"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 28 February 2017

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೇ-2: ಸಾಮಾನ್ಯ ಅಧ್ಯಯನಗಳು-1 (PART -VI) ( KAS Mains General Studies Paper II Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೇ-2: ಸಾಮಾನ್ಯ ಅಧ್ಯಯನಗಳು-1  (PART -VI)
( KAS Mains General Studies Paper II Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

★ ಕೆಎಎಸ್ ಸಾಮಾನ್ಯ ಅಧ್ಯಯನ
(KAS General Studies)


... ಮುಂದುವರೆದ ಭಾಗ.


●. ಪತ್ರಿಕೇ-2:      ಸಾಮಾನ್ಯ ಅಧ್ಯಯನಗಳು-1

●. ವಿಭಾಗ-1:
ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ (ಭಾರತದ ಮತ್ತು ಕರ್ನಾಟಕ) – (ಆರು ಘಟಕಗಳು)


ಘಟಕ-1: ಭಾರತದ ಸಾಂಸ್ಕೃತಿಕ ಪರಂಪರೆ (ಅಯ್ದ ಕ್ಷೇತ್ರ ಮತ್ತು ವಿಷಯಗಳು)
(1) ಸಿಂಧೂ ನಾಗರೀಕತೆ - ಸಿಂಧೂ ನಾಗರೀಕತೆ ಮತ್ತು ವೇದಕಾಲಿನ ನಾಗರೀಕತೆ ನಡುವಿನ ವೈಶಿಷ್ಟ್ಯತೆ – ವರ್ಣ, ಜಾತಿ/ಜಾತಿ ವ್ಯವಸ್ಥೆಯ ವಿಕಾಸ ಧಾರ್ಮಿಕ ಸ್ಥಿತಿ-ಧಾರ್ಮಿಕ ಚಳುವಳಿಗಳ ಉಗಮ.

(2) ಸಾಹಿತ್ಯ: ಸಂಸ್ಕೃತ ಸಾಹಿತ್ಯ (ಪ್ರಾಚೀನ); ವೇದಕಾಲೀನ ಸಾಹಿತ್ಯ, ಮಹಾಕಾವ್ಯಗಳು ಮತ್ತು ಪುರಾಣಗಳು: ಭಾರತೀಯ ಜನ ಜೀವನ ಹಾಗೂ ಸಂಸ್ಕೃತಿಯ ಮೇಲೆ ಅದರ ಪ್ರಭಾವ; ರಾಜ್ಯಾಡಳಿತದಲ್ಲಿ ಗದ್ಯಕೃತಿಗಳ ರಚನೆಗಳು, ನೀತಿಶಾಸ್ತ್ರ, (ನೀತಿ), ಜನಪ್ರಿಯ ಮತ್ತು ಪಂಚತಂತ್ರ ಕಥೆಗಳು (ಪ್ರಮುಖ ಕೃತಿಗಳ ರಚನೆಗಳು ಮಾತ್ರ); ಸಾಹಿತ್ಯಕ್ಕೆ ಮೊಗಲರ ಕೊಡುಗೆಗಳು.

(3) ವಿಜ್ಞಾನ ಮತ್ತು ತಂತ್ರಜ್ಞಾನ: ಗಣಿತಶಾಸ್ತ್ರ, ಖಗೋಳ ಶಾಸ್ತ್ರ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಶರೀರ ಶಾಸ್ತ್ರ ಮತ್ತು ಔಷಧ ಶಾಸ್ತ್ರ (ಸರ್ಜರಿಯನ್ನು ಒಳಗೊಂಡು) ನೌಕಾ ನಿರ್ಮಾಣ, ಗಣಿಗಾರಿಕೆ ಮತ್ತು ಲೋಹಶಾಸ್ತ್ರ, ಎಂಜಿನೀಯರಿಂಗ್ ಮತ್ತು ವಾಸ್ತುಶಿಲ್ಪ.

(4) ಕಲೆಗಳು (ಕರ್ನಾಟಕವನ್ನು ಹೊರತುಪಡಿಸಿ): ಮೌರ್ಯರ ಮತ್ತು ಗುಪ್ತರ ಕಾಲಗಳು, ಖಜುರಾಹೋ ದೇವಾಲಯಗಳು; ಮೌಂಟ್ ಅಬುವಿನ ಜೈನ ದೇವಾಲಯಗಳು ಮತ್ತು ಒಡಿಸಿಯಾದ ದೇವಾಲಯಗಳು; ಪಲ್ಲವ, ಜೋಳ ಮತ್ತು ಪಾಂಡ್ಯರ ಕೊಡುಗೆಗಳು, ಮೊಗಲರ ವಾಸ್ತುಶಿಲ್ಪ; ಕ್ಯಾಥೆಡ್ರಾಲ್ ವಾಸ್ತುಶಿಲ್ಪ; ಬೋಮ್ ಜೀಸಸ್ - ಹಳೆಯ ಗೋವಾ, ಸೇಂಟ್ ಪಾಲ್ಸ್ – ಕೋಲ್ಕತ್ತಾ ಸೇಂಟ್ ಧಾಮಸ್-ಚೆನ್ನೈ, ಚಿತ್ರಕಲೆ: ಅಜಂತಾದ ಚಿತ್ರಾಲಂಕಾರಗಳು; ಮೊಗಲರ ಮತ್ತು ರಜಪೂತರ ಕಾಲದ ಚಿತ್ರಕಲೆ. ನೃತ್ಯ ಮತ್ತು ಸಂಗೀತ: ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಮೊಗಲರ ಕೊಡುಗೆಗಳು. ಭಾರತದ ಜನಪದ ಕಲೆಗಳು.

(5) ಬಾಹ್ಯ ಜಗತ್ತಿಗೆ ಭಾರತದ ಸಂಸ್ಕೃತಿಯ ಕೊಡುಗೆ: ಕೇಂದ್ರ ಏಷ್ಯಾ, ಚೀನಾ, ಜಪಾನ್, ಅಗ್ನೇಯಾ ಏಷ್ಯಾ ಮತ್ತು ಶ್ರೀಲಂಕಾ.

(6) ಭಾರತದ ಧರ್ಮಗಳು:-
(1)ಹಿಂದೂ ಧರ್ಮ: ಸಾಮಾನ್ಯ ವೈಶಿಷ್ಟ್ಯತೆಗಳು ಮತ್ತು ಕೆಲವು ಸಾಮಾನ್ಯ ನಂಬಿಕೆಗಳು - ಪುರುಷಾರ್ಥಗಳು – ಮತಾಚರಣೆಗಳು ಮತ್ತು ನೀತಿಶಾಸ್ತ್ರಗಳು - ಹಬ್ಬಗಳು ಮತ್ತು ಪವಿತ್ರ ದಿನಗಳು – ತೀರ್ಥಯಾತ್ರೆ ಮತ್ತು ಜಾತ್ರೆಗಳು, ಹಿಂದೂ ಪಂಥಗಳು: ವಿವಿಧ ಪಂಥಗಳಲ್ಲಿ ಸಂಯುಕ್ತವಾಗಿರುವಂಥ ಹಿಂದೂ ಧರ್ಮ, ಶೈವ, ವೈಷ್ಣವ ಮತ್ತು ಶಕ್ತ. ಉಪನಿಷತ್ ಮತ್ತು ಭಗವದ್ಗೀತೆಯ ತತ್ವ - ಪತಂಜಲಿಯ ಯೋಗತತ್ವ.

(2) ಜೈನ ಧರ್ಮ: ತತ್ವಗಳು – ರತ್ನಾತ್ರಯ, ನೀತಿ ಸಂಹಿತೆ, ಸಮಾನತೆ (ಸಮಾನ), ಅಹಿಂಸೆ, ಪಂಥಗಳು; ದಿಗಂಬರ ಮತ್ತು ಶ್ವೆತಾಂಬರ.

(3) ಬೌದ್ಧ ಧರ್ಮ: ತತ್ವಗಳು - ನಾಲ್ಕು ಮಹಾ ಸತ್ಯಗಳು, ಅಷ್ಟಾಂಗ ಮಾರ್ಗಗಳು, ನಿರ್ವಾಣ, ನೀತಿ ಸಿದ್ದಾಂಥಗಳು ಪಂಥಗಳು; ಹೀನಾಯಾನ ಮತ್ತು ಮಹಾಯಾನ.

