"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 27 February 2017

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ) (IAS GENERAL STUDIES PAPER I 2016)

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ)
(IAS GENERAL STUDIES PAPER I 2016)
•─━━━━━═══════════━━━━━─••─━━━━━═══════════━━━━━─•

★ ಐಎಎಸ್ ಪ್ರಶ್ನೆಪತ್ರಿಕೆ 2016
(IAS Question Paper I 2016)


2016 ನೇ ಸಾಲಿನ ಯು.ಪಿ.ಎಸ್.ಸಿ. ನಡೆಸಿದ ಸಿವಿಲ್ ಸರ್ವಿಸ್ ಪರೀಕ್ಷೆ (ಐಎಎಸ್) ಯ ಪತ್ರಿಕೆ -1 ನ್ನು ಉತ್ತರಗಳೊಂದಿಗೆ ಕನ್ನಡಕ್ಕೆ ಭಾಷಾಂತರ ಮಾಡಿದ್ದು,  ಸ್ಪರ್ಧಾರ್ಥಿಗಳಿಗೆ ಸಹಾಯವಾಗಬಹುದೆಂಬ ನಂಬಿಕೆ ನನ್ನದು.



1. ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿ?
1. ಪರಿಶಿಷ್ಟ ಜಾತಿ, ಪಂಗಡ ಹಾಗೂ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವುದು ಇದರ ಮೂಲ ಉದ್ದೇಶ.
2. ಇದು ಎಸ್‍ಐಡಿಬಿಐ ಮೂಲಕ ಹಣಕಾಸು ನೆರವನ್ನು ನೀಡುತ್ತದೆ.
ಎ. ಹೇಳಿಕೆ 1 ಮಾತ್ರ
ಬಿ. ಹೇಳಿಕೆ 2 ಮಾತ್ರ
ಸಿ. ಹೇಳಿಕೆ 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


2. ಎಫ್‍ಎಓ ಜಾಗತಿಕ ಮಹತ್ವದ ಕೃಷಿ ಪರಂಪರೆ ವ್ಯವಸ್ಥೆ (ಜಿಐಎಎಸ್‍ಎಚ್)ಗೆ ಚಾಲನೆ ನೀಡಿದೆ. ಇದರ ಉದ್ದೇಶ ಏನು?
1. ಆಧುನಿಕ ತಂತ್ರಜ್ಞಾನ, ಆಧುನಿಕ ಕೃಷಿ ತರಬೇತಿ ಮತ್ತು ಹಣಕಾಸು ನೆರವು ನೀಡಿ ಈ ಯೋಜನೆಯಡಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಕೃಷಿ ಉತ್ಫಾದನೆ ಹೆಚ್ಚಿಸಲು ಉತ್ತೇಜನ ನಿಡುವುದು.
2. ಪರಿಸರ ಸ್ನೇಹಿ ಸಾಂಪ್ರದಾಯಿಕ ಕೃಷಿ ವಿಧಾನವನ್ನು ಉಳಿಸುವುದು/
3. ಎಲ್ಲ ಬಗೆಯ ಕೃಷಿ ಉತ್ಪನ್ನಗಳಿಗೆ ಭೌಗೋಳಿಕ ವೈಶಿಷ್ಟ್ಯ ಗುರುತಿಸುವಿಕೆ ಸ್ಥಾನಮಾನ ನೀಡುವುದು.
ಎ. 1 ಮತ್ತು 3
ಬಿ. 2 ಮಾತ್ರ
ಸಿ. 2 ಮತ್ತು 3
ಡಿ. 1,2,3

ಉ:


3, ಈ ಕೆಳಗಿನ ಯಾವ ನದಿಗಳು ಬ್ರಹ್ಮಪುತ್ರಾದ ಉಪನದಿಗಳು?
1. ದಿಬಾಂಗ್
2. ಕುರ್ದೆಂಗ್
3. ಲೋಹಿತ್
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3

