"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 20 September 2015

☀***Updated! (ಸರಿ ಉತ್ತರಗಳೊಂದಿಗೆ) "ಎಸ್ ಡಿ ಎ (SDA) ಮತ್ತು  ಎಫ್ ಡಿ ಎ(FDA) - ಮಾದರಿ ಪ್ರಶ್ನೆ ಪತ್ರಿಕೆ 1"  ●ಸಾಮಾನ್ಯ ಜ್ಞಾನ (GENERAL KNOWLEDGE)  (SDA/FDA GK MODEL QUESTION PAPER)***Updated! 


☀***Updated! (ಸರಿ ಉತ್ತರಗಳೊಂದಿಗೆ) "ಎಸ್ ಡಿ ಎ (SDA) ಮತ್ತು
ಎಫ್ ಡಿ ಎ(FDA) - ಮಾದರಿ ಪ್ರಶ್ನೆ ಪತ್ರಿಕೆ 1"
●ಸಾಮಾನ್ಯ ಜ್ಞಾನ (GENERAL KNOWLEDGE)

(SDA/FDA GK MODEL QUESTION PAPER)***Updated!
━━━━━━━━━━━━━━━━━━━━━━━━━━━━━━━━━━━━━━━━━━━━━


●.ಸೂಚನೆಗಳು :-
★ ಇಲ್ಲಿ ತಯಾರಿಸಲಾದ ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 1 ಯು ಕೇವಲ ಎಸ್ ಡಿ ಎ (SDA) ಮತ್ತು ಎಫ್ ಡಿ ಎ(FDA) ಪರೀಕ್ಷೆಗಷ್ಟೇ ಸೀಮಿತಗೊಳಪಡಿಸದೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ.

★ ನಿಮ್ಮ ಕೌಶಲ್ಯಕ್ಕಾಗಿಯೇ ನಾನು ಉತ್ತರಗಳನ್ನು ಇಲ್ಲಿ ಪ್ರಕಟಿಸಿಲ್ಲ. ಶೀಘ್ರದಲ್ಲಿಯೇ ಉತ್ತರಗಳನ್ನೂ ನಿಮ್ಮ ಮುಂದಿಡುವೆ.

★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಯನ್ನುಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ 1ಯನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.

★ ಅತೀ ಶೀಘ್ರದಲ್ಲಿಯೇ---- "ಎಸ್ ಡಿ ಎ (SDA) ಮತ್ತು ಎಫ್ ಡಿ ಎ(FDA) ಸಾಮಾನ್ಯ ಜ್ಞಾನ-
ಮಾದರಿ ಪ್ರಶ್ನೆ ಪತ್ರಿಕೆ 2-2015"

— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.


•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•




ಪ್ರಶ್ನೆ ನಂ: 1) ಇತ್ತೀಚೆಗೆ ಭಾರತದಲ್ಲಿ ರದ್ದಾದ 'ಮ್ಯಾಗಿ ನೂಡಲ್ಸ್' (Maggi) ನಲ್ಲಿ ಕಂಡು ಬಂದ ಅಪಾಯಕಾರಿ ಅಂಶಗಳು ಯಾವುವು?
A] ಸೀಸ ಮತ್ತು ಗ್ಲುಟಮೇಟ್‌ √
B] ಮೋನೊ ಸೋಡಿಯಂ ಮತ್ತು ಹೈಡ್ರಾಕ್ಸೈಡ್
C] ಮೋನೊ ಆಕ್ಸೈಡ್ ಮತ್ತು ಸೀಸ
D] ಮೋನೊ ಸೋಡಿಯಂ ಸೀಸ ಮತ್ತು ಗ್ಲುಟಮೇಟ್‌


ಪ್ರಶ್ನೆ ನಂ: 2) ಯಾವ ದೇಶವು 2014 ರಲ್ಲಿ 'ಯೂರೋ ಜೋನ್' ಸೇರಿತು?
A] ಲಿಥುವೇನಿಯಾ
B] ಈಸ್ಟೊನಿಯಾ
C] ಸೈಪ್ರಸ್
D] ಲಾಟ್ವಿಯಾ √


ಪ್ರಶ್ನೆ ನಂ: 3) ಚುನಾವಣೆಗಳಲ್ಲಿ ಮತದಾರರ ಬೆರಳಿಗೆ ಹಚ್ಚುವ ಶಾಹಿಯಲ್ಲಿರುವ ರಾಸಾಯನಿಕ ವಸ್ತು?
A] ಸಿಲ್ವರ್ ನೈಟ್ರೇಟ್ √
B] ಸೋಡಿಯಂ ಅಸಿಡೇಟ್
C] ಸೋಡಿಯಂ ಪ್ಲೋರೈಡ್
D] ಪೊಟ್ಯಾಶಿಯಂ ಫಾಸ್ಫೇಟ್


ಪ್ರಶ್ನೆ ನಂ: 4) ರಾಕೆಟ್ ನ ಚಲನೆಯು ಈ ಕೆಳಗಿನ ಯಾವುದನ್ನು ಆಧರಿಸಿದೆ?
A] ನ್ಯೂಟನ್ ನ ಮೊದಲನೆಯ ನಿಯಮ
B] ನ್ಯೂಟನ್ ನ ಮೂರನೆಯ ನಿಯಮ √
C] ಐನ್‌ಸ್ಟೈನ್ ನ ನಿಯಮ
D] ಕೆಪ್ಲರನ ನಿಯಮ.


ಪ್ರಶ್ನೆ ನಂ: 5) ‘ಪೂರ್ವ ಮುತ್ತು’ ಎಂಬ ಭೌಗೋಳಿಕ ಅನ್ವರ್ಥನಾಮದ ಹೆಸರಿಟ್ಟು ಕರೆಯುವ ದೇಶ ಯಾವುದು?
A] ಆಸ್ಟ್ರೇಲಿಯಾ
B] ಬಹರೈನ್ √
C] ಬೆಲ್ಜಿಯಂ
D] ಶ್ರೀಲಂಕಾ


ಪ್ರಶ್ನೆ ನಂ: 6) ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶವೊಂದರ ರಾಷ್ಟ್ರೀಯ ಆದಾಯವು ಇದಕ್ಕೆ ಸಮ-
A] ಆ ದೇಶದ ಪ್ರಜೆಗಳು ಉತ್ಪಾದಿಸಿದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ.
B] ಒಟ್ಟು ಅನುಭೋಗ ಮತ್ತು ಹೂಡಿಕೆ ವೆಚ್ಚಗಳ ಮೊತ್ತ.
C] ಎಲ್ಲಾ ವ್ಯಕ್ತಿಗಳ ವೈಯುಕ್ತಿಕ ಆದಾಯಗಳ ಮೊತ್ತ.
D] ಅಂತಿಮವಾಗಿ ಎಲ್ಲಾ ಉತ್ಪಾದಿತ ಸರಕು ಮತ್ತು ಸೇವೆಗಳ ಹಣದ ಮೌಲ್ಯ. √


ಪ್ರಶ್ನೆ ನಂ: 7) ಭೂಮಧ್ಯೆ ರೇಖೆಯಿಂದ ಧ್ರುವಗಳ ಕಡೆಗೆ ನಾವು ಹೋಗುತ್ತಿದ್ದಂತೆ ಗುರುತ್ವದ ವೇಗೋತ್ಕರ್ಷವು....  
A] ಸ್ಥಿರವಾಗಿರುತ್ತದೆ
B] ಹೆಚ್ಚುತ್ತದೆ √
C] ಕಡಿಮೆಯಾಗುವುದು
D] 45° ಅಕ್ಷಾಂಶದವರೆಗೆ ಕಡಿಮೆಯಾಗಿ ಮತ್ತೆ ಹೆಚ್ಚುತ್ತದೆ.


