"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 17 June 2020

•► ಈ ದಿನದ (17 June 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : ( Important facts from the current events of this day (17 June 2020))

•► ಈ ದಿನದ (17 June 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
 ( Important facts from the current events of this day (17 June 2020)) ━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current affairs)

★ ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಸಂಗತಿಗಳು
(Selected fact from current events)



• ರಾಜ್ಯದ ಜಿಡಿಪಿಗೆ ಪ್ರವಾಸೋದ್ಯಮದ ಕೊಡುಗೆ — ಶೇ 14 ರಷ್ಟು"

• ಪ್ರಸ್ತುತ ದೇಶದ ಸಾಲಿಸಿಟರ್‌ ಜನರಲ್‌ —  ತುಷಾರ್‌ ಮೆಹ್ತಾ

• ಗಲ್ವಾನ್‌ ಕಣಿವೆ ಇರುವುದು — ಪೂರ್ವ ಲಡಾಖ್‌ನಲ್ಲಿ

• ಗಾಲ್ವನ್‌ ನದಿಯು ಅಕ್ಷಾಯ್‌ ಚಿನ್‌ನಿಂದ ಲಡಾಖ್‌ಗೆ ಹರಿಯುತ್ತದೆ.
— ನದಿಯ ಪಶ್ಚಿಮ ಭಾಗವು ತನಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ. ಆದರೆ, ಇಡೀ ಅಕ್ಷಾಯ್‌ ಚಿನ್‌ ತನ್ನದು ಎಂಬುದು ಭಾರತದ ಪ್ರತಿಪಾದನೆ.

• ಪಾಂಗಾಂಗ್ ತ್ಸೊ ಜಗತ್ತಿನಲ್ಲಿ ಅತಿ ಎತ್ತರದಲ್ಲಿರುವ ಉಪ್ಪು ನೀರಿನ ಸರೋವರ. — ಸಮುದ್ರ ಮಟ್ಟದಿಂದ ಇದು 4,350 ಮೀಟರ್‌ ಎತ್ತರದಲ್ಲಿದೆ.
— ಇದರ ವಿಸ್ತಾರ ಸುಮಾರು 600 ಚದರ ಕಿ.ಮೀ. ಪೂರ್ವ ಲಡಾಖ್‌ ಮತ್ತು ಟಿಬೆಟ್‌ಗೆ ಇದು ವ್ಯಾಪಿಸಿದೆ.

• ಪಾಂಗಾಂಗ್‌ ಸರೋವರದ ಬಿಕ್ಕಟ್ಟು :
ಭಾರತ ಮತ್ತು ಚೀನಾ ನಡುವೆ ಪರಸ್ಪರ ಒಪ್ಪಿತವಾದ ಗಡಿ ರೇಖೆ ಇಲ್ಲ. ಪಶ್ಚಿಮ ಭಾಗದಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನೇ (ಎಲ್‌ಎಸಿ) ಗಡಿ ರೇಖೆ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಎಲ್‌ಎಸಿಯ ಬಗ್ಗೆಯೂ ಭಿನ್ನಾಭಿಪ್ರಾಯ ಇದೆ. ಎಲ್‌ಎಸಿ ಪ್ಯಾಂಗಾಂಗ್‌ ಸರೋವರದ ಮಧ್ಯೆ ಹಾದು ಹೋಗುತ್ತದೆ.

• ಬೆವರಿಯನ್ ಮೋಟರ್ ವರ್ಕ್ಸ್‌  (ಬಿಎಂಡಬ್ಲ್ಯು) ವಿಲಾಸಿ ಕಾರು ತಯಾರಿಕಾ ಕಂಪನಿ ಇರುವುದು — ಜರ್ಮನಿಯಲ್ಲಿ

• ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮುಖ್ಯಸ್ಥ — ಟೆಡ್ರಸ್ ಅಧಾನೊಮ್ ಗೆಬ್ರೆಯೆಸಸ್

• 2019–20ನೇ ಹಣಕಾಸು ವರ್ಷದಲ್ಲಿ ಭಾರತವು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸುವಲ್ಲಿ ವಿಶ್ವದ 9ನೇ ಅತಿದೊಡ್ಡ ದೇಶವಾಗಿದೆ.

— ಅಭಿವೃದ್ಧಿ ಹೊಂದುತ್ತಿರುವ ಏಷ್ಯಾ ವಲಯದಲ್ಲಿ ‘ಎಫ್‌ಡಿಐ’ ಆಕರ್ಷಿಸುವಲ್ಲಿ ಭಾರತ 5ನೇ ಸ್ಥಾನದಲ್ಲಿ ಇದೆ ಎಂದು ವ್ಯಾಪಾರ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಮ್ಮೇಳನವು ಸಿದ್ಧಪಡಿಸಿದ ಜಾಗತಿಕ ಬಂಡವಾಳ ಹೂಡಿಕೆ ವರದಿಯಲ್ಲಿ ತಿಳಿಸಲಾಗಿದೆ.

• ಪ್ರತಿ ವರ್ಷ ಎರಡು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ ನಡೆಯುತ್ತದೆ.

10 ಸದಸ್ಯ ಸ್ಥಾನಗಳನ್ನು ವಿಭಾಗವಾರು ಹಂಚಿಕೆ ಮಾಡಲಾಗಿ, ಮೂರನೇ ಎರಡರಷ್ಟು ಬಹುಮತ ಪಡೆಯುವ ದೇಶಗಳು ಚುನಾವಣೆಯಲ್ಲಿ ಆಯ್ಕೆಮಾಡಲಾಗುತ್ತದೆ.

• ಪ್ರಸ್ತುತ ವಿಶ್ವದ ಅತಿದೊಡ್ಡ ತೈಲ ರಫ್ತುದಾರ —  ಸೌದಿ ಅರೆಬಿಯಾ

• ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ನೇಪಾಳದ ಅತಿದೊಡ್ಡ ದೇವಸ್ಥಾನಗಳಲ್ಲಿ ಒಂದು ಎನಿಸಿರುವ ಪಶುಪತಿನಾಥ ಮಂದಿರವು ಭಾಗಮತಿ ನದಿಯ ಎರಡೂ ದಡಗಳನ್ನು ವ್ಯಾಪಿಸಿದೆ. ನೇಪಾಳ ಹಾಗೂ ಭಾರತದ ಸಾವಿರಾರು ಜನರು ಇಲ್ಲಿಗೆ ನಿತ್ಯ ಭೇಟಿ ನೀಡುತ್ತಾರೆ.

• ವಾರ್ಷಿಕ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತವು 43ನೇ ಶ್ರೇಯಾಂಕವನ್ನು ಉಳಿಸಿಕೊಂಡಿದೆ.

• ವಾರ್ಷಿಕ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತವು 43ನೇ ಶ್ರೇಯಾಂಕವನ್ನು ಉಳಿಸಿಕೊಂಡಿದೆ.
- ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಡೆವಲಪ್‌ಮೆಂಟ್‌ (ಐಎಂಡಿ) ಸಿದ್ಧಪಡಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ.
- ಕಳಪೆ ಮೂಲ ಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ಮಾಡದಿರುವ ಕಾರಣಕ್ಕೆ ಭಾರತದ ಶ್ರೇಯಾಂಕ ಕೆಳಮಟ್ಟದಲ್ಲಿ ಇದೆ ಎಂದು ಇಂಟರ್‌ನ್ಯಾಷನಲ್‌ ಬಿಸಿನೆಸ್‌ ಸ್ಕೂಲ್‌ ತಿಳಿಸಿದೆ.
- 63 ದೇಶಗಳ ಪಟ್ಟಿಯಲ್ಲಿ ಸಿಂಗಪುರ ಮೊದಲ ಸ್ಥಾನದಲ್ಲಿ ಇದೆ. ಅಮೆರಿಕವು 3ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಮತ್ತು ಚೀನಾ 14 ರಿಂದ 20ನೇ ಸ್ಥಾನಕ್ಕೆ ಕುಸಿದಿದೆ.
- ಭಾರತದ ಸ್ಥಾನಮಾನ ಬದಲಾಗಿರದಿದ್ದರೂ, ದೀರ್ಘಾವಧಿ ಉದ್ಯೋಗಾವಕಾಶ ಪ್ರಗತಿ, ಚಾಲ್ತಿ ಖಾತೆ ಸಮತೋಲನ, ಅತ್ಯಾಧುನಿಕ ತಂತ್ರ‌ಜ್ಞಾನ ರಫ್ತು, ವಿದೇಶಿ ವಿನಿಮಯ ಸಂಗ್ರಹ, ರಾಜಕೀಯ ಸ್ಥಿರತೆ ಮತ್ತು ಒಟ್ಟಾರೆ ಉತ್ಪಾದನೆಯಲ್ಲಿ ಸುಧಾರಣೆ ಕಂಡಿದೆ ಎಂದು ’ಐಎಂಡಿ’ ತಿಳಿಸಿದೆ.

• HPCL, BPCL, IOCಗಳು ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು.

• ಎಟಿಎಫ್ (ATF) ಎಂದರೆ —  (Aviation Turbine Fuel) ವಿಮಾನಗಳಿಗೆ ಬಳಸುವ ವಾಯು ಇಂಧನ.

• ತೈಲ ಬೆಲೆ ಏರಿಕೆಯ ಪರಿಣಾಮ :
- ಗಮನಕ್ಕೆ ಬಾರದ ಹೊರೆ :
ಪ್ರತಿ ದಿನದ ಬೆಲೆ ಏರಿಕೆಯಿಂದಾಗಿ ಬಳಕೆದಾರರು ಇಂಧನಕ್ಕೆ ಮಾಡುವ ತಿಂಗಳ ವೆಚ್ಚವು ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ. ದಿನಗಳೆದಂತೆ ಪೆಟ್ರೋಲ್‌, ಡೀಸೆಲ್‌ ಖರೀದಿಗೆ ಮಾಡುವ ವೆಚ್ಚವು ಕಿಸೆಗೆ ಭಾರವಾಗುತ್ತದೆ. - ಅಗತ್ಯ ವಸ್ತುಗಳ ಬೆಲೆ ಹೆಚ್ಚಳಗೊಳ್ಳುತ್ತದೆ. ಕುಟುಂಬದ ತಿಂಗಳ ಬಜೆಟ್‌ ಏರುಪೇರಾಗಲಿದೆ.
- ಬೇಡಿಕೆಗೆ ಹೊಡೆತ:
ಇಂಧನಕ್ಕೆ ಮಾಡುವ ವೆಚ್ಚ ಹೆಚ್ಚುತ್ತಿದ್ದಂತೆ ಗ್ರಾಹಕರ ಉಳಿತಾಯ ಕಡಿಮೆಯಾಗಲಿದೆ ಇಲ್ಲವೇ ಇತರ ವೆಚ್ಚಗಳಿಗೆ ಕಡಿವಾಣ ಬೀಳಲಿದೆ. ಇದರಿಂದ ಸರಕು ಮತ್ತು ಸೇವೆಗಳ ಬೇಡಿಕೆ ಕುಸಿಯಲಿದೆ.
- ಕೋವಿಡ್‌ ಪಿಡುಗಿನ ಪ್ರಭಾವದಿಂದಾಗಿ ಸದ್ಯಕ್ಕೆ ಬೇಡಿಕೆ ಗಮನಾರ್ಹವಾಗಿ ಕುಸಿದಿದೆ. ಇಂಧನಗಳ ಬೆಲೆ ಏರಿಕೆಯು ಇತರ ಸರಕುಗಳ ಬೇಡಿಕೆಯನ್ನು ಇನ್ನಷ್ಟು ಕುಂದಿಸಲಿದೆ.
ಹಣದುಬ್ಬರಕ್ಕೆ ಹಾದಿ:
ದುಬಾರಿ ಡೀಸೆಲ್‌ನಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚಲಿದೆ. ಇದರಿಂದ ತರಕಾರಿ, ಹಣ್ಣು ಮತ್ತು ದಿನಸಿ ಪದಾರ್ಥ ಮತ್ತಿತರ ಸರಕುಗಳ ಬೆಲೆಯೂ ಏರಿಕೆಯಾಗಲಿದೆ. ಇದು ಹಣದುಬ್ಬರಕ್ಕೆ ಹಾದಿ ಮಾಡಿಕೊಡಲಿದೆ.

• ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಇಕ್ರಾ) ಇರುವುದು - ನವ ದೆಹಲಿಯಲ್ಲಿ

• ಸಗಟು ಹಣದುಬ್ಬರ :
-ಸಗಟು ಮಾರುಕಟ್ಟೆಯಲ್ಲಿನ ಬೆಲೆಗಳು ಮೇನಲ್ಲಿ ನಾಲ್ಕೂವರೆ ವರ್ಷಗಳ ಹಿಂದಿನ ಮಟ್ಟವಾದ ಶೇ 3.21ಕ್ಕೆ ಕುಸಿದಿವೆ.
- ತಿಂಗಳ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ವಾರ್ಷಿಕ ಸಗಟು ಹಣದುಬ್ಬರವು, 2019ರ ಇದೇ ಅವಧಿಯಲ್ಲಿನ ಶೇ 2.79ಕ್ಕೆ ಹೋಲಿಸಿದರೆ (–) ಶೇ 3.21ಕ್ಕೆ ಕುಸಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ತಿಳಿಸಿದೆ. 2015ರ ನವೆಂಬರ್‌ನಲ್ಲಿ ಬೆಲೆ ಕುಸಿತವು ಶೇ 3.7ರಷ್ಟಿತ್ತು.

No comments:

Post a Comment