"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 5 March 2018

☀️ PART V— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್ (IAS/KAS Exam Preparation Notes Bits)

☀️ PART V— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್
(IAS/KAS Exam Preparation Notes Bits)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)


...ಮುಂದುವರೆದ ಭಾಗ.


ಸ್ಪರ್ಧಾಳುಗಳ ಗಮನಕ್ಕೆ:
— ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ. 
Gmail : yaseen7ash@gmail.com



51.  ಭಾರತ ಪರ್ಯಾಯ ದ್ವೀಪವು (Gondwanaland) ಗೊಂಡ್ವಾನಾ (ಖಂಡ)ದ ಭಾಗವಾಗಿದ್ದು, ಇದು ಉತ್ತರಕ್ಕೆ ಸಾಗಿತೆಂದು ತದನಂತರ ಭಾರತ, ಆಫ್ರಿಕಾ ಮತ್ತು ಇತರ ಭಾಗಗಳು ಪರಸ್ಪರ ಬೇರ್ಪಟ್ಟವು ಎಂದು ಭೂಗೋಳ ಶಾಸ್ತ್ರಜ್ಞರು ನಂಬುತ್ತಾರೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


52. 2017-18ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 6.75ರಷ್ಟಿದ್ದು, ಮುಂದಿನ ವರ್ಷದಲ್ಲಿ ಶೇಕಡಾ 7ರಿಂದ 7.5 ಕ್ಕೆ ಜಿಡಿಪಿ ಏರಿಕೆಯಾಗುವ ಗುರಿ ಹೊಂದಲಾಗಿದೆ
— ಗ್ರಾಹಕ ದರ ಸೂಚ್ಯಂಕ(ಸಿಪಿಐ) ಹಣದುಬ್ಬರ ಸರಾಸರಿ 2017-18ರಲ್ಲಿ ಶೇಕಡಾ 3.3ರಷ್ಟಿದ್ದು ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ.2017-18ರಲ್ಲಿ ದೇಶದ ಹಣದುಬ್ಬರ ಸರಾಸರಿ ಪ್ರಮಾಣದಲ್ಲಿ ಮುಂದುವರಿದಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


53. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು & ಸದಸ್ಯರನ್ನು ನೇಮಿಸಿಕೊಳ್ಳವರು - ರಾಜ್ಯಪಾಲರು ಅದರಂತೆ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು & ಸದಸ್ಯರಿಗೆ ವೇತನ ನೀಡುವುರು- ರಾಜ್ಯ ಸರ್ಕಾರ (The State Legislature) ಆದರೆ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು & ಸದಸ್ಯರನ್ನು ತೆಗೆದು ಹಾಕುವರು - ಸುಪ್ರೀಂ ಕೋರ್ಟ ವರದಿ/ಆದೇಶ ಮೇರೆಗೆ ರಾಷ್ಟ್ರಪತಿಗಳು.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


54. ಮೂಲಭೂತವಾದ ಹಾಗೂ ಸೈಬರ್‌ ಅಪರಾಧಗಳನ್ನು ಹತ್ತಿಕ್ಕಲು ಕೇಂದ್ರ ಗೃಹ ಸಚಿವಾಲಯದಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ ನಿಗ್ರಹ (ಕೌಂಟರ್‌ ಟೆರರಿಸಂ ಅಂಡ್‌ ಕೌಂಟರ್‌ ರ‍್ಯಾಡಿಕಲೈಸೇಶನ್‌- CTCR) ಮತ್ತು ಸೈಬರ್‌ ಮತ್ತು ಮಾಹಿತಿ ಭದ್ರತೆ (ಸೈಬರ್‌ ಅಂಡ್‌ ಇನ್ಫೋರ್ಮೇಶನ್‌ ಸೆಕ್ಯುರಿಟಿ- CIS) ಎಂಬ ಪ್ರತ್ಯೇಕ ವಿಭಾಗಗಳನ್ನು ಸೃಷ್ಟಿಸಲಾಗಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


