"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 13 December 2017

☀️ Part-7.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-7.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


49. "ಭಾರತದಲ್ಲಿ ಅಂಗ್ಲರ ಅಧಿಪತ್ಯದ ಆಸ್ತಿಭಾರವನ್ನು ಹಾಕಿದ ಶ್ರೇಯಸ್ಸು ರಾಬರ್ಟ್ ಕ್ಲೈವ್ ನದ್ದಾದರೆ, ಆಂಗ್ಲರ ಅಧಿಕಾರವನ್ನು ಸಂಘಟಿಸಿ ಸುಭದ್ರಗೊಳಿಸಿದ ಶ್ರೇಯಸ್ಸು ವಾರನ್ ಹೇಸ್ಟಿಂಗ್ಸನದಾಗಿದೆ"—ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


50. 'ಡಿಜಿಟಲ್ ಕ್ರಾಂತಿ' ಎಂದರೇನು? 'ಡಿಜಿಟಲ್ ಕ್ರಾಂತಿ'ಯ ಬಗ್ಗೆ ಸಾರ್ವಜನಿಕರಲ್ಲಿ, ಇರುವ ಹಿಂಜರಿಕೆ, ಸಂಶಯಗಳನ್ನು ನಿವಾರಿಸುವಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು ಉಲ್ಲೇಖಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


51. 'ಭಾರತೀಯ ಉತ್ಪಾದನಾ ವ್ಯವಸ್ಥೆ'ಯು ನಮ್ಮ ನೆರೆಯ ದೇಶ ಚೀನದ ಗಾತ್ರ ಮತ್ತು ಮೊತ್ತವನ್ನು ಮುಟ್ಟಿಲ್ಲವಾದರೂ ಉನ್ನತ ಮಟ್ಟವನ್ನು ತಲುಪಲು ತಾಂತ್ರಿಕವಾಗಿ ಸಿದ್ಧವಾಗಿದೆ ಎಂದೆನ್ನಬಹುದೆ?  ಇತ್ತೀಚಿನ ದೇಶದ ಸರಿಯಾದ ಉತ್ಪಾದನೆ (ಜಸ್ಟ್ ಇನ್ ಟೈಮ್) ಮತ್ತು ವಿಕೇಂದ್ರೀಕೃತ ಉತ್ಪಾದನೆಗಳನ್ನು ಗಮನದಲ್ಲಿಟ್ಟುಕೊಂಡು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


52. 'ಮಿತವ್ಯಯೀ ಎಂಜಿನಿಯರಿಂಗ್' ಎಂದರೇನೆಂದು ಅರ್ಥೈಸುವಿರಿ? ಸರಕು ಮತ್ತು ಸೇವೆಗಳ ಉತ್ಪಾದನೆಯ ಮೇಲೆ ಇದರ ಪ್ರಭಾವವನ್ನು ಚರ್ಚಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


53. ವ್ಯಾಪಾರಿ ಸಂಸ್ಥೆಯಾಗಿದ್ದ ಕಂಪನಿಯನ್ನು ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ರಾಬರ್ಟ್ ಕ್ಲೈವ್ ನ ಪಾತ್ರವನ್ನು ವಿಮರ್ಶಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


54.ಉತ್ತರ ಭಾರತದ ಬುಡಕಟ್ಟು ಸಮುದಾಯಗಳ ಸಮಸ್ಯೆಗಳು ದಕ್ಷಿಣ ಭಾರತದ ಬುಡಕಟ್ಟು ಸಮುದಾಯಗಳ  ಸಮಸ್ಯೆಗಳಿಗಿಂತ ಸಂಪೂರ್ಣವಾಗಿ ಭಿನ್ನ. ಅಂಥದರಲ್ಲಿ ಒಂದು ನಿರ್ದಿಷ್ಟ ಅಭಿವೃದ್ಧಿ ಯೋಜನೆ ದೇಶದ ಎಲ್ಲಾ ಬುಡಕಟ್ಟು ಸಮುುದಾಯಗಳಿಗೂ ಸಮಗ್ರವಾಗಿ ಏಕಕಾಲಕ್ಕೆ ಉಪಯುಕ್ತವಾಗುತ್ತದೆ ಎಂಬ ಕಲ್ಪನೆಯೇ ಅರ್ಥಹೀನ ಎನ್ನುವುದು ಮಾನವಶಾಸ್ತ್ರಜ್ಞರ ಅಭಿಪ್ರಾಯ. ಇದಕ್ಕೆ ವಿಮರ್ಶಾತ್ಮಕವಾಗಿ ನಿಮ್ಮ ವಿಚಾರಗಳನ್ನು ನೀಡಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


55. (ದೇಶ / ರಾಜ್ಯ)ದಲ್ಲಿರುವ ಚಾರಿತ್ರಿಕ, ಸಾಂಸ್ಕೃತಿಕ ಅಥವಾ ಪ್ರಾಕೃತಿಕ ವಿಶ್ವೋತ್ಕೃಷ್ಟ ಸ್ಥಳಗಳನ್ನು ಸಂರಕ್ಷಿಸಿ, ಅವುಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸರ್ಕಾರವು ಯಾವ್ಯಾವ ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿದೆ? ಇವು ಪರಿಣಾಮಕಾರಿಯಾಗಿವೆಯೇ?
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)

... ಮುಂದುವರೆಯುವುದು. 

No comments:

Post a Comment