"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 1 October 2014

★ ಸಾಮಾನ್ಯ ಜ್ಞಾನ (ಭಾಗ - 6) General Knowledge (PART-6)


 ★ ಸಾಮಾನ್ಯ ಜ್ಞಾನ (ಭಾಗ - 6) General Knowledge (PART-6) :


134) ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು?
—ಉತ್ತಂಗಿ ಚೆನ್ನಪ್ಪ.


135) ಸಂತಾನ ರಹಿತ ವ್ಯಕ್ತಿಯ ಆಸ್ತಿಯನ್ನು ರಾಜ ಆಕ್ರಮಿಸಿಕೊಳ್ಳುವ ಪದ್ಧತಿಯನ್ನು ತೊಡೆದು ಹಾಕಿದವನು ಯಾರು?
— ಗುಜರಾತಿನ ಕುಮಾರಪಾಲ.


136) ಕನ್ನಡದ ಮೊದಲ ಅಲಂಕಾರ ಗ್ರಂಥ ಯಾವುದು?
— ಕವಿರಾಜ ಮಾರ್ಗ.


137) ಹೊಸಗನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ ಯಾವುದು?
— ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.


138) 2014 ರ ವಿಂಬಲ್ಡನ್ ಪುರುಷರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು?
— ನೋವಾಕ್ ಜೊಕೊವಿಕ್(ಸರ್ಬಿಯಾ)- ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ವಿರುದ್ಧ.


139) ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
— ಬಾದಾಮಿ ಶಾಸನ.


140) 0 ಡಿಗ್ರಿ ಗ್ರೀನ್ ವಿಚ್ ರೇಖೆಯು ಪ್ರಪಂಚದಲ್ಲಿ ಸಮಭಾಜಕ ವೃತ್ತವನ್ನು ಸಂಧಿಸುವ ಸ್ಥಳ ಯಾವುದು?
— ಆಫ್ರಿಕಾ ಖಂಡದ ಗಿನಿಯಾಕಾರಿ.


141) ಕೋಬರ್ ಗಡೆ, ಗವಾಯ್ ಗುಂಪು ಎಂದು ವಿಂಗಡನೆಯಾದ ಪಕ್ಷ ಯಾವುದು?
— ರಿಪಬ್ಲಿಕನ್ ಪಕ್ಷ.


142) ಸಂಘಮಿತ್ರೆಯು ಶ್ರೀಲಂಕಾಕ್ಕೆ ಕೊಂಡೊಯ್ದ ಭೋಧಿವೃಕ್ಷದ ಕೊಂಬೆಯನ್ನು ಎಲ್ಲಿ ನೆಡಲಾಯಿತು?
— ಅನುರಾಧಪುರ.


143) ಪಾಶ್ಚಿಮಾತ್ಯರಲ್ಲಿ ಮೊಟ್ಟಮೊದಲಿನ ಹಾಸ್ಯ ನಾಟಕಕಾರ ಯಾರು?
— ಸೋಪೋಕ್ಲಿಸ್.


144) ಭಾರತದ ಸುಪ್ರಿಂಕೋರ್ಟ್ ನ 42 ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡವರು?
— ನ್ಯಾ|| H.L. ದತ್ತು.


145) 'ಎಬೋಲಾ' ವೈರಸ್ ಮೊದಲು ಪತ್ತೆಯಾದದ್ದು ಎಲ್ಲಿ?
— ಡೆಮಾಕ್ರೆಟಿಕ್ ರಿಪಬ್ಲಿಕ್ ಆಪ್ ಕಾಂಗೋ (1976).


146) ಗಣಿತಶಾಸ್ತ್ರದ ನೊಬೆಲ್ ಎಂದೇ ಖ್ಯಾತವಾದ ಫೀಲ್ಡ್ ಮೆಡೆಲ್ (ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ) ಪ್ರಶಸ್ತಿಯನ್ನು (ಇತ್ತೀಚೆಗೆ 2014 ನೇ ಸಾಲಿನ) ಪಡೆದ ಭಾರತೀಯ ಮೂಲದವರು ?
— ಮಂಜುಳಾ ಭಾರ್ಗವ.


147) ಭಾರತದ ಮೊದಲ ವಾಯುಸಾರಿಗೆ ಎಲ್ಲಿಂದ ಎಲ್ಲಿಯವರೆಗೆ ಪ್ರಾರಂಭಿಸಲಾಯಿತು?
— ಅಲಹಾಬಾದ್ ನಿಂದ ನೈನಿವರೆಗೆ (1911).


148) ಇತ್ತಿಚೆಗೆ (2014 Sept 1) ಕರ್ನಾಟಕ ರಾಜ್ಯದ 18 ನೇ ರಾಜ್ಯಪಾಲರಾಗಿ ನೇಮಕಗೊಂಡವರು?
— ವಾಜುಭಾಯಿ ವಾಲಾ (ಗುಜರಾತ).


149) ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ (ಕೇರಳ) ರಾಜ್ಯದ ರಾಜ್ಯಪಾಲರಾಗಿ ಇತ್ತಿಚೆಗೆ (2014, Sept, 5) ಅಧಿಕಾರ ವಹಿಸಿಕೊಂಡ ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಯಾರು?
— ಪಿ. ಸದಾಶಿವಂ.


150) ದೇಶದಲ್ಲೇ ಅತಿ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ ರಾಜ್ಯ ಯಾವುದು?
— ತಮಿಳುನಾಡು.


151) ಕನ್ನಡದ ಮೊಟ್ಟಮೊದಲ ಪದ 'ಇಸಿಲ' ಅಶೋಕನ ಬ್ರಹ್ಮಗಿರಿ ಶಾಸನದಲ್ಲಿದೆ.


152) ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ?
— ಗುಜರಾತ.


153) ಪರಿಸರವನ್ನು ಕುರಿತ ಮೊದಲ ವಿಶ್ವ ಸಂಸ್ಥೆಯ ಸಮಾವೇಶವು ಜೂನ್ 1972 ರಲ್ಲಿ ಎಲ್ಲಿ ನಡೆಯಿತು?
— ಸ್ಟಾಕ್ ಹೋಮ್ .


154) ಏಷ್ಯಾ ಮತ್ತು ಯೂರೋಪ್ ಖಂಡಗಳನ್ನು ಬೇರ್ಪಡಿಸುವ ಪರ್ವತಗಳು ಯಾವವು?
— ಯೂರಲ್ ಪರ್ವತಗಳು.


155) ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ?
— ಚೌರಿಚೌರಾ ಘಟನೆ.


156) ಅಂತರ್ರಾಷ್ಟ್ರೀಯ ತಿಥಿರೇಖೆ ಎಂದರೇನು?
— ಇದು 180⁰ ರೇಖಾಂಶವಾಗಿದೆ.


157) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು?
— ಕೃಪಲಾನಿ.


158) ಧರ್ಮಕ್ಕೆ ಒಂದು ಸ್ಥಾನ ಮೀಸಲಿರಿಸಿರುವ ಏಕೈಕ ವಿಧಾನಸಭೆ ಯಾವುದು?
— ಸಿಕ್ಕಿಂ ವಿಧಾನಸಭೆ (32 ಸ್ಥಾನಗಳಲ್ಲಿ 1 ಸಂಘಂ - ಬೌದ್ಧಧರ್ಮ ಕ್ಕೆ)


159) ದೇವದಾಸಿ ಪದ್ಧತಿಯ ಬಗ್ಗೆ ವಿವರವನ್ನು ನೀಡುವ ಮೊದಲ ಶಾಸನ ಯಾವುದು?
— ರಾಮಘರ ಶಾಸನ.


160) 'ಮಧ್ಯಪ್ರದೇಶದ ಜೀವನದಿ' ಎಂದು ಕರೆಯಲ್ಪಡುವ ನದಿ?
— ನರ್ಮದಾ ನದಿ.


161) ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ ನಿಧನರಾದ ಭಾರತದ ಪ್ರಧಾನಿ?
— ಲಾಲ್ ಬಹದ್ದೂರ್ ಶಾಸ್ತ್ರಿ.


162) ಭೂದಾನ ಚಳುವಳಿಯನ್ನು ಎಲ್ಲಿ ಆರಂಭಿಸಲಾಯಿತು?
— 'ತೆಲಂಗಾಣದ ಪೊಚಂಪಲ್ಲಿ'


163) 'ಕಂಪನಿ ಅಕ್ಬರನ' ಎಂದು ಕರೆಯಲ್ಪಟ್ಟವರು?
— ಲಾರ್ಡ್ ವೆಲ್ಲೆಸ್ಲಿ.


164) ಕನ್ನಡ ಸಾಹಿತ್ಯ ಪರಿಷತ್ ನ ನೂತನ ಘೋಷವಾಕ್ಯ ಯಾವುದು?
— "ಮನುಷ್ಯ ಜಾತಿ ತಾನೊಂದೆವಲಂ".


165) ಇತ್ತಿಚೆಗೆ (2014 Aug) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು?
— ರಜ್ನಿ ರಜ್ದಾನ್ (Rajni Razdan)


166) ತೈಲೋತ್ಪಾದನೆಗಾಗಿ ಬಾಂಬೆ ಹೈನಲ್ಲಿ 1400 ಅಡಿ ಆಳದಿಂದ ಕಚ್ಚಾತೈಲವನ್ನು ಉತ್ಪಾದಿಸಲು ನಿರ್ಮಿಸಿರುವ ಪ್ಲಾಟ್ ಫಾರ್ಮ್ ಯಾವುದು?
— ಸಾಗರ್ ಸಾಮ್ರಾಟ್.


167) ಭಾರತದ 4 ನೇ ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು ಯಾರು?
— ಗೋಪಾಲ್ ಸ್ವರೂಪ್ ಪಾಠಕ್.


168) 'ಅಯ್ಯಂಗಾರ್ ಯೋಗ' ಎಂದೇ ಹೆಸರಾಗಿದ್ದ, ಆಧುನಿಕ ಯೋಗದ ಪಿತಾಮಹ (the Father of Modern Yoga) ಎಂದು ಕರೆಯಲ್ಪಟ್ಟವರು ಯಾರು?
— ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್.


169) ಮೊಟ್ಟೆ ಇಡುವ ಸಸ್ತನಿ ಪ್ರಾಣಿಗಳು?
— ಪ್ಲಾಟಿಪಸ್, ಯಕಿಡ್ನಾ.


170) ಸ್ತ್ರೀಯರಿಗೆ ಇದ್ದ ಆಸ್ತಿಯ ಹಕ್ಕನ್ನು ಸಂಪೂರ್ಣವಾಗಿ ಹೊರಟು ಹೋದದ್ದು ಯಾರ ಕಾಲದಲ್ಲಿ?
— ಗುಪ್ತರು.


171) "Not Just an Accountant" ಎಂಬ ಗ್ರಂಥವನ್ನು ಬರೆದವರು ಯಾರು?
— (ಭಾರತದ ಮಾಜಿ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್) ವಿನೋದ್ ರಾಯ್.


172) ಇತ್ತೀಚೆಗೆ (2014 Aug 13) ಭಾರತದ ಲೋಕಸಭೆಯ 15 ನೇ  ಉಪಸಭಾಪತಿಯಾಗಿ ಆಯ್ಕೆಗೊಂಡವರು ಯಾರು?
— A.I.A.D.M.K ಯ ಸಂಸದ M.ತಂಬಿದುರೈ


173) ಸ್ವತಂತ್ರ ಭಾರತದಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ವಿತ್ತ ಸಚಿವೆ ಯಾರು?
— ಇಂದಿರಾ ಗಾಂಧಿ (1970-71).


