"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 6 March 2018

☀️ PART VI— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್ (IAS/KAS Exam Preparation Notes Bits)

☀️ PART VI— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್
(IAS/KAS Exam Preparation Notes Bits)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)


...ಮುಂದುವರೆದ ಭಾಗ.


ಸ್ಪರ್ಧಾಳುಗಳ ಗಮನಕ್ಕೆ:
ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ. 
Gmail : yaseen7ash@gmail.com


61. ಜಾಗತಿಕ ಆರ್ಥಿಕ ವೃದ್ಧಿ ದರವು (ಜಿಡಿಪಿ) 2017 ಮತ್ತು 2018ರಲ್ಲಿ ಕ್ರಮವಾಗಿ ಶೇ 3.6 ಮತ್ತು ಶೇ 3.7ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜಿಸಿದೆ. ಇದು ಈ ಹಿಂದಿನ ವರ್ಷಗಳ ಸರಾಸರಿ ಮಟ್ಟಕ್ಕಿಂತ ಹೆಚ್ಚಿಗೆ ಇದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


62. ಪೂರ್ವದ ಹಿಮಾಲಯದಲ್ಲಿ ಆಲ್ಪೈನ್ ಸಸ್ಯವರ್ಗ 4000 ಮೀಟರ್ ವರೆಗೆ ಕಂಡುಬರುತ್ತದೆ ಏಕೆಂದರೆ ಪೂರ್ವ ಹಿಮಾಲಯದಲ್ಲಿ ಮಾನ್ಸೂನ್ ಮಳೆ ಪಶ್ಚಿಮ ಹಿಮಾಲಯಕ್ಕಿಂತ ಹೆಚ್ಚಾಗಿರುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


63. 2017-18ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ
— ಜಿಎಸ್ ಟಿ ಅಂಕಿಅಂಶದ ಪ್ರಾಥಮಿಕ ವಿಶ್ಲೇಷಣೆ ಪ್ರಕಾರ, ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆ ಶೇಕಡಾ 50ರಷ್ಟು ಏರಿಕೆಯಾಗಿದ್ದು ಸಣ್ಣ ಉದ್ಯಮಿಗಳು ಸೇರಿದಂತೆ ಸ್ವಯಂಪ್ರೇರಿತ ತೆರಿಗೆ ದಾಖಲಾತಿಗಳ ಸಂಖ್ಯೆ ಹೆಚ್ಚಾಗಿದೆ.
— ಸರಕು ಮತ್ತು ಸೇವೆಗಳ ಭಾರತದ ಆಂತರಿಕ ವಹಿವಾಟುಗಳಲ್ಲಿ ಏರಿಕೆಯಾಗಿದ್ದು ಒಟ್ಟು ದೇಶೀಯ ಉತ್ಪನ್ನಗಳಲ್ಲಿ ಇದರದ್ದು ಶೇಕಡಾ 60ರಷ್ಟು ಕೊಡುಗೆಯಿದೆ.
— ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳು ನಾಡು ಮತ್ತು ತೆಲಂಗಾಣ ರಾಜ್ಯಗಳು ಭಾರತದ ರಫ್ತಿನಲ್ಲಿ ಶೇಕಡಾ 70ರಷ್ಟು ಕೊಡುಗೆ ನೀಡಿವೆ.
— ಲಿಂಗಾನುಪಾತದ ಸರಾಸರಿಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಕಡಿಮೆಯಿದ್ದು 63 ದಶಲಕ್ಷ ಮಹಿಳೆಯರ ಕೊರತೆಯಿದೆ.
— 2005-2006ರಲ್ಲಿ ಶೇಕಡ 36ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದು ಇದೀಗ 2015-16ರಲ್ಲಿ ಶೇಕಡ 24ರಷ್ಟು ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


64. ಜಾಗತಿಕ ಪರಿಸರ ಸಾಧನಾ ಸೂಚ್ಯಂಕ(ಜಿಇಪಿಐ) ಬಿಡುಗಡೆ ಮಾಡಿದ 2017 ರ ವರದಿಯ ಪ್ರಕಾರ ಗ್ರೀನ್ ರ್ಯಾಂಕಿಂಗ್ ನಲ್ಲಿ ಸ್ವಿಜರ್ಲ್ಯಾಂಡ್ ಮೊದಲ ಸ್ಥಾನ ಪಡೆದಿದ್ದರೆ, ಫ್ರಾನ್ಸ್, ಡೆನ್ಮಾರ್ಕ್, ಮಾಲ್ಟಾ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದಿವೆ. ಭಾರತ 180 ದೇಶಗಳ ಪೈಕಿ 177ನೇ ಸ್ಥಾನ ಪಡೆದಿದೆ.
— 2016ರಲ್ಲಿ ಜಿಇಪಿಐ ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತ 141ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ 36 ಸ್ಥಾನ ಕುಸಿತ ಕಂಡಿದ್ದು 177ನೇ ಸ್ಥಾನ ಪಡೆದಿದೆ.
— ಜಿಇಪಿಐ ಒಟ್ಟು 180 ದೇಶಗಳ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ.
— ಸಮೀಕ್ಷೆಯಲ್ಲಿ ದೇಶದ ಗಾಳಿ, ನೀರಿನ ಗುಣಮಟ್ಟ, ನೈರ್ಮಲ್ಯ, ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಪ್ರಮಾಣ, ಅರಣ್ಯದ ಪ್ರಮಾಣ, ಅರಣ್ಯ ನಾಶದ ತೀವ್ರತೆ ಹೀಗೆ ಒಟ್ಟು 10 ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಿ ಅಂಕಗಳನ್ನು ನೀಡಲಾಗಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


