"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 16 September 2016

☀ ಪಿಡಿಒ: ಇಂದಿನಿಂದ ಅರ್ಜಿ ಸಲ್ಲಿಕೆ ಹಾಗೂ ಹುದ್ದೆಗಳ ಜಿಲ್ಲಾವಾರು ಹಂಚಿಕೆ: : (PDO Application Starts and districtwise vacancy Allotment)

☀ ಪಿಡಿಒ: ಇಂದಿನಿಂದ ಅರ್ಜಿ ಸಲ್ಲಿಕೆ ಹಾಗೂ ಹುದ್ದೆಗಳ ಜಿಲ್ಲಾವಾರು ಹಂಚಿಕೆ: :
(PDO Application Starts and districtwise vacancy Allotment) 
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷೆ ತಯಾರಿ
(PDO Exam preparation)



ಒಟ್ಟು 1624 ಹುದ್ದೆಗಳಿಗೆ ನೇಮಕ; ಪದವೀಧರರಿಗೆ ಅವಕಾಶ ಬಹು ನಿರೀಕ್ಷಿತ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್‌-1 (ಜಿಪಿಎಸ್‌) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭಗೊಳ್ಳಲಿದೆ. ಅಕ್ಟೋಬರ್‌ 15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ನೇಮಕಾತಿಯ ಜವಾಬ್ದಾರಿ ಹೊತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಳೆದ ವಾರವೇ ಈ ಕುರಿತು ವಿವರವಾದ ಅಧಿಸೂಚನೆಯನ್ನು ಪ್ರಕಟಿಸಿತ್ತು. ಈ ಬಾರಿ ಕರ್ನಾಟಕ ಲೋಕಸೇವಾ ಆಯೋಗದ ಬದಲು ಕೆಇಎ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ನೇಮಕಾತಿ ನಡೆಸಲಿದೆ.ಒಟ್ಟು 815 ಪಂಚಾಧಿಯಿತಿ ಅಭಿವೃದ್ಧಿ ಅಧಿಧಿಕಾರಿ (ಪಿಧಿಡಿಒ) ಮತ್ತು 809 ಗ್ರಾ.ಪಂ. ಕಾರ್ಯಧಿದರ್ಶಿ ಗ್ರೇಡ್‌-1 ಹುದ್ದೆ ಸೇರಿ ಒಟ್ಟು 1624 ಹುದ್ದೆಗಳನ್ನು ಸ್ಪರ್ಧಾಧಿತ್ಮಕ ಪರೀಕ್ಷೆ ಮೂಲಕ ನೇರ ನೇಮಧಿಕ ಮಾಡಿಕೊಳ್ಳಲಾಗುತ್ತಿದೆ.

 ಪದವಿ ವಿದ್ಯಾರ್ಹತೆ ಹೊಂದಿರುವ 18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

 ಒಟ್ಟು 815 ಪಿಡಿಒ ಹುದ್ದೆಗಳ ಪೈಕಿ 177 ಹುದ್ದೆಗಳನ್ನು ಹೈದರಬಾದ್‌ ಕರ್ನಾಟಕ ವಿಭಾಗಕ್ಕೆ ಮೀಸಲಿಡಲಾಗಿದೆ. ಅಂತೆಯೇ 809 ಗ್ರಾ.ಪಂ. ಕಾರ್ಯದರ್ಶಿ ಹುದ್ದೆಗಳಲ್ಲಿ 171ಹುದ್ದೆಗಳನ್ನುಹೈದರಬಾದ್‌ -ಕರ್ನಾಟಕ ವಿಭಾಗಕ್ಕೆ ಮೀಸಲಿಡಲಾಗಿದೆ.


●.ಪಿಡಿಒ ಹುದ್ದೆಗಳ ಜಿಲ್ಲಾವಾರು ಹಂಚಿಕೆ:

ಚಿಕ್ಕಮಗಳೂರು-71,
ಬೆಳಗಾವಿ-26,
ಚಿತ್ರದುರ್ಗ-11,
ದಕ್ಷಿಣ ಕನ್ನಡ-44,
ಧಾರವಾಡ-10, ಹಾಸನ-46,
ಕೊಡಗು-18,
ಕೋಲಾರ-20,
ಮಂಡ್ಯ -37,
ಮೈಸೂರು -47,
ಶಿವಮೊಗ್ಗ-39,
ತುಮಕೂರು-54,
ಉತ್ತರ ಕನ್ನಡ-41,
ಚಾಮರಾಜನಗರ-31,
ದಾವಣಗೆರೆ-15,
ಬಾಗಲಕೋಟೆ-15,
ಗದಗ-6,
ಹಾವೇರಿ-62,
ಉಡುಪಿ-22 ಮತ್ತುಚಿಕ್ಕಬಳ್ಳಾಪುರ-19
ಹೈ-ಕ ವಿಭಾಗ:
ಬಳ್ಳಾರಿ-34,
ಬೀದರ್‌-19,
ಕಲಬುರಗಿ-51,
ಕೊಪ್ಪಳ-23,
ರಾಯಚೂರು-27 ಮತ್ತುಯಾದಗಿರಿ-23
ಜಿಪಿಎಸ್‌ ಹುದ್ದೆಗಳ ಜಿಲ್ಲಾವಾರು ಹಂಚಿಕೆ:
ಬೆಂಗಳೂರು ನಗರ-12,
ಬೆಂಗಳೂರು ಗ್ರಾಮಾಂತರ-18,
ಚಿಕ್ಕಮಗಳೂರು-31,
ಬೆಳಗಾವಿ-75,
ವಿಜಯಪುರ-39,
ಚಿತ್ರದುರ್ಗ-37,
ದಕ್ಷಿಣ ಕನ್ನಡ-10,
ಹಾಸನ-23,
ಕೊಡಗು-14,
ಮಂಡ್ಯ -49,
ಮೈಸೂರು -60,
ಶಿವಮೊಗ್ಗ-22,
ತುಮಕೂರು-72,
ಉತ್ತರ ಕನ್ನಡ-30,
ಚಾಮರಾಜನಗರ-30,
ದಾವಣಗೆರೆ-3,
ಬಾಗಲಕೋಟೆ-21,
ಗದಗ-8,
ಹಾವೇರಿ-1,
ಉಡುಪಿ-23,
ರಾಮನಗರ-23 ಮತ್ತುಚಿಕ್ಕಬಳ್ಳಾಪುರ-16
ಹೈ-ಕ ವಿಭಾಗ:
ಬಳ್ಳಾರಿ-33,
ಬೀದರ್‌-24,
ಕಲಬುರಗಿ-41,
ಕೊಪ್ಪಳ-20,
ರಾಯಚೂರು-35 ಮತ್ತು ಯಾದಗಿರಿ-18


●.ಕ್ವಿಕ್‌ ಲುಕ್‌ -ಅರ್ಜಿ ಸಲ್ಲಿಸಲು ಕೊನೆ ದಿನ: ಅಕ್ಟೋಬರ್‌ 15,2016 -

●.ಶುಲ್ಕ ಪಾವತಿಸಲು ಕೊನೆ ದಿನ: ಅಕ್ಟೋಬರ್‌ 18,2016.

●.-ಸಹಾಯವಾಣಿ: 080-23460460

●.ಮೀಸಲಾತಿ ಮತ್ತಿತರ ಮಾಹಿತಿಗೆ :http://kea.kar.nic.in 


●.ಇತ್ತ ಗಮನಿಸಿ 

*ಅರ್ಜಿ ಸಲ್ಲಿಸಲು ಕೊನೆಯ ದಿನದವರೆಗೆ ಕಾಯಬೇಡಿ. ಹೆಚ್ಚು ಅಭ್ಯರ್ಥಿಗಳು ಒಂದೇ ಬಾರಿಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ಸರ್ವರ್‌ ಡೌನ್‌ ಆಗಿ, ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರಬಹುದು.

* ಪ್ರಾಧಿಕಾರದ ವೆಬ್‌ನಲ್ಲಿ ವಿವರವಾದ ಅಧಿಸೂಚನೆ ಲಭ್ಯವಿದೆ. ಅಲ್ಲದೆ, ಯಾವ ಯಾವ ಜಾತಿಯವರು ಯಾವ ಮೀಸಲಾತಿಗೆ ಅರ್ಹರು ಎಂಬುದನ್ನು ವಿವರಿಸುವ ದಾಖಲೆಗಳನ್ನು ನೀಡಲಾಗಿದೆ. ಜತೆಗೆ ಮೀಸಲಾತಿ ಹಂಚಿಕೆಯ ಸಂಪೂರ್ಣವಾದ ಮಾಹಿತಿಯೂ ಲಭ್ಯವಿದೆ. ಇದನ್ನು ನೋಡಿಕೊಂಡೇ ಅರ್ಜಿ ಸಲ್ಲಿಸಿ.

* ಸಲ್ಲಿಸಬೇಕಾಗಿರುವ ದಾಖಲೆಗಳ ಫಾಮ್ರ್ಯಾಟ್‌ ನೀಡಲಾಗಿದೆ. ಇದನ್ನೂ ಒಮ್ಮೆ ನೋಡಿಕೊಳ್ಳಿ.

 * ನೇಮಕಾತಿ ಸಂದರ್ಭದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯ ಸಿಲಬಸ್‌ಅನ್ನು ವೆಬ್‌ನಲ್ಲಿ ನೀಡಲಾಗಿದ್ದು,ಅದನ್ನು ನೋಡಿಕೊಂಡು ಪರೀಕ್ಷೆಗೆ ಸಿದ್ಧತೆ ಆರಂಭಿಸಿ.

 * ಯಾವುದೇ ಕಾರಣಕ್ಕೂ ವದಂತಿಗಳಿಗೆಕಿವಿ ಕೊಟ್ಟು, ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ.

 * ಈ ಬಾರಿಯ ಸ್ಪರ್ಧಾತ್ಮಕ ಪರೀಕ್ಷೆ ಹೆಚ್ಚು ಕಠಿಣವಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಇಂದಿನಿಂದಲೇ ಅಭ್ಯಾಸ ಆರಂಭಿಸಿ.

 * ಪರೀಕ್ಷಾ ಸಿದ್ಧತೆಯ ಕುರಿತು ವಿಜಯ ಕರ್ನಾಟಕ-ಮಿನಿಯು ಉಪಯುಕ್ತ ಮಾಹಿತಿ, ಟಿಫ್ಸ್‌ ಮತ್ತು ಅಧ್ಯಯನ ಸಾಮಗ್ರಿಗಳನ್ನು ಪ್ರಕಟಿಸಲಿದೆ.
(Courtesy : GKPOONTS)

No comments:

Post a Comment