ಉ: ಡಿ


4. ಕೋರ್‍ಬ್ಯಾಂಕಿಂಗ್ ಸೊಲ್ಯೂಶನ್ ಎಂಬ ಬಳಕೆಯನ್ನು ಸುದ್ದಿಗಳಲ್ಲಿ ಕಾಣುತ್ತೇವೆ. ಈ ಕೆಳಗಿನ ಯಾವ ಹೇಳಿಕೆ ಅದಕ್ಕೆ ಸೂಕ್ತವಾಗುತ್ತದೆ?
1. ಇದು ಬ್ಯಾಂಕ್ ಶಾಖೆಗಳ ಜಾಲವಾಗಿದ್ದು, ಇದರಿಂದ ಗ್ರಾಹಕರು ಯಾವುದೇ ಶಾಖೆಯಲ್ಲಿ ಖಾತೆ ಹೊಂದಿದ್ದರೂ ಮತ್ತೊಂದು ಶಾಖೆಯಲ್ಲಿ ವ್ಯವಹರಿಸಲು ಸಾಧ್ಯವಾಗುತ್ತದೆ.
2. ಇದು ಕಂಪ್ಯೂಟರೀಕರಣದ ಮೂಲಕ ಆರ್‍ಬಿಐ ಬ್ಯಾಂಕ್‍ಗಳ ನಿಯಂತ್ರಣಕ್ಕೆ ಮಾಡಿಕೊಂಡ ವ್ಯವಸ್ಥೆ.
3. ಇದು ಒಂದು ಬ್ಯಾಂಕಿನ ದೊಡ್ಡ ಪ್ರಮಾಣದ ಅನುತ್ಪಾದಕ ಆಸ್ತಿಯನ್ನು ಮತ್ತೊಂದ ಬ್ಯಾಂಕ್ ತೆಗೆದುಕೊಳ್ಳುವ ಪ್ರಕ್ರಿಯೆ.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3

ಉ: ಎ


5. ಹೊಂದಿಸಿ ಬರೆಯಿರಿ
1. ಪ್ರಮಾಣೀಕರಿಸಿದ ದೇಶಗಳು ಎ. ಕಾರ್ಟೆಜೆನಾ ಒಪ್ಪಂದ
2. ಪ್ರಮಾಣೀಕೃತ ಹೊಗೆಯುಗುಳುವಿಕೆ ಕಡಿಮೆಮಾಡುವುದು ಬಿ. ನಗೋಯಾ ಒಪ್ಪಂದ
3. ಸ್ವಚ್ಛ ಅಭಿವೃದ್ಧಿ ವ್ಯವಸ್ಥೆ ಸಿ. ಕ್ಯೂಟೊ ಒಪ್ಪಂದ
ಮೇಲಿನ ಯಾವುದು ಸರಿ ಹೊಂದಾಣಿಕೆಯಾಗುತ್ತವೆ?
ಎ. 1 ಮತ್ತು 2
ಬಿ. 2 ಮತ್ತು 3
ಸಿ. 3 ಮಾತ್ರ
ಡಿ. 1,2,3

ಉ: ಬಿ


6. ಬಯೋಇನ್ರ್ಫೋಮ್ಯಾಟಿಕ್ಸ್‍ಗೆ ಸಂಬಂಧಿಸಿದಂತೆ ಸುದ್ದಿಗಳಲ್ಲಿ ಟ್ರಾನ್ಸ್‍ಸ್ಕ್ರಿಪ್ಟೋನ್ ಎಂಬ ಪದ ಕಾಣಿಸುತ್ತದೆ. ಇದು ಯಾವುದಕ್ಕೆ ಸಂಬಂಧಿಸಿದ್ದು?
ಎ. ಜೆನೋಮ್ ಸಂಸ್ಕರಣೆಯಲ್ಲಿ ಬಳಸುವ ಒಂದು ಬಗೆಯ ಎನ್ಸಾಯಿಮ್ (ಇಓZಙಒಇ)
ಬಿ. ಜೈವಿಕ ಕಣಗಳು ಹೊರಸೂಸುವ ಆರ್‍ಎನ್‍ಎ ಕಣಗಳು
ಸಿ. ವಂಶವಾಹಿ ಅಭಿವ್ಯಕ್ತಿಯ ವಿವರಣೆ
ಡಿ. ಕೋಶಗಳಲ್ಲಿ ಸಂಭವಿಸುವ ವಂಶವಾಹಿ ಕುಲಾಂತರ

