"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 5 December 2017

☀️ Part-3.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-3.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers


 ಗೆಳೆಯರೇ... ಮುಂಬರುವ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜ್ಞಾನದ ಪರಿಮಿತಿಯಲ್ಲಿ ಮುಖ್ಯ ಪರೀಕ್ಷೆಗಾಗಿ (ಸಾಮಾನ್ಯ ಅಧ್ಯಯನ ಎಲ್ಲಾ ಪತ್ರಿಕೆಗಳನ್ನೊಳಗೊಂಡಂತೆ) ಕೆಲವು ಮಾದರಿ ಪ್ರಶ್ನೆಗಳನ್ನು ತಯಾರಿಸಿ ನಿಮ್ಮ °ಸ್ಪರ್ಧಾಲೋಕ°ದಲ್ಲಿ ಮುಂದಿಟ್ಟಿರುವೆನು. ಇವು ಸಾಧ್ಯವಾದಷ್ಟು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿರುವಂಥವು. ಇವೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)

Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


21.  ಜನರಿಗೆ ತಮ್ಮ ಪ್ರತಿನಿಧಿಯನ್ನು ಆಯ್ಕೆಮಾಡುವ ಹಕ್ಕು ಇರುವುದಾದರೆ, ಇಂಥ ಪ್ರತಿನಿಧಿಗಳು ದುಷ್ಕೃತ್ಯಗಳಲ್ಲಿ ತೊಡಗಿದಾಗ ಅಥವಾ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದಾಗ, ಅವರನ್ನು ಕಿತ್ತುಹಾಕುವ ಅಧಿಕಾರವೂ ಜನರಿಗಿರಬೇಕು ಎಂಬ ಅಭಿಪ್ರಾಯ ತರ್ಕಸಮ್ಮತ ಮತ್ತು ನ್ಯಾಯಸಮ್ಮತವೇ? ವಿವರಿಸಿ.
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)


22. ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸುವ ಕ್ರಮಗಳನ್ನು ಉಲ್ಲೇಖಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

     
23. ದೇಶಿ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದರೊಂದಿಗೆ, ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಲು ಇತ್ತೀಚೆಗೆ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳನ್ನು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


24. ದೇಶದ ಆಂತರಿಕ ಭದ್ರತೆಗೆ ಬೆದರಿಕೆಯಾಗಿರುವ ಭಯೋತ್ಪಾದನೆ ಮತ್ತು ಮೂಲಭೂತವಾದೀಕರಣವನ್ನು ಹತ್ತಿಕ್ಕಲು ಮತ್ತು ಕನಿಷ್ಠ ಮಟ್ಟಕ್ಕಿಳಿಸಲು ಇತ್ತೀಚೆಗೆ ಸರ್ಕಾರ ಕೈಗೊಂಡ ಅಗತ್ಯ ಕ್ರಮಗಳನ್ನು ಅವಲೋಕಿಸಿ.
(ಪತ್ರಿಕೆ 1 — ಪ್ರಬಂಧ)


25. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆ
(ಪತ್ರಿಕೆ 1 — ಪ್ರಬಂಧ)


26. ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ದೇಶಿ ರಫ್ತು ವಲಯವು ಎದುರಿಸುತ್ತಿರುವ ಪ್ರತಿಕೂಲ ಸಮಸ್ಯೆಗಳಿಗೆ ಕಾರಣೀಭೂತವಾದ ಅಂಶಗಳು ಯಾವವು? ರಫ್ತು ವಲಯದ ಉತ್ತೇಜನಕ್ಕಾಗಿ ತಾವು ಯಾವ್ಯಾವ ಕ್ರಮಗಳನ್ನು ಸೂಚಿಸುವಿರಿ?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


27. ದೇಶಿ ಉದ್ದಿಮೆ ಸಂಸ್ಥೆಗಳು ಜಾಗತಿಕ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ತ್ವರಿತಗೊಳಿಸಲು ಇತ್ತೀಚೆಗೆ ಸರ್ಕಾರವು ಕೈಗೊಂಡ ಕ್ರಮಗಳನ್ನು ವಿವರಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

... ಮುಂದುವರೆಯುವುದು. 

No comments:

Post a Comment