"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 4 September 2015

☀ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) : ✧.2) ‘ಭಾರತದಲ್ಲಿ 2014ರಲ್ಲಿ ಸಂಭವಿಸಿದ ಅಪಘಾತ ಮತ್ತು ಆತ್ಮಹತ್ಯೆ’: ವಿಶೇಷ ವರದಿ: (Special Reports-figures on Accidents and Suicide commits )

☀ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) :
✧.2) ‘ಭಾರತದಲ್ಲಿ 2014ರಲ್ಲಿ ಸಂಭವಿಸಿದ ಅಪಘಾತ ಮತ್ತು ಆತ್ಮಹತ್ಯೆ’: ವಿಶೇಷ ವರದಿ:
(Special Reports-figures on Accidents and Suicide commits )
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


●. ಕಳೆದ ವರ್ಷ ದೇಶದಲ್ಲಿ ಬರೋಬ್ಬರಿ 5,650 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ರೈತರುಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ 5,178 ಪುರುಷರಾಗಿದ್ದು, 472 ಮಂದಿ ರೈತ ಮಹಿಳೆಯರು ಕೃಷಿ ಸಂಬಂಧಿತ ವಿವಿಧ ಕಾರಣಗಳಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

●. ಈ ಕುರಿತು ‘ರಾಷ್ಟ್ರೀಯ ಅಪರಾಧ ದಾಖಲೆ ಕೇಂದ್ರ ‘ಭಾರತದಲ್ಲಿ 2014ರಲ್ಲಿ ಸಂಭವಿಸಿದ ಅಪಘಾತ ಮತ್ತು ಆತ್ಮಹತ್ಯೆ’ ಕುರಿತ ವರದಿ ಬಿಡುಗಡೆಗೊಳಿಸಿದ್ದು, ಈ ವರದಿಯಲ್ಲಿ ರೈತರ ಆತ್ಮಹತ್ಯೆ ಕುರಿತ ಅಘಾತಕಾರಿ ಅಂಕಿ ಅಂಶ ಬೆಳಕಿದೆ ಬಂದಿದೆ.

●. ಮಹಾರಾಷ್ಟ್ರದಲ್ಲಿ 2,568 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಪಟ್ಟಿಯಲ್ಲಿ (ಶೇ.45.5)ಮೊದಲ ಸ್ಥಾನದಲ್ಲಿದೆ. ತೆಲಂಗಾಣದಲ್ಲಿ 898(ಶೇ.15.9), ಮಧ್ಯಪ್ರದೇಶದಲ್ಲಿ 826(ಶೇ.14.6)ರೈತರು ಸಾವಿಗೆ ಶರಣಾಗಿದ್ದಾರೆ.

●. ತೆಲಂಗಾಣದಲ್ಲಿ ರೈತ ಮಹಿಳೆಯರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದು, ಶೇ.31.1ರಷ್ಟಿದೆ. ಮಧ್ಯಪ್ರದೇಶದಲ್ಲಿ ಶೇ.29.2, ಮಹಾರಾಷ್ಟ್ರದಲ್ಲಿ ಶೇ.14.1ರಷ್ಟಿದೆ.

●. ಹಣಕಾಸಿನ ಮುಗಟ್ಟು ಮತ್ತು ಕೌಟುಂಬಿಕ ಸಮಸ್ಯೆಗಳು ರೈತರ ಆತ್ಮಹತ್ಯೆಗೆ ಕಾರಣವಾಗಿವೆ ಎಂದು ವರದಿ ಹೇಳಿದೆ.

●. ದೇಶದಲ್ಲಿ ಒಟ್ಟಾರೆ 2014ರಲ್ಲಿ 1,31,666, 2013ರಲ್ಲಿ 1,34,799 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿಯೂ ಮಹಾರಾಷ್ಟ್ರದಲ್ಲಿ ಹೆಚ್ಚು (16,307), ತಮಿಳು ನಾಡು (16,122), ಪಶ್ಚಿಮ ಬಂಗಾಳ(14,310) ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

(ಕೃಪೆ : ವಿಜಯವಾಣಿ)

No comments:

Post a Comment