"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 5 May 2016

☀ಜನೆವರಿ -2016ರ (ಭಾಗ -34) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-34)) ☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)

☀ಜನೆವರಿ -2016ರ (ಭಾಗ -34) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ 
(General knowledge on Current Affairs (Part-34))
☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ಜನೆವರಿ -2016ರ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ. 



2231) ಇತ್ತೀಚೆಗೆ 105ನೇ ಇಂಡಿಯನ್ ಸೈನ್ಸ್ ಕಾಂಗ್ರೇಸ್ ಅಸೋಸಿಯೇಷನ್(ಐಎಸ್‍ಸಿಎ) ದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
••► ಡಾ. ಅಚ್ಯುತ ಸಮಂತ.


2232) ಇತ್ತೀಚೆಗೆ ಅಮೆರಿಕಾದ ನಾಗರಿಕರು ಮತದಾನದ ಮೂಲಕ ಆಯ್ಕೆ ಮಾಡುವ ಸಿನಿ ಪ್ರಶಸ್ತಿ ಪೀಪಲ್ಸ್ ಚಾಯ್ಸ್ ಪಡೆದ ಭಾರತದ ಮೊದಲ ತಾರೆ ಯಾರು?
••► ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ


2233) ಪ್ರಸ್ತುತ ಕರ್ನಾಟಕ ಜ್ಞಾನ ಆಯೋಗದ ಮುಖ್ಯಸ್ಥ?
••► ಕೆ.ಕಸ್ತೂರಿ ರಂಗನ್


2234) ಇತ್ತೀಚೆಗೆ ಒಡಿಶಾ ಸರ್ಕಾರದ ತಾಂತ್ರಿಕ ಸಲಹೆಗಾರರಾಗಿ ನೇಮಕಗೊಂಡವರು ಯಾರು?
••► ಖ್ಯಾತ ದೂರಸಂಪರ್ಕ ತಜ್ಞ, ಎಂಜಿನಿಯರ್ ಹಾಗೂ ಸಂಶೋಧಕ ಸ್ಯಾಮ್ ಪಿತ್ರೋಡಾ


2235) ಭಾರತದ ದೂರಸಂಪರ್ಕ ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತಿದೆ?
••► ಸ್ಯಾಮ್ ಪಿತ್ರೋಡಾ.


2236) ಸ್ಯಾಮ್ ಪಿತ್ರೋಡಾರವರ ಆತ್ಮಚರಿತ್ರೆ ಯಾವುದು?
••► ಡ್ರೀಮಿಂಗ್ ಬಿಲ್- ಮೈ ಜರ್ನಿ ಟೂ ಕನೆಕ್ಟ್ ಇಂಡಿಯಾ.


2237) ಇತ್ತೀಚೆಗೆ ಯಾವ ದೇಶಗಳ ನಡುವೆ ಜಂಟಿ ಸೇನಾ ತರಬೇತಿ  'ಶಕ್ತಿ-2016' ಕಾರ್ಯಾಚರಣೆ ನಡೆಸಲಾಯಿತು?
••► ಭಾರತ ಹಾಗೂ ಫ್ರಾನ್ಸ್


2238) ಇತ್ತೀಚೆಗೆ ಕೇಂದ್ರ ಸರ್ಕಾರವು ಬೆಂಗಳೂರಿನ ಯಾವ ಕಂಪೆನಿಯ ಮೂರು ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಿದೆ?
••► ಎಚ್‍ಎಂಟಿ ವಾಚಸ್.


2239) ಮುದ್ರಾ ಬ್ಯಾಂಕ್‍ನಿಂದ ಮೂರು ಬಗೆಯ ಸಾಲ ಯೋಜನೆಗಳನ್ನು ಪರಿಚಯಿಸಲಾಗಿದೆ.
ಶಿಶು ಯೋಜನೆಯು ರೂ 50 ಸಾವಿರ, ಕಿಶೋರ್ ಯೋಜನೆಯು ರೂ 50 ಸಾವಿರಕ್ಕಿಂತ ಹೆಚ್ಚು ಮತ್ತು ತರುಣ್ ಯೋಜನೆಯು ರೂ 5 ಲಕ್ಷದಿಂದ 10 ಲಕ್ಷದವರೆಗೆವರೆಗಿನ ಹಣಕಾಸು ಸೌಲಭ್ಯವನ್ನು ಒದಗಿಸಲಿದೆ.


