"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 9 July 2020

•► ️ಜುಲೈ 09 ರ (09 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 09 July 2020)

•► ️ಜುಲೈ 09 ರ (09 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  09 July 2020)

━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)


• ಕೇಂದ್ರ ಸಚಿವಾಲಯದಿಂದ ರಾಜ್ಯದ ಅನ್ನಪೂರ್ಣಗೆ ಅತ್ಯುತ್ತಮ ಆಶಾ ಕಾರ್ಯಕರ್ತೆ ಬಿರುದು.
- ಶಿವಮೊಗ್ಗದ ತುಂಗಾನಗರ ಪಿಹೆಚ್ಸಿ ವ್ಯಾಪ್ತಿಯ ಟಿಪ್ಪುನಗರ ಬಲಭಾಗದ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಅನ್ನಪೂರ್ಣ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.

• ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ : ಜಿ.ಸಿ.ಮರ್ಮು.

• ಪ್ರಧಾನಿ ನರೇಂದ್ರ ಮೋದಿ ಅವರಿಂದ ಇಂದು ಭಾರತದ ಅತಿದೊಡ್ಡ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಒಂದಾದ 'ಇಂಡಿಯಾ ಗ್ಲೋಬಲ್ ವೀಕ್ 2020' ಕಾರ್ಯಕ್ರಮದ ಉದ್ಘಾಟನೆ.
- 30ಕ್ಕೂ ಹೆಚ್ಚು ರಾಷ್ಟ್ರಗಳ 5,000 ಪ್ರತಿನಿಧಿಗಳು ಭಾಗಿ.
- ಮೂರು ದಿನಗಳ ಈ ಕಾರ್ಯಕ್ರಮವನ್ನು 'ಇಂಡಿಯಾ ಇನ್‌ಕಾರ್ಪ್'ನಿಂದ ಆಯೋಜನೆ.
- 'ಬಿ ದಿ ರಿವೈವಲ್: ಇಂಡಿಯಾ ಅಂಡ್ ಎ ಬೆಟರ್ ನ್ಯೂ ವರ್ಲ್ಡ್' ಎಂಬ ವಿಷಯದ ಕುರಿತು ಹಲವು ಪ್ರಮುಖರು ಭಾಷಣ.

• ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ : ಟಿ.ಎಸ್. ನಾಗಾಭರಣ

• ತುಂಗಭದ್ರಾ ಜಲಾಶಯ ಇರುವುದು : ಶಿವಮೊಗ್ಗದಲ್ಲಿ.

• ಸದ್ಯಕ್ಕೆ ಭಾರತವು 6,844 ಉತ್ಪನ್ನಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ.

• ಜಾರಿ ನಿರ್ದೇಶನಾಲಯ(Enforcement Directorate - ED) ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆಯಾಗಿದ್ದು ಆರ್ಥಿಕ ಕಾನೂನುಗಳನ್ನು ಶಿಸ್ತು ಬದ್ಧವಾಗಿ ಜಾರಿಮಾಡುವ, ಹಾಗು ಅವು ಪಾಲನೆಯಲ್ಲಿರುವಂತೆ ನಿಗಾ ವಹಿಸುವ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತದೆ. ದೇಶದೊಳಗೆ ನಡೆಯುವ ಆರ್ಥಿಕ ಅಪರಾಧಗಳ ಮೇಲೂ ಕಣ್ಗಾವಲು ಇಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದ್ದು ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ವಿಭಾಗದ ಒಂದು ಪ್ರಮುಖ ಭಾಗವಾಗಿದೆ.
— ಜಾರಿ ನಿರ್ದೇಶನಾಲಯದ ಕೇಂದ್ರ ಕಛೇರಿ ನವದೆಹಲಿಯಲ್ಲಿದ್ದು ಜಾರಿ ನಿರ್ದೇಶಕರು ಇದರ ಮುಖ್ಯಸ್ಥರಾಗಿರುತ್ತಾರೆ.
— ಕೇಂದ್ರ ಕಛೇರಿ ಹೊರತು ಪಡಿಸಿ ಇತರ 10 ಪ್ರಾದೇಶಿಕ ಕಛೇರಿಗಳು ದೇಶದ ಪ್ರಮುಖ ನಗರಗಳಾದ Ahmedabad, Bangalore, Chandigarh, Chennai, Cochin, Delhi, Hyderabad, Kolkata, Lucknow ಮತ್ತು Mumbai ಗಳಲ್ಲಿವೆ. ಹಾಗೆಯೇ 11 ಪ್ರಾದೇಶಿಕ ಕಛೇರಿಗಳನ್ನು ಹೊಂದಿದೆ.
— ಇದರ ಪ್ರಸ್ತುತ ನಿರ್ದೇಶಕರು : ಸಂಜಯ್ ಕುಮಾರ್ ಮಿಶ್ರಾ.
— ಪ್ರಧಾನ ವಿಶೇಷ ನಿರ್ದೇಶಕರು :
ಸಿಮಾಂಚಲಾ ದಾಶ್.


• ಪ್ರಸ್ತುತ ಜಾರ್ಖಂಡ್ ದೇಶದ ಮುಖ್ಯಮಂತ್ರಿ  :  ಹೇಮಂತ್ ಸೊರೇನ್

• ಆಂಥ್ರಾಕ್ಸ್‌ ಕಾಯಿಲೆಗೆ ಕಾರಣವಾಗುವ ವೈರಾಣು :  ಬ್ಯಾಕ್ಟೇರಿಯಮ್‌ ಬ್ಯಾಸಿಲ್ಲಸ್‌ ಆಂಥ್ರಾಸಿಸ್‌

• ಯುನೈಟೆಡ್ ನೇಶನ್ಸ್ ನ ನ್ಯಾಯಾಂಗದ ಅಂಗ ಸಂಸ್ಥೆಯಾದ ಅಂತರರಾಷ್ಟ್ರೀಯ ನ್ಯಾಯಾಲಯ (ICJ-International Court of Justice) ದ ಕೇಂದ್ರ ಕಚೇರಿ : ನೆದರ್ ಲ್ಯಾಂಡ್ ನ ಹೇಗ್
- ಪ್ರಸ್ತುತ ಇದರ ಅಧ್ಯಕ್ಷರು : ನ್ಯಾಯಮೂರ್ತಿ ಅಬ್ದುಲ್‌ಕ್ವಾರಿ ಅಹ್ಮದ್ ಯುಸುಫ್

• ಗಾಂಬಿಯಾ, ಇದು ಪಶ್ಚಿಮ ಆಫ್ರಿಕಾದ ಚಿಕ್ಕ ದೇಶ.
ಇದರ ರಾಜಧಾನಿ : ಬಂಜುಲ್.

• ಸೂಪಾ ಮತ್ತು ಕದ್ರಾ ಜಲಾಶಯಗಳು ಕಾಳಿ ನದಿಗೆ ಸಂಬಂಧಿಸಿವೆ.

•  ನೇತ್ರಾವತಿ ನದಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವುದು.

• (ಎಂಸಿಎಲ್‌ಆರ್‌ - ಮಾರ್ಜಿನಲ್‌ ಕಾಸ್ಟ್‌ ಲೆಂಡಿಂಗ್‌ ರೇಟ್‌ ) — ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ  ಬಡ್ಡಿ ದರ.
- ಬಡ್ಡಿ ದರವನ್ನು ಲೆಕ್ಕಾಚಾರ ಮಾಡುವ ಹೊಸ ವಿಧಾನ