ಉ: ಬಿ


7. ಭಾರತ ಸರ್ಕಾರ ಆರಂಭಿಸಿದ ಮಿಷನ್ ಇಂದ್ರಧನುಷ್ ಯಾವುದಕ್ಕೆ ಸಂಬಂದಿಸಿದ್ದು?
ಎ. ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಲಸಿಕೆ ಕಾರ್ಯಕ್ರಮ
ಬಿ. ದೇಶಾದ್ಯಂತ ಸ್ಮಾರ್ಟ್ ಸಿಟಿಗಳ ನಿರ್ಮಾಣ
ಸಿ. ಬಾಹ್ಯಾಕಾಶದಲ್ಲಿ ಭೂಮಾದರಿಯ ಗ್ರಹಗಳ ಅನ್ವೇಷಣೆ
ಡಿ. ಹೊಸ ಶಿಕ್ಷಣ ನೀತಿ

ಉ: ಎ


8. ಭಾರತ ಸರ್ಕಾರದ ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನು ಕೆಳಗಿನ ಯಾವುದು ಸರಿಯಾಗಿ ವಿವರಿಸುತ್ತದೆ?
1. ಪರಿಸರ ಲಾಭ ಮತ್ತು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಬಜೆಟ್‍ಗಳಲ್ಲಿ ಸೇರಿಸುವ ಮೂಲಕ ಹಸಿರು ಲೆಕ್ಕಾಚಾರವನ್ನು ಅನುಷ್ಠಾನಗೊಳಿಸುವುದು.
2. ಕೃಷಿ ಉತ್ಪಾದನೆ ಹೆಚ್ಚಿಸಲು ಎರಡನೇ ಹಸಿರು ಕ್ರಾಂತಿ ಜಾರಿಗೊಳಿಸುವುದು.
3. ಅರಣ್ಯ ಪ್ರದೇಶವನ್ನು ಉಳಿಸುವುದು ಮತ್ತು ವಿಸ್ತರಿಸುವುದು.
ಎ. ಕೇವಲ 1
ಬಿ. 2 ಮತ್ತು 3
ಸಿ. 3 ಮಾತ್ರ
ಡಿ. 1,2 ಮತ್ತು 3

ಉ: ಸಿ


9. ಆಹಾರ ಸುರಕ್ಷೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಾವಳಿ-2011ರ ಅನ್ವಯ ಈ ಕೆಳಗಿನ ಯಾವ ಮಾಹಿತಿಯನ್ನು ಲೇಬಲ್‍ನಲ್ಲಿ ಪ್ರದರ್ಶಿಸಬೇಕು?
1. ಉತ್ಪನ್ನದಲ್ಲಿ ಒಳಗೊಂಡ ಅಂಶಗಳು
2. ಪೌಷ್ಟಿಕ ಮಾಹಿತಿ
3. ಯಾವುದೇ ಅಲರ್ಜಿಗೆ ಕಾರಣವಾಗುವ ಅಂಶಗಳ ಸಾಧ್ಯತೆ ಬಗ್ಗೆ ಮಾಹಿತಿ
4. ಸಸ್ಯಾಹಾರಿ/ ಮಾಂಸಾಹಾರಿ ಎಂಬ ಮಾಹಿತಿ
ಎ. ಕೇವಲ 1,2,3
ಬಿ. 2 3, ಮತ್ತು 4
ಸಿ. 1,2,4 ಮಾತ್ರ
ಡಿ. 1 ಮತ್ತು 4

ಉ: ಸಿ


10. ಸಾಮಾನ್ಯವಾಗಿ ಸುದ್ದಿಗಳಲ್ಲಿ ಕಂಡುಬರುವ ಪ್ರಾಜೆಕ್ಟ್ ಲೂನ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ನೀರು ನಿರ್ವಹಣೆ ತಂತ್ರಜ್ಞಾನ
ಬಿ. ನಿಸ್ತಂತು ಸಂವಹನಾ ತಂತ್ರಜ್ಞಾನ
ಸಿ. ಜಲವಿದ್ಯುತ್ ಉತ್ಪಾದನಾ ತಂತ್ರಜ್ಞಾನ
ಡಿ. ನೀರು ಸಂರಕ್ಷಣೆ ತಂತ್ರಜ್ಞಾನ

ಉ: ಬಿ


11. ನೆಟ್‍ಸೆಂಟರಿಂಗ್ ಎಂಬ ಪದ ಸುದ್ದಿಯಲ್ಲಿ ಕಂಡುಬರುತ್ತದೆ. ಇದು ಯಾವ ಸಂದರ್ಭಕ್ಕೆ ಅನ್ವಯಿಸುತ್ತದೆ?
ಎ. ಕುಟುಂಬಗಳು ಅಥವಾ ಗ್ರಾಹಕರಿಂದ ಸೌರಶಕ್ತಿಯ ಉತ್ಪಾದನೆ ಮತ್ತು ಬಳಕೆ
ಬಿ. ಕುಟುಂಬಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಸರಬರಾಜು ವ್ಯವಸ್ಥೆ
ಸಿ. ಸಿಎನ್‍ಜಿ ಕಿಟ್‍ಗಳನ್ನು ವಾಹನಗಳಲ್ಲಿ ಅಳವಡಿಸುವುದು.
ಡಿ. ನಗರಗಳ ಮನೆಗಳಿಗೆ ನೀರಿನ ಮೀಟರ್ ಅಳವಡಿಸುವುದು.

ಉ: ಎ


12. ವ್ಯವಹಾರ ನಡೆಸಲು ಅನುಕೂಲಕರ ವಾತಾವರಣದ ರ್ಯಾಂಕಿಂಗ್ ಎನ್ನುವುದು ಸುದ್ದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ರ್ಯಾಂಕಿಂಗ್ ನೀಡುವ ಸಂಸ್ಥೆ ಯಾವುದು?
ಎ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ
ಬಿ. ವಿಶ್ವ ಆರ್ಥಿಕ ವೇದಿಕೆ
ಸಿ. ವಿಶ್ವಬ್ಯಾಂಕ್
ಡಿ. ವಿಶ್ವ ವ್ಯಾಪಾರ ಸಂಘಟನೆ

ಉ: ಸಿ


13. ಮಧ್ಯಕಾಲೀನ ಇತಿಹಾಸದಲ್ಲಿ ಕಂಡುಬರುವ ಬಂಜಾರಾ ಸಮುದಾಯದವರು ಯಾರು?
ಎ. ಕೃಷಿಕರು
ಬಿ. ಯೋಧರು
ಸಿ. ನೇಕಾರರು
ಡಿ. ವ್ಯಾಪಾರಿಗಳು

ಉ: ಡಿ


14. ಈ ಕೆಳಗಿನ ಯಾರು ಚಕ್ರವರ್ತಿ ಅಶೋಕನ ಸಂಹಿತೆಗಳ ಅರ್ಥ ಗ್ರಹಿಸಿದವರು?
ಎ. ಜಾರ್ಜ್ ಓಲರ್
ಬಿ. ಜೇಮ್ಸ್ ಪ್ರಿನೇಪ್
ಸಿ. ಮ್ಯಾಕ್ಸ್ ಮುಲ್ಲರ್
ಡಿ. ವಿಲಿಯಂ ಜೋನ್ಸ್

ಉ: ಬಿ


15. ಗ್ರಾಮನ್ಯಾಯಾಲಯ ಕಾಯ್ದೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಈ ಕಾಯ್ದೆಯ ಅನ್ವಯ, ಗ್ರಾಮನ್ಯಾಯಾಲಯಗಳು ಕೇವಲ ಸಿವಿಲ್ ಪ್ರಕರಣಗಳ ವಿಚಾರಣೆ ನಡೆಸಬಹುದು.
2. ಈ ಕಾಯ್ದೆಯು ಸ್ಥಳೀಯ ಸಾಮಾಜಿಕ ಕಾರ್ಯಕರ್ತರನ್ನು ಮಧ್ಯಸ್ಥಿಕೆದಾರರನ್ನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಬಿ


16. ಟ್ರಾನ್ಸ್‍ಫೆಸಿಫಿಕ್ ಪಾಲುದಾರಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಇದು ಚೀನಾ ಮತ್ತು ರಷ್ಯಾ ಹೊರತುಪಡಿಸಿ ಎಲ್ಲ ಪೆಸಿಫಿಕ್ ವಲಯದ ದೇಶಗಳ ನಡುವೆ ಆದ ಒಪ್ಪಂದ.
2. ಸಾಗರ ಭದ್ರತೆಗೆ ಸಂಬಂಧಿಸಿದ ತಂತ್ರಗಾರಿಕೆ ಮೈತ್ರಿಕೂಟ ಇದಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಡಿ


17. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. 2015ರಲ್ಲಿ ನಡೆದ ಭಾರತ ಆಫ್ರಿಕಾ ಶೃಂಗವು ಮೂರನೇ ಶೃಂಗವಾಗಿದೆ.
2. ಇದನ್ನು ಜವಾಹರ್‍ಲಾಲ್ ನೆಹರೂ 1951ರಲ್ಲಿ ಆರಂಭಿಸಿದ್ದರು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಎ


18. ಸಾಲ ದರಕ್ಕೆ ಅನುಗುಣವಾಗಿ ಆರ್‍ಬಿಐ ಘೋಷಿಸಿದ ನಿಧಿಗಳ ಮಾರ್ಜಿನಲ್ ವೆಚ್ಚದ ಉದ್ದೇಶವೇನು?
1. ಬ್ಯಾಂಕುಗಳು ಸಾಲದ ಬಡ್ಡಿದರವನ್ನು ನಿರ್ಧರಿಸಲು ಅನುಸರಿಸಬೇಕಾದ ವಿಧಿವಿಧಾನಗಳಲ್ಲಿ ಪಾರದರ್ಶಕತೆಯನ್ನು ಇದು ಸುಧಾರಿಸುವ ಮಾರ್ಗದರ್ಶಿ ಸೂತ್ರವಾಗಿದೆ.
2. ಬ್ಯಾಂಕ್ ಹಾಗೂ ಸಾಲಪಡೆಯುವವರಿಗೆ ನ್ಯಾಯಬದ್ಧ ಎನಿಸುವ ದರದಲ್ಲಿ ಸಾಲವನ್ನು ಪಡೆಯಲು ಇದು ಮಾರ್ಗಸೂಚಿಯಾಗುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


19. ಭಾರತದಲ್ಲಿ ಕಂಡುಬರುವ ಖರಾಜ್ ಒಂಟೆಯ ತಳಿಯ ವೈಶಿಷ್ಠ್ಯ ಏನು?
1, ಇದು ಸಮುದ್ರದ ನೀರಿನಲ್ಲಿ 3 ಕಿಲೋಮೀಟರ್ ಈಜಬಲ್ಲದು
2. ಇದು ಮ್ಯಾಂಗ್ರೋವ್ ಅರಣ್ಯದಲ್ಲಿ ಮೇಯುವ ಮೂಲಕ ಜೀವಿಸಬಲ್ಲದು.
3. ಇದು ವನ್ಯಮೃಗವಾಗಿದ್ದು ಸಾಕಲು ಸಾಧ್ಯವಿಲ್ಲ.
ಎ. ಕೇವಲ 1 ಮತ್ತು 2
ಬಿ. ಕೇವಲ 3
ಸಿ. 1 ಮತ್ತು 3
ಡಿ. 1, 2, 3

ಉ: ಎ


20. ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಹೊಸ ತಳಿಯ ಬಾಳೆಯನ್ನು ಕಂಡುಹಿಡಿದಿದ್ದು, ಇದು 11 ಮೀಟರ್ ಎತ್ತರ ಬೆಳೆಯಬಲ್ಲದು ಹಾಗೂ ಕಿತ್ತಳೆ ಬಣ್ಣದ ಪಲ್ಪ್ ಹೊಂದಿರುತ್ತದೆ. ಇದು ಎಲ್ಲಿ ಪತ್ತೆಯಾಗಿದೆ?
ಎ. ಅಂಡಮಾನ್ ದ್ವೀಪ
ಬಿ. ಅಣ್ಣಾಮಲೈ ಅರಣ್ಯ
ಸಿ. ಮೈಕೆಲಾ ಬೆಟ್ಟ
ಡಿ. ಈಶಾನ್ಯದ ಉಷ್ಣವಲಯದ ಮಳೆ ಕಾಡು