65. ದೇಶದ ಪ್ರಮುಖ ಪರ್ವತ ಶ್ರೇಣಿಗಳು :
- ಅಜಂತಾ ಪರ್ವತ ಶ್ರೇಣಿ ಒಂದು ಸೀಮಿತ ವ್ಯಾಪ್ತಿಯನ್ನು ಹೊಂದಿದ್ದು, ಇದು ಮಹಾರಾಷ್ಟ್ರದಲ್ಲಿದೆ.
- ಅರಾವಳಿ ಪರ್ವತ ಶ್ರೇಣಿಗಳು ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯನ್ನು ಒಳಗೊಳ್ಳುತ್ತವೆ.
- ಸತ್ಪುರ ಶ್ರೇಣಿಗಳು ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಕಂಡುಬರುತ್ತವೆ.
- ಸಹ್ಯಾದ್ರಿ ಶ್ರೇಣಿಗಳು  ಗುಜರಾತ್, ಮಹಾರಾಷ್ಟ್ರ ಗಡಿಯಿಂದ ಪ್ರಾರಂಭವಾಗುತ್ತದೆ ಮತ್ತು ಗೋವಾ, ಕರ್ನಾಟಕವನ್ನು ದಾಟಿ ಕೇರಳದ ಕೇಪ್ ಕೊಮ್ರಿನ್ (Cape Comrin) ತುದಿಯವರೆಗೆ ತಲುಪುತ್ತದೆ.
- ಅಜಂತಾ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಕಂಡುಬರುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


66. 1945ರಲ್ಲಿ ಸ್ಥಾಪಿಸಲ್ಪಟ್ಟ ಮತ್ತು ಒಂದು ಸಾರ್ವತ್ರಿಕ ಅಂತರಸರ್ಕಾರೀಯ ಸರ್ಕಾರಿ ಸಂಘಟನೆಯಾಗಿ ಮುಂದುವರಿಯುತ್ತಿರುವ ವಿಶ್ವಸಂಸ್ಥೆಯು ಆರಂಭಿಕ ಹಂತದಲ್ಲಿ 51 ಸದಸ್ಯರಾಷ್ಟ್ರಗಳನ್ನು ಒಳಗೊಂಡಿದ್ದ ವಿಶ್ವಸಂಸ್ಥೆಯ ಸದಸ್ಯತ್ವವು, ಭಾರತವೂ ಸೇರಿದಂತೆ ಪ್ರಸ್ತುತ ಇಂಥ 193 ಸದಸ್ಯ ರಾಷ್ಟ್ರಗಳನ್ನುನ ಹೊಂದಿದೆ.
— ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳನ್ನು ನೆರವೇರಿಸುವ ಸಲುವಾಗಿ, ಭದ್ರತಾ ಮಂಡಳಿಯಂಥ ಅಂಗದ ಮೂಲಕ ಅದಕ್ಕೊಂದು ‘ಸೈನಿಕ ಬಲ’ವನ್ನು ಒದಗಿಸಲಾಗಿದೆ. ಇದು ಐದು ಕಾಯಂ ಸದಸ್ಯರಾಷ್ಟ್ರಗಳನ್ನು ಒಳಗೊಂಡಿದ್ದು, ಇಂಥ ಪ್ರತಿಯೊಂದು ಕಾಯಂ ಸದಸ್ಯರಾಷ್ಟ್ರಕ್ಕೂ ಯಾವುದೇ ನಿರ್ಣಯದ ಕುರಿತಾಗಿ ‘ನಿರಾಕರಣಾಧಿಕಾರ’ (ವೀಟೋ) ಚಲಾಯಿಸುವ ಸ್ವಾತಂತ್ರ್ಯ ನೀಡಲಾಗಿದೆ. ಜತೆಗೆ, ಸರದಿಯ ಆಧಾರದ ಮೇಲೆ ನೇಮಕಗೊಳ್ಳುವ 10 ತಾತ್ಕಾಲಿಕ ಸದಸ್ಯರಾಷ್ಟ್ರಗಳನ್ನೂ ಭದ್ರತಾ ಮಂಡಳಿ ಹೊಂದಿದೆ.
— ಚೀನಾ, ಫ್ರಾನ್ಸ್, ಇಂಗ್ಲೆಂಡ್ (ಬ್ರಿಟನ್), ರಷ್ಯಾ ಮತ್ತು ಅಮೆರಿಕ 5 ಕಾಯಂ ಸದಸ್ಯರಾಷ್ಟ್ರಗಳೆನಿಸಿಕೊಂಡಿದ್ದರೆ, ಓರ್ವ ತಾತ್ಕಾಲಿಕ ಸದಸ್ಯರಾಷ್ಟ್ರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 7 ಬಾರಿ ಸೇವೆ ಸಲ್ಲಿಸಿರುವ ಭಾರತವು, ಕಾಯಂ ಸದಸ್ಯತ್ವಕ್ಕಾಗಿನ ಯತ್ನವೂ ಸೇರಿದಂತೆ, ಭದ್ರತಾ ಮಂಡಳಿಯ ಸುಧಾರಣೆ/ಮರುರೂಪಣೆಗೆ ಸಂಬಂಧಿಸಿದ ಹೋರಾಟದ ಮುಂಚೂಣಿಯಲ್ಲಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