ಪ್ರಶ್ನೆ ನಂ: 8) ಶರಾವತಿ ನದಿಯು ಸೃಷ್ಠಿಸಿದ ಜಲಪಾತ ಯಾವುದು?
A] ಮೊಗೋಡ ಜಲಪಾತ
B] ಊಂಚಳ್ಳಿ ಜಲಪಾತ
C] ಗೋಕಾಕ್ ಜಲಪಾತ
D] ಗೇರು ಸೊಪ್ಪೆ ಜಲಪಾತ√


ಪ್ರಶ್ನೆ ನಂ: 9) ದೆಹಲಿಯ ಯಾವ ರಸ್ತೆಯನ್ನು ಅಬ್ದುಲ್ ಕಲಾಂ ಹೆಸರನ್ನು ಇಡಲಾಗುವುದು?
A] ಔರಂಗಜೇಬ್ ರಸ್ತೆ.√
B] ಲೋಧಿ ರಸ್ತೆ
C] ವಸಂತ್ ಕುಂಜ್ ಮಾರ್ಗ್
D] ಅಕ್ಬರ್ ರಸ್ತೆ


ಪ್ರಶ್ನೆ ನಂ: 10) ಕಂಪ್ಯೂಟರುಗಳಲ್ಲಿ ಬಳಕೆಯಾಗುವ ಒಂದು ಬೈಟ್ (Byte) ನಲ್ಲಿ ಎಷ್ಟು ಬಿಟ್ (bit) ಗಳಿರುತ್ತವೆ ?
A] 4 ಬಿಟ್
B] 8 ಬಿಟ್√
C] 12 ಬಿಟ್
D] 16 ಬಿಟ್


ಪ್ರಶ್ನೆ ನಂ: 11) ರಾಷ್ಟ್ರಪತಿ ಆಡಳಿತವನ್ನು ಮೊತ್ತಮೊದಲ ಬಾರಿಗೆ ಮೈಸೂರು ರಾಜ್ಯದಲ್ಲಿ ವಿಧಿಸಿದ ವರ್ಷ ಯಾವುದು ?
A] 1969
B] 1970
C] 1971√
D] 1973


ಪ್ರಶ್ನೆ ನಂ: 12) ಯಾವ ರಾಷ್ಟ್ರೀಯ ಹೆದ್ದಾರಿಯು 2,369km ಉದ್ದವಿದ್ದು ವಾರಣಾಸಿಯಿಂದ ಕನ್ಯಾಕುಮಾರಿಯನ್ನು ಸಂಧಿಸುತ್ತದೆ?
A] ರಾಷ್ಟ್ರೀಯ ಹೆದ್ದಾರಿ
B] ರಾಷ್ಟ್ರೀಯ ಹೆದ್ದಾರಿ
C] ರಾಷ್ಟ್ರೀಯ ಹೆದ್ದಾರಿ 09
D]ರಾಷ್ಟ್ರೀಯ ಹೆದ್ದಾರಿ 07 √


ಪ್ರಶ್ನೆ ನಂ: 13)ಸುನಾಮಿ ಸಂಭವಿಸುವ ಮುನ್ನ ಮುನ್ಸೂಚನೆಯನ್ನು ನೀಡುವ ಸಾಧನ?
A] Tsuart
B] ಓಶನ್ ವೇವ್ ಡಿಟೆಕ್ಟೀವ್
C] ಸಿಸ್ಮೋಗ್ರಾಫ್
D] Doart (ಡೀಪ್ ಓಶನ್ ಅಸೆಸ್ ಮೆಂಟ್ ಆಂಡ್ ರಿಪೋರ್ಟಿಂಗ್ ಟೆಕ್ನಾಲಜಿ)√


ಪ್ರಶ್ನೆ ನಂ: 14) ಜಾಗತಿಕ ಮಟ್ಟದಲ್ಲಿ ಹೆಚ್ಚು ಇ- ತ್ಯಾಜ್ಯ ಉತ್ಪಾದನಾ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ?
A] 6 ನೇಯ
B] 5 ನೇಯ√
C] 7 ನೇಯ
D] 11 ನೇಯ


ಪ್ರಶ್ನೆ ನಂ: 15) ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ 2014ರಲ್ಲಿ ಸೇರ್ಪಡೆಯಾದ ಭಾರತದ ಎರಡು ಹೊಸ ತಾಣಗಳೆಂದರೆ..,
A] ಹಿಮಾಚಲ ಪ್ರದೇಶದ ಕುಲುವಿನಲ್ಲಿರುವ ‘ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್’ ಹಾಗೂ ಗುಜರಾತ್‌ನ ಸುಂದರ ಮೆಟ್ಟಿಲುಗಳಿರುವ ‘ರಾಣಿಯ ಬಾವಿ’.√
B] ಗುಜರಾತ್‌ನ ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ & ರಾಜಸ್ಥಾನದ ಕೇವಲಾದೇವ್ ರಾಷ್ಟ್ರೀಯ ಉದ್ಯಾನ.
C] ಉತ್ತರಾಖಂಡದ ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು.
D] ಹಿಮಾಚಲ ಪ್ರದೇಶದ ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ ಮತ್ತು ಮಧ್ಯ ಪ್ರದೇಶದ ಭೀಮ್‌ಬೇಟ್ಕಾದ ಶಿಲಾಶ್ರಯಗಳು


ಪ್ರಶ್ನೆ ನಂ: 16) ಶಾಸನಬದ್ಧ ಲಿಕ್ವಿಡಿಟಿ ಅನುಪಾತವನ್ನು ನಿಗದಿಸುವವರು..
A] ಭಾರತ ಸರ್ಕಾರ
B] ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ
C] ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ√
D] ಯೋಜನಾ ಆಯೋಗ


ಪ್ರಶ್ನೆ ನಂ: 17) ಈಚೆಗಷ್ಟೆ ನಿಧನರಾದ ಕೆ.ಎನ್. ರಾಮಚಂದ್ರನ್ ಅವರು ಕೆಳಕಂಡ ಯಾವ ಕ್ಷೇತ್ರದಲ್ಲಿ ಹೆಸರುವಾಸಿಯಾಗದ್ದರು?
A] ಗೀತರಚನೆ
B] ಚಿತ್ರಕಲೆ√
C] ವೈದ್ಯಕೀಯ
D] ಇತಿಹಾಸಜ್ಞ


ಪ್ರಶ್ನೆ ನಂ: 18) ಮರಭೂಮಿಯಲ್ಲಿ ಸುಡು ಬಿಸಿಲಿನಲ್ಲಿ ಮರೀಚಿಕೆಯು ಕಂಡು ಬರುವ ಕಾರಣ?
A] ತೀಕ್ಷ್ಣವಾದ ಬೆಳಕಲ್ಲಿ ಮಸುಕಾಗಿ ಕಾಣುವುದರಿಂದ
B] ಭ್ರಮೆಯಿಂದ
C] ಅದ್ಬುತ ಕಲ್ಪನೆಯಿಂದಾಗಿ
D] ಒಟ್ಟು ಆಂತರಿಕ ಪ್ರತಿಫಲನ ವಿಲೋಮವಾಗಿರುವುದರಿಂದ.√


ಪ್ರಶ್ನೆ ನಂ: 19) ಇತ್ತೀಚೆಗೆ ಬಿಡುಗಡೆ ಮಾಡಲಾದ ‘ಅಂಡ್‌ ದೆನ್‌ ಒನ್‌ ಡೇ: ಎ ಮೆಮೊರ್‌’(And then One Day: A Memoir) ಎಂಬ ಆತ್ಮಕತೆ ಪುಸ್ತಕ ಯಾರದ್ದು?
A] ಅಮಿತಾಭ ಘೋಷ್
B] ಯಶವಂತ್ ಸಿನ್ಹಾ
C] ನಾಸಿರುದ್ದೀನ್‌ ಶಾ √
D] ಸಚೀನ್ ತೆಂಡೊಲ್ಕರ್


ಪ್ರಶ್ನೆ ನಂ: 20) ಭಾರತದಲ್ಲಿ ಎಷ್ಟು ರಾಜ್ಯಗಳು ಕರಾವಳಿ ತೀರವನ್ನು ಹೊಂದಿವೆ?
A] 10 ರಾಜ್ಯಗಳು
B] 15 ರಾಜ್ಯಗಳು
C] 07 ರಾಜ್ಯಗಳು
D] 09 ರಾಜ್ಯಗಳು√


ಪ್ರಶ್ನೆ ನಂ: 21) ಮೊದಲನೆ ಮಹಾಯುದ್ಧವನ್ನು ಯಾವ ಒಪ್ಪಂದವು ಔಪಚಾರಿಕವಾಗಿ ಮುಕ್ತಾಯಗೊಳಿಸಿತು
A] ವರ್ಸೆಲ್ಸ್ ಒಪ್ಪಂದ
B] ಪ್ಯಾರಿಸ್ ಒಪ್ಪಂದ √
C] ವಾಷಿಂಗ್ಟನ್ ಒಪ್ಪಂದ
D] ಲಂಡನ್ ಒಪ್ಪಂದ


ಪ್ರಶ್ನೆ ನಂ: 22) ಯಾರ ಸೈನ್ಯವು 'ಕರ್ನಾಟಕ ಬಲ' ಎಂದು ಪ್ರಸಿದ್ದವಾಗಿತ್ತು ಹಾಗೇಯೆ 'ಅಜೇಯ' ಎಂಬ ಕೀರ್ತಿ ಪಡೆದಿತ್ತು?
A] ಗಂಗರು
B] ಹೊಯ್ಸಳರು
C] ಕದಂಬರು
D] ಬಾದಾಮಿ ಚಾಲುಕ್ಯರು √


ಪ್ರಶ್ನೆ ನಂ: 23) ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು?
A] ಸಾಡ್ಲರ್ ಆಯೋಗ.
B] ಚಾರ್ಲ್ಸವುಡ್ ಆಯೋಗ.
C] ಹಂಟರ್ ಆಯೋಗ.√
D] ಶ್ಯಾಲೆ ಆಯೋಗ.


ಪ್ರಶ್ನೆ ನಂ: 24) ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?
A] ಸಾರ್ಬಿಟಾಲ್.
B] ಫಾರ್ಮಲ್ಡಿಹೈಡ.√
C] ಫ್ಲೂರೈಡ್.
D] ಯುರೇನಿಯಂ.


ಪ್ರಶ್ನೆ ನಂ: 25) ಹೊಂದಿಸಿ ಬರೆಯಿರಿ.
 
ವಾತಾವರಣ ವಲಯಗಳು ಪ್ರಕ್ರಿಯೆ
ಎ) ಟ್ರೋಟೋಸ್ಪಿಯರ್ 1) ಉಲ್ಕೆಗಳು                                  
ಬಿ) ಸ್ಟ್ರಾಟೋಸ್ಪಿಯರ್ 2) ಮೋಡಗಳು
ಸಿ) ಮಿಸೋಸ್ಪಿಯರ್ 3) ರೇಡಿಯೋ ತರಂಗಗಳು
ಡಿ) ಅಯಾನೋಸ್ಪಿಯರ್ 4) ಓಜೋನ್ ಪದರ

-ಸಂಕೇತಗಳು
A] ಎ-2. ಬಿ-3. ಸಿ -1. ಡಿ-4.
B] ಎ-4. ಬಿ-1. ಸಿ-2. ಡಿ-3.
C] ಎ -2. ಬಿ-4. ಸಿ -1. ಡಿ-3.√
D] ಎ-1. ಬಿ-3. ಸಿ -2. ಡಿ-4.


ಪ್ರಶ್ನೆ ನಂ: 26) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2015 ನೇ ಇಸವಿಯನ್ನು ಈ ಕೆಳಕಂಡ ಯಾವ ವರ್ಷವನ್ನಾಗಿ ಘೋಷಿಸಿದೆ ?
A] ಅಂತರಾಷ್ಟ್ರೀಯ ಮಣ್ಣಿನ ವರ್ಷ√
B] ಅಂತರಾಷ್ಟ್ರೀಯ ಸಾಗರ ವರ್ಷ
C] ಅಂತರಾಷ್ಟ್ರೀಯ ತರಕಾರಿ ವರ್ಷ
D] ಅಂತರಾಷ್ಟ್ರೀಯ ಆಹಾರ ವರ್ಷ


ಪ್ರಶ್ನೆ ನಂ: 27) ಈಚೆಗೆ ನಿಧನರಾದ ಡಾರ್ಲೆ ಡಾಕಿನ್ಸ್ ಕ್ರೀಡಾಪಟು ಈ ಕೆಳಗಿನ ಯಾವ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿದ್ದರು?
A] ಬಾಸ್ಕೆಟ್‌ಬಾಲ್ √
B] ಫುಟ್‌ಬಾಲ್
C] ವ್ಹಾಲಿಬಾಲ್
D] ಬ್ಯಾಡ್ಮಿಂಟನ್


ಪ್ರಶ್ನೆ ನಂ: 28) ಸಾಮಾನ್ಯವಾಗಿ ಮರೆಮಾಚಿದ ನಿರುದ್ಯೋಗ ಎಂದರೆ -
A] ಹೆಚ್ಚಿನ ಸಂಖ್ಯೆಯ ಜನರು ನಿರುದ್ಯೋಗಿಗಳಾಗಿರುತ್ತಾರೆ.
B] ಪರ್ಯಾಯ ಉದ್ಯೋಗ ಲಭ್ಯವಿಲ್ಲದಿರುವುದು.
C] ಕಾರ್ಮಿಕರ ಕನಿಷ್ಠ ಮಿತಿಯ (ಮಾರ್ಜಿನಲ್) ಉತ್ಪಾದಕತೆ ಶೂನ್ಯವಾಗಿರುದು √
D] ಕಾರ್ಮಿಕರ ಉತ್ಪಾದಕತೆ ಕಡಿಮೆಯಾಗಿರುವುದು.


ಪ್ರಶ್ನೆ ನಂ: 29) ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಮಾರಕ ಕಾಯಿಲೆ 'ಮೆರ್ಸ್(MERS)'ದ ವಿಸ್ತೃತ ರೂಪ-
A] Migraine Eosinophils respiratory syndrome
B] Middle Earth refraction cellulose
C] Middle East respiratory syndrome √
D] Middle East rectaculor syndrome


ಪ್ರಶ್ನೆ ನಂ: 30) 'ಮಾತು ಬೆಳ್ಳಿ ಮೌನ ಬಂಗಾರ' ಎಂಬುದು....
A] ರೂಪಕಾಲಂಕಾರ
B] ದೃಷ್ಟಾಲಂಕಾರ √
C] ಉತ್ಪ್ರೇಕ್ಷಾಲಂಕಾರ
D] ಉಪಮಾಲಂಕಾರ


ಪ್ರಶ್ನೆ ನಂ: 31) 2014 ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಪಡೆದವರು ಯಾರು?
A] ಹಾರ್ಪರ್ ಲೀ.
B] ಹೆನ್ರಿ ಮಿಲ್ಲರ್
C] ಲಿಡಿಯಾ ಡೇವಿಸ್
D] ರಿಚರ್ಡ್ ಪ್ಲಾನಗಾನ್. √


ಪ್ರಶ್ನೆ ನಂ: 32) ಅಂಕೋಲಾದ ಉಪ್ಪಿನ ಸತ್ಯಾಗ್ರಹದ ನೇತೃತ್ವವನ್ನು ವಹಿಸಿದವರು ಯಾರು?
A] ಎ.ಆರ್.ದಿವಾಕರ್
B] ಡಿ.ಕೆ.ಕರ್ವೆ
C] ಎಮ್.ಪಿ.ನಾಡಕರ್ಣಿ√
D] ಮಂಜಪ್ಪ ಹರ್ಡೆಕರ್


ಪ್ರಶ್ನೆ ನಂ: 33) ದಪ್ಪ ಗಾಜಿನ ಲೋಟದೊಳಗೆ ಕುದಿಯುವ ನೀರನ್ನು ಸುರಿದಾಗ ಅದರಲ್ಲಿ ಬಿರುಕು ಉಂಟಾಗುತ್ತದೆ. ಏಕೆಂದರೆ,
A] ಗಾಜು ಒಂದು ಉತ್ತಮ ಉಷ್ಣವಾಹಕ
B] ಗಾಜು ತುಲನಾತ್ಮಕವಾಗಿ ಒಳ್ಳೆಯ ಉಷ್ಣವಾಹಕ
C] ಗಾಜು ಹೆಚ್ಚು ಶಾಖದ ಒತ್ತಡ ತಡೆದುಕೊಳ್ಳುವ ವಸ್ತು
D] ಗಾಜು ಹೀನ, ಕಳಪೆ ಉಷ್ಣವಾಹಕ. √


ಪ್ರಶ್ನೆ ನಂ: 34) ಯಾರ 125 ನೇ ಜನ್ಮದಿನಾಚರಣೆಯ ವಾರ್ಷಿಕೋತ್ಸವದ ಅಂಗವಾಗಿ ಭಾರತ ಸರ್ಕಾರವು ರೂ 125 ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ ?
A] ವಲ್ಲಭಭಾಯಿ ಪಟೇಲ್
B] ಬಾಲಗಂಗಾಧರ ತಿಲಕ್
C] ಭೀಮ್ ರಾವ್ ಅಂಬೇಡ್ಕರ್√
D] ರಾಜೇಂದ್ರ ಪ್ರಸಾದ್


ಪ್ರಶ್ನೆ ನಂ: 35) 'ಹಚ್ಚೇವು ಕನ್ನಡದ ದೀಪ' ಈ ಸುಮಧುರ ಭಾವಗೀತೆಯನ್ನು ರಚಿಸಿದವರು ಯಾರು?
A] ಕುವೆಂಪು
B] ಕೆ.ಎಸ್.ನಿಸಾರ್ ಅಹಮದ್
C] ಡಿ.ಎಸ್.ಕರ್ಕಿ √
D] ಜಿ.ಎಸ್.ಶಿವರುದ್ರಪ್ಪ


ಪ್ರಶ್ನೆ ನಂ: 36) ಬಾದಾಮಿ ಚಾಲುಕ್ಯರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ವಾಸ್ತುಶಿಲ್ಪ ಶೈಲಿಯ ಹೆಸರು...
A] ಇಂಡೋ ಸಾರ್ಸೆನಿಕ್ ಶೈಲಿ
B] ದ್ರಾವಿಡ ಶೈಲಿ
C] ನಾಗರಶೈಲಿ
D] ವೇಸರ ಶೈಲಿ √