ಉ: ಎ



21. ಇತ್ತೀಚೆಗೆ ಸುದ್ದಿ ಮಾಡಿದ ಐಎನ್‍ಎಸ್ ಅಷ್ಟಧಾರಿಣಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
ಎ. ನೀರು/ ಭೂಮಿಯಲ್ಲಿ ಬಳಸಬಹುದಾದ ಯುದ್ಧನೌಕೆ
ಬಿ. ಅಣ್ವಸ್ತ್ರ ಸಜ್ಜಿತ ಸಬ್‍ಮೆರಿನ್
ಸಿ. ಟಾರ್ಪೆಡೊ ಉಡಾವಣೆ ಮತ್ತು ಪತ್ತೆ ನೌಕೆ
ಡಿ. ಅಣ್ವಸ್ತ್ರ ಸಾಮಥ್ರ್ಯದ ವಿಮಾನ ವಾಹನ

ಉ: ಸಿ


22. ಇತ್ತೀಚೆಗೆ ಸುದ್ದಿಯಲ್ಲಿದ್ದ ಗ್ರೀಸ್‍ಡ್ ಲೈಟನಿಂಗ್-10 ಎಂದರೇನು?
ಎ. ನಾಸಾ ಪರೀಕ್ಷಿಸಿದ ಎಲೆಕ್ಟ್ರಿಕ್ ವಿಮಾನ
ಬಿ. ಜಪಾನ್ ವಿನ್ಯಾಸಗೊಳಿಸಿದ ಎರಡು ಆಸನಗಳ ಸೌರವಿಮಾನ
ಸಿ. ಚೀನಾ ಉಡಾಯಿಸಿದ ಬಾಹ್ಯಾಕಾಶ ವೀಕ್ಷಣಾ ವ್ಯವಸ್ಥೆ
ಡಿ. ಇಸ್ರೊ ವಿನ್ಯಾಸಗೊಳಿಸಿದ ಮರುಬಳಕೆ ರಾಕೆಟ್

ಉ: ಎ


23. ತೀವ್ರ ತೃಣಧಾನ್ಯ ಉತ್ತೇಜನ ಮೂಲಕ ಪೌಷ್ಟಿಕ ಭದ್ರತೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಈ ಯೋಜನೆಯ ಮುಖ್ಯ ಉದ್ದೇಶ ಸುಧಾರಿತ ಉತ್ಪಾದನೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನವನ್ನು ಉತ್ತೇಜಿಸುವುದು.
2. ಬಡ, ಸಣ್ಣ, ಅತಿಸಣ್ಣ ಹಾಗೂ ಬುಡಕಟ್ಟು ಕೃಷಿಕರು ಈ ಯೋಜನೆಯಲ್ಲಿ ದೊಡ್ಡ ಪಾಲು ಪಡೆಯುತ್ತಾರೆ.
3. ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರನ್ನು ತೃಣಧಾನ್ಯ ಬೆಳೆಯಲು ಪ್ರೋತ್ಸಾಹಿಸುವುದು.
ಎ. ಕೇವಲ 1
ಬಿ. 2 ಮತ್ತು 3
ಸಿ. 1, 2
ಡಿ. 1, 2, 3

ಉ: ಸಿ


24. ಸ್ವದೇಶಿ ಮತ್ತು ಬಹಿಷ್ಕಾರ ವಿಧಾನವನ್ನು ಸಂಘರ್ಷದ ವಿಧಾನವಾಗಿ ಮೊಟ್ಟಮೊದಲು ಯಾವಾಗ ಬಳಸಿಕೊಳ್ಳಲಾಯಿತು?
ಎ. ಬಂಗಾಳ ವಿಭಜನೆ ಸಂದರ್ಭದ ಪ್ರತಿಭಟನೆಯಲ್ಲಿ
ಬಿ. ಹೋಂರೂಲ್ ಚಳವಳಿ
ಸಿ. ಅಸಹಕಾರ ಚಳವಳಿ
ಡಿ. ಭಾರತಕ್ಕೆ ಸೈಮನ್ ಕಮಿಷನ್ ಭೇಟಿ ಸಂದರ್ಭ

ಉ: ಎ


25. ಭಾರತದ ಧಾರ್ಮಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ್ದನ್ನು ಗುರುತಿಸಿ.
1. ಬೋಧಿಸತ್ವ ಪರಿಕಲ್ಪನೆಯು ಬೌದ್ಧಧರ್ಮದ ಹಿನಾಯಾನ ಪಂಥಕ್ಕೆ ಸೀಮಿತ
2. ಬೋಧಿಸತ್ವ ಎನ್ನುವುದು ಜ್ಞಾನೋದಯದ ಮಾರ್ಗದ ಅನುಕಂಪ.
3. ತನ್ನ ಸ್ವಂತ ಮುಕ್ತಿಯನ್ನು ಪಡೆಯುವುದನ್ನು ಬೋಧಿಸತ್ವ ನಿರಾಕರಿಸುತ್ತದೆ.
ಎ. ಕೇವಲ 1
ಬಿ. 2 ಮತ್ತು 3
ಸಿ. 2 ಮಾತ್ರ
ಡಿ. 1,2,3

ಉ: ಬಿ


26. ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಎನ್ನುವುದು ಸುದ್ದಿಯಲ್ಲಿದೆ. ಹಾಗೆಂದರೆ:
ಎ. ವಿಶ್ವ ಆರೋಗ್ಯ ಸಂಸ್ಥೆಯ ವಿಭಾಗ
ಬಿ. ಇದೊಂದು ಸರ್ಕಾರೇತರ ಅಂತರರಾಷ್ಟ್ರೀಯ ಸಂಸ್ಥೆ
ಸಿ. ಯೂರೋಪಿಯನ್ ಯೂನಿಯನ್ ಪ್ರಾಯೋಜಕತ್ವದ ಅಂತರ ಸರ್ಕಾರ ಏಜೆನ್ಸಿ
ಡಿ. ವಿಶ್ವಸಂಸ್ಥೆಯ ವಿಶೇಷ ಏಜೆನ್ಸಿ

ಉ: ಬಿ


27. ಪರಿಸರ ಹಾಗೂ ಜೀವವೈವಿಧ್ಯದ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದನ್ನು ಯುಎನ್‍ಇಪಿ, ಐಎಂಎಫ್ ಹಾಗೂ ವಿಶ್ವ ಆರ್ಥಿಕ ವೇದಿಕೆ ಆರಂಭಿಸಿದೆ.
2. ಜೀವವೈವಿಧ್ಯದ ಆರ್ಥಿಕ ಲಾಭಗಳ ಬಗ್ಗೆ ಗಮನ ಸೆಳೆಯುವ ಯೋಜನೆ‘
3. ನೀತಿ ನಿರೂಪಕರು ಪರಿಸರ ಹಾಗೂ ಜೀವವೈವಿಧ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು.
ಎ. ಕೇವಲ 1 ಮತ್ತು 2
ಬಿ. 3
ಸಿ. 2 ಮತ್ತು 3
ಡಿ. 1, 2, 3

ಉ: ಸಿ


28. ರೆಡ್‍ಸ್ಯಾಂಡರ್ಸ್ ಎಂಬ ಶಬ್ದ ಸುದ್ದಿಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ಒಂದು ಬಗೆಯ ಮರದ ಪ್ರಬೇಧವಾಗಿದ್ದು, ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ.
2. ಇದು ದಕ್ಷಿಣ ಭಾರತದ ಮಹತ್ವದ ಮಳೆಕಾಡಿನಲ್ಲಿ ಕಂಡುಬರುವ ಮರದ ಪ್ರಬೇಧವಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


29. ಯುಎನ್ ಆರ್‍ಇಡಿಡಿ ಯೋಜನೆಯು ಈ ಕೆಳಗಿನ ಯಾವುದಕ್ಕೆ ಕೊಡುಗೆ ನೀಡುತ್ತದೆ?
1. ಜೀವವೈವಿಧ್ಯ ಸಂರಕ್ಷಣೆ
2. ಅರಣ್ಯ ಪರಿಸರ ಸಂರಕ್ಷಣೆ
3. ಬಡತನ ಕಡಿಮೆ ಮಾಡುವುದು‘
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3 ಮಾತ್ರ
ಡಿ. 1, 2, 3