2240) ಇತ್ತೀಚೆಗೆ ಗಂಗಾ ನದಿಯ ಇಕ್ಕೆಲಗಳಲ್ಲಿ ಇರುವ 1600 ಗ್ರಾಮಗಳನ್ನು ಅಭಿವೃದ್ಧಿಪಡಿಸುವ  ಗಂಗಾ ಗ್ರಾಮ ಯೋಜನೆಯನ್ನು ಎಲ್ಲಿ ಉದ್ಘಾಟಿಸಲಾಯಿತು?
••► ಪಂಜಾಬ್ ರಾಜ್ಯದ ಹಾಪುರ ಜಿಲ್ಲೆಯ ಪುತ್ ಗ್ರಾಮದಲ್ಲಿ .


2241) ನಮಾಮಿ ಗಂಗಾ ಯೋಜನೆಗೆ ಅಧಿಕೃತವಾಗಿ ಏನೆಂದು ಕರೆಯಲಾಗುತ್ತದೆ.?
••► ಸಮಗ್ರ ಗಂಗಾ ಸಂರಕ್ಷಣಾ ಮಿಷನ್ ಯೋಜನೆ


2242) ವಿಶ್ವದಲ್ಲೇ ಅತಿಹೆಚ್ಚು ಮಂದಿ ಬಳಸುವ ನದಿ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದ ನದಿ ಯಾವುದು?
••► ಗಂಗಾ ನದಿ


2243) ಇತ್ತೀಚೆಗೆ ವಿಶ್ವದ ಅತಿದೊಡ್ಡ ನೀಲಮಣಿ ಹರಳು ಯಾವ ದೇಶದಲ್ಲಿ ಪತ್ತೆಯಾಗಿದೆ.?
••► ಶ್ರೀಲಂಕಾದಲ್ಲಿ.


2244) ನೀಲಮಣಿ ಕುರಿತ ಹೆಚ್ಚಿನ ಮಾಹಿತಿ  :
*.ನೀಲಮಣಿ ಎಂದರೆ ವಿಶಿಷ್ಟ ನೀಲಿಬಣ್ಣದ ಹರಳಾಗಿದ್ದು, ಖನಿಜಯುಕ್ತ ಕಾರ್ಡ್‍ಮನ್ ಅಂದರೆ ಅಲ್ಯೂಮೀನಿಯಂದ ಆಕ್ಸೈಡ್ ಆಗಿದೆ.

*.ನಿರ್ದಿಷ್ಟ ಪ್ರಮಾಣದ ಕಬ್ಬಿಣ, ಟಿಟಾನಿಯಂ, ಕ್ರೋಮಿಯಂ, ತಾಮ್ರ ಅಥವಾ ಮೆಗ್ನೇಶಿಯಂಗಳು ಒಳಗೊಂಡಿದ್ದಾಗ ಕ್ರಮವಾಗಿ ನೀಲಿ, ಹಳದಿ, ನೇರಳೆ, ಕಿತ್ತಳೆ ಹಾಗೂ ಹಸಿರು ಬಣ್ಣ ಬರುತ್ತವೆ.

*. ಕ್ರೋಮಿಯಂ ಪರಿಶುದ್ಧವಲ್ಲದಿದ್ದರೆ, ಆ ಹರಳು ಗುಲಾಬಿ ಅಥವಾ ಕೆಂಪು ಹಿನ್ನೆಲೆಯ ಬಣ್ಣವನ್ನು ಒಳಗೊಂಡಿರುತ್ತದೆ. ಇದನ್ನು ಮಾಣಿಕ್ಯ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನೀಲಮಣಿಯನ್ನು ಆಭರಣಗಳಲ್ಲಿ ಬಳಸಲಾಗುತ್ತದೆ.


