"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 8 June 2015

☀ ಸಾಮಾನ್ಯ ಜ್ಞಾನ (ಭಾಗ - 15) ☀ General Knowledge (Part-15): ☆.. ಪ್ರಚಲಿತ ಘಟನೆಗಳೊಂದಿಗೆ ...

☀ ಸಾಮಾನ್ಯ ಜ್ಞಾನ (ಭಾಗ - 15) ☀ General Knowledge (Part-15):
☆.. ಪ್ರಚಲಿತ ಘಟನೆಗಳೊಂದಿಗೆ ...

━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು-2015.
(Current Affairs-2015)


631) ‘ಜಾಗತಿಕ ನಗರಗಳು 2015’ ಸಮೀಕ್ಷೆಯ ಪ್ರಕಾರ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಗೆ ಸೇರಿದ ಭಾರತದ ನಗರಗಳು ಯಾವವು?

A] ಬೆಂಗಳೂರು, ದೆಹಲಿ, ಮುಂಬಯಿ ಮತ್ತು ಚೆನ್ನೈ.
B] ಚೆನ್ನೈ, ಕೊಲ್ಕತ್ತಾ ಮತ್ತು ದೆಹಲಿ.
C] ದೆಹಲಿ, ಮುಂಬಯಿ ಮತ್ತು ಹೈದರಾಬಾದ್.
D] ಕೋಲ್ಕತ್ತ, ಮುಂಬೈ ಮತ್ತು ಬೆಂಗಳೂರು .√


632) (ಐಐಪಿ) ಎಂದರೆ:

A] "ಭಾರತದ ವಿದೇಶಿ ಹೂಡಿಕೆ ಸೂಚ್ಯಂಕ" ಎಂದರ್ಥ.
B] "ಕೈಗಾರಿಕಾ ಪ್ರಗತಿ ಸೂಚ್ಯಂಕ" ಎಂದರ್ಥ.√
C] "ಭಾರತೀಯ ಷೇರುಪೇಟೆಯ ಸೂಚ್ಯಂಕ" ಎಂದರ್ಥ.
D] ""ಕೈಗಾರಿಕಾ ಉತ್ಪನ್ನ ಸೂಚ್ಯಂಕ" ಎಂದರ್ಥ.


633) ಇತ್ತೀಚೆಗೆ ಐ.ಎಸ್‌ ಉಗ್ರರು ವಶಕ್ಕೆ ಪಡೆದ ಸಿರಿಯಾದ ಪ್ರಾಚೀನ ಪಾರಂಪರಿಕ ನಗರ ಯಾವುದು?

A] ಡೈರ್ ಅಲ್ ಝವುರ್
B] ಡಮಾಸ್ಕಸ್
C] ಪಲ್‌ಮೈರಾ.√
D] ಹಮಾ


634) ಎರಡು ರಾಜ್ಯಗಳ ಮುಖ್ಯಮಂತ್ರಿಯಾದ ಮೊದಲ ವ್ಯಕ್ತಿ ಯಾರು?.(ಇವರು ಉತ್ತರಾಖಂಡ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು ).

A] ಎನ್ ಡಿ ತಿವಾರಿ.√
B] ಡಾ. ರಮಣ ಸಿಂಗ್
C] ದೇವೇಂದ್ರ ಫಡ್ನವೀಸ್
D] ಪನ್ನೀರ್ ಸೆಲ್ವಂ.


635) "ಸಮಾಜವಾದ ಏಕೆ?" (Why Socialism) ಪುಸ್ತಕದ ಲೇಖಕ ಯಾರು?.
●. ಜಯಪ್ರಕಾಶ್ ನಾರಾಯಣನ್


636) ಇತ್ತೀಚೆಗೆ ಸಂಶೋಧಕರು ಭೂಮಿಯ ಮೇಲಿರುವ ಅತ್ಯ೦ತ ಶುಷ್ಕವಾದ ಸ್ಥಳವೊಂದನ್ನು ಅಟಕಾಮಾ ಮರುಭೂಮಿಯಲ್ಲಿ ಪತ್ತೆಹಚ್ಚಿದ್ದಾರೆ. ಅದನ್ನು 'ಮರಿಯಾ ಎಲೆನಾ ಸೌತ್' ಎಂದು ಹೆಸರಿಸಿದ್ದಾರೆ (JOG).ಅದು ಯಾವ ದೇಶದಲ್ಲಿದೆ?
●. ಚಿಲಿ.


637) ಇತ್ತೀಚೆಗೆ ಜೂನ್ 1ರಿಂದ ಸಾರ್ವಜನಿಕ ವಲಯದ ಬಹು ಬೇಡಿಕೆ ಕ್ಷೇತ್ರಗಳಲ್ಲಿ ಹೆಚ್ಚಿನ ತೆರಿಗೆ ಆಕರ್ಷಿಸಲು ಪ್ರಸ್ತುತ ವಿಧಿಸಲಾಗುತ್ತಿರುವ 3.7ರಷ್ಟು ಸೇವಾ ತೆರಿಗೆಯಲ್ಲಿ ಏಷ್ಟು ಪ್ರತಿಶತ ಹೆಚ್ಚಳ ಮಾಡಲಾಗಿದೆ?
●. ಶೇ 4.2ಕ್ಕೆ ಏರಿಕೆಯಾಗಲಿದೆ. ಶೇ 14ರ ವರೆಗೆ ಸೇವಾ ತೆರಿಗೆ ಹೆಚ್ಚಳ ಮಾಡಲಾಗಿದೆ.


638) ಏಷ್ಯಾದಲ್ಲೇ ಪ್ರಥಮಬಾರಿಗೆ 2 ಸಾವಿರ ಮೆಗಾವಾಟ್ ಸಾಮರ್ಥ್ಯದ ಸೌರವಿದ್ಯುತ್‌ ಪಾರ್ಕ್ ನ್ನು ಏಲ್ಲಿ ನಿರ್ಮಾಣ ಮಾಡಲಾಗುತ್ತಿದೆ?
●. ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ.


639) ಇತ್ತೀಚೆಗೆ ಕನ್ನಡದ ರಾಷ್ಟ್ರಕವಿ ಪುರಸ್ಕಾರಕ್ಕೆ ನಾಡಿನ ಹಿರಿಯ ಕವಿಯೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ'' 28-11- 2014 ರಂದು ಆದೇಶವೊಂದನ್ನು ಹೊರಡಿಸಿ ಸಮಿತಿಯನ್ನು ರಚಿಸಿತು. ಹಾಗಾದರೆ ಆ ‘ರಾಷ್ಟ್ರಕವಿ’ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಲಾಯಿತು?  
●. ಕೋ.ಚೆನ್ನಬಸಪ್ಪ


640) ಮಹಾತ್ಮ ಗಾಂಧಿ ಬಂಧನದ ನಂತರ ದಂಡಿ ಸತ್ಯಾಗ್ರಹದ ನಾಯಕತ್ವವನ್ನು ವಹಿಸಿಕೊಂಡವರು ಯಾರು?
●. ಅಬ್ಬಾಸ್ ಟ್ಯಾಬ್ ಜಿ.


641) ಇತ್ತೀಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನೂತನ ಅಧ್ಯಕ್ಷರಾಗಿ ಯಾರನ್ನು ಆಯ್ಕೆಮಾಡಲಾಗಿದೆ?
●. ಡಾ.ಎ.ಎಸ್.ಕಿರಣ್‌ ಕುಮಾರ್


642) ಇತ್ತೀಚೆಗೆ ಸೆನ್ಸಾರ್‌ ಮಂಡಳಿಗೆ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ.
●. ಚಿತ್ರ ನಿರ್ಮಾಪಕ ಪಹಲಾಜ್‌ ನಿಹಲಾನಿ.


643) ಸೌರ ಮಂಡಲದ ಅತಿ ದೊಡ್ಡ ಕ್ಷುದ್ರಗ್ರಹ ಯಾವುದು?
●. ‘ವೆಸ್ಟಾ’.


644) ಇತ್ತೀಚೆಗೆ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ’ತೆಹಲ್ಕಾ’ ಪತ್ರಿಕೆಯ ಮಾಜಿ ಸಂಪಾದಕ ಯಾರು?
●. ತರುಣ್ ತೇಜ್‌ಪಾಲ್.


