"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 19 June 2015

☀ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.(ಭಾಗ-Ⅱ)  Multiple Choice Questions and Answers for IAS / KAS examinations. (Part -Ⅱ)

☀ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.(ಭಾಗ-Ⅱ)
Multiple Choice Questions and Answers for IAS / KAS examinations. (Part -Ⅱ)

━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ಅಧ್ಯಯನಕ್ಕಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.
(Multiple Choice Questions for General studies)


— ಆತ್ಮೀಯ ಪರೀಕ್ಷಾರ್ಥಿಗಳೆ, ವಿಶೇಷವಾಗಿ ಐಎಎಸ್ / ಕೆಎಎಸ್ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಇದೇ ಮೊದಲ ಬಾರಿಗೆ ನಿಮ್ಮ ಸ್ಪರ್ಧಾಲೋಕ ಬ್ಲಾಗ್ ನಲ್ಲಿ ಕನ್ನಡ ಮಾಧ್ಯಮದಲ್ಲಿ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಮುಂದಿಡಲು ಒಂದು ಚಿಕ್ಕ ಪ್ರಯತ್ನ ಕೈಗೊಳ್ಳುತ್ತಿದ್ದೇನೆ. ಮರೀಚಿಕೆಯಾದ ಕನ್ನಡ ಮಾಧ್ಯಮ ಕರ್ನಾಟಕದ ಪರೀಕ್ಷೆಗಳಲ್ಲಷ್ಟೇ ಅಲ್ಲ, ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳಲ್ಲೂ ತನ್ನ ಕೀರ್ತಿ ಪತಾಕೆ ಹರಾಡಿಸಬೇಕೆಂಬ ಧ್ಯೇಯ ಹೊಂದಿರುವ ಪರೀಕ್ಷಾರ್ಥಿಗಳಿಗಾಗಿ ಸಹಕಾರಿಯಾಗಲು ಈ ನನ್ನದೊಂದು ಚಿಕ್ಕ ಪ್ರಯತ್ನ.
— ದಯವಿಟ್ಟು ತಪ್ಪಿದ್ದಲ್ಲಿ ಕ್ಷಮೆ ಇರಲಿ.
— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.


●..... ಮುಂದುವರೆದ ಭಾಗ.

16).ಅಭಿವೃದ್ದಿಯನ್ನು ಮಾಪನ ಮಾಡಲು ಬಳಸುವ ‘ಮಾನವ ಅಭಿವೃದ್ದಿ ಸೂಚ್ಯಂಕ’ದ ಕುರಿತು ಕೆಳಕಂಡ ಸೂಚಿಗಳನ್ನು ಗಮನಿಸಿ.
(i).ಜನರ ಆರೋಗ್ಯವನ್ನು ಸೂಚಿಸುವ ಜೀವನಾಯುಷ್ಯ.
(ii).ಜನರ ಜ್ಞಾನದ ಮಟ್ಟವನ್ನು ಸೂಚಿಸುವ ವಯಸ್ಕರ ಸಾಕ್ಷರತೆ
ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ.
(iii).ಸಂಪನ್ಮೂಲಗಳ ಮೇಲಿನ ಅಧಿಕಾರವನ್ನು ಸೂಚಿಸುವ ತಲಾವರಮಾನ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) (i) ಮತ್ತು (ii) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (ii) ಮತ್ತು (iii) ಮಾತ್ರ.
(ಡಿ) ಮೇಲಿನೆಲ್ಲವೂ.
ಉತ್ತರ: (ಡಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

17) ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ
(i).ಭಾರತದ ರಕ್ಷಿತ ಕಾಡುಪ್ರದೇಶಗಳಲ್ಲಿ, 75 ಭಾರತೀಯ ರಾಷ್ಟ್ರೀಯ ಉದ್ಯಾನವನಗಳು ಮತ್ತು 421 ಅಭಯಾರಣ್ಯಗಳಿವೆ.
(ii).ಇವುಗಳಲ್ಲಿ 19 ಪ್ರಾಜೆಕ್ಟ್‌ ಟೈಗರ್‌ ಯೋಜನೆಯ ವ್ಯಾಪ್ತಿಯಲ್ಲಿವೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ)ಮೇಲಿನೆಲ್ಲವೂ.
(ಡಿ) ಯಾವುದು ಅಲ್ಲ.
ಉತ್ತರ: (ಡಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

