"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 7 November 2015

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -22) (General knowledge on Current Affairs (Part-22)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -22)
(General knowledge on Current Affairs (Part-22))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 

831) ಕೇಂದ್ರ ಸರ್ಕಾರ ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತು. ಈ ಅಂಚೆ ಚೀಟಿ ಅನಾವರಣಗೊಂಡ ಹಿನ್ನೆಲೆ ಏನು?
a) 125ನೇ ಜನ್ಮ ದಿನಾಚರಣೆ ಅಂಗವಾಗಿ√
b) ಭಾರತ ರತ್ನ ಪುರಸ್ಕಾರ ನೀಡಿದ ಸವಿನೆನಪಿಗೆ
c)  ಅಂಬೇಡ್ಕರ್‌ ವರ್ಷಾಚರಣೆಗಾಗಿ
d)  ಸಂವಿಧಾನ ರಚನೆಗಾಗಿ


832) ಕಳೆದ ಸೆಪ್ಟೆಂಬರ್‌ 10 ರಂದು ಯಾವ ದೇಶದ ಧ್ವಜವನ್ನು ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮೇಲೆ ಹಾರಿಸಲಾಯಿತು?
a) ಇಸ್ರೇಲ್‌
b) ಪ್ಯಾಲೆಸ್ಟೈನ್√‌
c) ಸಿರಿಯಾ
d) ಈಜಿಪ್ಟ್‌


833) ಇತ್ತೀಚೆಗೆ ಭಾರತದೊಂದಿಗೆ ನಾಲ್ಕು ಅಂಶಗಳ ಶಾಂತಿ ಒಪ್ಪಂದಕ್ಕೆ ಕರೆ ನೀಡಿದ ದೇಶ ಯಾವುದು?
a) ಚೀನಾ        
b) ಶ್ರೀಲಂಕಾ
c) ಪಾಕಿಸ್ತಾನ √    
d) ನೇಪಾಳ


834) 2015ರ ಅಕ್ಟೋಬರ್‌ ತಿಂಗಳನ್ನು ಯಾವ ಅಂತರರಾಷ್ಟ್ರೀಯ ಮಾಸ ಎಂದು ಆಚರಣೆ ಮಾಡಲಾಗುತ್ತಿದೆ?
a) ವಿಶ್ವ ಮಾಂಸಾಹಾರ ತಿಂಗಳು
b) ವಿಶ್ವ ಆರೋಗ್ಯ ಮಾಸ
c) ವಿಶ್ವ ಕುರುಕಲು ತಿಂಡಿಗಳ ಮಾಸ
d) ವಿಶ್ವ ಸಸ್ಯಹಾರ ತಿಂಗಳು√


835) ಜಮೈಕಾದ ಲೇಖಕ ಮರ್ಲೊನ್‌ ಜೇಮ್ಸ್‌ ಅವರ ಯಾವ ಕಾದಂಬರಿಗೆ 2015ನೇ ಸಾಲಿನ ಮ್ಯಾನ್‌ ಬುಕರ್‌ ಪುರಸ್ಕಾರ ಸಂದಿದೆ?
a) ಎ ಬ್ರೀಫ್‌ ಹಿಸ್ಟರಿ ಆಫ್‌ ಸೆವೆನ್‌ ಕಿಲ್ಲಿಂಗ್ಸ್√‌
b) ದ ಇಯರ್‌ ಆಫ್‌ ರನ್‌ ಅವೇಸ್‌’
c)  ಸ್ಯಾಟಿನ್‌ ಐಲೆಂಡ್‌
d) ಎ ಲಿಟಲ್‌ ಲೈಫ್‌


836) ಜೋರ್ಡನ್‌ ದೇಶದ ರಾಜಧಾನಿ ಅಮ್ಮಾನ್‌ ನಗರದ ರಸ್ತೆಯೊಂದಕ್ಕೆ ಮಹಾತ್ಮ ಗಾಂಧಿ ಅವರ ಹೆಸರನ್ನು ಯಾರು ಇತ್ತೀಚೆಗೆ ನಾಮಕರಣ ಮಾಡಿದರು?
a) ನರೇಂದ್ರ ಮೋದಿ  
b) ಪ್ರಣವ್‌ ಮುಖರ್ಜಿ√
c) ಸುಷ್ಮಾ ಸ್ವರಾಜ್‌
d) ಹಮೀದ್‌ ಅನ್ಸಾರಿ


