"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 9 December 2015

☀(ಭಾಗ -25) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-25)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀(ಭಾಗ -25) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-25))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.


921) ಇತ್ತೀಚೆಗೆ 'ಅಭಿವೃದ್ಧಿಗಾಗಿ ಆರ್ಥಿಕ ನೆರವು' ಕುರಿತ ವಿಶ್ವಸಂಸ್ಥೆಯ ಮೂರನೆಯ ಅಂತಾರಾಷ್ಟ್ರೀಯ ಸಮಾವೇಶ ಎಲ್ಲಿ ಜರುಗಿತು?
••► ಅಡಿಸ್ ಅಬಾಬಾದಲ್ಲಿ


922) ಇಥಿಯೋಪಿಯ ದೇಶದ ರಾಜಧಾನಿ ಯಾವುದು?
••► ಅಡಿಸ್ ಅಬಾಬಾ


923) 2016ರ ಜನವರಿ 26ರಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವ ವಿದೇಶಿ ಗಣ್ಯ ವ್ಯಕ್ತಿ ಯಾರು?
••► ಫ್ರಾಂಕೋಯಿಸ್‌ ಹೊಲಾಂಡೆ.


924) ಪ್ರಸ್ತುತ ಫ್ರಾನ್ಸ್ ದೇಶದ‌ ಅಧ್ಯಕ್ಷರು ಯಾರು?
••► ಫ್ರಾಂಕೋಯಿಸ್‌ ಹೊಲಾಂಡೆ

925) ಕಳೆದ ಬಾರಿಯ (2015ರ ಜನವರಿ 26) ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದ ವಿದೇಶಿ ಗಣ್ಯ ವ್ಯಕ್ತಿ ಯಾರು?.
••► ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ.


926) ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ನಾಲ್ಕನೇ ಸದಸ್ಯರಾಗಿ ನೇಮಕಗೊಂಡವರು ಯಾರು?
••► ಮಾಜಿ ಸಂಪುಟ ಕಾರ್ಯದರ್ಶಿ ಅಲೋಕ್‌ ರಾವತ್‌

( ವಿವರಣೆ : ಐವರು ಸದಸ್ಯರ ಮಹಿಳಾ ಆಯೋಗಕ್ಕೆ ಇದೇ ಮೊದಲ ಬಾರಿಗೆ ಪುರುಷರೊಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.1977ರ ಸಿಕ್ಕಿಂ ತಂಡದ ಐಎಎಸ್‌ ಅಧಿಕಾರಿಯಾಗಿರುವ ರಾವತ್‌ ಅವರು, ರಕ್ಷಣಾ ಸಚಿವಾಲಯ ಹಾಗೂ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ,  ಯುಪಿಎಸ್‌ಸಿ ಹಾಗೂ ಸಹಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ಇಲಾಖೆ, ಜಲಸಂಪನ್ಮೂಲ ಇಲಾಖೆಗಳಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.Thu, 10/22/2015)


927) ಇತ್ತೀಚೆಗೆ ನೈಜೀರಿಯಾ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು ಯಾರು?
••► ಜನರಲ್ ಮುಹಮದ್ ಬುಹಾರಿ


928) ಬಿಮ್‌ಸ್ಟೆಕ್‌ನ ಶಾಶ್ವತ ಕಾರ್ಯಾಲಯ ಇರುವುದು ಎಲ್ಲಿ?
••► ಢಾಕಾದಲ್ಲಿ.


929) ಬಿಮ್‌ಸ್ಟೆಕ್ ದ ವಿಸ್ತೃತ ರೂಪ?
••► ‘ದ ಬೇ ಆಫ್ ಬೆಂಗಾಲ್ ಇನಿಶಿಯೇಟಿವ್ ಫಾರ್ ಮಲ್ಟಿ-ಸೆಕ್ಟೋರಲ್ ಟೆಕ್ನಿಕಲ್ ಆ್ಯಂಡ್ ಇಕಾನಮಿಕ್ ಕೋ-ಆಪರೇಶನ್’


930) ಉದ್ದೀಪನ ಮದ್ದು ಸೇವನೆ ವಿರುದ್ಧ ಹಲವು ಸಂಸ್ಥೆಗಳು ಕ್ರಿಯಾಶೀಲವಾಗಿವೆ. ವಿಶ್ವ ಉದ್ದೀಪನ ಮದ್ದು ಸೇವನೆ ವಿರೋಧಿ ಏಜನ್ಸಿ (ವಾಡಾ), ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ವಿರೋಧಿ ಏಜನ್ಸಿ (ನಾಡಾ) ಅವುಗಳಲ್ಲಿ ಮುಖ್ಯವಾದವು.