18).ಅಟಾರ್ನಿ ಜನರಲ್ ನ ಕುರಿತು ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ಸಂಸತ್ ಸದಸ್ಯನಲ್ಲದಿದ್ದರೂ ಅಧಿವೇಶನದಲ್ಲಿ ಭಾಗವಹಿಸುವ ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿ.
(ii)ಇವರು ಭಾರತದ ಕಾನೂನಿನ ಪ್ರಥಮ ನ್ಯಾಯಾದೀಶ.
(iii).ಇವರು ಕೇಂದ್ರ ಸರ್ಕಾರಕ್ಕೆ ಮಾತ್ರ ಸೀಮಿತವಾಗಿರುತ್ತಾರೆ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) (i) ಮತ್ತು (ii) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (ii) ಮತ್ತು (iii) ಮಾತ್ರ.
(ಡಿ) ಮೇಲಿನೆಲ್ಲವೂ.
ಉತ್ತರ: (ಡಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

19).ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ
(i).ತೇವ ಭರಿತ ಉಷ್ಣವಲಯ ಸ್ಥಿತಿಗಳಲ್ಲಿ ಶಿಲೆಗಳ ಸವೆತದಿಮ್ದ ಉಂಟಾದ ಕೆಂಪು ಶೇಷ ನಿಕ್ಷೇಪವನ್ನು ಈ ಮಣ್ಣು ಹೋಂದಿರುತ್ತದೆ
(ii).ಇದು ಮುಖ್ಯವಾಗಿ ಕಬ್ಬಿಣ ಹಾಗೂ ಆಲ್ಯೂಮಿನಿಯಂ ಆಕ್ಲೈಡಗಳನ್ನು ಹೊಂದಿರುತ್ತದೆ ಮತ್ತು ಹೆಚ್ಚು ಉಬ್ಬಿಲ್ಲದ ಸಮತಲ ಮೇಲ್ಮೈಗಳಲ್ಲಿ ಕಂಡು ಬರುತ್ತದೆ ?

— ಇಲ್ಲಿ ಸೂಚಿಸಲಾಗಿರುವ ಮಣ್ಣು ಯಾವುದು?
ಎ) ಕೆಂಪು ಮಣ್ಣೂ
ಬಿ) ಜಂಬಿಟ್ಟಿಗೆ ಮಣ್ಣು
ಸಿ) ಉಷ್ಣ್ವವಲಯದ ಕಪ್ಪಭೂಮಿ
ಡಿ) ಫಲವತ್ತಾದ ಕಪ್ಪಮಣ್ಣು

ಉತ್ತರ: (ಬಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

20) ಭಾರತದ ಸಂವಿಧಾನದ ತಿದ್ದುಪಡಿಯ ಕುರಿತು ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು 42 ನೇ ತಿದ್ದುಪಡಿಯಿಂದ ಜಾರಿಗೆ ತರಲಾಯಿತು
(ii).12ನೇ ತಿದ್ದುಪಡಿಯ ಮೂಲಕ 1962ರಲ್ಲಿ ಗೋವಾ, ದೀವ್ ಮತ್ತು ದಮನ್ ಗಳನ್ನು ಭಾರತದ ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಲಾಯಿತು.
(iii).21ನೇ ತಿದ್ದುಪಡಿ ಸಂವಿಧಾನದ 8ನೇ ಅನುಸೂಚಿಯಲ್ಲಿ ಸಿಂಧಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಲಾದ ವರ್ಷ: 1967.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) ಮೇಲಿನೆಲ್ಲವೂ
(ಡಿ) ಯಾವುದು ಅಲ್ಲ.