2245) ಇತ್ತೀಚೆಗೆ ರಾಷ್ಟ್ರಪತಿಯಿಂದ ಅಂಕಿತಗೊಂಡ ಬಾಲಾಪರಾಧಿ ನ್ಯಾಯ (ಮಕ್ಕಳ ಕಾಳಜಿ ಮತ್ತು ಸುರಕ್ಷೆ) ಕಾಯ್ದೆ-2015 ಪ್ರಕಾರ ಘೋರ ಅಪರಾಧಗಳಲ್ಲಿ ಭಾಗಿಗಳಾದ ಎಷ್ಟು ವರ್ಷ ವಯಸ್ಸಿನ  ಬಾಲಾಪರಾಧಿಗಳನ್ನು ವಯಸ್ಕರೆಂದೇ ಪರಿಗಣಿಸಿ ವಿಚಾರಣೆ ನಡೆಸಲಾಗುವುದು.?
••► 16 ರಿಂದ 18 ವರ್ಷ ವಯಸ್ಸು


2246) ಇತ್ತೀಚೆಗೆ ಭಾರತ ಮತ್ತು ನೇಪಾಳ ದೇಶಗಳ ನಡುವೆ 27 ವರ್ಷಗಳ ನಂತರ ಸ್ನೇಹದ ಸಂಕೇತವಾಗಿ ಬಸ್ ಸಂಚಾರ (ಜನವರಿ 4) ಆರಂಭಗೊಂಡಿದ್ದು, ಯಾವ ಮಾರ್ಗವಾಗಿ ಈ ಬಸ್ ಸಂಚರಿಸಲಿದೆ?
••► ನೇಪಾಳದ ಕಂಚನ್‍ಪುರ ಮತ್ತು ದೆಹಲಿ ನಡುವೆ ಉತ್ತರಾಖಂಡದ ಚಂಪಾವತ್ ಮಾರ್ಗ


2247) ಇತ್ತೀಚೆಗೆ ಯಾವ ದೇಶವು ತನ್ನ ಮತ್ತು ಭಾರತದ ನಡುವಿನ ರಾಜಕೀಯ ಮತ್ತು ಸ್ನೇಹದ ಸಂಕೇತವಾಗಿ ತನ್ನ ದೇಶದಲ್ಲಿ ಮಹಾತ್ಮ ಗಾಂಧಿ ಹೆಸರಲ್ಲಿ ವೃತ್ತವೊಂದನ್ನು ಉದ್ಘಾಟಿಸಲಾಗಿದೆ?
••► ಇಸ್ರೇಲ್


2248) ಇತ್ತೀಚೆಗೆ ದೇಶದ ಮೂರನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಬೆಂಗಳೂರು ಮೂಲದ ವಿಪ್ರೋದ ಹೊಸ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಯಾರನ್ನು ನೇಮಿಸಲಾಗಿದೆ.?
••► ಅಬಿದ್ ಅಲಿ ನೀಮುಚವಾಲಾ


2249) ARDO (ಎಆರ್‍ಡಿಇ) ವಿಸೃತ ರೂಪ : :
••► ಎಮಮೆಂಟ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್ ಎಸ್ಟಾಬ್ಲಿಷ್‍ಮೆಂಟ್


2250) ಇತ್ತೀಚೆಗೆ ರಾಜಸ್ಥಾನದಲ್ಲಿರುವ ಪೊಖ್ರಾನ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ, ARDO(ಎಆರ್‍ಡಿಇ) ಅಭಿವೃದ್ಧಿಪಡಿಸಿದ ದಾಳಿ ಮಾಡುವ ಹಾಗೂ ರಕ್ಷಿಸುವ, ಕ್ಷಿಪ್ರ ಗುಂಡಿನ ಮಳೆಯಿಂದ ದೊಡ್ಡ ಪ್ರದೇಶವನ್ನು ತಟಸ್ಥೀಕರಿಸುವ ಸಾಮಥ್ರ್ಯ ಹೊಂದಿದ ಮಾರ್ಗದರ್ಶನ ರಹಿತ ರಾಕೆಟ್ ಸಿಸ್ಟಂ, ಮಲ್ಟಿ ಬ್ಯಾರಲ್ ರಾಕೆಟ್ ಲಾಂಚರ್ ನ ಹೆಸರೇನು?
••► ಪಿನಾಕ-2


