"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 5 September 2015

☀ಎಸ್ ಡಿ ಎ ಮತ್ತು ಎಫ್ ಡಿ ಎ ಎಕ್ಸಾಂ ಗಾಗಿ ಸಾಮಾನ್ಯ ಜ್ಞಾನ (ಭಾಗ - 21) (General knowledge for SDA and FDA Exam (Part-21))  ☆.. ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ. ...

☀ಎಸ್ ಡಿ ಎ ಮತ್ತು ಎಫ್ ಡಿ ಎ ಎಕ್ಸಾಂ ಗಾಗಿ ಸಾಮಾನ್ಯ ಜ್ಞಾನ (ಭಾಗ - 21)
(General knowledge for SDA and FDA Exam (Part-21))
☆.. ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ. ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ
(SDA and FDA Special)

★ ಸಾಮಾನ್ಯ ಜ್ಞಾನ
(General Knowledge)


811. ಭಾರತದ ಹೊರಗಡೆ ಶಾಖೆಗಳನ್ನು ತೆರೆದ ಮೊದಲ ಬ್ಯಾಂಕ್ ಯಾವುದು?

●.ಉತ್ತರ :- ಬ್ಯಾಂಕ್ ಆಫ್ ಇಂಡಿಯಾ.


812. ಸಾಮಾನ್ಯ ಮನುಷ್ಯನ ದೇಹದಲ್ಲಿರುವ ಕ್ರೋಮೊಸೋಮ್'ಗಳ ಸಂಖ್ಯೆ ಎಷ್ಟು?

●.ಉತ್ತರ :- 46


813. ಭಾರತದ ಯಾವ ರಾಜ್ಯದಲ್ಲಿ ಹೆಚ್ಚಾಗಿ 'ಗ್ರೇಟ್ ಇಂಡಿಯನ್ ಬಸ್ಟರ್ಡ್' ಪಕ್ಷಿಗಳು ಕಂಡು ಬರುತ್ತವೆ?

●.ಉತ್ತರ :- ರಾಜಸ್ಥಾನ


814. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?

●.ಉತ್ತರ :- ಕಬ್ಬಡ್ಡಿ


815. ಯಾವ ಸ್ಮಾರಕದಲ್ಲಿ ಮುಖ್ಯ ದ್ವಾರದಲ್ಲಿನ ಚಪ್ಪಾಳೆ ಶಬ್ದವು 30 ರಿಂದ 40 ಮೀಟರಿನ ಒಳಗೆ ಎಲ್ಲಿಯಾದರೂ ಕೇಳಿಸುವಂತೆ ವಿನ್ಯಾಸಪಡಿಸಲಾಗಿರುವ ಸಂಜ್ಞೆ ಸಾಧನವನ್ನು ಹೊಂದಿದೆ?

●.ಉತ್ತರ :- ಗೋಲ್ಕೊಂಡಾ ಫೋರ್ಟ್


816. ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?

●.ಉತ್ತರ :- ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ.


817. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2015 ನೇ ಇಸವಿಯನ್ನು ಈ ಕೆಳಕಂಡ ಯಾವ ವರ್ಷವನ್ನಾಗಿ ಘೋಷಿಸಿದೆ ?

●.ಉತ್ತರ :- ಅಂತರಾಷ್ಟ್ರೀಯ ಮಣ್ಣಿನ ವರ್ಷ


818. ಭಾರತದ ಗಗನ್ ಜಿತ್ ಬುಲ್ಲರ್ ಅವರು ಯಾವ ಕ್ರೀಡೆಯಲ್ಲಿ ಪ್ರಸಿದ್ದಿ ಹೊಂದಿದ್ದಾರೆ?

 ●.ಉತ್ತರ :- ಗಾಲ್ಪ್.


819. ಕರ್ನಾಟಕ ರತ್ನ ಪ್ರಶಸ್ತಿಯನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು?

●.ಉತ್ತರ :- 1992.


820. 2014 ನೇ ಸಾಲಿನ ನೃಪತುಂಗ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ?

●.ಉತ್ತರ :- ಕುಂ. ವೀರಭದ್ರಪ್ಪ.


821. ಪರಿಸರ ಸಮತೋಲನ ಕಾಪಾಡಲು ಪ್ರತಿಶತ ಎಷ್ಟು ಪ್ರಮಾಣದ ಅರಣ್ಯ ಪ್ರದೇಶವನ್ನು ಹೊಂದಿರಬೇಕು ?

●.ಉತ್ತರ :- 33%


822. ಅಸ್ಸಾಂನಲ್ಲಿನ ಸೋನೋವಾಲ್ ಕಚಾರಿಸ್ ಪಂಗಡದ ಮುಖ್ಯ ಕಸುಬು ಯಾವುದು?

●.ಉತ್ತರ :- ನದಿಗಳಲ್ಲಿ ಚಿನ್ನವನ್ನು ತೊಳೆಯುವುದು.


823. ಸ್ವಾತಂತ್ರ್ಯ, ಸಮಾನತೆ ಮತ್ತು ಬ್ರಾತೃತ್ವ' ಇದು ಯಾವ ದೇಶದ ಕ್ರಾಂತಿಕಾರಕ ಘೋಷಣೆಯಾಗಿತ್ತು?

●.ಉತ್ತರ :- ಪ್ರಾನ್ಸ್


824."ಸಂಜೆ ಐದರ ಮಳೆ " ಕವನ ಸಂಕಲನವನ್ನು ಬರೆದವರು ಯಾರು ?