837)  2015ನೇ ಸಾಲಿನ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಪಡೆದ ಲೇಖಕಿ ಹಾಗೂ ಪತ್ರಕರ್ತೆ ಸ್ವೆಟ್ಲಾನಾ ಅಲೆಕ್ಸಿಯೆವಿಚ್‌ ಅವರು ಮೂಲತಹ ಯಾವ ದೇಶದವರು?
a)  ಉಕ್ರೆನ್‌
b) ರಷ್ಯಾ
c) ಬೆಲಾರಸ್√‌
d) ಜರ್ಮನಿ


838) ಖ್ಯಾತ ನಿರ್ಮಾಪಕ ಇ. ನಾಗೇಶ್ವರ ರಾವ್‌ ಇತ್ತೀಚೆಗೆ ನಿಧನರಾದರು. ಅವರು ನಿರ್ಮಾಣ ಮಾಡಿದ ಜನಪ್ರಿಯ ತೆಲುಗು ಚಿತ್ರಗಳಲ್ಲಿ ಇದು ಸೇರಿಲ್ಲ?
a) ಶಂಕರಾಭರಣಂ
b) ಸ್ವಾತಿಮುತ್ಯಂ
c) ಸಾಗರಸಂಗಮ
d) ಮನಂ√


839) ಭಾರತದ ಅಣುಶಕ್ತಿ ಆಯೋಗದ ಮುಖ್ಯಸ್ಥರಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ?
a)ಶೇಖರ್‌ ಬಸು√
b) ಅರವಿಂದ್‌ ಛಬ್ರಿಯಾ
c) ವಸುಮತಿ ಉಡುಪ
d) ನಾರಾಯಣ್‌ ಶಿಂಧೆ


840)  ಜಾಗತಿಕವಾಗಿ ವಿಶ್ವ ಮೊಟ್ಟೆ ದಿನವನ್ನು ಈ ಕೆಳಕಂಡ ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
a) 8 ಅಕ್ಟೋಬರ್‌
b) 9 ಅಕ್ಟೋಬರ್√‌
c) 10 ಅಕ್ಟೋಬರ್‌
d) 11 ಅಕ್ಟೋಬರ್‌


841) 30000 ಕೋಟಿ ರೂಪಾಯಿ ವೆಚ್ಚದ ನಾಗಪುರ–ಮುಂಬೈ ಎಕ್ಸ್‌ಪ್ರೆಸ್‌ಹೈವೆ ಯೋಜನೆಯನ್ನು ಯಾವ ಸರ್ಕಾರ ಘೋಷಣೆ ಮಾಡಿದೆ?
a) ಮಹಾರಾಷ್ಟ್ರ ಸರ್ಕಾರ√      
b) ಕೇಂದ್ರ ಸರ್ಕಾರ
c) ನಾಗಪುರ ಸರ್ಕಾರ          
d) ವಿಶ್ವಸಂಸ್ಥೆ


842) ಕೇಂದ್ರದ ಸ್ಮಾರ್ಟ್‌ಸಿಟಿ ಯೋಜನೆಗೆ ಈ ಕೆಳಕಂಡ ಯಾವ ನಗರ ಸ್ಮಾರ್ಟ್‌ ಸಿಟಿ ಯೋಜನೆಯ ಪಟ್ಟಿಯಲ್ಲಿ ಇಲ್ಲ?
a) ತುಮಕೂರು  
b)ದಾವಣಗೆರೆ
c) ಮೈಸೂರು√    
d) ಮಂಗಳೂರು


843) ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ದೇಶದ ಎಷ್ಟು ರಾಜ್ಯಗಳ ರಾಜಧಾನಿ ನಗರಗಳು ಸೇರ್ಪಡೆಗೊಂಡಿವೆ?
a) 48  
b) 24√    
c) 32      
d) 13


844) ಭಾರತೀಯ ಜಿಮ್ನಾಸ್ಟಿಕ್‌ ಫೆಡರೇಶನ್‌ನ ನೂತನ ಅಧ್ಯಕ್ಷರು ಯಾರು?
a) ಖಂದಹರಿ
b) ಸುಧಾಕರ್‌ ಶೆಟ್ಟಿ√
c) ಸೂರ್ಯನಾರಾಯಣ
d) ಪ್ರಮೀಳಾ ದೇವಿ


845)ಪ್ರಸಕ್ತ ಸಾಲಿನ ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಯಾರಿಗೆ ನಿಡಲಾಗಿದೆ?
a) ಸೈನಾ ನೆಹ್ವಾಲ್‌  
b) ಅಶ್ವಿನಿ ನಾಚಪ್ಪ
c) ಸಾನಿಯಾ ಮಿರ್ಜಾ√
d) ಪಿ. ಟಿ. ಉಷಾ


846) ಭಾರತೀಯ ಚುನಾವಣಾ ಆಯುಕ್ತರನ್ನಾಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ಓಂ ಪ್ರಕಾಶ್‌ ರಾವತ್‌ √    
b) ಜ್ಯೋತಿ ಪಿಳೈ
c) ಸ್ನೇಹಾ ಅಗರ್‌ವಾಲ್‌      
d) ಅರ್ಜುನ್‌ ಸಿನ್ಹಾ


847)ಇತ್ತೀಚೆಗೆ ನಿಧನರಾದ ಓಂ ಪ್ರಕಾಶ್‌ ಮುಂಜಲ್‌ ಅವರು ಯಾವ ಪ್ರಸಿದ್ಧ ಕಂಪೆನಿಯನ್ನು ಹುಟ್ಟು ಹಾಕಿದ್ದರು?
a) ಟಿವಿಎಸ್‌ ಕಂಪೆನಿ
b) ಅಶೋಕ್‌ ಲೈಲ್ಯಾಂಡ್‌
c) ಹಿರೋ ಸೈಕಲ್‌  √
d) ಬಜಾಜ್‌ ಕಂಪೆನಿ


848)ಪೊಲ್ಯಾಂಡ್‌ನಲ್ಲಿ ನಡೆದ ಅರ್ಚರಿ ವಿಶ್ವಕಪ್‌ನಲ್ಲಿ ಭಾರತಕ್ಕೆ ಬಂಗಾರ ತಂದುಕೊಟ್ಟ ಆಟಗಾರ?
a) ಮಂಗಲ್‌ ಸಿಂಗ್‌
b) ಅಭಿಶೇಕ್‌ ವರ್ಮಾ
c) ಪ್ರೀತಮ್‌ ಚಂದ್‌ √
d) ಶೇಖರ್‌ ಖನ್ನಾ


849) ಶ್ರೀಲಂಕಾದ ನೂತನ ಪ್ರಧಾನಮಂತ್ರಿ ಯಾರು?
a) ಆರ್‌. ವಿಕ್ರಮಸಿಂಘೆ √
b) ಎಂ. ರಾಜಪಕ್ಸೆ
c) ಸಿ. ಕೆ. ತುಂಗಾ          
d) ಮೇಲಿನ ಯಾರು ಅಲ್ಲ


850) ಇತ್ತೀಚೆಗೆ ಏರ್‌ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ಯಾರನ್ನು ನೇಮಿಸಲಾಗಿದೆ.
a) ರೋಹಿತ್‌ ನಂದನ್‌      
b) ಸತೀಶ್‌ ಬಾದ್ರಾ
c) ಸುಖೇಶ್‌ ಮಿತ್ತಲ್‌  
d) ಅಶ್ವನಿ ಲೋಹನಿ√


851) ನೇಪಾಳದಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಹಾನಿಗೊಳಗಾದ ದೇವಾಲಯಗಳನ್ನು ಪುನರ್ನಿರ್ಮಾಣ ಮಾಡಲು ಏಷ್ಯಾದ ಯಾವ ದೇಶ ಮುಂದೆ ಬಂದಿದೆ?
a) ಭೂತಾನ್‌        
b) ಭಾರತ
c) ಶ್ರೀಲಂಕಾ √  
d) ಬಾಂಗ್ಲಾದೇಶ


852) ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಸ್ಮರಣಾರ್ಥ ‘ಅಬ್ದುಲ್‌ ಕಲಾಂ ಯುವ ಪ್ರಶಸ್ತಿ’ ನೀಡಲು ಯಾವ ರಾಜ್ಯ ನಿರ್ಧರಿಸಿದೆ.
a) ತಮಿಳುನಾಡು √
b)ಕರ್ನಾಟಕ
c) ಕೇರಳ          
d) ಆಂಧ್ರಪ್ರದೇಶ


853) ರಾಷ್ಟ್ರೀಯ ಹ್ಯಾಂಡ್‌ಲೂಮ್‌ ದಿನಾಚರಣೆಯನ್ನು ಯಾವ ವರ್ಷದಿಂದ ಆಚರಣೆ ಮಾಡಲಾಗುತ್ತಿದೆ?
a) 7, ಆಗಸ್ಟ್  1984        
b) 7, ಆಗಸ್ಟ್  2015√
c) 7, ಆಗಸ್ಟ್  1999        
d) 7, ಆಗಸ್ಟ್  1989


