"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 28 August 2020

•► ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Daily 10 Multiple Choice Questions)

•► ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
 (Daily 10 Multiple Choice Questions)

━━━━━━━━━━━━━━━━━━━━━━

151.ಈ ಕೆಳಗೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
1.ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಕಚೇರಿ ಈಗ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಬರುತ್ತದೆ.
2. ಸುಪ್ರೀಂ ಕೋರ್ಟ್ ನ‌ ಕೊಲಿಜಿಯಂ ಕೂಡ ಆರ್‌ಟಿಐ ವ್ಯಾಪ್ತಿಯಡಿ ಬರುತ್ತದೆ.
A) 1 ಮಾತ್ರ.
B) 2 ಮಾತ್ರ
C) ಮೇಲಿನ ಎಲ್ಲವೂ
D) ಮೇಲಿನ ಯಾವುದು ಅಲ್ಲ.


152.ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ 2019ರ ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.ಲಡಾಖ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿದೆ.
2.ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಚುನಾಯಿತ ಪ್ರತಿನಿಧಿಗಳ ಕೈಯಲ್ಲಿ ಭೂಮಿಯ ಮೇಲೆ ಹಕ್ಕು ಇರುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 2 ಮಾತ್ರ
C) ಮೇಲಿನ ಎಲ್ಲವೂ
D) ಮೇಲಿನ ಯಾವುದು ಅಲ್ಲ.


153.ಭಾರತವು ಇತ್ತೀಚೆಗೆ ಈ ದೇಶದೊಂದಿಗೆ 'ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ಪೂರ್ವಾನ್ವಯ ಅನುಮೋದನೆ ನೀಡಿತು.
A) ಜಿಂಬಾಬ್ವೆ.
B) ಮಾರಿಷಸ್.
C) ನ್ಯೂಜಿಲೆಂಡ್.
D) ಜಪಾನ್.


155.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1. ಸಮತೋಲನ ಬೆಲೆಗಿಂತ ಕಡಿಮೆ ಮಟ್ಟದ ಬೆಲೆಮಿತಿ (Price ceiling) ವಿಧಿಸುವಿಕೆಯು ಅಧಿಕ ಬೇಡಿಕೆಗೆ ಕಾರಣವಾಗುತ್ತದೆ.
2. ಸಮತೋಲನ ಬೆಲೆಗಿಂತ ಅಧಿಕ ಪ್ರಮಾಣದ ಬೆಲೆ ಅಂತಸ್ತಿನ (Price Floor) ವಿಧಿಸುವಿಕೆಯು ಅಧಿಕ ಪೂರೈಕೆಗೆ ಕಾರಣವಾಗುತ್ತದೆ.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 2 ಮಾತ್ರ
C) ಮೇಲಿನ ಎಲ್ಲವೂ
D) ಮೇಲಿನ ಯಾವುದು ಅಲ್ಲ.


156.ಕೋಶೀಯ / ವಿತ್ತೀಯ ಕೊರತೆ ಅಥವಾ ಹಣಕಾಸು ಕೊರತೆ (Fiscal Deficit)ಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ.
1.ಸಾಲ ವಸೂಲಾತಿಗಳು.
2.ಸಾರ್ವಜನಿಕ ಒಡೆತನದ ಘಟಕ (PSU)ಗಳ ಮಾರಾಟದಿಂದ ಬರುವ ಆದಾಯಗಳು.
3. ಕಂದಾಯ ಸ್ವೀಕೃತಿಗಳು.
A) 1 ಮಾತ್ರ
B) 1 ಮತ್ತು 2 ಮಾತ್ರ
C)  3 ಮಾತ್ರ
D) ಮೇಲಿನ ಎಲ್ಲವೂ.