• ಇಥಿಯೋಪಿಯಾ ದೇಶ (ಉತ್ತರ ಆಫ್ರಿಕಾದಲ್ಲಿದೆ) ದ ರಾಜಧಾನಿ : ಅಡ್ಡಿಸ್ ಅಬಾಬಾ.
— ಇತ್ತೀಚೆಗೆ ಇಲ್ಲಿನ 'ಓರೊಮೊ ಜನಾಂಗ'ದ ಜನಪ್ರಿಯ ಗಾಯಕ 'ಹಚ್ಚಲು ಹುಂಡೆಸ್ಸಾ'ನ ಹತ್ಯೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ, 239 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದು, ಇಡೀ ಇಥಿಯೋಪಿಯಾ ಜನಾಂಗೀಯ ದಳ್ಳುರಿಯಲ್ಲಿ ಬೇಯುತ್ತಿದೆ.
— ಇದೇ ಇಥಿಯೋಪಿಯಾದ ಪ್ರಧಾನಿ ಅಬಿ ಅಹಮದ್‌(43 ವರ್ಷ) ಅವರಿಗೆ ಎರಿಟ್ರಿಯಾ ಜೊತೆಗೆ ದೇಶ ಸುದೀರ್ಘ ಕಾಲದಿಂದ ಹೊಂದಿದ್ದ ಗಡಿ ಬಿಕ್ಕಟ್ಟನ್ನು ಯಶಸ್ವಿಯಾಗಿ ಬಗೆಹರಿಸಿ ಶಾಂತಿ ನೆಲೆಸಲು ಕೈಗೊಂಡ ಕ್ರಮಗಳಿಗಾಗಿ 2019ನೇ ಸಾಲಿನ ‘ನೊಬೆಲ್ ಶಾಂತಿ ಪ್ರಶಸ್ತಿ’ ನೀಡಲಾಗಿತ್ತು.

• ಹಾರಂಗಿ ಜಲಾಶಯ ಇರುವುದು : ಕೊಡಗು ಜಿಲ್ಲೆಯಲ್ಲಿ .

• ಶರಾವತಿ ಕಣಿವೆಯಲ್ಲಿ ಜೋಗ ಜಲಪಾತ ಇರುವುದು.
- ಜಲಪಾತದ ಪ್ರಮುಖ 4 ಕವಲುಗಳು : ರಾಜಾ, ರೋರರ್, ರಾಕೆಟ್, ರಾಣಿ ಜಲಪಾತಗಳು

• ರಾಜ್ಯ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳನ್ವಯ ರಾಜ್ಯದಲ್ಲಿನ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಸಲುವಾಗಿ ದಿನಾಂಕ: 26-05-1993 ರಂದು ಅಸ್ತಿತ್ವಕ್ಕೆ ಬಂದಿರುತ್ತದೆ. ರಾಜ್ಯ ಚುನಾವಣಾ ಆಯೋಗವನ್ನು ಭಾರತ ಸಂವಿಧಾನದ ಅನುಷ್ಛೇದ 243 (ಕೆ) ಹಾಗೂ 243 (ಜೆಡ್‍ಎ) ರಡಿಯಲ್ಲಿ ರಚಿಸಲಾಗಿದೆ.
— ಪ್ರಸ್ತುತ ಇದರ ಆಯುಕ್ತರು : ಡಾ. ಬಿ. ಬಸವರಾಜು.


• ದಕ್ಷಿಣ ಏಷ್ಯಾದಲ್ಲಿರುವ ಇಂಡೋನೇಷ್ಯಾದ ರಾಜಧಾನಿ : ಜಕಾರ್ತಾ
- ಜಾವಾ ದ್ವೀಪವು ಇಲ್ಲಿರುವುದು.
- ಇದು ರಿಂಗ್‌ ಆಫ್‌ ಫೈರ್‌ನಲ್ಲಿ ಇರುವುದರಿಂದ ಹೆಚ್ಚಾಗಿ ಭೂ ಅಂತರಾಳದಲ್ಲಿ ಟೆಕ್ನೊಟ್ರಿಕ್‌ ಫಲಕಗಳು  ಒಂದಕ್ಕೊಂದು ಡಿಕ್ಕಿ ಹೊಡೆಯುವುದರಿಂದ ಅತಿ ಹೆಚ್ಚು ಭೂಕಂಪಗಳು ಇಲ್ಲಿ ಸಂಭವಿಸುತ್ತಿರುತ್ತವೆ.

