"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 31 May 2015

☀ ಸಾಮಾನ್ಯ ಜ್ಞಾನ (ಭಾಗ - 14) ☀ General Knowledge (Part-14): ☆.. ಪ್ರಚಲಿತ ಘಟನೆಗಳೊಂದಿಗೆ ...

☀ ಸಾಮಾನ್ಯ ಜ್ಞಾನ (ಭಾಗ - 14) ☀ General Knowledge (Part-14):
☆.. 2015 ರ ಪ್ರಚಲಿತ ಘಟನೆಗಳೊಂದಿಗೆ ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು-2015.
(Current Affairs-2015)


601) 'ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕ' ದಲ್ಲಿ 70 ರಾಷ್ಟ್ರಗಳಲ್ಲಿ ಅಗ್ರಸ್ಥಾನ ಪಡೆದ ರಾಷ್ಟ್ರ ಯಾವುದು?
●.ಲಿಥುವಿನಿಯಾ.


602) 'ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕ' ದಲ್ಲಿ 70 ರಾಷ್ಟ್ರಗಳ ಪೈಕಿ ಭಾರತ ಎಷ್ಟನೇ ಸ್ಥಾನ ಪಡೆದಿದೆ?
●.24ನೇ ಸ್ಥಾನ.


603) ಕರ್ನಾಟಕ ಜಾನಪದ ಪರಿಷತ್ತಿನ ಪ್ರಸ್ತುತ ಅಧ್ಯಕ್ಷರು ಯಾರು?
●.ಟಿ.ತಿಮ್ಮೇಗೌಡ.


604) 'ನಿತ್ಯೋತ್ಸವ'ದ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ರವರ ಆತ್ಮಕತೆಯ ಹೆಸರೇನು?
●.ನೆನಪುಗಳ ಹೊತ್ತಿಗೆ.


605) ಇತ್ತೀಚೆಗೆ ಜಾಂಬಿಯಾ ದೇಶದ ನೂತನ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪುನರ್ಆಯ್ಕೆಯಾದವರು ಯಾರು?
●.ಪ್ಯಾಟ್ರಿಯಾಟಿಕ್‌ ಫ್ರಂಟ್‌ನ ಎಡ್ಗರ್‌ ಲುಂಗು.


606) ಪ್ರಸ್ತುತ ಅಮೆರಿಕ ಮೂಲದ ಹೆಸರಾಂತ ಒರಾಕಲ್‌ ಸಾಫ್ಟ್‌ವೇರ್‌ ಕಂಪೆನಿಯ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
●.ಥಾಮಸ್‌ ಕುರಿಯನ್‌ (48) .


607) ಪ್ರಸ್ತುತ ಕೇಂದ್ರ ಸರ್ಕಾರದ ನೂತನ ಕಂದಾಯ ಕಾರ್ಯದರ್ಶಿಯಾಗಿ ನೇಮಕಗೊಂಡವರು ಯಾರು?
●.ರಾಜೀವ್‌ ಟಕ್ರು.


608)(ಕ್ರೆಡಲ್) ಎಂದರೆ ‘ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ’ ಎಂದರ್ಥ.


609) ಹಾಲಿನಲ್ಲಿರುವ ಪ್ರೋಟೀನ್ ಯಾವುದು?
●.ಕೇಸಿನ್.


610) ಪ್ರಸ್ತುತ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಡೆಪ್ಯುಟಿ ಗವರ್ನರ್‌ ಯಾರು?
●.ಅರ್‌. ಗಾಂಧಿ.


611) ಇತ್ತೀಚೆಗೆ ಟಾಟಾ ಸಮೂಹ ಮತ್ತು ಸಿಂಗಪುರ ಏರ್‌ಲೈನ್ಸ್‌ ಜಂಟಿ ಸಹಭಾಗಿತ್ವದೊಂದಿಗೆ ಪ್ರಾರಂಭಿಸಲಾದ ವಿಮಾನಯಾನ ಸಂಸ್ಥೆ ಯಾವುದು?
●.‘ವಿಸ್ತಾರ’.