(4) ಕ್ರಿಶ್ಚಿಯನ್ ಧರ್ಮ: ಯೇಸುಕ್ರಿಸ್ತನ ಬೋಧನೆಗಳು, ಕ್ರಶ್ಚಿಯನ್ನ ಉಪದೇಶಗಳು, ಸಿದ್ದಾಂಥಗಳು ಮತ್ತು ಧರ್ಮಶಾಸ್ತ್ರ, ಕ್ರಿಶ್ಚಿಯನ್ ಪಂಗಡಗಳು – ರೋಮನ್ ಕ್ಯಾಥೋಲಿಕ್ ಚರ್ಚ್ಗಳು, ಪೂರ್ವ ಸಾಂಪ್ರದಾಯಿಕ ಚರ್ಚ್ಗಳು ಮತ್ತು ಪ್ರೊಟೆಸ್ಟಂಟ್ಗಳ ಚರ್ಚುಗಳು, ಭಾರತದಲ್ಲಿ ಧರ್ಮ ಪ್ರಚಾರಕ ಚಟುವಟಿಕೆಗಳು.

(5) ಇಸ್ಲಾಂ ಧರ್ಮ: ತತ್ವಗಳು ಮತ್ತು ಆಚರಣೆಗಳು – ದೇವರು, ಧರ್ಮದ ಮೇಲಿನ ನಂಬಿಕೆ ಐದು “ಇಸ್ಲಾಂ ಧರ್ಮ ಕಂಬಗಳು”; ಪವಿತ್ರ ಸ್ಥಳಗಳು ಮತ್ತು ದಿನಗಳು, ಕುಟುಂಬ ವ್ಯವಸ್ಥೆ ಮತ್ತು ಷರಿಯಾ, ಕರ್ನಾಟಕದಲ್ಲಿ ಸೂಫಿಗಳು, ಪಂಥಗಳು: ಶಿಯಾ ಮತ್ತು ಸುನ್ನಿ.

(6) ಸಿಖ್ಖ್ ಧರ್ಮ: ತತ್ವಗಳು ಮತ್ತು ಆಚರಣೆಗಳು ಮತ್ತು ಇದರ ವಿಕಾಶ.


●. ಘಟಕ-2: ಪರಿವರ್ತನೆಯತ್ತ ಭಾರತೀಯ ಸಮಾಜ: ಚಿಂತನೆಯ ಪ್ರಮುಖ ಮಾರ್ಗಗಳು, ಆಧುನಿಕ ಭಾರತದ ಇತಿಹಾಸ – 19ನೇ ಶತಮಾನದ ಪ್ರಾರಂಭದಿಂದ; ಸುಧರಣೆಗಳು ಮತ್ತು ಸುಧಾರಕರು
1. ಸಾಮಾಜಿಕ ಮತ್ತು ಧರ್ಮಿಕ ದೋಷಗಳ ನಿರ್ಮೂಲನೆ
2. ಎಲ್ಲರಿಗಾಗಿ ವೇದಗಳು – ಜಾತ್ಯಾತೀತ ಸಮಾಜ
3. ಆದರ್ಶ ಸೇವೆ
4. ಶೋಷಿತ ಮಾರ್ಗದ ವಿಮೋಚನೆ
5. “ಎರಡು ರಾಷ್ಟ್ರದ” ಸಿದ್ಧಾಂತ ಮತ್ತು ಇಸ್ಲಾಮಿಕ್ ಧರ್ಮದ ಪುನರುಜೀವನ
6. ಧರ್ಮ ಮತ್ತು ಶಿಕ್ಷಣದ ಮೂಲಕ ಶೋಷಿತ ವರ್ಗದ ಸಬಲೀಕರಣ.
7. ಹಿಂದುತ್ವ ಮತ್ತು ದೇಶಭಕ್ತಿ
8. ದ್ರಾವಿಡ ಚಳುವಳಿ
9. ದಲಿತರ ವಿಮೋಚನೆಗಾಗಿ ಹೋರಾಟ ಮತ್ತು ಅವರ ಸಬಲೀಕರಣ
10. ಸಮಾಜವಾದಿ ಪ್ರಸ್ತಾವನೆ ಮತ್ತು ಸಂಪೂರ್ಣ ಕ್ರಾಂತಿ
11. ಗ್ರಾಮ ಸ್ವರಾಜ್, ಸತ್ಯಾಗ್ರಹ ಮತ್ತು ಭೋದಾನ


