"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 14 February 2015

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅱ  'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು' ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅱ
 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')

♦. ಕರ್ನಾಟಕದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━

...ಮುಂದುವರೆದ ಭಾಗ Ⅱ.


✧.ಹಿಂದಿನ ಭಾಗದಲ್ಲಿ ತಿಳಿಸಿರುವ ಜಲಾನಯನಗಳ (basin) ಜೊತೆ ಇನ್ನೊಂದಷ್ಟು ಸಣ್ಣ ಸಣ್ಣ ಆಯಕಟ್ಟು ಹೊಂದಿರುವ ನದಿಗಳು ಕಡಲಿಗೆ ಹತ್ತಿರವಿದ್ದು, ಕಡಿಮೆ ಎತ್ತರದಿಂದ ಹರಿದು ನೇರವಾಗಿ ಅರಬ್ಬಿ ಕಡಲನ್ನು ಸೇರುತ್ತವೆ.

✧.ಪಶ್ಚಿಮಕ್ಕೆ ಹರಿವ ನದಿಗಳ ಏರ್ಪಾಟಿನಲ್ಲಿ ತನ್ನದೇ ಆದ ಆಯಕಟ್ಟನ್ನು(independent catchment) ಹೊಂದಿರುವ ಇನ್ನಷ್ಟು ನದಿಗಳು ಕೆಳಗಿನಂತಿವೆ.


Ⅲ.ಶರಾವತಿ ಮತ್ತು ಚಕ್ರ ನದಿಗಳ ನಡುವಿನ ಆಯಕಟ್ಟು:

✧.ಅರಬ್ಬಿ ಸಮುದ್ರಕ್ಕೆ ಸೇರುವ ಸಣ್ಣ-ಸಣ್ಣ ನದಿಗಳು ಬಹಳ ಇವೆ. ಅವುಗಳಲ್ಲಿ ಕೆಲವು ಕೊಲ್ಲೂರು ನದಿ, ಗಂಟಿಹೊಳೆ, ವೆಂಕಟಪುರ, ಬೈಂದೂರು ಹೊಳೆ, ಶಂಕರಗುಂಡಿ, ಕುಂಬಾರಹೊಳೆ, ಯೆಡಮಾವಿನಹೊಳೆ.
ಈ ನದಿಗಳ ಪೂರ್ತಿ ಆಯಕಟ್ಟು ಕರ್ನಾಟಕದಲ್ಲಿದೆ.


★ ವರಾಹಿ ಮತ್ತು ನೆತ್ರಾವತಿ ನದಿಗಳ ನಡುವಿನ ಆಯಕಟ್ಟು :

✧.ಕರ್ನಾಟಕದಲ್ಲೆ ಇರುವ ಈ ಆಯಕಟ್ಟಿನಲ್ಲಿ ಸ್ವರ್ಣ, ಸೀತಾನದಿ, ಮುಲ್ಕಿ ನದಿ, ಪಾವಂಜೆ ,ನದಿಸಾಲು, ಗುರಪುರ, ಎಣ್ಣೆ ಹೊಳೆ, ಮಡಿಸಲ್ ಹೊಳೆಗಳು ಹರಿಯುತ್ತವೆ.


★ ನೇತ್ರಾವತಿ ಮತ್ತು ಚಂದ್ರಗಿರಿ (ಪಯಸ್ವಾಣಿ) ನದಿಗಳ ನಡುವಿನ ಆಯಕಟ್ಟು:
ಈ ಆಯಕಟ್ಟಿನಲ್ಲಿ ಮುಖ್ಯವಾಗಿ ಚಂದ್ರಗಿರಿ ಮತ್ತು ಶಿರಿಯ ನದಿಗಳು ಹರಿಯುತ್ತವೆ.

✧.ಚಂದ್ರಗಿರಿ ನದಿಯು ಕೊಡಗು ಜಿಲ್ಲೆಯ ಪಶ್ಚಿಮದ ಮೆರ್ಕೇರದಲ್ಲಿ ಸುಮಾರು 600 ಮೀ. ಎತ್ತರದಲ್ಲಿ ಹುಟ್ಟುತ್ತದೆ.