612) ಇತ್ತೀಚೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಒಟ್ಟು ಐದು ಸಾವಿರ (5,000) ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ‘ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ’ (ಕ್ರೆಡಲ್)ವು ಅಮೆರಿಕ ಮೂಲದ ಯಾವ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿವೆ?
●.ಸನ್ ಎಡಿಸನ್ ಕಂಪೆನಿ.


613) ಗ್ರಹಗಳ ಚಲನೆಯನ್ನು ವಿವರಿಸುವ ಸಿದ್ಧಾಂತ ಯಾವುದು?
●.ಕೆಪ್ಲರ್ ಸಿದ್ದಾಂತ.


614) ‘ರಾಷ್ಟ್ರೀಯ ಓಟದ ದಿನ’ವನ್ನು ಯಾವಾಗ ಆಚರಿಸಲಾಗುತ್ತದೆ?
●.ಜೂನ್ 3.


615) ಇತ್ತೀಚೆಗೆ ನೋಟುಗಳ ಮುದ್ರಣಕ್ಕೆ ಬಳಸುವ ಕಾಗದ ತಯಾರಿಸುವ ಘಟಕವನ್ನು ಕೇಂದ್ರ ಹಣಕಾಸು ಸಚಿವರು ಯಾವ ಸ್ಥಳದಲ್ಲಿ ಉದ್ಘಾಟಿಸಿದರು.
●.ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ.


616) ಇತ್ತೀಚೆಗೆ ಯಾವ ದೇಶವು 'ವಿಶ್ವ ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕ-2015' ದಲ್ಲಿ ಅಗ್ರಸ್ಥಾನ ಪಡೆಯಿತು ?
●.ಲಿಥುವೇನಿಯಾ .


617) ಪಾರ್ಲಿಮೆಂಟಿಗೆ ಸಂವಿಧಾನ ತಿದ್ದುಪಡಿ ಮಾಡಲು ಅಧಿಕಾರವಿದೆ. ಇದನ್ನು ಸಂವಿಧಾನದ ಯಾವ ವಿಧಿಯಲ್ಲಿ ಹೇಳಿದೆ?
●.360 ನೇ ವಿಧಿ.


618) ಸದ್ಯ ವಿಶ್ವದಲ್ಲಿ ಸುಲಭದಲ್ಲಿ ವಾಣಿಜ್ಯ ಉದ್ಯಮ ಚಟುವಟಿಕೆ ನಡೆಸಲು ಅವಕಾಶಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಪಡೆದಿದೆ?
●.142 ಸ್ಥಾನ.


619) ಫ್ರಾನ್ಸ್‌ನ ಕಾನ್‌ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ‘ತೀರ್ಪುಗಾರರ ಮೆಚ್ಚುಗೆ’ ಮತ್ತು ‘ಭರವಸೆಯ ಭವಿಷ್ಯ’ ಪ್ರಶಸ್ತಿಗಳನ್ನು ಪಡೆದುಕೊಂಡ ಭಾರತೀಯ ಚಲನಚಿತ್ರ ಯಾವುದು?
●.ನೀರಜ್‌ ಘವಾನ್‌ ನಿರ್ದೇಶನದ ಹಿಂದಿ ಚಲನಚಿತ್ರ ‘ಮಸಾನ್‌’.


620) ಬೌದ್ಧಧರ್ಮ ಪ್ರಚಾರಕ್ಕಾಗಿ ಕರ್ನಾಟಕದಲ್ಲಿರುವ ಸಂಸ್ಥೆ ಯಾವುದು?
●.ಮಹಾಬೋಧಿ ಸೊಸೈಟಿ, ಬೆಂಗಳೂರು.


