"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 30 December 2014

★ ಸಾಮಾನ್ಯ ಜ್ಞಾನ (ಭಾಗ - 11)  General Knowledge (Part-11):

★ ಸಾಮಾನ್ಯ ಜ್ಞಾನ (ಭಾಗ - 11)
General Knowledge (Part-11):

━━━━━━━━━━━━━━━━━━━━━━━━━━━━━━━━━━━━━━━━━━━━━

451) ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೊಂದಿರುವ ಸದಸ್ಯ ರಾಷ್ಟ್ರಗಳು?
—187


452) IAEA ವಿಸ್ತರಿಸಿ ?
— International Automic Energy Agency.


453) 1854-55ರಲ್ಲಿ ಲೋಕೋಪಯೋಗಿ ಇಲಾಖೆಯನ್ನು ಪ್ರಾರಂಭಿಸಿದ ಅಂದಿನ ಗವರ್ನರ್ ಜನರಲ್ ಯಾರು?
— ಲಾರ್ಡ್‌ಡಾಲ್ ಹೌಸಿ


454) ಮೂರು ಸಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ?
— ಎಚ್. ವಿ. ನಂಜುಂಡಯ್ಯ


455) ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು?
— ರಾಜೀವ್ ಗಾಂಧಿ


456) ಭಾರತದ ಹೊರಗೆ ಕಾಲಿಟ್ಟ ಪ್ರಥಮ ದೇಶೀಯ ದೊರೆ:
— ಕೊಡಗಿನ ದೊರೆ ಚಿಕ್ಕ ವೀರರಾಜ.


457) ಮಾನವನಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?
—46


458) ಸಸ್ಯ ಪಳಿಯುಳಿಕೆಗಳನ್ನು ಸಂಗ್ರಹಿಸುವ ವಿಧಾನ ಯಾವುದು?
— ಹರ್ಬೇರಿಯಂ.


459) ಇತ್ತೀಚೆಗೆ 'ಜೈ ಸಮೈಕ್ಯ ಆಂಧ್ರ'ಎಂಬ ನೂತನ ರಾಜಕೀಯ ಪಕ್ಷವನ್ನು ಆರಂಭಿಸಿದವರು ಯಾರು?
— ಕಿರಣ ಕುಮಾರ ರೆಡ್ಡಿ


460) ನ್ಯಾಷನಲ್ ಕೆಮಿಕಲ್ ಲ್ಯಾಬರೇಟರಿ ಭಾರತದಲ್ಲಿ ಎಲ್ಲಿದೆ?
—ಪುಣೆ


461) ವಿಶ್ವ ಉದ್ದೀಪನ ನಿಗ್ರಹ ಘಟಕ (ವಾಡಾ:World Anli Doping Agenecy) ಅಸ್ತಿತ್ವಕ್ಕೆ ಬಂದದ್ದು?
—1999, ನವೆಂಬರ್ 10


462) 'ಅಂತರರಾಷ್ಟ್ರೀಯ ವ್ಯಾಪರವನ್ನು ನೋಡಿಕೊಳ್ಳುವ ನಾಯಿ' ಎಂದು ಯಾವ ಸಂಸ್ಥೆಗೆ ಕರೆಯುತ್ತಾರೆ?
— WTO.


463) ಪಾಕ್ ಬೇಹುಗಾರಿಕ ಸಂಸ್ಥೆ ಯಾವುದು?
— ಐ .ಎಸ್.ಐ.


464) ಮೆಣಸಿನಕಾಯಿಯ ಖಾರಕ್ಕೆ ಕಾರಣವಾಗಿರುವ ರಾಸಾಯನಿಕ ಯಾವುದು?
— ಕ್ಯಾಪ್ಸಿಸಿನ್.


465) 1950 ರ ಜನವರಿ 24 ರಂದು ನಡೆದ ಶಾಸನ ಸಭೆಯಲ್ಲಿ ಜನ ಗಣ ಮನ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಧಿಕೃತವಾಗಿ ಘೋಷಿಸಲಾಯಿತು.


466) BRTF ಅಂದರೆ ಏನು?
— ಗಡಿ ರಸ್ತೆ ಕಾರ್ಯ ಪಡೆ.(Border Road T Force)


467) 'ದೇಹದ ರಸಾಯನಿಕ ಕಾರ್ಖಾನೆ' ಎಂದು ಕರೆಯಲ್ಪಡುವ ಅಂಗ ಯಾವುದು?
— ಪಿತ್ತಕೋಶ.


468) ಅಶೋಕನು ಯಾವ ಬೌದ್ಧ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ತೆರಿಗೆಯನ್ನು ಕಡಿಮೆ ಮಾಡಿಸಿದನು?
— ಲುಂಬಿನಿ


469) ಭಾರತೀಯ ರೂಪಾಯಿ ಚಿನ್ಹೆಯ ವಿನ್ಯಾಸಕಾರ ಎಂದು ಯಾರನ್ನು ಕರೆಯುತ್ತಾರೆ?
— ಶ್ರೀ. ಡಿ.ಉದಯ ಕುಮಾರ್.(ಬಾಂಬೆ ಐ.ಟಿ.ಐ. ಯ ಸ್ನಾತಕೋತ್ತರ ಪದವೀಧರ)


470) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೇಡಿನ ಪ್ರಧಾನಿಯಾಗಿದ್ದವರು ಯಾರು?
—ಕ್ಲೆಮೆಂಟ್ ಅಟ್ಲಿ

    
471) ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ಹಣದ ಹೆಸರೇನು?
—ಪಣ


472) ಡಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪಿಸಿದವರು ಯಾರು?
— ರಾಸ ಬಿಹಾರಿ ಬೋಸ್


473) ಪೋರ್ಚುಗೀಸರು ಭಾರತದ ಪಶ್ಚಿಮ ಕರಾವಳಿಗೆ ಕಾಲಿಟ್ಟಿದ್ದು ಯಾವಾಗ?
—1510 ರಲ್ಲಿ .


474) ಇತ್ತೀಚೆಗೆ ನಿಗೂಢವಾಗಿ ನಾಪತ್ತೆಯಾಗಿದ್ದ ಮಲೆಷ್ಯಾದ ಪ್ರಯಾಣಿಕರ ವಿಮಾನ 'MH370' ಪತನಗೊಂಡ ಸ್ಥಳ ಯಾವುದು?
— ಹಿಂದೂ ಮಹಾಸಾಗರ.


475) ಪ್ರಸಿದ್ಧವಾದ ಬೇಲೂರು – ಹಳೇಬೀಡು ದೇವಾಲಯಗಳ ಸ್ಥಾಪನೆಗೆ ಕಾರಣಗಳಾದ ಮಹಿಳೆ ಯಾರು?
— ಶಾಂತಲೆ.


476) ನಮ್ಮ ರಾಷ್ಟ್ರಗೀತೆಯಲ್ಲಿ ಎಷ್ಟು ನದಿಗಳನ್ನು ಹೆಸರಿಸಲಾಗಿದೆ?
— 2.


477) ಗೋವಾ ವಿಮೋಚನಾ ಚಳವಳಿಯ ಪಿತಾಮಹಾ ಎಂದು ಯಾರನ್ನು ಕರೆಯುತ್ತಾರೆ?
— ಟ್ರಿಸ್ಟಾವೋ ಡಿಬ್ರೆಗಾಂಜಾ ಕುನ್ಹಾ


478) ಭಾರತದ ಸಂವಿಧಾನದ ‘ಸಮವರ್ತಿ ಪಟ್ಟಿ’ಗೆ ಮೂಲ ಆಕರವಾದ ಸಂವಿಧಾನ ಯಾವ ದೇಶದ್ದು?
— ಆಸ್ಟ್ರೇಲಿಯ


479) ಭಾರತವು 100 ಕೋಟಿ ಜನ ಸಂಖ್ಯೆಯನ್ನು ತಲುಪಿದ ದಿನ ಯಾವುದು?
— ಮೇ 11, 2000


480) ರಾಜ್ಯ ಲೋಕಸೇವಾ ಆಯೋಗವು ತನ್ನ ವರದಿಯನ್ನು ಯಾರಿಗೆ ಸಲ್ಲಿಸುತ್ತದೆ?
— ರಾಜ್ಯಪಾಲರಿಗೆ.


481) ಶ್ರೀಲಂಕಾಗೆ ಬೌಧ ಧರ್ಮಪ್ರಚಾರಕ್ಕಾಗಿ ತೆರಳಿದ ಅಶೋಕನ ಮಕ್ಕಳ ಹೆಸರೇನು?
— ಮಹೇಂದ್ರ & ಸಂಗಮಿತ್ತ್ರ


482) ಭಾರತದ ಸಂವಿಧಾನದ ಇತಿಹಾಸದಲ್ಲಿ ಎರಡು ಬಾರಿ ಹಂಗಾಮಿಯಾಗಿ ಪ್ರಧಾನಿ ಹುದ್ದೆ ಸ್ವೀಕರಿಸಿದವರು ಯಾರು?
— ಗುಲ್ಜರಿಲಾಲ ನಂದಾ


483) ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು?
— ಸ್ಯಾಡಲ್ ಶಿಖರ


484) ಡೆಕೊ ನದಿ ಯಾವ ರಾಜ್ಯದಲ್ಲಿ ಹರಿಯುತ್ತದೆ?
— ಅಸ್ಸಾಂ ನಲ್ಲಿ.


