"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಕೆಎಎಸ್ ಪರಿಕ್ಷೆಯ ಪಠ್ಯಕ್ರಮ. Show all posts
Showing posts with label ಕೆಎಎಸ್ ಪರಿಕ್ಷೆಯ ಪಠ್ಯಕ್ರಮ. Show all posts

Wednesday, 2 August 2017

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (PART -X)... ಮುಂದುವರೆದ ಭಾಗ. ( KAS Mains General Studies Paper V Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (PART -X)... ಮುಂದುವರೆದ ಭಾಗ.
( KAS Mains General Studies  Paper V  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.



●. ಪತ್ರಿಕೆ-5:       ಸಾಮಾನ್ಯ ಅಧ್ಯಯನಗಳು-4


●. ವಿಭಾಗ-1:

ನೀತಿಶಾಸ್ತ್ರ:

ಮಾನವ ಕ್ರಿಯೆಗಳಲ್ಲಿ ನೀತಿಶಾಸ್ತ್ರದ ಸಾರ, ನಿರ್ಣಾಯಕಗಳು ಮತ್ತು ಪರಿಣಾಮಗಳು, ನೀತಿಶಾಸ್ತ್ರದ ಆಯಾಮಗಳು, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೀತಿಶಾಸ್ತ್ರ.
ಸಾರ್ವಜನಿಕ ಆಡಳಿತದಲ್ಲಿ ನೀತಿಶಾಸ್ತ್ರ, ಸ್ಥಾನಮಾನ ಮತ್ತು ಸಮಸ್ಯೆಗಳು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೀತಿಯ ಬಿಕ್ಕಟ್ಟುಗಳು, ನೀತಿ ಮಾರ್ಗದರ್ಶನದ ಮೂಲವಾಗಿ ಕಾನೂನುಗಳು, ನಿಯಮಗಳು, ವಿಧಿನಿಯಮಗಳು ಮತ್ತು ಧರ್ಮಪ್ರಜ್ಞೆ.
ಹೊಣೆಗಾರಿಕೆ ಮತ್ತು ನೈತಿಕ ಆಡಳಿತ, ಆಡಳಿತದಲ್ಲಿನ ನೀತಿ ಮತ್ತು ನೈತಿಕ ಮೌಲ್ಯಗಳ ಬಲಪಡಿಸುವಿಕೆ. ಅಂತರಾಷ್ಟೀಯ ಸಂಬಂಧಗಳಲ್ಲಿ ಮತ್ತು ಹಣ ನೀಡಿಕೆಯಲ್ಲಿ ನೀತಿ ವಿಷಯಗಳು, ನಿಗಮಿತ ಆಡಳಿತ.
ಸಾರ್ವಜನಿಕ ಸೇವೆಯ ಪರಿಕಲ್ಪನೆ, ಆಡಳಿತದ ತಾತ್ವಿಕ ಮೂಲ, ಸರ್ಕಾರದಲ್ಲಿ ಮಾಹಿತಿ ಹಂಚಿಕೆ ಮತ್ತು ಸರ್ಕಾರದ ಪಾರದರ್ಶಕತೆ, ಮಾಹಿತಿ ಹಕ್ಕು, ನೀತಿಶಾಸ್ತ್ರದ ಸಂಹಿತೆಗಳು, ನೀತಿ ಸಂಹಿತೆಗಳು, ನಾಗರಿಕ ಸನ್ನದುಗಳು, ಕೆಲಸದ ಸಂಸ್ಕೃತಿ, ಸೇವೆ ಸಲ್ಲಿಕೆಯ ಗುಣಮಟ್ಟ, ಸಾರ್ವಜನಿಕ ನಿಧಿ ಬಳಕೆ, ಭ್ರಷ್ಟ್ರಾಚಾರದ ಸವಾಲುಗಳು.
ಮಾನವ ಮೌಲ್ಯಗಳು – ಮಹಾನ್ ನಾಯಕರು ಸುಧಾರಕರು, ಆಡಳಿತಗಾರರ ಜೀವನಗಳು ಮತ್ತು ಬೋಧನೆಗಳಿಂದ ಪಾಠಗಳು, ಕುಟುಂಬದ ಪಾತ್ರ, ಸಮಾಜ ಮತ್ತು ಮೌಲ್ಯಗಳನ್ನು ಬೋಧಿಸುವ ಶೈಕ್ಷಣಿಕ ಸಂಸ್ಥೆಗಳು.



●. ವಿಭಾಗ-2:

ನೀತಿನಿಷ್ಠೆ:

ನೀತಿನಿಷ್ಠೆ, ನಿಷ್ಪಕ್ಷಪಾತ ಮತ್ತು ಪಕ್ಷಪಾತ ಮಾಡದಿರುವುದು, ಉದ್ದೇಶ, ಸಾರ್ವಜನಿಕ ಸೇವೆಗೆ ಸಮರ್ಪಣೆ, ದುರ್ಬಲ ವರ್ಗಗಳಿಗಾಗಿ ಅನುಭೂತಿ, ತಾಳ್ಮೆ ಮತ್ತು ಅನುಕಂಪ.


●. ವಿಭಾಗ-3:

ಅಭಿರುಚಿ:

ನಾಗರಿಕ ಸೇವೆಗಾಗಿ ಅಭಿರುಚಿ ಮತ್ತು ಬುನಾದೀಯ ಮೌಲ್ಯಗಳು, ಒಳಾಂಶ ರಚನೆ, ಪ್ರಕಾರ್ಯ, ಚಿಂತನೆಗಳು ಮತ್ತು ಕಾರ್ಯರೀತಿಯೊಂದಿಗೆ ಅದರ ಸಂಬಂಧ, ನೈತಿಕ ಮತ್ತು ರಾಜಕೀಯ ಮನೋಭವಗಳು, ಸಾಮಾಜಿಕ ಪ್ರಭಾವ ಮತ್ತು ಪ್ರೇರಣೆ. ನಾಗರೀಕ ಸೇವೆಗಾಗಿ ಅಭಿರುಚಿ ಮತ್ತು ಬುನಾದೀಯ ಮೌಲ್ಯಗಳು, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಅದರ ಉಪಯುಕ್ತತೆಗಳು ಹಾಗೂ ಆಡಳಿತ ಮತ್ತು ನಿರ್ವಹಣೆಯ ಅನ್ವಯತೆ, ಭಾರತ ಮತ್ತು ವಿಶ್ವದಿಂದ ನೈತಿಕ ಚಿಂತಕರ ಕೊಡುಗೆಗಳು. ಮೇಲಿನ ಅಂಶಗಳಿಗೆ ಸಂಬಂಧಿಸಿದಂತೆ ವಿಷಯಗಳ ವಾಸ್ತವಾಂಶ ಅಧ್ಯಯನಗಳು.

...ಮುಂದುವರೆಯುವುದು. 

(ಕೃಪೆ: ಯುಸಿಸಿ ಬೆಂಗಳೂರು) 

Thursday, 30 March 2017

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-4: ಸಾಮಾನ್ಯ ಅಧ್ಯಯನ-3 (PART -IX)... ಮುಂದುವರೆದ ಭಾಗ. ( KAS Mains General Studies Paper IV Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-4: ಸಾಮಾನ್ಯ ಅಧ್ಯಯನ-3 (PART -IX)... ಮುಂದುವರೆದ ಭಾಗ.
( KAS Mains General Studies  Paper IV  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

★ ಸಾಮಾನ್ಯ ಅಧ್ಯಯನ ಪತ್ರಿಕೆ 3
(General Studies Paper 3)


... ಮುಂದುವರೆದ ಭಾಗ.


●. ಪತ್ರಿಕೆ-4.    ಸಾಮಾನ್ಯ ಅಧ್ಯಯನ-3


●. ವಿಭಾಗ-1:
ಭಾರತದ ಅಭಿವೃದಿಯಲ್ಲಿ ಸಾರ್ವಜನಿಕ ಕ್ಷೇತ್ರದ ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದ ಪಾತ್ರ ಮತ್ತು ಪ್ರಭಾವ.


1. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಗಳು

ವಿಜ್ಞಾನ ಮತ್ತು ತಂತ್ರಜ್ಞಾನದ (ಎಸ್ ಮತ್ತು ಟಿ) ಉತ್ಕೃಷ್ಟ ಮತ್ತು ಹೊರಹೊಮ್ಮುತ್ತಿರುವ ಕ್ಷೇತ್ರಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಹೆಚ್ಚುವರಿ ಮೌಲ್ಯ, ಭಾರತದಲ್ಲಿ ಪ್ರಸಕ್ತ ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಗಳು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಯಂತ್ರವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವ – ಕೈಗಾರಿಕಾ ಅಭಿವೃದ್ಧಿ ಮತ್ತು ನಗರೀಕರಣ – ವಿಜ್ಞಾನ ಮತ್ತು ತಂತ್ರಜ್ಞಾನದ ರಾಷ್ಟ್ರೀಯ ನೀತಿ; ಕಾಲಕಾಲಕ್ಕೆ ನೀತಿಯಲ್ಲಿ ಬದಲಾವಣೆ, ತಂತ್ರಜ್ಞಾನದ ಮಂಡಳಿ-ಐಸಿಟಿ: ಮೂಲ ಕಂಪ್ಯೂಟರ್ಗಳು, ಸಂವಹನ, ದೂರವಾಣಿ ಮತ್ತು ದೂರದರ್ಶನ - ಬ್ರಾಡ್ಬ್ಯಾಂಡ್, ಅಂತರ್ಜಾಲ ಮತ್ತು ವೆಬ್-ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳು, ವ್ಯಾಪಾರ ಹೊರಗುತ್ತಿಗೆ ಪ್ರಕ್ರಿಯೆ (ಬಿಪಿಒ), ಆರ್ಥಿಕ ಮತ್ತು ಉದ್ಯೋಗದ ಬೆಳವಣಿಗೆ ಇ-ಆಡಳಿತ, ಇ-ವಾಣಿಜ್ಯ ಮತ್ತು ಇ-ಕಲಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಗ್ರಾಮೀಣ ಅನ್ವಯಗಳು, ಅಂಕೀಯ ಬಿರುಕಿನ ಅಂತರ (ಡಿಜಿಟಲ್ ಡಿವೈಡ್) ಮತ್ತು ಅದರ ತಡೆಗಟ್ಟುವಿಕೆ-ಸಮೂಹ ಮಾಧ್ಯಮಗಳಲ್ಲಿ ಗಣಕಯಂತ್ರಗಳು.


2. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ:

ಜಾಗತಿಕ ಬಾಹ್ಯಾಕಾಶದ ಕಾರ್ಯಕ್ರಮಗಳ ಸಂಕ್ಷಿಪ್ತ ಇತಿಹಾಸ, ಮತ್ತು ಪುಸ್ತಕ ಬಾಹ್ಯಾಕಾಶ ಕಾರ್ಯಕ್ರಮಗಳು.
ಭಾರತದಲ್ಲಿ ಬಾಹ್ಯಾಕಾಶದ ಕಾರ್ಯಕ್ರಮಗಳು-ಐಎನ್ಎಸ್ಎಟಿ, (ಇನ್ಸ್ಯಾಟ್) ಐಆರ್ಎಸ್ ವ್ಯವಸ್ಥೆಗಳ, ಇಡಯುಎಸ್ಎಟಿ, (ಎಜುಸ್ಯಾಟ್) ಮತ್ತು ಚಂದ್ರಯಾನ-1 ಇತ್ಯಾದಿ ಮತ್ತು ಭವಿಷ್ಯದ ಕಾರ್ಯಕ್ರಮ.
ಶಿಕ್ಷಣ, ಕೃಷಿ ಮತ್ತು ಇತರ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳ ವಿಶೇಷ ಉಲ್ಲೇಖಗಳೊಂದಿಗೆ ಅನ್ವಯಿಸಿ ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ.


3. ಇಂಧನ ಸಂಪನ್ಮೂಲಗಳು:

ಭಾರತೀಯ ಇಂಧನ ಸನ್ನಿವೇಶಗಳು-ಜಲವಿದ್ಯುತ್, ಉಷ್ಣ ಅಣು ಮತ್ತು ನವೀಕರಿಸಬಹುದಾದ; ಅದರ ಸಾಮಥ್ರ್ಯದ ರಕ್ಷಾಕವಚ ಮತ್ತು ಆಯ್ಕೆಗಳು.
ನವೀಕರಿಸಬಹುದಾದ ಮುಖ್ಯವಾದ ಇಂಧನ ಸಂಪನ್ಮೂಲಗಳ - ಸೌರ, ಗಾಳಿ, ಸಣ್ಣ/ಅತಿಸಣ್ಣ/ಸೂಕ್ಷ್ಮ ಜಲವಿದ್ಯುತ್, ಜೀವರಾಶಿ (Biomass) ತ್ಯಾಜ್ಯ ಆಧಾರಿತ, ಭೂಶಾಖ (Geitgermal), ಉಬ್ಬರದ (tridal), ಹೈಡ್ರೋಜನ್ ಮತ್ತು ಇಂಧನ ಕೋಶಗಳು.
ಶಾಸನಗಳನ್ನು ಸಮರ್ಥಗೊಳಿಸುವುದು; ಆರ್ಥಿಕ ಮತ್ತು ಪ್ರಕ್ರಿಯಾ ಪ್ರೋತ್ಸಾಹ ಧನಗಳು ಮತ್ತು ಹೂಡಿಕೆದಾರರಿಗೆ ವ್ಯಾಪಾರ ಅವಕಾಶಗಳು.


4. ವಿಕೋಪಗಳು, ಉಪದ್ರವಕಾರಿಗಳು ಮತ್ತು ಮಾಲಿನ್ಯ:

ಹವಾಮಾನ ಬದಲಾವಣೆ - ಪ್ರವಾಹ, ಚಂಡಮಾರುತ, ಸುನಾಮಿ, ನೈಸರ್ಗಿಕ ಹಾಗೂ ಮಾನವನಿಂದಾಗುವ ವಿಕೋಪಗಳು ಮತ್ತು ವಿಪತ್ತು ನಿರ್ವಹಣೆ.
ಭಾರತದಲ್ಲಿ ಬೆಳೆ ವಿಜ್ಞಾನ, ಗೊಬ್ಬರಗಳು, ಉಪದ್ರವಕಾರಿಗಳು ಮತ್ತು ಬೆಳೆರೋಗಗಳ ನಿಯಂತ್ರಣ ಶುದ್ಧ ಕುಡಿಯುವ ನೀರು ಮತ್ತು ಸರಬರಾಜು
ನೈರ್ಮಲ್ಯ ಮತ್ತು ತ್ಯಾಜ್ಯ ವಿಲೇವಾರಿ
ನಗರೀಕರಣ, ಕೈಗಾರಿಕೀಕರಣ ಮತ್ತು ಮಾಲಿನ್ಯ ನಿಯಂತ್ರಣ


5. ಸಂಬಂಧಿಸಿದ ಸಂವೇದನೆಗಳು:

ಸರ್ವವ್ಯಾಪ್ತಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕ್ಷರತೆ
ಮಾನವೀಯ ಮೌಲ್ಯದೊಂದಿಗೆ ತಂತ್ರಜ್ಞಾನ
ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್ಡಿಐ)
ಜೆಡಿಪಿ ಯ ಬೆಳವಣಿಗೆ ಮತ್ತು ಕೊಡುಗೆ
ಸಂಸ್ಕೃತಿ ಮತ್ತು ದೇಶಿಯ ಜ್ಞಾನವನ್ನು ಸಂರಕ್ಷಣೆ ಮತ್ತು ಉನ್ನತಿಕರಿಸುವ ಸಂಬಂಧ.


6. ಜ್ಞಾನ ಸಮಾಜದ:

ಮಾನವ ಬಂಡವಾಳ, ಅದರ ಶಕ್ತಿ, ಶಿಕ್ಷಣ ನೀಡುವುದು, ಕೌಶಲ್ಯ ಮತ್ತು ಮೌಲ್ಯಗಳು
ಆರ್ಥಿಕ ಬೆಳವಣಿಗೆ, ಸಾಮಾಜಿಕ ಅಭಿವೃದ್ಧಿ, ಸಾಂಸ್ಕೃತಿಕ ಏಳಿಗೆ ಮತ್ತು ರಾಜಕೀಯ ಸಬಲೀಕರಣದಲ್ಲಿ ಜ್ಞಾನದ ಪಾತ್ರ.
ಜ್ಞಾನದ ಮೂಲಕ ಗುರಿಗಳ ಸಾಧನೆ; ಬಡತನದ ನಿರ್ಮೂಲನೆ; ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ; ಲಿಂಗ ಸಮಾನತೆ.


7. ಗ್ರಾಮೀಣ ಉನ್ನತೀಕರಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ:

ಗ್ರಾಮೀಣ ಪ್ರದೇಶಗಳಲ್ಲಿ ಆಧುನಿಕ ಮೂಲಸೌಕರ್ಯಗಳು, ಭೌತಿಕ ವಿಭಾಗ, ವಿದ್ಯುನ್ಮಾನ, ಜ್ಞಾನ ಮತ್ತು ಆರ್ಥಿಕ ಸಂಪರ್ಕವನ್ನು ಸ್ಥಾಪಿಸುವುದು.
ಪ್ರಾದೇಶಿಕ ಭಾಷೆ: ಐಸಿಟಿ ಯಲ್ಲಿ ಬಳಕೆ.
ತೋಟಗಾರಿಕೆ: ಸಂಶೋಧನೆ ಮತ್ತು ಅಭಿವೃದ್ಧಿಯೊಂದಿಗೆ ಹೈಬ್ರೀಡ್ ಬೀಜ ಉತ್ಪಾದನೆ; ಹಣ್ಣು ಮತ್ತು ತರಕಾರಿ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸುವುದು, ಪ್ಯಾಕೇಜಿಂಗ್ ಮತ್ತು ಮಾರಾಟ ಮಾಡುವಿಕೆ.
ಕೃಷಿ ಆಹಾರ ಸಂಸ್ಕರಣೆ: ಗ್ರಾಮದ ಸಮೂಹಗಳನ್ನು ರೂಪಿಸುವಿಕೆ ಮತ್ತು ಆಹಾರ ಸಂಗ್ರಹ ಸ್ಥಾಪಿಸುವುದು; ಮತ್ತು ಆಹಾರ ಪ್ಯಾಕ್ ಮಾಡುವುದು ಮತ್ತು ಮಾರಾಟ.
ಜೈವಿಕ ಇಂಧನ ಸಾಗುವಳಿ ಮತ್ತು ತೆಗೆಯುವಿಕೆ.
ವೈಜ್ಞಾನಿಕ ನೀರು ಸಂಗ್ರಹಣೆ.

━━━━━━━━━━━━━━━━━━━━━━━━━━━━━━━━━━━━━━━━━━━━━


●. ವಿಭಾಗ-2:
ಸ್ವಾಭಾವಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ ವಿಜ್ಞಾನದ ಆರೋಗ್ಯ ಮತ್ತು ಶುಚಿತ್ವದಲ್ಲಿ ಮುಂದುವರೆದ ಮತ್ತು ಆಧುನಿಕ ದೋರಣೆಗಳು – (ಏಳು ಘಟಕಗಳು)


1. ಸ್ವಾಭಾವಿಕ ವಿಜ್ಞಾನ:

ಸಸ್ಯಗಳು - ಬೆಳೆಗಳ ಸಸ್ಸಗಳು, ಅರಣ್ಯ ರೂಪಗಳು, ವೈದ್ಯಕೀಯ ಮತ್ತು ಸುಗಂಧದ ಸಸ್ಯಗಳು, ಸಸ್ಯಗಳ ಉಪಯುಕ್ತತೆ ಮತ್ತು ಮಾನವ ವ್ಯವಹಾರಗಳು (ಉಪಯುಕ್ತತೆ), ದ್ಯುತಿ ಸಂಶ್ಲೇಷಣೆ, ಉತ್ಸರ್ಜನ (Transpiration), ಹಾನಿಕಾರಕ ಸಸ್ಯಗಳು.
ಪ್ರಾಣಿಗಳ ಸಾಮಾನ್ಯ ವರ್ಗೀಕರಣ - ಸಾಕು ಪ್ರಾಣಿಗಳು ಮತ್ತು ವನ್ಯ ಮೃಗಗಳು. ಪ್ರಾಣಿಗಳು ಮತ್ತು ಮಾನವ ವ್ಯವಹಾರಗಳ ಉಪಯುಕ್ತತೆಗಳು (ಉಪಯುಕ್ತತೆ).
ಸೂಕ್ಷ್ಮ ಜೀವಿಗಳು: ಸಾಮಾನ್ಯ ಬ್ಯಾಕ್ಟೀರಿಯಾ, ವೈರಸ್, ಶೀಲೀಂಧ್ರಗಳು (Fungi), ಮನುಷ್ಟವರ್ಗದ ಮೇಲೆ ಅದರ ಪ್ರಯೋಜನಕಾರಿ ಮತ್ತು ಹಾನಿಕಾರಕ ಪರಿಣಾಮ.