ಉತ್ತರ: (ಸಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

21).ಇತ್ತೀಚೆಗೆ ಚಂಡ ಮಾರುತಗಳು ಅಪಾರ ಪ್ರಮಾಣದ ಆಸ್ತಿ- ಪಾಸ್ತಿ ಮತ್ತು ಜೀವಹಾನಿಗೆ ಕಾರಣವಾಗಿದ್ದು, ಅವುಗಳ ಕುರಿತ ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i)..ಅಟ್ಲಾಂಟಿಕ್ ಸಾಗರದಲ್ಲಿ ರೂಪುಗೊಳ್ಳುವ ಚಂಡ ಮಾರುತಕ್ಕೆ ಹರಿಕೇನ್ (hurricane), ಹಿಂದೂ ಮಹಾಸಾಗರದಲ್ಲಿನ ವಿದ್ಯಮಾನಕ್ಕೆ `ಸೈಕ್ಲೋನ್ (cyclone) ಮತ್ತು ಫಿಲಿಪ್ಪೀನ್ಸ್ ಮತ್ತು ಪ್ಯಾಸಿಫಿಕ್ ಸಾಗರದಲ್ಲಿನ ಬಿರುಗಾಳಿಗೆ `ಟೈಫೂನ್ (typhoon) ಎಂದು ಕರೆಯುತ್ತಾರೆ.
(ii).ಹರಿಕೇನ್, ಸೈಕ್ಲೋನ್ ಮತ್ತು ಟೈಫೂನ್‌ಗಳನ್ನು ವಿಭಿನ್ನ ಮಾನದಂಡಗಳಿಂದಲೇ ಅಳೆಯಲಾಗುತ್ತದೆ.
(iii).ಜಿನೀವಾದಲ್ಲಿನ ವಿಶ್ವ ಹವಾಮಾನ ಸಂಘಟನೆಯು ಚಂಡಮಾರುತಗಳಿಗೆ ಹೆಸರು ಇಡುವ ಕೆಲಸ ನಿರ್ವಹಿಸುತ್ತಿದೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ) (i) ಮಾತ್ರ.
(ಬಿ) (i) ಮತ್ತು (ii) ಮಾತ್ರ.
 (ಸಿ) (iii) ಮಾತ್ರ.
(ಡಿ) ಯಾವುದು ಅಲ್ಲ.

ಉತ್ತರ: (ಡಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

22).ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆಯ ಉದ್ದೇಶಿತ ತಿದ್ದುಪಡಿ (2014) ಯಲ್ಲಿನ ಬಾಲಾರೋಪಿಗಳಿಗೆ ಸಂಬಂಧಪಟ್ಟ ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ಘೋರ ಅಪರಾಧ ಎಸಗುವ 16 ರಿಂದ 18 ವರ್ಷದ ಒಳಗಿನ ಬಾಲಾರೋಪಿಗಳನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಅನ್ವಯ ಇತರ ಪ್ರೌಢ ಆರೋಪಿಗಳಂತೆ ಸಾಮಾನ್ಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಗುರಿಪಡಿಸಬಹುದು.
(ii).ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆಯ ಉದ್ದೇಶಿತ ತಿದ್ದುಪಡಿ (2014) ಯ ಪ್ರಕಾರ ಮಾನಸಿಕ ತಜ್ಞರನ್ನು ಒಳಗೊಂಡ ಬಾಲಾಪರಾಧ ನ್ಯಾಯ ಮಂಡಳಿಯು ಅಪರಾಧಿಯ ವಯೋಮಿತಿಯನ್ನು ನಿರ್ಧರಿಸುವುದು.
(iii).ಆರೋಪ ಸಾಬೀತಾದಾರೂ ಗರಿಷ್ಠ ಮೂರು ವರ್ಷ ಮಾತ್ರ ಶಿಕ್ಷೆ . ಅವರನ್ನು ಜೀವಾವಧಿ, ಗಲ್ಲು ಶಿಕ್ಷೆಗೆ ಗುರಿಪಡಿಸುವಂತಿಲ್ಲ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ) (i) ಮಾತ್ರ.
(ಬಿ) (i) ಮತ್ತು (ii) ಮಾತ್ರ.
 (ಸಿ) (iii) ಮಾತ್ರ.
(ಡಿ) ಯಾವುದು ಅಲ್ಲ.

ಉತ್ತರ: (ಸಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

23).ನಾಲಂದಾ ವಿಶ್ವವಿದ್ಯಾಲಯದ ಕುರಿತು ಈ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(i).ಬೌದ್ಧಮತ ಜ್ಞಾನಕ್ಕಾಗಿ ಹುಯೆ‍ನ್‍ತ್ಸಾಂಗನು ಚೀನದಿಂದ ಇಲ್ಲಿಗೆ ಬಂದಿದ್ದನು.
(ii).ಅಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಶೀಲಭದ್ರನು ಒಬ್ಬನೇ ಒಬ್ಬ ಪ್ರಧಾನಾಧ್ಯಾಪಕನಾಗಿದ್ದನು .
(iii).ಅಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ತಂಗಲು ವಾಸಗೃಹ (Residential Hestel) ಗಳ ಅನುಕೂಲವನ್ನು ಒದಗಿಸಲಾಗಿತ್ತು.

— ಸಂಕೇತಗಳು.
ಎ) (i) ಮತ್ತು (ii) ಮಾತ್ರ.
 (ಬಿ) (ii) ಮಾತ್ರ.
 (ಸಿ) (i) ಮತ್ತು (iii) ಮಾತ್ರ.
(ಡಿ) ಯಾವುದು ಅಲ್ಲ.

