"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 5 March 2018

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2 : ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆ (Literacy in Karnataka State)

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2 : ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆ
(Literacy in Karnataka State)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಕರ್ನಾಟಕದ ಅರ್ಥವ್ಯವಸ್ಥೆ
(Karnataka Economics)

★ ಕರ್ನಾಟಕ ಆರ್ಥಿಕ ಸಮೀಕ್ಷೆ
(Karnataka Economic Survey)


•► 2001 ರಿಂದ 2011ರ ದಶಕದಲ್ಲಿ, ಸಾಕ್ಷರತಾ ಪ್ರಮಾಣಗಳಲ್ಲಿ ಗಣನೀಯ ಮಟ್ಟಿಗೆ ಸಾಧನೆ ಆಗಿದೆ ಎನ್ನುವದು ಅಂಕಿಅಂಶಗಳಿಂದ ದೃಢಪಟ್ಟಿದೆ. 2001 ರಲ್ಲಿ 66.64% ರಷ್ಟಿದ್ದ ರಾಜ್ಯದ ಸಾಕ್ಷರತಾ ಪ್ರಮಾಣವು 2011 ರ ಹೊತ್ತಿಗೆ ಶೇ.75.60 ರಷ್ಟಾಗಿದೆ.

•► ಕರ್ನಾಟಕದ ಪುರುಷ ಮತ್ತು ಮಹಿಳಾ ಸಾಕ್ಷರತಾ ಪ್ರಮಾಣವು ರಾಷ್ಟ್ರದ ಒಟ್ಟಾರೆ ಸರಾಸರಿ ಪ್ರಮಾಣಕ್ಕಿಂತ ಹೆಚ್ಚಿದೆ. ರಾಜ್ಯದ ನಗರ ಪ್ರದೇಶದ ಪುರುಷರ ಸಾಕ್ಷರತೆ ಶೇ.90ರ ಗಡಿ ದಾಟಿದೆ. ಇದರ ತದ್ವಿರುದ್ಧ ಗ್ರಾಮಾಂತರ ಪ್ರದೇಶದ ಮಹಿಳಾ ಸಾಕ್ಷರತೆ ಇನ್ನೂ ಶೇ.60ರ ಗಡಿಯನ್ನು ಸಹ ತಲುಪಿಲ್ಲ.

•► ಸಾಕ್ಷರತೆಯ ಪ್ರತಿಯೊಂದು ಮಾನದಂಡವನ್ನು ಅವಲೋಕಿಸಿದಾಗ ರಾಜ್ಯಮಟ್ಟದ ಸಾಕ್ಷರತೆಯ ಪ್ರಮಾಣ ರಾಷ್ಟ್ರದ ಸರಾಸರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿಗೆಯಿದೆ. 2001 ರಲ್ಲಿ ರಾಷ್ಟ್ರದ 16 ಪ್ರಮುಖ ರಾಜ್ಯಗಳಲ್ಲಿ ರಾಜ್ಯದ ಸಾಕ್ಷರತೆಯ ಸ್ಥಾನ 9 ಆಗಿದೆ (100 ಲಕ್ಷ ಕ್ಕಿಂತ ಹೆಚ್ಚಿರುವ ಜನಸಂಖ್ಯೆ). 2011 ರಲ್ಲಿಯೂ ಮೇಲಿನ ಸ್ಥಾನದಲ್ಲಿ ಮುಂದುವರೆದಿದೆ.

•► ಒಂದು ದಶಕದಲ್ಲಿ ರಾಜ್ಯದ ಒಟ್ಟಾರೆ ಸಾಕ್ಷರತೆಯ ಸಾಧನೆ ಶೇ.9.0. ರಾಜ್ಯದ ಪ್ರಗತಿಯು ಅಖಿಲ ಭಾರತದ ಸಾಧನೆಗಿಂತ ಸ್ವಲ್ಪ ಹೆಚ್ಚಿಗೆ ಇರುವುದನ್ನು ಸಾಕ್ಷರತಾ ಪ್ರಮಾಣವು ತೋರಿಸಿದೆ. 2001 ರಲ್ಲಿ ಸಾಕ್ಷರತಾ ಮಟ್ಟ ಕಡಿಮೆಯಿದ್ದ ಹಲವು ಜಿಲ್ಲೆಗಳು, ಉತ್ತಮ ಸಾಧನೆಗೆಯ್ದು ರಾಜ್ಯ ಮಟ್ಟದ ಸರಾಸರಿ ದಾಟಿದೆ.
- ಅಂತಹ ಜಿಲ್ಲೆಗಳೆಂದರೆ ಕಲಬುರಗಿ(ಯಾದಗಿರಿ ಸೇರಿ), ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ರಾಯಚೂರು, ಕೋಲಾರ, ಚಾಮರಾಜನಗರ, ವಿಜಯಪುರ ಮತ್ತು ಬೀದರ್.

•► ಲೋಕ ಶಿಕ್ಷಣ ಇಲಾಖೆಯು ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳು ಗ್ರಾಮಾಂತರ ಮತ್ತು ಹಿಂದುಳಿದ ಪ್ರದೇಶಗಳಲ್ಲಿ/ರಾಜ್ಯದ ಇತರೆ ಭಾಗದಲ್ಲಿ ಮಹಿಳೆಯರ ಸಾಕ್ಷರತೆಗೆ ಹೆಚ್ಚಿನ ಒತ್ತು ನೀಡಿರುವುದು ಕಂಡುಬರುತ್ತದೆ.

•► ಸಾರ್ವಜನಿಕ ಶಿಕ್ಷಣ ಇಲಾಖೆಯ, ಸರ್ವಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಇಲಾಖೆಗಳು ಕಲಿಕೆಗೆ ಶಾಲೆಗಳಲ್ಲಿ ಉತ್ತಮ ಸೌಲಭ್ಯ, ಆಕರ್ಷಕ ಪ್ರೋತ್ಸಾಹ ಶಿಕ್ಷಣದಲ್ಲಿ ಕಲಿಕೆ ಗುಣಮಟ್ಟದ ಸುಧಾರಣೆ ಮತ್ತು ಸಮುದಾಯದಲ್ಲಿ ಅರಿವುಗಳು ಹೆಚ್ಚಾಯಿತು ಎನ್ನಬಹುದಾಗಿದೆ.

Courtesy : Karnataka Economic Survey - 2017-18)

2 comments:

  1. Sir..nanu kas ge kannadali antropology optional choose madidini..but nanage ellu Manava shastra kannadali book or printed notes sigthilla..sir nive enadru help madi sir...please

    ReplyDelete
  2. Plz go through this link... and have glance..https://www.amazon.in/Samanya-Manav-Shastra-Nadeem-Hasnain/dp/B00EE6KUOW

    ReplyDelete