55. ಯುನೆಸ್ಕೋದವರು ನಮ್ಮ ಮಲೆನಾಡು, ನೀಲಗಿರಿಯನ್ನು ಬಿಒಎಸ್ ಫೆರಿಕಾಲ್ ರಿಸರ್ವ್ ಅನ್ನಾಗಿ ಗುರುತಿಸಿದೆ. ಇದು ಅವರು ಗುರುತಿಸಿರುವ ದೇಶದ ಪ್ರಪ್ರಥಮ ಬಿಒಎಸ್ ಫೆರಿಕಾಲ್ ರಿಸರ್ವ್. ಇಲ್ಲಿ ವನ್ಯಜೀವಿಗಳ ಸಂರಕ್ಷಣೆ, ಕಾಡು ಜನರ ಬೆಳವಣಿಗೆ, ವೈಜ್ಞಾನಿಕ ಸಂಶೋಧನೆ ಇವೆಲ್ಲವೂ ನಡೆಯಲಿದೆ. .
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


56. ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮದ ಕಲ್ಪನೆ ಏನು ಎಂದರೆ ಪ್ರತಿಯೊಬ್ಬ ವಯಸ್ಕ ನಾಗರಿಕರಿಗೆ ಸರ್ಕಾರವೇ ಮೂಲಭೂತ ಜೀವನ ವೆಚ್ಚವನ್ನು ಪಾವತಿಸುವುದು.
— ಈ ಕಲ್ಪನೆಯನ್ನು ಮೊದಲಿಗೆ ಪ್ರಸ್ತುತ ಪಡಿಸಿದ್ದು ನೊಬೆಲ್ ಪ್ರಶಸ್ತಿ ವಿಜೇತ ಬರ್ಟ್ರೆಂಡ್ ರಸೆಲ್
— ಸಾರ್ವತ್ರಿಕ ಮೂಲ ಆದಾಯ ಯೋಜನೆಯ ಪ್ರಕಾರ ನಾಗರಿಕರು ತಮ್ಮ ಹಣಕಾಸು ಹಿನ್ನೆಲೆ, ಔದ್ಯೋಗಿಕ ಸ್ಥಿತಿಗತಿ ಅಥವಾ ಇತರ ಗುಣಗಳೇನೇ ಇದ್ದರೂ ಸರ್ಕಾರದಿಂದ ನಿರ್ದಿಷ್ಟವಾದ ನಿಯಮಿತ ಆದಾಯವನ್ನು ಪಡೆಯುತ್ತಾರೆ. ಅವರು ಆ ದೇಶದ ಪೌರರಾಗಿರುವುದು ಮತ್ತು ಕಾನೂನುಬದ್ಧವಾಗಿ ವಯಸ್ಕರಾಗಿರುವುದು ಈ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ನಾಗರಿಕರ ಏಕೈಕ ಅರ್ಹತೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

57.  ಪ್ರಮುಖ ಪರ್ಯಾಯ ದ್ವೀಪ (Peninsular) ಪ್ರದೇಶಗಳು          ಭೂವೈಜ್ಞಾನಿಕ ಕಾಲಾವಧಿ ಮತ್ತು ಯುಗಗಳು
ಎ. ಡೆಕ್ಕನ್ ಟ್ರ್ಯಾಪ್ಸ್                       - ಕ್ರೆಟೇಶಿಯಸ್ ಯುಗ
ಬಿ. ಪಶ್ಚಿಮ ಘಟ್ಟಗಳು                     - ಲೇಟ್ ಸೆನೊಜಾಯಿಕ್ ಯುಗ
ಸಿ. ಅರಾವಳಿ -                             - ಪ್ರಿ-ಕ್ಯಾಂಬ್ರಿಯನ್ ಯುಗ
ಡಿ. ನರ್ಮದಾ-ತಪತಿ - ಮೆಕ್ಕಲು ನಿಕ್ಷೇಪಗಳು       - ಪ್ಲೀಸ್ಟೋಸೀನ್ ಅವಧಿ
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