2. ಕೃಷಿ ವಿಜ್ಞಾನ:

ರಾಷ್ಟ್ರೀಯ ಮತ್ತು ರಾಜ್ಯದ ಅರ್ಥವ್ಯವಸ್ಥೆಯಲ್ಲಿ ಕೃಷಿ ಸನ್ನಿವೇಶ ಮತ್ತು ಕೃಷಿಯ ಪ್ರಾಮುಖ್ಯತೆ, ಬೆಳೆ ಉತ್ಪಾದನೆ ಮತ್ತು ಸಂರಕ್ಷಣೆ ರಾಸಾಯನಿಕ ಗೊಬ್ಬರ ಮತ್ತು ಸಾವಯವ ಗೊಬ್ಬರ (ವರ್ಮಿ ಕಾಂಪೋಸ್ಟ್), ಕೃಷಿ ಉದ್ಯಮಗಳ ವೆಚ್ಚ ಲಾಭ ಮತ್ತು ಹೂಡಿಕೆ ವಿಶ್ಲೇಷಣೆ, ಉತ್ಪಾದನೆ ಮತ್ತು ಉತ್ಪಾದಕತೆ ವರ್ಧನೆ ಕಾರ್ಯಕ್ರಮಗಳು - ಹಸಿರು, ಬಿಳಿ, ಹಳದಿ, ನೀಲಿ ಕ್ರಾಂತಿಗಳು, ಸಾವಯವ ಕೃಷಿ ಮತ್ತು ಕೃಷಿ ಯಂತ್ರಗಳ ಇತ್ತೀಚಿನ ಪ್ರವೃತ್ತಿಗಳು. ಕೃಷಿ ವ್ಯವಸ್ಥೆ ಮತ್ತು ಅದಕ್ಕೆ ಆಧಾರವಾಗಿರುವುದು, ಕೃಷಿ ಸಂಸ್ಕರಣೆ ಮತ್ತು ಕೃಷಿಯಾಧಾರಿತ ಕೈಗಾರಿಕೆಗಳು, ಸುಗ್ಗಿಯ ನಂತರದ ತಂತ್ರಜ್ಞಾನ ಮತ್ತು ಮೌಲ್ಯ ವರ್ಧನೆ, ಭೂಮಿ ಮತ್ತು ಜಲ ಸಂಪನ್ಮೂಲಗಳ ನಿರ್ವಹಣೆ.


3. ತೋಟಗಾರಿಕೆ ಮತ್ತು ರೇಷ್ಮೆ ಕೃಷಿ:

ತೋಟಗಾರಿಕೆ ಪ್ರಾಮುಖ್ಯತೆ – ತೋಟಗಾರಿಕೆ - ಹೂವಿನ ಕೃಷಿ, ತರಕಾರಿಗಳು, ಹಣ್ಣುಗಳು, ತೋಟದ ಬೆಳೆಗಳು, ಮಸಾಲೆಗಳು, ಸುಗಂಧದ ಮತ್ತು ಔಷಧೀಯ ಸಸ್ಯಗಳ ಪ್ರಾಮುಖ್ಯತೆ, ಹೈಟೆಕ್ ತೋಟಗಾರಿಕೆ (ಹಸಿರು/ಪಾಲಿಮನೆ ಸಾಗುವಳಿ). ಸುಗ್ಗಿಯ ನಂತರ ನಿರ್ವಹಣೆ ಮತ್ತು ಮೌಲ್ಯವರ್ಧನೆ, ತೋಟಗಾರಿಕೆ ಅಭಿವೃದ್ಧಿಗೆ ವಿಶೇಷ ಸಂವರ್ಧನೆ ಕಾರ್ಯಕ್ರಮಗಳು.
ರೇಷ್ಮೆ ಕೃಷಿ: ಭಾರತ ಮತ್ತು ಕರ್ನಾಟಕದಲ್ಲಿ ರೇಷ್ಮೆ ಕೃಷಿಯ ಪ್ರಾಮುಖ್ಯತೆ, ಉಪ್ಪು ನೇರಳೆ (ಹಿಪ್ಪು ನೇರಳೆ) ಮತ್ತು ಉಪ್ಪು ನೇರಳೆಯಲ್ಲದ ರೇಷ್ಮೆ ಕೃಷಿ ಹಂಚಿಕೆ, (ಪ್ರದೇಶ, ಉತ್ಪಾದನೆ ಮತ್ತು ರಾಜ್ಯಾದ್ಯಂತ ಉತ್ಪಾದಕತೆ) ರೇಷ್ಮೆಗೂಡು ಉತ್ಪಾದನೆ.


4. ಜೈವಿಕ ತಂತ್ರಜ್ಞಾನದಲ್ಲಿ ಪ್ರಾರಂಭಗಳು:

ಜೈವಿಕ ತಂತ್ರಜ್ಞಾನದ ಪರಿಕಲ್ಪನೆ, ತಳೀಯ ಎಂಜಿನಿಯರಿಂಗ್ ಮತ್ತು ಕಾಂಡಕೋಶಗಳ ಸಂಶೋಧನ ಪರಿಚಯ ಮತ್ತು ವಿನಿಯೋಗ, ದ್ರವ್ಯ ತಳಿ ಮತ್ತು ಆಯ್ಕೆಗೆ ನೆರವಾದ ಮಾರ್ಕರ್, ಟ್ರಾನ್ಸ್ಜಿನಿಕ ಸಸ್ಯಗಳು (ಕುಲಾಂತರಿ ತಳಿ) ಮತ್ತು ಅದರ ಪ್ರಯೋಜನ, ಪರಿಸರ ಮತ್ತು ಸಮಾಜದ ಮೇಲೆ ಇದರ ಹಾನಿಕಾರಕ ಪರಿಣಾಮಗಳು, ಕೃಷಿಯಲ್ಲಿ ಜೈವಿಕ ತಂತ್ರಜ್ಞಾನ (ಜೈವಿಕ-ಗೊಬ್ಬರ, ಜೈವಿಕ-ಕ್ರಮಿನಾಶಕಗಳು, ಜೈವಿಕ-ಇಂಧನಗಳು, ಅಂಗಾಂಶ ಕೃಷಿ, ಕ್ಲೋನಿಂಗ್) ಆಹಾರ ಜೈವಿಕ-ತಂತ್ರಜ್ಞಾನ, ಆಹಾರ ಸುರಕ್ಷತೆ ಮತ್ತು ಸೂಕ್ಷ್ಮಜೀವಿಯ ಮಾನದಂಡಗಳು, ಆಹಾರ ಗುಣಮಟ್ಟದ ಮಾನದಂಡಗಳು, ಆಹಾರದ ಬಗ್ಗೆ ಕಾನೂನುಗಳು ಮತ್ತು ನಿಯಂತ್ರಣಗಳು.


5. ಪಶುಸಂಗೋಪನೆ (ಪಶು, ವೈದ್ಯಕೀಯ ಹೈನುಗಾರಿಕೆ ಮತ್ತು ಮೀನುಗಾರಿಕೆ ವಿಜ್ಞಾನ), ರಾಷ್ಟ್ರೀಯ ಮತ್ತು ರಾಜ್ಯದ ಆರ್ಥಿಕತೆಯಲ್ಲಿ ಜಾನುವಾರುಗಳ ಪ್ರಾಮುಖ್ಯತೆ, ದನ, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿಗಳು ಪ್ರಮುಖ ವಿದೇಶಿ ಮತ್ತು ಭಾರತೀಯ ತಳಿಗಳು.
ಹಾಲು ಉತ್ಪಾದನೆ ನಿರ್ವಹಣೆ ಮತ್ತು ಕ್ಷೀರಾಭಿವೃದ್ಧಿ, ಹಾಲು ಸಹಕಾರ ಸಂಘಗಳು ಮತ್ತು ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಅವುಗಳ ಪಾತ್ರ-ಅಮೂಲ್, ಕೆಎಂಎಫ್.