485) ನವ ಶಿಲಾಯುಗ ಮಾನವರ ಮೊದಲ ಸಾಕು ಪ್ರಾಣಿ ಯಾವುದು?
— ನಾಯಿ.


486) ’ಆಸ್ಕರ್’ ಪ್ರಶಸ್ತಿಗಾಗಿ ಸ್ಪರ್ಧಿಸಿದ ಮೊದಲ ಭಾರತೀಯ ಚಲನಚಿತ್ರ ಯಾವುದು?
— ಮದರ್ ಇಂಡಿಯಾ


487) ಐಹೊಳೆಯನ್ನು ‘ಭಾರತದ ದೇಗುಲಗಳ ತೊಟ್ಟಿಲು’ ಎಂದು ಬಣ್ಣಿಸಿದವರು
— ಡಾ. ಪರ್ಸಿಬ್ರಾನ್


488) ಭಾರತದ ರಾಷ್ಟ್ರ ಧ್ವಜವನ್ನು ರೂಪಿಸಿದ ಮಹಿಳೆ ಯಾರು?
—ಮೇಡಮ್ ರೂಸ್ತುಂ ಕಾಯಾ


489) ಪಂಚಲೋಹಗಳು ಯಾವುವು?
—ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ


490) ಸೌರಾಸ್ತ್ರದಲ್ಲಿ "ಸುದರ್ಶನ" ಜಲಾಶಯ ನಿರ್ಮಿಸಿದ ದೊರೆ ಯಾರು?
— ಪುಶ್ಯಗುಪ್ತ


491) ವಿಶ್ವದ ಗಡಿಯಾರಗಳ ಸಮಯವನ್ನು ಯಾವ ಖಗೋಳ ವೀಕ್ಷಣಾಲಯದ ಪ್ರಕಾರ ಹೊಂದಿಸಲಾಗಿದೆ?
—ರಾಯಲ್ ಗ್ರೀನ್‌ವಿಚ್ ವೀಕ್ಷಣಾಲಯ (UK)


492) ಬೌದ್ಧ ಧರ್ಮದ 3 ನೇ ಪಂಥ ಯಾವುದು?
— ವಜ್ರಾಯನ ಪಂಥ


493) IAEA ದ ಕೇಂದ್ರ ಕಚೇರಿ ಎಲ್ಲಿದೆ ?
— ವಿಯೆನ್ನಾ


494) ಕರ್ನಾಟಕ ರಾಜ್ಯವು ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನ ನೀತಿಯನ್ನು ರೂಪಿಸಿದ್ದು ಯಾವ ವರ್ಷದಲ್ಲಿ?
— 1997


495) ದೆಹಲಿ ಸುಲ್ತಾನರ ಕಾಲದಲ್ಲಿ ಲಾಡ್ ಭಕ್ಷಯೆಂದು ಹೆಸರಾಗಿದ್ದರು ಯಾರು?
— ಕುತುಬ್ ಉದ್ದಿನ್ ಐಬಕ್


496) ಜನ ಗಣ ಮನ ಕವಿತೆಯು ಮೊಟ್ಟ ಮೊದಲ ಬಾರಿಗೆ ಪ್ರಕಟಗೊಂಡಿದ್ದ ಪತ್ರಿಕೆ ಯಾವುದು?
— ಟ್ಯಾಗೋರ್ ಅವರು ಸಂಪಾದಕರಾಗಿದ್ದ ಬ್ರಹ್ಮ ಸಮಾಜ ಪತ್ರಿಕೆ , ತತ್ವ ಭೋಧ ಪತ್ರಿಕೆ .


497) ಶಿತ ಲಾಖ್ಯ ನದಿ ಯಾವ ದೇಶದಲ್ಲಿ ಹರಿಯುತ್ತದೆ?
- ಬಾಂಗ್ಲ ದೇಶದಲ್ಲಿ.


498) ಬೋಧಗಯಾ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?
—ಬಿಹಾರ.


499) 'ವಿಶ್ವ ಸಂಸ್ಕೃತಿ ದಿನ' ಯಾವಾಗ ಆಚರಿಸಲಾಗುತ್ತದೆ?
— ಏಪ್ರಿಲ್ 18.


500) ಭಾರತದ ನೌಕಾದಳದ ಹಡಗುಗಳು ಎಲ್ಲಿ ತಯಾರಾಗುತ್ತವೆ?
— ಕೊಚ್ಚಿನ್.

To be continued....

1 comment:

  1. Janaganamana dalli 2 sali nadi esaru barala 3 nadi esaru barutte please wrong information post madbedi

    ReplyDelete