2251) ಇತ್ತೀಚೆಗೆ ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಹೋದ ವರ್ಷ ರಚಿಸಿದ ಸಮಿತಿಯೊಂದರ ವರದಿಯನ್ನು ಸುಪ್ರೀಂ ಕೋರ್ಟ್ ಸಲ್ಲಿಸಲಾಯಿತು. ಅದು ಯಾರ ನೇತೃತ್ವದಲ್ಲಿ ರಚಿಸಲ್ಪಟ್ಟಿತ್ತು?
••► ನಿವೃತ್ತ ನ್ಯಾಯಮೂರ್ತಿ ಆರ್.ಎಮ್.ಲೋಧಾ


2252) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು (ಜನವರಿ 3) ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್(ಎಚ್ ಎಎಲ್)ನ ಹೆಲಿಕಾಪ್ಟರ್ ನಿರ್ಮಾಣ ಘಟಕವನ್ನು ಎಲ್ಲಿ ಉದ್ಘಾಟಿಸಿದರು?
••► ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಬಿದರೆಹಳ್ಳ ಕಾವಲ್‍.


2253) ಇತ್ತೀಚೆಗೆ ನಡೆದ ದಕ್ಷಿಣ ಏಷ್ಯಾ ಫೆಡರೇಷನ್ ಫುಟ್‍ಬಾಲ್(ಸ್ಯಾಫ್) ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಷ್ಟ್ರ ಯಾವುದು?
••► ಭಾರತ


2254) ಇತ್ತೀಚೆಗೆ ನಡೆದ ದಕ್ಷಿಣ ಏಷ್ಯಾ ಫೆಡರೇಷನ್ ಫುಟ್‍ಬಾಲ್(ಸ್ಯಾಫ್) ಟೂರ್ನಿಯಲ್ಲಿ ರನ್ನರ್ ಅಪ್ ಆದ ರಾಷ್ಟ್ರ ಯಾವುದು?
••► ಆಘ್ಪಾನಿಸ್ತಾನ


2255) ಕೃತಕ ಕಾಲಿನಲ್ಲಿ ಮೌಂಟ್ ಎವರೆಸ್ಟ್ ಏರಿ ದಾಖಲೆ ಬರೆದಿದ್ದ ಅರುಣಿಮಾ ಸಿನ್ಹಾ ಇತ್ತೀಚೆಗಷ್ಟೇ ಅರ್ಜೆಂಟೀನಾದ ಮೌಂಟೆ ಅಕಂಕಾವಾ ಏರುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಹಾಗಾದರೆ ಈ ಮೌಂಟೆ ಅಕಂಕಾವಾ ಪರ್ವತವು ಯಾವ ಪರ್ವತ ಶ್ರೇಣಿಗಳ ಸಾಲಿನಲ್ಲಿದೆ?
••► ಮೆಂಡೋಜಾ ಪ್ರಾಂತ್ಯದ ಆಂಡೀಸ್ ಪರ್ವತ ಶ್ರೇಣಿಗಳ ಸಾಲಿನಲ್ಲಿ.


2256) ಇತ್ತೀಚೆಗೆ ಅರ್ಜೆಂಟೀನಾದ ಮೌಂಟೆ ಅಕಂಕಾವಾ ಪರ್ವತವನ್ನು ಏರುವುದರೊಂದಿಗೆ ವಿಶ್ವದ 5 ಪರ್ವತವನ್ನು ಕೃತಕ ಕಾಲಿನೊಂದಿಗೆ ಏರಿದ ವಿಶ್ವದ ಮೊದಲ ಮಹಿಳೆ ಎನ್ನುವ ದಾಖಲೆಗೆ  ಪಾತ್ರರಾದ ಮಹಿಳೆ ಯಾರು?
••► ಅರುಣಿಮಾ ಸಿನ್ಹಾ


2257) ಡಿಎವಿಎ (DAVA) ವಿಸೃತ ರೂಪ ::
••► Drug Authentication Verification Application)
*.ಡ್ರಗ್ ಅಥೆಂಟಿಕೇಶನ್ ಅಂಡ್ ವೆರಿಫಿಕೇಷನ್ ಅಪ್ಲಿಕೇಷನ್


2258) ಇತ್ತೀಚೆಗೆ ಏಷ್ಯಾ-ಫೆಸಿಫಿಕ್ ಕೌನ್ಸಿಲ್ ಫಾರ್ ಟ್ರೇಡ್ ಫಸಿಲಿಟೇಷನ್(ಎಪಿಸಿಟಿಎಫ್) ಪ್ರಧಾನ ಮಾಡುವ 2015ನೇ ಸಾಲಿನ ಇ-ಏಷ್ಯಾ ಪ್ರಶಸ್ತಿ ಯಾರಿಗೆ ನೀಡಲಾಗಿದೆ?
••► ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯ (ಡಿಎವಿಎ)ಗೆ .