ಭಾರತದಲ್ಲಿ ಮೀನುಗಾರಿಕೆ ಸಂಪನ್ಮೂಲಗಳು ಮತ್ತು ಸಂಭವನೀಯ ಸಾಗರ ಮೀನುಗಾರಿಕೆ ಸಂಪನ್ಮೂಲಗಳು, ಭಾರತದ ಪ್ರತ್ಯೇಕ ಆರ್ಥಿಕ ವಲಯ, ಕರಾವಳಿ ಜಲಚರ ಸಂಸ್ಕೃತಿ ಮತ್ತು ಕಡಲ ಸಂಸ್ಕೃತಿ, ಒಳನಾಡ ಜಲಸಂಪನ್ಮೂಲಗಳು, ವಾಣಿಜ್ಯ ಸ್ವರೂಪದಲ್ಲಿ ಮುಖ್ಯವಾಗಿರುವ ಮೀನುಗಳು, ಜವಾಬ್ದಾರಿಯುತ ಮೀನುಗಾರಿಕೆ, ಅಲಂಕಾರಿಕ ಮೀನು ಉತ್ಪಾದನೆ, ಪಶು ಸಂಪತ್ತು ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಗಣಮಟ್ಟ ನಿಯಂತ್ರಣ.


6. ಕೃಷಿ ಅಭಿವೃದ್ಧಿ ನೀತಿಗಳು, ಕಾರ್ಯಕ್ರಮಗಳು ಮತ್ತು ವ್ಯಾಪಾರ:

ರಾಷ್ಟ್ರದ ಮತ್ತು ಕರ್ನಾಟಕ ರಾಜ್ಯದ ಕೃಷಿನೀತಿಗಳ ಮುಖ್ಯ ಲಕ್ಷಣಗಳು, ಕೃಷಿ ಬೆಲೆ ನೀತಿ, ರಾಷ್ಟ್ರೀಯ ಬೀಜ ನೀತಿ, ಕೃಷಿ ಸಾಲನೀತಿ, ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆ (ಎನ್ಎಆರ್ಎಸ್) ಭಾರತದಲ್ಲಿ ರೈತರ ಅಭಿವೃದ್ಧಿ ಕಾರ್ಯಕ್ರಮಗಳು, ಕೃಷಿ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳು, ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಕೃಷಿ ವ್ಯಾಪಾರೋದ್ಯಮದ ಅಭಿವೃದ್ಧಿ/ಬಲಪಡಿಸುವುದು ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಗುಣಮಟ್ಟ, ಬೆಳೆ ವಿಮೆ ಯೋಜನೆ – ರಾಷ್ಟ್ರೀಯ ಕೃಷಿ ವಿಮಾಯೋಜನೆ (ಎನ್ಎಐಎಸ್), ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ಡಬ್ಲೂಬಿಸಿಐಎಸ್), ಆಹಾರ ಭದ್ರತೆ, ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ, ಕೃಷಿ ರಫ್ತು ಸಾಮಥ್ರ್ಯ-ತೋಟಗಾರಿಕೆ-ಜಾನುವಾರು ಉತ್ಪನ್ನಗಳು, ಕೃಷಿಯ ವಾಣಿಜ್ಯೀಕರಣ ಮತ್ತು ಜಾಗತೀಕರಣ-ಡಬ್ಲೂಟಿಓ, ಎಒಎ (ಕೃಷಿ ಒಪ್ಪಂದ).


7. ಆರೋಗ್ಯ ಮತ್ತು ನೈರ್ಮಲ್ಯ:

ಮಾನವ-ಜೀರ್ಣಕಾರಿ, ರಕ್ತಪರಿಚಲನೆ, ಉಸಿರಾಟ, ವಿಸರ್ಜಕಾಂಗಗಳು ಮತ್ತು ಸಂತಾನೋತ್ಪತ್ತಿಯ ವ್ಯವಸ್ಥೆಗಳು, ಅಲೋಪತಿ, ಭಾರತದ ವೈದ್ಯ ಪದ್ಧತಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ (ಆಯುಶ್), ಎನ್ಆರ್ಎಚ್ಎಂ, ರಾಷ್ಟ್ರೀಯ ಎಚ್ಐವಿ ಕಾರ್ಯಕ್ರಮ, ಕ್ಷಯ ರೋಗ ಕಾರ್ಯಕ್ರಮ, ಪಿ ಮತ್ತು ಎಸ್ಎಂ (ನಿವಾರಣೆ ಮತ್ತು ಸಾಮಾಜಿಕ ಔಷಧ), ರೋಗಗಳು-ಸೋಂಕು ರೋಗಗಳು, ಸಾಂಕ್ರಾಮಿಕ ರೋಗಗಳು, ಸ್ಥಳೀಯ ರೋಗಗಳು, ಅಂಟು ರೋಗಿಯಿಂದ ಉಂಟಗುವ ರೋಗಗಳು, ಸುಕ್ಷ್ಮ ಜೀವಿಗಳ ವಿವಿಧ ಗುಂಪುಗಳಿಂದ ಉಂಟಾದ ಸೋಂಕುಗಳ ಬಗ್ಗೆ ಸಾಮಾನ್ಯ ಜ್ಞಾನ-ಜಠರ, ಕಾಲರ, ಕ್ಷಯ, ಮಲೇರಿಯಾ, ವೈರಸ್ ಸೋಂಕುಗಳು, ಎಚ್ಐವಿ, ಮಿದುಳಿನ ಉರಿಯೂತ (ಮೆದಳು ಜ್ವರ), ಚಿಕನ್ಗುನ್ಯಾ, ಹಕ್ಕಿಜ್ವರ, ಡೆಂಗ್ಯೂ, ಗಲಭೆ ಸಮಯದಲ್ಲಿ ಪ್ರತಿಬಂಧಕ ಕ್ರಮಗಳು. ಲಸಿಕೆಗಳು, ರಕ್ಷಣೆಯ ಪ್ರಸ್ತಾವನೆ, ಡಿಪಿಟಿ ಉತ್ಪಾದನೆ ಮತ್ತು ರೇಬೀಸ್ ಲಸಿಕೆಗಳು ಮತ್ತು ಹೆಪಟೈಟಿಸ್ ಲಸಿಕೆ, ರೋಗ ಲಕ್ಷಣ ನಿರ್ಣಯದಲ್ಲಿ ಪ್ರತಿರಕ್ಷೆ ವಿಧಾನ ಅನ್ವಯತೆ, ಆರೋಗ್ಯ ಜಾಗೃತಾ ಕಾರ್ಯಕ್ರಮ, ಇತ್ಯಾದಿ.

━━━━━━━━━━━━━━━━━━━━━━━━━━━━━━━━━━━━━━━━━━━━━


●. ವಿಭಾಗ-3:
ಪರಿಸರ ಮತ್ತು ಪರಿಸರ ವಿಜ್ಞಾನದಲ್ಲಿ ಅಭಿವೃದ್ಧಿಯ ಸವಾಲುಗಳು ಮತ್ತು ವಿಷಯಗಳು (ಆರು ಘಟಕಗಳು)


1. ಪರಿಸರದ ಭಾಗಗಳು:

ಅಭಿವೃದ್ಧಿ ಮತ್ತು ರಕ್ಷಣೆ, ಅರಣ್ಯ ಸಂರಕ್ಷಣೆ ಮತ್ತು ಪರಿಸರವಾದ ವನ್ಯಜೀವಿ ಸಂರಕ್ಷಣೆ, ಪ್ರಜೆಕ್ಟ್ ಟೈಗರ್ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು, ಅರಣ್ಯ ಮತ್ತು ಪರಿಸರದಲ್ಲಿ ಗಣಿಗಾರಿಕೆ ಪರಿಣಾಮ, ಕೆಂಪು ಅಂಕಿಅಂಶ ಪುಸ್ತಕ; ವಿನಾಶದಂಚಿನಲ್ಲಿರುವ ಸಸ್ಯ ತಳಿಗಳು, ಪರಿಸರ ಪ್ರವಾಸೋದ್ಯಮ ಮತ್ತು ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳು.


2. ಸ್ವಾಭಾವಿಕ ಸಂಪನ್ಮೂಲಗಳು:

ಅರಣ್ಯ-ಅರಣ್ಯದ ಬಗೆಗಲು ಮತ್ತು ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಸಂಪನ್ಮೂಲಗಳು ಜಲಸಂಪನ್ಮೂಲಗಳು-ಪ್ರವಾಹ ಮತ್ತು ಬರ ಸಂಭವಗಳು, ಜಲಸಂಪನ್ಮೂಲ ನಿರ್ವಹಣೆ, ಭೂ ಸಂಪನ್ಮೂಲಗಳು ಮಳೆ ನೀರು ಸಂಗ್ರಹ, ಮೂಲಸೌಕರ್ಯ ಅಭಿವೃದ್ಧಿ-ಅಣೆಕಟ್ಟುಗಳು, ರಸ್ತೆಗಳು, ರೈಲು ಕಂಬಿಗಳು, ಸೇತುವೆಗಳು, ಕೈಗಾರಿಕೆ, ನಗರೀಕರಣ ಮತ್ತು ತ್ಯಾಜ್ಯ ನೀರಿನ ನಿರ್ವಹಣೆ, ಸ್ವಾಧೀನತೆ ಮತ್ತು ಪುನರ್ವಸತಿ ಮತ್ತು ಮಾನವ ಹಸ್ತಕ್ಷೇಪಗಳ ಕಾರಣವಾದ ಇತರ ವಿಷಯಗಳು ಮತ್ತು ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳು.


3. ಪರಿಸರ ಪದ್ಧತಿ ಮತ್ತು ಜೀವ ವೈವಿಧ್ಯತೆ -

ಪರಿಸರ ವಿಜ್ಞಾನ - ಪರಿಸರ ವಿಜ್ಞಾನದ ಮೂಲ ಪರಿಕಲ್ಪನೆಗಳು, ಪರಿಸರ ಪದ್ಧತಿ, ಆಹಾರ ಸರಪಳಿ, ಜೀವ ವೈವಿಧ್ಯತೆ ಮತ್ತು ಅದರ ಸಂರಕ್ಷಣೆ, ಜೀವ ವೈವಿಧ್ಯತೆಯ ಅಪಾಯದ ಸ್ಥಳಗಳು, ವೈವಿಧ್ಯತೆಯ ಅಪಾಯಗಳು, ಅರಣ್ಯ ಸಮರ್ಥನೀಯ ಅಭಿವೃದ್ಧಿ ಮತ್ತು ನಿರ್ವಹಣೆ, ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳು, ಐಪಿಆರ್.


4. ಪರಿಸರ ಮಾಲಿನ್ಯ ಮತ್ತು ಘನ ತ್ಯಾಜ್ಯ ವಿರ್ವಹಣೆ –

ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ, ಶಬ್ದಮಾಲಿನ್ಯ ಮತ್ತು ಪರಿಹಾರಗಳು, ಘನತ್ಯಾಜ್ಯ ವಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆಯ ವಿಧಗಳು, ಘನತ್ಯಾಜ್ಯ ಉತ್ಪಾದನೆ ಮೇಲೆ ಪರಿಣಾಮ ಬೀರುವ ಅಂಶಗಳು, ಘನತ್ಯಾಜ್ಯ ಪರಿಣಾಮ, ಪುನಃಬಳಕೆ ಮತ್ತು ಮರುಉಪಯೋಗಿಸುವಿಕೆ. ಸಂಬಂಧಪಟ್ಟ ಯಾವುದೇ ಪ್ರಸ್ತುತ ವಿಷಯಗಳು ಪರಿಸರ ಸಂರಕ್ಷಣೆ ಅಧಿನಿಯಮ, ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ), ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಜಲಮಾಲಿನ್ಯ ತೆರಿಗೆ ಅಧಿನಿಯಮ.


5. ಪರಿಸರ ಮತ್ತು ಮಾನವ ಆರೋಗ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ -

ಹವಾಗುಣ, ಬದಲಾವಣೆ, ತೀಕ್ಷ್ಣ ಮಳೆಗಳು, ಜಾಗತಿಕ ತಾಪಮಾನ, ಬರಡು ಭೂಮಿ ಸುಧಾರಣೆ, ಜಲಾನಯನ ಪ್ರದೇಶ ನಿರ್ವಹಣೆ, ಸುಸ್ಥಿರ ಸಮರ್ಥನೀಯ ಅಭಿವೃದ್ಧಿಗಾಗಿ ಜಲಾನಯನ ಪ್ರದೇಶದ ಪ್ರಸ್ತಾವನೆ, ನದಿಗಳಿಗೆ ಸಂಪರ್ಕ ಕಲ್ಪಿಸುವುದು, ನೀರಿನ ಬಿಕ್ಕಟ್ಟು, ಯಾವುದೇ ಇತರ ಸಂಬಂಧಪಟ್ಟ ಪ್ರಸ್ತುತ ವಿಷಯಗಳಂಥ ಜಾಗತಿಕ ಪರಿಸರಾತ್ಮಕ ವಿಷಯಗಳು.


6. ರಾಜ್ಯ ಸಮುದಾಯ -

ನಾಗರಿಕ ಸಮಾಜದ ಪ್ರಕ್ರಿಯೆಗಳು, ಜಂಟಿ ಅರಣ್ಯ ನಿರ್ವಹಣಾ ವ್ಯವಸ್ಥೆ - ಸಮುದಾಯ ಭಾಗವಹಿಸುವಿಕೆ, ಅಭಿವೃದ್ಧಿ, ಸ್ಥಳಾಂತರ ಮತ್ತು ಪುನರ್ವಸತಿ, ವಿಪತ್ತು ನಿರ್ವಹಣೆ, ಸಮರ್ಥನೀಯ ಅರಣ್ಯ ಅಭಿವೃದ್ಧಿ, ಪ್ರವಾಹ, ಭೂಕಂಪ, ಬರ, ಸುನಾಮಿ, ಜಾಗತಿಕ ತಾಪಮಾನ, ಓಜೋನ್ ಪದರ, ಸಿಎಫ್ಸಿ, ಕಾರ್ಬನ್ಕ್ರೆಡಿಟ್.