67. ಜಿಎಸ್‌ಟಿಯು ಹೆಚ್ಚುವರಿ ತೆರಿಗೆಯಂತೂ ಆಗಿರುವುದಿಲ್ಲ. ಸಿಜಿಎಸ್‌ಟಿಯು (ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆಯು) ಕೇಂದ್ರ ಅಬಕಾರಿ ಸುಂಕ, ಸೇವಾ ತೆರಿಗೆ ಹಾಗೂ ಹೆಚ್ಚುವರಿಯಾಗಿ ಕೇಂದ್ರ ಮಟ್ಟದಲ್ಲಿನ ಸುಂಕಗಳನ್ನು ಒಳಗೊಂಡಿರುತ್ತದೆ. ರಾಜ್ಯ ಮಟ್ಟದಲ್ಲಿಯಾದರೆ ಮೌಲ್ಯವರ್ಧಿತ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ, ನಾಕಾ ತೆರಿಗೆ, ಲಾಟರಿ ತೆರಿಗೆ, ವಿದ್ಯುತ್ ಸುಂಕ, ಸರಕುಗಳ ಹಾಗೂ ಸೇವೆಗಳ ಪೂರೈಕೆಗೆ ಹಾಗೂ ಖರೀದಿ ತೆರಿಗೆಗೆ ಸಂಬಂಧಿಸಿದಂತೆ ಸರ್ಚಾರ್ಜ್‌ ಇವೆಲ್ಲವನ್ನೂ ಒಳಗೊಂಡಿರುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


68. ಭಾರತದ ಮೇಲೆ ಪ್ರಪ್ರಥಮ ಬಾರಿಗೆ ಮಂಗೋಲರು ಚೆಂಗೀಸ್ ಖಾನನ ನೇತೃತ್ವದಲ್ಲಿ ದಾಳಿ ಮಾಡಿದರು. ಇಲ್ತಮಶ್ ಅವರನ್ನು ಯಶಸ್ವಿಯಾಗಿ ಹಿಮ್ಮೆಟಿಸಿದನು. ಈ ಸಾಧನೆಗಳಿಂದಾಗಿ ಬಾಗ್ದಾದಿನ ಖಲೀಫನು ಇಲ್ತಮಶ್‍ನಿಗೆ ಅಧಿಕೃತ ಅಧಿಕಾರ ಸಮ್ಮತಿ ಪತ್ರ ನೀಡಿದನು.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


69. ಯಾವುದೇ ಒಂದು ಪ್ರದೇಶದಲ್ಲಿ ವಿವಿಧ ಬಗೆಯ ಸಸ್ಯಗಳು ಪ್ರಾಣಿಗಳ ಹಾಗೂ ಇನ್ನಿತರ ಜೀವಿಗಳ ಜೀವಿಸಂದಣಿಗಳಿರುತ್ತವೆ. ಈ ಎಲ್ಲ ಜೀವಿಸಂದಣಿಗಳನ್ನು ಒಟ್ಟಿಗೆ ಜೀವಿಸಮುದಾಯ(biotic community) ಎಂದು ಕರೆಯುತ್ತಾರೆ. ಜೀವಿಸಮುದಾಯದ ಜೀವಿಗಳು ಪರಸ್ಪರ ಪ್ರತಿವರ್ತಿಸುತ್ತವೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


70. ಈ ಕೆಳಕಂಡ ವಿಷಯಗಳು ಸಂವಿಧಾನದ ಏಳನೇಯ ಅನುಸೂಚಿಯ ಸಮವರ್ತಿ ಪಟ್ಟಿ - III ರಲ್ಲಿ ಒಳಗೊಳ್ಳುತ್ತವೆ.
— ನ್ಯಾಯಾಲಯ ನಿಂದನೆ ಒಳಪಡುತ್ತದೆ ಆದರೆ ಸರ್ವೋಚ್ಚ ನ್ಯಾಯಾಲಯದ ನಿಂದನೆ ಸೇರುವುದಿಲ್ಲ.
— ಮಾನಕಗಳನ್ನು ನಿಗದಿಪಡಿಸುವುದನ್ನು ಹೊರತುಪಡಿಸಿ ತೂಕಗಳು ಮತ್ತು ಅಳತೆಗಳು.


...ಮುಂದುವರೆಯುದು.

No comments:

Post a Comment