645) ಇತ್ತೀಚೆಗೆ ತನ್ನ ಮೊದಲ ರಹಸ್ಯ ಡ್ರೋನ್ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮಾನವರಹಿತ ಯುದ್ಧವಿಮಾನವನ್ನು ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾದ ದೇಶ ಯಾವುದು?
●. ಚೀನಾ.


646) ಇತ್ತೀಚೆಗೆ 18ನೇ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಏಲ್ಲಿ ನಡೆಯಿತು?
 ●. ಹೈದರಾಬಾದ್‌ನ ’ಲಲಿತಕಲಾ ತೋರಣಂ’ನಲ್ಲಿ.


647) ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಪ್ರಾರಂಭಗೊಂಡಿದ್ದು ಯಾವಾಗ?
●.1995ರಲ್ಲಿ. (ಪ್ರತಿ 2 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿದೆ)


648) ’ಚೀನಾ ಅಕಾಡೆಮಿ ಆಫ್ ಸೈನ್ಸ್’ಗೆ ನೇಮಕಗೊಂಡ ಭಾರತದ ಮೊದಲ ವಿಜ್ಞಾನಿ  ಎಂಬ ಹಿರಿಮೆಗೆ ಪಾತ್ರರಾದವರು
●. ’ಭಾರತ ರತ್ನ’ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿ.ಎನ್.ಆರ್.ರಾವ್


649) ಇತ್ತೀಚೆಗೆ ಕೇಂದ್ರ ಮುಖ್ಯ ಮಾಹಿತಿ ಆಯುಕ್ತರನ್ನಾಗಿ (ಸಿಐಸಿ) ಯಾರನ್ನು ನೇಮಕ ಮಾಡಲಾಯಿತು?

A] ವಿಜಯ್‌ ಶರ್ಮಾ.√
B] ಕೆ.ವಿ.ಚೌಧರಿ
C] ಪಿ.ಎನ್‌. ಶ್ರೀನಿವಾಸಾಚಾರಿ
D] ಕಿರಣ ಕುಮಾರ್


650) ಭಾರತವು ತನ್ನ ಮೊದಲ ರಾಕೆಟ್‌ನ್ನು ಯಾವಾಗ ಮತ್ತು ಏಲ್ಲಿ ಉಡಾಯಿಸಿತು?
●. ನವೆಂಬರ್ 21, 1963 ರಂದು ‘TUMBA’ ಉಡಾವಣಾ ಸಂಸ್ಥೆಯಿಂದ ಅಮೇರಿಕಾ ತಂತ್ರಜ್ಞಾನದ ಸಹಾಯದಿಂದ ಉಡಾಯಿಸಲ್ಪಟ್ಟಿತ್ತು.


651) ಇತ್ತೀಚೆಗೆ KSQAAC ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಯ ಗುಣಮಟ್ಟದಲ್ಲಿ ಕೊನೆ ಸ್ಥಾನದಲ್ಲಿರುವ ಜಿಲ್ಲೆ ಯಾವುದು?
●. ಬೀದರ್ (ಮೊದಲ ಸ್ಥಾನದಲ್ಲಿರುವ ಜಿಲ್ಲೆ - ಚಿಕ್ಕೋಡಿ)


652) ಇತ್ತೀಚೆಗೆ ’ಜರ್ಮನ್ ಯೂನಿವರ್ಸಿಟಿ ಆಫ್ ಮನ್ನಹೈರ್’ ಎರಡು ವರ್ಷಗಳಿಗೊಮ್ಮೆ ಬಿಡುಗಡೆಗೊಳಿಸುವ ವಿಶ್ವದ ಟಾಪ್ - 500 ಸೂಪರ್ ಕಂಪ್ಯೂಟರ್‌ಗಳ ಪೈಕಿ ಈ ಬಾರಿ ’ಅತ್ಯಂತ ವೇಗದ ಕಂಪ್ಯೂಟರ್’ ಎಂಬ ಖ್ಯಾತಿಗೆ ಪಾತ್ರವಾದ ಕಂಪ್ಯೂಟರ್ ಯಾವುದು,?
●. ಚೀನಾದ ‘Tianhe-2 ಕಂಪ್ಯೂಟರ್


653) ’ಪೈತಾನ್- 500’ ಯಾವುದಕ್ಕೆ ಸಂಬಂಧಿಸಿದೆ?
●. ಬೆಂಗಳೂರು ರಸ್ತಗಳಲ್ಲಿನ ಗುಂಡಿಗಳನ್ನು ಮುಚ್ಚಲು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕೆನಡಾದಿಂದ ತರಿಸಿದ ಯಂತ್ರ.


