"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 28 July 2020

•► ️"ವಿಪತ್ತು ಪುನರ್ ಚೇತರಿಕೆ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಒಕ್ಕೂಟ" - ಸಿಡಿಆರ್‌ಐ. (Coalition for Disaster Resilient Infrastructure)

•► ️"ವಿಪತ್ತು ಪುನರ್ ಚೇತರಿಕೆ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಒಕ್ಕೂಟ" - ಸಿಡಿಆರ್‌ಐ.
(Coalition for Disaster Resilient Infrastructure)
━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)

  ಭಾರತೀಯ ಬಹುಪಕ್ಷೀಯ ಉಪಕ್ರಮ + ನ್ಯೂಯಾರ್ಕ್ ನಲ್ಲಿ 2019ರ ಸೆಪ್ಪೆಂಬರ್ 23ರಂದು ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆ ವೇಳೆ ಪ್ರಧಾನಿ ಅವರಿಂದ ಸಿ ಡಿ ಆರ್ ಐ ಉದ್ಘಾಟನೆ +  ನವದೆಹಲಿಯಲ್ಲಿ ಅದಕ್ಕೆ ಅಗತ್ಯ ಸಚಿವಾಲಯ ಕಚೇರಿ ಹೊಂದಲು ಘಟನೋತ್ತರ ಅನುಮೋದನೆ + ಈ ಪ್ರಸ್ತಾವವನ್ನು ಪ್ರಧಾನಮಂತ್ರಿಗಳು 2019ರ ಆಗಸ್ಟ್ 13ರಂದು ಅನುಮೋದಿಸಿದ್ದರು + ಪರಿಷ್ಕೃತ ಆವೃತ್ತಿಯ ಚಾರ್ಟೆಡ್ ಡಾಕ್ಯೂಮೆಂಟ್ (ಒಪ್ಪಂದ ದಾಖಲೆ) ಸಿ ಡಿ ಆರ್ ಐ ನ ಮೂಲ ದಾಖಲೆಯಾಗಲಿದೆ.+ ವಿಪತ್ತು ಮತ್ತು ಹವಾಮಾನ ಸ್ಥಿತಿ ಸ್ಥಾಪಕ ಮೂಲಸೌಕರ್ಯದ ನಾನಾ ಆಯಾಮಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ವೇದಿಕೆಯಾಗಿ ಕಾರ್ಯ ನಿರ್ವಹಣೆ + ಜಾಗತಿಕವಾಗಿ ಸಣ್ಣ ರಾಷ್ಟ್ರಗಳಲ್ಲಿ ವಿಪತ್ತು ಸಂಭವಿಸಿದಾಗ ಅವರಿಗೆ ನೆರವಾಗಲು ಈ ವರ್ಷಾಂತ್ಯದಲ್ಲಿ; ಪ್ರಾರಂಭಿಸಲು ಭಾರತ ಸರ್ಕಾರ  ಆರಂಭಿಸಿರುವ ಉಪಕ್ರಮ. + ವಿಪತ್ತು ಸಂಭವಿಸಿದಾಗ ಆ ದೇಶವನ್ನು ಪೂರ್ವ ಸ್ಥಿತಿಗೆ ತರಲು ವಿಶೇಷ ಒತ್ತು + ಸಣ್ಣ , ದುರ್ಬಲ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಹಾಯವಾಗಲು ಈ ಜಾಗತಿಕ ಉಪಕ್ರಮ.

No comments:

Post a Comment