• 2011ರ ಜನಗಣತಿ ಪ್ರಕಾರ, ದೇಶದಲ್ಲಿ 60 ವರ್ಷ ಮೇಲ್ಪಟ್ಟ ಜನರು ಶೇ.8ರಷ್ಟಿದ್ದಾರೆ.
- ಇತ್ತೀಚೆಗೆ ಐಆರ್‌ಡಿಎ (ವಿಮಾ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ) ಹೊರಡಿಸಿರುವ ಸುತ್ತೋಲೆಯಲ್ಲಿ ಕೋವಿಡ್‌ ಸಂಬಂಧಿ ವಿಮೆಯಿಂದ ಹಿರಿಯ ನಾಗರಿಕರನ್ನು ಹೊರಗಿಡಲಾಗಿದೆ


• ಭಾರತದಲ್ಲಿ ಫೆಬ್ರವರಿ 2021 ರ ವೇಳೆಗೆ ದಿನವೊಂದಕ್ಕೆ 2.87 ಲಕ್ಷ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗುವ ಸಂಭವವಿದೆ ಎಂದು ಅಮೆರಿಕ ಮೂಲದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಶೋಧಕರು ಎಚ್ಚರಿಸಿದ್ದಾರೆ.

- ಸಾಂಕ್ರಾಮಿಕ ರೋಗ ಪ್ರಸರಣದ ಹರಡುವಿಕೆಯ ಅಂದಾಜು ಮಾಡಲು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಬಳಕೆ ಮಾಡುವ ಪ್ರಮಾಣಿತ ಗಣಿತ ಮಾದರಿ SEIR (Susceptible, Exposed, Infectious, Recovered) ಯನ್ನು ಬಳಕೆ ಮಾಡಿಕೊಂಡು ಸಂಶೋಧಕರು ಈ ವರದಿ ಪ್ರಕಟಿಸಿದ್ದಾರೆ.

- ರೋಗ ಪ್ರಸರಣದ ಏರಿಕೆಗೆ ಸಂಶೋಧಕರು ಮೂರು ಸಂದರ್ಭಗಳನ್ನು ಪರಿಗಣಿಸಿದ್ದಾರೆ.
1. ಈಗಿನ ಸೋಂಕು ಟೆಸ್ಟಿಂಗ್ ರೇಟ್ ಹಾಗೂ ಅದರ ಪ್ರತಿಕ್ರಿಯೆ
2. ಜುಲೈ.1, 2020 ರ ವೇಳೆಗೆ ಟೆಸ್ಟಿಂಗ್ ಪ್ರಮಾಣವನ್ನು ಶೇ.01 ರಷ್ಟು ಏರಿಕೆ ಮಾಡಿದರೆ...
3. ಟೆಸ್ಟಿಂಗ್ ನಲ್ಲಿ ಯಥಾಸ್ಥಿತಿ ಇದ್ದು ಓರ್ವ ಮನುಷ್ಯ 8 ಜನರಿಗೆ ಸೋಂಕು ಹರಡಿದರೆ ಏನಾಗಬಹುದು ಎಂಬುದರ ಲೆಕ್ಕಾಚಾರವನ್ನೂ ಸಂಶೋಧಕರು ಅಂದಾಜಿಸಿದ್ದಾರೆ.


• 24 ಕ್ಯಾರೆಟ್ ಚಿನ್ನ ಬಳಸಿ, ನಿರ್ಮಿಸಿರುವ ವಿಶ್ವದ ಮೊದಲ ಹೋಟೆಲ್ : ಡಾಲ್ಸ್ ಹನೋಯಿ ಗೋಲ್ಡನ್ ಲೇಕ್.
- ವಿಯೆಟ್ನಾಂ ರಾಜಧಾನಿ ಕೇಂದ್ರ ಭಾಗದಲ್ಲಿ, ಜಿಯಾಂಗ್ ವೋ ಲೇಕ್ ಪ್ರದೇಶದಲ್ಲಿ ಈ ಹೋಟೆಲ್ ಇದೆ.
- 24 ಅಂತಸ್ತಿನ, 400 ಕೊಠಡಿಗಳಿವೆ.

No comments:

Post a Comment