"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 7 December 2017

☀️ Part-5.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-5.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.



35. ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ವಿಭಿನ್ನವಾಗಿರುವ ದೇಶದ ವಿವಿಧ ಬುಡಕಟ್ಟು ಸಮುದಾಯಗಳಿಗೆ ಒಂದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ನಾವು ಮಾಡುತ್ತಿರುವ ದೊಡ್ಡ ತಪ್ಪು ಎಂಬುದು ತಜ್ಞರ ಅಭಿಪ್ರಾಯ. ಈ ವಾದ ಎಷ್ಟರಮಟ್ಟಿಗೆ ಔಚಿತ್ಯ? ವಿವರಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


36. ನಗದುರಹಿತ ವ್ಯವಹಾರಗಳ ಅನುಕೂಲ ಮತ್ತು ಅನಾನುಕೂಲಗಳು.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)


37. ಇತ್ತೀಚೆಗೆ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳ ಸಹಯೋಗದಲ್ಲಿ ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ಕೈಗೊಂಡಿರುವ ಕ್ರಮ ಯೋಜನೆಗಳನ್ನು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


38. " ಹಳ್ಳಿಗರಿಗೆ ಕೆಲಸ ಕೊಡಬೇಕಾಗಿರುವುದು ಯಂತ್ರಗಳ ಮೂಲಕವಲ್ಲ, ಅವರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಗುಡಿ ಕೈಗಾರಿಕೆಗಳ ಮೂಲಕ. - ಆಧುನಿಕ ಗ್ರಾಮೀಣ ಗುಡಿಕೈಗಾರಿಕೆಗಳ ಅಭಿವೃದ್ದಿ ಪ್ರಸ್ತುತತೆಯೊಂದಿಗೆ ಗಾಂಧೀಜಿಯವರ ಈ ಮಾತು ಇವತ್ತಿನ ಸನ್ನಿವೇಶಕ್ಕೆ ಎಷ್ಟರಮಟ್ಟಿಗೆ ಔಚಿತ್ಯ. ಚರ್ಚಿಸಿ.?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


39.  ಬುಡಕಟ್ಟು ಆರ್ಥಿಕತೆಯನ್ನು ಸಮಗ್ರ ಆರ್ಥಿಕತೆಗೆ ಒಳಪಡಿಸುವ ಬದಲು ತಾಂತ್ರಿಕ - ಪರಿಸರ ಆಧಾರಿತ ಕೌಶಲಗಳನ್ನು ಜನರಲ್ಲಿ ಬೆಳೆಸುವುದು ಉತ್ತಮ ಎನ್ನುವುದು ಇತ್ತೀಚೆಗೆ ಕೇಳಿಬರುತ್ತಿರುವ ಕೆಲವರ ವಾದ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

40. ಗರಿಷ್ಠ ಮುಖಬೆಲೆಯ ನೋಟು ರದ್ದತಿ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ದೇಶದ ಅರ್ಥವ್ಯವಸ್ಥೆಯಲ್ಲಿ ಆದ ಬದಲಾವಣೆಗಳನ್ನು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

41. ಸಾಂಪ್ರದಾಯಿಕ ವ್ಯವಸ್ಥೆಯಿಂದ ಡಿಜಿಟಲ್‌ ಯುಗಕ್ಕೆ ಬದಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ  ಮಾಹಿತಿ ಕಳ್ಳತನ, ಸೈಬರ್‌ ದಾಳಿಯಂತಹ ಅನೇಕ ಡಿಜಿಟಲ್‌ ಯುಗದ ಸವಾಲುಗಳು ಎದುರಾಗಿವೆ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)

... ಮುಂದುವರೆಯುವುದು. 

No comments:

Post a Comment