ಪ್ರಶ್ನೆ ನಂ: 37) ಪ್ರಪಂಚದ ಅತಿ ಎತ್ತರವಾದ ಜಾಗೃತ ಜ್ವಾಲಾಮುಖಿ ಪರ್ವತ ಯಾವುದು?
A] ಅಕಾನಕಾಗುವಾ
B] ಒಜಾಸ್ ಡೆಲ್ ಸಲಾಡೊ√
C] ಕೊಟೋಪಾಕ್ಷಿ
D] ಕಿಲಿಮಂಜಾರೋ


ಪ್ರಶ್ನೆ ನಂ: 38) ಕ್ರೀಡಾಂಗಣ ಇರುವ ಸಿಂಧೂ ನಾಗರಿಕತೆಯ ನಗರ -
A] ಚನೋಹ್ದರೋ
B] ದೊಲ್ವೀರ್ √
C] ಲೋಥಾಲ್
D] ಕಾಲಿಬಂಗಾನ್


ಪ್ರಶ್ನೆ ನಂ: 39) ಒಣಗಿದ ಮಣ್ಣಿನ ಮೇಲೆ ಮಳೆ ಬಿದ್ದಾಗ ಆ ಮಣ್ಣು ಉತ್ಪಾದಿಸುವ ವಾಸನೆಗೆ ಕಾರಣ...
A] ಮಣ್ಣಿನಲ್ಲಿರುವ ನಾಯಿಕೊಡೆ, ಬೂಸ್ಟು ಮೊದಲಾದ ಸಸ್ಯಜಾತಿಗಳು.
B] ಮಣ್ಣಿನ ಸ್ಟ್ರೆಪ್ಟೊಮೈಸ್ ಗಳು. √
C] ಮಣ್ಣಿನ ಪಾಚಿ
D] ಮಣ್ಣಿನ ಪ್ರೊಟೊಸೋವ್.


ಪ್ರಶ್ನೆ ನಂ: 40) ಯಾವ ಸಂವಿಧಾನದ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ?
A] 42 ನೇ ತಿದ್ದುಪಡಿ (1976). √
B] 45 ನೇ ತಿದ್ದುಪಡಿ (1980).
C] 15 ನೇ ತಿದ್ದುಪಡಿ (1963).
D] 86 ನೇ ತಿದ್ದುಪಡಿ (2002).


ಪ್ರಶ್ನೆ ನಂ: 41) 'ಕಳಿಂಗ ಯುದ್ಧ' ನಡೆದ ಕಳಿಂಗ ಪ್ರದೇಶವು ಈ ಎರಡು ನದಿಗಳ ಮಧ್ಯದಲ್ಲಿನ ಪ್ರದೇಶವಾಗಿದೆ -
A] ಮಹಾನದಿ ಮತ್ತು ಗೋದಾವರಿ √
B] ಮಾಂಜ್ರಾ ಮತ್ತು ಇಂದ್ರಾವತಿ
C] ಗೋದಾವರಿ ಮತ್ತು ಸುವರ್ಣರೇಖಾ
D] ಮಹಾನದಿ ಮತ್ತು ವೇನಗಂಗಾ


ಪ್ರಶ್ನೆ ನಂ: 42) ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ'ದ ಸಂಪಾದಕರು?
A] ಹರ್ಮನ್ ಮೊಂಗ್ಲಿಂಗ್ √
B] ರೆ.ಎಫ್.ಕಿಟೆಲ್
C] ವೈಗ್ಳೆ
D] ಹರ್ಮನ್ ಹಸ್ಸೆ


ಪ್ರಶ್ನೆ ನಂ: 43) 'ಉದ್ಯಮಿ ಸ್ನೇಹಿ' ರಾಜ್ಯಗಳ ಪಟ್ಪಿಯಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
A] ಗುಜರಾತ್√
B] ತಮಿಳುನಾಡು
C] ಆಂಧ್ರಪ್ರದೇಶ
D] ಮಹಾರಾಷ್ಟ್ರ


ಪ್ರಶ್ನೆ ನಂ: 44) ಹೊಂದಿಸಿ ಬರೆಯಿರಿ.

ಬೌದ್ಧ ಮಹಾಸಭೆಗಳು                  ಅಧ್ಯಕ್ಷರು
ಎ) ಮೊದಲನೆಯ ಬೌದ್ಧ ಮಹಾಸಭೆ   1) ಮುಗ್ಗಲಿಪುತ್ತ ತಿಸ್ಸ          
ಬಿ) ಎರಡನೆಯ ಬೌದ್ಧ ಮಹಾಸಭೆ       2) ಸಬಾಕಮಿ
ಸಿ) ಮೂರನೆಯ ಬೌದ್ಧ ಮಹಾಸಭೆ      3) ವಸುಮಿತ್ರ
ಡಿ) ನಾಲ್ಕನೆಯ ಬೌದ್ಧ ಮಹಾಸಭೆ      4) ಮಹಾಕಶ್ಯಪ

-ಸಂಕೇತಗಳು
A]ಎ-4. ಬಿ-2. ಸಿ -1. ಡಿ-3.√
B]ಎ-4. ಬಿ-1. ಸಿ-2. ಡಿ-3.
C]ಎ -2. ಬಿ-4. ಸಿ -1. ಡಿ-3.
D]ಎ-1. ಬಿ-3. ಸಿ -2. ಡಿ-4.


ಪ್ರಶ್ನೆ ನಂ: 45) ಇತ್ತೀಚೆಗೆ ಅಂತರರಾಷ್ಟ್ರೀಯ ಅಣು ಪ್ರಸರಣ ನಿಷೇಧ ಕಾಯಿದೆ ವ್ಯಾಪ್ತಿಗೊಳಪಟ್ಟ ರಾಷ್ಟ್ರ ಯಾವುದು?
A] ಇರಾಕ್
B] ಇರಾನ್ √
C] ಲಿಬಿಯಾ
D] ಅಫಘಾನಿಸ್ತಾನ


ಪ್ರಶ್ನೆ ನಂ: 46) ಭಾರತದ ಮೊಟ್ಟ ಮೊದಲ ಸಂಸ್ಕೃತ ಶಾಸನ ಯಾವುದು?
A] ಜುನಾಘಡ ಶಾಸನ √
B] ಚಂದ್ರವಳ್ಳಿ ಶಾಸನ
C] ತಾಳಗುಂದ ಶಾಸನ
D] ಐಹೋಳೆ ಶಾಸನ


ಪ್ರಶ್ನೆ ನಂ: 47) ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಿಕೆಯಾಗಿಲ್ಲ ?
A]. ಐಸೋಥರ್ಮ್ – ಉಷ್ಣತೆ
B]. ಐಸೋಬಾರ್ – ಒತ್ತಡ
C]. ಐಸೋಹೆಲ್ಸ್ – ಬಿಸಿಲಿನ ಅವಧಿ
D]. ಐಸೋಹೈಟ್ಸ್ – ಆರ್ದ್ರತೆ √


ಪ್ರಶ್ನೆ ನಂ: 48) ಬಾವಲಿಗಳು ನಿಶಾಚರಿಗಳು, ಕತ್ತಲಲ್ಲಿ ಇತರ ವಸ್ತುಗಳಿಗೆ ತಾಗದೆ ಹಾರಾಡಬಲ್ಲವು. ಇದಕ್ಕೆ ಕಾರಣ ...
A] ತಮ್ಮ ರೆಕ್ಕೆಗಳಿಂದ ಸುತ್ತಮುತ್ತಲಿನ ವಸ್ತುಗಳನ್ನು ಸ್ಪರ್ಶಿಸುವುದರೊಂದಿಗೆ.
B] ಸುತ್ತಮುತ್ತಲಿನ ವಸ್ತುಗಳಿಂದ ಪ್ರತಿಫಲನಗೊಂಡ ಉಷ್ಣದ ಅಲೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವುದರೊಂದಿಗೆ
C] ಶ್ರವಣಾತೀತ ಧ್ವನಿ ಅಲೆಗಳನ್ನು ಹೊರಸೂಸಿ, ಸುತ್ತಮುತ್ತಲಿನ ವಸ್ತುಗಳಿಂದ ಪ್ರತಿಫಲನಗೊಂಡ ಮರುಧ್ವನಿಯನ್ನು ಗ್ರಹಿಸುವುದರೊಂದಿಗೆ √
D] ಅವುಗಳಿಗೆ ರಾತ್ರಿ ದೃಷ್ಟಿ ಚುರುಕಾಗಿರುವುದರಿಂದ.


ಪ್ರಶ್ನೆ ನಂ: 49) ಸಂವಿಧಾನದ ಯಾವ ವಿಧಿಯು 'ಅಪಾಯಕಾರಿ ಕೈಗಾರಿಕೆಗಳು ಮತ್ತು ಕಾರ್ಖಾನೆ'ಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳ ನೇಮಕಕ್ಕೆ ನಿಷೇಧಿಸುತ್ತದೆ ?
ಉತ್ತರ: 24ನೇ ವಿಧಿ.
A] 23 ನೇ ವಿಧಿ.
B] 19 ನೇ ವಿಧಿ.
C] 24 ನೇ ವಿಧಿ.√
D] 45 ನೇ ವಿಧಿ.