... ಮುಂದುವರೆಯುವುದು.

(ಕೃಪೆ: ಯುಸಿಸಿ ಬೆಂಗಳೂರು) 

Tuesday, 21 February 2017

☀ 2014 ರಂತೆ️ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಮಾದರಿ, ಅಂಕ : (PART II) (KAS MAINS QUESTION PAPERS PATTERN according to 2014 )

☀ 2014 ರಂತೆ️ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಮಾದರಿ, ಅಂಕ : (PART II)
(KAS MAINS QUESTION PAPERS PATTERN according to 2014 )
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಪರಿಕ್ಷೆಯ ಮಾದರಿ
(KAS Exam Pattern)

ಮುಂದುವರಿದ ಭಾಗ...

■. ಕನ್ನಡ 150 ಅಂಕ

■. ಇಂಗ್ಲಿಷ್ 150 ಅಂಕ


■. ಪತ್ರಿಕೆ 1 ಪ್ರಬಂಧ-250 ಅಂಕ
(ಅಂತಾರಾಷ್ಟ್ರೀಯ, ರಾಷ್ಟ್ರೀಯ ವಿಷಯಕ್ಕೆ 125 ಅಂಕದ ಪ್ರಬಂಧ, ರಾಜ್ಯ ಮತ್ತು ಸ್ಥಳೀಯ ಮಹತ್ವದ 125 ಅಂಕದ ಮತ್ತೊಂದು ಪ್ರಬಂಧ)


■. ಪತ್ರಿಕೆ 2 ಸಾಮಾನ್ಯ ಅಧ್ಯಯನ 1-250 ಅಂಕ
(ಇತಿಹಾಸ, ಸಂಸ್ಕೃತಿ, ಭಾರತದ ಆರ್ಥಿಕತೆ, ಯೋಜನೆ, ಗ್ರಾಮೀಣಾಭಿವೃದ್ಧಿ)


■. ಪತ್ರಿಕೆ 3 ಸಾಮಾನ್ಯ ಅಧ್ಯಯನ 2-250 ಅಂಕ
(ಭೌತಿಕ ಲಕ್ಷಣಗಳು ಮತ್ತು ನೈಸರ್ಗಿಕ ಸಂಪತ್ತು, ಭಾರತದ ಸಂವಿಧಾನ, ಸಾರ್ವಜನಿಕ ಆಡಳಿತ)


■. ಪತ್ರಿಕೆ 4 ಸಾಮಾನ್ಯ ಅಧ್ಯಯನ 3-250 ಅಂಕ
(ಭಾರತದ ಅಭಿವೃದ್ಧಿಯಲ್ಲಿ ಐಟಿ, ವಿಜ್ಞಾನದ ಬಳಕೆ, ಜೀವಶಾಸ್ತ್ರ, ಕೃಷಿ, ಆರೋಗ್ಯ, ಶುಚಿತ್ವದ ಹೊಸ ಅಲೆಗಳು, ಎಕಾಲಜಿ, ಪರಿಸರದ ಸವಾಲುಗಳು)


■. ಪತ್ರಿಕೆ 5 ಸಾಮಾನ್ಯ ಅಧ್ಯಯನ 4-250 ಅಂಕ
(ನೈತಿಕತೆ, ಪ್ರಾಮಾಣಿಕ, ಕೌಶಲ್ಯ ವಿಷಯಗಳು)


■. ಪತ್ರಿಕೆ 6 ಐಚ್ಚಿಕ ವಿಷಯ, ಪತ್ರಿಕೆ 1-250 ಅಂಕ

■. ಪತ್ರಿಕೆ 7 ಐಚ್ಚಿಕ ವಿಷಯ, ಪತ್ರಿಕೆ 2-250 ಅಂಕ

( ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯ ಮಾದರಿಯಲ್ಲಿ ಪಠ್ಯಕ್ರಮ ಬದಲಾವಣೆ ಮಾಡಲಾಗಿದೆ. ಮುಖ್ಯ ಪರೀಕ್ಷೆಯ ಒಟ್ಟು ಅಂಕವನ್ನು 1800ರಿಂದ 1750ಕ್ಕೆ ಇಳಿಸಲಾಗಿದೆ.)

(Courtesy : UCC Bangalore)

Monday, 20 February 2017

☀️ ಕೆಎಎಸ್‌ ಪೂರ್ವಭಾವಿ ಪರಿಕ್ಷೆಯ ಪಠ್ಯಕ್ರಮ : (PART I) (KAS PRELIMINARY PAPERS SYLLABUS)

☀️ ಕೆಎಎಸ್‌ ಪೂರ್ವಭಾವಿ ಪರಿಕ್ಷೆಯ ಪಠ್ಯಕ್ರಮ : (PART I)
(KAS PRELIMINARY PAPERS SYLLABUS)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)


 ಪೂರ್ವಭಾವಿ ಪರಿಕ್ಷೆಯು ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಐಎಎಸ್‌ ಪೂರ್ವಭಾವಿ ಪರೀಕ್ಷೆಯ ಸ್ವರೂಪದಲ್ಲಿರುತ್ತದೆ.

ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ (ಬಹು ಆಯ್ಕೆ) ಮಾದರಿಯ ಎರಡು ಸಾಮಾನ್ಯ ಜ್ಞಾನ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪ್ರತಿ ಪತ್ರಿಕೆಯು ಎರಡು ಗಂಟೆ ಕಾಲಾವಧಿಯನ್ನು ಹೊಂದಿರುತ್ತದೆ. ಹಾಗೇ ಗರಿಷ್ಠ 200 ಅಂಕಗಳನ್ನು ನಿಗದಿಪಡಿಸಲಾಗಿದೆ.

ಪ್ರತಿ ಪತ್ರಿಕೆಯಲ್ಲಿ ನೂರು ಪ್ರಶ್ನೆಗಳಿರುತ್ತವೆ.

ಒಂದು ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗಿದೆ.

ತಪ್ಪು ಉತ್ತರವನ್ನು ಗುರುತಿಸುವ ಪ್ರಶ್ನೆಗಳಿಗೆ ಅಂಕಗಳನ್ನು ಕಳೆಯುವ ಋಣಾತ್ಮಕ ಅಂಕ ಪದ್ಧತಿಯನ್ನು ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದೆ.

ಈ ಪದ್ಧತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಜ್ಞರು ಭಾವಿಸಿದ್ದಾರೆ. @spardhaloka


☀️ KAS PRELIMINARY PAPERS SYLLABUS (explanation)
━━━━━━━━━━━━━━━━━━━━━━━━━━━━━━━━━━━━━━━━━━━━━

ಕೆಎಎಸ್‌ ಹುದ್ದೆಗಳಿಗೂ ಐಎಎಸ್‌  ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದ ಮಾದರಿಯನ್ನೇ ಅನುಸರಿಸಲಾಗಿದೆ. ಪೂರ್ವಭಾವಿ ಪರೀಕ್ಷೆಯು ಒಟ್ಟು 400 ಅಂಕಗಳಿಗೆ ನಡೆಸಲಾಗುವುದು.