174) S.L.ಭೈರಪ್ಪನವರ ಇತ್ತೀಚೆಗೆ ಬಿಡುಗಡೆಯಾದ (ಜುಲೈ 29, 2014) ಕೃತಿ ಯಾವುದು?
— ಯಾನ (29 ನೇ ಕಾದಂಬರಿ).


175)  ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?
— ಇಂದಿರಾಬಾಯಿ.


176) 2014 ರ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು?
— ಪೆಟ್ರಾ ಕ್ವಿಟೋವಾ(ಜೆಕ್ ಗಣರಾಜ್ಯ) - ಕೆನಡಾದ ಯುಗಿನಾ ಬೌಚಾರ್ಡ್ ವಿರುದ್ಧ.



177) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಯಾವ ನಿರುದ್ಯೋಗವನ್ನು ಹೋಗಲಾಡಿಸಲು ಪ್ರಯತ್ನಿಸುತ್ತದೆ?
— ವಾಡಿಕೆಯ ಸ್ಥಿತಿಯ ನಿರುದ್ಯೋಗ.


178) ಭಾರತೀಯ ಕಾವ್ಯ ಮಿಮಾಂಸೆಯ ಅಧ್ಯ ಪ್ರವರ್ತಕ ಯಾರು?
— ಭರತ.


179)  'ತುಪ್ಪ' ಕನ್ನಡ ಶಬ್ಧದ ಮೊದಲ ಪ್ರಯೋಗವಿರುವ ಕೃತಿ ಯಾವುದು?
— ಗಾಥಾ ಸಪ್ತಸತಿ.


180) ಭಾರತದ ರಾಜ್ಯವೊಂದರ ಮುಖ್ಯಮಂತ್ರಿಯಾದ ಮೊದಲ ಸಿನಿಮಾ ನಟ?
— ಎಂ.ಜಿ. ರಾಮಚಂದ್ರನ್ (ತಮಿಳುನಾಡು).


181) ಜಗತ್ತಿನ ಏಕೈಕ ತೇಲು ಉದ್ಯಾನವನವಿರುವುದು ಏಲ್ಲಿ ?
— ಮಣಿಪುರದ ಕಿಬುಲ್ ಲಮ್ ಜಯೋ ರಾಷ್ಟ್ರೀಯ ಉದ್ಯಾನವನ. (ಲೋಕ್ ಟಾಕ್ ಸರೋವರದ ಒಂದು ಭಾಗವಾಗಿದೆ)


182) ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು ಯಾರು?
- V.V.ಗಿರಿ.


183) 'ಛಂದೋಂಬುಧಿ'ಯನ್ನು ಮೊಟ್ಟಮೊದಲು ಸಂಪಾದನೆಯನ್ನು ಮಾಡಿದವರು ಯಾರು?
— ಡಿ.ಪಿ.ರೈಸ್


184) ಸೋನ್ ಮತ್ತು ಗಂಗಾ ನದಿಗಳ ಸಂಗಮದ ಬಳಿ ಇರುವ ಐತಿಹಾಸಿಕ ನಗರ ಯಾವುದು?
— ಪಾಟಲೀಪುತ್ರ.


185) ಸಂಸತ್ತಿನ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗಲು ನಿಗದಿಪಡಿಸಿದ ಕೋರಂ ಏಷ್ಟು?
— ಒಟ್ಟು ಸದಸ್ಯತ್ವದ 1/10 ರಷ್ಟು.


186) ಅಂತರ್ರಾಷ್ಟ್ರೀಯ ಕಾರ್ಮಿಕರ ದಿನ?
— ಮೇ 01.


187) ಭಯೋತ್ಪಾದನಾ ವಿರೋಧಿ ದಿನ?
— ಮೇ 21.


188) ಓಝೋನ್ ಪದರವು ಭೂಮಿಯ ಯಾವ ಪದರದಲ್ಲಿದೆ?
— ಸ್ಟ್ರಾಟೋಸ್ಪಿಯರ್.