ಪ್ರಶ್ನೆ ನಂ: 50) ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ಯಾರು?
A] ಘಿಯಾಸುದ್ಧೀನ್ ತುಘಲಕ್
B] ಫೀರೋಜ್ ಷಾ ತುಘಲಕ್ √
C] ಮಹಮ್ಮದ್ ಬಿನ್ ತುಘಲಕ್
D] ಖುಸ್ರಾವ್ ಖಾನ್


ಪ್ರಶ್ನೆ ನಂ: 51) ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು ಯಾರು?
A] ಮುಮ್ಮಡಿ ಕೃಷ್ಣರಾಜ ಒಡೆಯರ್
B] ನಾಲ್ವಡಿ ಕೃಷ್ಣರಾಜ ಒಡೆಯರ್ √
C] ಚಾಮರಾಜ ಒಡೆಯರ್
D] ಜಯಚಾಮರಾಜ. ಒಡೆಯರ್


ಪ್ರಶ್ನೆ ನಂ: 52)'ಸ್ವಸ್ಥ ಧರಾ ಖೇತ್ ಹರಾ' ಯಾವ ಯೋಜನೆಗೆ ಸಂಬಂಧಿಸಿದೆ?
A] ರಾಷ್ಟ್ರೀಯ ಸ್ವಚ್ಛತಾ ಮಿಷನ್
B] ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ
C] ಮಣ್ಣಿನ ಆರೋಗ್ಯ ಕಾರ್ಡ್ √
D] ಡಿಜಿಟಲ್ ಇಂಡಿಯಾ


ಪ್ರಶ್ನೆ ನಂ: 53) ಸಿಮೆಂಟ್ ಈ ವಸ್ತುಗಳ ಮಿಶ್ರಣವಾಗಿದೆ.
A] ಕ್ಯಾಲ್ಸಿಯಂ ಸಿಲಿಕೇಟ್, ಕ್ಯಾಲ್ಸಿಯಂ ಅಲ್ಯುಮಿನೇಟ್ ಮತ್ತು ಜಿಪ್ಸಮ್ √
B] ಕ್ಯಾಲ್ಸಿಯಂ ಸಿಲಿಕೇಟ್, ಕ್ಯಾಲ್ಸಿಯಂ ಹೈಡ್ರಾಕ್ಸೈಡ್
C] ಕ್ಯಾಲ್ಸಿಯಂ ಅಲ್ಯುಮಿನೇಟ್ ಮತ್ತು ಕ್ಯಾಲ್ಸಿಯಂ ಅಲ್ಯುಮಿನೇಟ್
D] ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮತ್ತು ಜಿಪ್ಸಮ್


ಪ್ರಶ್ನೆ ನಂ: 54) 'ಕವಿರಾಜ ಮಾರ್ಗ' ಇದು ಯಾರ ಅವಧಿಗೆ ಸೇರಿದ್ದಾಗಿದೆ?
A] ಕದಂಬರು
B] ಚಾಲುಕ್ಯರು
C] ಹೊಯ್ಸಳರು
D] ರಾಷ್ಟ್ರಕೂಟರು √


ಪ್ರಶ್ನೆ ನಂ: 55) ಅದೇ ಜಿಲ್ಲೆಯಲ್ಲಿ ಹುಟ್ಟಿ ಅದೇ ಜಿಲ್ಲೆಯಲ್ಲಿ ಸಮುದ್ರ ಸೇರುವ ನದಿ ಯಾವುದು?
A] ಮಲಪ್ರಭಾ
B] ಘಟಪ್ರಭಾ
C] ಕಾಳಿ √
D] ವರದಾ


ಪ್ರಶ್ನೆ ನಂ: 56) ಉತ್ತರ ಗೋಳಾರ್ಧದಲ್ಲಿ ಗಾಳಿಯ ದಿಕ್ಕು ಬಲಕ್ಕೆ ವಿಕ್ಷೇಪಣಗೊಳ್ಳುತ್ತದೆ. ಕಾರಣ?
A] ಭೂಮಿಯ ಪರಿಭ್ರಮಣ√
B] ಭೂಮಿಯ ಅಕ್ಷದ ಬಾಗುವಿಕೆ
C] ಸೂರ್ಯನ ಸುತ್ತ ಭೂಮಿಯ ಪರಿಕ್ರಮಣ
D] ಚಂದ್ರನ ಗುರುತ್ವಾಕರ್ಷಣ ಬಲ


ಪ್ರಶ್ನೆ ನಂ: 57) ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ ಯಾವುದು?
A] ಜುನಾಘಡ ಶಾಸನ
B] ಐಹೋಳೆ ಶಾಸನ
C] ತಾಳಗುಂದ ಶಾಸನ
D] ಚಂದ್ರವಳ್ಳಿ ಶಾಸನ √


ಪ್ರಶ್ನೆ ನಂ: 58) ಸುದರ್ಶನ ಸರೋವರವನ್ನು ಉತ್ಖನನ ಮಾಡಿದ ಸ್ಥಳ ಯಾವುದು?
A] ಮಾಳ್ವ
B] ಪಂಜಾಬ್
C] ಕಾಥಿಯಾವರ್√
D] ಮಹಾರಾಷ್ಟ್ರ


ಪ್ರಶ್ನೆ ನಂ: 59) ಮಹಾದಾಯಿ ನದಿ ವಿವಾದ ನ್ಯಾಯಮಂಡಲಿಯು ಈ ಕೆಳಗಿನ ಯಾವ ರಾಜ್ಯಗಳಿಗೆ ಸಂಬಂಧಿಸಿದೆ?
A] ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ√
B] ತಮಿಳುನಾಡು, ಕೇರಳ ಮತ್ತು ಕರ್ನಾಟಕ
C] ಕೇರಳ, ಗೋವಾ ಮತ್ತು ಕರ್ನಾಟಕ
D] ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ


ಪ್ರಶ್ನೆ ನಂ: 60) 'ಬ್ಯಾಂಕ್ ಓಂಬಡ್ಸಮನ್' ಬಗೆಗಿನ ಈ ಕೆಳಗಿನ ಯಾವ ಹೇಳಿಕೆ ಸರಿಯಲ್ಲ.
A] ಇವರನ್ನು ಭಾರತೀಯ ರಿಜರ್ವ್‌ ಬ್ಯಾಂಕು ನೇಮಿಸುತ್ತದೆ.
B] ಬ್ಯಾಂಕ್ ಓಂಬಡ್ಸಮನ್ ಪ್ರಥಮವಾಗಿ ಬ್ರಿಟನ್ (UK) ನಲ್ಲಿ ಜಾರಿಗೆ ತರಲಾಯಿತು.
C] ಇದನ್ನು ಭಾರತದಲ್ಲಿ RBIಯು 1995ರಲ್ಲಿ ಜಾರಿಗೆ ತರಲಾಯಿತು.
D] ಬ್ಯಾಂಕ್ ಓಂಬಡ್ಸಮನ್ ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ಇಡೀ ಭಾರತಕ್ಕೆಲ್ಲ ಸಂಬಂಧಿಸಿದೆ. √


ಪ್ರಶ್ನೆ ನಂ: 61) ಸರೋವರದಲ್ಲಿ ಘನೀಕೃತವಾಗಿರುವ ಮಂಜುಗಡ್ಡೆಯು ಕರಗಲು ಪ್ರಾರಂಭಿಸಿದಾಗ....
A] ಸುತ್ತಮುತ್ತಲಿನ ಪ್ರದೇಶದ ತಾಪವು ಹೆಚ್ಚುತ್ತದೆ.
B] ಸುತ್ತಮುತ್ತಲಿನ ಪ್ರದೇಶದ ತಾಪವು ಅಷ್ಟೇ ಇರುತ್ತದೆ.
C] ಸುತ್ತಮುತ್ತಲಿನ ಪ್ರದೇಶದ ತಾಪವು ಕಡಿಮೆಯಾಗುವುದು. √
D] ಸರೋವರದ ನೀರಿನ ಮಟ್ಟ ಏರುತ್ತದೆ.


ಪ್ರಶ್ನೆ ನಂ: 62) ಇತ್ತೀಚೆಗೆ ಕೇಂದ್ರ ಮುಖ್ಯ ಮಾಹಿತಿ ಆಯುಕ್ತರನ್ನಾಗಿ (ಸಿಐಸಿ) ಯಾರನ್ನು ನೇಮಕ ಮಾಡಲಾಯಿತು?
A] ವಿಜಯ್‌ ಶರ್ಮಾ.√
B] ಕೆ.ವಿ.ಚೌಧರಿ
C] ಪಿ.ಎನ್‌. ಶ್ರೀನಿವಾಸಾಚಾರಿ
D] ಕಿರಣ ಕುಮಾರ್

ಪ್ರಶ್ನೆ ನಂ: 63) 'ಮನುಷ್ಯಜಾತಿ ತಾನೊಂದೆ ವಲಂ' ಎಂಬ ಉಕ್ತಿ —
A] 'ಪಂಪಭಾರತ' ದಲ್ಲಿದೆ.
B] 'ಯಶೋಧರ ಚರಿತೆ' ಯಲ್ಲಿದೆ.
C] 'ಆದಿ ಪುರಾಣ' ದಲ್ಲಿದೆ. √
D] 'ಶಾಂತಿ ಪುರಾಣ' ದಲ್ಲಿದೆ.


