"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 2 August 2017

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (PART -X)... ಮುಂದುವರೆದ ಭಾಗ. ( KAS Mains General Studies Paper V Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (PART -X)... ಮುಂದುವರೆದ ಭಾಗ.
( KAS Mains General Studies  Paper V  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.



●. ಪತ್ರಿಕೆ-5:       ಸಾಮಾನ್ಯ ಅಧ್ಯಯನಗಳು-4


●. ವಿಭಾಗ-1:

ನೀತಿಶಾಸ್ತ್ರ:

ಮಾನವ ಕ್ರಿಯೆಗಳಲ್ಲಿ ನೀತಿಶಾಸ್ತ್ರದ ಸಾರ, ನಿರ್ಣಾಯಕಗಳು ಮತ್ತು ಪರಿಣಾಮಗಳು, ನೀತಿಶಾಸ್ತ್ರದ ಆಯಾಮಗಳು, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೀತಿಶಾಸ್ತ್ರ.
ಸಾರ್ವಜನಿಕ ಆಡಳಿತದಲ್ಲಿ ನೀತಿಶಾಸ್ತ್ರ, ಸ್ಥಾನಮಾನ ಮತ್ತು ಸಮಸ್ಯೆಗಳು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೀತಿಯ ಬಿಕ್ಕಟ್ಟುಗಳು, ನೀತಿ ಮಾರ್ಗದರ್ಶನದ ಮೂಲವಾಗಿ ಕಾನೂನುಗಳು, ನಿಯಮಗಳು, ವಿಧಿನಿಯಮಗಳು ಮತ್ತು ಧರ್ಮಪ್ರಜ್ಞೆ.
ಹೊಣೆಗಾರಿಕೆ ಮತ್ತು ನೈತಿಕ ಆಡಳಿತ, ಆಡಳಿತದಲ್ಲಿನ ನೀತಿ ಮತ್ತು ನೈತಿಕ ಮೌಲ್ಯಗಳ ಬಲಪಡಿಸುವಿಕೆ. ಅಂತರಾಷ್ಟೀಯ ಸಂಬಂಧಗಳಲ್ಲಿ ಮತ್ತು ಹಣ ನೀಡಿಕೆಯಲ್ಲಿ ನೀತಿ ವಿಷಯಗಳು, ನಿಗಮಿತ ಆಡಳಿತ.
ಸಾರ್ವಜನಿಕ ಸೇವೆಯ ಪರಿಕಲ್ಪನೆ, ಆಡಳಿತದ ತಾತ್ವಿಕ ಮೂಲ, ಸರ್ಕಾರದಲ್ಲಿ ಮಾಹಿತಿ ಹಂಚಿಕೆ ಮತ್ತು ಸರ್ಕಾರದ ಪಾರದರ್ಶಕತೆ, ಮಾಹಿತಿ ಹಕ್ಕು, ನೀತಿಶಾಸ್ತ್ರದ ಸಂಹಿತೆಗಳು, ನೀತಿ ಸಂಹಿತೆಗಳು, ನಾಗರಿಕ ಸನ್ನದುಗಳು, ಕೆಲಸದ ಸಂಸ್ಕೃತಿ, ಸೇವೆ ಸಲ್ಲಿಕೆಯ ಗುಣಮಟ್ಟ, ಸಾರ್ವಜನಿಕ ನಿಧಿ ಬಳಕೆ, ಭ್ರಷ್ಟ್ರಾಚಾರದ ಸವಾಲುಗಳು.
ಮಾನವ ಮೌಲ್ಯಗಳು – ಮಹಾನ್ ನಾಯಕರು ಸುಧಾರಕರು, ಆಡಳಿತಗಾರರ ಜೀವನಗಳು ಮತ್ತು ಬೋಧನೆಗಳಿಂದ ಪಾಠಗಳು, ಕುಟುಂಬದ ಪಾತ್ರ, ಸಮಾಜ ಮತ್ತು ಮೌಲ್ಯಗಳನ್ನು ಬೋಧಿಸುವ ಶೈಕ್ಷಣಿಕ ಸಂಸ್ಥೆಗಳು.



●. ವಿಭಾಗ-2:

ನೀತಿನಿಷ್ಠೆ:

ನೀತಿನಿಷ್ಠೆ, ನಿಷ್ಪಕ್ಷಪಾತ ಮತ್ತು ಪಕ್ಷಪಾತ ಮಾಡದಿರುವುದು, ಉದ್ದೇಶ, ಸಾರ್ವಜನಿಕ ಸೇವೆಗೆ ಸಮರ್ಪಣೆ, ದುರ್ಬಲ ವರ್ಗಗಳಿಗಾಗಿ ಅನುಭೂತಿ, ತಾಳ್ಮೆ ಮತ್ತು ಅನುಕಂಪ.


●. ವಿಭಾಗ-3:

ಅಭಿರುಚಿ:

ನಾಗರಿಕ ಸೇವೆಗಾಗಿ ಅಭಿರುಚಿ ಮತ್ತು ಬುನಾದೀಯ ಮೌಲ್ಯಗಳು, ಒಳಾಂಶ ರಚನೆ, ಪ್ರಕಾರ್ಯ, ಚಿಂತನೆಗಳು ಮತ್ತು ಕಾರ್ಯರೀತಿಯೊಂದಿಗೆ ಅದರ ಸಂಬಂಧ, ನೈತಿಕ ಮತ್ತು ರಾಜಕೀಯ ಮನೋಭವಗಳು, ಸಾಮಾಜಿಕ ಪ್ರಭಾವ ಮತ್ತು ಪ್ರೇರಣೆ. ನಾಗರೀಕ ಸೇವೆಗಾಗಿ ಅಭಿರುಚಿ ಮತ್ತು ಬುನಾದೀಯ ಮೌಲ್ಯಗಳು, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಅದರ ಉಪಯುಕ್ತತೆಗಳು ಹಾಗೂ ಆಡಳಿತ ಮತ್ತು ನಿರ್ವಹಣೆಯ ಅನ್ವಯತೆ, ಭಾರತ ಮತ್ತು ವಿಶ್ವದಿಂದ ನೈತಿಕ ಚಿಂತಕರ ಕೊಡುಗೆಗಳು. ಮೇಲಿನ ಅಂಶಗಳಿಗೆ ಸಂಬಂಧಿಸಿದಂತೆ ವಿಷಯಗಳ ವಾಸ್ತವಾಂಶ ಅಧ್ಯಯನಗಳು.

...ಮುಂದುವರೆಯುವುದು. 

(ಕೃಪೆ: ಯುಸಿಸಿ ಬೆಂಗಳೂರು) 

No comments:

Post a Comment