157.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1.ಒಂದು ವೇಳೆ ಸರ್ಕಾರವು ಸಂಸತ್ತಿನ ಒಪ್ಪಿಗೆ ಪಡೆಯದ ಯಾವುದಾದರೂ ಬಾಬಿನಲ್ಲಿ ಹಣ ವಿನಿಯೋಗಿಸಬೇಕಾಗಿ ಬಂದಲ್ಲಿ ಅದಕ್ಕಾಗಿ ಪೂರಕ ಹಣಕಾಸು ಬೇಡಿಕೆಯನ್ನು ಸಂಸತ್ತಿನ ಎದುರು  ಮಂಡಿಸಲಾಗುತ್ತದೆ.
2.ಬಜೆಟ್‌ಗೆ ಮಂಜೂರಾತಿ ಕೊಡಲು ಲೋಕಸಭೆಗೆ ಮಾತ್ರ ಅಧಿಕಾರವಿದೆ.
3.ರಾಜ್ಯಸಭೆಯು ಬಜೆಟ್‌ಗೆ ತಿದ್ದುಪಡಿಗಳನ್ನು ಮಾತ್ರ ಸೂಚಿಸಬಹುದು.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 1 ಮತ್ತು 2 ಮಾತ್ರ
C) 2 ಮತ್ತು 3 ಮಾತ್ರ
D) ಮೇಲಿನ ಎಲ್ಲವೂ.


158.ಈ ಕೆಳಗೆ ನೀಡಿರುವ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?
1.ಏಂಜಲ್ ಜಲಪಾತ — ಚುರುನ್ ನದಿ
2.ನಯಾಗರ ಜಲಪಾತ — ಸೆಂಟ್ ಲಾರೆನ್ಸ್
3.ವಿಕ್ಟೋರಿಯಾ ಜಲಪಾತ — ಜಾಂಬೆಜಿ ನದಿ.
A) 1 ಮತ್ತು 2 ಮಾತ್ರ
B) 2 ಮಾತ್ರ
C) 2 ಮತ್ತು 3 ಮಾತ್ರ
D) ಮೇಲಿನ ಎಲ್ಲವೂ.


159.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1.ಸರಾಸರಿ ಶೇಕಡಾ 60ಕ್ಕಿಂತ ಕಡಿಮೆ ಮಳೆಯಾದರೆ ಬರಗಾಲ ಎಂದು ಪರಿಗಣಿಸಲಾಗುತ್ತದೆ.
2.ರಾಜ್ಯ ಸರ್ಕಾರ 2019ನ್ನು ಜಲವರ್ಷ ಎಂದು ಘೋಷಿಸಿದೆ.
3.ಹೆಚ್ಚು ಪ್ರಕೃತಿ ವಿಕೋಪ ಹಾನಿಗೊಳಗಾಗುವ ರಾಜ್ಯಗಳ ಪೈಕಿ ಕರ್ನಾಟಕವು 3ನೇ ಸ್ಥಾನದಲ್ಲಿದೆ
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 1 ಮತ್ತು 2 ಮಾತ್ರ
C) 2 ಮತ್ತು 3 ಮಾತ್ರ
D) ಮೇಲಿನ ಎಲ್ಲವೂ.


160.ಕೆಳಗಿನ ಜೋಡಿಗಳನ್ನು ಪರಿಗಣಿಸಿ:
   • ಬೆಟ್ಟಗಳು        • ಪ್ರದೇಶ
1. ಖೈಮೂರ್ ಬೆಟ್ಟಗಳು : ಕೊಂಕಣ ಕರಾವಳಿ
2. ಏಲಕ್ಕಿ ಬೆಟ್ಟಗಳು : ಕೋರಮಂಡಲ್
3. ಮಹಾದೇವ್ ಬೆಟ್ಟಗಳು : ಮಧ್ಯ ಭಾರತ
4. ಮಿಖಿರ್ ಬೆಟ್ಟಗಳು : ಈಶಾನ್ಯ ಭಾರತ
— ಮೇಲಿನ ಯಾವ ಜೋಡಿಗಳನ್ನು ಸರಿಯಾಗಿ ಹೊಂದಿಸಲಾಗಿದೆ?
A) 1 ಮತ್ತು 2
B) 1 ಮತ್ತು 3
C) 3 ಮತ್ತು 4
D) 1 ಮತ್ತು 4

No comments:

Post a Comment