●. ಘಟಕ-3: ಕದಂಬ ರಿಂದ ಹೊಯ್ಸಳರ ವರೆಗೆ,
(1) ಕರ್ನಾಟಕದ ಪ್ರಾಚೀನತೆ: ಕನ್ನಡ ಭಾಷೆ ಮತ್ತು ಸಾಹಿತ್ಯ; ಕನ್ನಡ ನಾಡಿನ ವ್ಯಾಪ್ತಿ; ರಾಜ್ಯ ಮತ್ತು ಜಿಲ್ಲಾ ಗೆಜೆಟಿಯರುಗಳು; ಕರ್ನಾಟಕದ ವಸ್ತು ಸಂಗ್ರಹಾಲಯಗಳು ಮತ್ತು ಪ್ರಾಚೀನ ಪತ್ರಾಗಾರಗಲು; ಐತಿಹಾಸಿಕ ಸ್ವಾರಕಗಳ ಸಂರಕ್ಷಣೆ ಮತ್ತು ರಕ್ಷಣೆ - ಭಾರತೀಯ ಪುರಾತತ್ವ ಇಲಾಖೆ ಕೆಲಸಗಳು – ಕರ್ನಾಟಕದಲ್ಲಿ ವಿಶ್ವ ಪಾರಂಪರಿಕ ತಾಣಗಳು.

(2) ಕದಂಬರಿಂದ ಹೊಯ್ಸಳವರೆಗೆ: ವಾಸ್ತು ಶಿಲ್ಪ, ಶಿಲ್ಪ, ಸಾಹಿತ್ಯ ಮತ್ತು ಧರ್ಮಕ್ಕೆ ಇವರ ಕೊಡುಗೆಗಳು.


●. ಘಟಕ-4: ವಿಜಯನಗರ ಸಾಮ್ಯಾಜ್ಯ ಮತ್ತು ನಂತರದ ಕಾಲ (1336-1799):
(1) ವಿಜಯನಗರ ಸಾಮ್ರಾಜ್ಯ: ಸಾಮ್ರಾಜ್ಯದ ಉದಯ, ಉದ್ದೇಶಗಳು ಮತ್ತು ಮಹತ್ವಾಕಾಂಕ್ಷೆ – ವಿದ್ಯಾರಣ್ಯ ರಾಜಕೀಯ ಇತಿಹಾಸ, ಹರಿಹರ, ಬುಕ್ಕ, ಇಮ್ಮಡಿ ದೇವರಾಯ, ಕೃಷ್ಣದೇವರಾಯ ಮತ್ತು ಅಳಿಯ ರಾಮರಾಯ – ತಾಲೀಕೋಟಿ ಕದನ ಮತ್ತು ಅದರ ಪರಿಣಾಮಗಳು ರಾಜಧಾನಿಯ ವೈಭವ – ಆಡಳಿತ - ಸಮಾಜ, ಆರ್ಥಿಕತೆ ಮತ್ತು ಧಾರ್ಮಿಕತೆ; ಕಲೆಗಳು: ಚಿತ್ರಕಲೆ; ಸಂಗೀತ, ನೃತ್ಯ, ಸಾಹಿತ್ಯ, ವಾಸ್ತುಶಿಲ್ಪ ಮತ್ತು ಶಿಲ್ಪ; ವಿಜಯನಗರದ ವಿದೇಶಿಗರ ವಿವರಣೆ.
(2) ಧಾರ್ಮಿಕ ಪಂಥಗಳು: ಸಂಕರಚಾರ್ಯರು, ರಾಮಾನುಜಚಾರ್ಯ, ಮಧ್ವಾಚಾರ್ಯರು - ಶ್ರೀ ಬಸವೇಶ್ವರ, ವೀರಶೈವ ಮತ್ತು ವಚನ ಚಳುವಳಿ - ಹರಿದಾಸ ಚಳುವಳಿ - ಕಲಮುಖ ಶಕ್ತ ಮತ್ತು ಪಾಶುಪಥ ಪಂಥಗಳು.
 (3) ಬಹುಮನಿ ಷಾಹಿಗಳು: ಮಹಮದ್ ಗವಾನ್ - ಬಹಮನಿಯ ಕೊಡುಗೆಗಳು - ಬಿಜಾಪುರದ ಆದಿಲ್ ಷಾಹಿಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ಕೊಡುಗೆಗಳು – ಕರ್ನಾಟಕದ ಸೂಫಿಗಳು.
(4) ಚಿಕ್ಕದೇವರಾಜ ಒಡೆಯರವರ ಕೊಡುಗೆಗಳು – ಕೆಳದಿ ಮತ್ತು ಚಿತ್ರದುರ್ಗದ ನಾಯಕರು; ಕಿತ್ತೂರಿನ ರಾಣಿಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ, ಯಲಹಂಕದ ನಾಡಪ್ರಭು; ಹೈದರಾಲಿ ಮತ್ತು ಟಿಪ್ಪು ಸುಲ್ತಾನ (1761-1799)