ಎರಡು ಸಾಮಾನ್ಯ ಜ್ಞಾನ ಪತ್ರಿಕೆಗಳ ಪಠ್ಯಕ್ರಮ ಈ ಕೆಳಕಂಡಂತಿದೆ.


☀️ ಪತ್ರಿಕೆ–1:

ಈ ಪತ್ರಿಕೆಯಲ್ಲಿ 100 ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಎರಡು ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಎರಡು ಗಂಟೆಯ ಕಾಲಾವಧಿಯಲ್ಲಿ ಉತ್ತರಿಸಬೇಕು.

ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳು,
ಕರ್ನಾಟಕವನ್ನು ಮುಖ್ಯವಾಗಿರಿಸಿಕೊಂಡು ಭಾರತ ಇತಿಹಾಸದ ಮೇಲೆ ಪ್ರಶ್ನೆಗಳನ್ನು ಕೇಳಲಾಗುವುದು.
ಮುಖ್ಯವಾಗಿ ರಾಷ್ಟ್ರೀಯ ಚಳವಳಿ, ಸ್ವಾತಂತ್ರ್ಯಹೋರಾಟ, ಆ ಕಾಲಘಟ್ಟದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ, ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದ ಪ್ರಶ್ನೆಗಳಿರುತ್ತವೆ.
ಜಾಗತಿಕ ಭೂಗೋಳ, ಭಾರತದ ಭೂಗೋಳ ಸೇರಿದಂತೆ ಕರ್ನಾಟಕ ಭೂಗೋಳವನ್ನು ಮುಖ್ಯವಾಗಿರಿಸಿಕೊಂಡ ಪ್ರಶ್ನೆಗಳು,
ಕರ್ನಾಟಕವನ್ನು ಮುಖ್ಯವಾಗಿರಿಸಿಕೊಂಡು ದೇಶದ ರಾಜಕೀಯ ವ್ಯವಸ್ಥೆ, ಆರ್ಥಿಕ ಸುಧಾರಣೆಗಳು, ಗ್ರಾಮೀಣಾಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯಾ ಶಾಸ್ತ್ರ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಒಳಗೊಂಡ ಭಾರತದ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ, ಈ ಅಂಶಗಳನ್ನು ಪ್ರಾಮುಖ್ಯವಾಗಿರಿಸಿಕೊಂಡು ಪ್ರಶ್ನೆಗಳನ್ನು ಕೇಳಲಾಗುವುದು.

ಈ ಪತ್ರಿಕೆಯು ಸಂಪೂರ್ಣವಾಗಿ ಪದವಿ ಮಟ್ಟದಾಗಿರುತ್ತದೆ.


☀️ ಪತ್ರಿಕೆ–2:

ಈ ಪತ್ರಿಕೆಯಲ್ಲಿ ಅಭ್ಯರ್ಥಿಗಳು ಎರಡು ಗಂಟೆಯ ಕಾಲಾವಧಿಯಲ್ಲಿ 200 ಅಂಕಗಳಿಗೆ 100 ಪ್ರಶ್ನೆಗಳಿಗೆ ಉತ್ತರಿಸಬೇಕು.

ರಾಜ್ಯದ ಪ್ರಚಲಿತ ವಿದ್ಯಮಾನಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ದೈನಂದಿನ ವಿಜ್ಞಾನ, ಪರಿಸರ ವಿಜ್ಞಾನ ಮತ್ತು ಸಮಕಾಲೀನ ತಂತ್ರಜ್ಞಾನ ಕುರಿತ ಪ್ರಶ್ನೆಗಳು ಇರುತ್ತವೆ.
ವಿಜ್ಞಾನ, ಪರಿಸರ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಎಸ್‌ಎಸ್‌ಎಲ್‌ಸಿ ಮಟ್ಟದಾಗಿರುತ್ತವೆ. ಅಥವಾ ಒಬ್ಬ ಸುಕ್ಷಿತ ವ್ಯಕ್ತಿ ಸಾಮಾನ್ಯವಾಗಿ ತಿಳಿದಿರುವ ಜ್ಞಾನ ಮಟ್ಟದಲ್ಲಿ ವಿಜ್ಞಾನ ಪ್ರಶ್ನೆಗಳನ್ನು ಕೇಳಲಾಗುವುದು.
ಎಸ್‌ಎಸ್‌ಎಲ್‌ಸಿ ಮಟ್ಟದ ಮನೋ ಸಾಮರ್ಥ್ಯದ ಪ್ರಶ್ನೆಗಳನ್ನು ಕೇಳಲಾಗುವುದು. ಇದರಲ್ಲಿ ಗ್ರಹಿಕೆ, ತಾರ್ಕಿಕ ಸಮರ್ಥನೆ ಮತ್ತು ವಿಶ್ಲೇಷಣೆ, ನಿರ್ಧಾರ ಕೈಗೊಳ್ಳುವಿಕೆ, ಸಮಸ್ಯೆ ಬಿಡಿಸುವಿಕೆ, ಮೂಲ ಗಣಿದ ಜ್ಞಾನ, ದತ್ತಾಂಶ, ಪರಿಮಾಣ, ಸಂಖ್ಯೆಗಳು, ನಕ್ಷೆಗಳು, ರೇಖಾಚಿತ್ರಗಳು ಮತ್ತು ಕೋಷ್ಟಕಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ.

ಎರಡನೇ ಪತ್ರಿಕೆಯಲ್ಲಿ ಮನೋಸಾಮರ್ಥ್ಯ ಮತ್ತು ಗಣಿತದ ಪ್ರಶ್ನೆಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಪ್ರಶ್ನೆಗಳು ಪದವಿ ಮಟ್ಟದಲ್ಲಿರುತ್ತವೆ.


☀️ ಋಣಾತ್ಮಕ ಮೌಲ್ಯಮಾಪನ:

ಅಭ್ಯರ್ಥಿಗಳು ತಪ್ಪು ಉತ್ತರವನ್ನು ಗುರುತಿಸಿದ ಪ್ರಶ್ನೆಗೆ ಪಡೆದ ಅಂಕಗಳಲ್ಲಿ 1/4 ಅಂಕವನ್ನು ಕಳೆಯಲಾಗುವುದು.
ಅಂದರೆ ಅಭ್ಯರ್ಥಿಯು 100 ಪ್ರಶ್ನೆಗಳಲ್ಲಿ 40 ಪ್ರಶ್ನೆಗಳನ್ನು ತಪ್ಪಾಗಿ ಗುರುತಿಸಿದ್ದರೆ ಅಭ್ಯರ್ಥಿಯು ಪಡೆದ ಒಟ್ಟು ಅಂಕಗಳಲ್ಲಿ 10 ಅಂಕಗಳನ್ನು ಕಳೆಯಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಉತ್ತರವನ್ನು ನಿಖರವಾಗಿ ಗೊತ್ತಿದ್ದಲ್ಲಿ ಮಾತ್ರ ಉತ್ತರಿಸಬೇಕು.
(Courtesy : UCC Bangalore)