2259) ಇತ್ತೀಚೆಗೆ ದೇಶದ ಯಾವ ವಾಯುನೆಲೆಗೆ ನುಗ್ಗಿದ ಉಗ್ರರು ಭಾರತೀಯ ಯೋಧರು ಹಾಗೂ ವಾಯುನೆಲೆಯ ತಾಂತ್ರಿಕ ವಿಭಾಗವನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು?
••► ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಗೆ.


2260) ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲಾಗಿದೆ.


2261) ವಿಶ್ವಸಂಸ್ಥೆಯು 2016, ಜನವರಿ 1ರ ಮಧ್ಯರಾತ್ರಿಯಿಂದಲೇ ವಿಶ್ವಸಂಸ್ಥೆಯ ಎಲ್ಲ 193 ಸದಸ್ಯ ರಾಷ್ಟ್ರಗಳಲ್ಲೂ  17 ಪ್ರಮುಖ ಧ್ಯೇಯಗಳಡಿ 169 ಗುರಿಗಳನ್ನು ಆಳವಡಿಸಿಕೊಂಡಿದ್ದು, ಇವುಗಳನ್ನು ಸುಸ್ಥಿರ ಅಭಿವೃದ್ಧಿ ಗುರಿಗಳು (ಜಿಎಸ್‍ಡಿ) ಎಂದು ಕರೆಯಲಾಗಿದೆ.

*.ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಅನ್ವಯಿಸಲಿವೆ. ಸಾಮಾಜಿಕ, ಆರ್ಥಿಕ, ಪರಿಸರ ಎಂಬ 3 ಆಯಾಮಗಳನ್ನು ಹೊಂದಿರುವ ಜಿಎಸ್‍ಡಿ 2030ಕ್ಕೆ ಅಂತ್ಯಗೊಳ್ಳಲಿದೆ.!


2262) ಗುಜರಾತಿ ಭಾಷೆಯ ಬಹುಮುಖ್ಯ ಕಾದಂಬರಿಕಾರ, ಕವಿ ಹಾಗೂ ವಿಮರ್ಶಕ ಡಾ. ರಘುವೀರ್ ಚೌಧರಿ ಅವರಿಗೆ 2015ರ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ


2263) ಇತ್ತೀಚೆಗೆ ಭಾರತೀಯ ವಿಜ್ಞಾನ ಕಾಂಗ್ರೇಸ್‍ನ 103ನೇ ಸಮಾವೇಶ ಎಲ್ಲಿ ನಡೆಯಿತು?
••► ಮೈಸೂರಿನ ಮಾನಸ ಗಂಗೋತ್ರಿಯಲ್ಲಿ


2264) ಭಾರತೀಯ ವಿಜ್ಞಾನ ಕಾಂಗ್ರೇಸ್‍ನ 102ನೇ ಸಮಾವೇಶ ಎಲ್ಲಿ ನಡೆದಿತ್ತು.?
••► ಮುಂಬೈನಲ್ಲಿ


2265) ಗ್ರಾಮೀಣ ಪ್ರದೇಶಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಪ್ರಸ್ತುತ ‘ಇಂದಿರಾ ಆವಾಸ್ ಯೋಜನೆ’(ಐಎವೈ)ಯು ಏನೆಂದು ಮರುನಾಮಕರಣ ಆಗಲಿದೆ.?
••► ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’(ಪಿಎಂಎವೈ)


2266) ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’(ಪಿಎಂಎವೈ)ಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಯೋಜನಾ ವೆಚ್ಚ ಪಾಲು ಎಷ್ಟು?
••► 75:25ರ ಪ್ರಮಾಣ.