ಪ್ರಶ್ನೆ ನಂ: 64) ಸಂವಿಧಾನದ ಯಾವ ವಿಧಿಯು 06 ವರ್ಷಗಳವರೆಗಿನ ಎಲ್ಲಾ ಮಕ್ಕಳಿಗೆ 'ಬಾಲ್ಯ ಪೋಷಣೆ ಮತ್ತು ಉಚಿತ ಹಾಗೂ ಕಡ್ಡಾಯ ಶಿಕ್ಷಣ' ವನ್ನು ಒದಗಿಸುವ ಕುರಿತು ತಿಳಿಸುತ್ತದೆ?
ಉತ್ತರ: 45 ನೇ ವಿಧಿ.
A] 23 ನೇ ವಿಧಿ.
B] 19 ನೇ ವಿಧಿ.
C] 24 ನೇ ವಿಧಿ.
D] 45 ನೇ ವಿಧಿ.√


ಪ್ರಶ್ನೆ ನಂ: 65) ಪ್ರಥಮ ತರೈನ್ ಯುದ್ಧ ಯಾರ ಮಧ್ಯದಲ್ಲಿ ನಡೆಯಿತು?
A] ಘೋರಿಮಹಮ್ಮದ್ ಮತ್ತು ಪೃಥ್ವಿರಾಜ್ ಚೌಹನ್ √
B] ಘೋರಿಮಹಮ್ಮದ್ ಮತ್ತು ಅಜಯ ರಾಜ್
C] ಘಜ್ನಿ ಮಹಮ್ಮದ್ ಮತ್ತು ಪೃಥ್ವಿರಾಜ್ ಚೌಹನ್
D] ಘಜ್ನಿ ಮಹಮ್ಮದ್ ಮತ್ತು ಎರಡನೇ ಪೃಥ್ವಿರಾಜ್


ಪ್ರಶ್ನೆ ನಂ: 66) 2015 ರ 'ಮ್ಯಾನ್ ಬೂಕರ್ ಅಂತರರಾಷ್ಟ್ರೀಯ ಪ್ರಶಸ್ತಿ'ಯನ್ನು ಪಡೆದವರು ಯಾರು?
A] ಲಿಡಿಯಾ ಡೇವಿಸ್
B] ಲಾಸ್ಲೊ ಕೃಸ್ಕಹೊರ್ಕೊ √
C] ಅಮಿತಾಬ್ ಘೋಷ್
D] ಪಿಲಿಪ್ ರೋತ್


ಪ್ರಶ್ನೆ ನಂ: 67) ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಪ್ರಸ್ತಾವನೆ ( Preamble) ಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
A] ಆಸ್ಟ್ರೇಲಿಯಾ
B] ಬ್ರಿಟನ್
C] ಅಮೆರಿಕಾ.√
D] ರಷ್ಯಾ


ಪ್ರಶ್ನೆ ನಂ: 68) ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/ಸಾಧನದಿಂದ ಅಳೆಯಲಾಗಿದೆ?
A] ಹಬಲ್ ನ ಟೆಲಿಸ್ಕೋಪ್.
B] ಯುರೇನಿಯಂ.
C] ರಿಟ್ರೋ ರಿಫ್ಲೆಕ್ಟರ್.√
D] ಮೇಲಿನ ಯಾವುದು ಅಲ್ಲ.


ಪ್ರಶ್ನೆ ನಂ: 69) ಇತ್ತೀಚೆಗೆ ಭಾರತವು 'Ex-Ekuverin 2015' ಎಂಬ ಹೆಸರಿನ 'ಜಂಟಿ ಮಿಲಿಟರಿ ಸಮರಾಭ್ಯಾಸ'ವನ್ನು ಯಾವ ದೇಶದೊಂದಿಗೆ ನಡೆಸಿತ್ತು?
A] ಮಾರಿಷಸ್
B] ಮಾಲ್ಡೀವ್ಸ್ √
C] ಶ್ರೀಲಂಕಾ
D] ಮಡಗಾಸ್ಕರ್


ಪ್ರಶ್ನೆ ನಂ: 70) ಮೂಕನಾಯಕ್ ಪತ್ರಿಕೆಯ ಸಂಫಾದಕರು
A] ಅರವಿಂದೋ ಘೋಷ್.
B] ಈಶ್ವರಚಂದ್ರ ವಿದ್ಯಾಸಾಗರ.
C] ಮಾಳವೀಯ
D] ಡಾ|| ಬಿ.ಆರ್.ಅಂಬೇಡ್ಕರ್. √


ಪ್ರಶ್ನೆ ನಂ: 71) ಮಾನವನ ಬಡತನ ಸೂಚಕವನ್ನು ಅಳೆಯುವ ಮಾನದಂಡ
A] ದೀರ್ಘಾಯುಷ್ಯ, ಪೋಷನೆ ಮತ್ತು ಜ್ಞಾನ,
B] ಜ್ಞಾನ, ಅವಶ್ಯಕತೆ ಮತ್ತು ಜೀವನ ಮಟ್ಟ,
C] ದೀರ್ಘಾಯುಷ್ಯ, ಜೀವನ ಮಟ್ಟ ಮತ್ತು ನೈರ್ಮಲ್ಯ,
D] ದೀರ್ಘಾಯುಷ್ಯ, ಜ್ಞಾನ ಮತ್ತು ಜೀವನ ಮಟ್ಟ√


ಪ್ರಶ್ನೆ ನಂ: 72) 'ಪ್ರಾಥಮಿಕ ಶಿಕ್ಷಣದ ಹಕ್ಕು' ಕುರಿತು ಸಂವಿಧಾನದ ಯಾವ ವಿಧಿಯು ತಿಳಿಸುತ್ತದೆ ?
ಉತ್ತರ:
A] 21 A ವಿಧಿ.√
B] 19 ನೇ ವಿಧಿ.
C] 24 ನೇ ವಿಧಿ.
D] 45 ನೇ ವಿಧಿ.


ಪ್ರಶ್ನೆ ನಂ: 73) ಅಧಿಕ ಉಬ್ಬರ ವಿಳಿತವು...
A] ಪ್ರತಿ 24 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
B] ಪ್ರತಿ 12 ಗಂಟೆಗಳಿಗೊಮ್ಮೆ ಉಂಟಾಗುತ್ತದೆ√
C]. ಪ್ರತಿ 6 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
D] ಪ್ರತಿ 8 ಗಂಟೆಗಳಿಗೊಮ್ಮೆ ಉಂಟಾಗುತ್ತದೆ


ಪ್ರಶ್ನೆ ನಂ: 74) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1. 'ಅಶೋಬಾ' ಎಂಬ ಚಂಡಮಾರುತ ಭಾರತದ ಪಶ್ಚಿಮ ಕರಾವಳಿಯಲ್ಲಿ ಕಾಣಿಸಿತು
2. 'ಅಶೋಬಾ' ಚಂಡಮಾರುತವು ಕರ್ನಾಟಕದ ಕರಾವಳಿಯಲ್ಲಿ ಹೆಚ್ಚು ಮಳೆಯನ್ನು ಸುರಿಸಿತು.
3. 'ಅಶೋಬಾ' ಎಂದು ಚಂಡಮಾರುತಕ್ಕೆ ಹೆಸರಿಟ್ಟ ದೇಶ-ಶ್ರೀಲಂಕಾ.
4. 'ಸೈಮಾಟ್' ಎಂಬ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯು 'ಅಶೋಬಾ' ಚಂಡಮಾರುತದ ಕುರಿತು ಮಾಹಿತಿ ನೀಡಿದೆ.
— ಮೇಲಿನ ಯಾವ ಹೇಳಿಕೆ ಸರಿಯಾಗಿದೆ?
A] 1,2 ಮತ್ತು 3
B] 2, 3 ಮತ್ತು 4
C] 1, 3 ಮತ್ತು 4
D] ಮೇಲಿನೆಲ್ಲವೂ √


ಪ್ರಶ್ನೆ ನಂ: 75) ಹೊಂದಿಸಿ ಬರೆಯಿರಿ.
   ರಾಜ್ಯ. ರಾಷ್ಟೀಯ ಉದ್ಯಾನವನಗಳು
ಎ) ಮೇಘಾಲಯ 1)ಬಾಲ್ಪಾಕ್ರಮ್                                  
ಬಿ) ಅರುಣಾಚಲ ಪ್ರದೇಶ 2) ನಮ್ದಾಪಾ
ಸಿ) ಜಾರ್ಖಂಡ್ 3) ಹಜಾರಿಬಾಗ್
ಡಿ) ಕರ್ನಾಟಕ 4) ಅಂಶಿ
ಇ) ಉತ್ತರ ಪ್ರದೇಶ 5) ದುಧ್ವಾ
ಸಂಕೇತಗಳು
A] ಎ-1. ಬಿ-2. ಸಿ -3. ಡಿ-4. ಇ-5 √
B] ಎ-4. ಬಿ-1. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-5. ಇ-3
D] ಎ-1. ಬಿ-3. ಸಿ -2. ಡಿ-4. ಇ-5


ಪ್ರಶ್ನೆ ನಂ: 76) ವಾಸನೆ ಮತ್ತು ಬಣ್ಣ ರಹಿತವಾದ ವಿಕಿರಣವನ್ನು ಹೊರ ಸೂಸುವ (Radio Active Gas) ವಾಯುಮಂಡಲದ ಏಕೈಕ ಅನಿಲ ಯಾವುದು?
A] ಇಂಗಾಲಾಮ್ಲ
B] ಓಝೋನ್
C] ರಡಾನ್√
D] ಜಲಜನಕ


ಪ್ರಶ್ನೆ ನಂ: 77) ಅಮೆರಿಕಾ ಒಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಚ್ ಸಿಂಗಲ್ಸ್'ನಲ್ಲಿ ಪ್ರಶಸ್ತಿ ಪಡೆದರು. ಅಂದಹಾಗೆ ಅವರು ಯಾವ ದೇಶದವರು?
A] ರಷ್ಯಾ
B] ಅಮೆರಿಕಾ
C] ಸರ್ಬಿಯಾ√
D] ಫ್ರಾನ್ಸ್


ಪ್ರಶ್ನೆ ನಂ: 78) ಪ್ರಥಮ 'ಅಂತರರಾಷ್ಟ್ರೀಯ ಓಝೋನ್ ಒಪ್ಪಂದ' ಯಾವ ವರ್ಷ ನಡೆಯಿತು?
A] 1960 Sept 20
B] 1988 Sept 16√
C] 1987 Jun 16
D] 2006 Jun 29


ಪ್ರಶ್ನೆ ನಂ: 79) ಕ್ರಿಕೆಟಿಗ ಡೆನಿಸ್ ಬ್ರಾಯನ್ ಕ್ಲೋಸ್ ಈಚೆಗೆ ನಿಧನರಾದರು. ಅಂದಹಾಗೆ ಅವರು ಯಾವ ದೇಶದ ಕ್ರಿಕೆಟ್ ತಂಡದ ನಾಯಕರಾಗಿದ್ದರು?
A] ನ್ಯೂಜಿಲೆಂಡ್
B] ಇಂಗ್ಲೆಂಡ್√
C] ದ.ಆಫ್ರಿಕಾ
D] ಆಸ್ಟ್ರೆಲಿಯಾ


ಪ್ರಶ್ನೆ ನಂ: 80) ಕ್ರೀಡಾಂಗಣ ಇರುವ ಸಿಂಧೂ ನಾಗರಿಕತೆಯ ನಗರ -
A] ಚನೋಹ್ದರೋ
B] ದೊಲ್ವೀರ್ √
C] ಲೋಥಾಲ್
D] ಕಾಲಿಬಂಗಾನ್


ಪ್ರಶ್ನೆ ನಂ: 81) ಅತೀ ಹೆಚ್ಚು ಬಂಜರು ಭೂಮಿಯನ್ನು ಹೊಂದಿರುವ ರಾಜ್ಯ ಯಾವುದು?
A] ಜಮ್ಮು-ಕಾಶ್ಮೀರ √
B] ರಾಜಸ್ಥಾನ
C] ಗುಜರಾತ್
D] ಪಂಜಾಬ್


ಪ್ರಶ್ನೆ ನಂ: 82) 'TROPEX -2015' ಇದು...
A] ಭಾರತ ಮತ್ತು ಜಪಾನ್ ನಡುವಿನ ಸಮರಾಭ್ಯಾಸ
B] ಭಾರತ ಮತ್ತು ಫ್ರಾನ್ಸ್ ನಡುವಿನ ಸಮರಾಭ್ಯಾಸ
C] ಭಾರತ ಸೇನಾಪಡೆಯು ಏಕಮುಖವಾಗಿ ಕೈಗೊಂಡ ಸಮರಾಭ್ಯಾಸ√
D] ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಮರಾಭ್ಯಾಸ


ಪ್ರಶ್ನೆ ನಂ: 83) ಭಾರತದ ಸಂವಿಧಾನ ನಿರ್ಮಾಪಕರು ಸಂಸದೀಯ ಪ್ರಜಾಪ್ರಭುತ್ವ ಮತ್ತು ದ್ವಿಸದನಗಳ ವ್ಯವಸ್ಥೆಯ ಪರಿಕಲ್ಪನೆಗಳನ್ನು ಯಾವ ವಿದೇಶದ ಸಂವಿಧಾನದಿಂದ ಎರವಲು ಪಡೆದಿದ್ದಾರೆ ?
A] ಅಮೇರಿಕಾದ ಸಂವಿಧಾನ
B] ಬ್ರಿಟೀಷ್ ಸಂವಿಧಾನ√
C] ಐರಿಷ್ ಸಂವಿಧಾನ
D] ಫ್ರೆಂಚ್ ಸಂವಿಧಾನ


ಪ್ರಶ್ನೆ ನಂ: 84) ಭಾರತದಲ್ಲಿ ಯಾವ ರಾಜ್ಯ ಅತಿ ಉದ್ದದ ಸಮುದ್ರ ಕಿನಾರೆ ಹೊ೦ದಿದೆ?
A] ಕೇರಳ
B]ಒಡಿಸ್ಸಾ
C] ಆಂಧ್ರಪ್ರದೇಶ
D] ಗುಜರಾತ್√


ಪ್ರಶ್ನೆ ನಂ: 85) ರೈಲ್ವೆ ಬ್ರಾಡ್ ಗೇಜ್ ನ ಸರಾಸರಿ ವಿಸ್ತಾರ?
A] 2.00 ಮೀ.
B] 1.83 ಮೀ.
C] 1.67 ಮೀ.√
D] 1.33 ಮೀ.


ಪ್ರಶ್ನೆ ನಂ: 86) ಹೊಂದಿಸಿ ಬರೆಯಿರಿ.

   ನಾಯಕರು ಸಮಾಧಿ ಸ್ಥಳ
ಎ) ಗಾಂಧೀಜಿ 1) ಶಕ್ತಿಸ್ಥಳ                                  
ಬಿ) ಬಿ.ಆರ್.ಅಂಬೇಡ್ಕರ್ 2) ರಾಜ್ ಘಾಟ್.
ಸಿ) ಇಂದಿರಾಗಾಂಧಿ 3) ಕಿಸಾನ್ ಘಾಟ್.
ಡಿ) ಚರಣ್ ಸಿಂಗ್ 4) ಚೈತ್ರಭೂಮಿ
ಇ) ರಾಜೀವ್ ಗಾಂಧಿ 5) ವೀರಭೂಮಿ

-ಸಂಕೇತಗಳು
A] ಎ-1. ಬಿ-2. ಸಿ -3. ಡಿ-5. ಇ-4
B] ಎ-4. ಬಿ-1. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-3. ಇ-5 √
D] ಎ-2. ಬಿ-5. ಸಿ -1. ಡಿ-4. ಇ-3


ಪ್ರಶ್ನೆ ನಂ: 87) ವಾಯುಮಂಡಲದಲ್ಲಿರುವ ಅತ್ಯಂತ ಸಾಂದ್ರವಾದ ಅನಿಲ ಯಾವುದು?
A] ಆರ್ಗಾನ್ √
B] ಸಾರಜನಕ
C] ಜಲಜನಕ
D] ಆಮ್ಲಜನಕ


ಪ್ರಶ್ನೆ ನಂ: 88) ವಿಶ್ವ ಅಭಿವೃದ್ಧಿ ವರದಿಯನ್ನು ಸಿದ್ಧಪಡಿಸುವವರು ಯಾರು?
A] ವಿಶ್ವ ಆರ್ಥಿಕ ಪೋರಂ
B] ಅಂತರಾಷ್ಟ್ರೀಯ ಹಣಕಾಸು ನಿಧಿ
C] ವಿಶ್ವಬ್ಯಾಂಕ್√
D] ವಿಶ್ವ ವ್ಯಾಪಾರ ಸಂಸ್ಥೆ