ಉತ್ತರ: (ಡಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

 24).2003 ರಲ್ಲಿ ಪ್ರಾರಂಬಿಸಲಾದ ಹರ್ಯಾಲಿ ಯೋಜನೆಯ ಮುಖ್ಯ ಗುರಿ...
(i).ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಬ್ಯ ಒದಗಿಸುವಿಕೆ.
(ii).ಗ್ರಾಮಗಳಲ್ಲಿ ವಾಟರ್ ಶೆಡ್ ಯೋಜನೆಗಳ ಅಭಿವ್ರದ್ದಿಗಾಗಿ.
(iii).ಕೊಳಚೆ ಪ್ರದೇಶದಲ್ಲಿ ಮನೆ ನಿರ್ಮಾಣ.
(iV).ಗ್ರಾಮೀಣ ಪ್ರದೇಶದ ಹರಿಣಗಳ ಅಭಿವ್ರದ್ದಿ

— ಸಂಕೇತಗಳು:
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
 (ಡಿ) ಯಾವುದು ಅಲ್ಲ.

ಉತ್ತರ: (ಬಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

25). ಪರಿಸರ ಸೂಕ್ಷ್ಮವಲಯ (ಇಕೊ ಸೆನ್ಸಿಟಿವ್‌ ಜೋನ್‌ ಅಥವಾ ಬಫರ್‌ ಜೋನ್‌) ಕುರಿತು ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ವನ್ಯಪ್ರಾಣಿಗಳ ಸುರಕ್ಷತೆಗಾಗಿ ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಧಾಮಗಳ ಸುತ್ತಲಿನ 10 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಲಾಗಿದೆ.
(ii).ದೇಶದಲ್ಲೇ ಮೊಟ್ಟ ಮೊದಲು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾಗಿದ್ದು ಬಂಡೀಪುರ ಅರಣ್ಯ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) ಮೇಲಿನೆಲ್ಲವೂ
(ಡಿ) ಯಾವುದು ಅಲ್ಲ.

ಉತ್ತರ: (ಸಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

26). ಕನ್ನಡ ಭಾಷೆಯ ಕುರಿತು ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ.
(ii).ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆ ಇದಾಗಿದೆ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) ಮೇಲಿನೆಲ್ಲವೂ
(ಡಿ) ಯಾವುದು ಅಲ್ಲ.

ಉತ್ತರ: (ಡಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

27). ಇತ್ತೀಚೆಗಷ್ಟೇ ಆದಾಯ ತೆರಿಗೆಯಲ್ಲಿನ ಮಿತಿಯಲ್ಲಾದ ಬದಲಾವಣೆ ಕುರಿತು ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ಈಗಿರುವ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ರೂ 2 ಲಕ್ಷದಿಂದ 2.50 ಲಕ್ಷಕ್ಕೆ ಏರಿಸಲಾಗಿದೆ.
(ii).ಹಿರಿಯ ನಾಗರಿಕರಿಗೆ ರೂ 2.50ಲಕ್ಷದಿಂದ ದಿಂದ 3 ಲಕ್ಷದವರೆಗೆ ವಿನಾಯಿತಿ ಕಲ್ಪಿಸಲಾಗಿದೆ.
(iii).ತೆರಿಗೆ ವಿನಾಯಿತಿಯಲ್ಲಿ ಮಹಿಳೆಯರಿಗೆ ಸಂಪೂರ್ಣವಾಗಿ ರಿಯಾಯ್ತಿ ಘೋಷಿಸಿದೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ) (i) ಮಾತ್ರ.
(ಬಿ) (ii) ಮಾತ್ರ.
 (ಸಿ) (iii) ಮಾತ್ರ.
 (ಡಿ) ಯಾವುದು ಅಲ್ಲ.