●. ಘಟಕ-5: ಆಧುನಿಕ ಮೈಸೂರು (1799-1947)
(1) ಕೃಷ್ಣರಾಜ ಒಡೆಯರ್-3 ಅವರ ಕೊಡುಗೆಗಳು
(2) ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆ
(3) ಕಮೀಷನರುಗಳ ಆಳ್ವಿಕೆ (1831-1881)
(4) ಹೈದರಾಬಾದ್ – ಕರ್ನಾಟಕದಲ್ಲಿ ನಿಜಾಮರ ಆಳ್ವಿಕೆ
(5) ದಿವಾನರ ಆಳ್ವಿಕೆಯಲ್ಲಿ ಮೈಸೂರು ಪ್ರಗತಿ.


●. ಘಟಕ-6: ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ ಮತ್ತು ಏಕೀಕರಣ (1885-1956)
(1) ರಾಷ್ಟ್ರೀಯತೆಯ ಉದಯ: ಪೂರ್ವಗಾಂಧಿಯುಗ (1885-1920); ಗಾಂಧಿಯುಗ (1920-1948)
(2) ಹೈದರಾಬಾದ್ – ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ
(3) ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ವ್ಯಕ್ತಿಗಳು
(4) ಕರ್ನಾಟಕ ಏಕೀಕರಣ; ಏಕೀಕರಣ ಚಳುವಳಿಯ ಉದಯಕ್ಕೆ ಕಾರಣಗಳು – ಆಲೂರು ವೆಂಕಟರಾವ್ - ಸಾಕ್ಷರತೆಯ ಪಾತ್ರ, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಪತ್ರಿಕಾ ಮಾಧ್ಯಮ – ಕರ್ನಾಟಕ ಏಕೀಕರಣದ ಮೂರು ಹಂತಗಳು (1947-1956)
(5) ಸಾಮಜಿಕ ಮತ್ತು ಸಂಸ್ಕೃತಿಯ ಬೆಳವಣಿಗೆಗಳು; ಧರ್ಮ ಪ್ರಚಾರಕದಿಂದ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ಶಿಕ್ಷಣ ಪ್ರಸಾರ – ಮುದ್ರಣ ಮತ್ತು ಪತ್ರಿಕಾ - ಸಾಹಿತ್ಯ ಮತಯ್ತು ವಿದ್ವತ್ಪೂರ್ಣ ಅಧ್ಯಯನಗಳು – ಕನ್ನಡ ಸಾಹಿತ್ಯದಲ್ಲಿ ನವೀನ ಸಾಹಿತ್ಯ ಪ್ರಕಾರಗಳು - ಹಿಂದುಳಿದ ವರ್ಗದ ಚಳುವಳಿ - ಮಿಲ್ಲರ್ ಸಮಿತಿಯ ವರದಿ, ಕರ್ನಾಟಕದಲ್ಲಿ ಜಾನಪದ ಕಲೆಗಳು.

... ಮುಂದುವರೆಯುವುದು.

(ಕೃಪೆ : ಯುಸಿಸಿ ಬೆಂಗಳೂರು) 

No comments:

Post a Comment