189) ಶಿಕ್ಷಣವು ಒಂದು ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿರುವುದು ಯಾವ ಮೊಕದ್ದಮೆಯಲ್ಲಿ?
— ಮೋಹಿನಿ ಜೈನ್ V/s ಕರ್ನಾಟಕ ಸರ್ಕಾರ.


190) 'ಮಹಾರಾಷ್ಟ್ರದ ಸಾಕ್ರೆಟಿಸ್' ಎಂದು ಯಾರನ್ನು ಕರೆಯಲಾಗುತ್ತದೆ
— M.G.ರಾನಡೆ.


191) ಯಾವ ಮಣ್ಣನ್ನು 'ರೂಪಾಂತರ ಮಣ್ಣು' ಎಂದು ಕರೆಯುತ್ತಾರೆ?
— ಕೆಂಪು ಮಣ್ಣು.


192) 'ಕಾರ್ನವಾಲಿಸ್ ಕಾಯ್ದೆ' ಎಂದು ಯಾವುದನ್ನು ಕರೆಯುತ್ತಾರೆ?
— ಕಾರ್ನವಾಲಿಸ್ ನ್ಯಾಯಾಂಗೀಯ ಸುಧಾರಣೆಗಳು.


193) ಒಂದು ರೇಖಾಂಶದಿಂದ ಮತ್ತೊಂದು ರೇಖಾಂಶಕ್ಕೆ ಸೂರ್ಯನ ಬೆಳಕು ಬೀಳುವ ಅವಧಿಯ ವ್ಯತ್ಯಾಸ ಎಷ್ಟು?
— 4 ನಿಮಿಷಗಳು.


194) ಕನ್ನಡದ ಮೊಟ್ಟಮೊದಲ ಸಾಂಗತ್ಯ ಕೃತಿ ಯಾವುದು?
— ಸೊಬಗಿನ ಸೋನೆ.


195) ಭಾರತದ ಸಂವಿಧಾನದ ಯಾವ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ?
— 42 ನೇ ತಿದ್ದುಪಡಿ.


196) ಭಾರತದ ಇತಿಹಾಸದಲ್ಲಿ ತನ್ನ ಜೀವಿತದ ಅತೀ ಹೆಚ್ಚು ಅವಧಿಯನ್ನು ರಣಭೂಮಿಯಲ್ಲೇ ಕಳೆದ ಅರಸ ಯಾರು?
— ರಾಣಾ ಸಂಗ್ರಾಮ್.


197) ಮುಂದಿನ (2018 ರ) 21 ನೇ ಕಾಮನ್ ವೆಲ್ತ್ ಗೇಮ್ಸ್ ಎಲ್ಲಿ ಜರುಗಲಿವೆ?
— ಆಸ್ಟ್ರೇಲಿಯಾದ ಕ್ವಿನ್ಸ್ ಲ್ಯಾಂಡ್ ಗೋಲ್ಡ್ ಕೋಸ್ಟ್.


198) L.I.C ಯ ಘೋಷವಾಕ್ಯ ಯಾವುದು?
— "Your Welfare is our Responsibility".


199) ಭಾರತದ ಮೊಟ್ಟಮೊದಲ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದವರು ಯಾರು?
— ಗುಲ್ಜಾರಿಲಾಲ್ ನಂದಾ.


200)  0 ಡಿಗ್ರಿ ಗ್ರೀನ್ ವಿಚ್ ರೇಖೆಯು ಪ್ರಪಂಚದಲ್ಲಿ ಯಾವ ದೇಶದ ರಾಜಧಾನಿಯ ಮೇಲೆ ಹಾದುಹೋಗುತ್ತದೆ ?
— ಆಫ್ರಿಕಾ ಖಂಡದ ಘಾನಾ ದೇಶದ ಅಕ್ರಾ ರಾಜಧಾನಿ.

... to be continued

No comments:

Post a Comment