●.ಉತ್ತರ :- ಕೆ.ಎಸ್.ನಿಸಾರ್ ಅಹಮದ್


825. ರಾಜ್ಯ ಸಭೆಯ ಸದಸ್ಯರು ತಮ್ಮ ರಾಜಿನಾಮೆಯನ್ನು ಯಾರಿಗೆ ಸಲ್ಲಿಸುತ್ತಾರೆ?

●.ಉತ್ತರ :- ಉಪರಾಷ್ಟ್ರಪತಿಗಳು.


826. ಆಗ್ನೇಯ ಏಷಿಯಾದಲ್ಲಿ ವಸಾಹತು ಆಡಳಿತದಿಂದ ತಪ್ಪಿಸಿಕೊಂಡು ಏಕಮಾತ್ರ ರಾಷ್ಟ್ರ ಯಾವುದು?

●.ಉತ್ತರ :- ಥಾಯ್ಲೆಂಡ್


827. 2015 ರ 41 ನೇ ಜಿ - 7 ಸಮ್ಮೇಳನ ಎಲ್ಲಿ ನಡೆಯಿತು?

●.ಉತ್ತರ :- ಜರ್ಮನಿ


828. ಮದನಮೋಹನ ಮಾಳವೀಯರವರು ಇತ್ತೀಚಿಗೆ ಮರೋಣತ್ತರವಾಗಿ ಭಾರತ ರತ್ನ ಪ್ರಶಸ್ತಿ ಪುರಸ್ಕ್ರತರಾದರು, ಇಲ್ಲಿಯವರೆಗೆ ಎಷ್ಟು ವ್ಯಕ್ತಿಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ?

●.ಉತ್ತರ :- 12.


829. ಭಾರತದ ಯಾವ ರಾಜ್ಯದಲ್ಲಿ ಅತೀ ಉದ್ದದ ಫ್ಲೈ ಓವರ್ ರಸ್ತೆ ಮಾರ್ಗವಿದೆ?

●.ಉತ್ತರ :- ಆಂಧ್ರಪ್ರದೇಶ


830. ಯಾವ ಹಿರಿಯ ಬಾಲಿವುಡ್ ನಟ 2014ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.?

●.ಉತ್ತರ :- ಶಶಿ ಕಪೂರ್


831. ನಳಂದ ವಿಶ್ವವಿದ್ಯಾಲಯವನ್ನು ಸಂಪೂರ್ಣ ನಾಶಮಾಡಿದ ವ್ಯಕ್ತಿ (ದೊರೆ ಯಾರು)?

●.ಉತ್ತರ :- ಭಕ್ತಿಯಾರ್ ಖಿಲ್ಜಿ


832. ಸಿಬಿಐ ನೂತನ ನೂತನ ನಿರ್ದೇಶಕರಾಗಿ ಯಾರು ಆಯ್ಕೆಯಾದರು?

●.ಉತ್ತರ :- ಅನಿಲ್ ಸಿನ್ಹಾ


833. "ತಮಿಳು ತಲೆಗಳ ನಡುವೆ" ಯನ್ನು ಬರೆದವರು?

●.ಉತ್ತರ :- ಬಿ. ಜಿ. ಎಲ್. ಸ್ವಾಮಿ


834. ದೇಶದಲ್ಲಿ ಮೊಟ್ಟಮೊದಲ ರಕ್ಷಣಾ ಕೈಗಾರಿಕೆ ಪಾರ್ಕ್ ಹೊಂದಿರುವ ರಾಜ್ಯ ಯಾವುದು?

●.ಉತ್ತರ :- ಕೇರಳ


835. “ದಿ ಲೊಲ್ಯಾಂಡ್ (The Lowland)” ಕೃತಿಯ ಲೇಖಕರು ಯಾರು?

●.ಉತ್ತರ :- ಜುಂಪಾ ಲಹರಿ.


836. ಪ್ರತಿಷ್ಠಿತ ಆಸ್ಕರ್ ಮತ್ತು ಬೂಕರ್ ಪ್ರಶಸ್ತಿ ಪಡೆದ ಪ್ರಪಂಚದ ಏಕೈಕ ಪ್ರತಿಭೆ ಯಾರು?

●.ಉತ್ತರ :- ಜರ್ಮನಿಯ ರುಥ್ ಪ್ರಾವರ್ ಝಬ್ ವಾಲ.


837. ಪ್ರಥಮ ಏಷ್ಯನ್ ಕ್ರೀಡಾಕೂಟಗಳು ಎಲ್ಲಿ ಜರುಗಿದವು?.

●.ಉತ್ತರ :- ದೆಹಲಿ.


838. ಎಡ್ಗರ್ ಲುಂಗು ಇತ್ತೀಚೆಗೆ ಯಾವ ರಾಷ್ಟ್ರದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ?

●.ಉತ್ತರ :- ಝಾಂಬಿಯಾ


839. ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ’ಸಂವಿಧಾನಶಿಲ್ಪಿ’ ಎಂದು ಕರೆದವರು ಯಾರು?

●.ಉತ್ತರ :- ಎಂ.ವಿ. ಪೈಲಿ


840. ಹಣಕಾಸು ಕ್ಷೇತ್ರದಲ್ಲಿ ಬಳಸುವ 'G.D.R'ನ ವಿಸ್ತೃತ ರೂಪವೇನು?

●.ಉತ್ತರ :- Global Depositary Receipts.

...To be Continued..

No comments:

Post a Comment