"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 3 December 2014

★ 'ವಿಶ್ವ ಅರಣ್ಯ ದಿನ'ದ ಆಚರಣೆಯ ಕುರಿತು ವಿಶ್ಲೇಷಿಸಿ. (100 ಶಬ್ಧಗಳಲ್ಲಿ). (Analyze the celebration of the World Forest Day)


★ 'ವಿಶ್ವ ಅರಣ್ಯ ದಿನ'ದ ಆಚರಣೆಯ ಕುರಿತು ವಿಶ್ಲೇಷಿಸಿ. (100 ಶಬ್ಧಗಳಲ್ಲಿ).
  (Analyze the celebration of the World Forest Day)

━━━━━━━━━━━━━━━━━━━━━━━━━━━━━━━━━━━━━━━━━━━━━


★ ಪ್ರತಿ ವರ್ಷ ಮಾರ್ಚ್ 22 ನ್ನು ವಿಶ್ವ ಅರಣ್ಯ ದಿನವನ್ನಾಗಿ ಪ್ರಪಂಚದಲ್ಲೆಡೆ ಆಚರಿಸಲಾಗುತ್ತಿದೆ. ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವುಮೂಡಿಸುವ ಸಲುವಾಗಿ ಈ ದಿನವನ್ನು ಅರಣ್ಯ ದಿನವನ್ನಾಗಿ ಆಚರಿಸಲಾಗುವುದು. ಜಾಗತಿಕ ಮಟ್ಟದಲ್ಲಿ ಇಂದು ಮಾನವನ ಅತಿ ಆಸೆಯಿಂದ ಅರಣ್ಯ ಸಂಪನ್ಮೂಲ ಬರಿದಾಗುತ್ತಿರುವುದು ನೋವಿನ ಸಂಗತಿ.

★ ಪ್ರಮುಖ ಅಂಶಗಳು:
*.ಜಾಗತಿಕ ಮಟ್ಟದಲ್ಲಿ ಅರಣ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನದಂದು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

*.2011 ರ ಅರಣ್ಯ ವರದಿಯ ಪ್ರಕಾರ ಭಾರತ 78.29 ಮಿಲಿಯನ್ ಹೆಕ್ಟೇರ್ ನಷ್ಟು ಅರಣ್ಯವನ್ನು ಹೊಂದಿದೆ. ದೇಶದ ಓಟ್ಟು ಭೌಗೋಳಿಕ ಪ್ರದೇಶದಲ್ಲಿ ಅರಣ್ಯ ಪ್ರದೇಶದ ಪಾಲು ಶೇ.23.81 ರಷ್ಟಿದೆ.

*.ಭಾರತದ ರಾಜ್ಯಗಳ ಪೈಕಿ ಮಧ್ಯ ಪ್ರದೇಶ 77700 ಚದರ ಕೀ.ಮೀ ಅರಣ್ಯ ಪ್ರದೇಶವನ್ನು ಹೊಂದುವ ಮೂಲಕ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಮಧ್ಯಪ್ರದೇಶದ ನಂತರ ಅರುಣಾಚಲ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಅರುಣಾಚಲ ಪ್ರದೇಶದಲ್ಲಿ 67410 ಚದರ ಕೀ.ಮೀ ವಿಸ್ತೀರ್ಣ ಅರಣ್ಯದಿಂದ ಕೂಡಿದೆ.

No comments:

Post a Comment