2267) ಇತ್ತೀಚೆಗೆ ಎನ್‍ಇಎಕ್ಸ್ ಜಿಟಿವಿ ಜಿಟಿವಿ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ಯಾರು ನೇಮಕಗೊಂಡಿದ್ದಾರೆ.?
••► ಅಭೀಶ್ ವರ್ಮಾ


2268) ಇತ್ತೀಚೆಗೆ ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್ ‍ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ.?
••► ಮಧು ಎಸ್,ನಾಯರ್.


2269) ಇತ್ತೀಚೆಗೆ ಬ್ರಿಟನ್ ನ ಅತಿ ದೊಡ್ಡ ಗೌರವ ಪ್ರತಿಷ್ಟಿತ ನೈಟ್ ಹುಡ್ ಪ್ರಶಸ್ತಿಯನ್ನು ಪಡೆದ ಭಾರತೀಯ ಮೂಲದ ಕ್ಯಾನ್ಸರ್ ತಜ್ಞ?
••► ಹರ್ ಪಾಲ್ ಸಿಂಗ್ ಕುಮಾರ್


2270) ಬ್ರಿಟನ್ ನ ಅತಿ ದೊಡ್ಡ ಗೌರವ ಪ್ರತಿಷ್ಟಿತ ನೈಟ್ ಹುಡ್ ಪ್ರಶಸ್ತಿ ಪಡೆದವರನ್ನು ನಾಮಾಂಕಿತವಾಗಿ ಏನೆಂದು ಸಂಬೋದಿಸಲಾಗುತ್ತದೆ?
••► ‘ಸರ್’


2271) ಬ್ರಿಟನ್ ನ ಅತಿ ದೊಡ್ಡ ಗೌರವ ಪ್ರತಿಷ್ಟಿತ ನೈಟ್ ಹುಡ್ ಪ್ರಶಸ್ತಿ ಪಡೆದ ಮಹಿಳೆಯರನ್ನು  ನಾಮಾಂಕಿತವಾಗಿ ಏನೆಂದು ಸಂಬೋದಿಸಲಾಗುತ್ತದೆ?
••► ‘ಡೇಮ್ ಹುಡ್’


2272) ಈ ಹಿಂದೆ ಕವಿ ರವೀಂಧ್ರನಾಥ್ ಠಾಗೋರ್ (ಫೆಬ್ರವರಿ 1915ರಲ್ಲಿ ನೀಡಲಾಗಿತ್ತು) ಅವರಿಗೆ ಒಲಿದಿದ್ದ ಪ್ರತಿಷ್ಟಿತ ನೈಟ್ ಹುಡ್ ಪದವಿಯನ್ನು ಅವರು ಯಾವ ಕಾರಣಕ್ಕಾಗಿ ಹಿಂದಿರುಗಿಸಿದ್ದರು?
••► ಬ್ರಿಟಿಷರಿಂದ ಪಂಜಾಬ್ ಜನತೆಯ ಮೇಲಾದ ದೌರ್ಜನ್ಯ ಖಂಡಿಸಿ.


2273) ವಿದ್ಯುತ್ ಘಟಕದ ಪರಿಕರಗಳ ತಯಾರಿಕಾ ಸಂಸ್ಥೆಯಾಗಿದ್ದ 'ಭಾರತ್ ಹೆವಿ ಇಲೆಕ್ಟ್ರಿಕಲ್ ಕಂಪನಿ'(ಬಿಎಚ್‍ಇಎಲ್) ಯು ಯಾವಾಗ ಸ್ಥಾಪನೆಯಾಯಿತು?
••► 1964ರಲ್ಲಿ .


2274) ರೋಟಾವೈರಸ್ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಕೈಗೊಂಡ ದೇಶದ ಮೊಟ್ಟಮೊದಲ ರಾಜ್ಯವಾಗಿ ಯಾವ ರಾಜ್ಯ ಹೊರಹೊಮ್ಮಿದೆ.?
••► ಹಿಮಾಚಲ ಪ್ರದೇಶ.

━━━━━━━━━━━━━━••● ಜನೆವರಿ 2016 - ಮುಕ್ತಾಯ ●••━━━━━━━━━━━━━━

No comments:

Post a Comment