"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 15 July 2020

•►‘ಹೊಯ್ಸಳ ಶೈಲಿ' — ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳು : ಪತ್ರಿಕೆ—2 : ಸಾಮಾನ್ಯ ಅಧ್ಯಯನ— 1 (The Main Characteristics / Salient features of the Hoysala Architecture)

•►‘ಹೊಯ್ಸಳ ಶೈಲಿ' — ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳು : ಪತ್ರಿಕೆ—2 : ಸಾಮಾನ್ಯ ಅಧ್ಯಯನ— 1
(The Main Characteristics / Salient features  of the Hoysala Architecture)
━━━━━━━━━━━━━━━━━━━━━━━━━━━━━━━━━━━━
★ ಭಾರತೀಯ ಕಲೆ ಮತ್ತು ಸಂಸ್ಕೃತಿ
(Indian Art and Culture)

★ ಮಧ್ಯಯುಗಿನ ಭಾರತದ ಇತಿಹಾಸ
(Medieval Indian History)


ಹೊಯ್ಸಳರು ವೇಸರ ಮತ್ತು ದ್ರಾವಿಡ ಶೈಲಿಗಳನ್ನು ಸೇರಿಸಿ ‘ಹೊಯ್ಸಳ ಶೈಲಿ' ಎಂಬ ಹೊಸ ವಾಸ್ತುಶಿಲ್ಪ
ಶೈಲಿಯನ್ನು ಬೆಳೆಸಿದರು.

• ಈ ಶೈಲಿಯ ಪ್ರಮುಖ ಲಕ್ಷಣಗಳೆಂದರೆ:
━━━━━━━━━━━━━━━━

1. ನಕ್ಷತ್ರಾಕಾರದ ತಳಪಾಯ.

2. ಸುಮಾರು 4 ಅಡಿ ಎತ್ತರದ ನಕ್ಷತ್ರಾಕಾರದ ಜಗತಿ.

3. ದೇವಾಲಯದ ಸುತ್ತಲಿರುವ ಜಗತಿ ತೆರೆದ ಪ್ರದಕ್ಷಿಣ ಪಥವಾಗಿದೆ.

4. ವೈವಿಧ್ಯಮಯ ರಚನೆ/ವಿನ್ಯಾಸಗಳÀನ್ನೊಳಗೊಂಡ ನುಣುಪಾದ ಕಂಬಗಳು.

5. ವಿಸ್ತೃತ ಕೆತ್ತನೆ ಮತ್ತು ಸುಂದರವಾಗಿ ಕೆತ್ತಿರುವ ಮದನಿಕೆಯರ ವಿಗ್ರಹಗಳು

6. ವಿಶಾಲವಾದ ನವರಂಗ (ಮಧ್ಯ)

7. ಭುವನೇಶ್ವರಿ (ಕೆತ್ತನೆಗಳನ್ನೊಳಗೊಂಡ ಮೇಲ್ಛಾವಣಿ) 8. ಪಿರಾಮಿಡ್ಡಿನಾಕಾರದಲ್ಲಿರುವ
ವಿಮಾನ (ಶಿಖರ)

9. ಒಂದರಿಂದ ಐದು ಗರ್ಭಗೃಹಗಳು (ಏಕಕೂಟ, ದ್ವಿಕೂಟ, ತ್ರಿಕೂಟ, ಚತುಷ್ಕೂಟ
ಮತ್ತು ಪಂಚಕೂಟ)



ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡ ದೇವಾಲಯಗಳಲ್ಲಿ ಮುಖ್ಯವಾದವುಗಳೆಂದರೆ;
ಬೇಲೂರಿನ ಚನ್ನಕೇಶವ (ಏಕಕೂಟ), ಹಳೇಬೀಡಿನ ಹೊಯ್ಸಳೇಶ್ವರ (ದ್ವಿಕೂಟ),
ಸೋಮನಾಥಪುರದ ಕೇಶವ (ತ್ರಿಕೂಟ) ದೊಡ್ಡಗದ್ದವಳ್ಳಿಯ ಲಕ್ಷ್ಮೀ (ಚತುಷ್ಕೂಟ),
ಗೋವಿಂದನ ಹಳ್ಳಿಯ ಪಂಚಲಿಂಗೇಶ್ವರ (ಪಂಚಕೂಟ), ತಲಕಾಡಿನ ಕೀರ್ತಿನಾರಾಯಣ,
ಹರಿಹರದ ಹರಿಹರೇಶ್ವರ, ಬಂಕಾಪುರದ ಶಿವ ದೇವಾಲಯ, ಅಮೃತಪುರದ ಅಮೃತೇಶ್ವರ,
ಅರಸೀಕೆರೆಯ ವೀರಬಲ್ಲಾಳ ದೇವಾಲಯ ಮುಂತಾದವುಗಳು.

2 comments: