"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 3 May 2016

☀ಜನೆವರಿ -2016ರ (ಭಾಗ -32) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-32)) ☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)

☀ಜನೆವರಿ -2016ರ (ಭಾಗ -32) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-32))
☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ಜನೆವರಿ -2016ರ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.



2161) ಇತ್ತೀಚೆಗೆ ನಿಧನರಾದ ಕರ್ನಾಟಕದ ಖ್ಯಾತ ಹಿರಿಯ ನಿರ್ದೇಶಕ, ಚಿತ್ರ ಸಾಹಿತಿ (85 ವರ್ಷ) ಯಾರು?
••► ಗೀತಾಪ್ರಿಯ


2162) ಇತ್ತೀಚೆಗೆ ಸೌತ್ ಏಷ್ಯನ್ ಲಿಟರೇಚರ್‍ನ ಪ್ರತಿಷ್ಟಿತ 'ಡಿಎಸ್ಸಿ ಪ್ರಶಸ್ತಿ' ಪಡೆದ ಭಾರತದ ಖ್ಯಾತ ಬರಹಗಾರ್ತಿ ಯಾರು?
••► ಅನುರಾಧಾ ರಾಯ್


2163) ಇತ್ತೀಚೆಗೆ ವಿಶ್ವದಾದ್ಯಂತ 15 ಭಾಷೆಗಳಿಗೆ ಅನುವಾದಗೊಂಡ ‘ಅಟ್ಲಾಸ್ ಆಫ್ ಇಂಪಾಸಿಬಲ್ ಲಾಂಗಿಂಗ್’ ಕಾದಂಬರಿ ರಚಿಸಿದವರು ಯಾರು?
••► ಅನುರಾಧಾ ರಾಯ್


2164) ಇತ್ತೀಚೆಗೆ ಮಹಿಳಾ ಟೆನಿಸ್ ಸಂಸ್ಥೆ (ಡಬ್ಲ್ಯುಟಿಎ) ಬಿಡುಗಡೆ ಮಾಡಿರುವ ವಿಶ್ವ ಕ್ರಮಾಂಕಪಟ್ಟಿಯ ಡಬಲ್ಸ್ ವಿಭಾಗದ ವೈಯಕ್ತಿಕ ವಿಶ್ವ ಶ್ರೇಣಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ ಮಹಿಳಾ ಕ್ರೀಡಾಪಟು ಯಾರು?
••► ಸ್ವಿಟ್ಜರ್‍ಲ್ಯಾಂಡ್‍ನ ಮಾರ್ಟಿನಾ ಹಿಂಗಿಸ್


2165) ಇತ್ತೀಚೆಗೆ ಐಸಿಸಿ ಟೆಸ್ಟ್ ಶ್ರೇಣಿಯಲ್ಲಿ ಪ್ರಥಮ ಸ್ಥಾನಕ್ಕೇರಿದ ರಾಷ್ಟ್ರ?
••► ಭಾರತ.


2166) ಇತ್ತೀಚೆಗೆ ತೈವಾನ್‍ನ ಮೊದಲ ಮಹಿಳಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದವರು?
••► ಸೈ ಇಂಗ್ ವೆನ್


2167) ಇತ್ತೀಚೆಗೆ ಯಾವ ದೇಶಗಳ ನಡುವೆ ಜಂಟಿ ನೌಕಾಪಡೆಗಳ ಸಮರಾಭ್ಯಾಸ 'ಕೈಜಿನ್-2016' ಕಾರ್ಯಾಚರಣೆ ನಡೆಸಲಾಯಿತು?
••► ಭಾರತ ಹಾಗೂ ಜಪಾನ್


2168) ಭಾರತದಲ್ಲಿ ಪ್ರತಿ ವರ್ಷ ಭಾರತದ ಸೇನಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
••► ಜನವರಿ 15.


2169) ಭಾರತೀಯ ಸೇನೆಯ ಮೊಟ್ಟಮೊದಲ ಕಮಾಂಡ್ ಇನ್ ಚೀಫ್ ಆಗಿ ನಿಯುಕ್ತಿಗೊಂಡ ಜನರಲ್ ಫೀಲ್ಡ್ ಮಾರ್ಷಲ್?
••► ಕೊಡನಂದೇರಾ ಮಾದಪ್ಪ ಕಾರ್ಯಪ್ಪ


2170) ಪ್ರಸ್ತುತ ಭಾರತದಲ್ಲಿ ಅತಿಹೆಚ್ಚು ಗ್ರಿಡ್ ಸಂಪರ್ಕಿತ ಸೌರವಿದ್ಯುತ್ ಉತ್ಪಾದಕ ರಾಜ್ಯಗಳೆಂದರೆ:

– ರಾಜಸ್ಥಾನ (1264.35 ಮೆಗಾವ್ಯಾಟ್)

– ಗುಜರಾತ್ (1024.15 ಮೆಗಾವ್ಯಾಟ್)

– ಮಧ್ಯಪ್ರದೇಶ (678.58 ಮೆಗಾವ್ಯಾಟ್)

– ಮಹಾರಾಷ್ಟ್ರನ (378.7 ಮೆಗಾವ್ಯಾಟ್)

– ಆಂದ್ರಪ್ರದೇಶ (357.34 ಮೆಗಾವ್ಯಾಟ್)

– ತೆಲಂಗಾಣ (342.39 ಮೆಗಾವ್ಯಾಟ್)

– ಪಂಜಾಬ್ (200.32 ಮೆಗಾವ್ಯಾಟ್)

– ಉತ್ತರಪ್ರದೇಶ (140 ಮೆಗಾವ್ಯಾಟ್)


2171) ಪ್ರಸ್ತುತ ಭಾರತದಲ್ಲಿ ಸೌರವಿದ್ಯುತ್ ಉತ್ಪಾದನೆಯಲ್ಲಿ ತೀರಾ ಹಿಂದುಳಿದ ರಾಜ್ಯಗಳೆಂದರೆ:

– ಪಶ್ಚಿಮಬಂಗಾಳ (7.21 ಮೆಗಾವ್ಯಾಟ್)

– ಉತ್ತರಾಖಂಡ (5 ಮೆಗಾವ್ಯಾಟ್)

– ಹರ್ಯಾಣ (12.8 ಮೆಗಾವ್ಯಾಟ್)


2172) ಇತ್ತೀಚೆಗೆ ಅಸೋಚಾಮ್ ಕರ್ನಾಟಕ ಪ್ರದೇಶ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು?
••► ಆರ್.ಶಿವಕುಮಾರ್


2173) ಇತ್ತೀಚೆಗೆ ಅಸೋಚಾಮ್ ಕರ್ನಾಟಕ ಪ್ರದೇಶ ಮಂಡಳಿಯ ನೂತನ ಸಹ ಅಧ್ಯಕ್ಷರಾಗಿ ಆಯ್ಕೆಯಾದವರು?
••► ಎಸ್.ಬಾಬು


2174) ಇತ್ತೀಚೆಗೆ (2016ರ ಜನವರಿ 12ರಂದು) ಯೂನಿಸೆಫ್‍ನಿಂದ ಪ್ರತಿಷ್ಠಿತ ಡ್ಯಾನಿ ಕೇಯ್ ಮಾನವೀಯ ನಾಯಕತ್ವ ಪ್ರಶಸ್ತಿ ಪಡೆದ ಫುಟ್‍ಬಾಲ್ ತಾರೆ ?
••► ಡೇವಿಡ್ ಬೆಕ್ಹಮ್


2175) ಇತ್ತೀಚೆಗೆ ದೇಶದ ಮೊದಲ ಸಾವಯವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯ ಯಾವುದು?
••► ಸಿಕ್ಕಿಂ.


2176) ಇತ್ತೀಚೆಗೆ ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡವರು?
••► ಎಸ್‌. ರಾಜೇಂದ್ರ ಬಾಬು


2177) ಇತ್ತೀಚೆಗೆ ದೇಶದಲ್ಲಿ ಅತೀ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯ ಯಾವುದು?
••► ಕರ್ನಾಟಕ


2178) ಇತ್ತೀಚೆಗೆ 19ನೇ ರಾಷ್ಟ್ರೀಯ ಇ- ಆಡಳಿತ ಸಮ್ಮೇಳನ ಎಲ್ಲಿ ಜರುಗಿತು?
••► ನಾಗಪುರ


2179) ಪ್ರಸ್ತುತ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ?
••► ಕಲಿಖೊ ಪುಲ್.


2180) ಪ್ರಸ್ತುತ ಅರುಣಾಚಲ ಪ್ರದೇಶದ ರಾಜ್ಯಪಾಲ?
••► J.P.ರಾಜಖೊವ.


2181) ಇತ್ತೀಚೆಗೆ ಜನ್ಮ ಶತಮಾನೋತ್ಸವವನ್ನು ಆಚರಿಸಲಾದ ಮೈಸೂರು ಮಲ್ಲಿಗೆ ಕೃತಿಯ ಪ್ರಸಿದ್ದ ಕವಿ ಯಾರು?
ಕೆ.ಎಸ್. ನರಸಿಂಹಸ್ವಾಮಿ


2182) ಕೆ.ಎಸ್. ನರಸಿಂಹಸ್ವಾಮಿರವರ ಕುರಿತ ಹೆಚ್ಚಿನ ಮಾಹಿತಿ  :
✧. ದುಂಡು ಮಲ್ಲಿಗೆ ಕವನ ಸಂಗ್ರಹಕ್ಕೆ 1997ರಲ್ಲಿ ಕನ್ನಡ ಸಾಹಿತ್ಯದ ಪಂಪ ಪ್ರಶಸ್ತಿ, 1978ರಲ್ಲಿ ಅವರ ‘ತೆರೆದ ಬಾಗಿಲು’ ಕವನ ಸಂಗ್ರಹಕ್ಕೆ ಅವರಿಗೆ ‘ಸಾಹಿತ್ಯ ಅಕಾಡಮಿ ಪ್ರಶಸ್ತಿ.

★ಕವನ ಸಂಗ್ರಹಗಳು
••► ಮೈಸೂರು ಮಲ್ಲಿಗೆ 1942, ಉಂಗುರ 1942 ಐರಾವತ 1945 ದೀಪದ ಮಲ್ಲಿ 1947, ಇರುವಂತಿಗೆ 1952, ಶಿಲಾಲತೆ 1958, ಮನೆಯಿಂದ ಮನೆಗೆ 1960, ತೆರೆದ ಬಾಗಿಲು 1976, ನವಪಲ್ಲವ 1983, ಮಲ್ಲಿಗೆಯ ಮಾಲೆ 1986, 2004, ದುಂಡು ಮಲ್ಲಿಗೆ 1993, ನವಿಲ ದನಿ 1999, ಸಂಜೆ ಹಾಡು 2000, ಕೈಮರದ ನೆಳಲಲ್ಲಿ 2001, ಎದೆ ತುಂಬ ನಕ್ಷತ್ರ 2002, ಮೌನದಲ್ಲಿ ಮಾತ ಹುಡುಕುತ 2003. ದೀಪ ಸಾಲಿನ ನಡುವೆ 2003.

★ಅನುವಾದಗಳು
••► ಮೀಡಿಯಾ 1999, ರಾಬರ್ಟ ಬರ್ನ್ಸ ಕವಿಯ ಕೆಲವು ಪ್ರೇಮಗೀತೆಗಳು 1993, ಕೆಲವು ಚಿನ್ನೆ ಕವನಗಳು 1997

★ಗದ್ಯಗಳು
••► ಮಾರಿಯ ಕಲ್ಲು 1942, ಉಪವನ 1958, ದಮಯಂತಿ 1960, ಸಿರಿಮಲ್ಲಿಗೆ 1990


2183) ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸದಾಗಿ ಅನುಮೋದನೆ ನೀಡಿರುವ (ಪಿಎಂಎಫ್ಬಿವೈ) ಪ್ರಧಾನ ಮಂತ್ರಿ ಫಸಲ್ ಬೆಳೆ ವಿಮಾ ಯೋಜನೆಯಲ್ಲಿ ಆಹಾರ ಧಾನ್ಯಗಳು ಮತ್ತು ತೈಲ ಬೀಜಗಳಿಗೆ ಪ್ರೀಮಿಯಂ ಮೊತ್ತವನ್ನು ಶೇ.1.5ರಿಂದ ಎಷ್ಟರಷ್ಟು ಹೆಚ್ಚಳಕ್ಕೆ ನಿಗದಿಪಡಿಸಲಾಗಿದೆ?
••► ಶೇ.1.5ರಿಂದ 2ರಷ್ಟು.


2184) ಜಲ್ಲಿಕಟ್ಟು ಗೂಳಿ ಕಾಳಗ ಸ್ಪರ್ಧೆ ಯಾವ ರಾಜ್ಯಕ್ಕೆ ಸಂಬಂಧಿಸಿದ್ದು?
••► ತಮಿಳುನಾಡು.


2185) ತಮಿಳುನಾಡಿನಲ್ಲಿ ಜಲ್ಲಿಕಟ್ಟು ಗೂಳಿ ಕಾಳಗ ಸ್ಪರ್ಧೆಯು ಯಾವ ಹಬ್ಬದ ವಿಶೇಷವಾಗಿ ನಡೆಸಲಾಗುವುದು?
••► ಪೊಂಗಲ್ ಹಬ್ಬ


2186) ಇತ್ತೀಚೆಗೆ ನಡೆದ ದೇಶದ ಅತ್ಯಂತ ಹಳೆಯ ಕ್ರೀಡಾ ಕ್ಲಬ್‌ಗಳಲ್ಲಿ ಒಂದಾದ ಮೊಹಮ್ಮಡನ್ 125ನೇ ವಾರ್ಷಿಕೋತ್ಸವ ಸಂಧರ್ಭದಲ್ಲಿ ಯಾರಿಗೆ ಕೋಲ್ಕತ್ತ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್‌ ಆಜೀವ ಸದಸ್ಯತ್ವ ನೀಡಿ ಗೌರವಿಸಲಾಯಿತು?
••► ಬಾಲಿವುಡ್‌ನ ತಾರೆ ಅಮಿತಾಭ್ ಬಚ್ಚನ್.


2187) ಇತ್ತೀಚೆಗೆ ಈ ವರ್ಷದ ‘ನೀರಜಾ ಭಾನೋಟ್‌’ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಯಿತು?
••► ಬೆಂಗಳೂರು ಮೂಲದ ಸುಭಾಷಿಣಿ ವಸಂತ್


2188) ‘ನೀರಜಾ ಭಾನೋಟ್‌’ ಪ್ರಶಸ್ತಿಯ ಕುರಿತ ಹೆಚ್ಚಿನ ಮಾಹಿತಿ  :
✧.1986ರಲ್ಲಿ ಉಗ್ರರು ಪ್ಯಾನ್‌ ಎಎಂ ವಿಮಾನವನ್ನು ಅಪಹರಿಸಿದಾಗ ಗಗನಸಖಿ ನೀರಜಾ ಭಾನೋಟ್‌ ಪ್ರಯಾಣಿಕರನ್ನು ರಕ್ಷಿಸಲು ಮುಂದಾಗಿ ಪ್ರಾಣ ಕಳೆದುಕೊಂಡಿದ್ದರು. ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
✧.ಪ್ರಶಸ್ತಿಯು ರೂ 1.50 ಲಕ್ಷ ನಗದು, ಫಲಕ ಮತ್ತು ಟ್ರೋಫಿಯನ್ನು ಒಳಗೊಂಡಿರುತ್ತದೆ.

✧.ನೀರಜಾ ಬಾನೋಟ್‍ರವರ ಈ ಸಾಧನೆಗಾಗಿ ಭಾರತ ಸರ್ಕಾರವು ಅಶೋಕ ಚಕ್ರ ಪ್ರಶಸ್ತಿ, ಪಾಕಿಸ್ತಾನ ಸರ್ಕಾರವು ಟ್ಯಾಗ್‍ಮಿ-ಇ-ಇನ್‍ಸಾಯತ್(Tagme-e-Insaniyat) ಪ್ರಶಸ್ತಿಯನ್ನು ಹಾಗೂ ಅಮೆರಿಕಾ ಸರ್ಕಾರವು ಮೆಡಲ್ ಆಫ್ ಹಿರೋಹಿಸಂ ಆಪ್ ದ ನ್ಯಾಷನಲ್ ಸೊಸೈಟಿ (Medal of Heroism of the National Society) ಪ್ರಶಸ್ತಿಗಳನ್ನು ನೀಡಿವೆ.


2189) ಸೆನ್ಸಾರ್‌ ಮಂಡಳಿ (ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ–ಸಿಬಿಎಫ್‌ಸಿ)  ಪುನರ್‌ರಚನೆಗಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇತ್ತೀಚೆಗೆ ಯಾರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.?
••► ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್‌


2190) ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಅಕ್ಟೋಬರ್ 26ರಂದು ಪ್ರದರ್ಶನಗೊಂಡ, (20 ಸಾವಿರ ನೃತ್ಯಗಾರರನ್ನು ಒಳಗೊಂಡ) ಅತಿಹೆಚ್ಚು ಮಂದಿ ಪಾಲ್ಗೊಂಡ ನೃತ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಗಿನ್ನಿಸ್ ದಾಖಲೆಗೆ ಸೇರಿದ ಅಪೂರ್ವ ನೃತ್ಯಪ್ರದರ್ಶನ ಯಾವುದು?
••► ಕುಲ್ಲು ಜಾನಪದ ನೃತ್ಯ (ನತಿ)

.. ಮುಂದುವರೆಯುವುದು. 

No comments:

Post a Comment