✧.ಪಯಸ್ವಾಣಿ ನದಿಯು ಕೊಡಗಿನ ಪಟ್ಟಿ ಗಟ್ಟದ ಕಾಡಿನಲ್ಲಿ ಸುಮಾರು 1350 ಮೀ. ಎತ್ತರದಲ್ಲಿ ಹುಟ್ಟುತ್ತದೆ.

✧.ಈ ಎರಡು ನದಿಗಳು ಅರಬ್ಬಿ ಸಮುದ್ರದ ಗತಿಗೆ ವಿರುದ್ದವಾಗಿ 15 ಕಿ.ಮೀ ದೂರದಲ್ಲಿ ಕಾಸರಗೋಡಿನ ಮಚಿಪನದಲ್ಲಿ ಸೇರುತ್ತವೆ.

✧.ಇದರ ಒಟ್ಟು ಆಯಕಟ್ಟು 1406 ಚದರ ಕಿ.ಮೀ ಇದೆಯಾದರೂ 836 ಚದರ ಕಿ.ಮೀ ನಮ್ಮ ಕರ್ನಾಟಕದಲ್ಲಿದ್ದು ಉಳಿದದ್ದು ಕೇರಳ ರಾಜ್ಯಕ್ಕೆ ಸೇರುತ್ತದೆ.



Ⅳ.ಉತ್ತರ ಪೆನ್ನಾರ್ ನದಿ ಏರ್ಪಾಟು:

✧.ಉತ್ತರ ಪಿನಾಕಿನಿ (ಉತ್ತರ ಪೆನ್ನಾರ್ ನದಿ)

●.ಜಲಾನಯನ ಪ್ರದೇಶ: 6937 ಚದರ ಕಿ.ಮೀ.

●.ನದಿಯ ಮೂಲ:  ಕೊಲಾರದ ನಂದಿ ಬೆಟ್ಟ.

●.ನದಿಯ ಉದ್ದ: 597 ಕಿ.ಮೀ.

●.ಒಳ-ಉಪನದಿಗಳು :  ಜಯಮಂಗಲಿ, ಕುಮುದಾವತಿ, ಚಿತ್ರಾವತಿ ಮತ್ತು ಪಾಪಗ್ನಿ

●.ರಾಜ್ಯಗಳು:  ಕರ್ನಾಟಕ & ಆಂದ್ರಪ್ರದೇಶ


✧.ದಕ್ಷಿಣ ಪೆನ್ನಾರ್ ನದಿ ಏರ್ಪಾಟು:

●.ಜಲಾನಯನ ಪ್ರದೇಶ:  4370 ಚದರ ಕಿ.ಮೀ.

●.ನದಿಯ ಮೂಲ:  ಕೊಲಾರದ ನಂದಿ ಬೆಟ್ಟ.

●.ರಾಜ್ಯಗಳು: ಕರ್ನಾಟಕ ಮತ್ತು ತಮಿಳು ನಾಡು.


Ⅴ.ಪಾಲಾರ್ ನದಿ ಏರ್ಪಾಟು:

●.ಜಲಾನಯನ ಪ್ರದೇಶ: 2813 ಚದರ ಕಿ.ಮೀ.

●.ನದಿಯ ಮೂಲ:  ಕೊಲಾರದ ತಲಗಾವರ ಹಳ್ಳಿ,

●.ಮೂಲದ ಎತ್ತರ:  900 ಮೀ

●.ನದಿಯ ಉದ್ದ:  348ಕಿ.ಮೀ.

●.ರಾಜ್ಯಗಳು:  ಕರ್ನಾಟಕ, ಆಂದ್ರಪ್ರದೇಶ ಮತ್ತು ತಮಿಳು ನಾಡು


...ಉಳಿದದ್ದನ್ನು ಮುಂದುವರೆಸಲಾಗುವುದು.

No comments:

Post a Comment