ಪ್ರಶ್ನೆ ನಂ: 89) ಕರ್ನಾಟಕದ ರಾಜ್ಯ ಆದಾಯವನ್ನು ಅಧಿಕೃತವಾಗಿ ಅಂದಾಜು ಮಾಡುವವರು
A] ಕೇಂದ್ರ ಸಾಂಖ್ಯಿಕ ಸಂಸ್ಥೆ
B] ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ√
C] ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆ
D] ರಾಷ್ಟ್ರೀಯ ಸಾಂಖ್ಯಿಕ ಆಯೋಗ


ಪ್ರಶ್ನೆ ನಂ: 90) ಗಂಗರ ರಾಜಧಾನಿ ತಲಕಾಡು ಪ್ರಸ್ತುತ ಈ ಜಿಲ್ಲೆಯಲ್ಲಿದೆ -
A] ಚಿತ್ರದುರ್ಗ
B] ಬೆಂಗಳೂರು
C] ಬಾಗಲಕೋಟೆ
D] ಮೈಸೂರು √


ಪ್ರಶ್ನೆ ನಂ: 91) 'ಟಚ್ ಪ್ಲೇ' ಇದು ಯಾವ ಭಾರತೀಯ ಕ್ರೀಡಾಪಟುವಿನ ಜೀವನ ಚರಿತ್ರೆಯಾಗಿದೆ?
A] ಧ್ಯಾನ್ ಚಂದ್
B] ಪ್ರಕಾಶ ಪಡುಕೋಣೆ√
C] ಕಪಿಲದೇವ್
D] ವಿಶ್ವನಾಥನ್ ಆನಂದ್


ಪ್ರಶ್ನೆ ನಂ: 92) ಯಾವ ದಿನದಂದು ಸಂವಿಧಾನಿಕ ಸಭೆಯು ಭಾರತ ಸಂವಿಧಾನವನ್ನು ಒಪ್ಪಿತು (ಅಂಗೀಕರಿಸಿತು)?
A] 18-08-1947,
B] 26-01-1950,
C] 9-12-1946,
D] 26-11-1949√


ಪ್ರಶ್ನೆ ನಂ: 93) ಪರಿಸರ ಸಮತೋಲನ ಕಾಪಾಡಲು ಪ್ರತಿಶತ ಎಷ್ಟು ಪ್ರಮಾಣದ ಅರಣ್ಯ ಪ್ರದೇಶವನ್ನು ಹೊಂದಿರಬೇಕು ?
A] 10%
B] 23%
C] 33%√
D] 53%


ಪ್ರಶ್ನೆ ನಂ: 94) ಸಂವಿಧಾನದ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ಇವುಗಳಲ್ಲಿ ಯಾವುದು ನಿಜವಲ್ಲ
A] ಭಾರತದ ಸಂವಿಧಾನದ ಭಾಗ 4 ರಲ್ಲಿ ಅಳವಡಿಸಿದೆ,
B] ಐರ್ಲೆಂಡಿನ ಸಂವಿಧಾನದಿಂದ ಪ್ರೇರಣೆ ಪಡೆದಿದೆ,
C] ನ್ಯಾಯಾಂಗದ ಮೂಲಕ ಸಮರ್ಥಿಸಲಾಗದ ಜನರ (ನಾಗರೀಕರ) ಹಕ್ಕುಗಳೆಂದು ತಿಳಿಯಲಾಗಿದೆ,
D] ರಚನೆಯ ನಂತರ ಅವುಗಳನ್ನು ತಿದ್ದುಪಡಿಮಾಡಲಾಗಿಲ್ಲ.√


ಪ್ರಶ್ನೆ ನಂ: 95) ಆಕಾಶದಲ್ಲಿ ಮೋಡವಿಲ್ಲದಾಗ ಇರುವುದಕ್ಕಿಂತ ಮೋಡವಿರುವಂತಹ ರಾತ್ರಿಗಳು ಹೆಚ್ಚು ತಾಪಯುಕ್ತವಾಗಿರುತ್ತವೆ ಏಕೆಂದರೆ...
A] ಹಸಿರು ಮನೆ ಪರಿಣಾಮ√
B] ಭೂಪ್ರದೇಶದ ವಿಕಿರಣ
C] ಇನ್ಸೋಲೇಶನ್ (ಆತಪನ)
D] ಅಲ್ಟ್ರಾವೈಲೆಟ್ ಕಿರಣಗಳು


ಪ್ರಶ್ನೆ ನಂ: 96) ದೇಶದ ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವರು ಯಾರು?
A] ದಲವೀರ್ ಭಂಡಾರಿ
B] ಹರೀಶ್ ರಾವತ್
C] ಅರವಿಂದ್‌ ಪನಗರಿಯಾ √
D] ರಾಜೀವ್ ಶುಕ್ಲ


ಪ್ರಶ್ನೆ ನಂ: 97) ‘ಸೂಪರ್‌ಮೂನ್‌’ ಪ್ರಕ್ರಿಯೆ ಸುಮಾರು ಎಷ್ಟು ತಿಂಗಳಿಗೊಮ್ಮೆ ನಡೆಯುತ್ತಿರುತ್ತದೆ.?
A] 14 ತಿಂಗಳಿಗೊಮ್ಮೆ √
B] 12 ತಿಂಗಳಿಗೊಮ್ಮೆ
C] 06 ತಿಂಗಳಿಗೊಮ್ಮೆ
D] 24 ತಿಂಗಳಿಗೊಮ್ಮೆ


ಪ್ರಶ್ನೆ ನಂ: 98) 2014 ರ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್ ಡಿ ಐ) ದಲ್ಲಿ ಭಾರತವು ಎಷ್ಟನೇ ಸ್ಥಾನ ಪಡೆದುಕೊಂಡಿದೆ?
A]133 ನೇ ಸ್ಥಾನ
B]134 ನೇ ಸ್ಥಾನ
C]135 ನೇ ಸ್ಥಾನ √
D]136 ನೇ ಸ್ಥಾನ


ಪ್ರಶ್ನೆ ನಂ: 99) ಕಾರ್ಮಿಕರ ಸ್ಥಿತಿಗತಿ ಸುಧಾರಿಸಲು ಈಚೆಗಷ್ಟೇ ಪ್ರಧಾನಮಂತ್ರಿಗಳು ಯಾರ ಹೆಸರಿನಲ್ಲಿ 'ಶ್ರಮೇವ ಜಯತೆ' ಯೋಜನೆ ಆರಂಭಿಸಿದರು?
A] ಸ್ವಾಮಿ ವಿವೇಕಾನಂದ
B] ಪಂಡಿತ ದೀನ ದಯಾಳ ಉಪಾದ್ಯಾಯ √
C] ಮಹಾತ್ಮ ಗಾಂಧಿ
D] ಸರ್ದಾರ್ ವಲ್ಲಭಭಾಯ್ ಪಟೇಲ್


ಪ್ರಶ್ನೆ ನಂ: 100) ಕ್ವಿಟ್ ಇಂಡಿಯಾ ಚಳುವಳಿಯು ಯಾವ ಸಂಧಾನದ ಅಸಫಲತೆಯ ಕಾರಣಕ್ಕೆ ಪ್ರಾರಂಭವಾಯಿತು
A] ಕ್ರಿಪ್ಸ್ ನಿಯೋಗ √
B] ಸೈಮನ್ ಆಯೋಗ
C] ಹಂಟರ್ ಆಯೋಗ
D] ಕ್ಯಾಬಿನೆಟ್ ಸಂಧಾನ

7 comments:

  1. Thank u sir...key ans hege nododu

    ReplyDelete
  2. ಪ್ರಿಯ ಯಾಸೀನ್‍ ಅವರಿಗೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತಾ, ಮೇಲ್ಕಂಡ ಪ್ರಶ್ನೆಗಳೊಂದಿಗೆ ಉತ್ತರಗಳನ್ನೂ ಕೂಡ ಕೊಟ್ಟಿದ್ದರೆ ಉತ್ತಮವಾಗಿತ್ತು. ಅದಾಗ್ಯೂ ನಮ್ಮ ಬುದ್ಧಿಮತ್ತೆಗೆ ಪರೀಕ್ಷೆ ನೀಡುವ ನಿಮ್ಮ ಪ್ರಯತ್ನಕ್ಕೆ ನನ್ನ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಮೇಲ್ಕಂಡ ಹುದ್ದೆಗಳಿಗೆ ಪರೀಕ್ಷೆಯ ದಿನಾಂಕವು ಅತ್ಯಂತ ಸಮೀಪದಲ್ಲಿರುತ್ತದೆ. ಆದ್ದರಿಂದ ಕೂಡಲೇ ಈ ಪ್ರಶ್ನೆಗಳ ಉತ್ತರವನ್ನು (ಸಾಧ್ಯವಾದರೇ ಇಂದೇ) ಪ್ರಕಟಿಸಲು ತಮ್ಮಲ್ಲಿ ಕಳಕಳಿಯ ಮನವಿ
    ತಮ್ಮ ಹಿಂಬಾಲಕ
    ಷರೀಫ್‍, ಮಂಡ್ಯ

    ReplyDelete