58. ಸಂಗಮ ಸಾಹಿತ್ಯದಲ್ಲಿ ಬರುವ ಚೋಳ ಅರಸರ ಎರ‍ಡು ಹೆಸರುಗಳೆಂದರೆ, ಕರಿಕಾಲ ಚೋಳ ಮತ್ತು ಕೋಸೆಂಗಾನನ್. ಉತ್ತರಾಧಿಕಾರಿಗಳನ್ನು ನೇಮಿಸುವ, ಅವರ ಸಂಬಂಧಗಳನ್ನು ಇತರೊಂದಿಗೆ ಬೆಸೆಯುವ ಮತ್ತು ಇದೇ ಅವಧಿಯಲ್ಲಿ ಹಲವಾರು ಬೇರೆ ರಾಜಕುಮಾರರೊಂದಿಗಿನ ಸಂಬಂಧಗಳಿಗೆ ಸರಿಯಾದ ಮಾನದಂಡಗಳಿರಲಿಲ್ಲ.
- ಉರೈಯೂರ್ (ಈಗಿನ ತಿರುಚನಾಪಳ್ಳಿಯ ಒಂದು ಭಾಗ) ಚೋಳರ ಹಳೇಯ ರಾಜಧಾನಿಯಾಗಿತ್ತು..
- ಕಾವೇರಿಪಟ್ಟಣಂ ಕೂಡಾ ಮೊದಲಿಗೆ ಚೋಳರ ರಾಜಧಾನಿಯಾಗಿತ್ತು.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


59. ಅಂತರರಾಷ್ಟ್ರೀಯ ವಲಸೆಯ ವರದಿ (ಇಂಟರ್ನ್ಯಾಷನಲ್ ಮೈಗ್ರೇಶನ್ ರಿಪೋರ್ಟ್) 2017 ಯನ್ನು '(ಡಿಸೆಂಬರ್ 18 ರಂದು)-ಇಂಟರ್ನ್ಯಾಷನಲ್ ಮೈಗ್ರೇಶನ್ ಡೇ' ಸಂದರ್ಭದಲ್ಲಿ  ಯುಎನ್ ಡಿಪಾರ್ಟ್ ಮೆಂಟ್ ಆಫ್ ಎಕನಾಮಿಕ್ ಅಂಡ್ ಸೋಶಿಯಲ್ ಅಫೇರ್ಸ್ (UNDSA-ಯುಎನ್ ಡಿಎಸ್ಎ) ವು ಬಿಡುಗಡೆ ಮಾಡಿದೆ.
— ಇದರ ಪ್ರಕಾರ,
- ವಿದೇಶದಲ್ಲಿ ವಲಸಿಗರ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ.
- ಅಂತರರಾಷ್ಟ್ರೀಯ ವಲಸೆ ಪ್ರಪಂಚದ ಅನೇಕ ಭಾಗಗಳಲ್ಲಿ ಜನಸಂಖ್ಯಾ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡುತ್ತದೆ ಮತ್ತು ಕೆಲವು ದೇಶಗಳಲ್ಲಿ ಅಥವಾ ಪ್ರದೇಶಗಳಲ್ಲಿ ಜನಸಂಖ್ಯೆಯ ಕುಸಿತವನ್ನು ಹಿಮ್ಮೆಟ್ಟಿಸುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


60. ಜಿಎಸ್‌ಟಿಯ ಪ್ರಮುಖ ವೈಶಿಷ್ಟ್ಯಗಳು :
* ಜಿಎಸ್‌ಟಿಯು ಪರೋಕ್ಷ ತೆರಿಗೆಯಾಗಿದೆ.
* ವರ್ಷಕ್ಕೆ  ₹ 20 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ಅನ್ವಯವಾಗದು.
* ರಾಜ್ಯ ಸರ್ಕಾರಗಳಿಗೆ 5 ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡಲಿರುವ ಕೇಂದ್ರ ಸರ್ಕಾರ.
* ಸರಕು ಮತ್ತು ಸೇವೆಗಳ ತೆರಿಗೆ ದರಗಳನ್ನು  ನಾಲ್ಕು ಹಂತದಲ್ಲಿ (ಶೇ 5, 12, 18 ಮತ್ತು 28) ನಿಗದಿ.
* ವಿಲಾಸಿ ಸರಕು,  ತಂಪು ಪಾನೀಯ ಮತ್ತು  ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಮತ್ತು ಪಾನ್‌ ಮಸಾಲಾ     ಉತ್ಪನ್ನಗಳ ಮೇಲೆ (ಬೀಡಿ ಹೊರತುಪಡಿಸಿ) ವಿಧಿಸಬಹುದಾದ ಸೆಸ್‌ನ ಗರಿಷ್ಠ ದರ ಶೇ 15ರಷ್ಟಕ್ಕೆ ನಿಗದಿ.
* ಜಿಎಸ್‌ಟಿ  ಗರಿಷ್ಠ ದರ ಶೇ 40ರಷ್ಟು

... ಮುಂದುವರೆಯುವುದು. 

No comments:

Post a Comment