621) ಇತ್ತೀಚಿನ ವಿಶ್ವಸಂಸ್ಥೆಯ ಹಸಿವಿಗೆ ಸಂಬಂಧಿಸಿದ ಆಹಾರ ಅಭದ್ರತೆಯ ಸ್ಥಿತಿಯ ವಾರ್ಷಿಕ ವರದಿಯ ಪ್ರಕಾರ, ಯಾವ ದೇಶವು ಅತಿ ಹೆಚ್ಚು ಹಸಿವಿನಿಂದ ಬಳಲುವ ಜನರನ್ನು ಹೊಂದಿದೆ?
●.ಭಾರತ (11.64 ಕೋಟಿ ಜನರು), ನಂತರದ ಸ್ಥಾನದಲ್ಲಿ ಚೀನಾ ಇದೆ.


622) ಇತ್ತೀಚೆಗೆ ದ್ವಿತೀಯ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಸ್ಫೋಟಗೊಳ್ಳದೆ ಉಳಿದಿದ್ದ 50 ಕಿಲೋ ತೂಕದ ಸಜೀವ ಬಾಂಬ್‌ ನ್ನು ಎಲ್ಲಿ ಪತ್ತೆಮಾಡಲಾಗಿದೆ?
●.ಲಂಡನ್‌ನ ರಾಷ್ಟ್ರೀಯ ಫುಟ್ಬಾಲ್‌ ಕ್ರೀಡಾಂಗಣದಲ್ಲಿ .


623) ಇತ್ತೀಚೆಗೆ ಸೇನಾ ಗೌರವದೊಂದಿಗೆ ನೈಜೀರಿಯಾದ ನೂತನ ಅಧ್ಯಕ್ಷರಾಗಿ ಯಾರು ಪ್ರಮಾಣವಚನ ಸ್ವೀಕರಿಸಿದರು?
●.ಮುಹಮ್ಮದ್ ‌ಬುಹಾರಿ.


624) ಇತ್ತೀಚೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಲಾಯಿತು. ಅವರು ಯಾರು?
●.ಭಯೋತ್ಪಾದನೆ ನಿಗ್ರಹ ಕ್ಷೇತ್ರದಲ್ಲಿ ತಜ್ಞರಾಗಿರುವ ಪ್ರೊ. ಲೂಸಿ ರಿಚರ್ಡ್ಸ್‌ಸನ್.


625) ಇತ್ತೀಚೆಗೆ ತಥಾಗತ ರಾಯ್ ರವರು ಯಾವ ರಾಜ್ಯದ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿದರು?
●.ತ್ರಿಪುರಾ.


626) ಪ್ರಸ್ತುತ ಕಾನೂನು ಆಯೋಗದ ಅಧ್ಯಕ್ಷ ಯಾರು?
●.ನ್ಯಾಯಮೂರ್ತಿ ಎ.ಪಿ. ಶಾ.


627) ಜಗತ್ತಿನ ಅತೀ ಎತ್ತರದ ರಣಾಂಗಣ ಯಾವುದು?
●.ಸಿಯಾಚಿನ್ ನೀರ್ಗಲ್ಲ ಪ್ರದೇಶ.


628) ರಾಜ್ಯದಲ್ಲಿ ಸದ್ಯ ಪ್ರತಿದಿನ ಏಷ್ಟು ಮೆಗಾವಾಟ್ ವಿದ್ಯುತ್‌ ಕೊರತೆ ಇದೆ?
●.1,400 ಮೆಗಾವಾಟ್.


629) ಹಾರಂಗಿ ನದಿಗೆ ಎಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ ?
●.ಸೋಮವಾರಪೇಟೆ ತಾಲೂಕು ಹುದುಗೂರಿನ ಬಳಿ.


630) ಗಾಂಧಿ 1893ರ ಏಪ್ರಿಲ್ ತಿಂಗಳಲ್ಲಿ ಯಾರ ಆಹ್ವಾನಕ್ಕೆ ಓಗೊಟ್ಟು ದಕ್ಷಿಣ ಆಫ್ರಿಕಾಕ್ಕೆ ಹೊರಟುಹೋದರು?
●.ದಾದಾ ಅಬ್ದುಲ್ಲಾ ಅಂಡ್ ಕಂಪೆನಿ.

No comments:

Post a Comment