ಉತ್ತರ: (ಸಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

28).ವಾತಾವರಣದ ವಿಷಯಕ್ಕೆ ಬಂದಾಗ ನಗರಗಳನ್ನು ಉಷ್ಣದ್ವೀಪಗಳು ಎಂದು ಕರೆಯುವರು. ನಗರಗಳಲ್ಲಿನ ತಾಪಮಾನ ಕುರಿತ ಈ ಕೆಳಗಿನ ಹೇಳಿಕೆಗಳನ್ನು ಓದಿ.
(i).ವಾಹನಗಳ ಸಂಚಾರದ ಪರಿಣಾಮ ಉಂಟಾಗುವ ಮಾಲಿನ್ಯ-ಹಸಿರುಮನೆ ಪರಿಣಾಮ
(ii).ಪಾದಚಾರಿ ರಸ್ತೆಗಳಿಗೆ ಹಾಕಿರುವ ಪೇವ್‌ಮೆಂಟ್ ಹಾಗೂ ಡಾಂಬರು ರಸ್ತೆಗಳು ಶಾಖವನ್ನು ಕ್ಷಿಪ್ರವಾಗಿ ಹೊರಸೂಸಿ, ಗಾಳಿಗೆ ಬಿಡುತ್ತವೆ.
(iii).ತಣ್ಣಗಾಗಿಸಲು ಬಳಸುವ ಹವಾನಿಯಂತ್ರಕ ಯಂತ್ರಗಳೂ ಕೂಡ ನಗರದ ಉಷ್ಣತೆಗೆ ಮತ್ತಷ್ಟು ಪೂರಕವಾಗಿವೆ.
(iV).ನಗರಗಳಲ್ಲಿ ನೆರಳಿನ ವಾತಾವರಣ ನಿರ್ಮಿಸುವ ಮೂಲಕ ನಗರಗಳ ವಾತಾವರಣದಲ್ಲಿ ಭಾರೀ ಬದಲಾವಣೆ ತರಬಹುದು.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
(ಎ) (i) ಮತ್ತು (ii) ಮಾತ್ರ.
 (ಬಿ) (i), (ii) ಮತ್ತು (iii) ಮಾತ್ರ.
(ಸಿ) (ii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

29).ಕಲ್ಲಿದ್ದಲ್ಲನ್ನು ಅತ್ಯಂತ ಕೆಟ್ಟ ಪರಿಸರ ಹಾನಿಕಾರಿಕ ಎಂದು ಹೇಳಲಾಗುತ್ತದೆ. ಅದು ಸುಟ್ಟ ಬಳಿಕ ಕೆಳಕಂಡವುಗಳಲ್ಲಿ ಯಾವುವು ಉತ್ಸರ್ಜನೆಯಾಗುತ್ತವೆ ಎಂಬುದನ್ನು ಸಂಕೇತಗಳನ್ನು ಆಧರಿಸಿ ಹೇಳಿ.
(i). ಕಾರ್ಬನ್ ಡೈ ಆಕ್ಸೈಡ್
(ii). ಸಲ್ಫರ್ ಡೈ ಆಕ್ಸೈಡ್
(iii). ನೈಟ್ರೋಜನ್ ಡೈ ಆಕ್ಸೈಡ್
(iV). ಮಿಥೇನ್ ಡೈ ಆಕ್ಸೈಡ್

— ಸಂಕೇತಗಳು:
(ಎ) (i) ಮತ್ತು (iv) ಮಾತ್ರ.
(ಬಿ) (i), (ii) ಮತ್ತು (iii) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: ಬಿ.


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

30).ಈಗಾಗಲೇ ಸಾವಿರಾರು ಮಂದಿಯ ಪ್ರಾಣ ತೆಗೆದುಕೊಂಡು ಜಗತ್ತನ್ನು ತಲ್ಲಣಗೊಳಿಸಿದ ಎಬೋಲ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಓದಿ.
(i).ಎಬೋಲ ವೈರಸ್ ನಿಂದ ಉಂಟಾಗುವಂಥದ್ದು. ಮೊದಲ ಬಾರಿಗೆ ಸುಡಾನ್ ಹಾಗು ಕಾಂಗೋ ನಾಡುಗಳಲ್ಲಿ ಗುರುತಿಸಲಾಯಿತು.
(ii).ಈ ವೈರಸ್ ಹೆಚ್ಚಾಗಿ ಉಷ್ಣವಲಯದ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ.
(iii).ಎಬೋಲಾ ಮೊಟ್ಟಮೊದಲಿಗೆ ಬಾವಲಿಗಳಲ್ಲಿ ಕಂಡುಬಂದಿದ್ದಾಗಿ ತಿಳಿದುಬಂದಿದೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
(ಎ) (i) ಮಾತ್ರ.
(ಬಿ) (i) ಮತ್ತು (ii) ಮಾತ್ರ.
(ಸಿ) (i) ಮತ್ತು (iii) ಮಾತ್ರ.
 (ಡಿ) ಮೇಲಿನೆಲ್ಲವೂ.

ಉತ್ತರ : (ಡಿ).

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

....ಮುಂದುವರೆಯುವುದು. 

No comments:

Post a Comment