854) ಹಿಂದಿ ಸಾಹಿತ್ಯದ ಸಮಗ್ರ ಸೇವೆಗೆ ನೀಡುವ 2014ನೇ ಸಾಲಿನ ‘ಭಾರತ್‌ ಭಾರತಿ’ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಯಾರಿಗೆ ಸಂದಿದೆ.
a) ಖುಷ್ವಂತ್‌ ಸಿಂಗ್‌          
b) ಕಿಶನ್‌ ಸಿಂಗ್‌ ಅಮ್ರಪಾಲಿ
c) ಸೀತಾರಾಮ್‌ ಶಾಸ್ತ್ರಿ  
d) ಕಾಶಿನಾಥ್‌ ಸಿಂಗ್√‌


855) ಪಟ್ನಾ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯನ್ನಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ.
a) ಇಕ್ಬಾಲ್‌ ಅಹಮ್ಮದ್‌ ಅನ್ಸಾರಿ √
b) ಎಲ್‌. ನರಸಿಂಹ ರೆಡ್ಡಿ
c) ಮಂಜುಳಾ ಚೆಲ್ಲೂರ್‌  
d) ಜಿತೇಂದ್ರ ಪ್ರಸಾದ್‌


856) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಇತ್ತೀಚೆಗೆ ‘ಸಮನ್ವಯ್‌’ ಯೋಜನೆಯನ್ನು ಪ್ರಕಟಿಸಿತು. ಈ ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ತಾಲ್ಲೂಕು ಪಂಚಾಯ್ತಿ      
b) ಜಿಲ್ಲಾ ಪಂಚಾಯ್ತಿ
c) ಕಾಪ್‌ ಪಂಚಾಯ್ತಿ        
d) ಗ್ರಾಮ ಪಂಚಾಯ್ತಿ √


857) ವೈದ್ಯಕೀಯ ಅಧಿಕಾರಿಗಳು ಮತ್ತು ವೈದ್ಯರ ನಿವೃತ್ತಿ ವಯಸ್ಸನ್ನು ಮಹಾರಾಷ್ಟ್ರ ಸರ್ಕಾರ ಎಷ್ಟು ವರ್ಷಗಳವರೆಗೆ ವಿಸ್ತರಿಸಿತು?
a) 58 ರಿಂದ 62 ವರ್ಷ
b) 60 ರಿಂದ 62 ವರ್ಷ
c) 58 ರಿಂದ 60 ವರ್ಷ √
d) 58 ರಿಂದ 61 ವರ್ಷ


858) ಗಣಿತ ಶಾಸ್ತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾಗುವ ರಾಮಾನುಜಂ ರಾಷ್ಟ್ರೀಯ ಪ್ರಶಸ್ತಿ 2015ನೇ ಸಾಲಿನಲ್ಲಿ ಯಾರಿಗೆ ಬಂದಿದೆ.
a) ಸಚ್ಚಿದೇವಾ ಬನ್ಸಾಲಿ
b) ಮೊಹಮ್ಮದ್‌ ಫಕೀರ್‌ ಖಾನ್‌
c) ಅಲಮೆಂದು ಕೃಷ್ಣ √
d) ಕರಣ್‌ ಶಂಕರ ದೇವಾ


859) ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಫೋರ್ಬ್ಸ್‌ ನಿಯತಕಾಲಿಕೆ ಇತ್ತೀಚೆಗೆ ಪ್ರಕಟಿಸಿದೆ. ಈ ಪಟ್ಟಿಯಲ್ಲಿರುವ ಬಾಲಿವುಡ್‌ ನಟರನ್ನು ಗುರುತಿಸಿ.
a) ಅಮಿತಾಬ್‌  
b) ಶಾರೂಕ್‌ ಖಾನ್‌
c) ರಣಬೀರ್‌ ಕಪೂರ್
d) ಮೇಲಿನ ಎಲ್ಲರು√


860) ‘48ನೇ ಆಸೀನ್‌ ವಿದೇಶಾಂಗ ಸಚಿವರ ಶೃಂಗ ಸಮ್ಮೇಳನ’ ಈ ಕೆಳಕಂಡ ಯಾವ ಸ್ಥಳದಲ್ಲಿ ಜರುಗಿತು.
a) ನವದೆಹಲಿ                  
b) ಕೊಲಂಬೊ
c) ಕೌಲಲಾಂಪುರ √        
d) ಇಸ್ಲಾಮಾಬಾದ್

(ಕೃಪೆ : ಪ್ರಜಾವಾಣಿ)

1 comment:

  1. ಮಸ್ಕಿ ಶಾಸನ ರಾಯಚೂರು ಜಿಲ್ಲೆಯಲ್ಲಿದೆ ಕೊಪ್ಪಳ ಅಲ್ಲ

    ReplyDelete