"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 17 February 2018

●. ಸಾಮಾನ್ಯ ಅಧ್ಯಯನ - ಪತ್ರಿಕೆ 4 : ಜೈವಿಕ ಸಂವರ್ಧನೆ (biomagnification)

●. ಸಾಮಾನ್ಯ ಅಧ್ಯಯನ - ಪತ್ರಿಕೆ 4  : ಜೈವಿಕ ಸಂವರ್ಧನೆ
 (biomagnification)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)


ಆಹಾರ ಸರಪಳಿಗಳಲ್ಲಿ ಕೇವಲ ಪೋಷಕಾಂಶಗಳು ಮಾತ್ರ ವಿನಿಮಯವಾಗುವುದಿಲ್ಲ. ಕೆಲವೊಮ್ಮೆ ವಿಷಕಾರಿ ವಸ್ತುಗಳೂ ಸಹ ಒಂದು ಪೋಷಣಾ ಸ್ತರದಿಂದ ಇನ್ನೊಂದು ಪೋಷಣಾ ಸ್ತರಕ್ಕೆ ವರ್ಗಾವಣೆಗೊಳ್ಳುತ್ತವೆ. ಇಂಥ ಬಹುತೇಕ ಸಂದರ್ಭಗಳಲ್ಲಿ ಹಾನಿಕಾರಕ ವಸ್ತುಗಳ ಸಾರತೆ ಮೇಲಿನ ಸ್ತರಗಳಿಗೆ ಸಾಗುತ್ತಿದ್ದಂತೆ ಹೆಚ್ಚುತ್ತಾ ಹೋಗುತ್ತದೆ.

ಡಿಡಿಟಿ , ಪಾದರಸ, ಕ್ಯಾಡ್ಮಿಯಂ ಮೊದಲಾದ ಹಾನಿಕಾರಕ ಅಥವಾ ಮಾಲಿನ್ಯಕಾರಕ ವಸ್ತುಗಳ ಸಾರತೆಯು ಆಹಾರ ಸರಪಳಿಯ ಒಂದೊಂದು ಕೊಂಡಿಯಲ್ಲಿ ಮೇಲೆ ಸಾಗುತ್ತಿದ್ದಂತೆ, ಕ್ರಮೇಣ ಹೆಚ್ಚುತ್ತಾ ಹೋಗುವ ಈ ಪ್ರಕ್ರಿಯೆಗೆ ಜೈವಿಕ ಸಂವರ್ಧನೆ (biomagnification) ಎಂದು ಹೆಸರು.

ಜೈವಿಕ ಸಂವರ್ಧನೆಗೆ ಅತ್ಯಂತ ಪರಿಚಿತ ಉದಾಹರಣೆ ಎಂದರೆ ಬಹುತೇಕ ಆಹಾರ ಸರಪಳಿಗಳಲ್ಲಿ ಇಂದು ನಾವು ಕಾಣುತ್ತಿರುವ ಡಿಡಿಟಿ ಸಾರತೆಯ ಏರಿಕೆ. ವಿಶೇಷವಾಗಿ ಸೊಳ್ಳೆಗಳನ್ನು ನಿರ್ನಾಮಮಾಡಲು ಕೀಟನಾಶಕ ಡಿಡಿಟಿ  ಯನ್ನು ವಿವೇಚನಾರಹಿತವಾಗಿ ಬಳಸಿರುವ ಪರಿಣಾಮವಾಗಿ ಇಂದು ಸಣ್ಣ ಮೀನುಗಳ ಹಾಗೂ ಹಕ್ಕಿಗಳ ದೇಹದಲ್ಲಿನ ಅಂಗಾಂಶಗಳಲ್ಲಿ ಡಿಡಿಟಿ  ಸಂಗ್ರಹವಾಗಿರುವುದು ಗೋಚರಿಸಿದೆ. ಡಿಡಿಟಿ  ತಾಯಂದಿರ ಎದೆಹಾಲಿನಲ್ಲೂ ಪತ್ತೆಯಾಗಿದೆ.

ಜೈವಿಕ ಸಂವರ್ಧನೆಯು ಆಹಾರ ಸರಪಳಿಗಳಲ್ಲಿರುವ ಸಮತೋಲನವನ್ನು ಹಾಳುಗೆಡವುತ್ತದೆ. ವಿಶೇಷವಾಗಿ ಅದು ಆಹಾರ ಸರಪಳಿಯ ಮೇಲಿನ ಸ್ತರಗಳಲ್ಲಿರುವ ಜೀವಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

3 comments: