ವಹಣೆ.


• ಐಸಿಎಂಆರ್-
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್
ಸ್ಥಾಪನೆ - 1911ರಲ್ಲಿ; 1949ರಲ್ಲಿ ಐಸಿಎಂಆರ್ ಎಂದು ಮರು ನಾಮಕರಣ.
ಇದರ ಪ್ರಧಾನ ಕಚೇರಿ - ನವ ದೆಹಲಿ
ಪ್ರಸ್ತುತ ಇದರ ಪ್ರಧಾನ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರು - ಡಾ.ಬಲರಾಮ್ ಭಾರ್ಗವ

No comments:

Post a Comment