931) ಮೊದಲ ಆಧುನಿಕ ಒಲಿಂಪಿಕ್ ಕ್ರೀಡೆ ನಡೆದದ್ದು,?
••► 1896ರಲ್ಲಿ ಅಥೆನ್ಸ್‌ನಲ್ಲಿ


932) ಕರ್ನಾಟಕದ ವಿಶೇಷ 27 ಜಿಲ್ಲೆಗಳಲ್ಲಿನ ಎಷ್ಟು ತಾಲ್ಲೂಕುಗಳನ್ನು 'ಬರಪೀಡಿತ' ಎಂದು ರಾಜ್ಯ ಸರ್ಕಾರ ಘೋಷಿಸಿದೆ?
••► 136 ತಾಲ್ಲೂಕುಗಳು.(ಆಗಸ್ಟ್ 2015)


933) ಇತ್ತೀಚಿನ 'ಇಂಡಿಯಾ ಟುಡೇ ನಿಯತಕಾಲಿಕೆ' ಸಿದ್ಧ ಪಡಿಸಿರುವ 'ಭಾರತದ ಉತ್ತಮ ರಾಜ್ಯಗಳು-2015' ಸಮೀಕ್ಷಾ ವರದಿ ಪ್ರಕಾರ ಕರ್ನಾಟಕವು ಎಷ್ಟನೇ ಸ್ಥಾನ ಪಡೆದಿದೆ?
••► ಮೂರನೇ ಸ್ಥಾನ


934) ಇಸ್ರೊದ ಪ್ರಧಾನ ನಿಯಂತ್ರಣ ಕೇಂದ್ರ ಎಲ್ಲಿದೆ?
••► ರಾಜ್ಯದ ಹಾಸನ ಜಿಲ್ಲೆಯಲ್ಲಿ.


935) ‘ಹಾರ್ಟ್‌ ಆಫ್‌ ಏಷ್ಯಾ’ ಎಂಬ ಪ್ರಾದೇಶಿಕ ಸಮ್ಮೇಳನ ಇದೇ ಡಿಸೆಂಬರ್‌ 7 ಹಾಗೂ 8 2015 ರಂದು ಯಾವ ರಾಷ್ಟ್ರದಲ್ಲಿ ನಡೆಯಲಿದೆ?
••► ಆಫ್ಘಾನಿಸ್ತಾನ.


936) ಪ್ರಸ್ತುತ ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್‌ (AIIB) ನ ಪ್ರಧಾನ ಕಾರ್ಯದರ್ಶಿ ಯಾರು?
••► ಚೀನಾದ ಜಿನ್‌ ಲಿಕಿನ್

937) ಇತ್ತೀಚಿಗೆ 24ನೇ ವ್ಯಾಸ್ ಸಮ್ಮಾನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
••► ಕಮಲ್ ಕಿಶೋರ್ ಗೋಯಂಕ್


938) AIIB ಬ್ಯಾಂಕ್‌ನ ಪ್ರಧಾನ ಕಚೇರಿ ಎಲ್ಲಿದೆ?
••► ಬೀಜಿಂಗ್‌ನಲ್ಲಿ.


939) ಇತ್ತೀಚೆಗೆ ರಾಜ್ಯದ ನೂತನ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡವರು ಯಾರು?
••► ಹಿರಿಯ ನ್ಯಾಯವಾದಿ ಮಧುಸೂದನ್ ನಾಯಕ್.