ಉ: ಎ


30. ಹಸಿರು ಮನೆ ಅನಿಲ ಒಪ್ಪಂದ ಎಂದರೇನು?
ಎ. ಹಸಿರುಮನೆ ಅನಿಲದ ಪ್ರಮಾಣವನ್ನು ಅಂದಾಜು ಮಾಡಲು ಸರ್ಕಾರ ಹಾಗೂ ಉದ್ಯಮಿಗಳಿಗೆ ಲೆಕ್ಕಾಚಾರ ಮಾಡುವ ಸಾಧನವಾಗಿದೆ.
ಬಿ. ಅಭಿವೃದ್ಧಿಶೀಲ ದೇಶಗಳು ಹಸಿರುಮನೆ ಅನಿಲ ಕಡಿಮೆ ಮಾಡಲು ನೆರವು ನೀಡುವ ವಿಶ್ವಸಂಸ್ಥೆಯ ಯೋಜನೆ.
ಸಿ. ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳ ಅಂತರಸರ್ಕಾರ ಒಪ್ಪಂದವಾಗಿದೆ.
ಡಿ. ಇದು ಆರ್‍ಇಡಿಡಿಯ ಬಹುಮುಖಿ ಒಪ್ಪಂದವಾಗಿದ್ದು, ವಿಶ್ವಬ್ಯಾಂಕ್ ಪ್ರಾಯೋಜಿತವಾಗಿದೆ.

ಉ: ಎ


31. ಹಣಕಾಸಿನ ಸ್ಥಿರತೆ ಹಾಗೂ ಅಭಿವೃದ್ಧಿ ಮಂಡಳಿಗೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ನೀತಿ ಆಯೋಗದ ಅಂಗಸಂಸ್ಥೆ
2. ಕೇಂದ್ರ ಹಣಕಾಸು ಸಚಿವರು ಇದರ ಮುಖ್ಯಸ್ಥರಾಗಿರುತ್ತಾರೆ.
3. ಇದು ಆರ್ಥಿಕತೆಯ ಮೇಲ್ವಿಚಾರಣೆ ನಿರ್ವಹಿಸುತ್ತದೆ.
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3

ಉ: ಸಿ


32. ಅಜಂಡಾ 21ಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ಸುಸ್ಥಿರ ಅಭಿವೃದ್ಧಿಯ ಜಾಗತಿಕ ಕ್ರಿಯಾಯೋಜನೆ
2. ಇದು 2002ರಲ್ಲಿ ಜೋಹಾನ್ಸ್‍ಬರ್ಗ್‍ನಲ್ಲಿ ನಡೆದ ಸುಸ್ಥಿರ ಅಭಿವೃದ್ಧಿ ಶೃಂಗದಲ್ಲಿ ಹುಟ್ಟಿಕೊಂಡಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಎ


33. ಸತ್ಯಬೋಧಕ ಸಮಾಜವು ಈ ಕೆಳಗಿನ ಯಾವ ಚಳವಳಿಯನ್ನು ಸಂಘಟಿಸಿದೆ?
ಎ. ಬಿಹಾರದ ಬುಡಕಟ್ಟು ಜನಾಂಗದ ಉನ್ನತಿ
ಬಿ. ಗುಜರಾತ್‍ನಲ್ಲಿ ದೇವಸ್ಥಾನ ಪ್ರವೇಶ ಚಳವಳಿ
ಸಿ. ಮಹಾರಾಷ್ಟ್ರದ ಜಾತಿ ವಿರೋಧಿ ಚಳವಳಿ
ಡಿ. ಪಂಜಾಬ್‍ನ ರೈತ ಚಳವಳಿ

ಉ: ಸಿ

...ಮುಂದುವರೆಯುವುದು.

(courtesy :ಕನ್ನಡದಲ್ಲಿ ಐಎಎಸ್ & ಕೆಎಎಸ್ ಮುಖ್ಯ ಪರೀಕ್ಷೆ)

No comments:

Post a Comment