654) ಇತ್ತೀಚೆಗೆ (25/5/15) 1994ರಲ್ಲಿ ನೊಬೆಲ್ ಪುರಸ್ಕೃತ ಗಣಿತಜ್ಞ ಹಾಗೂ ಆಸ್ಕರ್ ಪ್ರಶಸ್ತಿ ಗೆದ್ದ 'ಬ್ಯೂಟಿಫುಲ್ ಮೈಂಡ್' ಚಿತ್ರದ ಸ್ಫೂರ್ತಿಯಾಗಿದ್ದ ವ್ಯಕ್ತಿಯೋರ್ವರು ಕಾರು ಅಪಘಾತದಲ್ಲಿ ತಮ್ಮ ಪತ್ನಿಯೊಂದಿಗೆ ಸಾವಿಗೀಡಾದರು. ಅವರ ಹೆಸರೇನು?
●.ಜಾನ್ ಫೋರ್ಬ್ಸ್ ನ್ಯಾಶ್ (86)


655) ಇತ್ತೀಚೆಗೆ ಯೆಮೆನ್ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ ಸಲುವಾಗಿ ಭಾರತ ಸರ್ಕಾರವು ನಡೆಸಿದ ಸೈನಿಕ ಕಾರ್ಯಾಚರಣೆಯ ಹೆಸರೇನು?
●.`ಆಪರೇಷನ್ ರಾಹತ್'!


656) ಯೆಮೆನ್ ದೇಶದ ರಾಜಧಾನಿ ಯಾವುದು?
●.ಸನಾ.


657) ಪ್ರಸ್ತುತ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐಸಿಎಚ್‌ಆರ್) ಅಧ್ಯಕ್ಷ ಯಾರು?
●.ವೈ.ಸುದರ್ಶನ್ ರಾವ್


658) ಮುಖದಲ್ಲಿ ಮೂಡುವ ಮೊಡವೆಯು ಯಾವ ಪ್ರೋಟಿನ್ ಕೊರತೆಯಿಂದ ಉಂಟಾಗುವಂಥದ್ದು.?
●.ಕೊಲಜನ್ ಪ್ರೋಟಿನ್.


659) ಪರಿಸರ ವಿಜ್ಞಾನ, ಪರಿಸರ ಸಂರಕ್ಷಣೆ ಹಾಗೂ ಇಂಧನ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ದೊಡ್ಡ ಸಾಧನೆ ಮಾಡಿದ ಸಾಧಕರನ್ನು ನೀಡಲಾಗುವ, ಪ್ರತಿಷ್ಠಿತ 2015ನೇ ಸಾಲಿನ ಅಂತಾರಾಷ್ಟ್ರೀಯ 'ದಿ ಟೇಲರ್ ಅವಾರ್ಡ್' ಪ್ರಶಸ್ತಿಯನ್ನು ಪಡೆದ ಭಾರತೀಯ ಯಾರು?
●.ಖ್ಯಾತ ಪರಿಸರವಾದಿ ಮಾಧವ್ ಗಾಡ್ಗೀಳ್.


660) ಇತ್ತೀಚೆಗೆ (30 Mar 2015) ನಿಧನರಾದ "ಆಧುನಿಕ ಸಿಂಗಾಪುರದ ನಿರ್ಮಾತೃ ಎಂದೇ ಖ್ಯಾತರಾದ ಸಿಂಗಾಪುರದ ಮೊದಲ ಪ್ರಧಾನಿಯಾಗಿದ್ದ ವ್ಯಕ್ತಿ ಯಾರು?
●." ಲೀ ಕುವಾನ್ ಯು (91)

To be continued...

No comments:

Post a Comment