( ವಿವರಣೆ : ಎ.ಜಿ ಹುದ್ದೆಗೆ ರಾಜೀನಾಮೆ ನೀಡಿದ್ದ ಪ್ರೊ.ರವಿವರ್ಮ ಕುಮಾರ್ ಹೈಕೋರ್ಟ್‌ನಲ್ಲಿರುವ ಅಡ್ವೊಕೇಟ್ ಜನರಲ್ ಕಚೇರಿಗೆ ಆಗಮಿಸಿ ಹೊಸ ಎ.ಜಿ ಗೆ ಅಧಿಕಾರ ಹಸ್ತಾಂತರಿಸಿದರು -17 Nov, 2015 )


940) ಇತ್ತೀಚೆಗೆ ಲಂಡನ್‌ನಲ್ಲಿ ನಿಧನರಾದ ಆಸ್ಕರ್‌ ಪ್ರಶಸ್ತಿ ವಿಜೇತ 'ಗಾಂಧಿ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಾಲಿವುಡ್‌ನ‌ ಹಿರಿಯ ನಟ ಯಾರು?
••► ಸಯೀದ್‌ ಜಾಫ್ರಿ (86)

( ವಿವರಣೆ : ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಾಫ್ರಿ ಅವರು ಲಂಡನ್ನಿನ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದಾರೆ.Nov 17, 2015)


941) ಇತ್ತೀಚೆಗೆ ಭಾರತದ ಪ್ರಥಮ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಎಷ್ಟನೇ ಜನ್ಮದಿನಾಚರಣೆಯನ್ನು ಆಚರಿಸುವ ಮೂಲಕ ರಾಷ್ಟ್ರವು ಅವರನ್ನು ಸ್ಮರಿಸಿತು?
••► 126ನೇ ಜನ್ಮದಿನ (Nov 14, 2015)


942) ಇತ್ತೀಚೆಗೆ ಇ-ಪಡಿತರ ಕಾರ್ಡು ಸೇವೆಗೆ ಚಾಲನೆ ನೀಡಿದ ಭಾರತದ ಮೊದಲ ನಗರ ಯಾವುದು?
••► ದೆಹಲಿ


943) ಪ್ರಸ್ತುತ ನೆರೆಯ ದೇಶವಾದ ಪಾಕಿಸ್ಥಾನದ ಬಳಿ ಇದೀಗ ಸುಮಾರು ಎಷ್ಟು ಪರಮಾಣು ಬಾಂಬ್‌ ಗಳಿವೆ ಎಂದು ಅಂದಾಜಿಸಲಾಗಿದೆ?
••► 120 ಪರಮಾಣು ಬಾಂಬ್‌ ಗಳು.

( ವಿವರಣೆ : ಅಂದರೆ ಪಾಕಿಸ್ಥಾನವು ಅಮೆರಿಕ ಮತ್ತು ರಶ್ಯಕ್ಕಿಂತ ಮಾತ್ರವೇ ಹಿಂದಿದ್ದು ಚೀನ, ಫ್ರಾನ್ಸ್‌ ಮತ್ತು ಬ್ರಿಟನ್‌ಗಿಂತ ಮುಂದಿದೆ Nov 09, 2015,)


944) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206 ನೇ ರಾಷ್ಟ್ರ ಯಾವುದು?
••► ದಕ್ಷಿಣ ಸೂಡನ್


945) ಪ್ರಸ್ತುತ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ(ಎಸ್‌ಬಿಐ)ದ ಅಧ್ಯಕ್ಷರು ಯಾರು?
••► ಅರುಂಧತಿ ಭಟ್ಟಾಚಾರ್ಯ  


946) ಇತ್ತೀಚೆಗೆ 2015ನೇ ಸಾಲಿನ ದೇಶದ ಉದ್ಯಮ ವಲಯದ 50 ಮಹಿಳಾ ಪ್ರಭಾವಿ ವ್ಯಕ್ತಿಗಳ ಕುರಿತಂತೆ ಫಾರ್ಚೂನ್‌ ಇಂಡಿಯಾ ನಿಯತಕಾಲಿಕೆ ನಡೆಸಿದ ಸಮೀಕ್ಷೆಯ ಪ್ರಕಾರ ಉದ್ಯಮ ವಲಯದ ಅತಿ ಪ್ರಭಾವಿ ಮಹಿಳೆಯರಲ್ಲಿ ಪ್ರಥಮ ಸ್ಥಾನವನ್ನು ಪಡೆದವರು ಯಾರು?
••► ಅರುಂಧತಿ ಭಟ್ಟಾಚಾರ್ಯ

( ವಿವರಣೆ : ಪ್ರಭಾವಿಗಳಲ್ಲಿ ಎರಡನೇ ಸ್ಥಾನವನ್ನು ಐಸಿಐಸಿಐ ಬ್ಯಾಂಕ್‌ನ ಚಂದಾ ಕೋಚರ್‌ ಪಡೆದಿದ್ದು ಮತ್ತು ಆಕ್ಸಿಸ್‌ ಬ್ಯಾಂಕ್‌ನ ಶಿಖಾ ಶರ್ಮಾ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ನಾಲ್ಕನೇ ಸ್ಥಾನವನ್ನು ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನ ಅಧ್ಯಕ್ಷ ನಿಶಿ ವಾಸುದೇವ ಪಡೆದಿದ್ದಾರೆ. ಐದನೇ ಸ್ಥಾನವನ್ನು ಎಝಡ್‌ಬಿ ಸಹ ಸಂಸ್ಥಾಪಕಿ ಜಿಯಾ ಮೂಡಿ ಮತ್ತು ಕ್ಯಾಪ್ಗ್ ಮಿನಿ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕಿ ಅರುಣಾ ಜಯಂತಿ ಜಂಟಿಯಾಗಿ ಹಂಚಿಕೊಂಡಿದ್ದಾರೆ.ಈ ಐವರೂ ಕಳೆದ ವರ್ಷವೂ ಇದೇ ಸ್ಥಾನ ಪಡೆದಿದ್ದರು. ಪ್ರಭಾವಿ ಮಹಿಳೆಯರ ಕುರಿತಂತೆ ಬ್ಯಾಂಕಿಂಗ್‌, ಹಣಕಾಸು, ಇಂಧನ, ಆರೋಗ್ಯ, ಮಾಧ್ಯಮ, ಫ್ಯಾಶನ್‌ ಮತ್ತು ಮನರಂಜನಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಲಾಗಿತ್ತು)


947) ಇತ್ತೀಚಿನ ಜರ್ಮನಿ ಮೂಲದ "ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌' ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಕುರಿತು ವಾರ್ಷಿಕ ಸಮೀಕ್ಷಾ ವರದಿ ಅನ್ವಯ 175 ರಾಷ್ಟ್ರಗಳ ಪೈಕಿ ಭಾರತ ಎಷ್ಟನೆಯ ಸ್ಥಾನ ಪಡೆದುಕೊಂಡಿದೆ?
••► 85ನೇ ಸ್ಥಾನ (Nov 08, 2015)


948) ಇತ್ತೀಚಿನ ಜರ್ಮನಿ ಮೂಲದ "ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌' ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಕುರಿತು ವಾರ್ಷಿಕ ಸಮೀಕ್ಷಾ ವರದಿ ಅನ್ವಯ ವಿಶ್ವದಲ್ಲೇ ಭ್ರಷ್ಟಾಚಾರ ಕಡಿಮೆ ಇರುವ ದೇಶಗಳ ಪೈಕಿ ಮೊದಲನೇ ಸ್ಥಾನವನ್ನು ಪಡೆದುಕೊಂಡ ಎರಡು ದೇಶಗಳು ಯಾವವು?
••► ನ್ಯೂಜಿಲೆಂಡ್‌ ಮತ್ತು ಫಿನ್ಲಂಡ್ (Nov 08, 2015)


949) ಇತ್ತೀಚಿನ 'ಇಂಡಿಯಾ ಟುಡೇ ನಿಯತಕಾಲಿಕೆ' ಸಿದ್ಧಪಡಿಸಿರುವ 'ಭಾರತದ ಉತ್ತಮ ರಾಜ್ಯಗಳು-2015' ಸಮೀಕ್ಷಾ ವರದಿ ಪ್ರಕಾರ ಪ್ರಥಮ ಸ್ಥಾನ ಪಡೆದ ರಾಜ್ಯ ಯಾವುದು?
••► ಗುಜರಾತ್ ರಾಜ್ಯ. (ಕೇರಳ ದ್ವಿತೀಯ ಸ್ಥಾನ ಗಳಿಸಿದೆ)


950) ಇತ್ತೀಚೆಗೆ ಭಾರತದ ಮಾಹಿತಿ ಆಯೋಗದ ಮುಖ್ಯ ಕಮೀಷನರ್ ಆಗಿ ಯಾರು ನೇಮಕಗೊಂಡಿದ್ದಾರೆ?
••► ಸುಷ್ಮಾ ಸಿಂಗ್️

To be continued....

No comments:

Post a Comment